Saturday, April 10, 2010

ಸವೋತ್ತಮ ವೈಧ್ಯ ಪ್ರಸನ್ನ ಜಿ ನಾವದಗಿ


ಸವೋತ್ತಮ ವೈಧ್ಯ ಪ್ರಸನ್ನ ಜಿ ನಾವದಗಿಖ್ಯಾತ ನ್ಯಾಯಮೂತರ್ಿ ಕೂ।ಬ ನಾವದಗಿ ಅವರ ತಮ್ಮನ ಮಗನಾದ ಮುದ್ದೇಬಿಹಾಳ ತಾಲೂಕಿನ ಡಾ ಪ್ರಸನ್ನ ಜಿ ನಾವದಗಿಯವರು ಸಮಾಜ ಸೇವೆಯನ್ನು ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ।ಅವರು ವೃತ್ತಿಯಲ್ಲಿ ವೈಧ್ಯರಿದ್ದು, ಬಡವರ ಏಳಿಗೆಗಾಗಿ, ವೈಧ್ಯಕೀಯ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಹಗಲಿರುಳು ಸುಮಾರು ಜನರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ। ಸಧ್ಯ ಹಟ್ಟಿ ಚಿನ್ನದ ಗಣಿಯ ಆಸ್ಪತ್ರೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಬಿಡುವಿನ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ಬಡವರಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡುತ್ತಾ, ಜೊತೆಯಲ್ಲಿ ಭಯಾನಕ ರೋಗಗಳ ಕುರಿತು ಜಾಗೃತಿ ಮೂಡಿಸುತ್ತಾರೆ.ವಿವಾಹಿತರಾದ ವೈಧ್ಯರು ಮುದ್ದೇಬಿಹಾಳದ ಹತ್ತಿರದ ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿ, ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪಡೆದು ನಂತರ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆಯಲ್ಲಿ ಉತ್ತಮ ಬಾಲಕ ಪ್ರಶಸ್ತಿಗೂ ಪಾತ್ರರಾಗಿದ್ದರು. 2000ದಲ್ಲಿ ಮಂಗಳೂರಿನ ಕಸ್ತೂರಿ ಬಾ ವೈಧ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಮುಗಿಸಿ, ಮಂಗಳೂರಿನ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷ ಅವಧಿ, ಯಾವುದೇ ಗೌರವಧನ ಪಡೆಯದೇ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆ ಇರುವ ಏಕೈಕ ಉದ್ದೇಶವೇ, ಅದು ಬಡವರ ಹಾಗೂ ಅನಾಥರ ಸೇವೆ ಮಾಡುವುದು. ಆನಂತರ 2003ರಲ್ಲಿ ಹಟ್ಟಿ ಚಿನ್ನದ ಗಣಿಯ ಆಸ್ಪತ್ರೆಗೆ ವೈದ್ಯಾಧಿಕಾರಿಗಳಾಗಿ ಬಂದು ಅಪಾರ ಜನಮನ್ನಣಿಯನ್ನು ಪಡೆದಿದ್ದಾರೆ. ಹಟ್ಟಿಯ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡುತ್ತಾ, ಏಡ್ಸ್, ಡಯಾಭಿಟಿಸ್, ಚಿಕನ್ಗುನ್ಯ ದಂತಹ ರೋಗಗಳನ್ನು ತಡೆಹಿಡಿಯುವ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಕೆಲವು ಅನಾಥಶ್ರಮಗಳಿಗೆ ತಮ್ಮ ಬಿಡುವಿನ ಸಮಯದಲ್ಲಿ ಭೇಟಿ ನೀಡಿ, ಅಂತಹ ಮಕ್ಕಳೊಂದಿಗೆ ಕೆಲವು ಸಮಯವನ್ನು ಕಳೆಯುತ್ತಾರೆ.ಇವರ ಸಮಾಜಸೇವೆಯನ್ನು ಗುರುತಿಸಿ ಈಗಾಗಲೇ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ.ಇನ್ನು ಮುಂದೆಯೂ ಸಹ ಇಂತವರನ್ನು ಮತ್ತಷ್ಟು ಪ್ರೋತ್ಸಾಹಿಸಿ, ಅವರ ಸೇವೆಯನ್ನು ಪ್ರಶಂಸಿಸಬೇಕಾಗಿದೆ.ಜೊತೆಯಲ್ಲಿ ಡಾ ಪ್ರಸನ್ನ ನಾವದಗಿಯವರು ನಮ್ಮ ಪತ್ರಿಕೆಯ ವೈಧ್ಯಕೀಯ ಅಂಕಣದಲ್ಲಿ ತಮ್ಮ ಲೇಖನಗಳನ್ನು ಬರೆಯುತ್ತಾರೆ. ಓದುಗರು ಪತ್ರಿಕೆಯಲ್ಲಿಯೂ ಸಹ ಇವರ ಅಂಕಣಗಳನ್ನು ವೀಕ್ಷಿಸಬಹುದಾಗಿದೆ.14-04-201

Thursday, April 8, 2010

ಕಭಿ ಇದರ್, ಕಭಿ ಉದರ್!

ಕಭಿ ಇದರ್, ಕಭಿ ಉದರ್!
ಮೊನ್ನೆ ತಾನೆ ಬಾಲಿವುಡ್ನ ಮಿನುಗುತಾರೆ ಅಮಿತಾಬ್ ಬಚ್ಚನ್ ನರಹಂತಕ ನರೇಂದ್ರ ಮೋದಿಯೊಂದಿಗೆ ಕೈಕುಲುಕುತ್ತಿದ್ದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅಮಿತಾಬ್ ಬಚ್ಚನ್ ಗುಜರಾತ್ ರಾಜ್ಯದ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕೊಂಡಿರುವ ಸುದ್ಧಿಯೂ ಬದಿಯಲ್ಲಿತ್ತು.
ಕೊಚ್ಚೆ ರಾಡಿಯಂತೆ ಗಬ್ಬೆದ್ದುಹೋಗಿರುವ ರಾಜಕಾರಣಕ್ಕೆ ತಮ್ಮ ಹೀರೋಗಳು ಇಳಿಯಬಾರದು ಎಂದೇ ಸಾಮಾನ್ಯವಾಗಿ ಚಿತ್ರತಾರೆಯರ, ಕ್ರೀಡಾಪಟುಗಳ, ಹಾಡುಗಾರರ, ಚಿತ್ರಕಲಾವಿದರ ಅಭಿಮಾನಿಗಳು ಬಯಸುತ್ತಾರೆ. ಸಮಾಜದಲ್ಲಿ ಕೋಮು ದಳ್ಳುರಿ ಹಚ್ಚಿ ಅದರ ಬೆಂಕಿಯಲ್ಲಿ ಚಳಿಕಾಯಿಸಿಕೊಳ್ಳುವ ಕೋಮುವಾದಿಗಳಿಂದ, ಕಂಡಲ್ಲಿ ಬಾಂಬಿಟ್ಟು ಅಮಾಯಕರ ದೇಹಗಳನ್ನು ಛಿದ್ರಗೊಳಿಸುವ ಭಯೋತ್ಪಾದಕರಿಂದ, ಕುತ್ತಿಗೆ ತನಕ ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಶಾಹಿ-ರಾಜಕಾರಣಿಗಳ ಮೈತ್ರಿಯಿಂದ ದೂರವಿದ್ದು ತಮ್ಮ ತಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲೇ ಗಣನೀಯ ಸೇವೆಗೈದು ಅದನ್ನು ಶ್ರೀಮಂತಗೊಳಿಸಬೇಕೆಂದು ಹಂಬಲಿಸುತ್ತಾರೆ. ಸಚಿನ್ ತೆಂಡೂಲ್ಕರ್ನಂತಹ ಕ್ರೀಡಾಪಟುಗಳು, ಡಾ.ರಾಜ್ಕುಮಾರ್ನಂತಹ ಕೆಲವೇ ಕಲಾವಿದರು ತಮ್ಮ ಅಭಿಮಾನಿಗಳ ಅಭಿಲಾಷೆಗನುಗುಣವಾಗಿಯೇ ತಮ್ಮ ಕ್ಷೇತ್ರದಲ್ಲೇ ಸೇವೆ ಸಲ್ಲಿಸುತ್ತಾ ಅದನ್ನು ಶ್ರೀಮಂತಗೊಳಿಸುವಲ್ಲಿ ತಲ್ಲೀನರಾದಾಗ ಸಹಜವಾಗಿಯೇ ಅವರ ಅಭಿಮಾನಿಗಳೂ ಖುಷಿಯಾಗುತ್ತಾರೆ. ಆದರೆ, ಕೆಲವು ನಟರು, ಕಲಾವಿದರು, ಕ್ರೀಡಾಪಟುಗಳು ತಮ್ಮ ಅಭಿಮಾನಿಗಳ ಇಚ್ಛೆಗೆ ವ್ಯತಿರಿಕ್ತವಾಗಿ ರಾಜಕೀಯಕ್ಕಿಳಿದು ಮೈಕೈ ಹೊಲಸು ಮಾಡಿಕೊಂಡಾಗ ತಮ್ಮ ನಾಯಕರನ್ನು ದೇವರಂತೆ ಪೂಜಿಸುವ ಮನಸ್ಥಿತಿ ಹೊಂದಿರುವ ಅಭಿಮಾನಿಗಳು ಅಷ್ಟೇ ಸಹಜವಾಗಿ ನಿರಾಶೆಗೊಳಾಗುತ್ತಾರೆ. ಈಗ ಅಮಿತಾಬ್ ಬಚ್ಚನ್ ವಿಚಾರದಲ್ಲೂ ಅದೇ ಆಗಿದೆ. ತನ್ನ ಅತ್ಯದ್ಭುತ ತಲ್ಲೀನತೆಯ ನಟನೆಯ ಮೂಲಕ ಅರವತ್ತೆಂಟರ ಇಳಿವಯಸ್ಸಿನಲ್ಲೂ ಬಾಲಿವುಡ್ನಲ್ಲಿ ಸದಾ ಮಿನುಗುವ ತಾರೆಯಂತಿರುವ ಅಮಿತಾಬ್ ಬಚ್ಚನ್ ಮನುಷ್ಯರ ರಕ್ತ ಕುಡಿಯುವ ರಕ್ಕಸನಾಗಿರುವ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿರುವುದು, ಭಾರತದಲ್ಲಿ ಅಲ್ಪಸಂಖ್ಯಾತರ ಜಿನೋಸೈಡ್ಗಳ ಪ್ರಯೋಗಾಲಯದಂತಿರುವ ಗುಜರಾತ್ನ ಅಧಿಕೃತ ರಾಯಭಾರಿಯಾಗಿರುವುದು ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ನಿಸ್ಸಂಶಯವಾಗಿ ನಿರಾಶೆ ಮೂಡಿಸಿದ್ದು ಮಾತ್ರವಲ್ಲ, ಅವರ ಮನಸ್ಸನ್ನು ಅತೀವವಾಗಿ ಕಲಕಿದೆ ಕೂಡ.
ನಿಮಗೆ ನೆನಪಿರಬೇಕು. ಇದೇ ಮೋದಿ 2002ರಲ್ಲಿ ಗುಜರಾತ್ನಲ್ಲಿ ಮೂರು ಸಾವಿರ ಅಮಾಯಕ ಮುಸ್ಲೀಮರ ಮಾರಣಹೋಮ ಮಾಡಿದ. ಅದಾದ ಎರಡೇ ವರ್ಷದಲ್ಲಿ ಗೋವಿಂದ ನಿಹಾಲನಿ 'ದೇವ್' ಎಂಬ ಸಿನಿಮಾ ಮಾಡಿದರು. ಅದರಲ್ಲಿ ರಾಜ್ಯದ ಮುಖ್ಯಮಂತ್ರಿ ಬಂಡಾರ್ಕರ್ (ಅಮರೀಷ್ ಪುರಿ) ರಾಜಕೀಯ ಲಾಭಕ್ಕಾಗಿ ಕೋಮುಗಲಭೆಗಳನ್ನು ನಡೆಸಿ ಸಾವಿರಾರು ಅಮಾಯಕರು ನಡುಬೀದಿಯಲ್ಲಿ ಸಾಯುವಂತೆ ಮಾಡುತ್ತಾನೆ. ಹೆಚ್ಚೂ ಕಡಿಮೆ ನರೇಂದ್ರ ಮೋದಿಯ ಪಾತ್ರವೇ ಅದು. ದೇವ್ ಪ್ರತಾಪ್ ಸಿಂಗ್ ಎಂಬ ನೆಲದ ಕಾನೂನಿಗೆ ಅತ್ಯಂತ ನಿಷ್ಠನಾಗಿರುವ, ಪ್ರಾಮಾಣಿಕನಾಗಿರುವ ಪೊಲಿಸ್ ಅಧಿಕಾರಿ ಮುಖ್ಯಮಂತ್ರಿಯ ವಿರುದ್ಧವೇ ಸೆಟೆದುನಿಲ್ಲುತ್ತಾನೆ. ದೇವ್ ಪ್ರತಾಪ್ ಸಿಂಗ್ ಎಂಬ ಒಬ್ಬ ಪ್ರಾಮಾಣಿಕ, ನಿಷ್ಠೂರ, ದೇಶಭಕ್ತ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದು ಬೇರೆ ಯಾರೂ ಅಲ್ಲ, ಇದೇ ಅಮಿತಾಬ್ ಬಚ್ಚನ್. ಈಗ ನಿಜ ಜೀವನ ನೋಡಿ. ಅದೇ ಅಮಿತಾಬ್ ಬಚ್ಚನ್ ತನ್ನ ರಾಜಕೀಯ ಹಿತಾಸಕ್ತಿಗಾಗಿ ಜನರ ರಕ್ತ ಹೀರುವಲ್ಲಿ ನಿಸ್ಸೀಮನಾಗಿರುವ ನರೇಂದ್ರ ಮೋದಿಯೊಂದಿಗೆ ಕೈಜೋಡಿಸಿದ್ದಾರೆ. ಅಮಿತಾಬ್ ಯಾವತ್ತೂ ದೇವ್ ಪ್ರತಾಪ್ ಸಿಂಗ್ ಆಗಿಯೇ ಇರಬೇಕೆಂದು ಬಯಸುವ ಅವರ ಅಭಿಮಾನಿಗಳು ಮೋದಿಯೊಂದಿಗೆ ಕೈಜೋಡಿಸಿದರೆ ನೋವಾಗದಿರುತ್ತದೆಯೆ?
ಅಮಿತಾಬ್ ಬಚ್ಚನ್ ಒಬ್ಬ ಅತ್ಯದ್ಭುತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಅವರ ಹಿಂದಿರುವ ಅಭಿಮಾನಿ ಜನಸಾಗರಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ; ಅವರಿಗೆ ಮೈಯಲ್ಲಿ ಹುಷಾರಿಲ್ಲ ಎಂದು ಪತ್ರಿಕೆಯಲ್ಲಿ ವರದಿಯಾದಾಗ ಇಡೀ ಉತ್ತರ ಭಾರತದಾದ್ಯಂತ ಹಲವಾರು ಅಭಿಮಾನಿಗಳು ಹತ್ತು ಹಲವು ರೀತಿಯ ಪೂಜೆಪುನಸ್ಕಾರಗಳನ್ನು ಮಾಡಿ ಅವರಿಗೆ ಬೇಗ ಗುಣವಾಗಲಿ ಎಂದು ಮೊರೆಯಿಟ್ಟ ಸತ್ಯಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಅರವತ್ತು ವರ್ಷವಾದರೂ ಇನ್ನೂ ಕಾಲೇಜು ಹುಡುಗನ ಪಾತ್ರವೇ ಬೇಕೆಂದು ಹಠ ಹಿಡಿಯುವ, ಪಾತ್ರಕ್ಕನುಗುಣವಾಗಿ ತಮ್ಮನ್ನು ಮಾರ್ಪಡಿಸಿಕೊಳ್ಳದೇ ತಮ್ಮ ಇಚ್ಚೆ, ಇಮೇಜುಗಳಿಗನುಗುಣವಾಗಿ ಪಾತ್ರಗಳನ್ನೇ ಮಾರ್ಪಡಿಸುವ ಅರೆಬೆಂದ ಕಲಾವಿದರೇ ತುಂಬಿರುವ ಇಂದಿನ ಪರಿಸ್ಥಿತಿಯಲ್ಲಿ ಎಂಥ ಪಾತ್ರಕ್ಕಾದರೂ ಸಿದ್ಧವಾಗಿ ನಿಲ್ಲುವ, ಅಭಿನಯಿಸುವಾಗ ತನ್ನತನವನ್ನು ಕಳೆದುಕೊಂಡು ಪಾತ್ರದಲ್ಲಿ ತಲ್ಲೀನವಾಗಿ ಮರುಹುಟ್ಟು ಪಡೆಯುವ ಅಮಿತಾಬ್ ಸಿನಿಮಾ ಲೋಕದಲ್ಲಿ ಒಂದು ಅಪವಾದವಾಗಿ, ಒಂದು ಅನುಕರಣೀಯ ಮಾದರಿಯಾಗಿ ನಿಲ್ಲುತ್ತಾರೆ. ತೀರಾ ಇತ್ತೀಚೆಗೆ ಬಂದ 'ಪಾ' ಚಿತ್ರದಲ್ಲಿ ಒಂದು ವಿಶಿಷ್ಟ ಖಾಯಿಲೆಯಿಂದ ಬಳಲುವ ಮಗುವಿನ ಪಾತ್ರ ಮಾಡಿದ್ದಿರಬಹುದು, ಕೆಲವು ವರ್ಷಗಳ ಹಿಂದೆ ಬಂದ 'ಕಭಿ ಅಲ್ವಿದನಾ ಕೆಹನಾ', 'ಬ್ಲಾಕ್', 'ರಾಜ್ ಸಕರ್ಾರ್'ಗಳಂತಹ ಚಿತ್ರಗಳಲ್ಲಿ ಅವರು ಅಭಿನಯಿಸಿದ ಪಾತ್ರಗಳಿರಬಹುದು ಅವೆಲ್ಲವೂ ಅಮಿತಾಬ್ ಬಚ್ಚನ್ ಹೇಗೆ ಇಂತಹ ಇಳಿವಯಸ್ಸಿನಲ್ಲೂ ಎಂಥ ಪಾತ್ರವಾದರೂ ಸರಿ ಅದನ್ನೊಂದು ಸವಾಲಾಗಿ ಸ್ವೀಕರಿಸಿ ಅಭಿನಯಿಸಬಲ್ಲರು ಎಂಬುದನ್ನು ಎತ್ತಿ ತೋರಿಸುತ್ತವೆ. ಅಂತಹ ಮೇರುನಟನೂ ಕೂಡ ಒಮ್ಮೊಮ್ಮೆ ವಯಕ್ತಿಕ ಲಾಭಕ್ಕಾಗಿ, ದುಡ್ಡಿಗಾಗಿ, ವರ್ಚಸ್ಸಿಗಾಗಿ ಅಭಿಮಾನಿಗಳ ಆಶೆ ಆಕಾಂಕ್ಷೆಗಳನ್ನೂ ಮಣ್ಣುಪಾಲು ಮಾಡುತ್ತಾರೆ, ಅಭಿಮಾನಿಗಳ ಮನಸ್ಸನ್ನೂ ಅತೀವವಾಗಿ ಕಲಕಿ ನೋವುಂಟು ಮಾಡುತ್ತಾರೆ ಎಂಬುದಕ್ಕೆ ಮೊನ್ನೆ ಅವರು ಗುಜರಾತ್ನ ರಾಯಭಾರಿಯಾಗಿದ್ದೇ ಸಾಕ್ಷಿ.
ವಾಸ್ತವದಲ್ಲಿ ಅಮಿತಾಬ್ ಬಚ್ಚನ್ ಇರೋದೇ ಹಾಗೆ. ಅವರೆಂದೂ ಅಭಿಮಾನಿಗಳ ಆಕಾಂಕ್ಷೆ ಮತ್ತು ತನ್ನ ವಯಕ್ತಿಕ ಹಿತಾಸಕ್ತಿ ಇವೆರಡರ ನಡುವೆ ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾದರೆ ಅವರು ಎರಡನೇಯದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಸುಸ್ಮಿತಾ ದಾಸ್ ಗುಪ್ತ ಅವರು ಬರೆದಿರುವ ಂಟಣಚಿಛ: ಖಿಜ ಒಚಿಞಟಿರ ಠಜಿ ಚಿ ಖಣಠಿಜಡಿಣಚಿಡಿ ಎಂಬ ಅಮಿತಾಬ್ ಅವರ ಜೀವನ ಚರಿತ್ರೆಯನ್ನು ಅಥವಾ ಸ್ವತಃ ಅಮಿತಾಬ್ ಅವರೇ ಇತ್ತೀಚೆಗೆ ಬರೆಯುತ್ತಿರುವ ಬ್ಲಾಗ್ ಬರವಣಿಗೆಗಳನ್ನು ಗಮನಿಸಿದರೆ ಸಾಕು ಅವರ ಎಡಬಿಡಂಗಿತನ ಅರ್ಥವಾಗಿ ಹೋಗುತ್ತದೆ.
ಅಮಿತಾಬ್ ಬಚ್ಚನ್ ಒಬ್ಬ ನಟನಾಗುವ ಮೊದಲೇ ಅಮಿತಾಬ್ ಕುಟುಂಬ ನೆಹರೂ ಕುಟುಂಬಗಳ ನಡುವೆ ಅತ್ಯಂತ ನಿಕಟ ಬಾಂಧವ್ಯವಿತ್ತು. ಅಮಿತಾಬ್ ಅವರ ತಂದೆ ಹಾಗೂ ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಅವರು ಸರೋಜಿನಿ ನಾಯ್ಡು ಮೂಲಕ ಅಲಹಬಾದ್ನಲ್ಲಿರುವ ಆನಂದಭವನದಲ್ಲಿ ನೆಹರೂ ಕುಟುಂಬವನ್ನು ಭೇಟಿಯಾಗಿದ್ದರು. ಆಗಿನ್ನೂ ಇಂದಿರಾ ಗಾಂಧಿಗೆ ಮುದುವೆಯೂ ಆಗಿರಲಿಲ್ಲ. ಸರೋಜಿನಿ ನಾಯ್ಡು ಅವರು ಹರಿವಂಶ್ ಮತ್ತು ಅವರ ಸಿಖ್ ಧಮರ್ೀಯ ಪತ್ನಿ ತೇಜಿ ಸೂರಿಯರನ್ನು 'ಕವಿ ಮತ್ತು ಕಾವ್ಯ' ಎಂದು ಬಹಳ ಮಾಮರ್ಿಕವಾಗಿ ನೆಹರೂ ಕುಟುಂಬಕ್ಕೆ ಪರಿಚಯಿಸಿದ್ದರು. (ಮುಂದೆ ಇಂದಿರಾಗಾಂಧಿಯವರು ಬಹಳ ವರ್ಷಗಳ ಕಾಲ ತೇಜಿಯವರನ್ನು ವಿದೇಶಿಯರಿಗೆ ಪರಿಚಯಿಸುವಾಗಲೆಲ್ಲಾ ಇದೇ ಪದಗುಚ್ಛವನ್ನು ಬಳಸುತ್ತಿದ್ದರು) ಅಲ್ಲಿಂದ ಪ್ರಾರಂಭವಾದ ಆ ಎರಡೂ ಕುಟುಂಬಗಳ ಸಖ್ಯ ಬಹಳ ಕಾಲ ಮುಂದುವರೆದಿತ್ತು. ರಾಜೀವ್ ಗಾಂಧಿಯನ್ನು ಮದುವೆಯಾಗುವುದಕ್ಕೆ ಸೋನಿಯಾ ಇಟಲಿಯಿಂದ ಹೊರಟು 1968ರ ಜನವರಿ 13ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸೋನಿಯಾಳನ್ನು ರಿಸೀವ್ ಮಾಡಿದ್ದು ಇದೇ ಅಮಿತಾಬ್ ಬಚ್ಚನ್. ಸೋನಿಯಾಳಿಗೆ ಭಾರತೀಯ ಭಾಷೆ, ಸಂಸ್ಕೃತಿ, ಸಂಪ್ರದಾಯ, ರೂಢಿಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಕಲಿಯುವುದಕ್ಕೆ ಅನುಕೂಲವಾಗಲೆಂದು ಆಕೆಯನ್ನು ಅಮಿತಾಬ್ ಬಚ್ಚನ್ ಮನೆಯಲ್ಲೇ ಇರಿಸಿದ್ದರು ಇಂದಿರಾ ಗಾಂಧಿ. 1985ರಲ್ಲಿ ಒಂದು ಸಂದರ್ಶನದಲ್ಲಿ ಸೋನಿಯಾ ತೇಜಿ ಆಂಟಿ ನನ್ನ ಮೂರನೇ ಅಮ್ಮ. ಮೊದಲನೆಯವರು ನನ್ನ ಇಟಲಿ ಅಮ್ಮ, ಎರಡನೇಯವರು ಇಂದಿರಾ ಗಾಂಧಿ. ಅಮಿತ್ (ಅಮಿತಾಬ್ ಬಚ್ಚನ್) ಮತ್ತು ಬಂಟಿ (ಅಮಿತಾಬ್ನ ಸಹೋದರ) ನನ್ನ ಸಹೋದರರು ಎಂದಿದ್ದರು ಎಂದರೆ ಅವೆರಡೂ ಕುಟುಂಬಗಳ ನಡುವಿನ ಬಾಂಧವ್ಯ ಅರ್ಥ ಮಾಡಿಕೊಳ್ಳಬಹುದು.
ನೆಹರೂ ಹರಿವಂಶ್ರನ್ನು ಅಲಹಬಾದ್ನಿಂದ ದೆಹಲಿಗೆ ಕರೆತಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಒಬ್ಬ ವಿಶೇಷಾಧಿಕಾರಿಯನ್ನಾಗಿ ನೇಮಿಸಿದ್ದರು. ಅಮಿತಾಬ್ ಬಚ್ಚನ್ ಕೂಡ ಬಾಲಿವುಡ್ ಚಿತ್ರಲೋಕದಲ್ಲಿ ಗಟ್ಟಿಯಾಗಿ ತಳವೂರುವುದಕ್ಕೂ ಇಂದಿರಾಗಾಂಧಿ ಕುಟುಂಬ ಬಹಳವಾಗಿ ಸಹಕರಿಸಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ಅದಕ್ಕೆ ಪ್ರತಿಯಾಗಿ ಬಚ್ಚನ್ ಕುಟುಂಬ ಕೂಡ ನೆಹರೂ ಕುಟುಂಬದ ರಾಜಕೀಯಕ್ಕೆ ಬೆಂಬಲವಾಗಿ ನಿಂತಿದ್ದೂ ಅಷ್ಟೇ ಹಸಿ ಹಸಿಯಾಗಿದೆ. ಒಂದು ಉದಾಹರಣೆ ಕೊಡಬೇಕೆಂದರೆ 1975ರಲ್ಲಿ ಇಂದಿರಾ ದೇಶದ ಮೇಲೆ ತುತರ್ುಪರಿಸ್ಥಿತಿಯನ್ನು ಹೇರಿ ಇಡೀ ಜನಕೋಟಿಯ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಂಡು ಚಳವಳಿಕಾರರನ್ನು, ಬುದ್ದಿಜೀವಿಗಳನ್ನು, ವಿರೋಧ ಪಕ್ಷದವರನ್ನು ಹಿಡಿದು ಜೈಲಿಗಟ್ಟುತ್ತಿದ್ದಾಗ ಇಡೀ ದೇಶಕ್ಕೆ ದೇಶವೇ ಇಂದಿರಾಗಾಂಧಿಯ ಸವರ್ಾಧಿಕಾರವನ್ನು ವಿರೋಧಿಸಿತ್ತು. ಆಗ ತುತರ್ುಪರಿಸ್ಥಿತಿಯನ್ನು ಬೆಂಬಲಿಸುತ್ತಾ ಇಂದಿರಾ ಗಾಂಧಿಯ ಬೆನ್ನಿಗೆ ನಿಂತ ಕೆಲವೇ ಬುದ್ಧಿಜೀವಿ(!)ಗಳಲ್ಲಿ ಈ ಹರಿವಂಶ್ ಬಚ್ಚನ್ ಕೂಡ ಒಬ್ಬರು! ಅದಕ್ಕೆ ಕೃತಜ್ಞತೆಯಾಗಿ ಇಂದಿರಾ 1976ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ದಯಪಾಲಿಸಿದರು! ಮತ್ತದಕ್ಕೆ ಕೃತಜ್ಞತೆಯಾಗಿ ಅಮಿತಾಬ್ ಬಚ್ಚನ್ ತುತರ್ುಪರಿಸ್ಥಿತಿ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ, ಅದರಲ್ಲೂ ವಿಶೇಷವಾಗಿ ಸಂಜಯ್ ಗಾಂಧಿ ಪರವಾಗಿ ಪ್ರಚಾರ ಮಾಡಿದರು! 1984ರಲ್ಲಿ ಇಂದಿರಾ ಗಾಂಧಿಯ ಕೊಲೆಯಾದ ಮೇಲೆ ರಾಜೀವ್ಗಾಂಧಿ ತನ್ನ ಭವಿಷ್ಯದ ರಾಜಕೀಯ ತಂಡದಲ್ಲಿ ಅಮಿತಾಬ್ ಹೆಸರನ್ನೂ ಸೇರಿಸಿಕೊಂಡಿದ್ದರು. (ಅಮಿತಾಬ್ ಬಚ್ಚನ್ ಎರಡು ವರ್ಷದ ಹಾಗೂ ರಾಜೀವ್ಗಾಂಧಿ ನಾಲ್ಕು ವರ್ಷದ ಹುಡುಗರಾಗಿದ್ದಾಗಿನಿಂದಲೂ ಅವರಿಬ್ಬರೂ ಸ್ನೇಹಿತರಾಗೇ ಇದ್ದವರು) ಆದರೆ, ಇಂದಿರಾ ನಿರ್ಗಮನದ ನಂತರ ರಾಜೀವ್ ಬೋಫೋಸರ್್ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡರು. ಇಂದಿರಾ ಗಾಂಧಿ ಹತ್ಯೆಗೆ ಇಡೀ ಸಿಖ್ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಿ ದೆಹಲಿ ಮತ್ತು ಇಡೀ ಉತ್ತರ ಭಾರತದಲ್ಲಿ ಸಿಖ್ಖರನ್ನು ಕಾಂಗ್ರೆಸ್ಸಿಗರು ಕಂಡಲ್ಲಿ ಕೊಚ್ಚಿ ಹಾಕಿದ್ದನ್ನು ನೆನಪಿಸಿಕೊಂಡು ಒಬ್ಬ ಸಿಖ್ ತಾಯಿಯ ಮಗನಾಗಿ ಅಮಿತಾಬ್ ಬಚ್ಚನ್ ಕಾಂಗ್ರೆಸ್ಗೆ, ರಾಜೀವ್ಗೆ ಗುಡ್ಬೈ ಹೇಳಿದರು.
ಅಲ್ಲಿಂದಾಚೆಗೆ ಅಮಿತಾಬ್ ಮೇಲ್ನೋಟಕ್ಕೆ ಸಕ್ರಿಯ ರಾಜಕಾರಣದಿಂದ ದೂರವಿದ್ದಂತೆ ಕಂಡರೂ ಆಂತರ್ಯದಲ್ಲಿ ರಾಜಕಾರಣದಿಂದ ನಿರ್ಗಮಿಸಿರಲಿಲ್ಲ. ಮರಾಠಿ ಅಭಿಮಾನ, ಶಿವಾಜಿ ಭಕ್ತ ಮುಂತಾದ ಮುಖವಾಡದಲ್ಲಿ ಮುಸ್ಲೀಮರ ವಿರುದ್ಧ ಬೆಂಕಿಯುಗುಳುತ್ತಿದ್ದ ಭಾಳ್ ಠಾಕ್ರೆ ಜೊತೆ ಅಮಿತಾಬ್ ನಂಟಸ್ತಿಕೆ ಮುಂದುವರೆದಿತ್ತು. 1996ರಲ್ಲಿ ಅಂದಿನ ಪ್ರಧಾನಿ ದೇವೇಗೌಡ ಮತ್ತು ಭಾಳ ಠಾಕ್ರೆ ನಡುವಿನ ಮೀಟಿಂಗ್ ಅನ್ನು ಅಮಿತಾಬ್ ತನ್ನ ಮನೆಯಲ್ಲಿ ಸಂಘಟಿಸಿದ್ದರು. ಈಗಲೂ ಕೂಡ ಆಗಾಗ ಭಾಳ್ ಠಾಕ್ರೆಯೊಂದಿಗೆ ಜೊತೆಗೂಡಿ ಸಿನಿಮಾ ನೋಡುತ್ತಿತ್ತೇವೆ ಎಂದು ಅಮಿತಾಬ್ ಬಚ್ಚನ್ ಅವರೇ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ದೇವೇಗೌಡರೊಂದಿಗೆ ಸ್ನೇಹ ಹಸ್ತ ಚಾಚುವುದಕ್ಕೂ ಅಮಿತಾಬ್ಗೆ ಬಿಸಿನೆಸ್ನ ಲೆಕ್ಕಾಚಾರವಿತ್ತು. ದೇವೇಗೌಡರ ಮೂಲಕ ಅಂದಿನ ಕನರ್ಾಟಕದ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ರಿಗೆ ಹತ್ತಿರವಾಗಿ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪಧರ್ೆ ಏರ್ಪಡಿಸಿ ಹೊಸದಾಗಿ ಸ್ಥಾಪಿಸಿದ್ದ ಂಟಣಚಿಛ ಃಚಿಛಿಛಿಚಿಟಿ ಅಠಡಿಠಿಠಡಿಚಿಣಠಟಿ ಐಣಜ (ಂಃಅಐ) ಕಂಪೆನಿಗೆ ಭಾರಿ ಲಾಭ ಮಾಡುವ ಲೆಕ್ಕಾಚಾರವನ್ನು ಅಮಿತಾಬ್ ಮಾಡಿದ್ದರು. ಆದರೆ, ಅದು ಯಶಸ್ವಿಯಾಗದೇ ಅಮಿತಾಬ್ ಭಾರಿ ನಷ್ಟ ಮಾಡಿಕೊಂಡು ಪರದಾಡಬೇಕಾಯಿತು. ಅಸಲಿಗೆ ಎಬಿಸಿಎಲ್ ಕಂಪೆನಿ ಭಾರತದ ಮೊದಲ ಮನರಂಜನಾ ಕಂಪೆನಿ. ಈ ಕಂಪೆನಿಯ ಮೂಲಕ 2000ದ ಹೊತ್ತಿಗೆ ಒಂದು ಸಾವಿರ ಕೋಟಿ ಟನರ್್ಓವರ್ ಮಾಡುವ ಭರ್ಜರಿ ಪ್ಲಾನ್ ಅನ್ನು ಅಮಿತಾಬ್ ಹೊಂದಿದ್ದರು. ಆದರೆ, ವಿಶ್ವಸುಂದರಿ ಸ್ಪಧರ್ೆಯ ವೈಫಲ್ಯ, ಅದು ನಿಮರ್ಿಸಿದ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದ್ದು ಎಲ್ಲಾ ಸೇರಿಕೊಂಡು ದಿವಾಳಿಯೇಳುವ ಹಂತಕ್ಕೆ ಬಂದಿತು. ಕೊನೆಗೆ ಒಂದು ಕೋಟಿ ರೂಪಾಯಿಯೂ ಬೆಲೆ ಬಾಳದ ಅಮಿತಾಬ್ ಹೆಂಡತಿ ಜಯಾ ಬಚ್ಚನ್ ಒಡೆತನದ ಸರಸ್ವತಿ ಆಡಿಯೋ ವಿಜುಯಲ್ಸ್ ಅನ್ನು ಏಳು ಕೋಟಿ ಕೊಟ್ಟು ಕೊಂಡುಕೊಳ್ಳುವ ಮೂಲಕ ಎಬಿಸಿಎಲ್ ಕಂಪೆನಿಯನ್ನು ಮುಳುಗಿಸಿ ಹೆಂಡತಿಯ ಮಡಿಲಿಗೆ ದುಡ್ಡು ಸುರಿಯುವ ವ್ಯವಸ್ಥೆಯನ್ನೂ ಅಮಿತಾಬ್ ಮಾಡಿದರು. ಇಂತಹ ಹತ್ತು ಹಲವು ಬಿಸಿನೆಸ್ ತಂತ್ರಗಳ ಮೂಲಕವೇ ಅಮಿತಾಬ್ ಎಬಿಸಿಎಲ್ ಕಂಪೆನಿ ಮುಳುಗಿಸಿ ತಮ್ಮ ತಿಜೋರಿ ತುಂಬಿಕೊಂಡರು.
ವಾಸ್ತವದಲ್ಲಿ ಈ ಬಿಕ್ಕಟ್ಟೇ ಅಮಿತಾಬ್ ಬೇರೊಂದು ರಾಜಕೀಯ ಪಕ್ಷವನ್ನು, ಬೇರೊಬ್ಬ ರಾಜಕೀಯ ನಾಯಕನ ಆಶ್ರಯ ಪಡೆಯುವುದಕ್ಕೆ ಅವರನ್ನು ಪ್ರೇರೇಪಿಸಿತು. ಈ ಬಾರಿ ಅವರಿಗೆ ಸಿಕ್ಕಿದ್ದು ಸಮಾಜವಾದಿ ಪಕ್ಷ ಮತ್ತದರ ನಾಯಕ ಅಮರ್ ಸಿಂಗ್. ಅಮರ್ಸಿಂಗ್ ಮತ್ತು ಸಮಾಜವಾದಿ ಪಕ್ಷಕ್ಕೂ ಅಮಿತಾಬ್ನಂತಹ ಒಬ್ಬ ಸೆಲಬ್ರೆಟಿಯ ಅವಶ್ಯಕತೆಯೂ ಇತ್ತು. ಹಾಗಾಗಿ ಅದೊಂದು ಅವಕಾಶವಾದಿ ಸ್ನೇಹ ಎಂಬುದರಲ್ಲಿ ಎರಡು ಮಾತಿಲ್ಲ. ಅಮಿತಾಬ್ ಹೆಂಡತಿ ಜಯಾ ಬಚ್ಚನ್ಗೆ ಸಮಾಜವಾದಿ ಪಕ್ಷ ರಾಜ್ಯ ಸಭೆಯ ಸೀಟು ದಯಪಾಲಿಸಿದರೆ ಅಮಿತಾಬ್ರಿಂದ ಸಮಾಜವಾದಿ ಪಕ್ಷ ಬಹಳ ಪ್ರಚಾರ, ವರ್ಚಸ್ಸನ್ನೂ ಗಳಿಸಿಕೊಂಡಿತು. ಸಮಾಜವಾದಿ ಪಾಟರ್ಿಯಲ್ಲಿ ಗಟ್ಟಿಯಾಗಿ ತಳವೂರಿದ್ದ ಜಯಾ ಮತ್ತು ಬಚ್ಚನ್ 2004ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬೆಂಕಿಯುಗುಳಿದ್ದೂ ಆಯಿತು, ಅದರ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದೂ ಆಯಿತು.
ಈಗ ಸಮಾಜವಾದಿ ಪಕ್ಷದಲ್ಲೂ ಪರಿಸ್ಥಿತಿ ಬದಲಾಗಿದೆ. ಅಮಿತಾಬ್ ಮತ್ತು ಜಯಾರ ರಾಜಕೀಯ ರಕ್ಷಕನಂತಿದ್ದ ಪಕ್ಷದ ಪ್ರಧಾನ ಕಾರ್ಯದಶರ್ಿ ಹಾಗೂ ಹಿರಿಯ ನಾಯಕ ಅಮರ್ ಸಿಂಗ್ ಪಕ್ಷದಿಂದ ಹೊರನಡೆದಿದ್ದಾರೆ. ಅಮರ್ ಸಿಂಗ್ ಇಲ್ಲದೇ ಮುಲಾಯಂ ಸಿಂಗ್ ಯಾದವ್ ಎದುರು ತಮ್ಮ ಬೇಳೆ ಕಾಳು ಬೇಯುವುದಿಲ್ಲ ಎಂಬುದು ಅಮಿತಾಬ್ ಬಚ್ಚನ್ಗೂ ಗೊತ್ತಿದೆ. ಅದೂ ಅಲ್ಲದೇ ಜಯಾ ಬಚ್ಚನ್ನ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೇನು ಮೂರು ತಿಂಗಳಲ್ಲಿ ಮುಗಿಯಲಿದೆ. ಅಷ್ಟರೊಳಗಾಗಿ ಯಾವುದಾದರೊಂದು ಹೊಸ ರಾಜಕೀಯ ಪಕ್ಷದ, ಹೊಸ ರಾಜಕೀಯ ನಾಯಕನ ಪಂಚೆಯಡಿಯಲ್ಲಿ ಆಶ್ರಯ ಪಡೆದುಕೊಳ್ಳಬೇಕು. ಈ ಬಾರಿ ಅಮಿತಾಬ್ಗೆ ಸಿಕ್ಕಿದ್ದು ನರೇಂದ್ರ ಮೋದಿ! ಗುಜರಾತ್ನ ಅಂಬಾಸಿಡರ್ ಆಗುವುದರ ಹಿಂದೆ, ಮೋದಿಗೆ ಸ್ನೇಹ ಹಸ್ತ ಚಾಚುವುದರ ಹಿಂದೆ ಅಮಿತಾಬ್ಗೆ ಸ್ಪಷ್ಟವಾದ ರಾಜಕೀಯ, ವ್ಯವಹಾರಿಕ ಲೆಕ್ಕಾಚಾರವಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಅಧ್ವಾನಿಯ ವಿರುದ್ಧ ಸ್ಪಧರ್ಿಸಿ ಅವರಿಗೆ ಬೆವರಿಳಿಸಿದ ಮಲ್ಲಿಕಾ ಸಾರಾಭಾಯಿ ಎಂಬ ಖ್ಯಾತ ಡಾನ್ಸರ್ ಪ್ರಕಾರ ಅಮಿತಾಬ್ ಬಚ್ಚನ್ ಚಿತ್ರಗಳಿಗೆ ಗುಜರಾತ್ನಲ್ಲಿ ತೆರಿಗೆ ವಿನಾಯಿತಿ ಕೊಡುವುದು, ಬಹುದಿನದಿಂದ ಅಮಿತಾಬ್ ಸ್ಥಾಪಿಸಬೇಕೆಂದಿರುವ ಫಿಲ್ಮ್ ಸಿಟಿಗಾಗಿ ಗುಜರಾತ್ನಲ್ಲಿ ಸಾವಿರಾರು ಎಕರೆ ಜಮೀನು ಗಿಟ್ಟಿಸಿಕೊಳ್ಳುವುದು ಹಾಗೂ ತನ್ನ ಹೆಂಡತಿ ಜಯಾ ಬಚ್ಚನ್ಗೆ ರಾಜ್ಯಸಭಾ ಸೀಟು ಕೊಡುವುದು - ಈ ಮೂರು ಕೊಡುಗೆಗಳಿಗೆ ಪ್ರತಿಯಾಗಿ ಅಮಿತಾಬ್ ಬಚ್ಚನ್ ಗುಜರಾತ್ನ ರಾಯಭಾರಿಯಾಗುವುದು - ಇದು ಒಟ್ಟಾರೆ ಡೀಲ್ನ ಸಾರಾಂಶ.
ಅಮಿತಾಬ್ ಬಚ್ಚನ್ ರಾಜೀವ್ ಮತ್ತು ಕಾಂಗ್ರೆಸ್ ಸಖ್ಯ ತೊರೆದು ದೇವೇಗೌಡರ ಅಂಗಳದಲ್ಲಿ ಕಾಣಿಸಿಕೊಂಡಾಗ, ಅಲ್ಲಿಂದಲೂ ಕಾಲ್ತೆಗೆದು ಅಮರ್ ಸಿಂಗ್ನ ಮಡಿಲಿಗೆ ಬಿದ್ದಾಗ ಪ್ರಾಯಶಃ ಅಮಿತಾಬ್ ಅಭಿಮಾನಿಗಳು ಪ್ರಾಯಶಃ ಅಷ್ಟೊಂದು ಬೇಸರಗೊಂಡಿರಲಿಲ್ಲ ಅನ್ನಿಸುತ್ತೆ. ಈಗ ದುಡ್ಡಿನಾಸೆಗಾಗಿ, ಅಧಿಕಾರಕ್ಕಾಗಿ ನರಹತ್ಯೆಯನ್ನೇ ಕಸುಬು ಮಾಡಿಕೊಂಡಿರುವ ಮೋದಿಯೊಂದಿಗೆ ಕೈಜೋಡಿಸಿದ್ದು ಮಾತ್ರ ನಿಜಕ್ಕೂ ಬೇಸರ ತರಿಸಿದೆ. ಅದು ಅಮಿತಾಬ್ ಎಂಬ ಅಮೋಘ ಮೇರುನಟನೊಳಗಿದ್ದ ಒಬ್ಬ ಕ್ಷುಲ್ಲಕ ಮನುಷ್ಯನ್ನು ಮತ್ತಷ್ಟು ನಿಚ್ಚಳವಾಗಿ ಹೊರ ಜಗತ್ತಿಗೆ ತೋರಿಸಿದೆ.
- ಕುಮಾರ್ ಬುರಡಿಕಟಿ

ಶಹೀದ್ ಅಜ್ಮಿಯನ್ನು ನೆನೆಯುತ್ತಾ...



ನಾನು ಹೇಗೆ ಸಾಯುತ್ತೇನೆಂಬುದು ಈಗಾಗಲೇ ನಿಧರ್ಾರವಾಗಿರುವ ವಿಚಾರ। ಪ್ರಾಯಶಃ ಇಂದಲ್ಲ ನಾಳೆ ಬುಲೆಟ್ಗಳು ನನ್ನ ಎದೆಯನ್ನು ಹೊಕ್ಕು ನನ್ನನ್ನು ಕೊಲ್ಲುತ್ತವೆ ಎಂದು ಆಗಾಗ ಆತ ಹೇಳುತ್ತಿದ್ದ। ಅಕ್ಷರಶಃ ಅವನ ನಿರೀಕ್ಷೆಯಂತೆಯೇ ಆಗಿ ಹೋಯಿತು. ಮೊನ್ನೆ ಫೆಬ್ರವರಿ 11ರ ಸಂಜೆ ಮುಂಬೈನ ಕುಲರ್ಾ ಏರಿಯಾದಲ್ಲಿದ್ದ ತನ್ನ ಆಫೀಸಿನಲ್ಲಿ ಬಡ ಕಕ್ಷಿದಾರರೊಂದಿಗೆ ಚಚರ್ೆ ಮಾಡುತ್ತಾ ಕುಳಿತಿದ್ದಾಗ ನಾಲ್ಕು ಜನ ಬಂದೂಕುಧಾರಿಗಳು ಆಫೀಸಿಗೆ ನುಗ್ಗಿ ಎದೆಗೆ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡು ಹಾರಿಸಿ ಆತನನ್ನು ಕೊಂದುಹಾಕಿದರು. ಅಲ್ಲಿಗೆ, ನೈಜ ಪ್ರಜಾತಾಂತ್ರಿಕ ವ್ಯವಸ್ಥೆಯೊಂದನ್ನು, ಸರ್ವರಿಗೂ ನ್ಯಾಯವೊದಗಿಸುವ ನ್ಯಾಯಾಂಗವನ್ನು, ಎಲ್ಲಾ ಸಮುದಾಯಗಳು ತಮ್ಮ ಸಾಂಸ್ಕೃತಿಕ ವೈವಿಧ್ಯತೆಗಳೊಂದಿಗೆ ನಿಜಾರ್ಥದಲ್ಲಿ ಐಕ್ಯವಾಗಿ, ನೆಮ್ಮದಿಯಿಂದ ಬದುಕುವ ಆರೋಗ್ಯಪೂರ್ಣ ಸಮಾಜವೊಂದನ್ನು ಸ್ಥಾಪಿಸುವುದಕ್ಕಾಗಿ ಕನಸುತ್ತಾ, ಅದನ್ನು ಸಾಕಾರಗೊಳಿಸುವುದಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳು ದುಡಿದ ಮತ್ತೊಂದು ಯುವ ಕುಡಿ ಹೀಗೆ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗಿ ಕಮರಿಹೋದಂತಾಯಿತು.


ಆತನ ಹೆಸರು ಶಹೀದ್ ಅಜ್ಮಿ. ವಯಸ್ಸಿನ್ನೂ ಮೂವತ್ತೆರಡು ವರ್ಷ ಆಗಿತ್ತು. ವೃತ್ತಿಯಲ್ಲಿ ವಕೀಲ. ಇನ್ನೂ ಹದಿಹರೆಯದ ಬಾಲಕನಂತೆ ಕಾಣುವ ಅಂದವಾದ ಮೈಕಟ್ಟು, ಕಾಂತಿಯುತ ಮುಖ, ಪ್ರಖರವಾದ ತೇಜಸ್ಸು, ಮೆದು ಮಾತುಗಳು, ಸೌಮ್ಯ ಸ್ವಭಾವ, ಸ್ನೇಹಿತರನ್ನು ಹಚ್ಚಿಕೊಳ್ಳುವ ರೀತಿ, ಪ್ರಭುತ್ವ ಹಿಂಸೆಗೆ ಬಲಿಯಾಗಿ ಬಳಲುತ್ತಿರುವ ದಮನಿತರಿಗೆ ತೋರುವ ಪ್ರೀತಿ, ನೋವಿಗೆ ಮಿಡಿಯುವ ಹೂವಿನಂತಹ ಹೃದಯ, ಭಾರತದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನ, ನಮ್ಮ ಸಂವಿಧಾನ, ಕಾನೂನುಗಳ ಬಗೆಗಿನ ಅಗಾಧ ಪಾಂಡಿತ್ಯ, ಎಂಥಾ ಜಟಿಲ ಸಾಮಾಜಿಕಾಥರ್ಿಕ ಸ್ಥಿತ್ಯಂತರಗಳನ್ನೂ ಜನಸಾಮಾನ್ಯರೂ ಅರ್ಥಮಾಡಿಕೊಳ್ಳುವಂತೆ ವಿವರಿಸುವ ಕುಶಲತೆ - ಹೀಗೆ ಹತ್ತು ಹಲವು ಸದ್ಗುಣಗಳು, ಸಾಮಥ್ರ್ಯಗಳು, ಸ್ವಭಾವಗಳು, ನಡವಳಿಕೆಗಳು ಮೇಳೈಸಿ ರೂಪುಗೊಂಡಿರುವ ಆತನ ವ್ಯಕ್ತಿತ್ವ ಎಂಥವರನ್ನೂ ಕ್ಷಣಾರ್ಧದಲ್ಲಿ ಆಕಷರ್ಿಸಿಬಿಡುತ್ತಿತ್ತು. ಒಮ್ಮೆ ಆತನನ್ನು ಭೇಟಿಯಾಗಿ ಎರಡು ನಿಮಿಷ ಮಾತನಾಡಿದರೆ ಸಾಕು ಅವಕಾಶ ಸಿಕ್ಕಾಗಲೆಲ್ಲಾ ಆತನೊಂದಿಗೆ ಸಮಯ ಕಳೆಯಬೇಕೆನ್ನಿಸುವಂಥ ವ್ಯಕ್ತಿತ್ವ ಅದು.
ಹೊರ ಜಗತ್ತಿಗೆ ಶಹೀದ್ ಅಜ್ಮಿ ಗೊತ್ತಿರುವುದು ಟೆರರಿಸ್ಟ್ ಲಾಯರ್ ಎಂಬ ಹೆಸರಿನಲ್ಲಿ. ಅದು ಮುಖ್ಯವಾಹಿನಿಯ ಮಾಧ್ಯಮಗಳು ಶಹೀದ್ ಅಜ್ಮಿ ಎಂಬ ಪುಣ್ಯಕೋಟಿ ಗೋವಿಗೆ ಕೊಟ್ಟ ಅನ್ವರ್ಥಕ ನಾಮ. ಅದಕ್ಕೆ ಕಾರಣವಿಷ್ಟೆ: ಪ್ರಭುತ್ವ ಯಾವ್ಯಾವ ಅಮಾಯಕರಿಗೆ ಟೆರರಿಸ್ಟ್ ಹಣೆಪಟ್ಟಿ ಕಟ್ಟಿ, ಅನ್ಯಾಯವಾಗಿ ಅವರ ಮೈತುಂಬಾ ಕೇಸುಗಳನ್ನು ಹಾಕಿ, ಅಮಾನುಷವಾಗಿ ಚಿತ್ರಹಿಂಸೆ ಕೊಡುತ್ತಿದೆಯೋ ಅವರೆಲ್ಲರಿಗೆ ನ್ಯಾಯ ಒದಗಿಸುವುದಕ್ಕಾಗಿ ಈತ ತನ್ನ ಜೀವನವನ್ನೇ ಮುಡುಪಾಗಿಟ್ಟಿರುವುದು; ಎಷ್ಟೇ ಪ್ರಾಣ ಬೆದರಿಕೆಗಳು ಬಂದಿದ್ದರೂ ಅದನ್ನು ಲೆಕ್ಕಿಸದೇ ತಮ್ಮ ಜೀವವನ್ನು ಪಣಕ್ಕಿಟ್ಟು ನ್ಯಾಯಾಲಯದಲ್ಲಿ ಅವರ ಕೇಸುಗಳ ಪರವಾಗಿ ವಾದಿಸುತ್ತಾ ಕಾನೂನುಬದ್ಧ ಹೋರಾಟದಲ್ಲಿ ತೊಡಗಿರುವುದು. 2008ರ ಸೆಪ್ಟೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ ದಾಳಿಕೋರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ಫಾಯಿಮ್ ಅನ್ಸಾರಿಯ ಪರವಾಗಿ, 2006ರ ಜುಲೈ 11ರಂದು ಮುಂಬೈನ ಲೋಕಲ್ ಟ್ರೇನ್ ಬ್ಲಾಸ್ಟ್ ಪ್ರಕರಣದಲ್ಲಿ ಭಯೋತ್ಪಾದಕರೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಬಂಧಿತರ ಪರವಾಗಿಯೂ ಶಹೀದ್ ಅಜ್ಮಿ ವಕಾಲತ್ತು ವಹಿಸಿದ್ದ.
ನಮ್ಮಲ್ಲಿ ಎಲ್ಲೇ ಬಾಂಬ್ ಸ್ಫೋಟಗೊಂಡರೂ, ಎಲ್ಲೇ ಭಯೋತ್ಪಾದಕ ದಾಳಿ ನಡೆದರೂ ಯಾವುದೇ ತನಿಖೆಯಿಲ್ಲದೇ ಮುಸ್ಲಿಮ್ ಭಯೋತ್ಪಾದಕರೇ ಅದಕ್ಕೆ ಕಾರಣಕರ್ತರೆಂದು ಪರಿಗಣಿಸುವ ಪರಿಪಾಠವಿದೆ. ಇತ್ತೀಚಿನ ವರ್ಷಗಳಲ್ಲಿ ಭಜರಂಗದಳದವರು, ಆರೆಸ್ಸೆಸ್ನವರೂ ಬಾಂಬ್ ತಯಾರಿಸುತ್ತಿದ್ದ ವೇಳೆ ಅಕಾಸ್ಮಾತಾಗಿ ಸ್ಫೋಟಗೊಂಡು ಸತ್ತ ಘಟನೆಗಳು ಬಹಳಷ್ಟು ವರದಿಯಾಗಿವೆ. ಹಿಂದೂತ್ವವಾದಿಗಳೇ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಿ ಅದನ್ನು ಮುಸ್ಲಿಂ ಭಯೋತ್ಪಾದಕರ ತಲೆಗೆ ಕಟ್ಟುವ ಉದ್ದೇಶದಿಂದ ಬಾಂಬ್ ತಯಾರಿಸಲಾಗುತ್ತಿತ್ತು ಎಂದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿವೆ. ಹೀಗಿದ್ದ ಮೇಲೂ, ಎಲ್ಲೇ ಬಾಂಬ್ ಸ್ಫೋಟಗೊಂಡರೂ ಕನಿಷ್ಠ ತನಿಖೆ ನಡೆಸದೆ ಅದನ್ನು ಮುಸ್ಲೀಂ ಭಯೋತ್ಪಾದಕರ ಅಕೌಂಟಿಗೆ ಹಾಕುವ ಪರಿಪಾಠ ಮಾತ್ರ ನಿಂತಿಲ್ಲ. ಅಂತೆಯೇ, ನಿಜವಾಗಿ ಬಾಂಬ್ ಸ್ಫೋಟಿಸಿದವರು ಮುಸ್ಲೀಂ ಭಯೋತ್ಪಾದಕರೇ ಆಗಿದ್ದರೂ ಅವರಂತೂ ಪೊಲೀಸರ ಕೈಗೆ ಸಿಗುವುದಿಲ್ಲ. ಅವರನ್ನು ಹಿಡಿಯಬೇಕೆಂದು ನಾಗರಿಕ ಸಮಾಜದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ತಾವು ಏನೋ ಸಾಧನೆ ಮಾಡಿದ್ದೇವೆಂದು ತೋರಿಸಿಕೊಳ್ಳುವುದಕ್ಕೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಅವರ ತಲೆಗೆ ಈ ಪ್ರಕರಣಗಳನ್ನು ಕಟ್ಟುವ ಪರಿಪಾಠಕ್ಕೂ ನಮ್ಮಲ್ಲಿ ಕೊರತೆಯಿಲ್ಲ. ಹೀಗೆ, ಅಮಾಯಕರಾಗಿದ್ದರೂ ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಹಚ್ಚಿಸಿಕೊಂಡು ಚಿತ್ರಹಿಂಸೆ ಅನುಭವಿಸುತ್ತಿರುವವರಿಗೆ ಕಾನೂನುಬದ್ಧವಾಗಿ ನ್ಯಾಯ ದೊರಕಿಸಿಕೊಡುವ ಕೆಲಸಕ್ಕೇನಾದರೂ ಯಾರಾದರೂ ಕೈಹಾಕಿದರೆ, ಅದರಲ್ಲೂ ವಿಶೇಷವಾಗಿ ಹೀಗೆ ಕೈ ಹಾಕುವವನು ಅಕಸ್ಮಾತಾಗಿ ಮುಸ್ಲಿಂಮನಾಗಿದ್ದರೆ ಆತ ಎರಡು ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ: ಒಂದು, ಭಯೋತ್ಪಾದಕರೆಂಬ ಆರೋಪ ಹೊತ್ತಿರುವವರಿಗೆ ಕಾನೂನು ನೆರವು ನೀಡಿದ ಕಾರಣಕ್ಕಾಗಿ ಆತನನ್ನೂ ಭಯೋತ್ಪಾದಕ ಎಂದು ಚಿತ್ರಿಸುವುದು. ಎರಡು, ಪೊಲೀಸರಿಂದ ಮತ್ತು ಹಿಂದೂತ್ವ ಉಗ್ರವಾದಿಗಳಿಂದ ಪ್ರಾಣಾಪಾಯವನ್ನು ಎದುರಿಸುವುದು. ಅಮಾಯಕರ ಪರವಾಗಿ ಗಟ್ಟಿಯಾಗಿ ವಾದ ಮಾಡಿ ಗೆದ್ದರೆ ಅಮಾಯಕರನ್ನು ಬಂಧಿಸಿ, ಅವರನ್ನೇ ಭಯೋತ್ಪಾದಕರೆಂದು ಹೊರಜಗತ್ತಿಗೆ ತೋರಿಸಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಪೊಲೀಸರಿಗೆ ಮುಖಭಂಗವಾಗುತ್ತದೆಯಾದ್ದರಿಂದ ನ್ಯಾಯಾಲಯದಲ್ಲಿ ಬಂಧಿತರ ಪರವಾಗಿ ವಾದಿಸುವವವರನ್ನೇ ದೈಹಿಕವಾಗಿ ಹಾಕುವ ಹೀನ ಕೃತ್ಯಕ್ಕೆ ಪೊಲೀಸರು ಇಳಿಯುತ್ತಾರೆ. ಇನ್ನು ಶಿವಸೇನೆ, ಭಜರಂಗದಳ, ಆರೆಸ್ಸೆಸ್ನಂತಹ ಹಿಂದೂತ್ವ ಉಗ್ರವಾದಿ ಸಂಘಟನೆಗಳೂ ತಮ್ಮ ಹಿಂದೂತ್ವ ಭಕ್ತಿಯನ್ನು ಪ್ರದಶರ್ಿಸುವುದಕ್ಕಾಗಿ ಅಂತಹ ವಕೀಲರ ಮೇಲೆಯೇ ಮುಗಿಬೀಳುತ್ತಾರೆ. ಶಹೀದ್ ಅಜ್ಮಿ ವಿಚಾರದಲ್ಲಿ ಇವೆರಡೂ ಸತ್ಯವಾದವು. ಮಾಧ್ಯಮಗಳು ಆತನನ್ನು ಟೆರರಿಸ್ಟ್ ಲಾಯರ್ ಎಂದು ಕರೆದರೆ, ಹಿಂದೂತ್ವವಾದಿ-ಪೊಲೀಸ್ ಕೂಟ ಅವರನ್ನು ಟೆರರಿಸ್ಟ್ ಎಂದೇ ಪರಿಗಣಿಸಿ ಅಂತಿಮವಾಗಿ ಅವರ ಪ್ರಾಣವನ್ನೇ ಬಲಿತೆಗೆದುಕೊಂಡಿತು.
ಇಷ್ಟಕ್ಕೂ ಭಯೋತ್ಪಾದಕ ಕೃತ್ಯಗಳಲ್ಲಿ ಆರೋಪಿಗಳೆನಿಸಿದವರ ಪರವಾಗಿಯೇ ಅಜ್ಮಿ ಏಕೆ ವಕಾಲತ್ತು ಮಾಡುತ್ತಿದ್ದ? ಇದಕ್ಕೆ ಉತ್ತರ ಆತನ ಬದುಕಿನಲ್ಲೇ ಇದೆ. ಅಸಲಿಗೆ, ಆತನ ಸಾವಿನಂತೆಯೇ ಆತನ ಬದುಕೂ ಕೂಡ ಬಹಳ ದುರಂತಮಯವಾದದ್ದು. ಆ ದುರಂತಮಯ ಬದುಕನ್ನು ಅರ್ಥ ಮಾಡಿಕೊಳ್ಳದೇ ಆತನ ಈ ಪ್ರಶ್ನೆಗೆ ಉತ್ತರವೂ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದ ಬಹುತೇಕರು ಅಥವ ಅರ್ಥಮಾಡಿಕೊಳ್ಳುವುದಕ್ಕೇ ಬಯಸದ ಬಹುತೇಕರು, ಆತನೊಬ್ಬ ಮುಸ್ಲಿಂ ಯುವಕ. ಸಹಜವಾಗಿಯೇ ಮುಸ್ಲಿಂ ಭಯೋತ್ಪಾದಕರ ನೆರವಿಗೆ ಬರುತ್ತಾನೆ. ಹಾಗಾಗಿ, ಆತನೂ ಪರೋಕ್ಷವಾಗಿ ಒಬ್ಬ ಭಯೋತ್ಪಾದಕ ಎಂಬ ನಿಲುವಿಗೆ ಬಂದುಬಿಟ್ಟಿದ್ದರು.
ಬಡ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಅಜ್ಮಿ ಏಳು ವರ್ಷದ ಬಾಲಕನಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡ. ನಂತರ ಆತನನ್ನು ಪೊರೆದು ಬೆಳೆಸಿದ್ದ ಆತನ ತಾಯಿ, ಬಂಧುಬಳಗದವರು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಶಿವಸೇನೆ ಮತ್ತು ಸಂಘಪರಿವಾರದ ಉಗ್ರಕೂಟ ಮುಂಬೈನಲ್ಲಿ ನಡೆಸಿದ ಮುಸ್ಲೀಮರ ಮಾರಣಹೋಮ ಅಜ್ಮಿಯ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಆಗ ಆತನಿನ್ನೂ ಹದಿನೈದು ವರ್ಷದ ಬಾಲಕ. ಮುಂಬೈ ಕೋಮುಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದ 1992ರ ಡಿಸೆಂಬರ್ನಲ್ಲಿ ಒಂದು ದಿನ ಅಜ್ಮಿ ಶಾಲೆಯನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗದ್ದಾಗ ಒಬ್ಬ ಪೊಲೀಸ್ ಈತನ ಹಣೆಗೆ ಪಿಸ್ತೂಲನ್ನಿಟ್ಟು ಕೊಲ್ಲುವುದಾಗಿ ಬೆದರಿಸಿದ. ಆತನ ಮಾತಿನಲ್ಲೇ ಹೇಳುವುದಾದರೆ ಇದು ಆತನ ಜೀವನದ ಅತ್ಯಂತ ಭಯಾನಕ ಘಟನೆಯಾಗಿತ್ತು. ನಂತರ ಆತನನ್ನು ಬಂಧಿಸಿ ಶಿವಸೇನೆಯ ಅಧಿನೇತ ಭಾಳ ಠಾಕ್ರೆಯನ್ನು ಕೊಲ್ಲುವ ಸಂಚು ರೂಪಿಸಿದ್ದ ಎಂಬ ಆರೋಪ ಹೊರಿಸಿ ಜೈಲಿಗಟ್ಟಲಾಯಿತು. 1995ರಲ್ಲಿ ಆತ ನಿಷೇಧಿತ ಇಸ್ಲಾಮಿಕ್ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಅರೋಪ ಹೊರಿಸಿ ತಿಹಾರ್ ಜೈಲಿಗೆ ಕಳಿಸಿ ಕೊಡಬಾರದ ಚಿತ್ರಹಿಂಸೆ ಕೊಡಲಾಯಿತು. ಅಜ್ಮಿಯನ್ನು ಶಾಶ್ವತವಾಗಿ ಜೈಲುಕಂಬಿಗಳ ಹಿಂದೆ ಕೊಳೆಸಬೇಕೆಂಬ ಉದ್ದೇಶದಿಂದ ಆತನ ಮೇಲೆ ಟಾಡಾದಂತಹ ಕರಾಳ ಕಾನೂನನ್ನೂ ಹಾಕಲಾಯಿತು. (ಆದರೆ, ಸುಪ್ರೀಂ ಕೋಟರ್ು ಆತನನ್ನು ಆರೋಪದಿಂದ ಮುಕ್ತಗೊಳಿಸಿತು) ದುರಂತ ನೋಡಿ, ಆತನ ಮೇಲೆ ಹೊರಿಸಲಾಗಿದ್ದ ಯಾವ ಆರೋಪವನ್ನೂ ನ್ಯಾಯಾಲಯದಲ್ಲಿ ಸಾಬೀತುಪಡಿಸುವುದಕ್ಕೆ ಪೊಲೀಸರಿಂದ ಆಗಲಿಲ್ಲ. ಆದರೆ, ಶಹೀದ್ ಅಜ್ಮಿ ಮಾತ್ರ ಮುಸ್ಲಿಮನಾಗಿ ಹುಟ್ಟಿದ ತಪ್ಪಿಹಗೆ ಅನ್ಯಾಯವಾಗಿ ಹಲವಾರು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸುತ್ತಾ ಜೈಲಿನಲ್ಲಿ ಕೊಳೆಯಬೇಕಾಯಿತು. ಈ ಅವಧಿಯಲ್ಲಿ ಆತನನ್ನು ಐವತ್ತು ದಿನಗಳ ಕಾಲ ಕಾನೂನುಬಾಹಿರವಾಗಿ ನೆಲಮಾಳಿಗೆಯ ಕತ್ತಲ ಜೈಲುಕೋಣೆಯಲ್ಲಿ ಏಕಾಂಗಿಯಾಗಿ ಬಂಧಿಸಿಡಲಾಗಿತ್ತು. ಅದಾದ ಮೇಲೆ ಆತನನ್ನು ನೆಲಮಾಳಿಗೆಯಿಂದ ಹೊರತರಲಾಯಿತಾದರೂ ಒಂದು ವರ್ಷ ಕಾಲ ಏಕಾಂತ ಜೈಲುವಾಸವನ್ನು ಮುಂದುವರೆಸಲಾಯಿತು. ಕಿರಣ್ ಬೇಡಿಯವರು ಆತನನ್ನು ಅಲ್ಲಿಂದ ಹೊರತರಬೇಕೆಂಬ ಆದೇಶ ಕೊಟ್ಟ ಮೇಲಷ್ಟೇ ಆತ ಪೊಲೀಸರು ಮತ್ತು ಜೈಲು ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಜನರ ಮುಖ ನೋಡಿದ್ದು.
ನಿರಪರಾಧಿಯಾಗಿದ್ದರೂ ಅನ್ಯಾಯವಾಗಿ ಅನುಭವಿಸಿದ ಈ ಚಿತ್ರಹಿಂಸೆ ಶಹೀದ್ ಅಜ್ಮಿಯ ಜೀವನದ ದಿಕ್ಕನ್ನೇ ಬದಲಿಸಿತು. ತನ್ನಂತೆಯೇ ಪೊಲೀಸರಿಂದ ಬಂಧನಕ್ಕೊಳಗಾಗಿ, ಟೆರರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡು, ಅನ್ಯಾಯವಾಗಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗುತ್ತಿರುವ ಸಾವಿರಾರು ಜನರ ಕಣ್ಣೀರನ್ನು ಒರೆಸಬೇಕೆಂಬ ತೀಮರ್ಾನಕ್ಕೆ ಆತ ಬಂದುಬಿಟ್ಟ. ಅದಕ್ಕವನು ಆರಿಸಿಕೊಂಡಿದ್ದು ವಕೀಲಿ ವೃತ್ತಿಯನ್ನು. ಜೈಲಿನಲ್ಲಿರುವಾಗಲೇ ಆತ ಕಾನೂನು ಪದವಿ ಓದುವುದಕ್ಕೆ ಪ್ರಾರಂಭಿಸಿದ್ದ. ಜೈಲಿನಿಂದ ಹೊರಬಂದ ತಕ್ಷಣವೇ ತನ್ನ ಪದವಿಯನ್ನು ಮುಗಿಸಿ ಕಪ್ಪು ಕೋಟು ತೊಟ್ಟು ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವರ ಕೇಸುಗಳನ್ನು ಹುಡುಕಿ ಹುಡಿಕಿ ಕೈಗೆತ್ತಿಕೊಳ್ಳಲಾರಂಭಿಸಿದ. ಅದರಲ್ಲೂ ವಿಶೇಷವಾಗಿ ಭಯೋತ್ಪಾದಕರೆಂಬ ಹಣೆಪಟ್ಟಿ ಹಚ್ಚಿಸಿಕೊಂಡ ಅಮಾಯಕರ ಪರವಾಗಿ ವಿಶೇಷ ಕಾಳಜಿ ವಹಿಸಿ ವಕಾಲತ್ತು ಮಾಡಲಾರಂಭಿಸಿದ. ಮೊದಲೇ ಬಹಳ ಬುದ್ಧಿವಂತನಾಗಿದ್ದ ಹಾಗೂ ಕಾನೂನುಗಳನ್ನು ಚೆನ್ನಾಗಿ ಅರೆದು ಕುಡಿದಿದ್ದ ಅಜ್ಮಿ ತನ್ನಂತೆಯೇ ಅನೇಕ ಅಮಾಯಕರು ಸರಳುಗಳ ಹಿಂದೆ ಅನ್ಯಾಯವಾಗಿ ಚಿತ್ರಹಿಂಸೆ ಅನುಭವಿಸುವುದನ್ನು ತಪ್ಪಿಸಿದ. ಈ ಪ್ರಕ್ರಿಯೆಯಲ್ಲಿಯೇ ಪೊಲೀಸರ, ಹಿಂದೂತ್ವವಾದಿಗಳ ಕೆಂಗಣ್ಣಿಗೂ ಗುರಿಯಾದ. 2008ರ ಸೆಪ್ಟೆಂಬರ್ 26ರಂದು ಮುಂಬೈನ ತಾಜ್ ಹೊಟೆಲ್ ದಾಳಿಯಲ್ಲಿ ಆರರೋಪಿಗಳೆನಿಸಿದವರ ಪರ ವಕಾಲತ್ತು ವಹಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಶಿವಸೇನೆಯಿಂದ ಬೇರ್ಪಟ್ಟು ತನ್ನದೇ ಮಹಾರಾಷ್ಟ್ರ ನವ ನಿಮರ್ಾಣ ಸೇನೆ ಕಟ್ಟಿಕೊಂಡಿರುವ ರಾಜ್ ಠಾಕ್ರೆಯೇ ಬಹಿರಂಗವಾಗಿ ಬೆದರಿಕೆಯೊಡ್ಡಿದ್ದ. ಅದರಲ್ಲೂ ವಿಶೇಷವಾಗಿ ಅಜ್ಮಿಗೆ ಅನೇಕ ಬಾರಿ ಪ್ರಾಣಬೆದರಿಕೆಗಳೂ ಬಂದಿದ್ದವು. ತಾನು ಪೊಲೀಸರ ಅಥವ ಶಿವಸೇನೆಯಂಥ ಉಗ್ರರ ಗುಂಡಿಗೆ ಒಂದು ದಿನ ಬಲಿಯಾಗುತ್ತೇನೆಂದು ಆತನಿಗೆ ಗೊತ್ತಿದ್ದರೂ ತನ್ನ ವೃತ್ತಿಯನ್ನು ಮಾತ್ರ ಬಿಡಲಿಲ್ಲ. ತನ್ನ ಬದ್ಧತೆಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ.
ಸಾಮಾನ್ಯವಾಗಿ ಭಯೋತ್ಪಾದನೆ, ಸಂಘಟಿತ ಅಪರಾಧ, ಕೊಲೆಗಳಂಥ ಗಂಭೀರ ಆರೋಪ ಹೊತ್ತಿರುವವರ ಕ್ರಿಮಿನಲ್ ಕೇಸುಗಳನ್ನು ತೆಗೆದುಕೊಂಡರೆ ಬಹಳಷ್ಟು ದುಡ್ಡು ಮಾಡಬಹುದೆಂಬ ಆಲೋಚನೆ ಬಹಳಷ್ಟು ವಕೀಲರಿಗಿರುತ್ತದೆ. ಆದರೆ ಶಹೀದ್ ಅಜ್ಮಿ ಇದಕ್ಕೆ ಬಹುದೊಡ್ಡ ಅಪವಾದವಾಗಿದ್ದ. ಆತ ಎಂದೂ ದುಡ್ಡಿಗೆ ಆಸೆಪಡಲಿಲ್ಲ. ತನ್ನ ಕಕ್ಷಿದಾರರು ಬಡವರಾಗಿದ್ದರೆ ಅವರಿಂದ ಒಂದು ಪೈಸೆಯನ್ನೂ ಪಡೆಯುತ್ತಿರಲಿಲ್ಲ. ಸ್ವಲ್ಪ ಅನುಕೂಲಸ್ತರಾದರೆ ಕನಿಷ್ಠ ಪೀಜನ್ನು ಮಾತ್ರ ತೆಗೆದುಕೊಳ್ಳುತ್ತಿದ್ದ. ವಾಸ್ತವದಲ್ಲಿ ಭಯೋತ್ಪಾದನಾ ಕೇಸುಗಳ ಬಗ್ಗೆಯೇ ಒಂದು ಪಿಹೆಚ್ಡಿ ಮಾಡಿ ಅಲ್ಲಾಗುತ್ತಿರುವ ಅನ್ಯಾಯವನ್ನು ದಾಖಲಿಸಬೇಕೆಂದು ಶಹೀದ್ ಅಜ್ಮಿ ಬಲವಾದ ಆಸೆಯಿಟ್ಟುಕೊಂಡಿದ್ದ. ಅದನ್ನು ಮಾಡಿಮುಗಿಸುವ ಮೊದಲೇ ಗುಂಡಿಗೆ ಎದೆಯೊಡ್ಡಿ ನೆಲಕ್ಕುರುಳಿದ್ದಾನೆ.
ಅಜ್ಮಿ ಕೇವಲ ವಕೀಲ ವೃತ್ತಿಗೆ ತನ್ನನ್ನು ಸೀಮಿತಗೊಳಿಸಿಕೊಂಡಿರಲಿಲ್ಲ. ಮುಂಬೈನಲ್ಲಿ ಸಾವಿರಾರು ಗುಡಿಸಲುಗಳನ್ನು ನೆಲಸಮ ಮಾಡಿ ಸ್ಲಮ್ ನಿವಾಸಿಗಳನ್ನು ಹೊರದಬ್ಬುತ್ತಿದ್ದಾಗ ಅದರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ. ಸಕರ್ಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಗಳು, ವಿಚಾರಗೋಷ್ಠಿಗಳು ನಡೆದರೆ ತಪ್ಪದೇ ಪಾಲ್ಗೊಳ್ಳುತ್ತಿದ್ದ. ಅಠಟಟಣಣಜಜ ಜಿಠಡಿ ಕಡಿಠಣಜಛಿಣಠಟಿ ಠಜಿ ಆಜಟಠಛಿಡಿಚಿಣಛಿ ಖರಣ (ಅಕಆಖ) ಚಿಟಿಜ ಟಿಜಚಿಟಿ ಂಠಛಿಚಿಣಠಟಿ ಠಜಿ ಕಜಠಠಿಟಜ' ಐಚಿತಿಥಿಜಡಿ (ಂಕಐ) ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದನಲ್ಲದೇ ಅನೇಕ ಸತ್ಯಶೋಧನಾ ತಂಡಗಳಲ್ಲಿ ಭಾಗಿಯಾಗಿದ್ದ.
ಶಹೀದ್ ಅಜ್ಮಿ ಒಬ್ಬ ಅತ್ಯುತ್ತಮ ಭೋದಕನಾಗಿದ್ದ. ತನ್ನ ಬಾಲ್ಯದ ದಿನಗಳಲ್ಲಿ ಆತ ಸುಪ್ರಸಿದ್ಧ ಟಾಟಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಕಟ್ಟದೆದುರು ಹಾದು ಹೋಗುತ್ತಾ ತಾನೂ ಒಂದು ದಿನ ವಿದ್ಯಾಥರ್ಿಯಾಗಿ ಈ ಸಂಸ್ಥೆಯೊಳಗೆ ಪ್ರವೇಶಿಸಬೇಕೆಂದು ಕನಸು ಕಾಣುತ್ತಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಅದೇ ಶಿಕ್ಷಣ ಸಂಸ್ಥೆ ಅಜ್ಮಿಯನ್ನು ಅತಿಥಿ ಉಪನ್ಯಾಸಕನಾಗಿ ವಿದ್ಯಾಥರ್ಿಗಳಿಗೆ ಪಾಠ ಮಾಡುವಂತೆ ಆಹ್ವಾನಿಸಿತು! ಹೀಗೆ ವಿದ್ಯಾಥರ್ಿಯಾಗಿ ಹೋಗಬೇಕೆಂದು ಕನಸು ಕಂಡಿದ್ದ ಅಜ್ಮಿ ಉಪನ್ಯಾಸಕನಾಗಿ ಹೋಗಿದ್ದ! ಆತನಿಂದ ಪಾಠ ಹೇಳಿಸಿಕೊಂಡ ವಿದ್ಯಾಥರ್ಿಗಳೇ ನಮ್ಮ ವಿದ್ಯಾಥರ್ಿ ಜೀವನದಲ್ಲಿ ನಾವು ಕೇಳಿದ ಅತ್ಯುತ್ತಮ ಪಾಠಗಳು ಎಂದರೆ ಅಜ್ಮಿ ಹೇಳಿಕೊಟ್ಟ ಪಾಠಗಳು ಎನ್ನುತ್ತಾರೆಂದರೆ ಅಜ್ಮಿಯ ವ್ಯಕ್ತಿತ್ವ, ಪಾಂಡಿತ್ಯ ಮತ್ತು ಬೋಧನಾ ಕುಶಲತೆಗಳು ಅರ್ಥವಾಗುತ್ತವೆ. ಆತನಿಗೆ ಓದಿನ ಗೀಳೂ ಬಹಳವಾಗಿತ್ತು. ಆತ ತಿಹಾರ್ ಜೈಲಿನಲ್ಲಿದ್ದಾಗ ಮಾವೋವಾದಿ ರಾಜಕೀಯ ಖೈದಿಗಳ ಸಂಪರ್ಕಕ್ಕೆ ಬಂದ ಮೇಲೆ ಅವರೊಂದಿಗೆ ಸೇರಿಕೊಂಡು ತಿಹಾರ್ ಜೈಲಿನಲ್ಲೇ ಅತ್ಯುತ್ತಮವಾದ ಒಂದು ಗ್ರಂಥಾಲಯವನ್ನು ಸ್ಥಾಪಿಸಿದ್ದ.
ಶಹೀದ್ ಅಜ್ಮಿಯಿಂದ ಪಾಠ ಹೇಳಿಸಿಕೊಂಡ ವಿದ್ಯಾಥರ್ಿಗಳೆಲ್ಲರೂ ತಮ್ಮ ನೆಚ್ಚಿನ ಮೇಸ್ಟ್ರ ಸಾವಿನಿಂದ ನಿಜಕ್ಕೂ ಕಂಬನಿ ಮಿಡಿಯುತ್ತಿದ್ದಾರೆ. ಆತನಿಂದ ನ್ಯಾಯ ದೊರಕಿಸಿಕೊಂಡ ಅನೇಕ ಬಡ ಮುಸ್ಲಿಂ ಅಮಾಯಕರು ತಮ್ಮ ಕಣ್ಣೀರನ್ನು ಒರೆಸಿದ ಪುಣ್ಯಾತ್ಮನನ್ನು ನೆನದು ಬಿಕ್ಕಳಿಸುತ್ತಿದ್ದಾರೆ. ಆತನೊಂದಿಗೆ ವಿವಿಧ ಸಾಮಾಜಿಕ, ರಾಜಕೀಯ ಹೋರಾಟಗಳಲ್ಲಿ ಭಾಗಿಯಾದವರೆಲ್ಲರೂ ಅಜ್ಮಿಯ ಸಾವಿನಿಂದ ಜರ್ಝರಿತರಾಗಿದ್ದಾರೆ.
ಒಟ್ಟಿನಲ್ಲಿ ಇಂಥ ಅನಘ್ರ್ಯ ರತ್ನವೊಂದನ್ನು ನಮ್ಮ ಕ್ರೂರ ವ್ಯವಸ್ಥೆ ಬಲಿತೆಗೆದುಕೊಂಡಿದೆ.