Friday, September 24, 2010

Yaddaldinni Murder case - CRIME REPORT



ವ್ಯವಸ್ಥೆಯಲ್ಲಿ ಕಳ್ಳತನ, ಸುಲಿಗೆ, ದರೋಡೆ, ಕೊಲೆಯಂತಹ ಪ್ರಕರಣಗಳು ಆಧುನಿಕ ತಂತ್ರಜ್ಞಾನಗಳು ಬೆಳೆದಂತೆ ಹೆಚ್ಚಾಗುತ್ತಾ ಸಾಗುತ್ತವೆ. ಹಾಗಂತ ತಂತ್ರಜ್ಞಾನ ಬೆಳೆಯುತ್ತಿದೆಯೆಂದು ನಡೆಯುವ ಪ್ರಕರಣಗಳನ್ನು ಪತ್ತೆಹಚ್ಚದೇ ಪೊಲೀಸರು ಸುಮ್ಮನೆ ಕೂಡಲು ಆಗುತ್ತದೆಯಾ..? ಎಂಬ ಪ್ರಶ್ನೆಯ ಬೆನ್ನು ಹತ್ತಿ ಹೊರಟಾಗ ನಮಗೆ ದೀಡಿರನೇ ಅಂತಹದೇ ಒಂದು ಪ್ರಕರಣ ನಮ್ಮ ಜಿಲ್ಲೆಯಲ್ಲಿ ಚಿಗುರೊಡಿದಿರುವುದು ಕಂಡು ಬಂದಿತು. ಯದ್ದಲದಿನ್ನಿ ಮಹಿಳಾ ಕೊಲೆ ಪ್ರಕರಣವನ್ನು ವ್ಯವಸ್ಥಿತವಾಗಿ ಪೊಲೀಸರು ಭೇದಿಸದೇ ಕೈಚೆಲ್ಲಿ ಕುಳಿತರೇ ವ್ಯವಸ್ಥೆ ಏನಾಗಬಹುದು ಎಂಬುದರ ಕುರಿತು ನಮ್ಮ ಪ್ರತಿನಿಧಿ ಪೌಲರಾಜ್ ಯದ್ದಲದಿನ್ನಿ ನೀಡಿರುವ ಒಂದು ತನಿಖಾ ವಿಶ್ಲೇಷಣಾ ವರದಿ.
ರಾಯಚೂರು ಜಿಲ್ಲೆಯ ಕವಿತಾಳ ವ್ಯಾಪ್ತಿಯಲ್ಲಿ ಬರುವ ಪುಟ್ಟದೊಂದು ಹಳ್ಳಿಯಲ್ಲಿ ಆಧುನಿಕ ಜಗತ್ತಿಗೆ ಸವಾಲಾಗುವಂತಹ ಖತರ್ನಾಕ್ ರೀತಿಯಲ್ಲಿ ಅಮಾಯಕ ಒಂಟಿ ಮಹಿಳೆಯ ಕಾಣೆ ನಂತರ ಕೊಲೆಯೆಂಬ ಶಂಕೆ ನಡೆದು ಹೋಗುತ್ತದೆ! ಈ ಘಟನೆ ನಡೆದು ಸುಮಾರು 6ತಿಂಗಳು ಗತಿಸಿದರೂ ವ್ಯವಸ್ಥೆಯ ಯಾರೊಬ್ಬರ ಕಣ್ಣಿಗೆ ಬೀಳುವುದಿಲ್ಲ. ನಂತರ ಇದೊಂದು ವರದಕ್ಷಣಿ ಕಿರುಕುಳ, ನಾಪತ್ತೆ ಪ್ರಕರಣವೆಂದು ದಾಖಲಾಗಿ ಸುಖಾಂತ್ಯ ಕಾಣುವ ಹಂತ ತಲುಪಿರುತ್ತದೆ. ದುರದೃಷ್ಟಕ್ಕೆ ಮತ್ತೇ ಈ ಪ್ರಕರಣ ಮುಂದೊಂದು ದಿನ ಎದ್ದು ಕೂಡಬಹುದೆಂದು ಅಲ್ಲಿನ ಪೊಲೀಸರು ಅಂದುಕೊಂಡಿರಲಿಲ್ಲ. ಜೊತೆಯಲ್ಲಿ ಆರೋಪಿಯೂ ಇದನ್ನು ಕನಸಿನಲ್ಲಿಯೂ ನೆನಸಿರಲಿಲ್ಲ.ಕೊಲೆಯ ಹಿಂದಿನ ರಹಸ್ಯ? ದೇವದುರ್ಗ ತಾಲೂಕಿನ ಫಲಕನಮರಡಿ ಗ್ರಾಮದ ಓರ್ವ ಅನಕ್ಷರಸ್ಥ ಮಹಿಳೆಯಾದ ಹನುಮಂತಿ (22) ಎಂಬಾಕೆಯನ್ನು 05-05-2009ರಂದು ಮಾನವಿ ತಾಲೂಕಿನ ಯದ್ದಲದಿನ್ನಿ ಗ್ರಾಮದ ಹನುಮಂತ (28)ಎಂಬಾತನಿಗೆ ಕೊಟ್ಟು ಮದುವೆಯನ್ನು ಮಾಡಲಾಗಿತ್ತು. ಮದುವೆಯಾದ ನವದಂಪತಿಗಳು ಒಳ್ಳೆಯ ಜೀವನವನ್ನು ಸಾಗಿಸಲಿ ಎಂದು ಎಲ್ಲರೂ ನಾಲ್ಕು ಅಕ್ಕಿ ಕಾಳನ್ನು ಹಾಕಿ ಆಶರ್ಿವಧಿಸುತ್ತಾರೆ. ಆದರೆ, ಹನುಮಂತಿಯ ಬದುಕಿನಲ್ಲಿ ಅದು ನಡೆಯಲಿಲ್ಲ. ತನ್ನ ಬಾಲ್ಯದಲ್ಲಿ ಕಳೆದ ಜೀವನವನ್ನು ಆಕೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಮದುವೆಯಾದ ಎರಡೇ ತಿಂಗಳಲ್ಲಿ ಗಂಡನಾದ ಹನುಮಂತ ಕಿರುಕುಳ ಕೊಡಲು ಪ್ರಾರಂಭಿಸಿದ. ನಿನ್ನ ತವರು ಮನೆಗೆ ಹೋಗಿ 1ತೊಲೆ ಬಂಗಾರ, 10ಸಾವಿರ ರೊಕ್ಕ ತೆಗೆದುಕೊಂಡು ಬಾ, ಎಂದು ಒಂದೇ ಸಮನೇ ವರದಕ್ಷಣೆ ಕಿರುಕುಳ ಕೊಡುತ್ತಾ, ಹೊಡೆಯುವದನ್ನು ಮಾಡುತ್ತಿದ್ದ. ನಂತರ ಬೇಸತ್ತ ಹನುಮಂತಿ ತನ್ನ ತಂದೆಗೆ ಈ ವಿಷಯವನ್ನು ತಿಳಿಸಿ 1ತೊಲೆ ಬಂಗಾರವನ್ನು ನನ್ನ ಗಂಡನಿಗೆ ನೀಡುವಂತೆ ತನ್ನ ತಂದೆಯನ್ನು ಒಪ್ಪಿಸುತ್ತಾಳೆ. ಅದಾದ ಕೆಲವೇ ದಿನಗಳಲ್ಲಿ ಯದ್ದಲದಿನ್ನಿ ಗ್ರಾಮಕ್ಕೆ ಹನುಮಂತಿ ತನ್ನ ತಂದೆಯ ಜೊತೆಯಲ್ಲಿ ಹೋಗಿ ಬಂಗಾರವನ್ನು ಕೊಟ್ಟು ಸುಖಿಸಂಸಾರ ನಡೆಸಲು ಆಲೋಚನೆ ನಡೆಸಿದಳು. ಯಾಕೋ ಹನುಮಂತನಿಗೆ ಆಸೆ ಜಾಸ್ತಿಯಾಯಿತು. ಹಿಂದಿನ ಇತಿಹಾಸದಲ್ಲಿ ಹೇಳುವಂತೆ ಕಡ್ಡಿ ತಾಂಬರೋ ಹನುಮ ಅಂದರೆ, ಅವನು ಗುಡ್ಡನೇ ತಂದಿದ್ದನಂತೆ ಅದರಂತೆ ಈ ಕಲಿಯುಗದ ಹನುಮಂತನಿಗೆ ಹೆಂಡತಿಯ ಜೊತೆ ಬಾಳುವುದು ಇಷ್ಟವಾಗಲಿಲ್ಲ. ತಾನು ಹೇಳಿದಂತೆ ತನ್ನ ಭೀಗರು ಬಂಗಾರವನ್ನು ಕೊಟ್ಟರೂ ಸಹ ಮತ್ತೇ ಕಿರುಕುಳ ಕೊಡಲು ಪ್ರಾರಂಭಿಸಿದನು. ನಂತರದ ದಿನಗಳಲ್ಲಿ ಹನುಮಂತನ ಹಣದ ವ್ಯಾಮೋಹ ಮತ್ತು ಆಲೋಚನೆಗಳು ತನ್ನ ಹೆಂಡತಿಯನ್ನೇ ನಾಪತ್ತೆ, ಕೊಲೆ ಮಾಡುವ ಮಟ್ಟಿಗೆ ಹೋಗಿವೆ. ಇದಕ್ಕೆ ಸಾಥ್ ಆಗಿ ಅವನ ಅಣ್ಣ ಶರಣಪ್ಪ, ಅವನ ತಾಯಿ ಅನ್ನಮ್ಮ ಸಹಕಾರ ನೀಡುತ್ತಾರೆೆ!ತನ್ನ ಹೆಂಡತಿಯನ್ನು ನಾಪತ್ತೆ, ಕೊಲೆ ಮಾಡಲು ಹನುಮಂತ ಕಳೆದುಕೊಂಡದ್ದಾದರೂ ಏನು? ಹಣಕ್ಕಾಗಿ ಹಗಲಿರುಳು ಪೀಡಿಸುತ್ತಿದ್ದ ಹನುಮಂತ ಮತ್ತು ಅವನ ಕುಟುಂಬದವರು ಒಂದು ದಿನ ಹನುಮಂತಿಯ ಕೊರಳಲ್ಲಿನ ತಾಳಿಯನ್ನು ತೆಗೆದು ನಿಗೂಡವಾಗಿ ಕೊಲೆ ಮಾಡಿದ್ದಾರೆ! ಅದು ಹನುಮಂತನ ಕುಟುಂಬದವರಿಗೆ ಬಿಟ್ಟರೆ, ಊರಿನಲ್ಲಿ ಮತ್ಯಾರಿಗೂ ಗೊತ್ತಿಲ್ಲ. ಇತ್ತ ಫಲಕನಮರಡಿಯಲ್ಲಿ ಹನುಮಂತಿಯ ಕುಟುಂಬದವರು ಕೆಲವು ದಿನಗಳ ಹಿಂದೆ ಮಗಳದ್ದು ದುಡ್ಡಿನ ಸಂಭಂಧ ಕಿರಿಕಿರಿ ಉಂಟಾದಾಗ ತಾವೇ ಖುದ್ದಾಗಿ ಭೀಗರ ಊರಿಗೆ 1ತೊಲೆ ಬಂಗಾರವನ್ನು ನೀಡಿ ಬಂದಿದ್ದರು! ಹೀಗಾಗಿ ಬಹಳ ದಿನಗಳಾಗಿದೆ ಮಗಳನ್ನು ನೋಡಿದರಾಯಿತು. ಅದೇ ಹೊತ್ತಿನಲ್ಲಿ ಮೊಹರಂ ಹಬ್ಬವು ಸಮೀಪಕ್ಕೆ ಬಂದಿತ್ತು. ಆದ್ದರಿಂದ ಹನುಮಂತಿಯ ತಂದೆ ತನ್ನ ತಮ್ಮನ ಮಗನಿಗೆ ಹೇಳಿ ಯದ್ದಲದಿನ್ನಿಗೆ ಹೋಗಿ ನಿಮ್ಮ ತಂಗಿಯನ್ನಾದರೂ ಕರೆದುಕೊಂಡು ಬಾ ಹೋಗು ಎಂದು ಹೇಳಿದ್ದಾನೆ.ಮಾರನೇ ದಿನ ಹನುಮಂತಿಯ ಅಣ್ಣ ಯದ್ದಲದಿನ್ನಿ ಹೋದಾಗ ಭೀಗರ ಮನೆಯಲ್ಲಿ ತನ್ನ ತಂಗಿ ಕಂಡಿಲ್ಲ. ನಿಧಾನವಾಗಿ ಆಲೋಚಿಸುತ್ತಾ ಮನೆ ಕೆಲಸಕ್ಕಾಗಿ ಇಲ್ಲಿ-ಎಲ್ಲಿಯಾದರೂ ಹೋಗಿರಬೇಕು ಬಿಡು, ಎಂದು ನಿರಾಳವಾಗಿ ಅರ್ಧಗಂಟೆ ಕಳೆದಿದ್ದಾನೆ. ಆದರೂ, ಕೂಡ ತಂಗಿ ಬಾರದೇ ಇರುವುದನ್ನು ನೋಡಿ ತನ್ನ ಅಳಿಯನಿಗೆ ಕೇಳಿದ್ದಾನೆ. ಏನಪ್ಪ ಎಲ್ಲಿದ್ದಾಳೆ ನಮ್ಮ ತಂಗಿ.., ಆಗ, ಜಝರ್ಿರಿತನಾದ ಅಳಿಯ ಹನುಮಂತ ; ನಿಮ್ಮ ತಂಗಿ ಇವತ್ತಿಗೆ ಎರಡು ದಿನ ಆಯಿತು. ಗೂಟಕ್ಕೆ ತಾಳಿಯನ್ನು ನೇತುಹಾಕಿ ಮನೆ ಬಿಟ್ಟು ಎಲ್ಲಿಗೋ ಓಡಿ ಹೋಗಿದ್ದಾಳೆ. ನಾವು ಕೂಡ ಆಕೆಯನ್ನೇ ಹುಡುಕಾಡುತ್ತಿದ್ದೇವೆ ಅಂದಿದ್ದಾನೆ. ಆಗ ಅಣ್ಣನು ದಂಗಾಗಿ ನಂತರ ಅತ್ತೆ, ಮನೆಯಲ್ಲಿರುವ ಎಲ್ಲರನ್ನು ವಿಚಾರಿಸಿದ್ದಾನೆ. ಎಲ್ಲರಿಂದಲೂ ಇದೇ ಉತ್ತರ ಬಂದಾಗ ಕೂಡಲೇ ಆತ ವಿಷಯವನ್ನು ತಮ್ಮೂರಿನ ದೊಡಪ್ಪನಿಗೆ ತಿಳಿಸಿದ್ದಾನೆ. ಮನೆಯಲ್ಲಿ ಈ ವಿಷಯವನ್ನು ಕೇಳುತ್ತಿದ್ದಂಥೆ ಎಲ್ಲರೂ ಒಂದು ಕ್ಷಣ ಗಲಿಬಿಲಿಗೊಂಡಿದ್ದಾರೆ.(ಆದರೆ, ಯಾರಿಗೂ ಆ ಕ್ಷಣ ಹನುಮಂತಿ ನಿಗೂಡವಾಗಿ ಕೊಲೆಯಾಗಿದ್ದಾಳೆ! ಎಂಬುದು ಆ ಕ್ಷಣಕ್ಕೆ ಗೊತ್ತಾಗಿಲ್ಲ. ಸಮಯ ಕಳೆದಂತೆ ಅಳಿಯನ ಮೇಲೆ ಭೀಗರು ಅನುಮಾನ ಮಾಡಿದ್ದಾರೆ.) ಹನುಮಂತಿಯ ಕಡೆಯವರು ತಮ್ಮಮಗಳ ನಾಪತ್ತೆಗಾಗಿ ದೂರನ್ನು ಕವಿತಾಳ ಠಾಣೆಗೆ ಸಲ್ಲಿಸಲು ಹೋದಾಗ ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ನಂತರ ಹನುಮಂತನ ಕರೆಯಿಸಿಕೊಂಡು ಬೇಕಾಬಿಟ್ಟಿಯಾಗಿ ಆತನಿಂದಲೇ ಕಾಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ! ಪದ್ದತಿಯಂತೆ ಮೊಬೈಲ್ನ ಸಿಮ್ ಕಳೆದರೆ ಹೇಗೆ ನಾವು ಕಛೇರಿಗೆ ಹೋಗಿ ಹೇಗೆ ಕಂಪ್ಲೇಟ್ ಕೊಡುತ್ತೇವೆ. ಅದರಂತೆ ಹನುಮಂತನು ಕೂಡ ತನ್ನ ಹೆಂಡತಿ ಕಳೆದುಹೋಗಿದ್ದಾಳೆ ಎಂದು ಸ್ಥಳೀಯ ಕವಿತಾಳ ಪೊಲೀಸ್ ಕಛೇರಿಗೆ ದೂರನ್ನು ಕೊಟ್ಟಿದ್ದಾನೆ. ದೂರನ್ನು ಸ್ವೀಕರಿಸಿದ ಠಾಣಾಧಿಕಾರಿಗಳು ತನಿಖೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪೊಲೀಸ್, ಕಛೇರಿ ಇಂತವುಗಳನ್ನೆಲ್ಲ ಊರಿನ ಗೌಡರು, ಕುಲಕಣರ್ೀಯವರೇ ನೋಡಿಕೊಳ್ಳುತ್ತಾರೆ. ಅದರಲ್ಲಿ ಅಲ್ಪಸ್ವಲ್ಪ ಪಾಲಿಟಿಕ್ಸ್ ಸೇರಿರುತ್ತದೆ. ಏನೇ ಆಗಲಿ ಪೊಲೀಸರು ಕಾಣೆಯಾದ ಹನುಮಂತಿಯನ್ನು ಹುಡುಕಿದ ಪ್ರಯತ್ನ ವಿಫಲವಾಯಿತು. ಇದು ಹೀಗೆ ನಡೆದುಹೋಗಿದ್ದರೆ, ಒಂದು ಅಮಾಯಕ ಮಹಿಳೆಯ ಕೊಲೆಯ ಪ್ರಕರಣವೊಂದು ವ್ಯವಸ್ಥೆಯಲ್ಲಿ ಬೆಳಕಿಗೆ ಬಾರದೇ ಹಾಗೇಯೇ ಮುಚ್ಚಿಹೋಗುತ್ತಿತ್ತು. ಅದೃಷ್ಟಕ್ಕೆ ಸತ್ಯಕ್ಕೆ ಸಮಾಜದಲ್ಲಿ ಸಾವಿಲ್ಲ ಎಂಬಂಥೆ ಹನುಮಂತನನಿಂದಲೇ ಈ ಪ್ರಕರಣ ಮುಂದೊಂದು ದಿನ ಬೆಳಕಿಗೆ ಬರುತ್ತದೆ ಎಂದು ಯಾರೊಬ್ಬರು ಅಂದು ಊಹಿಸಿರಲಿಲ್ಲ. ಇಷ್ಟೆಲ್ಲ ಘಟನೆ ನಡೆದು ತಿಂಗಳುಗಳೇ ಕಳೆಯುತ್ತಾ ಹೋಯಿತು. ಫಲಕನಮರಡಿಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಮನೆಯವರೆಲ್ಲ ಚಿಂತಿಸುತ್ತಿದ್ದರೆ, ಅತ್ತ ಹನುಮಂತ ನಾನು ಹೆಂಡತಿಯನ್ನು ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಿಲ್ಲ. ಪೊಲೀಸರಿಗೂ ನನ್ನ ಮೇಲೆ ಯಾವುದೇ ಅನುಮಾನ ಬಂದಿಲ್ಲ. ಅಂದ ಮೇಲೆ ನಾನೇಕೆ ಸುಮ್ಮನೆ ಒಂಟಿ ಜೀವನ ನಡೆಸುವುದು ಎಂದು ಯೋಚಿಸಿ ಇನ್ನೊಂದು ಮದುವೆಯಾಗಲು ಇಚ್ಚಿಸಿದ್ದಾನೆ. ಇದಕ್ಕೆ ಮನೆಯಮಂದಿ ಸೊಪ್ಪು ಹಾಕಿದ್ದರಿಂದ ಬೇಗನೇ ಮದುವೆಗೆ ಮುಹೂರ್ತವು ಫಿಕ್ಸ್ ಆಯಿತು. (ಪಾಪ..ಹನುಮಂತನಿಗೆ ಗೊತ್ತಾಗಿಲ್ಲ. ಕೊಲೆ ಮಾಡಿದ್ದು ಬಯಲಿಗೆ ಬಿದ್ದರೆ, ನನಗೂ ಮತ್ತು ಇನ್ನೊಬ್ಬ ಹೆಂಡತಿಯೂ ಕಂಬಿ ಎಣಿಸಿವುದು ಬರುತ್ತದೆ ಎಂದು.) 02-08-2010 ಹನುಮಂತ ಅಲ್ಲಿಯ 73ಕ್ಯಾಂಪಿನ ಹುಚ್ಚಪ್ಪ ಕಾಚಾಪೂರ ಎಂಬುವವರ ಮಗಳನ್ನು 50ಸಾವಿರ ವರದಕ್ಷಣಿಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗಿದ್ದಾನೆ.! ಒಂದು ಮದುವೆಯಾಗಿ ಸರಿಯಾಗಿ ಇನ್ನೂ 1ವರೆವರ್ಷ ಕಳೆದಿಲ್ಲ. ಅದರಲ್ಲಿ ಹೆಂಡತಿ ಕಾಣೆಯಾಗಿದ್ದಾಳೆ ದೂರು ಕೊಟ್ಟು ಕೆಲವು ತಿಂಗಳೂ ಗತಿಸಿಲ್ಲ. ಅಂತಹದರಲ್ಲಿ ಈತನು ಇನ್ನೊಂದು ಮದುವೆ ಮಾಡಿಕೊಳ್ಳುತ್ತಿರುವುದು ನೋಡಿ ಎಲ್ಲರಿಗೂ ಅನುಮಾನ ಬಂದಿದೆ. ಇದೇ 2ನೇ ಮದುವೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಕಂಬಿ ಎಣಿಸುವಂತೆ ಮಾಡುತ್ತದೆ ಎಂಬುದು ತಿಳಿದಿರಲಿಕ್ಕಿಲ್ಲ.ಹನುಮಂತ ಮದುವೆಯಾದ ಮಾರನೇ ದಿನವೇ ಮೊದಲ ಹೆಂಡತಿ ಹನುಮಂತಿಯ ಕುಟುಂಬದವರು ಕವಿತಾಳ ಠಾಣೆಗೆ ಬಂದು ನಮ್ಮ ಅಳಿಯ ಕೆಲವು ತಿಂಗಳುಗಳ ಹಿಂದೆ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರನ್ನು ಕೊಟ್ಟಿದ್ದ.. ಅದರ ತನಿಖೆಯನ್ನು ನೀವು ನಡೆಸುತ್ತಿದ್ದೀರಿ.. ಆದಾಗ್ಯೂ ಕೂಡ ಆತನು 02-08-2010ರಂದು ಇನ್ನೊಬ್ಬಳ ಜೊತೆಯಲ್ಲಿ ಮದುವೆಯಾಗಿದ್ದಾನೆಂದರೆ ಏನರ್ಥ ಸಾರ್.. ಎಂದು ಕೆಲವೊಂದು ಸ್ಥಳೀಯ ಸಂಘಟನೆಗಳ ಮುಖಂಡರಾದ ತಿಮ್ಮಣ್ಣ ನಾಯಕ ಹಟ್ಟಿ, ಜಮದಗ್ನಿ ಕೋಠಾರವರ ಜೊತೆಗೆ ಹೋಗಿ ಕೇಳಿದ್ದಾರೆ.ಆಗ ಕೂಡ ಕವಿತಾಳ ಪೊಲೀಸರು ನಿರ್ಲಕ್ಷತನ ತೋರಿದ್ದರಿಂದ ಕುಟುಂಬದವರು ಸ್ಥಳೀಯ ಮುಖಂಡರ ಜೊತೆ ಮಾರನೇ ದಿನ ಎಸ್ಪಿಯವರನ್ನು ಭೇಟಿಯಾಗಿ ಮತ್ತೊಂದು ದೂರನ್ನು ಸಲ್ಲಿಸಿದ್ದಾರೆ. ಅಲ್ಲಿಯೂ ಕೂಡ ಎಸ್ಪಿಯವರು ಮತ್ತೇ ಪ್ರಕರಣವನ್ನು ಅದೇ ಪಿ.ಎಸ್.ಐ ಅವರಿಗೆ ವಹಿಸಿದ್ದಾರೆ. ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ಹನುಮಂತನನ್ನು ಹಿಡಿಯಲು ಸಫಲರಾಗಿದ್ದಾರೆ. ಹನುಮಂತನನ್ನು ಠಾಣೆಗೆ ಕರೆತಂದ ಪೊಲೀಸರು ಆತನಿಗೆ ತಮ್ಮ ಆತಿಥ್ಯವನ್ನು ನೀಡುತ್ತಿದ್ದಂತೆ ಆತನೇ ಭಯಾನಕ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾನೆ. ಅದು ನಾನೇ ನನ್ನ ಹೆಂಡತಿಯನ್ನು ಕೊಲೆ ಮಾಡಿರುವುದು.! ನನ್ನ ಹೆಂಡತಿಯನ್ನು ಕೊಂದು ನನ್ನ ಮನೆಯ ಹಿಂದಿನ ಹೊಲಗದ್ದೆಯಲ್ಲಿ ಹೂತುಹಾಕಿದ್ದೇನೆ.! ಎಂತೆಲ್ಲ ಮಾಹಿತಿಯನ್ನು ಪೊಲೀಸರ ಒಂದೊಂದು ಏಟಿಗೆ ಹೇಳಿದ್ದಾನೆ. ನಂತರ ಪೊಲೀಸರು ಆಕೆಯ ತಾಯಿಯನ್ನು ಬಂಧಿಸಿದ್ದಾರೆ. ಸ್ವಲ್ಪದರಲ್ಲಿಯೇ ಈ ಕೊಲೆ ಪ್ರಕರಣದ ರೂವಾರಿ ಆತನ ಅಣ್ಣ ಶರಣಪ್ಪನು ತಪ್ಪಿಸಿಕೊಂಡು ಓಡಿದ್ದ. (ನಂತರ ಅವನು ಕೂಡ ಸಿಕ್ಕಿಬಿದ್ದ) ಜೊತೆಗೆ ಅವನ ತಮ್ಮನನ್ನು ಹಿಡಿದು ತಂದಿದ್ದಾರೆ ಪೊಲೀಸರು. ಮಗಳನ್ನು ಕಳೆದುಕೊಂಡ ಫಲಕನಮರಡಿಯವರು ಕವಿತಾಳ ಪೊಲೀಸ್ ಠಾಣೆಗೆ ಅಲೆಯುತ್ತಾ, ನಮ್ಮ ಮಗಳ ಕೊಲೆ ಮಾಡಿದವರಿಗೆ ಶಿಕ್ಷೆ ನೀಡಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸ್ ಅಧಿಕಾರಿಗಳತ್ತ ಅಂಗಲಾಚಿಕೊಳ್ಳುತ್ತಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಹನುಮಂತ ಈಗ ಪೊಲೀಸರ ಅತಿಥಿಯಾಗಿ ವರದಕ್ಷಣಿ ಪ್ರಕರಣದಲ್ಲಿ ಜೈಲುಪಾಲಾಗಿ ನಂತರದ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗಡೆ ಬಂದು ರಾಜಾರೋಷವಾಗಿ ತಿರುಗುತ್ತಿದ್ದಾನೆ.ಕೊಲೆಯಾದ್ದದ್ದು ಗೊತ್ತಾದರೂ ಪೊಲೀಸರಿಂದ ದೇಹವನ್ನು ಹುಡುಕಲು ಆಗುತ್ತಿಲ್ಲ.!ಹನುಮಂತ ಕೊಲೆ ಮಾಡಿದ್ದೇನೆಂದು ಹೇಳಿದ ಮೇಲೆ ಆತ ದಿನಕ್ಕೊಂದು ನಾಟಕವಾಡುತ್ತಿದ್ದಾನೆ. ಮೊದಲ ದಿನ ನನ್ನ ಮನೆಯ ಸುತ್ತ 20ಅಡಿಯಲ್ಲಿ ಹೂತಿಟ್ಟಿದ್ದೇನೆಂದು ಹೇಳಿದ! ಮಾರನೇ ದಿನ ನನ್ನ ಹೆಂಡತಿಯನ್ನು ನಾನೇ ಕೊಲೆ ಮಾಡಿ ಕಾಲುವೆಗೆ ಹಾಕಿದ್ದೇನೆ ಎಂದು ಹೇಳಿದ್ದ. ಇನ್ನೊಂದು ದಿನ ನಾನು ನನ್ನ ತಾಯಿ ಊರ ಹೊರಗೆ ಇರುವ ಕಾಲುವೆ ಪಕಕ್ಕೆ ತಗ್ಗುತೋಡಿ ಇಟ್ಟಿದ್ದೇವೆ ಎಂದು ಹೇಳಿಕೆ ನೀಡಿದ್ದಾನೆ! ಹೀಗೆ ದಿನಕ್ಕೊಂದು ಸ್ಥಳವನ್ನು ತೋರಿಸುತ್ತಾ, ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಅದಕ್ಕೆ ಪೂರಕವಾಗಿ ಪೊಲೀಸರು ಆತ ಎಲ್ಲೆಲ್ಲಿ ಹೇಳುತ್ತಾನೆ ಅಲ್ಲಲ್ಲಿ ತಗ್ಗು ತೋಡುತ್ತಾ, ಸಮಯವನ್ನು ಕಳೆದಿದ್ದಾರೆ. ಈ ಘಟನೆ ನಡೆದು ಇಷ್ಟು ದಿನಗಳು ಕಳೆದರೂ ಇಲ್ಲಿಯವರಗೆ ಹನುಮಂತನನ್ನು ಸರಿಯಾಗಿ ಬಾಯಿಬಿಡಿಸಿ ಕೊಲೆಯಾದ ಮೃತದೇಹವನ್ನು ಪತ್ತೆಹಚ್ಚಲು ಪೊಲೀಸರಿಗೆ ಆಗಿಲ್ಲವೆಂದರೆ ದುರಂತವಲ್ಲದೇ ಮತ್ತೇನು.!ಪೊಲೀಸರಿಂದ ಹನುಮಂತಿ ಕುಟುಂಬದವರಿಗೆ ಉಪದೇಶ ನೋಡ್ರೀಪ್ಪ.. ಕೊಲೆಯಾದವರ ಪೈಕಿ ನೀವು ಬ್ಯಾಡರು, ಕೊಲೆ ಮಾಡಿದ ನಿಮ್ಮ ಅಳಿಯನು ಬ್ಯಾಡರವ, ಜೊತೆಯಲ್ಲಿ ನಾನು ಕೂಡ ಬ್ಯಾಡರು ಇದನ್ನು ನಾವೇ ಕುಳಿತುಕೊಂಡು ಬಗೆಹರಿಸಿಕೊಳ್ಳೋಣ! ಮಂದಿ ಮಾತು ಕೇಳಿ ಯಾಕೆ ನೀವು ಎಸ್ಪಿ ಹತ್ತಿರ ಹೋಗುವುದು! ಪೇಪರ್ದವರ ಹತ್ತಿರ ಹೋಗ್ರೀರಿ.! ಎಂದು ಠಾಣಿಯ ಅಧಿಕಾರಿಗಳು ಹನುಮಂತಿಯ ಕುಟುಂಬದವರಿಗೆ ಉಪದೇಶ ನೀಡುತ್ತಿದ್ದಾರೆ. ಮತ್ತೇ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಅಳಿಯನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡ ಮೇಲೆ ನಿಮ್ಮ ಮಗಳ ದೇಹವನ್ನು ತಗೊಂಡು ಏನ್ ಮಾಡ್ತೀರಿ.. ಅವನ ಮೇಲೆ ಕೊಲೆ ಕೇಸ್ ಹಾಕಿ ಕೋಟರ್ಿಗೆ ಕಳುಹಿಸೋಣ ಎಂದೇಳುತ್ತಿದ್ದಾರೆ.! (ಅಂದರೆ, ಪೊಲೀಸರು ಈ ಪ್ರಕರಣವನ್ನೇನು ಮಟ್ಕಾ, ಇಸ್ಪೀಟ್ ಕೇಸ್ ಅಂತ ತಿಳಿದಿರಬೇಕು. ಎಂಬುದು ಹನುಮಂತಿ ಕುಟುಬಂದವರ ಅಳಲು.) ಅಯ್ಯೋ.. ಪೊಲೀಸ್ರೇ, ಅವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿಕೊಂಡಿದ್ದಾನೆಂದು ಚಾಜರ್್ಶೀಟ್ನಲ್ಲಿ ಹಾಕಿ ಅವನನ್ನು ಕೊಟರ್ಿಗೆ ಕಳುಹಿಸಿದಾಗ ಆತನು ಅಲ್ಲಿ ಜಡ್ಜ್ ಸಾಹೇಬರೇ, ಪೊಲೀಸರು ನನಗೆ ದಿನನಿತ್ಯ ಹೊಡೆಯುತ್ತಿದ್ದರೂ ಅದಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಹೇಳಿದರೆ ನೀವೇನು ಮಾಡುತ್ತೀರಿ. ಜಡ್ಜ್ ಎಲ್ಲಿದೆ ಪೊಲೀಸಪ್ಪ ಹನುಮಂತ ಕೊಲೆ ಮಾಡಿದ ಆ ಮಹಿಳೆಯ ಮೃತದೇಹ ಅಥವಾ ಪೋಸ್ಟ್ಮಾಟಂ ರಿಪೋಟರ್್ ಎಂದು ಕೇಳಿದರೆ, ನೀವೇನು ಉತ್ತರಿಸುತ್ತೀರಿ. ನಿಮ್ಮಿಂದ ಮೃತದೇಹವನ್ನು ಪತ್ತೆಹಚ್ಚಲು ಆಗಿಲ್ಲವೆಂದರೆ, ನ್ಯಾಯಾಲಯಕ್ಕೆ ಬಲವಾದ ಸಾಕ್ಷಿಯೊಂದನ್ನು ಎಲ್ಲಿಂದ ತರುತ್ತೀರಿ? ಎಂಬುದು ಕುಟುಂಬದವರ ಪ್ರಶ್ನೆ. ಕೊನೆಗೆ ನ್ಯಾಯಾಲಯ ಕೊಲೆಗೆ ಸರಿಯಾದ ಸಾಕ್ಷಿ ಇಲ್ಲದ ಕಾರಣ ಹನುಮಂತ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದರೂ ಅದಕ್ಕೆ ಸರಿಯಾದ ಸಾಕ್ಷಿ ಆಧಾರದ ಕೊರತೆಯಿಂದ ಹನುಮಂತನನ್ನು ಈ ಪ್ರಕರಣದಿಂದ ಮುಕ್ತ ಮಾಡಲಾಗಿದೆ ಎಂದು ತೀರ್ಪನ್ನು ನೀಡಿದರೆ, ಹನುಮಂತಿಯನ್ನು ಕಳೆದುಕೊಂಡ ಕುಟುಂಬಕ್ಕೆ ಮರಳಿ ಹನುಮಂತಿ ಸಿಗುತ್ತಾಳೆಯೇ? ಇಲ್ಲವಾದರೆ, ಆಧುನಿಕ ಸಮಾಜದಲ್ಲಿ ಎಲ್ಲವನ್ನು ಕೃತಕ ಮಾಡಿದಂತೆ ಹನುಮಂತಿಯನ್ನೇನಾದರೂ ಕೃತಕವಾಗಿ ತಯಾರಿಸಲು ಆಗುತ್ತದೆಯೇ? ಇದರಿಂದ ಆರೋಪಿಗೆ ನಿಜವಾಗಿ ಶಿಕ್ಷೆಯಾದಂತಾಗುತ್ತದೆಯೇ? ಬಡವರಿಗೆ ಪೊಲೀಸರು ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆಯೇ? ಇಂತಹ ಇನ್ನು ಅನೇಕ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯೇ ನೇರ ಉತ್ತರ ನೀಡಬೇಕಾಗುತ್ತದೆ. ಆದ್ದರಿಂದ ಆರೋಪಿಗಳನ್ನು ಮತ್ತೇ ಅರೆಸ್ಟ್ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕೊಲೆ ಮಾಡಿ ಹೂತಿಡಲಾಗಿರುವ ಹನುಮಂತಿಯ ಹೆಣವನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕಾಗಿದೆ. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ನಮ್ಮಲ್ಲಿ ಇದ್ದರೂ ಇಲ್ಲದಂತಾಗುತ್ತದೆ.ಒಟ್ಟಾರೆ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯೂ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತದೆ.





  • ಶಿವನಗೌಡನ ಅಂತ್ಯ ಆರಂಭ..


  • ಹೊತ್ತಿ ಉರಿದ ದೀಪ ಆರಿತು..

ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಮಾಧ್ಯಮದವರ ಜೊತೆ ನಾಲ್ಕು ಮಾತನಾಡುವ ನೈತಿಕತೆ ಇಲ್ಲದ ಶಿವನಗೌಡನನ್ನು ಇಲ್ಲಿಯವರೆಗೆ ಸಂಪುಟದಲ್ಲಿ ಮಂತ್ರಿಯಾಗಿ ಇಟ್ಟುಕೊಂಡದ್ದೇ ದೊಡ್ಡ ಮಾತು. ಈ ಕುರಿತು ಸಾಮಾನ್ಯರ ಜನತೆಯ ಪರವಾಗಿ ಒಂದು ವಿಶ್ಲೇಷಣಿ.
ಕನರ್ಾಟಕದ ಅನ್ಷರಸ್ಥ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವದುರ್ಗ ಲಾಟರಿ ಮಂತ್ರಿ ಶಿವನಗೌಡನ ತವರು ಮನೆ.ಯಾಕಪ್ಪ ಂಅ, ಏನೋ. ಂಇಇ, ಲೇ ಎಇ, ಓಡಲೇ ಅಕ, ಇನ್ನು ಇವರೆಲ್ಲರಿಗಿಂತ ಕೆಳಗಿನ ದಜರ್ೆಯ ಅಧಿಕಾರಿಗಳಂತು ಕೂಡೆಂದರೆ, ಕೂಡಬೇಕು. ನಿಲ್ಲೆಂದರೆ ನಿಲ್ಲಬೇಕು. ಇದು ಲಾಟರಿ ಶಿವನಗೌಡನ ಪೊಲಿಟಿಕಲ್ ಖದರ್! ಇದರಿಂದ ದೇವದುರ್ಗದಲ್ಲಿ ಪತ್ರಕರ್ತರು ಹೊರತಾಗಿಲ್ಲ. ಯಾರಾದರೂ ಪತ್ರಿಕೆಯವರು ವಿರುದ್ಧ ಸುದ್ದಿಯನ್ನು ಬರೆದರೆ, ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆಯನ್ನು ಕೇಳಿದರೆ, ನಾನು ಏನನ್ನು ಹೇಳುತ್ತೇನೆ. ಅದನ್ನು ಮಾತ್ರ ಬರೆದುಕೊಳ್ಳಿ. ಜಾಸ್ತಿ ವಾದ-ವಿವಾದ ಮಾಡಬೇಡಿ ಎಂದು ಗರಂ ಆಗಿಯೇ ಕಟ್ಟಪ್ಪಣೆ ನೀಡುತ್ತಾನೆ.ಪತ್ರಿಕೆಯವರನ್ನು ಎದುರುಹಾಕಿಕೊಂಡರೆ, ಏನೆಲ್ಲ ನಡೆಯಬಹುದು ಎಂಬುದಕ್ಕೆ ತನ್ನ ಇತ್ತೀಚಿನ ಲೆಟೆಸ್ಟ್ ಗ್ರಂಥಾಲಯ ಹಗರಣವೇ ಮೂಕಸಾಕ್ಷಿ.ಚುನಾವಣೆಗಿಂತ ಮುಂಚೆ ಶಿವನಗೌಡ ವೆಂಕಟೇಶ ನಾಯಕನ ರಾಜಕೀಯದಿಂದ ತಿರುಗುವ ಒಂದು ನಿಯತ್ತಿನ ಪ್ರಾಣಿ. ಅದಕ್ಕಾಗಿ ವೆಂಕಟೇಶ ನಾಯಕ ನಿಯತ್ತಿನ ಪ್ರಾಣಿಗೆ ಗೌರವ ನೀಡಬೇಕೆಂದು ಶಿವನಗೌಡನನ್ನು ತಾ.ಪಂಗೆ ಅಧ್ಯಕ್ಷ.ನನ್ನಾಗಿ ಮಾಡಿದನು. ಆ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಅನುದಾನಗಳನ್ನು ತಾಲೂಕಿನಾಧ್ಯಂತ ಈ ಮಹಾಭೂಪ ನುಂಗಿ ಹಾಕಿದ. ಇದಕ್ಕೆಲ್ಲ ಸಹಕಾರ ಬೆಂಬಲವೇ ಅವರ ತಾತ. ಆತನು ಆಗ ರಾಯಚೂರು ಎಂ.ಪಿ.ಒಟ್ಟಾರೆ ಎಲ್ಲ ಕುತಂತ್ರಗಳಿಂದ ಸಾಕಷ್ಟು ಹಣ ಮಾಡಿದ ಶಿವನಗೌಡ ತಾನು ಮುಂದೊಂದು ದಿನ ಮಂತ್ರಿಯಾಗುತ್ತೀನೆಂದು ಕನಸನ್ನುಕಂಡಿದ್ದಿಲ್ಲ. ದುರಾದೃಷ್ಟಕ್ಕೆ ರಾಜಕೀಯದ ಏರುಪೇರಿನಲ್ಲಿ ಶಾಸಕನಾಗಿ ನಂತರ ಆಪರೇಷನ್ ಕಮಲಕ್ಕೆ ಬಲಿಯಾಗಿ ಲಾಟರಿ ಮಂತ್ರಿಯು ಆದನು. ಒಮ್ಮಿಂದೊಮ್ಮೆಲೆ ಮಂತ್ರಿಯಾಗುತ್ತಿದ್ದಂತೆ ದಲಿತರು ಸಿಟ್ಟು ರಟ್ಟೆಗೆ ಬಂದರೆ, ಸೂಳೆಮಕ್ಕಳು ಚೂರು ಚೂರು ಎಂಬ ಘೋಷಣೆಯನ್ನು ಉಲ್ಟಾ ಮಾಡಿಕೊಂಡು ಶಿವನಗೌಡನ ಸಿಟ್ಟು ರಟ್ಟೆಗೆ ಬಂದರೆ ಅಧಿಕಾರಿಗಳೆಲ್ಲ ಚೂರು ಚೂರು ಎಂದು ಆಡಳಿತ ಮಾಡಲು ಶುರುಮಾಡಿದನು. ಇವನಿಗೆ ವಿರೋಧವಾಗಿ ತಾಲೂಕಿನಲ್ಲಿ ಯಾವೊಂದು ಕಾಂಗ್ರೇಸ್ ಜೆ.ಡಿ.ಎಸ್ಗಳು ಹೇಳಿಕೆಗಳನ್ನು ಸಹ ನೀಡಲಿಲ್ಲ. ದೇವದುರ್ಗದಲ್ಲಿ ಮುಖಂಡರೆನಿಸಿಕೊಂಡ ಅರ್ಧಜನ ಈಗಾಗಲೇ ಶಿವನಗೌಡನಿಗೆ ಶರಣಾಗತಿ ಹೊಂದಿದ್ದಾರೆ. ಇನ್ನುಳಿದವರು ತೆರೆಮರೆಯಲ್ಲಿಯೇ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗತೊಡಗಿದ್ದಾರೆ.ಆದರೆ, ಶಿವನಗೌಡನನ್ನು ಆಯ್ಕೆ ಮಾಡಿದ್ದು ತಾಲೂಕಿನ ಸಾಮಾನ್ಯ ಜನತೆ. ಅವರು ಹಾಕಿದ ಮತದಿಂದ 2ಬಾರಿ ಗೆದ್ದಿರುವುದು. ಅದನ್ನು ಮರೆಯಬಾರದು. ಇದೆಲ್ಲವನ್ನು ಬಿಟ್ಟು, ನಾನು ಮಂತ್ರಿ ಐದೀನಿ, ಊರ ತುಂಬಾ ಬ್ರಾಂಡಿ ಅಂಗಡಿಗಳನ್ನು ತೆಗೆದು ಬಡವರ ರಕ್ತ ಹೀರುತ್ತೀನಿ. ತಾಲೂಕಿನ ತುಂಬಾ ನಾನು ಏನನ್ನಾದರೂ ಮಾಡ್ತೀನಿ ಎಂದರೆ, ಅಂಬೇಡ್ಕರ್ ಸಾಹೇಬರು ಸಂವಿಧಾನವನ್ನೇನು ನಿಮ್ಮ ಮನೆಯಲ್ಲಿ ಬರೆದಿಲ್ಲ. ನಿನಗಾಗಿ ವಿಶೇಷ ಕಾನೂಗಳನ್ನೇನು ಮಾಡಿಲ್ಲ. ಇಲ್ಲಿ ನಿನಗೂ ಒಂದೇ ಕಾನೂನು, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು. ಅದನ್ನು ಮೊದಲು ತಿಳಿಯಬೇಕಾಗಿದೆ.ಇಲ್ಲವಾದಲ್ಲಿ ಮುಂದಿನ ದಿನ ಶಿವನಗೌಡ ಎಂಬ ಹೆಸರು ತಾಲೂಕಿನಲ್ಲಿ ಹೇಳಹೆಸರಿಲ್ಲದಂತೆ ಹೋಗುವದರಲ್ಲಿ ಅನುಮಾನವಿಲ್ಲ. (ಹೆಚ್ಚಾದದ್ದು ನುಚ್ಚು ಆಗಲೇಬೇಕು)ಇನ್ನು ದೇವದುರ್ಗ ತಾಲೂಕಿನ ಎಲ್ಲಾ ಅಧಿಕಾರಿಗಳೇ ನಿಮ್ಮ ಆತ್ಮಸಾಕ್ಷಿಗಾಗಿ ಪ್ರಾಮಾಣಿಕ ಕೆಲಸವನ್ನು ಮಾಡಿ, ಬಡಬಗ್ಗರ ಸಮಸ್ಯೆಗಳನ್ನು ಈಡೇರಿಸಿ, ಅದುಬಿಟ್ಟು ಶಿವನಗೌಡ ದಬ್ಬಾಳಿಕೆಗೆ ಹೆದರಿ, ಇಲ್ಲವೇ ಅವನು ಹಾಕುವ ಎಂಜಲಿನಿಂದ ಹೋದರೆ, ನೀವುಗಳು ಕೂಡ ಸಾಮಾನ್ಯ ಜನತೆಗೆ ದ್ರೋಹ ಬಗೆದಂತಾಗುತ್ತದೆ.ಇಂದು ರಾಜ್ಸಸಕರ್ಾರದ ಒಬ್ಬ ಮಂತ್ರಿಯೆಂದೆನಿಸಿಕೊಂಡಿರುವ ಶಿವನಗೌಡನ ಕುರಿತು ಈಗಾಗಲೇ ಹತ್ತು ಹಲವು ಪತ್ರಿಕೆಗಳು ಸುಮಾರು ಬಾರಿ ವರದಿಯನ್ನು ಮಾಡಿವೆ. ಪತ್ರಿಕೆಯ ಸುದ್ದಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸುಧಾರಣೆಯಾಗುವದಕ್ಕೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಪತ್ರಿಕೆಗಳ ಮೇಲೆ ಗೂಬೆ ಕೂರಿಸುವುದು. ನಾನು ಮಾಡುವುದೇ ಸರಿ, ಎಂದರೆ ಅದು ಮೂರ್ಖತನವಾಗುತ್ತದೆ.



ಮಾನ್ಯ ಶಿವನಗೌಡರು ಅಧಿಕಾರಕ್ಕೆ ಬಂದಾಗಿನಿಂದ ತಾಲೂಕಿನ 28ಪಂಚಾಯಿತಿಗಳ ಆಡಳಿತವನ್ನು ತಮ್ಮ ಹಿಂಬಾಲಕರ ಹಿಡಿತಕ್ಕೆ ನೀಡಿದ್ದಾರೆ! ಅದರಂತೆ ಸಚಿವರ ಕೃಪಕಟಾಕ್ಷದಿಂದ ಹಿಂಬಾಲಕರೆಲ್ಲರೂ ಪಂಚಾಯತಿಯ ಅಧಿಕಾರಿಗಳನ್ನು ಹೆದರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ಲ್ನ್ನು ಎತ್ತುತ್ತಿದ್ದಾರೆ.ಅದಕ್ಕೊಂದು ನಿದರ್ಶನವಾಗಿ, ಈ ಬಾರಿ ನಾವುಗಳು ಫಲಕನರಮರಡಿ ಗ್ರಾಮಪಂಚಾಯತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.ಫಲಕನಮರಡಿ ಎಂದರೆ, ಹೆಚ್ಚು ಕಡಿಮೆ ಎಲ್ಲರಿಗೆ ನೆನಪಿಗೆ ಬರುವುದು ಮೂಡಲಗುಂಡ ಸಿದ್ದನಗೌಡನ ಹೆಸರು. ಯಾಕೆಂದರೆ, ಈತನು 2ದಶಕಗಳ ಕಾಲ ಪಂಚಾಯತಿಯೊಂದನ್ನು ತನ್ನಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಿದಾತ. ಯಾರಾದರೂ ಅಧಿಕಾರಿಗಳು, ಸಣ್ಣಪುಟ್ಟ ರಾಜಕಾರಣಿಗಳು ಫಲಕನಮರಡಿಯ ಗಡಿಯೊಳಗೆ ನುಸುಳಬೇಕಾದರೆ, ಮೊದಲಿಗೆ ಸಿದ್ದನಗೌಡನ ಅಪ್ಪಣೆ ಪಡೆದು ಬರಬೇಕಿತ್ತು. ಇಲ್ಲವಾದರೆ, ಅನಾಹುತ ಕಟ್ಟಿಟ್ಟ ಬುತ್ತಿ. ಅಂತಹದ್ದೊಂದು ಸವರ್ಾಧಿಕಾರತ್ವ ಈ ಫಲಕನಮರಡಿಯಲ್ಲಿತ್ತು. (ಇಲ್ಲಿನ ಜನರೇನು ಅಂದು-ಇಂದು ನಿಟ್ಟುಸಿರಿನಿಂದ ಯಾರೊಬ್ಬರು ಜೀವನ ಸಾಗಿಸುತ್ತಿಲ್ಲ).ಆದರೆ,ಇಂತಹ ಪಲಕನಮರಡಿ ಗ್ರಾಮಪಂಚಾಯತಿಯೂ ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದನಗೌಡನ ಕಪಿಮುಷ್ಠಿಯಿಂದ ಜಾರಿಹೋಯಿತು. ಸಿದ್ದನಗೌಡನನ್ನು ಪಂಚಾಯತಿಯಿಂದ ದೂರವಿಡಲು ಶಿವನಗೌಡನು ಮಾಡಿದ ಎಲ್ಲ ತಂತ್ರಗಳು ಸಫಲವಾದವು. ಕೊನೆಗೆ ಶಿವನಗೌಡ ಆ ಪಂಚಾಯತಿಯಲ್ಲಿ ಬಿಜೆಪಿಯ ಝಂಡವನ್ನು ಕಟ್ಟಿ ತನ್ನ ಹಿಂಬಾಲಕನೊಬ್ಬನಿಗೆ ಆ ಪಂಚಾಯತಿಯ ಉಸ್ತುವಾರಿಯನ್ನು ನೀಡಿದ.ಈಗ ದುರಂತಕ್ಕೆ 6ತಿಂಗಳಲ್ಲಿ ಅಲ್ಲಿನ ಜನರಿಗೆ ಸಿದ್ದನಗೌಡ ಬೇಕು. ಶಿವನಗೌಡನ ಕ್ಯಾಂಡಿಡೇಟ್ಗಳು ಬೇಡ ಎನ್ನುವ ಪರಿಸ್ಥಿತಿ ಎದುರಾಗಿದೆ.ಫಲಕನಮರಡಿ ಪಂಚಾಯಿತಿಯ ಓರ್ವ ಮಹಿಳಾ ಸದಸ್ಯೆಯ ಯಜಮಾನನಾದ ವೆಂಕಟರಾಯಗೌಡ ಎಂಬಾತ ಶಿವನಗೌಡನ ಚೇಲಾ. ಈತನು ಕಳೆದ ಎಂ.ಎಲ್.ಎ ಚುನಾವಣಿಯಲ್ಲಿ ಶಿವನಗೌಡನಿಗೆ ಹಿಂದೆ ತಿರುಗಾಡಿದಾತ. ಅಂದಮಾತ್ರಕ್ಕೆ ಶಿವನಗೌಡ ಎಲ್ಲ ಅಧಿಕಾರವನ್ನು ನನಗೆ ಕೊಟ್ಟಿದ್ದಾನೆ, ನಾನೇ ಶಿವನಗೌಡನಿಗೆ ಅತಿಹೆಚ್ಚು ಮತಗಳನ್ನು ಕೊಟ್ಟದ್ದು ಹಾಗಾಗಿ ಪಂಚಾಯತಿಯಲ್ಲಿ ಏನು ನಡೆದರೂ ನನ್ನನ್ನು ಕೇಳಿ ಮಾಡಬೇಕು, ಇಲ್ಲಿ ನಾನೇ ಅಧ್ಯಕ್ಷ ಎಂದು ಆಗಾಗ ಬೊಗಳೇ ಬಿಡುತ್ತಾನೆ.ಮೂಲತಃ ವೆಂಕಟರಾಯ ಗೌಡ ಫಲಕನಮರಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಮನುಷ್ಯನಲ್ಲ. ಈತನು ಜಾಡಲದಿನ್ನಿ ಗ್ರಾಮದಿಂದ ಹೆಂಡತಿಯ ಊರಾದ ವಂದಲಿಗೆ ವಲಸೆ ಬಂದಾತ. (ಜೊತೆಯಲ್ಲಿ ಬೇರೆ ಪಕ್ಷದಿಂದ ಬಿಜೆಪಿಗೆ ಜಂಪ್ ಮಾಡಿದಾತ)ಫಲಕನಮರಡಿಯಲ್ಲಿ ಎಲ್ಲ ಬುದ್ದಿವಂತರಿಗಿಂತ ಅತಿಬುದ್ದಿವಂತಿಕೆಯನ್ನು ಪ್ರದಶರ್ಿಸುವುದು ಇವನ ಚಾಳಿ.ಕಳೆದ ಅಕ್ಟೋಬರ್ನಲ್ಲಾದ ನೆರೆಹಾವಳಿಯಲ್ಲಿ ಈತನು ಪಂಚಾಯತಿಗೆ ಬಂದಂಥಹ ಶೇ.50ರಷ್ಟು ಹಣವನ್ನು ಗುಳುಂ ಮಾಡಿದ್ದಾನೆ! ಸಂಪೂರ್ಣ ಮನೆಬಿದ್ದವರಿಗೆ ಪೂರ್ಣ ಪರಿಹಾರ ಕೊಡಿಸುವುದಾಗಿ ಅವರಿಂದ ಹಣವನ್ನು ಲಪಟಾಯಿಸಿದ್ದಾನೆ.ಹೇಳಿಕೇಳಿ ದೇವದುರ್ಗ ತಾಲೂಕು ಮೊದಲಿಗೆ ಹೇಳಿದಂಥೆ ಅನಕ್ಷರಸ್ಥ ತಾಲೂಕು. ಇಲ್ಲಿ ಕಾನೂನು ಬಲ್ಲವರಿಗಿಂತ ನಕಲಿ ಸಂಘಟನೆಗಳ ಮುಖಂಡರಿಗೆ ಹೆಚ್ಚು ಮಹತ್ವ. ಇಂತಹದರಲ್ಲಿ ಹುಚ್ಚನ ಮದುಮೆಯಲ್ಲಿ ಉಂಡವನೇ ಜಾಣ ಎಂಬಂತೆ ವೆಂಕಟರಾಯ ಗೌಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಹಗಲು ಲೂಟಿಗೆ ನಿಂತಿದ್ದಾನೆ.ಈಗಾಗಲೇ ಪಲಕನಮರಡಿ ಪಂಚಾಯತಿಯಲ್ಲಿ ಮೋಟಾರ್ ದುರಸ್ಥಿಯ ನೆಪದಲ್ಲಿ 1ಲಕ್ಷ 50ಸಾವಿರ ರೂಗಳನ್ನು ಗುಳುಂ ಮಾಡಿದ್ದಾನೆ! ಒಂದೇ ಮೋಟಾರ್ ಪಂಫ್ಗೆ ಜಿ.ಪಂನಿಂದ ಹಾಗೂ ಪಂಚಾಯತಿಯಿಂದ 2ಬಾರಿ ಬಿಲ್ಲ್ನ್ನು ಎತ್ತಿದ್ದಾನೆ. ಇನ್ನು ಮನೆಗಳ ವಿಷಯದಲ್ಲಿ ಪರಿಶಿಷ್ಟಜಾತಿಗೆ ಸೇರಿದ ರಂಗಮ್ಮ ಗಂಡ ಹಂಪಣ್ಣ, ಮಾಳಮ್ಮ ಗಂಡ ಹನುಮಂತ, ಮರಿಯಮ್ಮ ಗಂಡ ಬಾಳಪ್ಪ ಮತ್ತು ಬಿ.ಸಿ.ಎಂನ ದೇವಮ್ಮ ಗಂಡ ಹನುಮಂತ ಎಂಬುವವರ ಹೆಸರಿನ ಮನೆಗಳನ್ನು ಅದಲು ಬದಲು ಮಾಡಿ ಐದೈದು ಸಾವಿರ ದುಡ್ಡನ್ನು ಯಾರು ಮೊದಲಿಗೆ ಕೊಡುತ್ತಾರೆ ಅಂತವರಿಗೆ ಮನೆಗಳ ರೆಜಿಸ್ಟ್ರೇಷನ್ ಮಾಡಿಕೊಡಲು ಓಡಾಡುತ್ತಿದ್ದಾನೆ!ಯಾರಾದರೂ ಈತನು ಮಾಡುವ ಹಲಕಟ್ ದಂಧೆಯನ್ನು ಪ್ರಶ್ನಿಸಲು ಹೋದರೆ ಲಾಟರಿ ಮಂತ್ರಿಯ ಹೆಸರನ್ನು ಹೇಳುತ್ತಾನೆ. (ಲಾಟರಿ ಮಂತ್ರಿಗೂ ಸಹಿತ ವೆಂಕಟರಾಯಗೌಡ ಹಲಕಾ-ಸಲಕಾ ಮಾತನಾಡಿದ್ದಾನೆ. ಇದು ನಮ್ಮ ಪತ್ರಿಕೆಯ ವರದಿಗಾರರ ಕೈಗೆ ಸಿಕಿದೆ!)ಶಿವನಗೌಡನು ಸಹ ಇವನ ಕೆಲಸವನ್ನು ಯಾರಾದರೂ ಅಧಿಕಾರಿಗಳು ಮಾಡಿಕೊಟ್ಟಿಲ್ಲವೆಂದರೆ, ಅವರನ್ನು ದಬಾಯಿಸುತ್ತಾನೆ ಎಂಬ ಗುಮಾನಿ!ಇಂತಹ ವೆಂಕಟರಾಯಗೌಡನಂತವರು ಊರಿಗೆ ಒಬ್ಬರು ಇದ್ದರೆ, ಊರೇ ಉದ್ದಾರ.ಇನ್ನು ಮುಂದಿನ ದಿನಗಳಲ್ಲಿ ಹಿಂದೆ ವೆಂಕಟರಾಯ ಎತ್ತಿದ ನಕಲಿ ಬಿಲ್ಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆತನ ಅವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಈ ಎಲ್ಲಾ ಜವಾಬ್ದಾರಿ ಮಂತ್ರಿ ಶಿವನಗೌಡ, ತಾಲೂಕಿನ ಅಧಿಕಾರಿ ಮತ್ತು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ಹೆಗಲ ಮೇಲಿದೆ. ಇಲ್ಲವಾದರೆ, ಅವೆಲ್ಲವುಗಳಿಗೆ ತಾವುಗಳೇ ಕುಮ್ಮಕ್ಕು ನೀಡುತ್ತೀರೆಂಬ ಭಾವನೆ ಜನರಲ್ಲಿ ಮೂಡುತ್ತದೆ. ಇದು ಗ್ರಾಮಸ್ಥರ ಮೊದಲ ಎಚ್ಚರಿಕೆಯ ಘಂಟೆ.











ಮಹಿಮೆ ದೇವರದ್ದು.. ದುಡಿಮೆ ಜನರದ್ದು..!


ಆ ಯೇಸುವಿನ ಕೃಪೆಯಿಂದ ಹೀರೆನಗನೂರು ಗ್ರಾಮದಲ್ಲಿ ಧರ್ಮಗುರು ಪೌಲರಾಜ್ರು ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯೊಂದನ್ನು ರೂಪಿಸಿ ಸುತ್ತ-ಮುತ್ತಲಿನ ಹಳ್ಳಿಗಳ ಜನರಿಂದ ಅಪಾರ ಮನ್ನಣೆ ಗಳಿಸಿದ್ದಾರೆ.. ಪೌಲರಾಜ್ರವರು ಮಾಡಿದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಮಾದರಿಯನ್ನು ಸಕರ್ಾರಗಳು ಮಾಡಿದರೆ, ಇಡೀ ರಾಜ್ಯದಲ್ಲಿ ನೀರಿನ ಬವಣೆ ಇರಲಾರದಂತೆ ಮಾಡಬಹುದು. ಬೇಕಿದ್ದರೆ, ನೀವೆ ಒಂದು ಸಾರಿ ಆ ಗ್ರಾಮಕ್ಕೆ ಹೋಗಿ ನೋಡಿ.
ಸಕರ್ಾರ ಮಾಡಬೇಕಾದ ಕುಡಿಯುವ ನೀರಿನ ಯೋಜನೆಯೊಂದನ್ನು ಹಿರೇನಗನೂರಿನ ಜನತೆ ಧರ್ಮಗುರುಗಳ ಮಾರ್ಗದರ್ಶನದಂತೆ ಹಗಲಿರುಳು ದುಡಿದು ಮಾಡಿಕೊಂಡಿದ್ದಾರೆ. ಜನರ ದುಡಿಮೆಯಿಂದ ನಿಮರ್ಿತವಾದ ಈ ಯೋಜನೆ ಸಕರ್ಾರವನ್ನು ನಾಚಿಸುವಂತಿದೆ ಎಂದರೆ ತಪ್ಪಾಗಲಾರದು.ಗ್ರಾಮಸ್ಥರು ವರ್ಷದ ಎಲ್ಲ ದಿನಗಳಲ್ಲಿ ನೀರನ್ನು ಬಳಕೆ ಮಾಡುವಂತಾಗಿದೆ. ಜೊತೆಯಲ್ಲಿ ಸುತ್ತಲಿನ 2ಹಳ್ಳಿಗಳು ಇವರ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿವೆ.ಶ್ರಮಜೀವಿಗಳೇ ಇಗೋ ನಿಮಗೊಂದು ವಂದನೆ
ರಾಷ್ಟ್ರಮಟ್ಟದಲ್ಲಿಯೇ ಪ್ರಥಮವಾಗಿ ಧಾಮರ್ಿಕ ಸಂಸ್ಥೆಯಿಂದ ಒಂದು ಸಕರ್ಾರದ ಸಮಸ್ಯೆಯನ್ನು ಬಗೆಹರಿಸಿಕೊಂಡ ಹಳ್ಳಿಯೆಂದರೆ, ರಾಯಚೂರು ಜಿಲ್ಲೆಯ ಹಿರೇನಗನೂರು ಗ್ರಾಮ.ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಂಡದ್ದು ಆಧುನಿಕ ಅದ್ಬುತ ಕಾರ್ಯವೇ ಸರಿ.ಸುಳ್ಳುಪವಾಡಗಳ ಬೆನ್ನಟ್ಟಿದ ನಿದರ್ಶನಗಳಿಗೆ ಈ ಒಂದು ವಿಷಯ ಸವಾಲಾಗಿ ಪರಿಣಮಿಸಿದೆ.ಹೀರೆನಗನೂರು ಗ್ರಾಮವು ಎತ್ತರಪ್ರದೇಶದಲ್ಲಿದ್ದು ಹಳ್ಳವಿಲ್ಲದೇ, ಸಿಹಿ ನೀರು ಇಲ್ಲದೇ, ಸುಮಾರು 100ವರ್ಷಗಳ ಹಿಂದೆ ಯುರೋಪಿನ ಕೈಸ್ತ ಗುರುಗಳು ಈ ಊರಿಗೆ ಬಂದು ಸುತ್ತಲಿನ ಹಳ್ಳಿಗಳಿಗೆ ತೋಟದ ಬಾವಿಯನ್ನು ಮತ್ತು ಊರಿನಲ್ಲಿ ಕುಡಿಯುವ ನೀರಿನ ಬಾವಿಗಳನ್ನು ತೊಡಿ, ಭದ್ರವಾದ ಕಟ್ಟಡವನ್ನು ಕಟ್ಟಿಸಿದ್ದಾರೆ ಅದೊಂದು ಈಗ ಇತಿಹಾಸ.ಅದೇ ಇತಿಹಾಸ ಇಂದು ಪುನರಾವರ್ತನೆಯಾಗಿದೆ ಎಂದರೆ ತಪ್ಪಗಲಾರದು. ಈ ನೂತನ ಶೈಲಿಯ ನೀರಿನ ಯೋಜನೆಯನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದರು. ಹಲವು ರಾಜಕೀಯ ಗಣ್ಯರು ನಾಚಿಕೆಪಟ್ಟುಕೊಂಡಿದ್ದಾರೆ. ಇನ್ನೂ ಸಕರ್ಾರಿ ಅಧಿಕಾರಿಗಳಂತು ಧನ್ಯತಾ ಭಾವದೊಂದಿಗೆ ಸಕರ್ಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆಲ್ಲ ಕಾರಣಿಭೂತರಾದ ಪೌಲರಾಜ್ ಧರ್ಮಗುರುಗಳನ್ನು ಮಾತ್ರ ನೆನಪು ಮಾಡಿಕೊಳ್ಳದೇ ಇರುವವರಿಲ್ಲ.ಚಚರ್ಿನಲ್ಲಿ ಪ್ರಾರ್ಥನೆ ಮುಗಿದ ನಂತರ ಗುರುಗಳು ಹಲವು ಸಮಸ್ಯೆಗಳು ಮತ್ತು ಕರ್ತವ್ಯಗಳ ಬಗ್ಗೆ ಚಚರ್ೆ ಮಾಡಿದ ನಂತರ ಮುಂದಿನ ಕೆಲಸ ಆರಂಭ. 80ವರ್ಷ ಆದ ಹಿರಿಯರನ್ನು ಪಕ್ಕಕ್ಕೆ ಕೂರಿಸಿಕೊಂಡು ಅವರ ಅಪ್ಪಣೆಯಂತೆ ಎಂದಿನ ಕೆಲಸ ಅಂದೇ ಶುರುವಾಗುತ್ತಿತ್ತು. ಅವಿದ್ಯಾವಂತ ಯಜಮಾನರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಇವರುಗಳ ಅನುಭವ ಪಾಂಡಿತ್ಯವನ್ನು ಮೆಚ್ಚಿಕೊಳ್ಳುತ್ತಿದ್ದರು. ಚಿನ್ನಪ್ಪ ಯರಗುಂಟಿ, ರಾಯಪ್ಪ ಸೋಮನಮರಡಿ, ಪ್ರಕಾಶಪ್ಪ ಕಂದಳ್ಳಿ ಇವರ ಮುಂದಾಳತ್ವವು ಇಡೀ ಸಮೂಹವನ್ನು ಉರಿದುಂಬಿಸುತ್ತಿತ್ತು. ಅಬ್ರಾಹಂ ಸಲಬೂರ, ಮರಿಯಪ್ಪ ಸೋಮನಮರಡಿ, ಚಿನ್ನಪ್ಪ ಕಂದಳ್ಳಿ, ಬಾಲಪ್ರಕಾಶ, ಜೋಸೆಫ್ ಚುಕ್ಕನಟ್ಟಿ, ಆರೋಗ್ಯಪ್ಪ ಹೂವಿನಬಾವಿ ಜೊತೆಯಲ್ಲಿ ಸಮೂಹದವರು ಹಗಲಿರುಳು ಶ್ರಮಿಸಿದರು.ಟ್ಯಾಂಕ್ ನಿಮರ್ಿಸಲು ಸಲಹೆಗಳುನೆಲದ ಕೆಳಗೆ ಟ್ಯಾಂಕ್ನ್ನು ಹೇಗೆ ನಿಮರ್ಿಸುವುದು, ಅದಕ್ಕೆ ಸ್ಥಳವನ್ನು ತಯಾರು ಮಾಡುವುದು, ಬಾವಿಯನ್ನು ತೋಡಲು ಯಾವ ಜಾಗವನ್ನು ಕೊಳ್ಳುವುದು ಎಂಬ ಪ್ರಶ್ನೆಗಳು ಎದುರುದಾಗ ಊರ ಮುಂದಿನ ಜನತಾ ಪ್ಲಾಟ್ಗಳನ್ನು ಕೇಳಿ ಪಡೆದು ಅವರಿಗೆ ಸಾಧ್ಯವಾದಷ್ಟು ಹಣಕಾಸಿನ ನೆರವನ್ನು ನೀಡಿ ನಿಮರ್ಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಗುರುಗಳ ಗಮನಕ್ಕೆ ತಂದು ಈ ಟ್ಯಾಂಕ್ಗೆ ನೀರನ್ನು ಪೈಪಲೈನ್ ಮುಖಾಂತರ ತರಲು ಇಲ್ಲಿಂದ 3ಕಿಮೀ ದೂರವಿರುವ ಕಾಳೇಶ್ವರ ಕೆರೆಯ ಹತ್ತಿರ ಶರಣಪ್ಪಗೌಡ ಎಂಬುವವರ 1ಎಕರೆ ಜಮೀನನ್ನು ಖರೀದಿ ಮಾಡಿ, ಅಲ್ಲಿ ಬಾವಿಯನ್ನು ನಿಮರ್ಿಸಲು ಪ್ರಥಮ ಹಂತದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.ಟ್ಯಾಂಕ್ ನಿಮರ್ಿಸಲು ಯುವಕರ ಪಡೆಯ ಸಾಹಸ ಕೆಲಸ30ಕ್ಕೂ ಹೆಚ್ಚು ಯುವಕರು ಸಂದರ್ಭಕ್ಕೆ ತಕ್ಕಂತೆ ತಮ್ಮನ್ನು ತಾವೇ ತೊಡಗಿಸಿಕೊಂಡು ಯಾರೇ ಎಷ್ಟು ಮಾಡಿದರೂ ಹಗಲು-ರಾತ್ರಿಯೆನ್ನದೆ, ಶ್ರಮಿಸಿ ಗುರುಗಳ ಮಾತನ್ನು ಪಾಲಿಸುತ್ತಿದ್ದರು. ಒಂದು ಹೆಜ್ಜೆ ಮುಂದೆ ನಿಂತು ಕಷ್ಟಕರವಾಗಿ ಕೆಲಸ ಮಾಡಿದರು.ಪ್ರಾಣಪಾಯಗಳು, ಅನಾಹುತಗಳನ್ನು ಬದಿಗೊಟ್ಟಿ, ಬಾವಿಯನ್ನು ಹಿಟಾಚಿಯಿಂದ ಅಗೆಯುವಾಗ ನೀರನ್ನು ರಾತ್ರಿಯಿಡಿ ಮೇಲೆತ್ತುವುದು, ಎಂಜಿನ್ಗಳನ್ನು ಮೇಲಿನಿಂದ ಕೆಳಗಿಸುವುದು, ಯಂತ್ರವನ್ನು ರಿಪೇರಿಗೊಳಿಸುವುದು ಸೇರಿದಂತೆ ನಾನಾ ಕೆಲಸಕಾರ್ಯಗಳನ್ನು ಹಗಲಿರುಳು ಯುವಕರ ಪಡೆಗಳು ಮಾತು ಮೀರಿದಂತೆ ಮಾಡುತ್ತಿದ್ದವು. ಅದರ ಪ್ರತಿಫಲವಾಗಿ ಇಂದು ಟ್ಯಾಂಕ್ ಬೃಹದಕಾರವಾಗಿ ತಲೆ ಎತ್ತಿದೆ. ಒಂದು ಬಾರಿ ದೆಹಲಿಯಿಂದ ಐ.ಎ.ಎಸ್ ಅಧಿಕಾರಿಗಳ ಆಯೋಗವೊಂದು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಧರ್ಮಗುರುಗಳ ಮಾಡಿದ ಕೆಲಸವನ್ನು ಪ್ರಶಂಶಿಸಿ, ತಾವುಗಳು ಮಾಡಿದ ಕೆಲಸ ಶ್ಲಾಘನಾರ್ಹ ಎಂದು ಬಣ್ಣಿಸಿತು. ಇಂದು ಧರ್ಮಗುರುಗಳು ಮಾಡಿದ ಯೋಜನೆ ಎಲ್ಲರಿಗೆ ಮಾದರಿಯಾಗಿದೆ.ಇದೇ ಮಾದರಿಯನ್ನು ಪಕ್ಕದ ಹಳ್ಳಿಗಳು ಇಂದು ಅಳವಡಿಸಿಕೊಳ್ಳಲು ಹವಣಿಸುತ್ತಿವೆ. ಅದರಂತೆ ಸಕರ್ಾರಗಳು ಕೂಡ ನಮ್ಮ ಧರ್ಮಗುರುಗಳು ಮಾಡಿದ ಯೋಜನೆಯ ಮಾದರಿಗಳನ್ನು ಎಲ್ಲೆಡೆ ವಿಸ್ತಿರಿಸಿ ರಾಜ್ಯಕ್ಕಿರುವ ನೀರಿನ ಬವಣಿಯನ್ನು ತಪ್ಪಿಸಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.


PRAISE THE LORD
ಪ್ರಾರ್ಥನೆ & ಪರಿಶ್ರಮದ ಶಿಸ್ತಿನ ಗುರು ವಂ. ಪೌಲರಾಜ್ಶಿಸ್ತಿನ ಗುರು ವಂ, ಪೌಲರಾಜರು ಪ್ರಾರ್ಥನೆ ಮತ್ತು ಪರಿಶ್ರಮಕ್ಕೆ ಮೊದಲ ಆಧ್ಯತೆ ನೀಡುತ್ತಿದ್ದರು. 5ವರ್ಷ ಹಿರೇನಗನೂರಿಗೆ ವಿಚಾರಣಿ ಗುರುಗಳಾಗಿ ಬಂದು ಗ್ರಾಮದ ಎಲ್ಲ ಜಾತಿಯ ಮಕ್ಕಳನ್ನು ತಮ್ಮ ಖಚರ್ಿನಲ್ಲಿಯೇ ಶಾಲೆಯನ್ನು ಓದಿಸಿದ್ದಾರೆ. ಎಲ್ಲ ಸಂಘಸಂಸ್ಥೆಗಳಲ್ಲಿ, ಎಲ್ಲಾಧರ್ಮದ ಹಬ್ಬಗಳಲ್ಲಿ ಅತಿಥಿಗಳಾಗಿ ಭಾಗವಹಿಸಿ 'ದೇವರಲ್ಲಿ ವಿಶ್ವಾಸವಿರಿಸುವದಲ್ಲದೇ ಶ್ರಮಪಡುವುದು, ಹೋರಾಟ ಮಾಡುವುದು, ಸಮಾಜಸೇವೆಯಲ್ಲಿ ಜನರನ್ನು ಹೇಗೆ ಬಳಸಿಕೊಳ್ಳುವುದು, ಜೀವನದೇವರ ಚಿತ್ತ ಅದನ್ನು ಪಾಲಿಸುವುದು ನಡೆಸುವುದು ನಮ್ಮೆಲ್ಲರ ಕರ್ತವ್ಯ' ಎಂದು ಕಿರುಭಾಷಣ ಮಾಡುತ್ತಿದ್ದರು. ಸರ್ವಧರ್ಮಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾವೈಕ್ಯತೆಯೆ ಕುರಿತ ಸಂದೇಶಗಳನ್ನು ನೀಡುತ್ತಿದ್ದರು. ಇಂತಹ ವ್ಯಕ್ತಿತ್ವವನ್ನು ಹೊಂದಿದ್ದ ಧರ್ಮಗುರುಗಳು ಹಿರೇನಗನೂರಿನ ಜನರ ಪಾಲಿಗೆ ಕಣ್ಣಿಗೆ ಕಾಣುವ ದೇವರೇ ಸರಿ.ಇವರ ಸಾಧನೆಗಳು ತುಂಬಾ ಕಷ್ಟಕರವಾಗಿದ್ದವು. ಸಕರ್ಾರದ ಕಾಮಗಾರಿಗಳಿಗೆ ಲಕ್ಷಗಟ್ಟಲೇ ಖಚರ್ು ಮಾಡಿದರೂ ಅವು ಅರ್ಧಕ್ಕೆ ಮುಚ್ಚಿಹೋಗುತ್ತವೆ. ಅದರೆ, ಧರ್ಮಗುರುಗಳ ಕೆಲಸಗಳು ಹಾಗಿರಲಿಲ್ಲ. ಸಕರ್ಾರದಿಂದ ಉದ್ಯೋಗಖಾತ್ರಿಯಡಿ ಕೆಲಸವನ್ನು ಕೇಳಿ 1ಲಕ್ಷವನ್ನು ಪಡೆದು ಈ ಅದ್ಬುತ ಕಾರ್ಯವೊಂದನ್ನು ಮಾಡಿದ್ದಾರೆ. ಆದರೆ, ಈ ಯೋಜನೆಗೆ ತಲುಪಿದ ವೆಚ್ಚ ಬರೋಬರಿ 10ಲಕ್ಷ.ಧರ್ಮಗುರುಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪಂಚಾಯಿತಿಯಲ್ಲಿ ಕೆಲವೊಬ್ಬರು ಅಪಸ್ವರವನ್ನು ಎತ್ತಿದ್ದರು. ಅದ್ಯಾವದನ್ನು ಲೆಕ್ಕಸದೇ ಧರ್ಮಗುರುಗಳು ತಾವಿಡಿದ ಕೆಲಸವನ್ನು ಸಂಪೂರ್ಣವಾಗಿ ಮಾಡಿಬಿಟ್ಟರು. ಕೊನೆಗೆ ಈ ಯೋಜನೆಯ ಉದ್ಘಾಟನೆಯಂದು ಇಡಿ ಊರಿಗೆ ಊರು ಇವರ ಕೆಲಸವನ್ನು ಕೊಂಡಾಡಿ, ಉದಾರ ಮನಸ್ಸಿನಿಂದ ದೇಣಿಗೆಯನ್ನು ಸಹ ನೀಡಿತು. ಆರಂಭದಲ್ಲಿ ಅಪಸ್ವರ ಎತ್ತಿದ್ದ ಎಲ್ಲರು ತಮ್ಮ ತಪ್ಪಿಗೆ ಪ್ರಾಯಶ್ಚಿತ ಪಟ್ಟು ನಂತರ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡರು.
ನೀರಾಭಕ್ತನ್..

Thursday, September 16, 2010


ಹೈದರಬಾದ್ ಕನರ್ಾಟಕ ವಿಮೋಚನೆ ದಿನಾಚರಣಿ ವೀರಗಾಥೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 562 ಚಿಕ್ಕಪುಟ್ಟ ಸಂಸ್ಥಾನಗಳೊಂದಿಗೆ ಹಿರಿಯ ಸಂಸ್ಥಾನಗಳು ಬ್ರೀಟಿಷ್ ಸಕರ್ಾರದ ಪ್ರತಿನಿಧಿಗಳಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾಲುದಾರರಾಗಿದ್ದವು. ಬ್ರೀಟಿಷ್ರ ಆಡಳಿತಕ್ಕೆ ಸಕರಾತ್ಮಕವಾಗಿ ಸಹಕಾರನೀತಿ ಕಾಲಕಾಲಕ್ಕೆ ಕಪ್ಪಕಾಣಿಕೆಗಳನ್ನು ನೀಡುತ್ತಿದ್ದ ಸಂಸ್ಥಾನಗಳಲ್ಲಿ ಹೈದರಾಬಾದ್ ಪ್ರಾಂತ್ಯದ ಸಕರ್ಾರವು ಒಂದಾಗಿತ್ತು. 224 ವರ್ಷಗಳ ಸುದೀರ್ಘ ಅವಧಿಗೆ ರಾಜ್ಯಭಾರ ನಿರ್ವಹಿಸಿದ (ಕ್ರಿ.ಶ1724ರಿಂದ1948) ಅಸಫ್ಜಹಾ ಮನೆತನದ ಮೀರ್ಕಮ್ರುದ್ದೀನ್ ಜಿನ್ ಖಿಲಿಚ್ಖಾನ್ರಿಂದ ಸ್ಥಾಪಿಸಲ್ಪಟ್ಟಿತು. 16ಜಿಲ್ಲೆಗಳನ್ನು ಹೊಂದಿದ ಹೈದರಾಬಾದ್ ಸಂಸ್ಥಾನದಲ್ಲಿ ಮರಾಠ ಭಾಷಿಕರ ಐದು ಜಿಲ್ಲೆಗಳು, ತೆಲುಗು ಭಾಷಿಕರ ಎಂಟು ಹಾಗೂ ಕನ್ನಡ ಭಾಷೆ ಮಾತನಾಡುವ ಮೂರು ಜಿಲ್ಲೆಗಳಿಂದ ಕೂಡಿತ್ತು.ಮೊಘಲ ಸಾಮ್ರಾಜ್ಯದ ಅವನತಿಯ ನಂತರ ಈ ಭಾಗ ಆಂಗ್ಲರ ಆಡಳಿತಕ್ಕೆ ಒಳಪಟ್ಟ ಅಧೀನ (ಮಾಂಡಳಿಕ) ರಾಜ್ಯವಾಗಿತ್ತು. ಆದರೂ ಈ ರಾಜ್ಯ ತನ್ನದೇ ಆದ ವಿಶಿಷ್ಟ ಅಂಚೆ, ರೈಲು ವ್ಯವಸ್ಥೆಯೊಂದಿಗೆ ಸ್ವತಂತ್ರ ಆಥರ್ಿಕ ವ್ಯವಸ್ಥೆಯನ್ನು ಹೊಂದಿತ್ತು. ಸ್ವಂತ ನಾಣ್ಯ ಮತ್ತು ನೋಟುಗಳನ್ನು ಹಾಲಿ ಎಂದು ಕರೆಯುವ ಪರಿಪಾಠವಿತ್ತು.ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಅಸಹಕಾರ ಆಂದೋಲನ, ಸ್ವದೇಶಿ ಆಂದೋಲನ, ಕ್ವಿಟ ಇಂಡಿಯಾ ಕಂಪನಿ ಮೇಲೆ ಗಂಭೀರ ಪರಿಣಾಮವನ್ನು ಬೀರಿತು. ಎರಡನೇ ಮಹಾಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಇಂಗ್ಲೆಂಡ ಅನಿವಾರ್ಯವಾಗಿ ಭಾರತಕ್ಕೆ ಸ್ವಾತಂತ್ರ ನೀಡಲು ನಿರ್ಧರಿಸಿತು. ಆಗ ಭಾರತದಲ್ಲಿ ಬ್ರಿಟೀಷರ ಆಡಳಿತದಲ್ಲಿ 562 ಸಂಸ್ಥಾನಗಳು ನೇರವಾಗಿ ತಮ್ಮ ರಾಜಕೀಯ ಸಂಬಂಧಗಳನ್ನು ಹೊಂದಿದ್ದವು. ಭಾರತಕ್ಕೆ ಸ್ವಾತಂತ್ರ ನೀಡಲು ಬ್ರಿಟಿಷ್ ಸರಕಾರ ನಿರ್ಧರಿಸಿ ಆ ಒಪ್ಪಂದದನ್ವಯ 562 ಸಂಸ್ಥಾನಗಳು ನೂತನವಾಗಿ ನಿಮರ್ಾಣಗೊಂಡ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬಹುದು. ಇಲ್ಲವೆ ಯಥಾಸ್ಥಿತಿ ಒಪ್ಪಂದದನ್ವಯ ಸ್ವತಂತ್ರವಾಗಿ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಯಿತು. ಇದರ ಪರಿಣಾಮವಾಗಿ ಮೂರು ರಾಜ್ಯಗಳು ತಮ್ಮದೇ ಆದ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬರಲು ನಿರ್ಧರಿಸಿದವು. ಕಾಶ್ಮೀರದ ರಾಜಾ ಪರೀಸಿಂಗ್ ರೊಂದಿಗೆ ಜುನಾಗಡ ಮತ್ತು ಹೈದ್ರಾಬಾದ ಸಂಸ್ಥಾನದ ನಿಝಾಮರು ಸ್ವತಂತ್ರರಾಗಲು ಹವಣಿಸಿ ರಾಜ ಪ್ರಭುತ್ವದ ನಿರಂಕುಶ ಆಡಳಿತವನ್ನು ಜನತೆಯ ಮೇಲೆ ಹೇರಲು ನಿರ್ಧರಿಸಿದರು.ಹೈದ್ರಾಬಾದ ಸಂಸ್ಥಾನದ ನಿಝಾಮರು 26 ಜೂನ್ 1947 ರಂದು ವಿಶೇಷ ಫರಮಾನು ಹೊರಡಿಸಿ ತಾನು ಭಾರತಕ್ಕೂ ಸೇರುವದಿಲ್ಲಾ, ಪಾಕಿಸ್ತಾನಕ್ಕೂ ಸೇರುವದಿಲ್ಲ, ಹೈದ್ರಾಬಾದ ಸಂಸ್ಥಾನ ಪ್ರತ್ಯೇಕವಾಗಿ ಸ್ವತಂತ್ರ ಸಂಸ್ಥಾನವಾಗಿರುತ್ತೇನೆ ಎಂದು ಸಾರಿದರು. ಈ ಆದೇಶದ ಪರಿಣಾಮವಾಗಿ ಹೈದ್ರಾಬಾದ ಪ್ರಾಂತದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟದ ಜಾತಿಗಳು ಭುಗಿಲೆದ್ದವು. ಹೈದ್ರಾಬಾದ ನಿಝಾಮರ ನಿರಂಕುಶ ಪ್ರಭುತ್ವವನ್ನು ಸ್ವಾತಂತ್ರ್ಯ ಸೇನಾನಿಗಳೆಲ್ಲರೂ ವಿರೋಧಿಸಿದರು.ಹೈದ್ರಾಬಾದ ಸಂಸ್ಥಾನದ ಸ್ವಾತಂತ್ರ್ಯ ಹೋರಟಗಾರರ ವಿರುದ್ಧ ಇತ್ರೆಹಾ ಮುಸಲ್ಮಾನ ಪಕ್ಷದ ಅಧ್ಯಕ್ಷ ಹಾಗೂ ಆಕರ್ಷಕ ಮಾತುಗಾರ ಲಾತೂರಿನ ಖಾಸೀಮ್ ರಝವಿ ತನ್ನದೇ ಆದ ರಝಾಕರ ಅರೆಸೈನ್ಯ ಪಡೆಯನ್ನು ನಿಮರ್ಿಸಿದ. ಭಾರತದೊಂದಿಗೆ ಹೈದ್ರಾಬಾದ ಪ್ರಾಂತ ವಿಲೀನಗೊಂಡರೆ ಮುಸಲ್ಮಾನರಿಗೆ ಅನ್ಯಾಯವಾಗುತ್ತದೆ. ಹಾಗೂ ಇಸ್ಲಾಂ ಧರ್ಮಕ್ಕೆ ಅಪಾಯ ಸಂಭವಿಸುತ್ತದೆ ಎಂದು ಸಾರಿದರು. ಹೈದ್ರಾಬಾದ ಸಂಸ್ಥಾನದ ದುರಂತ ನಾಯಕನಾಗಿ ರೂಪುಗೊಂಡ ಖಾಸೀಮ ರಝವಿ ಇಡೀ ರಾಜ್ಯಾದ್ಯಂತ ಅನ್ಯಾಯ, ಅತ್ಯಾಚಾರ, ದೊಂಬಿ, ಮಹಿಳೆಯರ ಮಾನಹರಣ ಮುಂತಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರು.ಅಖಿಲ ಭಾರತ ಕಾಂಗ್ರೇಸ್ ಪಕ್ಷ ಮತ್ತು ಆರ್ಯ ಸಮಾಜ ಕೈಗೊಂಡ ಸ್ವತಂತ್ರ ವಿರೋಧಿ ಸಂಘಟನೆಗಳ ಪ್ರಯತ್ನಗಳನ್ನು ರಜಾಕರ ಸೈನ್ಯ ಬಗ್ಗುಬಡಿಯಲು ಪ್ರಯತ್ನಿಸಿತು.ಹೈದ್ರಾಬಾದ್ನ ಸ್ವಾತಂತ್ರ ಪ್ರೇಮಿ ಹಾಗೂ ಧೀಮಂತ ಪತ್ರಕರ್ತ ಶೋಯಿಬುಲ್ಲಖಾನ್ ಸ್ವತಂತ್ರ ಹೋರಾಟಗಾರರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಸ್ವಾತಂತ್ರ್ಯಪರ ವಿಚಾರಗಳನ್ನು ತಮ್ಮ ಇಮ್ರೋಜ್ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಸಂಪಾದಕ ಶೋಯಿಬುಲ್ಲಖಾನ್ ಅಂತಿಮವಾಗಿ ರಜಾಕ್ರ ಪಿತೂರಿಗೆ ಬಲಿಯಾದದ್ದು ರಾಜಕೀಯ ದುರಂತಕ್ಕೆ ಜ್ವಲಂತ ಸಾಕ್ಷಿ.ಹೈದ್ರಾಬಾದ್ ಸಂಸ್ಥಾನದ ಉದ್ದಗಲಕ್ಕೂ ಸ್ವತಂತ್ರ ಚಳುವಳಿ ತೀವ್ರಗೊಳ್ಳುತ್ತಿದ್ದಂತೆ ಅಖಂಡ ರಾಯಚೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ದಗೊಳಿಸುವಲ್ಲಿ ಪಂಡಿತ ತಾರಾನಾಥರು ಪ್ರಮುಖ ಪಾತ್ರ ವಹಿಸಿದ್ದರು. ಕ್ರಿ.ಶ 1942ರಲ್ಲಿ ಡಾ ಬಿ.ಜಿ ದೇಶಪಾಂಡೆಯವರ ನಾಯಕತ್ವದಲ್ಲಿ ಕಮಾಂಡರ್ ಗಾಣದಾಳ ನಾರಾಯಣಪ್ಪ ಗೋಲಠಾಣಾದಲ್ಲಿ ಸತ್ಯಾಗ್ರಹವನ್ನು ಆರಂಬಿಸಿದರು. ಇವರೊಂದಿಗೆ ಅಡವಿರಾವ ಪತ್ನಿವಿಸ್, ಗುಡಿಹಾಳ ಹನುಮಂತರಾವ್, ಪತ್ರಕರ್ತರಾದ ಕಾಶೀರಾವ್ ಪಾಟೀಲ್, ರಾ.ಗು ಜೋಷಿ, ಪಾಂಡು ರಂಗರಾವ್ ಕಸಬೆ, ಮಟಮಾರಿ ನಾಗಪ್ಪ, ಬೆಟ್ಟದೂರು ಶಂಕರಗೌಡ, ಸದಾಶಿವ ರಾಜಪುರೋಹಿತ, ಗಂಗನಗಾರು ನಾಗಣ್ಣ, ಪಂಪಣ್ಣ ಸೇವಿನ್ ಮತ್ತು ಅಸಂಖ್ಯಾತ ಭೂಗತ ಹೋರಾಟಗಾರರು , ಮುಂತಾದವರು ತಮ್ಮ ಸಮಗ್ರ ಬದುಕನ್ನು ಸ್ವತಂತ್ರ ಚಳುವಳಿಗೆ ಸಮಪರ್ಿಸಿಕೊಂಡರು. ಲಕ್ಷಾಂತರ ಜನರ ಯಾತನೆ, ದಟ್ಟದಾರಿದ್ರತೆಯ ಮಧ್ಯೆ 15ಆಗಸ್ಟ್1947ರಂದು ಸ್ವಾತಂತ್ರ್ಯದ ಗುಲಾಬಿ ಅರಳಿತು. ಆದರೆ ದುರಂತವೆಂದರೆ, ಸ್ವತಂತ್ರ ಭಾರತದ ಹೊಂಗಿರಣಗಳು ಹೈದ್ರಾಬಾದ್ ಸಂಸ್ಥಾನದಲ್ಲಿ ಪ್ರಕಾಶಭೀರುವಲ್ಲಿ ವಿಫಲಗೊಂಡವು.ರಾಯಚೂರಿನಲ್ಲಿ ನಿಜಾಮರೇ ಭಾರತ ಒಕ್ಕೂಟಕ್ಕೆ ಸೇರಿರಿ ಎನ್ನುವ ಸತ್ಯಾಗ್ರಹವನ್ನು 7ನೇ ಆಗಸ್ಟ್ 1947ರಂದು ರಾ.ಘು ಜೋಷಿ, ಗುಡಿಹಾಳ ಹನುಮಂತರಾವ್, ದೋಮಕುಂಟಿ ನಾರಾಯಣಪ್ಪನವರು ರಾಮಶಾಲಾ ಬಯಲಿನಲ್ಲಿ ಕೈಗೊಂಡರು. ಸ್ವತಂತ್ರ ಸೇನಾನಿಗಳನ್ನು ಬಂಧಿಸಿದ ನಿಜಾಮ್ ಸಕರ್ಾರ ಅವರನ್ನು ಕಾರಾಗೃಹಕ್ಕೆ ಕಳುಹಿಸಿತು. ತ್ರಿವರ್ಣ ರಾಷ್ಟ್ರಧ್ವಜ ನಿಷೇದಿಸಲ್ಪಟ್ಟಿತು. ಇದರೊಂದಿಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿ, ಸಧರ್ಾರ್ ವಲ್ಲಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಮುಂತಾದ ಮಹಾನ್ ನಾಯಕರ ಭಾವಚಿತ್ರಗಳನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿತ್ತು. ಒಂದೇ ಮಾತರಂ ಹಾಡುವುದು, ಗಾಂಧಿಟೊಪ್ಪಿಗೆ ಧರಿಸುವುದು, ತ್ರಿವರ್ಣ ಧ್ವಜ ಹಾರಿಸುವುದನ್ನು ರಾಜದ್ರೋಹವೆಂದೆ ಪರಿಗಣಿಸಲಾಗಿತ್ತು. ಹೈದರಾಬಾದ್ ಪ್ರಾಂತ್ಯದ ಯಾವುದೇ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸದಂತೆ ನಿಜಾಮ ಸಕರ್ಾರ ಆದೇಶವನ್ನು ನೀಡಿತು. ಸೈನಿಕ ಪಥಸಂಚಲನೆಯ ಮುಖಾಂತರ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಸೇನಾನಿ ಮಠಮಾರಿ ನಾಗಪ್ಪನವರು ರಾಯಚೂರಿನ ಸಾಥ್ ಕಛೇರಿಯ ಮೇಲೆ ನಿಜಾಮ ಸೈನಿಕರ ಕಣ್ಣು ತಪ್ಪಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಶೌರ್ಯವು ಸ್ವಾತಂತ್ರ್ಯ ಹೋರಾಟಕ್ಕೆ ವಿನೂತನ ಆಯಾಮವನ್ನು ನೀಡಿತು. ಮಠಮಾರಿ ನಾಗಪ್ಪನವರ ಅಪ್ರತಿಮ ಸಾಹಸದಲ್ಲಿ ಸ್ವಾತಂತ್ರ್ಯ ಸೇನಾನಿಗಳಾದ ಬಸಣ್ಣ, ಶರಭಯ್ಯಸ್ವಾಮಿ, ಚಂದ್ರಯ್ಯ ಹಾಗೂ ಪರ್ವತರೆಡ್ಡಿಯವರು ತಮ್ಮ ಜೀವದ ಹಂಗು ತೊರೆದು ತಮ್ಮ ಸ್ವಾತಂತ್ರ್ಯ ಪ್ರೀತಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ರಾಯಚೂರಿನ ಗುಬ್ಬೇರ ಬೆಟ್ಟದ ಮೇಲೆ ಯಾರೋ ಅನಾಮಿಕರು ತ್ರಿವರ್ಣ ಧ್ವಜ ಹಾರಿಸಿದ್ದರು. ಇದೇ ಸಂದರ್ಭದಲ್ಲಿ ಭಾರತ ಒಕ್ಕೂಟ ಸೇರಿರೆಂದು ಜಿ. ಮಧ್ವರಾಜ, ಲಕ್ಷ್ಮಣಾಚಾರ್ಯ, ವೈಧ್ಯ ಲಿಂಗನಕಾನ ದೊಡ್ಡಿಯ ರಾಘವೇಂದ್ರರು ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾದರು. ರಾಯಚೂರು ತಾಲೂಕಿನ ಹೆಂಬೆರಾಳಿನಲ್ಲಿ ಕವಿ ಶಾಂತರಸರು ತ್ರಿವರ್ಣ ಧ್ವಜ ಹಾರಿಸಿದರು. ಇದರೊಂದಿಗೆ ಕಲ್ಲೂರ, ಮಾನವಿ, ಲಿಂಗಸ್ಗೂರು, ಸಿಂಧನೂರು ಮುಂತಾದ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವತಂತ್ರ್ಯ ಚಳುವಳಿಯ ಬಿಸಿಯನ್ನು ಹೆಚ್ಚಿಸಿದರು.2ನೇ ಅಕ್ಟೋಬರ್ 1947ರಂದು ರಾಯಚೂರು ನಗರದ ನೂರಾರು ವಿಧ್ಯಾಥರ್ಿಗಳು ಸದಾಶಿವರಾವ ಪುರೋಹಿತರ ನಾಯಕತ್ವದಲ್ಲಿ ನಿಜಾಮರೇ ಭಾರತದ ಒಕ್ಕೂಟದಲ್ಲಿ ಸೇರಿರಿ ಎಂದು ಘೋಷಣೆ ಕೂಗುತ್ತಾ, ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ರೈಲ್ವೆ ನಿಲ್ದಾಣದಿಂದ ಹೊರಟರು. ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಲು ಶಾಂತಿ ಹೋರಾಟದಲ್ಲಿ ಪಾಲ್ಗೊಂಡಿದ್ದ 32ವಿಧ್ಯಾಥರ್ಿಗಳನ್ನು ಬಂಧಿಸಿ, ಉಳಿದ ಪ್ರತಿಭಟನಾಕಾರರನ್ನು ಲಾಠಿ ಚಾಜರ್್ ಮಾಡಿ ಓಡಿಸಲಾಯಿತು. ಅದರಲ್ಲಿ ಇಬ್ಬರನ್ನು ಬಿಟ್ಟು 30ಜನರನ್ನು ಶಿಕ್ಷಿಸಿ ಜೈಲಿಗೆ ಹಾಕಿದರು.ಜಿಲ್ಲೆಯಾಧ್ಯಂತ ಆಚರಿಸುತ್ತಿರುವ ಸತ್ಯಾಗ್ರಹಗಳನ್ನು ಬಗ್ಗುಬಡಿಯಲು ನಿಜಾಮ ಸಕರ್ಾರ ತನ್ನ ಸೈನಿಕರನ್ನು ರಜಾಕರನ್ನು ಹಳ್ಳಿಹಳ್ಳಿಗೆ ಕಳುಹಿಸಲಾಯಿತು. ಭಯಭೀತರಾಧ ಜನತೆ ಭಾರತ ಸಕರ್ಾರದ ಗಡಿಪ್ರದೇಶಗಳಿದ್ದ ಮಂತ್ರಾಲಯ, ಕನರ್ೂಲ್, ಗದಗ ಮತ್ತು ಹೊಸಪೇಟೆ ಮುಂತಾದ ಕಡೆ ಓಡಿದರು. ಮುದುಕರು ಮಾತ್ರ ಮನೆಯಲ್ಲಿಯೇ ವಾಸಿಸುತ್ತಿದ್ದರು. ಲಕ್ಷಾಂತರ ಸಂಖ್ಯೆಯ ನಿರಾಶ್ರಿತರು ಭಾರತ ಸಕರ್ಾರದ ಗಡಿಗಳಲ್ಲಿ ಆಶ್ರಯ ಪಡೆದರು. ಇಂತಹ ಪರಿಸ್ಥಿತಿಯಲ್ಲಿ ಖಾಸೀಂರಜವಿ ನೇತೃತ್ವದ ರಜಾಕ್ರು ಹಿಂಸೆ, ದಬ್ಬಾಳಿಕೆ, ಸ್ತ್ರೀಯರ ಮೇಲೆ ಅತ್ಯಾಚಾರ ಮುಂತಾದ ದುಷ್ಕೃತ್ಯಗಳಲ್ಲಿ ತೊಡಗಿದರು. ಇದನ್ನು ಪ್ರತಿಭಟಿಸಿದ ಸ್ವಾತಂತ್ರ್ಯ ಸೇನಾನಿಗಳು ಶ್ವೇತಪತ್ರ ಹೊರಡಿಸಿ ನಿಜಾಮರಿಗೆ ಎಚ್ಚರಿಕೆ ಕೊಟ್ಟರೂ ಯಾವುದೇ ರೀತಿಯ ಫಲಕಾರಿಯಾಗಲಿಲ್ಲ.ನಿಜಾಮ ಸಕರ್ಾರದ ಹಿಂಸೆ ತಾಳಲಾರದೇ ತರುಣರೆಲ್ಲರೂ ಸೇರಿ ಕಾಂಗ್ರೇಸ್ ಪಕ್ಷದ ಸಹಾಯ ಪಡೆದು ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಶಿಬಿರಗಳನ್ನು ಆರಂಭಿಸಿದರು. ಮಂತ್ರಾಲಯದಲ್ಲಿ ಗುಡ್ಡದ ರಾಘವೇಂದ್ರರಾಯರು, ತುಂಗಭದ್ರಾದಲ್ಲಿ ಸಂಗಮ ಹುಚ್ಚಾಚಾರ ಮಾಸ್ತಾರ, ಚಳ್ಳೆಕೂಡ್ಲೂರಿನಲ್ಲಿ ಬೆಟ್ಟದೂರು ಶಂಕರಗೌಡರು ಶಿಬಿರಗಳನ್ನು ಸ್ಥಾಪಿಸಿ ತರುಣ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ಸಕರ್ಾರ ಸಂಗ್ರಹಿಸಿದ್ದ ಮಾಲ್ಲು ಜಾರಿ ಹಾಗೂ ಲೇವಿ ಧವಸಧಾನ್ಯಗಳನ್ನು ಲೂಟಿ ಮಾಡಿದರು. ಹೀಗಿನ ಆಕ್ಟ್ರಾಯಿ ನಾಕಾಗಳಂತೆ ಕಾರ್ಯನಿರ್ವಹಿಸುತ್ತಿದ್ದ ಕರೋಡಗಿರಿಗಳನ್ನು ಸುಟ್ಟುಹಾಕಿದರು.ಪೊಲೀಸ್ ಠಾಣಿಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಪ್ರತಿಹಳ್ಳಿಗೆ ತೆರಳಿ ಜನರಿಗೆ ಹಪ್ತೆ,(ಭೂಕಂದಾಯ) ಮತ್ತು ಲೇವಿಗಳನ್ನು ಸಕರ್ಾರಕ್ಕೆ ಸಲ್ಲಿಸದಂತೆ ಜನರನ್ನು ಪ್ರಚೋಧಿಸಿ ಅಸಹಕಾರ ಆಂಧೋಲನವನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಗಡಿಭಾಗದಲ್ಲಿ ಆಯೋಜಿಸಿದ್ದ ಶಿಬಿರಗಳು ನಿಣರ್ಾಯಕ ಪಾತ್ರ ವಹಿಸಿದವು.ಸ್ವಾತಂತ್ರ್ಯ ಸೇನಾನಿಗಳು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ತುಂಗಭದ್ರಾ ಪೊಲೀಸ್ ಚೌಕಿಯ ಮೇಲೆ ದಾಳಿ ಮಾಡಿದರು. ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಹಫ್ತೆ ವಸೂಲಿಗೆ ಬಂದಿದ್ದ ತಹಸಿಲ್ದಾರರ ಟೈರಿಗೆ ಬೆಂಕಿ ಹಚ್ಚಿದರು. ಎಡಿವಾಳ ಕರೋಡಗಿರಿ ನಾಕಾಕ್ಕೆ ಬೆಂಕಿಇಟ್ಟು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಗಾಣದಾಳ, ಮದ್ಲಾಪೂರಗಳ ಕರೋಡಗಿರಿ ನಾಕಾಗಳನ್ನು ಸುಟ್ಟುಹಾಕಿದರು. ರಾಯಚೂರಿನ ನೀರು ಸರಬರಾಜಿನ ಪಂಪ್ಹೌಸ್ಗೆ ದಾಳಿ ಮಾಡಿದಾಗ ಎಂ. ನಾಗಪ್ಪ, ಪಿ. ವೀರಣ್ಣ, ಬಸವರಾಜಸ್ವಾಮಿ, ಈಶ್ವರರಾಜ, ಮುಂತಾದವರನ್ನು ಮುನ್ನಚ್ಚರಿಕೆಯ ಕ್ರಮವಾಗಿ ಬಂಧಿಸಲಾಯಿತು. ಹೀಗೆ ಈ ಭಾಗದಲ್ಲಿ ಹೋರಾಟದ ನೂರಾರು ಪ್ರಕರಣಗಳು ದಾಖಲಾದವು. ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡಿದ್ದ ಸ್ವತಂತ್ರ್ಯ ಸೇನಾನಿಗಳು ತಮ್ಮ ಜೀವವನ್ನು ಪಣವಾಗಿಟ್ಟಿದ್ದು ಸ್ವಾತಂತ್ರ್ಯ ಹೋರಾಟ ಕಂಡ ರೋಮಾಂಚನಕಾರಿ ದಾಖಲೆಯಾಗಿದೆ. 12 ಅಕ್ಟೋಬರ್ 1947ರಂದು ಗುಂಜಳ್ಳಿಯ ಭೀಮಸೇನರಾವ್ ಕುಲಕಣರ್ೀಯವರು ಪೊಲೀಸ್ಗೌಡ, ಮಾಲೀಗೌಡ, ಕುಲಕಣರ್ಿಯವರನ್ನೆಲ್ಲ ಒಂದೆಡೆ ಸೇರಿಸಿ ರಾಜೀನಾಮೆ ನೀಡಿ ನಿಜಾಮ ಸಕರ್ಾರದ ವಿರುದ್ದ ಹೋರಾಟಕ್ಕೆ ಅಣಿಗೊಳಿಸಿದರು.ಹೈದರಾಬಾದ್ ಸಂಸ್ಥಾನದ ಉದ್ದಗಲಕ್ಕೂ ನಿಜಾಮಶಾಹಿ ವಿರುದ್ಧದ ಹೋರಾಟ ತೀವ್ರಗೊಂಡಾಗ ಅಸಹಾಯದಾಯಕ ನಿಜಾಮರು ಇಂಗ್ಲೇಂಡಿನ ಪ್ರಧಾನಿ ಸರ್ ವಿನಸ್ಟನ್ ಚಚರ್ಿಲ್ರ ಸಹಾನುಭೂತಿ ಗಳಿಸಲು ಪ್ರಯತ್ನಿಸಿ ಪಾಕಿಸ್ತಾನದೊಂದಿಗೆ ಮೈತ್ರಿ ಮಾಡಿಕೊಂಡರು. ಪೋಚರ್್ಗೀಸರೊಂದಿಗೆ ರಾಜಕೀಯ ಸಂಬಂಧ ಬೆಳೆಸಿ ಭಾರತದ ಮೇಲೆ ಯುದ್ದವನ್ನು ಮಾಡಲು ಸನ್ನಧ್ದರಾದರು. ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವದರೊಂದಿಗೆ ಹೈದರಾಬಾದ್ನಲ್ಲಿ ಶಸ್ತ್ರಾಸ್ತ್ರದ ಕಾಖರ್ಾನೆಯನ್ನು ಆರಂಭಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಭಾರತ ಸಕರ್ಾರದ ಗೃಹಮಂತ್ರಿ ಹಾಗೂ ಉಕ್ಕಿನಮನುಷ್ಯ ಖ್ಯಾತಿಯ ಸಧರ್ಾರ ವಲ್ಲಾಭಾಯಿ ಪಟೇಲ್ರು 13 ಸೆಪ್ಟೆಂಬರ್ 1948ರಂದು ಪೊಲೀಸ್ ಆ್ಯಕ್ಷನ್ (ಆಪರೇಷನ್ ಪೊಲೋ) ಕೈಗೊಂಡಿತು. ಹೈದರಾಬಾದ್ ಪ್ರಾಂತ್ಯವನ್ನು ವಿವಿಧ ದಿಕ್ಕುಗಳಿಂದ ಆಕ್ರಮಿಸಿದ ಭಾರತೀಯ ಸೈನ್ಯ ಹೈದರಬಾದಿನ ಮೇಲೆ ಮುತ್ತಿಗೆ ಹಾಕಿತು. ಭಾರತದ ಪ್ರಧಾನ ದಂಡನಾಯಕ ಲೆ.ಜ ಮಹಾರಾಜಸಿಂಗ್ರ ನೇತೃತ್ವದಲ್ಲಿ ಮೇಜರ್ ಜನರಲ್ ಡಿ.ಎಸ್ ಬ್ರಾ ಜನರಲ್ ಜಯಂತನಾಥ ಚೌದ್ರಿ, ಜನರಲ್ ಎ.ಎ.ರುದ್ರಬ್ರಿಗೇಡಿಯರ್, ಶೋಯದತ್ತ್ಸಿಂಗ್ ಮೊದಲಾದವರು ಭಾರತೀಯ ಸೈನ್ಯವನ್ನು ಮುನ್ನಡೆಸಿದರು. ಭಾರತೀಯ ಸೈನ್ಯವನ್ನು ನಿಜಾಮ ಸಕರ್ಾರದ ಸೈನ್ಯ ಪಠಾಣರ ಪಡೆ, ರಜಾಕಾರರು ಇಲ್ಲಿಯೂ ಅಡೆ-ತಡೆಯೊಡ್ಡಲಿಲ್ಲ. ಆದರೆ, ವಳದುರ್ಗ ಮತ್ತು ರಾಯಚೂರು ಜಿಲ್ಲೆಯ ಮುನೀರಾಬಾದ್ನಲ್ಲಿ ಚಿಕ್ಕಪ್ರಮಾಣದ ಯುದ್ದವನ್ನು ಎದುರಿಸಿದ ಸೈನಿಕರು ಭಾರತೀಯ ಸೈನ್ಯಕ್ಕೆ ಅಂತಿಮವಾಗಿ ಸೋತು ಶರಣಾದರು.ಕೇವಲ ನಾಲ್ಕು ದಿನಗಳ ಸೈನ್ಯಾಚರಣೆಯಲ್ಲಿ ಹೈದರಬಾದ್ ನವಾಬನು ಭಾರತೀಯ ಸೈನ್ಯಕ್ಕೆ ಶರಣಾಗಿ ಭಾರತದ ಒಕ್ಕೂಟದಲ್ಲಿ ಸೇರುವ ಒಪ್ಪಂದಕ್ಕೆ 17ಸೆಪ್ಟೆಂಬರ್ 1948 ಸಂಜೆ 05ಗಂಟೆಗೆ ಸಹಿ ಹಾಕಿದರು. ಮಾರನೇಯ ದಿನ 18 ಸೆಪ್ಟೆಂಬರ್ 1948ರ ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಹೈದ್ರಾಬಾದ್ ಪ್ರಾಂತ್ಯವು ಭಾರತ ಸಕರ್ಾರದಲ್ಲಿ ವಿಧಿವತ್ತಾಗಿ ವೀಲಿನಗೊಂಡಿತು. ಆಗ ರಾಯಚೂರು ಜಿಲ್ಲೆಯ ಜನತೆ ಅಖಂಡ ಭಾರತದ ಅವಿಭಾಜ್ಯ ಅಂಗವಾಗಿ ಮೆರೆಯುವ ಸೌಭಾಗ್ಯದ ಸಂತಸದ ಕ್ಷಣಗಳನ್ನು ಅನುಭವಿಸಿದರು.ಹೈದರಬಾದ್ ಸಂಸ್ಥಾನದ ವಿಮೋಚನೆಯಲ್ಲಿ ಹೋರಾಟ ಕೇವಲ ನಾಯಕರಿಗೆ ಮಾತ್ರ ಸೀಮಿತಗೊಳ್ಳದೇ ಸಾಮಾನ್ಯರು ಮತ್ತು ಅವರ ಪರಿವಾರ ಪಾಲ್ಗೊಂಡಿರುವುದು ಭಾರತೀಯ ಚರಿತ್ರೆ ಕಂಡ ರೋಮಾಂಚನಕಾರಿ ಅಧ್ಯಾಯ. ಡಾಮಹಾವೀರ ಕಲ್ಯಾಣಕಾರಿ, ಫೀರೋಜಿರಾವ್ ನಿಜಾಮಕಾರಿ, ದೇವೂಜಿರಾವ್ ಮಿಧಾರಕೇರಿ, ರಾಂಪ್ರಕಾಶ ಮಲ್ಕಾರಿ, ಮನೋಜರಾವ್ ಮಲ್ಕಾರಿ, ನರಸೋಜಿರಾವ್ ನಿಜಾಮಕಾರಿ, ನರಸೋಜಿರಾವ್ ಜಗತಕಾರಿ, ಮೋಚಿರಾವ್, ತಿಪ್ಪೋಜಿರಾವ್ ಕಲ್ಯಾಣಕಾರಿ, ಪಂಡಿತ ಮಾಣಿಕ್ಯರಾವ್, ರಾಮೋಜಿರಾವ್ ಕಲ್ಯಾಣಕಾರಿ, ಸ್ವಾಮಿ ಸುಧಾನಂದ ಜೀ ಮುಂತಾದವರ ಅಮರತ್ಯಾಗ, ಬಲಿದಾನಗಳ ಫಲವಾಗಿ ನಾವೀಂದು ಸ್ವಾತಂತ್ರ್ಯದ ಸ್ವಚ್ಛಂದ ಗಾಳಿಯಲ್ಲಿ ಉಸಿರಾಡಲು ಸಾಧ್ಯವಾಗಿದೆ.16-9-1948ರಂದು ರಜಾಕಾರರು, ಪಠಾಣರು ರಾಯಚೂರಿನ ಬಜಾರಿನಲ್ಲಿ ನುಗ್ಗೇ ವ್ಯಾಪಾರಿಗಳನ್ನು ಲೂಟಿ, ಕೊಲೆ ಮುಂತಾದ ವಿಧ್ವಾಂಸಕಾರಿ ಕೃತ್ಯಗಳನ್ನು ಆರಂಭಿಸಿದರು. ಎರಡು ದಿನಗಳಲ್ಲಿ 50ಸಾವಿರ ಮೊತ್ತದ ಹಣವಸ್ತುಗಳು ಲೂಟಿಯಾದವು.ಮುನ್ನೂರು ನಾಗಣ್ಣ, ತಿಮ್ಮಾಪೂರ ಪೇಟೆಯ ದಾಸಪ್ಪ, ಕೊಂದಡ್ಡಿ ನರಸಣ್ಣ ಮತ್ತು ಅವರ ಸಂಗಡಿಗರು ರಾಯಚೂರಿನ ಜನರನ್ನೆಲ್ಲ ಕೂಡಿಕೊಂಡು ಲೂಟಿಯನ್ನು ತಡೆಯಲು ಪ್ರಯತ್ನಿಸಿದರು. ನಾಲ್ಕುಜನರನ್ನು ಕೊಂದ ರಜಾಕಾರರು ಅವರ ತಲೆಗಳನ್ನು ಬೆಟ್ಟದ ಮೇಲೆ ತೂಗುಹಾಕಿದರು. ರಾಯಚೂರು ಜಿಲ್ಲೆಯಾಧ್ಯಂತ ರೂಪಿಸಿದ್ದ ಹೋರಾಟದಲ್ಲಿ ಹಲವಾರು ಹೃದಯವಂಥ ಮುಸ್ಲಿಂ ಪರಿವಾರದವರು ಹಿಂದೂ ಸ್ವಾತಂತ್ರ್ಯ ಸೇನಾನಿಗಳನ್ನು ರಕ್ಷಿಸುವುದು ಮಾನವೀಯತೆಗೆ ಸಂದ ಗೌರವವಾಗಿದೆ. ಮಾನವ ಚರಿತ್ರೆಯಲ್ಲಿ ವ್ಯಕ್ತಿಗಿಂತ ಸಮಾಜ ಶ್ರೇಷ್ಠ. ಸಮಾಜಕ್ಕಿಂತ ಧರ್ಮ ಶ್ರೇಷ್ಠ. ಧರ್ಮಕ್ಕಿಂತ ರಾಷ್ಟ್ರ ಶ್ರೇಷ್ಠ ಎನ್ನುವುದು ಮತ್ತೊಮ್ಮೆ ರುಜುವಾತುಗೊಂಡಿತು. ಇಷ್ಟೆಲ್ಲ ಸಮಸ್ಯೆ ಹೋರಾಟಗಳ ಮಧ್ಯೆ ಅಂದಿನ ಡೆಪ್ಯೂಟಿ ಕಲೆಕ್ಟರ್ ಆಗಿದ್ದ ರಾಮಪ್ಪನವರು ಜಿಲ್ಲೆಯಾಧ್ಯಂತ ಶಾಂತಿ ಮತ್ತು ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಂಡರು.17 ಸೆಪ್ಟೆಂಬರ್ 1948ರ ಸಂಜೆ 5ಗಂಟೆ ಹೈದ್ರಾಬಾದ್ ಸಂಸ್ಥಾನದ ನಿಜಾಮರು ಭಾರತ ಸಕರ್ಾರದ ಒಕ್ಕೂಟದಲ್ಲಿ ಸೇರುವ ಇಂಗಿತ ವ್ಯಕ್ತಪಡಿಸಿ ಒಪ್ಪಂದಕ್ಕೆ ಸಹಿ ಹಾಕುವದರೊಂದಿಗೆ 224ವರ್ಷಗಳ ಅಸಫಜಹಾ ಮನೆತನದ ಆಡಳಿತ ಕೊನೆಗೊಂಡು ಇತಿಹಾಸದ ಪುಟಗಳನ್ನು ಸೇರಿತು.ಅಯ್ಯಪ್ಪ ತುಕ್ಕಾಯಿ