Friday, September 24, 2010

Yaddaldinni Murder case - CRIME REPORT



ವ್ಯವಸ್ಥೆಯಲ್ಲಿ ಕಳ್ಳತನ, ಸುಲಿಗೆ, ದರೋಡೆ, ಕೊಲೆಯಂತಹ ಪ್ರಕರಣಗಳು ಆಧುನಿಕ ತಂತ್ರಜ್ಞಾನಗಳು ಬೆಳೆದಂತೆ ಹೆಚ್ಚಾಗುತ್ತಾ ಸಾಗುತ್ತವೆ. ಹಾಗಂತ ತಂತ್ರಜ್ಞಾನ ಬೆಳೆಯುತ್ತಿದೆಯೆಂದು ನಡೆಯುವ ಪ್ರಕರಣಗಳನ್ನು ಪತ್ತೆಹಚ್ಚದೇ ಪೊಲೀಸರು ಸುಮ್ಮನೆ ಕೂಡಲು ಆಗುತ್ತದೆಯಾ..? ಎಂಬ ಪ್ರಶ್ನೆಯ ಬೆನ್ನು ಹತ್ತಿ ಹೊರಟಾಗ ನಮಗೆ ದೀಡಿರನೇ ಅಂತಹದೇ ಒಂದು ಪ್ರಕರಣ ನಮ್ಮ ಜಿಲ್ಲೆಯಲ್ಲಿ ಚಿಗುರೊಡಿದಿರುವುದು ಕಂಡು ಬಂದಿತು. ಯದ್ದಲದಿನ್ನಿ ಮಹಿಳಾ ಕೊಲೆ ಪ್ರಕರಣವನ್ನು ವ್ಯವಸ್ಥಿತವಾಗಿ ಪೊಲೀಸರು ಭೇದಿಸದೇ ಕೈಚೆಲ್ಲಿ ಕುಳಿತರೇ ವ್ಯವಸ್ಥೆ ಏನಾಗಬಹುದು ಎಂಬುದರ ಕುರಿತು ನಮ್ಮ ಪ್ರತಿನಿಧಿ ಪೌಲರಾಜ್ ಯದ್ದಲದಿನ್ನಿ ನೀಡಿರುವ ಒಂದು ತನಿಖಾ ವಿಶ್ಲೇಷಣಾ ವರದಿ.
ರಾಯಚೂರು ಜಿಲ್ಲೆಯ ಕವಿತಾಳ ವ್ಯಾಪ್ತಿಯಲ್ಲಿ ಬರುವ ಪುಟ್ಟದೊಂದು ಹಳ್ಳಿಯಲ್ಲಿ ಆಧುನಿಕ ಜಗತ್ತಿಗೆ ಸವಾಲಾಗುವಂತಹ ಖತರ್ನಾಕ್ ರೀತಿಯಲ್ಲಿ ಅಮಾಯಕ ಒಂಟಿ ಮಹಿಳೆಯ ಕಾಣೆ ನಂತರ ಕೊಲೆಯೆಂಬ ಶಂಕೆ ನಡೆದು ಹೋಗುತ್ತದೆ! ಈ ಘಟನೆ ನಡೆದು ಸುಮಾರು 6ತಿಂಗಳು ಗತಿಸಿದರೂ ವ್ಯವಸ್ಥೆಯ ಯಾರೊಬ್ಬರ ಕಣ್ಣಿಗೆ ಬೀಳುವುದಿಲ್ಲ. ನಂತರ ಇದೊಂದು ವರದಕ್ಷಣಿ ಕಿರುಕುಳ, ನಾಪತ್ತೆ ಪ್ರಕರಣವೆಂದು ದಾಖಲಾಗಿ ಸುಖಾಂತ್ಯ ಕಾಣುವ ಹಂತ ತಲುಪಿರುತ್ತದೆ. ದುರದೃಷ್ಟಕ್ಕೆ ಮತ್ತೇ ಈ ಪ್ರಕರಣ ಮುಂದೊಂದು ದಿನ ಎದ್ದು ಕೂಡಬಹುದೆಂದು ಅಲ್ಲಿನ ಪೊಲೀಸರು ಅಂದುಕೊಂಡಿರಲಿಲ್ಲ. ಜೊತೆಯಲ್ಲಿ ಆರೋಪಿಯೂ ಇದನ್ನು ಕನಸಿನಲ್ಲಿಯೂ ನೆನಸಿರಲಿಲ್ಲ.ಕೊಲೆಯ ಹಿಂದಿನ ರಹಸ್ಯ? ದೇವದುರ್ಗ ತಾಲೂಕಿನ ಫಲಕನಮರಡಿ ಗ್ರಾಮದ ಓರ್ವ ಅನಕ್ಷರಸ್ಥ ಮಹಿಳೆಯಾದ ಹನುಮಂತಿ (22) ಎಂಬಾಕೆಯನ್ನು 05-05-2009ರಂದು ಮಾನವಿ ತಾಲೂಕಿನ ಯದ್ದಲದಿನ್ನಿ ಗ್ರಾಮದ ಹನುಮಂತ (28)ಎಂಬಾತನಿಗೆ ಕೊಟ್ಟು ಮದುವೆಯನ್ನು ಮಾಡಲಾಗಿತ್ತು. ಮದುವೆಯಾದ ನವದಂಪತಿಗಳು ಒಳ್ಳೆಯ ಜೀವನವನ್ನು ಸಾಗಿಸಲಿ ಎಂದು ಎಲ್ಲರೂ ನಾಲ್ಕು ಅಕ್ಕಿ ಕಾಳನ್ನು ಹಾಕಿ ಆಶರ್ಿವಧಿಸುತ್ತಾರೆ. ಆದರೆ, ಹನುಮಂತಿಯ ಬದುಕಿನಲ್ಲಿ ಅದು ನಡೆಯಲಿಲ್ಲ. ತನ್ನ ಬಾಲ್ಯದಲ್ಲಿ ಕಳೆದ ಜೀವನವನ್ನು ಆಕೆ ಮುಂದುವರೆಸಲು ಸಾಧ್ಯವಾಗಲಿಲ್ಲ. ಮದುವೆಯಾದ ಎರಡೇ ತಿಂಗಳಲ್ಲಿ ಗಂಡನಾದ ಹನುಮಂತ ಕಿರುಕುಳ ಕೊಡಲು ಪ್ರಾರಂಭಿಸಿದ. ನಿನ್ನ ತವರು ಮನೆಗೆ ಹೋಗಿ 1ತೊಲೆ ಬಂಗಾರ, 10ಸಾವಿರ ರೊಕ್ಕ ತೆಗೆದುಕೊಂಡು ಬಾ, ಎಂದು ಒಂದೇ ಸಮನೇ ವರದಕ್ಷಣೆ ಕಿರುಕುಳ ಕೊಡುತ್ತಾ, ಹೊಡೆಯುವದನ್ನು ಮಾಡುತ್ತಿದ್ದ. ನಂತರ ಬೇಸತ್ತ ಹನುಮಂತಿ ತನ್ನ ತಂದೆಗೆ ಈ ವಿಷಯವನ್ನು ತಿಳಿಸಿ 1ತೊಲೆ ಬಂಗಾರವನ್ನು ನನ್ನ ಗಂಡನಿಗೆ ನೀಡುವಂತೆ ತನ್ನ ತಂದೆಯನ್ನು ಒಪ್ಪಿಸುತ್ತಾಳೆ. ಅದಾದ ಕೆಲವೇ ದಿನಗಳಲ್ಲಿ ಯದ್ದಲದಿನ್ನಿ ಗ್ರಾಮಕ್ಕೆ ಹನುಮಂತಿ ತನ್ನ ತಂದೆಯ ಜೊತೆಯಲ್ಲಿ ಹೋಗಿ ಬಂಗಾರವನ್ನು ಕೊಟ್ಟು ಸುಖಿಸಂಸಾರ ನಡೆಸಲು ಆಲೋಚನೆ ನಡೆಸಿದಳು. ಯಾಕೋ ಹನುಮಂತನಿಗೆ ಆಸೆ ಜಾಸ್ತಿಯಾಯಿತು. ಹಿಂದಿನ ಇತಿಹಾಸದಲ್ಲಿ ಹೇಳುವಂತೆ ಕಡ್ಡಿ ತಾಂಬರೋ ಹನುಮ ಅಂದರೆ, ಅವನು ಗುಡ್ಡನೇ ತಂದಿದ್ದನಂತೆ ಅದರಂತೆ ಈ ಕಲಿಯುಗದ ಹನುಮಂತನಿಗೆ ಹೆಂಡತಿಯ ಜೊತೆ ಬಾಳುವುದು ಇಷ್ಟವಾಗಲಿಲ್ಲ. ತಾನು ಹೇಳಿದಂತೆ ತನ್ನ ಭೀಗರು ಬಂಗಾರವನ್ನು ಕೊಟ್ಟರೂ ಸಹ ಮತ್ತೇ ಕಿರುಕುಳ ಕೊಡಲು ಪ್ರಾರಂಭಿಸಿದನು. ನಂತರದ ದಿನಗಳಲ್ಲಿ ಹನುಮಂತನ ಹಣದ ವ್ಯಾಮೋಹ ಮತ್ತು ಆಲೋಚನೆಗಳು ತನ್ನ ಹೆಂಡತಿಯನ್ನೇ ನಾಪತ್ತೆ, ಕೊಲೆ ಮಾಡುವ ಮಟ್ಟಿಗೆ ಹೋಗಿವೆ. ಇದಕ್ಕೆ ಸಾಥ್ ಆಗಿ ಅವನ ಅಣ್ಣ ಶರಣಪ್ಪ, ಅವನ ತಾಯಿ ಅನ್ನಮ್ಮ ಸಹಕಾರ ನೀಡುತ್ತಾರೆೆ!ತನ್ನ ಹೆಂಡತಿಯನ್ನು ನಾಪತ್ತೆ, ಕೊಲೆ ಮಾಡಲು ಹನುಮಂತ ಕಳೆದುಕೊಂಡದ್ದಾದರೂ ಏನು? ಹಣಕ್ಕಾಗಿ ಹಗಲಿರುಳು ಪೀಡಿಸುತ್ತಿದ್ದ ಹನುಮಂತ ಮತ್ತು ಅವನ ಕುಟುಂಬದವರು ಒಂದು ದಿನ ಹನುಮಂತಿಯ ಕೊರಳಲ್ಲಿನ ತಾಳಿಯನ್ನು ತೆಗೆದು ನಿಗೂಡವಾಗಿ ಕೊಲೆ ಮಾಡಿದ್ದಾರೆ! ಅದು ಹನುಮಂತನ ಕುಟುಂಬದವರಿಗೆ ಬಿಟ್ಟರೆ, ಊರಿನಲ್ಲಿ ಮತ್ಯಾರಿಗೂ ಗೊತ್ತಿಲ್ಲ. ಇತ್ತ ಫಲಕನಮರಡಿಯಲ್ಲಿ ಹನುಮಂತಿಯ ಕುಟುಂಬದವರು ಕೆಲವು ದಿನಗಳ ಹಿಂದೆ ಮಗಳದ್ದು ದುಡ್ಡಿನ ಸಂಭಂಧ ಕಿರಿಕಿರಿ ಉಂಟಾದಾಗ ತಾವೇ ಖುದ್ದಾಗಿ ಭೀಗರ ಊರಿಗೆ 1ತೊಲೆ ಬಂಗಾರವನ್ನು ನೀಡಿ ಬಂದಿದ್ದರು! ಹೀಗಾಗಿ ಬಹಳ ದಿನಗಳಾಗಿದೆ ಮಗಳನ್ನು ನೋಡಿದರಾಯಿತು. ಅದೇ ಹೊತ್ತಿನಲ್ಲಿ ಮೊಹರಂ ಹಬ್ಬವು ಸಮೀಪಕ್ಕೆ ಬಂದಿತ್ತು. ಆದ್ದರಿಂದ ಹನುಮಂತಿಯ ತಂದೆ ತನ್ನ ತಮ್ಮನ ಮಗನಿಗೆ ಹೇಳಿ ಯದ್ದಲದಿನ್ನಿಗೆ ಹೋಗಿ ನಿಮ್ಮ ತಂಗಿಯನ್ನಾದರೂ ಕರೆದುಕೊಂಡು ಬಾ ಹೋಗು ಎಂದು ಹೇಳಿದ್ದಾನೆ.ಮಾರನೇ ದಿನ ಹನುಮಂತಿಯ ಅಣ್ಣ ಯದ್ದಲದಿನ್ನಿ ಹೋದಾಗ ಭೀಗರ ಮನೆಯಲ್ಲಿ ತನ್ನ ತಂಗಿ ಕಂಡಿಲ್ಲ. ನಿಧಾನವಾಗಿ ಆಲೋಚಿಸುತ್ತಾ ಮನೆ ಕೆಲಸಕ್ಕಾಗಿ ಇಲ್ಲಿ-ಎಲ್ಲಿಯಾದರೂ ಹೋಗಿರಬೇಕು ಬಿಡು, ಎಂದು ನಿರಾಳವಾಗಿ ಅರ್ಧಗಂಟೆ ಕಳೆದಿದ್ದಾನೆ. ಆದರೂ, ಕೂಡ ತಂಗಿ ಬಾರದೇ ಇರುವುದನ್ನು ನೋಡಿ ತನ್ನ ಅಳಿಯನಿಗೆ ಕೇಳಿದ್ದಾನೆ. ಏನಪ್ಪ ಎಲ್ಲಿದ್ದಾಳೆ ನಮ್ಮ ತಂಗಿ.., ಆಗ, ಜಝರ್ಿರಿತನಾದ ಅಳಿಯ ಹನುಮಂತ ; ನಿಮ್ಮ ತಂಗಿ ಇವತ್ತಿಗೆ ಎರಡು ದಿನ ಆಯಿತು. ಗೂಟಕ್ಕೆ ತಾಳಿಯನ್ನು ನೇತುಹಾಕಿ ಮನೆ ಬಿಟ್ಟು ಎಲ್ಲಿಗೋ ಓಡಿ ಹೋಗಿದ್ದಾಳೆ. ನಾವು ಕೂಡ ಆಕೆಯನ್ನೇ ಹುಡುಕಾಡುತ್ತಿದ್ದೇವೆ ಅಂದಿದ್ದಾನೆ. ಆಗ ಅಣ್ಣನು ದಂಗಾಗಿ ನಂತರ ಅತ್ತೆ, ಮನೆಯಲ್ಲಿರುವ ಎಲ್ಲರನ್ನು ವಿಚಾರಿಸಿದ್ದಾನೆ. ಎಲ್ಲರಿಂದಲೂ ಇದೇ ಉತ್ತರ ಬಂದಾಗ ಕೂಡಲೇ ಆತ ವಿಷಯವನ್ನು ತಮ್ಮೂರಿನ ದೊಡಪ್ಪನಿಗೆ ತಿಳಿಸಿದ್ದಾನೆ. ಮನೆಯಲ್ಲಿ ಈ ವಿಷಯವನ್ನು ಕೇಳುತ್ತಿದ್ದಂಥೆ ಎಲ್ಲರೂ ಒಂದು ಕ್ಷಣ ಗಲಿಬಿಲಿಗೊಂಡಿದ್ದಾರೆ.(ಆದರೆ, ಯಾರಿಗೂ ಆ ಕ್ಷಣ ಹನುಮಂತಿ ನಿಗೂಡವಾಗಿ ಕೊಲೆಯಾಗಿದ್ದಾಳೆ! ಎಂಬುದು ಆ ಕ್ಷಣಕ್ಕೆ ಗೊತ್ತಾಗಿಲ್ಲ. ಸಮಯ ಕಳೆದಂತೆ ಅಳಿಯನ ಮೇಲೆ ಭೀಗರು ಅನುಮಾನ ಮಾಡಿದ್ದಾರೆ.) ಹನುಮಂತಿಯ ಕಡೆಯವರು ತಮ್ಮಮಗಳ ನಾಪತ್ತೆಗಾಗಿ ದೂರನ್ನು ಕವಿತಾಳ ಠಾಣೆಗೆ ಸಲ್ಲಿಸಲು ಹೋದಾಗ ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ನಂತರ ಹನುಮಂತನ ಕರೆಯಿಸಿಕೊಂಡು ಬೇಕಾಬಿಟ್ಟಿಯಾಗಿ ಆತನಿಂದಲೇ ಕಾಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ! ಪದ್ದತಿಯಂತೆ ಮೊಬೈಲ್ನ ಸಿಮ್ ಕಳೆದರೆ ಹೇಗೆ ನಾವು ಕಛೇರಿಗೆ ಹೋಗಿ ಹೇಗೆ ಕಂಪ್ಲೇಟ್ ಕೊಡುತ್ತೇವೆ. ಅದರಂತೆ ಹನುಮಂತನು ಕೂಡ ತನ್ನ ಹೆಂಡತಿ ಕಳೆದುಹೋಗಿದ್ದಾಳೆ ಎಂದು ಸ್ಥಳೀಯ ಕವಿತಾಳ ಪೊಲೀಸ್ ಕಛೇರಿಗೆ ದೂರನ್ನು ಕೊಟ್ಟಿದ್ದಾನೆ. ದೂರನ್ನು ಸ್ವೀಕರಿಸಿದ ಠಾಣಾಧಿಕಾರಿಗಳು ತನಿಖೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪೊಲೀಸ್, ಕಛೇರಿ ಇಂತವುಗಳನ್ನೆಲ್ಲ ಊರಿನ ಗೌಡರು, ಕುಲಕಣರ್ೀಯವರೇ ನೋಡಿಕೊಳ್ಳುತ್ತಾರೆ. ಅದರಲ್ಲಿ ಅಲ್ಪಸ್ವಲ್ಪ ಪಾಲಿಟಿಕ್ಸ್ ಸೇರಿರುತ್ತದೆ. ಏನೇ ಆಗಲಿ ಪೊಲೀಸರು ಕಾಣೆಯಾದ ಹನುಮಂತಿಯನ್ನು ಹುಡುಕಿದ ಪ್ರಯತ್ನ ವಿಫಲವಾಯಿತು. ಇದು ಹೀಗೆ ನಡೆದುಹೋಗಿದ್ದರೆ, ಒಂದು ಅಮಾಯಕ ಮಹಿಳೆಯ ಕೊಲೆಯ ಪ್ರಕರಣವೊಂದು ವ್ಯವಸ್ಥೆಯಲ್ಲಿ ಬೆಳಕಿಗೆ ಬಾರದೇ ಹಾಗೇಯೇ ಮುಚ್ಚಿಹೋಗುತ್ತಿತ್ತು. ಅದೃಷ್ಟಕ್ಕೆ ಸತ್ಯಕ್ಕೆ ಸಮಾಜದಲ್ಲಿ ಸಾವಿಲ್ಲ ಎಂಬಂಥೆ ಹನುಮಂತನನಿಂದಲೇ ಈ ಪ್ರಕರಣ ಮುಂದೊಂದು ದಿನ ಬೆಳಕಿಗೆ ಬರುತ್ತದೆ ಎಂದು ಯಾರೊಬ್ಬರು ಅಂದು ಊಹಿಸಿರಲಿಲ್ಲ. ಇಷ್ಟೆಲ್ಲ ಘಟನೆ ನಡೆದು ತಿಂಗಳುಗಳೇ ಕಳೆಯುತ್ತಾ ಹೋಯಿತು. ಫಲಕನಮರಡಿಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಮನೆಯವರೆಲ್ಲ ಚಿಂತಿಸುತ್ತಿದ್ದರೆ, ಅತ್ತ ಹನುಮಂತ ನಾನು ಹೆಂಡತಿಯನ್ನು ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಿಲ್ಲ. ಪೊಲೀಸರಿಗೂ ನನ್ನ ಮೇಲೆ ಯಾವುದೇ ಅನುಮಾನ ಬಂದಿಲ್ಲ. ಅಂದ ಮೇಲೆ ನಾನೇಕೆ ಸುಮ್ಮನೆ ಒಂಟಿ ಜೀವನ ನಡೆಸುವುದು ಎಂದು ಯೋಚಿಸಿ ಇನ್ನೊಂದು ಮದುವೆಯಾಗಲು ಇಚ್ಚಿಸಿದ್ದಾನೆ. ಇದಕ್ಕೆ ಮನೆಯಮಂದಿ ಸೊಪ್ಪು ಹಾಕಿದ್ದರಿಂದ ಬೇಗನೇ ಮದುವೆಗೆ ಮುಹೂರ್ತವು ಫಿಕ್ಸ್ ಆಯಿತು. (ಪಾಪ..ಹನುಮಂತನಿಗೆ ಗೊತ್ತಾಗಿಲ್ಲ. ಕೊಲೆ ಮಾಡಿದ್ದು ಬಯಲಿಗೆ ಬಿದ್ದರೆ, ನನಗೂ ಮತ್ತು ಇನ್ನೊಬ್ಬ ಹೆಂಡತಿಯೂ ಕಂಬಿ ಎಣಿಸಿವುದು ಬರುತ್ತದೆ ಎಂದು.) 02-08-2010 ಹನುಮಂತ ಅಲ್ಲಿಯ 73ಕ್ಯಾಂಪಿನ ಹುಚ್ಚಪ್ಪ ಕಾಚಾಪೂರ ಎಂಬುವವರ ಮಗಳನ್ನು 50ಸಾವಿರ ವರದಕ್ಷಣಿಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗಿದ್ದಾನೆ.! ಒಂದು ಮದುವೆಯಾಗಿ ಸರಿಯಾಗಿ ಇನ್ನೂ 1ವರೆವರ್ಷ ಕಳೆದಿಲ್ಲ. ಅದರಲ್ಲಿ ಹೆಂಡತಿ ಕಾಣೆಯಾಗಿದ್ದಾಳೆ ದೂರು ಕೊಟ್ಟು ಕೆಲವು ತಿಂಗಳೂ ಗತಿಸಿಲ್ಲ. ಅಂತಹದರಲ್ಲಿ ಈತನು ಇನ್ನೊಂದು ಮದುವೆ ಮಾಡಿಕೊಳ್ಳುತ್ತಿರುವುದು ನೋಡಿ ಎಲ್ಲರಿಗೂ ಅನುಮಾನ ಬಂದಿದೆ. ಇದೇ 2ನೇ ಮದುವೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಕಂಬಿ ಎಣಿಸುವಂತೆ ಮಾಡುತ್ತದೆ ಎಂಬುದು ತಿಳಿದಿರಲಿಕ್ಕಿಲ್ಲ.ಹನುಮಂತ ಮದುವೆಯಾದ ಮಾರನೇ ದಿನವೇ ಮೊದಲ ಹೆಂಡತಿ ಹನುಮಂತಿಯ ಕುಟುಂಬದವರು ಕವಿತಾಳ ಠಾಣೆಗೆ ಬಂದು ನಮ್ಮ ಅಳಿಯ ಕೆಲವು ತಿಂಗಳುಗಳ ಹಿಂದೆ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರನ್ನು ಕೊಟ್ಟಿದ್ದ.. ಅದರ ತನಿಖೆಯನ್ನು ನೀವು ನಡೆಸುತ್ತಿದ್ದೀರಿ.. ಆದಾಗ್ಯೂ ಕೂಡ ಆತನು 02-08-2010ರಂದು ಇನ್ನೊಬ್ಬಳ ಜೊತೆಯಲ್ಲಿ ಮದುವೆಯಾಗಿದ್ದಾನೆಂದರೆ ಏನರ್ಥ ಸಾರ್.. ಎಂದು ಕೆಲವೊಂದು ಸ್ಥಳೀಯ ಸಂಘಟನೆಗಳ ಮುಖಂಡರಾದ ತಿಮ್ಮಣ್ಣ ನಾಯಕ ಹಟ್ಟಿ, ಜಮದಗ್ನಿ ಕೋಠಾರವರ ಜೊತೆಗೆ ಹೋಗಿ ಕೇಳಿದ್ದಾರೆ.ಆಗ ಕೂಡ ಕವಿತಾಳ ಪೊಲೀಸರು ನಿರ್ಲಕ್ಷತನ ತೋರಿದ್ದರಿಂದ ಕುಟುಂಬದವರು ಸ್ಥಳೀಯ ಮುಖಂಡರ ಜೊತೆ ಮಾರನೇ ದಿನ ಎಸ್ಪಿಯವರನ್ನು ಭೇಟಿಯಾಗಿ ಮತ್ತೊಂದು ದೂರನ್ನು ಸಲ್ಲಿಸಿದ್ದಾರೆ. ಅಲ್ಲಿಯೂ ಕೂಡ ಎಸ್ಪಿಯವರು ಮತ್ತೇ ಪ್ರಕರಣವನ್ನು ಅದೇ ಪಿ.ಎಸ್.ಐ ಅವರಿಗೆ ವಹಿಸಿದ್ದಾರೆ. ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ಹನುಮಂತನನ್ನು ಹಿಡಿಯಲು ಸಫಲರಾಗಿದ್ದಾರೆ. ಹನುಮಂತನನ್ನು ಠಾಣೆಗೆ ಕರೆತಂದ ಪೊಲೀಸರು ಆತನಿಗೆ ತಮ್ಮ ಆತಿಥ್ಯವನ್ನು ನೀಡುತ್ತಿದ್ದಂತೆ ಆತನೇ ಭಯಾನಕ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾನೆ. ಅದು ನಾನೇ ನನ್ನ ಹೆಂಡತಿಯನ್ನು ಕೊಲೆ ಮಾಡಿರುವುದು.! ನನ್ನ ಹೆಂಡತಿಯನ್ನು ಕೊಂದು ನನ್ನ ಮನೆಯ ಹಿಂದಿನ ಹೊಲಗದ್ದೆಯಲ್ಲಿ ಹೂತುಹಾಕಿದ್ದೇನೆ.! ಎಂತೆಲ್ಲ ಮಾಹಿತಿಯನ್ನು ಪೊಲೀಸರ ಒಂದೊಂದು ಏಟಿಗೆ ಹೇಳಿದ್ದಾನೆ. ನಂತರ ಪೊಲೀಸರು ಆಕೆಯ ತಾಯಿಯನ್ನು ಬಂಧಿಸಿದ್ದಾರೆ. ಸ್ವಲ್ಪದರಲ್ಲಿಯೇ ಈ ಕೊಲೆ ಪ್ರಕರಣದ ರೂವಾರಿ ಆತನ ಅಣ್ಣ ಶರಣಪ್ಪನು ತಪ್ಪಿಸಿಕೊಂಡು ಓಡಿದ್ದ. (ನಂತರ ಅವನು ಕೂಡ ಸಿಕ್ಕಿಬಿದ್ದ) ಜೊತೆಗೆ ಅವನ ತಮ್ಮನನ್ನು ಹಿಡಿದು ತಂದಿದ್ದಾರೆ ಪೊಲೀಸರು. ಮಗಳನ್ನು ಕಳೆದುಕೊಂಡ ಫಲಕನಮರಡಿಯವರು ಕವಿತಾಳ ಪೊಲೀಸ್ ಠಾಣೆಗೆ ಅಲೆಯುತ್ತಾ, ನಮ್ಮ ಮಗಳ ಕೊಲೆ ಮಾಡಿದವರಿಗೆ ಶಿಕ್ಷೆ ನೀಡಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪೊಲೀಸ್ ಅಧಿಕಾರಿಗಳತ್ತ ಅಂಗಲಾಚಿಕೊಳ್ಳುತ್ತಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಹನುಮಂತ ಈಗ ಪೊಲೀಸರ ಅತಿಥಿಯಾಗಿ ವರದಕ್ಷಣಿ ಪ್ರಕರಣದಲ್ಲಿ ಜೈಲುಪಾಲಾಗಿ ನಂತರದ ದಿನಗಳಲ್ಲಿ ಜಾಮೀನಿನ ಮೇಲೆ ಹೊರಗಡೆ ಬಂದು ರಾಜಾರೋಷವಾಗಿ ತಿರುಗುತ್ತಿದ್ದಾನೆ.ಕೊಲೆಯಾದ್ದದ್ದು ಗೊತ್ತಾದರೂ ಪೊಲೀಸರಿಂದ ದೇಹವನ್ನು ಹುಡುಕಲು ಆಗುತ್ತಿಲ್ಲ.!ಹನುಮಂತ ಕೊಲೆ ಮಾಡಿದ್ದೇನೆಂದು ಹೇಳಿದ ಮೇಲೆ ಆತ ದಿನಕ್ಕೊಂದು ನಾಟಕವಾಡುತ್ತಿದ್ದಾನೆ. ಮೊದಲ ದಿನ ನನ್ನ ಮನೆಯ ಸುತ್ತ 20ಅಡಿಯಲ್ಲಿ ಹೂತಿಟ್ಟಿದ್ದೇನೆಂದು ಹೇಳಿದ! ಮಾರನೇ ದಿನ ನನ್ನ ಹೆಂಡತಿಯನ್ನು ನಾನೇ ಕೊಲೆ ಮಾಡಿ ಕಾಲುವೆಗೆ ಹಾಕಿದ್ದೇನೆ ಎಂದು ಹೇಳಿದ್ದ. ಇನ್ನೊಂದು ದಿನ ನಾನು ನನ್ನ ತಾಯಿ ಊರ ಹೊರಗೆ ಇರುವ ಕಾಲುವೆ ಪಕಕ್ಕೆ ತಗ್ಗುತೋಡಿ ಇಟ್ಟಿದ್ದೇವೆ ಎಂದು ಹೇಳಿಕೆ ನೀಡಿದ್ದಾನೆ! ಹೀಗೆ ದಿನಕ್ಕೊಂದು ಸ್ಥಳವನ್ನು ತೋರಿಸುತ್ತಾ, ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಅದಕ್ಕೆ ಪೂರಕವಾಗಿ ಪೊಲೀಸರು ಆತ ಎಲ್ಲೆಲ್ಲಿ ಹೇಳುತ್ತಾನೆ ಅಲ್ಲಲ್ಲಿ ತಗ್ಗು ತೋಡುತ್ತಾ, ಸಮಯವನ್ನು ಕಳೆದಿದ್ದಾರೆ. ಈ ಘಟನೆ ನಡೆದು ಇಷ್ಟು ದಿನಗಳು ಕಳೆದರೂ ಇಲ್ಲಿಯವರಗೆ ಹನುಮಂತನನ್ನು ಸರಿಯಾಗಿ ಬಾಯಿಬಿಡಿಸಿ ಕೊಲೆಯಾದ ಮೃತದೇಹವನ್ನು ಪತ್ತೆಹಚ್ಚಲು ಪೊಲೀಸರಿಗೆ ಆಗಿಲ್ಲವೆಂದರೆ ದುರಂತವಲ್ಲದೇ ಮತ್ತೇನು.!ಪೊಲೀಸರಿಂದ ಹನುಮಂತಿ ಕುಟುಂಬದವರಿಗೆ ಉಪದೇಶ ನೋಡ್ರೀಪ್ಪ.. ಕೊಲೆಯಾದವರ ಪೈಕಿ ನೀವು ಬ್ಯಾಡರು, ಕೊಲೆ ಮಾಡಿದ ನಿಮ್ಮ ಅಳಿಯನು ಬ್ಯಾಡರವ, ಜೊತೆಯಲ್ಲಿ ನಾನು ಕೂಡ ಬ್ಯಾಡರು ಇದನ್ನು ನಾವೇ ಕುಳಿತುಕೊಂಡು ಬಗೆಹರಿಸಿಕೊಳ್ಳೋಣ! ಮಂದಿ ಮಾತು ಕೇಳಿ ಯಾಕೆ ನೀವು ಎಸ್ಪಿ ಹತ್ತಿರ ಹೋಗುವುದು! ಪೇಪರ್ದವರ ಹತ್ತಿರ ಹೋಗ್ರೀರಿ.! ಎಂದು ಠಾಣಿಯ ಅಧಿಕಾರಿಗಳು ಹನುಮಂತಿಯ ಕುಟುಂಬದವರಿಗೆ ಉಪದೇಶ ನೀಡುತ್ತಿದ್ದಾರೆ. ಮತ್ತೇ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಅಳಿಯನೇ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡ ಮೇಲೆ ನಿಮ್ಮ ಮಗಳ ದೇಹವನ್ನು ತಗೊಂಡು ಏನ್ ಮಾಡ್ತೀರಿ.. ಅವನ ಮೇಲೆ ಕೊಲೆ ಕೇಸ್ ಹಾಕಿ ಕೋಟರ್ಿಗೆ ಕಳುಹಿಸೋಣ ಎಂದೇಳುತ್ತಿದ್ದಾರೆ.! (ಅಂದರೆ, ಪೊಲೀಸರು ಈ ಪ್ರಕರಣವನ್ನೇನು ಮಟ್ಕಾ, ಇಸ್ಪೀಟ್ ಕೇಸ್ ಅಂತ ತಿಳಿದಿರಬೇಕು. ಎಂಬುದು ಹನುಮಂತಿ ಕುಟುಬಂದವರ ಅಳಲು.) ಅಯ್ಯೋ.. ಪೊಲೀಸ್ರೇ, ಅವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿಕೊಂಡಿದ್ದಾನೆಂದು ಚಾಜರ್್ಶೀಟ್ನಲ್ಲಿ ಹಾಕಿ ಅವನನ್ನು ಕೊಟರ್ಿಗೆ ಕಳುಹಿಸಿದಾಗ ಆತನು ಅಲ್ಲಿ ಜಡ್ಜ್ ಸಾಹೇಬರೇ, ಪೊಲೀಸರು ನನಗೆ ದಿನನಿತ್ಯ ಹೊಡೆಯುತ್ತಿದ್ದರೂ ಅದಕ್ಕಾಗಿ ನಾನು ಕೊಲೆ ಮಾಡಿದ್ದೇನೆ ಎಂದು ಹೇಳಿದರೆ ನೀವೇನು ಮಾಡುತ್ತೀರಿ. ಜಡ್ಜ್ ಎಲ್ಲಿದೆ ಪೊಲೀಸಪ್ಪ ಹನುಮಂತ ಕೊಲೆ ಮಾಡಿದ ಆ ಮಹಿಳೆಯ ಮೃತದೇಹ ಅಥವಾ ಪೋಸ್ಟ್ಮಾಟಂ ರಿಪೋಟರ್್ ಎಂದು ಕೇಳಿದರೆ, ನೀವೇನು ಉತ್ತರಿಸುತ್ತೀರಿ. ನಿಮ್ಮಿಂದ ಮೃತದೇಹವನ್ನು ಪತ್ತೆಹಚ್ಚಲು ಆಗಿಲ್ಲವೆಂದರೆ, ನ್ಯಾಯಾಲಯಕ್ಕೆ ಬಲವಾದ ಸಾಕ್ಷಿಯೊಂದನ್ನು ಎಲ್ಲಿಂದ ತರುತ್ತೀರಿ? ಎಂಬುದು ಕುಟುಂಬದವರ ಪ್ರಶ್ನೆ. ಕೊನೆಗೆ ನ್ಯಾಯಾಲಯ ಕೊಲೆಗೆ ಸರಿಯಾದ ಸಾಕ್ಷಿ ಇಲ್ಲದ ಕಾರಣ ಹನುಮಂತ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದರೂ ಅದಕ್ಕೆ ಸರಿಯಾದ ಸಾಕ್ಷಿ ಆಧಾರದ ಕೊರತೆಯಿಂದ ಹನುಮಂತನನ್ನು ಈ ಪ್ರಕರಣದಿಂದ ಮುಕ್ತ ಮಾಡಲಾಗಿದೆ ಎಂದು ತೀರ್ಪನ್ನು ನೀಡಿದರೆ, ಹನುಮಂತಿಯನ್ನು ಕಳೆದುಕೊಂಡ ಕುಟುಂಬಕ್ಕೆ ಮರಳಿ ಹನುಮಂತಿ ಸಿಗುತ್ತಾಳೆಯೇ? ಇಲ್ಲವಾದರೆ, ಆಧುನಿಕ ಸಮಾಜದಲ್ಲಿ ಎಲ್ಲವನ್ನು ಕೃತಕ ಮಾಡಿದಂತೆ ಹನುಮಂತಿಯನ್ನೇನಾದರೂ ಕೃತಕವಾಗಿ ತಯಾರಿಸಲು ಆಗುತ್ತದೆಯೇ? ಇದರಿಂದ ಆರೋಪಿಗೆ ನಿಜವಾಗಿ ಶಿಕ್ಷೆಯಾದಂತಾಗುತ್ತದೆಯೇ? ಬಡವರಿಗೆ ಪೊಲೀಸರು ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆಯೇ? ಇಂತಹ ಇನ್ನು ಅನೇಕ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯೇ ನೇರ ಉತ್ತರ ನೀಡಬೇಕಾಗುತ್ತದೆ. ಆದ್ದರಿಂದ ಆರೋಪಿಗಳನ್ನು ಮತ್ತೇ ಅರೆಸ್ಟ್ ಮಾಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕೊಲೆ ಮಾಡಿ ಹೂತಿಡಲಾಗಿರುವ ಹನುಮಂತಿಯ ಹೆಣವನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕಾಗಿದೆ. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ನಮ್ಮಲ್ಲಿ ಇದ್ದರೂ ಇಲ್ಲದಂತಾಗುತ್ತದೆ.ಒಟ್ಟಾರೆ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯೂ ಸಂಪೂರ್ಣವಾಗಿ ವಿಫಲವಾಗಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತದೆ.





  • ಶಿವನಗೌಡನ ಅಂತ್ಯ ಆರಂಭ..


  • ಹೊತ್ತಿ ಉರಿದ ದೀಪ ಆರಿತು..

ಹಿರಿಯ, ಕಿರಿಯ ಅಧಿಕಾರಿಗಳು ಹಾಗೂ ಮಾಧ್ಯಮದವರ ಜೊತೆ ನಾಲ್ಕು ಮಾತನಾಡುವ ನೈತಿಕತೆ ಇಲ್ಲದ ಶಿವನಗೌಡನನ್ನು ಇಲ್ಲಿಯವರೆಗೆ ಸಂಪುಟದಲ್ಲಿ ಮಂತ್ರಿಯಾಗಿ ಇಟ್ಟುಕೊಂಡದ್ದೇ ದೊಡ್ಡ ಮಾತು. ಈ ಕುರಿತು ಸಾಮಾನ್ಯರ ಜನತೆಯ ಪರವಾಗಿ ಒಂದು ವಿಶ್ಲೇಷಣಿ.
ಕನರ್ಾಟಕದ ಅನ್ಷರಸ್ಥ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇವದುರ್ಗ ಲಾಟರಿ ಮಂತ್ರಿ ಶಿವನಗೌಡನ ತವರು ಮನೆ.ಯಾಕಪ್ಪ ಂಅ, ಏನೋ. ಂಇಇ, ಲೇ ಎಇ, ಓಡಲೇ ಅಕ, ಇನ್ನು ಇವರೆಲ್ಲರಿಗಿಂತ ಕೆಳಗಿನ ದಜರ್ೆಯ ಅಧಿಕಾರಿಗಳಂತು ಕೂಡೆಂದರೆ, ಕೂಡಬೇಕು. ನಿಲ್ಲೆಂದರೆ ನಿಲ್ಲಬೇಕು. ಇದು ಲಾಟರಿ ಶಿವನಗೌಡನ ಪೊಲಿಟಿಕಲ್ ಖದರ್! ಇದರಿಂದ ದೇವದುರ್ಗದಲ್ಲಿ ಪತ್ರಕರ್ತರು ಹೊರತಾಗಿಲ್ಲ. ಯಾರಾದರೂ ಪತ್ರಿಕೆಯವರು ವಿರುದ್ಧ ಸುದ್ದಿಯನ್ನು ಬರೆದರೆ, ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆಯನ್ನು ಕೇಳಿದರೆ, ನಾನು ಏನನ್ನು ಹೇಳುತ್ತೇನೆ. ಅದನ್ನು ಮಾತ್ರ ಬರೆದುಕೊಳ್ಳಿ. ಜಾಸ್ತಿ ವಾದ-ವಿವಾದ ಮಾಡಬೇಡಿ ಎಂದು ಗರಂ ಆಗಿಯೇ ಕಟ್ಟಪ್ಪಣೆ ನೀಡುತ್ತಾನೆ.ಪತ್ರಿಕೆಯವರನ್ನು ಎದುರುಹಾಕಿಕೊಂಡರೆ, ಏನೆಲ್ಲ ನಡೆಯಬಹುದು ಎಂಬುದಕ್ಕೆ ತನ್ನ ಇತ್ತೀಚಿನ ಲೆಟೆಸ್ಟ್ ಗ್ರಂಥಾಲಯ ಹಗರಣವೇ ಮೂಕಸಾಕ್ಷಿ.ಚುನಾವಣೆಗಿಂತ ಮುಂಚೆ ಶಿವನಗೌಡ ವೆಂಕಟೇಶ ನಾಯಕನ ರಾಜಕೀಯದಿಂದ ತಿರುಗುವ ಒಂದು ನಿಯತ್ತಿನ ಪ್ರಾಣಿ. ಅದಕ್ಕಾಗಿ ವೆಂಕಟೇಶ ನಾಯಕ ನಿಯತ್ತಿನ ಪ್ರಾಣಿಗೆ ಗೌರವ ನೀಡಬೇಕೆಂದು ಶಿವನಗೌಡನನ್ನು ತಾ.ಪಂಗೆ ಅಧ್ಯಕ್ಷ.ನನ್ನಾಗಿ ಮಾಡಿದನು. ಆ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಅನುದಾನಗಳನ್ನು ತಾಲೂಕಿನಾಧ್ಯಂತ ಈ ಮಹಾಭೂಪ ನುಂಗಿ ಹಾಕಿದ. ಇದಕ್ಕೆಲ್ಲ ಸಹಕಾರ ಬೆಂಬಲವೇ ಅವರ ತಾತ. ಆತನು ಆಗ ರಾಯಚೂರು ಎಂ.ಪಿ.ಒಟ್ಟಾರೆ ಎಲ್ಲ ಕುತಂತ್ರಗಳಿಂದ ಸಾಕಷ್ಟು ಹಣ ಮಾಡಿದ ಶಿವನಗೌಡ ತಾನು ಮುಂದೊಂದು ದಿನ ಮಂತ್ರಿಯಾಗುತ್ತೀನೆಂದು ಕನಸನ್ನುಕಂಡಿದ್ದಿಲ್ಲ. ದುರಾದೃಷ್ಟಕ್ಕೆ ರಾಜಕೀಯದ ಏರುಪೇರಿನಲ್ಲಿ ಶಾಸಕನಾಗಿ ನಂತರ ಆಪರೇಷನ್ ಕಮಲಕ್ಕೆ ಬಲಿಯಾಗಿ ಲಾಟರಿ ಮಂತ್ರಿಯು ಆದನು. ಒಮ್ಮಿಂದೊಮ್ಮೆಲೆ ಮಂತ್ರಿಯಾಗುತ್ತಿದ್ದಂತೆ ದಲಿತರು ಸಿಟ್ಟು ರಟ್ಟೆಗೆ ಬಂದರೆ, ಸೂಳೆಮಕ್ಕಳು ಚೂರು ಚೂರು ಎಂಬ ಘೋಷಣೆಯನ್ನು ಉಲ್ಟಾ ಮಾಡಿಕೊಂಡು ಶಿವನಗೌಡನ ಸಿಟ್ಟು ರಟ್ಟೆಗೆ ಬಂದರೆ ಅಧಿಕಾರಿಗಳೆಲ್ಲ ಚೂರು ಚೂರು ಎಂದು ಆಡಳಿತ ಮಾಡಲು ಶುರುಮಾಡಿದನು. ಇವನಿಗೆ ವಿರೋಧವಾಗಿ ತಾಲೂಕಿನಲ್ಲಿ ಯಾವೊಂದು ಕಾಂಗ್ರೇಸ್ ಜೆ.ಡಿ.ಎಸ್ಗಳು ಹೇಳಿಕೆಗಳನ್ನು ಸಹ ನೀಡಲಿಲ್ಲ. ದೇವದುರ್ಗದಲ್ಲಿ ಮುಖಂಡರೆನಿಸಿಕೊಂಡ ಅರ್ಧಜನ ಈಗಾಗಲೇ ಶಿವನಗೌಡನಿಗೆ ಶರಣಾಗತಿ ಹೊಂದಿದ್ದಾರೆ. ಇನ್ನುಳಿದವರು ತೆರೆಮರೆಯಲ್ಲಿಯೇ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗತೊಡಗಿದ್ದಾರೆ.ಆದರೆ, ಶಿವನಗೌಡನನ್ನು ಆಯ್ಕೆ ಮಾಡಿದ್ದು ತಾಲೂಕಿನ ಸಾಮಾನ್ಯ ಜನತೆ. ಅವರು ಹಾಕಿದ ಮತದಿಂದ 2ಬಾರಿ ಗೆದ್ದಿರುವುದು. ಅದನ್ನು ಮರೆಯಬಾರದು. ಇದೆಲ್ಲವನ್ನು ಬಿಟ್ಟು, ನಾನು ಮಂತ್ರಿ ಐದೀನಿ, ಊರ ತುಂಬಾ ಬ್ರಾಂಡಿ ಅಂಗಡಿಗಳನ್ನು ತೆಗೆದು ಬಡವರ ರಕ್ತ ಹೀರುತ್ತೀನಿ. ತಾಲೂಕಿನ ತುಂಬಾ ನಾನು ಏನನ್ನಾದರೂ ಮಾಡ್ತೀನಿ ಎಂದರೆ, ಅಂಬೇಡ್ಕರ್ ಸಾಹೇಬರು ಸಂವಿಧಾನವನ್ನೇನು ನಿಮ್ಮ ಮನೆಯಲ್ಲಿ ಬರೆದಿಲ್ಲ. ನಿನಗಾಗಿ ವಿಶೇಷ ಕಾನೂಗಳನ್ನೇನು ಮಾಡಿಲ್ಲ. ಇಲ್ಲಿ ನಿನಗೂ ಒಂದೇ ಕಾನೂನು, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು. ಅದನ್ನು ಮೊದಲು ತಿಳಿಯಬೇಕಾಗಿದೆ.ಇಲ್ಲವಾದಲ್ಲಿ ಮುಂದಿನ ದಿನ ಶಿವನಗೌಡ ಎಂಬ ಹೆಸರು ತಾಲೂಕಿನಲ್ಲಿ ಹೇಳಹೆಸರಿಲ್ಲದಂತೆ ಹೋಗುವದರಲ್ಲಿ ಅನುಮಾನವಿಲ್ಲ. (ಹೆಚ್ಚಾದದ್ದು ನುಚ್ಚು ಆಗಲೇಬೇಕು)ಇನ್ನು ದೇವದುರ್ಗ ತಾಲೂಕಿನ ಎಲ್ಲಾ ಅಧಿಕಾರಿಗಳೇ ನಿಮ್ಮ ಆತ್ಮಸಾಕ್ಷಿಗಾಗಿ ಪ್ರಾಮಾಣಿಕ ಕೆಲಸವನ್ನು ಮಾಡಿ, ಬಡಬಗ್ಗರ ಸಮಸ್ಯೆಗಳನ್ನು ಈಡೇರಿಸಿ, ಅದುಬಿಟ್ಟು ಶಿವನಗೌಡ ದಬ್ಬಾಳಿಕೆಗೆ ಹೆದರಿ, ಇಲ್ಲವೇ ಅವನು ಹಾಕುವ ಎಂಜಲಿನಿಂದ ಹೋದರೆ, ನೀವುಗಳು ಕೂಡ ಸಾಮಾನ್ಯ ಜನತೆಗೆ ದ್ರೋಹ ಬಗೆದಂತಾಗುತ್ತದೆ.ಇಂದು ರಾಜ್ಸಸಕರ್ಾರದ ಒಬ್ಬ ಮಂತ್ರಿಯೆಂದೆನಿಸಿಕೊಂಡಿರುವ ಶಿವನಗೌಡನ ಕುರಿತು ಈಗಾಗಲೇ ಹತ್ತು ಹಲವು ಪತ್ರಿಕೆಗಳು ಸುಮಾರು ಬಾರಿ ವರದಿಯನ್ನು ಮಾಡಿವೆ. ಪತ್ರಿಕೆಯ ಸುದ್ದಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸುಧಾರಣೆಯಾಗುವದಕ್ಕೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಪತ್ರಿಕೆಗಳ ಮೇಲೆ ಗೂಬೆ ಕೂರಿಸುವುದು. ನಾನು ಮಾಡುವುದೇ ಸರಿ, ಎಂದರೆ ಅದು ಮೂರ್ಖತನವಾಗುತ್ತದೆ.



ಮಾನ್ಯ ಶಿವನಗೌಡರು ಅಧಿಕಾರಕ್ಕೆ ಬಂದಾಗಿನಿಂದ ತಾಲೂಕಿನ 28ಪಂಚಾಯಿತಿಗಳ ಆಡಳಿತವನ್ನು ತಮ್ಮ ಹಿಂಬಾಲಕರ ಹಿಡಿತಕ್ಕೆ ನೀಡಿದ್ದಾರೆ! ಅದರಂತೆ ಸಚಿವರ ಕೃಪಕಟಾಕ್ಷದಿಂದ ಹಿಂಬಾಲಕರೆಲ್ಲರೂ ಪಂಚಾಯತಿಯ ಅಧಿಕಾರಿಗಳನ್ನು ಹೆದರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಲ್ಲ್ನ್ನು ಎತ್ತುತ್ತಿದ್ದಾರೆ.ಅದಕ್ಕೊಂದು ನಿದರ್ಶನವಾಗಿ, ಈ ಬಾರಿ ನಾವುಗಳು ಫಲಕನರಮರಡಿ ಗ್ರಾಮಪಂಚಾಯತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.ಫಲಕನಮರಡಿ ಎಂದರೆ, ಹೆಚ್ಚು ಕಡಿಮೆ ಎಲ್ಲರಿಗೆ ನೆನಪಿಗೆ ಬರುವುದು ಮೂಡಲಗುಂಡ ಸಿದ್ದನಗೌಡನ ಹೆಸರು. ಯಾಕೆಂದರೆ, ಈತನು 2ದಶಕಗಳ ಕಾಲ ಪಂಚಾಯತಿಯೊಂದನ್ನು ತನ್ನಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಿದಾತ. ಯಾರಾದರೂ ಅಧಿಕಾರಿಗಳು, ಸಣ್ಣಪುಟ್ಟ ರಾಜಕಾರಣಿಗಳು ಫಲಕನಮರಡಿಯ ಗಡಿಯೊಳಗೆ ನುಸುಳಬೇಕಾದರೆ, ಮೊದಲಿಗೆ ಸಿದ್ದನಗೌಡನ ಅಪ್ಪಣೆ ಪಡೆದು ಬರಬೇಕಿತ್ತು. ಇಲ್ಲವಾದರೆ, ಅನಾಹುತ ಕಟ್ಟಿಟ್ಟ ಬುತ್ತಿ. ಅಂತಹದ್ದೊಂದು ಸವರ್ಾಧಿಕಾರತ್ವ ಈ ಫಲಕನಮರಡಿಯಲ್ಲಿತ್ತು. (ಇಲ್ಲಿನ ಜನರೇನು ಅಂದು-ಇಂದು ನಿಟ್ಟುಸಿರಿನಿಂದ ಯಾರೊಬ್ಬರು ಜೀವನ ಸಾಗಿಸುತ್ತಿಲ್ಲ).ಆದರೆ,ಇಂತಹ ಪಲಕನಮರಡಿ ಗ್ರಾಮಪಂಚಾಯತಿಯೂ ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದನಗೌಡನ ಕಪಿಮುಷ್ಠಿಯಿಂದ ಜಾರಿಹೋಯಿತು. ಸಿದ್ದನಗೌಡನನ್ನು ಪಂಚಾಯತಿಯಿಂದ ದೂರವಿಡಲು ಶಿವನಗೌಡನು ಮಾಡಿದ ಎಲ್ಲ ತಂತ್ರಗಳು ಸಫಲವಾದವು. ಕೊನೆಗೆ ಶಿವನಗೌಡ ಆ ಪಂಚಾಯತಿಯಲ್ಲಿ ಬಿಜೆಪಿಯ ಝಂಡವನ್ನು ಕಟ್ಟಿ ತನ್ನ ಹಿಂಬಾಲಕನೊಬ್ಬನಿಗೆ ಆ ಪಂಚಾಯತಿಯ ಉಸ್ತುವಾರಿಯನ್ನು ನೀಡಿದ.ಈಗ ದುರಂತಕ್ಕೆ 6ತಿಂಗಳಲ್ಲಿ ಅಲ್ಲಿನ ಜನರಿಗೆ ಸಿದ್ದನಗೌಡ ಬೇಕು. ಶಿವನಗೌಡನ ಕ್ಯಾಂಡಿಡೇಟ್ಗಳು ಬೇಡ ಎನ್ನುವ ಪರಿಸ್ಥಿತಿ ಎದುರಾಗಿದೆ.ಫಲಕನಮರಡಿ ಪಂಚಾಯಿತಿಯ ಓರ್ವ ಮಹಿಳಾ ಸದಸ್ಯೆಯ ಯಜಮಾನನಾದ ವೆಂಕಟರಾಯಗೌಡ ಎಂಬಾತ ಶಿವನಗೌಡನ ಚೇಲಾ. ಈತನು ಕಳೆದ ಎಂ.ಎಲ್.ಎ ಚುನಾವಣಿಯಲ್ಲಿ ಶಿವನಗೌಡನಿಗೆ ಹಿಂದೆ ತಿರುಗಾಡಿದಾತ. ಅಂದಮಾತ್ರಕ್ಕೆ ಶಿವನಗೌಡ ಎಲ್ಲ ಅಧಿಕಾರವನ್ನು ನನಗೆ ಕೊಟ್ಟಿದ್ದಾನೆ, ನಾನೇ ಶಿವನಗೌಡನಿಗೆ ಅತಿಹೆಚ್ಚು ಮತಗಳನ್ನು ಕೊಟ್ಟದ್ದು ಹಾಗಾಗಿ ಪಂಚಾಯತಿಯಲ್ಲಿ ಏನು ನಡೆದರೂ ನನ್ನನ್ನು ಕೇಳಿ ಮಾಡಬೇಕು, ಇಲ್ಲಿ ನಾನೇ ಅಧ್ಯಕ್ಷ ಎಂದು ಆಗಾಗ ಬೊಗಳೇ ಬಿಡುತ್ತಾನೆ.ಮೂಲತಃ ವೆಂಕಟರಾಯ ಗೌಡ ಫಲಕನಮರಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಮನುಷ್ಯನಲ್ಲ. ಈತನು ಜಾಡಲದಿನ್ನಿ ಗ್ರಾಮದಿಂದ ಹೆಂಡತಿಯ ಊರಾದ ವಂದಲಿಗೆ ವಲಸೆ ಬಂದಾತ. (ಜೊತೆಯಲ್ಲಿ ಬೇರೆ ಪಕ್ಷದಿಂದ ಬಿಜೆಪಿಗೆ ಜಂಪ್ ಮಾಡಿದಾತ)ಫಲಕನಮರಡಿಯಲ್ಲಿ ಎಲ್ಲ ಬುದ್ದಿವಂತರಿಗಿಂತ ಅತಿಬುದ್ದಿವಂತಿಕೆಯನ್ನು ಪ್ರದಶರ್ಿಸುವುದು ಇವನ ಚಾಳಿ.ಕಳೆದ ಅಕ್ಟೋಬರ್ನಲ್ಲಾದ ನೆರೆಹಾವಳಿಯಲ್ಲಿ ಈತನು ಪಂಚಾಯತಿಗೆ ಬಂದಂಥಹ ಶೇ.50ರಷ್ಟು ಹಣವನ್ನು ಗುಳುಂ ಮಾಡಿದ್ದಾನೆ! ಸಂಪೂರ್ಣ ಮನೆಬಿದ್ದವರಿಗೆ ಪೂರ್ಣ ಪರಿಹಾರ ಕೊಡಿಸುವುದಾಗಿ ಅವರಿಂದ ಹಣವನ್ನು ಲಪಟಾಯಿಸಿದ್ದಾನೆ.ಹೇಳಿಕೇಳಿ ದೇವದುರ್ಗ ತಾಲೂಕು ಮೊದಲಿಗೆ ಹೇಳಿದಂಥೆ ಅನಕ್ಷರಸ್ಥ ತಾಲೂಕು. ಇಲ್ಲಿ ಕಾನೂನು ಬಲ್ಲವರಿಗಿಂತ ನಕಲಿ ಸಂಘಟನೆಗಳ ಮುಖಂಡರಿಗೆ ಹೆಚ್ಚು ಮಹತ್ವ. ಇಂತಹದರಲ್ಲಿ ಹುಚ್ಚನ ಮದುಮೆಯಲ್ಲಿ ಉಂಡವನೇ ಜಾಣ ಎಂಬಂತೆ ವೆಂಕಟರಾಯ ಗೌಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಹಗಲು ಲೂಟಿಗೆ ನಿಂತಿದ್ದಾನೆ.ಈಗಾಗಲೇ ಪಲಕನಮರಡಿ ಪಂಚಾಯತಿಯಲ್ಲಿ ಮೋಟಾರ್ ದುರಸ್ಥಿಯ ನೆಪದಲ್ಲಿ 1ಲಕ್ಷ 50ಸಾವಿರ ರೂಗಳನ್ನು ಗುಳುಂ ಮಾಡಿದ್ದಾನೆ! ಒಂದೇ ಮೋಟಾರ್ ಪಂಫ್ಗೆ ಜಿ.ಪಂನಿಂದ ಹಾಗೂ ಪಂಚಾಯತಿಯಿಂದ 2ಬಾರಿ ಬಿಲ್ಲ್ನ್ನು ಎತ್ತಿದ್ದಾನೆ. ಇನ್ನು ಮನೆಗಳ ವಿಷಯದಲ್ಲಿ ಪರಿಶಿಷ್ಟಜಾತಿಗೆ ಸೇರಿದ ರಂಗಮ್ಮ ಗಂಡ ಹಂಪಣ್ಣ, ಮಾಳಮ್ಮ ಗಂಡ ಹನುಮಂತ, ಮರಿಯಮ್ಮ ಗಂಡ ಬಾಳಪ್ಪ ಮತ್ತು ಬಿ.ಸಿ.ಎಂನ ದೇವಮ್ಮ ಗಂಡ ಹನುಮಂತ ಎಂಬುವವರ ಹೆಸರಿನ ಮನೆಗಳನ್ನು ಅದಲು ಬದಲು ಮಾಡಿ ಐದೈದು ಸಾವಿರ ದುಡ್ಡನ್ನು ಯಾರು ಮೊದಲಿಗೆ ಕೊಡುತ್ತಾರೆ ಅಂತವರಿಗೆ ಮನೆಗಳ ರೆಜಿಸ್ಟ್ರೇಷನ್ ಮಾಡಿಕೊಡಲು ಓಡಾಡುತ್ತಿದ್ದಾನೆ!ಯಾರಾದರೂ ಈತನು ಮಾಡುವ ಹಲಕಟ್ ದಂಧೆಯನ್ನು ಪ್ರಶ್ನಿಸಲು ಹೋದರೆ ಲಾಟರಿ ಮಂತ್ರಿಯ ಹೆಸರನ್ನು ಹೇಳುತ್ತಾನೆ. (ಲಾಟರಿ ಮಂತ್ರಿಗೂ ಸಹಿತ ವೆಂಕಟರಾಯಗೌಡ ಹಲಕಾ-ಸಲಕಾ ಮಾತನಾಡಿದ್ದಾನೆ. ಇದು ನಮ್ಮ ಪತ್ರಿಕೆಯ ವರದಿಗಾರರ ಕೈಗೆ ಸಿಕಿದೆ!)ಶಿವನಗೌಡನು ಸಹ ಇವನ ಕೆಲಸವನ್ನು ಯಾರಾದರೂ ಅಧಿಕಾರಿಗಳು ಮಾಡಿಕೊಟ್ಟಿಲ್ಲವೆಂದರೆ, ಅವರನ್ನು ದಬಾಯಿಸುತ್ತಾನೆ ಎಂಬ ಗುಮಾನಿ!ಇಂತಹ ವೆಂಕಟರಾಯಗೌಡನಂತವರು ಊರಿಗೆ ಒಬ್ಬರು ಇದ್ದರೆ, ಊರೇ ಉದ್ದಾರ.ಇನ್ನು ಮುಂದಿನ ದಿನಗಳಲ್ಲಿ ಹಿಂದೆ ವೆಂಕಟರಾಯ ಎತ್ತಿದ ನಕಲಿ ಬಿಲ್ಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆತನ ಅವ್ಯವಹಾರಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಈ ಎಲ್ಲಾ ಜವಾಬ್ದಾರಿ ಮಂತ್ರಿ ಶಿವನಗೌಡ, ತಾಲೂಕಿನ ಅಧಿಕಾರಿ ಮತ್ತು ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ಹೆಗಲ ಮೇಲಿದೆ. ಇಲ್ಲವಾದರೆ, ಅವೆಲ್ಲವುಗಳಿಗೆ ತಾವುಗಳೇ ಕುಮ್ಮಕ್ಕು ನೀಡುತ್ತೀರೆಂಬ ಭಾವನೆ ಜನರಲ್ಲಿ ಮೂಡುತ್ತದೆ. ಇದು ಗ್ರಾಮಸ್ಥರ ಮೊದಲ ಎಚ್ಚರಿಕೆಯ ಘಂಟೆ.











ಮಹಿಮೆ ದೇವರದ್ದು.. ದುಡಿಮೆ ಜನರದ್ದು..!


ಆ ಯೇಸುವಿನ ಕೃಪೆಯಿಂದ ಹೀರೆನಗನೂರು ಗ್ರಾಮದಲ್ಲಿ ಧರ್ಮಗುರು ಪೌಲರಾಜ್ರು ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯೊಂದನ್ನು ರೂಪಿಸಿ ಸುತ್ತ-ಮುತ್ತಲಿನ ಹಳ್ಳಿಗಳ ಜನರಿಂದ ಅಪಾರ ಮನ್ನಣೆ ಗಳಿಸಿದ್ದಾರೆ.. ಪೌಲರಾಜ್ರವರು ಮಾಡಿದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಮಾದರಿಯನ್ನು ಸಕರ್ಾರಗಳು ಮಾಡಿದರೆ, ಇಡೀ ರಾಜ್ಯದಲ್ಲಿ ನೀರಿನ ಬವಣೆ ಇರಲಾರದಂತೆ ಮಾಡಬಹುದು. ಬೇಕಿದ್ದರೆ, ನೀವೆ ಒಂದು ಸಾರಿ ಆ ಗ್ರಾಮಕ್ಕೆ ಹೋಗಿ ನೋಡಿ.
ಸಕರ್ಾರ ಮಾಡಬೇಕಾದ ಕುಡಿಯುವ ನೀರಿನ ಯೋಜನೆಯೊಂದನ್ನು ಹಿರೇನಗನೂರಿನ ಜನತೆ ಧರ್ಮಗುರುಗಳ ಮಾರ್ಗದರ್ಶನದಂತೆ ಹಗಲಿರುಳು ದುಡಿದು ಮಾಡಿಕೊಂಡಿದ್ದಾರೆ. ಜನರ ದುಡಿಮೆಯಿಂದ ನಿಮರ್ಿತವಾದ ಈ ಯೋಜನೆ ಸಕರ್ಾರವನ್ನು ನಾಚಿಸುವಂತಿದೆ ಎಂದರೆ ತಪ್ಪಾಗಲಾರದು.ಗ್ರಾಮಸ್ಥರು ವರ್ಷದ ಎಲ್ಲ ದಿನಗಳಲ್ಲಿ ನೀರನ್ನು ಬಳಕೆ ಮಾಡುವಂತಾಗಿದೆ. ಜೊತೆಯಲ್ಲಿ ಸುತ್ತಲಿನ 2ಹಳ್ಳಿಗಳು ಇವರ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿವೆ.ಶ್ರಮಜೀವಿಗಳೇ ಇಗೋ ನಿಮಗೊಂದು ವಂದನೆ
ರಾಷ್ಟ್ರಮಟ್ಟದಲ್ಲಿಯೇ ಪ್ರಥಮವಾಗಿ ಧಾಮರ್ಿಕ ಸಂಸ್ಥೆಯಿಂದ ಒಂದು ಸಕರ್ಾರದ ಸಮಸ್ಯೆಯನ್ನು ಬಗೆಹರಿಸಿಕೊಂಡ ಹಳ್ಳಿಯೆಂದರೆ, ರಾಯಚೂರು ಜಿಲ್ಲೆಯ ಹಿರೇನಗನೂರು ಗ್ರಾಮ.ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಂಡದ್ದು ಆಧುನಿಕ ಅದ್ಬುತ ಕಾರ್ಯವೇ ಸರಿ.ಸುಳ್ಳುಪವಾಡಗಳ ಬೆನ್ನಟ್ಟಿದ ನಿದರ್ಶನಗಳಿಗೆ ಈ ಒಂದು ವಿಷಯ ಸವಾಲಾಗಿ ಪರಿಣಮಿಸಿದೆ.ಹೀರೆನಗನೂರು ಗ್ರಾಮವು ಎತ್ತರಪ್ರದೇಶದಲ್ಲಿದ್ದು ಹಳ್ಳವಿಲ್ಲದೇ, ಸಿಹಿ ನೀರು ಇಲ್ಲದೇ, ಸುಮಾರು 100ವರ್ಷಗಳ ಹಿಂದೆ ಯುರೋಪಿನ ಕೈಸ್ತ ಗುರುಗಳು ಈ ಊರಿಗೆ ಬಂದು ಸುತ್ತಲಿನ ಹಳ್ಳಿಗಳಿಗೆ ತೋಟದ ಬಾವಿಯನ್ನು ಮತ್ತು ಊರಿನಲ್ಲಿ ಕುಡಿಯುವ ನೀರಿನ ಬಾವಿಗಳನ್ನು ತೊಡಿ, ಭದ್ರವಾದ ಕಟ್ಟಡವನ್ನು ಕಟ್ಟಿಸಿದ್ದಾರೆ ಅದೊಂದು ಈಗ ಇತಿಹಾಸ.ಅದೇ ಇತಿಹಾಸ ಇಂದು ಪುನರಾವರ್ತನೆಯಾಗಿದೆ ಎಂದರೆ ತಪ್ಪಗಲಾರದು. ಈ ನೂತನ ಶೈಲಿಯ ನೀರಿನ ಯೋಜನೆಯನ್ನು ಸಾವಿರಾರು ಜನ ಮೆಚ್ಚಿಕೊಂಡಿದ್ದರು. ಹಲವು ರಾಜಕೀಯ ಗಣ್ಯರು ನಾಚಿಕೆಪಟ್ಟುಕೊಂಡಿದ್ದಾರೆ. ಇನ್ನೂ ಸಕರ್ಾರಿ ಅಧಿಕಾರಿಗಳಂತು ಧನ್ಯತಾ ಭಾವದೊಂದಿಗೆ ಸಕರ್ಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೆಲ್ಲ ಕಾರಣಿಭೂತರಾದ ಪೌಲರಾಜ್ ಧರ್ಮಗುರುಗಳನ್ನು ಮಾತ್ರ ನೆನಪು ಮಾಡಿಕೊಳ್ಳದೇ ಇರುವವರಿಲ್ಲ.ಚಚರ್ಿನಲ್ಲಿ ಪ್ರಾರ್ಥನೆ ಮುಗಿದ ನಂತರ ಗುರುಗಳು ಹಲವು ಸಮಸ್ಯೆಗಳು ಮತ್ತು ಕರ್ತವ್ಯಗಳ ಬಗ್ಗೆ ಚಚರ್ೆ ಮಾಡಿದ ನಂತರ ಮುಂದಿನ ಕೆಲಸ ಆರಂಭ. 80ವರ್ಷ ಆದ ಹಿರಿಯರನ್ನು ಪಕ್ಕಕ್ಕೆ ಕೂರಿಸಿಕೊಂಡು ಅವರ ಅಪ್ಪಣೆಯಂತೆ ಎಂದಿನ ಕೆಲಸ ಅಂದೇ ಶುರುವಾಗುತ್ತಿತ್ತು. ಅವಿದ್ಯಾವಂತ ಯಜಮಾನರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಇವರುಗಳ ಅನುಭವ ಪಾಂಡಿತ್ಯವನ್ನು ಮೆಚ್ಚಿಕೊಳ್ಳುತ್ತಿದ್ದರು. ಚಿನ್ನಪ್ಪ ಯರಗುಂಟಿ, ರಾಯಪ್ಪ ಸೋಮನಮರಡಿ, ಪ್ರಕಾಶಪ್ಪ ಕಂದಳ್ಳಿ ಇವರ ಮುಂದಾಳತ್ವವು ಇಡೀ ಸಮೂಹವನ್ನು ಉರಿದುಂಬಿಸುತ್ತಿತ್ತು. ಅಬ್ರಾಹಂ ಸಲಬೂರ, ಮರಿಯಪ್ಪ ಸೋಮನಮರಡಿ, ಚಿನ್ನಪ್ಪ ಕಂದಳ್ಳಿ, ಬಾಲಪ್ರಕಾಶ, ಜೋಸೆಫ್ ಚುಕ್ಕನಟ್ಟಿ, ಆರೋಗ್ಯಪ್ಪ ಹೂವಿನಬಾವಿ ಜೊತೆಯಲ್ಲಿ ಸಮೂಹದವರು ಹಗಲಿರುಳು ಶ್ರಮಿಸಿದರು.ಟ್ಯಾಂಕ್ ನಿಮರ್ಿಸಲು ಸಲಹೆಗಳುನೆಲದ ಕೆಳಗೆ ಟ್ಯಾಂಕ್ನ್ನು ಹೇಗೆ ನಿಮರ್ಿಸುವುದು, ಅದಕ್ಕೆ ಸ್ಥಳವನ್ನು ತಯಾರು ಮಾಡುವುದು, ಬಾವಿಯನ್ನು ತೋಡಲು ಯಾವ ಜಾಗವನ್ನು ಕೊಳ್ಳುವುದು ಎಂಬ ಪ್ರಶ್ನೆಗಳು ಎದುರುದಾಗ ಊರ ಮುಂದಿನ ಜನತಾ ಪ್ಲಾಟ್ಗಳನ್ನು ಕೇಳಿ ಪಡೆದು ಅವರಿಗೆ ಸಾಧ್ಯವಾದಷ್ಟು ಹಣಕಾಸಿನ ನೆರವನ್ನು ನೀಡಿ ನಿಮರ್ಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಗುರುಗಳ ಗಮನಕ್ಕೆ ತಂದು ಈ ಟ್ಯಾಂಕ್ಗೆ ನೀರನ್ನು ಪೈಪಲೈನ್ ಮುಖಾಂತರ ತರಲು ಇಲ್ಲಿಂದ 3ಕಿಮೀ ದೂರವಿರುವ ಕಾಳೇಶ್ವರ ಕೆರೆಯ ಹತ್ತಿರ ಶರಣಪ್ಪಗೌಡ ಎಂಬುವವರ 1ಎಕರೆ ಜಮೀನನ್ನು ಖರೀದಿ ಮಾಡಿ, ಅಲ್ಲಿ ಬಾವಿಯನ್ನು ನಿಮರ್ಿಸಲು ಪ್ರಥಮ ಹಂತದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.ಟ್ಯಾಂಕ್ ನಿಮರ್ಿಸಲು ಯುವಕರ ಪಡೆಯ ಸಾಹಸ ಕೆಲಸ30ಕ್ಕೂ ಹೆಚ್ಚು ಯುವಕರು ಸಂದರ್ಭಕ್ಕೆ ತಕ್ಕಂತೆ ತಮ್ಮನ್ನು ತಾವೇ ತೊಡಗಿಸಿಕೊಂಡು ಯಾರೇ ಎಷ್ಟು ಮಾಡಿದರೂ ಹಗಲು-ರಾತ್ರಿಯೆನ್ನದೆ, ಶ್ರಮಿಸಿ ಗುರುಗಳ ಮಾತನ್ನು ಪಾಲಿಸುತ್ತಿದ್ದರು. ಒಂದು ಹೆಜ್ಜೆ ಮುಂದೆ ನಿಂತು ಕಷ್ಟಕರವಾಗಿ ಕೆಲಸ ಮಾಡಿದರು.ಪ್ರಾಣಪಾಯಗಳು, ಅನಾಹುತಗಳನ್ನು ಬದಿಗೊಟ್ಟಿ, ಬಾವಿಯನ್ನು ಹಿಟಾಚಿಯಿಂದ ಅಗೆಯುವಾಗ ನೀರನ್ನು ರಾತ್ರಿಯಿಡಿ ಮೇಲೆತ್ತುವುದು, ಎಂಜಿನ್ಗಳನ್ನು ಮೇಲಿನಿಂದ ಕೆಳಗಿಸುವುದು, ಯಂತ್ರವನ್ನು ರಿಪೇರಿಗೊಳಿಸುವುದು ಸೇರಿದಂತೆ ನಾನಾ ಕೆಲಸಕಾರ್ಯಗಳನ್ನು ಹಗಲಿರುಳು ಯುವಕರ ಪಡೆಗಳು ಮಾತು ಮೀರಿದಂತೆ ಮಾಡುತ್ತಿದ್ದವು. ಅದರ ಪ್ರತಿಫಲವಾಗಿ ಇಂದು ಟ್ಯಾಂಕ್ ಬೃಹದಕಾರವಾಗಿ ತಲೆ ಎತ್ತಿದೆ. ಒಂದು ಬಾರಿ ದೆಹಲಿಯಿಂದ ಐ.ಎ.ಎಸ್ ಅಧಿಕಾರಿಗಳ ಆಯೋಗವೊಂದು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಧರ್ಮಗುರುಗಳ ಮಾಡಿದ ಕೆಲಸವನ್ನು ಪ್ರಶಂಶಿಸಿ, ತಾವುಗಳು ಮಾಡಿದ ಕೆಲಸ ಶ್ಲಾಘನಾರ್ಹ ಎಂದು ಬಣ್ಣಿಸಿತು. ಇಂದು ಧರ್ಮಗುರುಗಳು ಮಾಡಿದ ಯೋಜನೆ ಎಲ್ಲರಿಗೆ ಮಾದರಿಯಾಗಿದೆ.ಇದೇ ಮಾದರಿಯನ್ನು ಪಕ್ಕದ ಹಳ್ಳಿಗಳು ಇಂದು ಅಳವಡಿಸಿಕೊಳ್ಳಲು ಹವಣಿಸುತ್ತಿವೆ. ಅದರಂತೆ ಸಕರ್ಾರಗಳು ಕೂಡ ನಮ್ಮ ಧರ್ಮಗುರುಗಳು ಮಾಡಿದ ಯೋಜನೆಯ ಮಾದರಿಗಳನ್ನು ಎಲ್ಲೆಡೆ ವಿಸ್ತಿರಿಸಿ ರಾಜ್ಯಕ್ಕಿರುವ ನೀರಿನ ಬವಣಿಯನ್ನು ತಪ್ಪಿಸಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.


PRAISE THE LORD
ಪ್ರಾರ್ಥನೆ & ಪರಿಶ್ರಮದ ಶಿಸ್ತಿನ ಗುರು ವಂ. ಪೌಲರಾಜ್ಶಿಸ್ತಿನ ಗುರು ವಂ, ಪೌಲರಾಜರು ಪ್ರಾರ್ಥನೆ ಮತ್ತು ಪರಿಶ್ರಮಕ್ಕೆ ಮೊದಲ ಆಧ್ಯತೆ ನೀಡುತ್ತಿದ್ದರು. 5ವರ್ಷ ಹಿರೇನಗನೂರಿಗೆ ವಿಚಾರಣಿ ಗುರುಗಳಾಗಿ ಬಂದು ಗ್ರಾಮದ ಎಲ್ಲ ಜಾತಿಯ ಮಕ್ಕಳನ್ನು ತಮ್ಮ ಖಚರ್ಿನಲ್ಲಿಯೇ ಶಾಲೆಯನ್ನು ಓದಿಸಿದ್ದಾರೆ. ಎಲ್ಲ ಸಂಘಸಂಸ್ಥೆಗಳಲ್ಲಿ, ಎಲ್ಲಾಧರ್ಮದ ಹಬ್ಬಗಳಲ್ಲಿ ಅತಿಥಿಗಳಾಗಿ ಭಾಗವಹಿಸಿ 'ದೇವರಲ್ಲಿ ವಿಶ್ವಾಸವಿರಿಸುವದಲ್ಲದೇ ಶ್ರಮಪಡುವುದು, ಹೋರಾಟ ಮಾಡುವುದು, ಸಮಾಜಸೇವೆಯಲ್ಲಿ ಜನರನ್ನು ಹೇಗೆ ಬಳಸಿಕೊಳ್ಳುವುದು, ಜೀವನದೇವರ ಚಿತ್ತ ಅದನ್ನು ಪಾಲಿಸುವುದು ನಡೆಸುವುದು ನಮ್ಮೆಲ್ಲರ ಕರ್ತವ್ಯ' ಎಂದು ಕಿರುಭಾಷಣ ಮಾಡುತ್ತಿದ್ದರು. ಸರ್ವಧರ್ಮಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾವೈಕ್ಯತೆಯೆ ಕುರಿತ ಸಂದೇಶಗಳನ್ನು ನೀಡುತ್ತಿದ್ದರು. ಇಂತಹ ವ್ಯಕ್ತಿತ್ವವನ್ನು ಹೊಂದಿದ್ದ ಧರ್ಮಗುರುಗಳು ಹಿರೇನಗನೂರಿನ ಜನರ ಪಾಲಿಗೆ ಕಣ್ಣಿಗೆ ಕಾಣುವ ದೇವರೇ ಸರಿ.ಇವರ ಸಾಧನೆಗಳು ತುಂಬಾ ಕಷ್ಟಕರವಾಗಿದ್ದವು. ಸಕರ್ಾರದ ಕಾಮಗಾರಿಗಳಿಗೆ ಲಕ್ಷಗಟ್ಟಲೇ ಖಚರ್ು ಮಾಡಿದರೂ ಅವು ಅರ್ಧಕ್ಕೆ ಮುಚ್ಚಿಹೋಗುತ್ತವೆ. ಅದರೆ, ಧರ್ಮಗುರುಗಳ ಕೆಲಸಗಳು ಹಾಗಿರಲಿಲ್ಲ. ಸಕರ್ಾರದಿಂದ ಉದ್ಯೋಗಖಾತ್ರಿಯಡಿ ಕೆಲಸವನ್ನು ಕೇಳಿ 1ಲಕ್ಷವನ್ನು ಪಡೆದು ಈ ಅದ್ಬುತ ಕಾರ್ಯವೊಂದನ್ನು ಮಾಡಿದ್ದಾರೆ. ಆದರೆ, ಈ ಯೋಜನೆಗೆ ತಲುಪಿದ ವೆಚ್ಚ ಬರೋಬರಿ 10ಲಕ್ಷ.ಧರ್ಮಗುರುಗಳು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪಂಚಾಯಿತಿಯಲ್ಲಿ ಕೆಲವೊಬ್ಬರು ಅಪಸ್ವರವನ್ನು ಎತ್ತಿದ್ದರು. ಅದ್ಯಾವದನ್ನು ಲೆಕ್ಕಸದೇ ಧರ್ಮಗುರುಗಳು ತಾವಿಡಿದ ಕೆಲಸವನ್ನು ಸಂಪೂರ್ಣವಾಗಿ ಮಾಡಿಬಿಟ್ಟರು. ಕೊನೆಗೆ ಈ ಯೋಜನೆಯ ಉದ್ಘಾಟನೆಯಂದು ಇಡಿ ಊರಿಗೆ ಊರು ಇವರ ಕೆಲಸವನ್ನು ಕೊಂಡಾಡಿ, ಉದಾರ ಮನಸ್ಸಿನಿಂದ ದೇಣಿಗೆಯನ್ನು ಸಹ ನೀಡಿತು. ಆರಂಭದಲ್ಲಿ ಅಪಸ್ವರ ಎತ್ತಿದ್ದ ಎಲ್ಲರು ತಮ್ಮ ತಪ್ಪಿಗೆ ಪ್ರಾಯಶ್ಚಿತ ಪಟ್ಟು ನಂತರ ಗುರುಗಳ ಮಾರ್ಗದರ್ಶನದಂತೆ ನಡೆದುಕೊಂಡರು.
ನೀರಾಭಕ್ತನ್..

Thursday, September 16, 2010


ಹೈದರಬಾದ್ ಕನರ್ಾಟಕ ವಿಮೋಚನೆ ದಿನಾಚರಣಿ ವೀರಗಾಥೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 562 ಚಿಕ್ಕಪುಟ್ಟ ಸಂಸ್ಥಾನಗಳೊಂದಿಗೆ ಹಿರಿಯ ಸಂಸ್ಥಾನಗಳು ಬ್ರೀಟಿಷ್ ಸಕರ್ಾರದ ಪ್ರತಿನಿಧಿಗಳಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾಲುದಾರರಾಗಿದ್ದವು. ಬ್ರೀಟಿಷ್ರ ಆಡಳಿತಕ್ಕೆ ಸಕರಾತ್ಮಕವಾಗಿ ಸಹಕಾರನೀತಿ ಕಾಲಕಾಲಕ್ಕೆ ಕಪ್ಪಕಾಣಿಕೆಗಳನ್ನು ನೀಡುತ್ತಿದ್ದ ಸಂಸ್ಥಾನಗಳಲ್ಲಿ ಹೈದರಾಬಾದ್ ಪ್ರಾಂತ್ಯದ ಸಕರ್ಾರವು ಒಂದಾಗಿತ್ತು. 224 ವರ್ಷಗಳ ಸುದೀರ್ಘ ಅವಧಿಗೆ ರಾಜ್ಯಭಾರ ನಿರ್ವಹಿಸಿದ (ಕ್ರಿ.ಶ1724ರಿಂದ1948) ಅಸಫ್ಜಹಾ ಮನೆತನದ ಮೀರ್ಕಮ್ರುದ್ದೀನ್ ಜಿನ್ ಖಿಲಿಚ್ಖಾನ್ರಿಂದ ಸ್ಥಾಪಿಸಲ್ಪಟ್ಟಿತು. 16ಜಿಲ್ಲೆಗಳನ್ನು ಹೊಂದಿದ ಹೈದರಾಬಾದ್ ಸಂಸ್ಥಾನದಲ್ಲಿ ಮರಾಠ ಭಾಷಿಕರ ಐದು ಜಿಲ್ಲೆಗಳು, ತೆಲುಗು ಭಾಷಿಕರ ಎಂಟು ಹಾಗೂ ಕನ್ನಡ ಭಾಷೆ ಮಾತನಾಡುವ ಮೂರು ಜಿಲ್ಲೆಗಳಿಂದ ಕೂಡಿತ್ತು.ಮೊಘಲ ಸಾಮ್ರಾಜ್ಯದ ಅವನತಿಯ ನಂತರ ಈ ಭಾಗ ಆಂಗ್ಲರ ಆಡಳಿತಕ್ಕೆ ಒಳಪಟ್ಟ ಅಧೀನ (ಮಾಂಡಳಿಕ) ರಾಜ್ಯವಾಗಿತ್ತು. ಆದರೂ ಈ ರಾಜ್ಯ ತನ್ನದೇ ಆದ ವಿಶಿಷ್ಟ ಅಂಚೆ, ರೈಲು ವ್ಯವಸ್ಥೆಯೊಂದಿಗೆ ಸ್ವತಂತ್ರ ಆಥರ್ಿಕ ವ್ಯವಸ್ಥೆಯನ್ನು ಹೊಂದಿತ್ತು. ಸ್ವಂತ ನಾಣ್ಯ ಮತ್ತು ನೋಟುಗಳನ್ನು ಹಾಲಿ ಎಂದು ಕರೆಯುವ ಪರಿಪಾಠವಿತ್ತು.ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಅಸಹಕಾರ ಆಂದೋಲನ, ಸ್ವದೇಶಿ ಆಂದೋಲನ, ಕ್ವಿಟ ಇಂಡಿಯಾ ಕಂಪನಿ ಮೇಲೆ ಗಂಭೀರ ಪರಿಣಾಮವನ್ನು ಬೀರಿತು. ಎರಡನೇ ಮಹಾಯುದ್ದದಲ್ಲಿ ಸೋತು ಸುಣ್ಣವಾಗಿದ್ದ ಇಂಗ್ಲೆಂಡ ಅನಿವಾರ್ಯವಾಗಿ ಭಾರತಕ್ಕೆ ಸ್ವಾತಂತ್ರ ನೀಡಲು ನಿರ್ಧರಿಸಿತು. ಆಗ ಭಾರತದಲ್ಲಿ ಬ್ರಿಟೀಷರ ಆಡಳಿತದಲ್ಲಿ 562 ಸಂಸ್ಥಾನಗಳು ನೇರವಾಗಿ ತಮ್ಮ ರಾಜಕೀಯ ಸಂಬಂಧಗಳನ್ನು ಹೊಂದಿದ್ದವು. ಭಾರತಕ್ಕೆ ಸ್ವಾತಂತ್ರ ನೀಡಲು ಬ್ರಿಟಿಷ್ ಸರಕಾರ ನಿರ್ಧರಿಸಿ ಆ ಒಪ್ಪಂದದನ್ವಯ 562 ಸಂಸ್ಥಾನಗಳು ನೂತನವಾಗಿ ನಿಮರ್ಾಣಗೊಂಡ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಬಹುದು. ಇಲ್ಲವೆ ಯಥಾಸ್ಥಿತಿ ಒಪ್ಪಂದದನ್ವಯ ಸ್ವತಂತ್ರವಾಗಿ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಯಿತು. ಇದರ ಪರಿಣಾಮವಾಗಿ ಮೂರು ರಾಜ್ಯಗಳು ತಮ್ಮದೇ ಆದ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬರಲು ನಿರ್ಧರಿಸಿದವು. ಕಾಶ್ಮೀರದ ರಾಜಾ ಪರೀಸಿಂಗ್ ರೊಂದಿಗೆ ಜುನಾಗಡ ಮತ್ತು ಹೈದ್ರಾಬಾದ ಸಂಸ್ಥಾನದ ನಿಝಾಮರು ಸ್ವತಂತ್ರರಾಗಲು ಹವಣಿಸಿ ರಾಜ ಪ್ರಭುತ್ವದ ನಿರಂಕುಶ ಆಡಳಿತವನ್ನು ಜನತೆಯ ಮೇಲೆ ಹೇರಲು ನಿರ್ಧರಿಸಿದರು.ಹೈದ್ರಾಬಾದ ಸಂಸ್ಥಾನದ ನಿಝಾಮರು 26 ಜೂನ್ 1947 ರಂದು ವಿಶೇಷ ಫರಮಾನು ಹೊರಡಿಸಿ ತಾನು ಭಾರತಕ್ಕೂ ಸೇರುವದಿಲ್ಲಾ, ಪಾಕಿಸ್ತಾನಕ್ಕೂ ಸೇರುವದಿಲ್ಲ, ಹೈದ್ರಾಬಾದ ಸಂಸ್ಥಾನ ಪ್ರತ್ಯೇಕವಾಗಿ ಸ್ವತಂತ್ರ ಸಂಸ್ಥಾನವಾಗಿರುತ್ತೇನೆ ಎಂದು ಸಾರಿದರು. ಈ ಆದೇಶದ ಪರಿಣಾಮವಾಗಿ ಹೈದ್ರಾಬಾದ ಪ್ರಾಂತದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟದ ಜಾತಿಗಳು ಭುಗಿಲೆದ್ದವು. ಹೈದ್ರಾಬಾದ ನಿಝಾಮರ ನಿರಂಕುಶ ಪ್ರಭುತ್ವವನ್ನು ಸ್ವಾತಂತ್ರ್ಯ ಸೇನಾನಿಗಳೆಲ್ಲರೂ ವಿರೋಧಿಸಿದರು.ಹೈದ್ರಾಬಾದ ಸಂಸ್ಥಾನದ ಸ್ವಾತಂತ್ರ್ಯ ಹೋರಟಗಾರರ ವಿರುದ್ಧ ಇತ್ರೆಹಾ ಮುಸಲ್ಮಾನ ಪಕ್ಷದ ಅಧ್ಯಕ್ಷ ಹಾಗೂ ಆಕರ್ಷಕ ಮಾತುಗಾರ ಲಾತೂರಿನ ಖಾಸೀಮ್ ರಝವಿ ತನ್ನದೇ ಆದ ರಝಾಕರ ಅರೆಸೈನ್ಯ ಪಡೆಯನ್ನು ನಿಮರ್ಿಸಿದ. ಭಾರತದೊಂದಿಗೆ ಹೈದ್ರಾಬಾದ ಪ್ರಾಂತ ವಿಲೀನಗೊಂಡರೆ ಮುಸಲ್ಮಾನರಿಗೆ ಅನ್ಯಾಯವಾಗುತ್ತದೆ. ಹಾಗೂ ಇಸ್ಲಾಂ ಧರ್ಮಕ್ಕೆ ಅಪಾಯ ಸಂಭವಿಸುತ್ತದೆ ಎಂದು ಸಾರಿದರು. ಹೈದ್ರಾಬಾದ ಸಂಸ್ಥಾನದ ದುರಂತ ನಾಯಕನಾಗಿ ರೂಪುಗೊಂಡ ಖಾಸೀಮ ರಝವಿ ಇಡೀ ರಾಜ್ಯಾದ್ಯಂತ ಅನ್ಯಾಯ, ಅತ್ಯಾಚಾರ, ದೊಂಬಿ, ಮಹಿಳೆಯರ ಮಾನಹರಣ ಮುಂತಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರು.ಅಖಿಲ ಭಾರತ ಕಾಂಗ್ರೇಸ್ ಪಕ್ಷ ಮತ್ತು ಆರ್ಯ ಸಮಾಜ ಕೈಗೊಂಡ ಸ್ವತಂತ್ರ ವಿರೋಧಿ ಸಂಘಟನೆಗಳ ಪ್ರಯತ್ನಗಳನ್ನು ರಜಾಕರ ಸೈನ್ಯ ಬಗ್ಗುಬಡಿಯಲು ಪ್ರಯತ್ನಿಸಿತು.ಹೈದ್ರಾಬಾದ್ನ ಸ್ವಾತಂತ್ರ ಪ್ರೇಮಿ ಹಾಗೂ ಧೀಮಂತ ಪತ್ರಕರ್ತ ಶೋಯಿಬುಲ್ಲಖಾನ್ ಸ್ವತಂತ್ರ ಹೋರಾಟಗಾರರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಸ್ವಾತಂತ್ರ್ಯಪರ ವಿಚಾರಗಳನ್ನು ತಮ್ಮ ಇಮ್ರೋಜ್ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಸಂಪಾದಕ ಶೋಯಿಬುಲ್ಲಖಾನ್ ಅಂತಿಮವಾಗಿ ರಜಾಕ್ರ ಪಿತೂರಿಗೆ ಬಲಿಯಾದದ್ದು ರಾಜಕೀಯ ದುರಂತಕ್ಕೆ ಜ್ವಲಂತ ಸಾಕ್ಷಿ.ಹೈದ್ರಾಬಾದ್ ಸಂಸ್ಥಾನದ ಉದ್ದಗಲಕ್ಕೂ ಸ್ವತಂತ್ರ ಚಳುವಳಿ ತೀವ್ರಗೊಳ್ಳುತ್ತಿದ್ದಂತೆ ಅಖಂಡ ರಾಯಚೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆ ಸಿದ್ದಗೊಳಿಸುವಲ್ಲಿ ಪಂಡಿತ ತಾರಾನಾಥರು ಪ್ರಮುಖ ಪಾತ್ರ ವಹಿಸಿದ್ದರು. ಕ್ರಿ.ಶ 1942ರಲ್ಲಿ ಡಾ ಬಿ.ಜಿ ದೇಶಪಾಂಡೆಯವರ ನಾಯಕತ್ವದಲ್ಲಿ ಕಮಾಂಡರ್ ಗಾಣದಾಳ ನಾರಾಯಣಪ್ಪ ಗೋಲಠಾಣಾದಲ್ಲಿ ಸತ್ಯಾಗ್ರಹವನ್ನು ಆರಂಬಿಸಿದರು. ಇವರೊಂದಿಗೆ ಅಡವಿರಾವ ಪತ್ನಿವಿಸ್, ಗುಡಿಹಾಳ ಹನುಮಂತರಾವ್, ಪತ್ರಕರ್ತರಾದ ಕಾಶೀರಾವ್ ಪಾಟೀಲ್, ರಾ.ಗು ಜೋಷಿ, ಪಾಂಡು ರಂಗರಾವ್ ಕಸಬೆ, ಮಟಮಾರಿ ನಾಗಪ್ಪ, ಬೆಟ್ಟದೂರು ಶಂಕರಗೌಡ, ಸದಾಶಿವ ರಾಜಪುರೋಹಿತ, ಗಂಗನಗಾರು ನಾಗಣ್ಣ, ಪಂಪಣ್ಣ ಸೇವಿನ್ ಮತ್ತು ಅಸಂಖ್ಯಾತ ಭೂಗತ ಹೋರಾಟಗಾರರು , ಮುಂತಾದವರು ತಮ್ಮ ಸಮಗ್ರ ಬದುಕನ್ನು ಸ್ವತಂತ್ರ ಚಳುವಳಿಗೆ ಸಮಪರ್ಿಸಿಕೊಂಡರು. ಲಕ್ಷಾಂತರ ಜನರ ಯಾತನೆ, ದಟ್ಟದಾರಿದ್ರತೆಯ ಮಧ್ಯೆ 15ಆಗಸ್ಟ್1947ರಂದು ಸ್ವಾತಂತ್ರ್ಯದ ಗುಲಾಬಿ ಅರಳಿತು. ಆದರೆ ದುರಂತವೆಂದರೆ, ಸ್ವತಂತ್ರ ಭಾರತದ ಹೊಂಗಿರಣಗಳು ಹೈದ್ರಾಬಾದ್ ಸಂಸ್ಥಾನದಲ್ಲಿ ಪ್ರಕಾಶಭೀರುವಲ್ಲಿ ವಿಫಲಗೊಂಡವು.ರಾಯಚೂರಿನಲ್ಲಿ ನಿಜಾಮರೇ ಭಾರತ ಒಕ್ಕೂಟಕ್ಕೆ ಸೇರಿರಿ ಎನ್ನುವ ಸತ್ಯಾಗ್ರಹವನ್ನು 7ನೇ ಆಗಸ್ಟ್ 1947ರಂದು ರಾ.ಘು ಜೋಷಿ, ಗುಡಿಹಾಳ ಹನುಮಂತರಾವ್, ದೋಮಕುಂಟಿ ನಾರಾಯಣಪ್ಪನವರು ರಾಮಶಾಲಾ ಬಯಲಿನಲ್ಲಿ ಕೈಗೊಂಡರು. ಸ್ವತಂತ್ರ ಸೇನಾನಿಗಳನ್ನು ಬಂಧಿಸಿದ ನಿಜಾಮ್ ಸಕರ್ಾರ ಅವರನ್ನು ಕಾರಾಗೃಹಕ್ಕೆ ಕಳುಹಿಸಿತು. ತ್ರಿವರ್ಣ ರಾಷ್ಟ್ರಧ್ವಜ ನಿಷೇದಿಸಲ್ಪಟ್ಟಿತು. ಇದರೊಂದಿಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿ, ಸಧರ್ಾರ್ ವಲ್ಲಭಾಯಿ ಪಟೇಲ್, ಮೌಲಾನ ಅಬ್ದುಲ್ ಕಲಾಂ ಮುಂತಾದ ಮಹಾನ್ ನಾಯಕರ ಭಾವಚಿತ್ರಗಳನ್ನು ಬಳಸುವುದು ಶಿಕ್ಷಾರ್ಹ ಅಪರಾಧವಾಗಿತ್ತು. ಒಂದೇ ಮಾತರಂ ಹಾಡುವುದು, ಗಾಂಧಿಟೊಪ್ಪಿಗೆ ಧರಿಸುವುದು, ತ್ರಿವರ್ಣ ಧ್ವಜ ಹಾರಿಸುವುದನ್ನು ರಾಜದ್ರೋಹವೆಂದೆ ಪರಿಗಣಿಸಲಾಗಿತ್ತು. ಹೈದರಾಬಾದ್ ಪ್ರಾಂತ್ಯದ ಯಾವುದೇ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸದಂತೆ ನಿಜಾಮ ಸಕರ್ಾರ ಆದೇಶವನ್ನು ನೀಡಿತು. ಸೈನಿಕ ಪಥಸಂಚಲನೆಯ ಮುಖಾಂತರ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಸಿತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಸೇನಾನಿ ಮಠಮಾರಿ ನಾಗಪ್ಪನವರು ರಾಯಚೂರಿನ ಸಾಥ್ ಕಛೇರಿಯ ಮೇಲೆ ನಿಜಾಮ ಸೈನಿಕರ ಕಣ್ಣು ತಪ್ಪಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಶೌರ್ಯವು ಸ್ವಾತಂತ್ರ್ಯ ಹೋರಾಟಕ್ಕೆ ವಿನೂತನ ಆಯಾಮವನ್ನು ನೀಡಿತು. ಮಠಮಾರಿ ನಾಗಪ್ಪನವರ ಅಪ್ರತಿಮ ಸಾಹಸದಲ್ಲಿ ಸ್ವಾತಂತ್ರ್ಯ ಸೇನಾನಿಗಳಾದ ಬಸಣ್ಣ, ಶರಭಯ್ಯಸ್ವಾಮಿ, ಚಂದ್ರಯ್ಯ ಹಾಗೂ ಪರ್ವತರೆಡ್ಡಿಯವರು ತಮ್ಮ ಜೀವದ ಹಂಗು ತೊರೆದು ತಮ್ಮ ಸ್ವಾತಂತ್ರ್ಯ ಪ್ರೀತಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ರಾಯಚೂರಿನ ಗುಬ್ಬೇರ ಬೆಟ್ಟದ ಮೇಲೆ ಯಾರೋ ಅನಾಮಿಕರು ತ್ರಿವರ್ಣ ಧ್ವಜ ಹಾರಿಸಿದ್ದರು. ಇದೇ ಸಂದರ್ಭದಲ್ಲಿ ಭಾರತ ಒಕ್ಕೂಟ ಸೇರಿರೆಂದು ಜಿ. ಮಧ್ವರಾಜ, ಲಕ್ಷ್ಮಣಾಚಾರ್ಯ, ವೈಧ್ಯ ಲಿಂಗನಕಾನ ದೊಡ್ಡಿಯ ರಾಘವೇಂದ್ರರು ಸತ್ಯಾಗ್ರಹ ಮಾಡಿ ಬಂಧನಕ್ಕೊಳಗಾದರು. ರಾಯಚೂರು ತಾಲೂಕಿನ ಹೆಂಬೆರಾಳಿನಲ್ಲಿ ಕವಿ ಶಾಂತರಸರು ತ್ರಿವರ್ಣ ಧ್ವಜ ಹಾರಿಸಿದರು. ಇದರೊಂದಿಗೆ ಕಲ್ಲೂರ, ಮಾನವಿ, ಲಿಂಗಸ್ಗೂರು, ಸಿಂಧನೂರು ಮುಂತಾದ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವತಂತ್ರ್ಯ ಚಳುವಳಿಯ ಬಿಸಿಯನ್ನು ಹೆಚ್ಚಿಸಿದರು.2ನೇ ಅಕ್ಟೋಬರ್ 1947ರಂದು ರಾಯಚೂರು ನಗರದ ನೂರಾರು ವಿಧ್ಯಾಥರ್ಿಗಳು ಸದಾಶಿವರಾವ ಪುರೋಹಿತರ ನಾಯಕತ್ವದಲ್ಲಿ ನಿಜಾಮರೇ ಭಾರತದ ಒಕ್ಕೂಟದಲ್ಲಿ ಸೇರಿರಿ ಎಂದು ಘೋಷಣೆ ಕೂಗುತ್ತಾ, ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ರೈಲ್ವೆ ನಿಲ್ದಾಣದಿಂದ ಹೊರಟರು. ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಲು ಶಾಂತಿ ಹೋರಾಟದಲ್ಲಿ ಪಾಲ್ಗೊಂಡಿದ್ದ 32ವಿಧ್ಯಾಥರ್ಿಗಳನ್ನು ಬಂಧಿಸಿ, ಉಳಿದ ಪ್ರತಿಭಟನಾಕಾರರನ್ನು ಲಾಠಿ ಚಾಜರ್್ ಮಾಡಿ ಓಡಿಸಲಾಯಿತು. ಅದರಲ್ಲಿ ಇಬ್ಬರನ್ನು ಬಿಟ್ಟು 30ಜನರನ್ನು ಶಿಕ್ಷಿಸಿ ಜೈಲಿಗೆ ಹಾಕಿದರು.ಜಿಲ್ಲೆಯಾಧ್ಯಂತ ಆಚರಿಸುತ್ತಿರುವ ಸತ್ಯಾಗ್ರಹಗಳನ್ನು ಬಗ್ಗುಬಡಿಯಲು ನಿಜಾಮ ಸಕರ್ಾರ ತನ್ನ ಸೈನಿಕರನ್ನು ರಜಾಕರನ್ನು ಹಳ್ಳಿಹಳ್ಳಿಗೆ ಕಳುಹಿಸಲಾಯಿತು. ಭಯಭೀತರಾಧ ಜನತೆ ಭಾರತ ಸಕರ್ಾರದ ಗಡಿಪ್ರದೇಶಗಳಿದ್ದ ಮಂತ್ರಾಲಯ, ಕನರ್ೂಲ್, ಗದಗ ಮತ್ತು ಹೊಸಪೇಟೆ ಮುಂತಾದ ಕಡೆ ಓಡಿದರು. ಮುದುಕರು ಮಾತ್ರ ಮನೆಯಲ್ಲಿಯೇ ವಾಸಿಸುತ್ತಿದ್ದರು. ಲಕ್ಷಾಂತರ ಸಂಖ್ಯೆಯ ನಿರಾಶ್ರಿತರು ಭಾರತ ಸಕರ್ಾರದ ಗಡಿಗಳಲ್ಲಿ ಆಶ್ರಯ ಪಡೆದರು. ಇಂತಹ ಪರಿಸ್ಥಿತಿಯಲ್ಲಿ ಖಾಸೀಂರಜವಿ ನೇತೃತ್ವದ ರಜಾಕ್ರು ಹಿಂಸೆ, ದಬ್ಬಾಳಿಕೆ, ಸ್ತ್ರೀಯರ ಮೇಲೆ ಅತ್ಯಾಚಾರ ಮುಂತಾದ ದುಷ್ಕೃತ್ಯಗಳಲ್ಲಿ ತೊಡಗಿದರು. ಇದನ್ನು ಪ್ರತಿಭಟಿಸಿದ ಸ್ವಾತಂತ್ರ್ಯ ಸೇನಾನಿಗಳು ಶ್ವೇತಪತ್ರ ಹೊರಡಿಸಿ ನಿಜಾಮರಿಗೆ ಎಚ್ಚರಿಕೆ ಕೊಟ್ಟರೂ ಯಾವುದೇ ರೀತಿಯ ಫಲಕಾರಿಯಾಗಲಿಲ್ಲ.ನಿಜಾಮ ಸಕರ್ಾರದ ಹಿಂಸೆ ತಾಳಲಾರದೇ ತರುಣರೆಲ್ಲರೂ ಸೇರಿ ಕಾಂಗ್ರೇಸ್ ಪಕ್ಷದ ಸಹಾಯ ಪಡೆದು ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಶಿಬಿರಗಳನ್ನು ಆರಂಭಿಸಿದರು. ಮಂತ್ರಾಲಯದಲ್ಲಿ ಗುಡ್ಡದ ರಾಘವೇಂದ್ರರಾಯರು, ತುಂಗಭದ್ರಾದಲ್ಲಿ ಸಂಗಮ ಹುಚ್ಚಾಚಾರ ಮಾಸ್ತಾರ, ಚಳ್ಳೆಕೂಡ್ಲೂರಿನಲ್ಲಿ ಬೆಟ್ಟದೂರು ಶಂಕರಗೌಡರು ಶಿಬಿರಗಳನ್ನು ಸ್ಥಾಪಿಸಿ ತರುಣ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ಸಕರ್ಾರ ಸಂಗ್ರಹಿಸಿದ್ದ ಮಾಲ್ಲು ಜಾರಿ ಹಾಗೂ ಲೇವಿ ಧವಸಧಾನ್ಯಗಳನ್ನು ಲೂಟಿ ಮಾಡಿದರು. ಹೀಗಿನ ಆಕ್ಟ್ರಾಯಿ ನಾಕಾಗಳಂತೆ ಕಾರ್ಯನಿರ್ವಹಿಸುತ್ತಿದ್ದ ಕರೋಡಗಿರಿಗಳನ್ನು ಸುಟ್ಟುಹಾಕಿದರು.ಪೊಲೀಸ್ ಠಾಣಿಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಪ್ರತಿಹಳ್ಳಿಗೆ ತೆರಳಿ ಜನರಿಗೆ ಹಪ್ತೆ,(ಭೂಕಂದಾಯ) ಮತ್ತು ಲೇವಿಗಳನ್ನು ಸಕರ್ಾರಕ್ಕೆ ಸಲ್ಲಿಸದಂತೆ ಜನರನ್ನು ಪ್ರಚೋಧಿಸಿ ಅಸಹಕಾರ ಆಂಧೋಲನವನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಗಡಿಭಾಗದಲ್ಲಿ ಆಯೋಜಿಸಿದ್ದ ಶಿಬಿರಗಳು ನಿಣರ್ಾಯಕ ಪಾತ್ರ ವಹಿಸಿದವು.ಸ್ವಾತಂತ್ರ್ಯ ಸೇನಾನಿಗಳು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ತುಂಗಭದ್ರಾ ಪೊಲೀಸ್ ಚೌಕಿಯ ಮೇಲೆ ದಾಳಿ ಮಾಡಿದರು. ಸಿಂಧನೂರು ತಾಲೂಕಿನ ಹೆಡಗಿನಾಳ ಗ್ರಾಮದಲ್ಲಿ ಹಫ್ತೆ ವಸೂಲಿಗೆ ಬಂದಿದ್ದ ತಹಸಿಲ್ದಾರರ ಟೈರಿಗೆ ಬೆಂಕಿ ಹಚ್ಚಿದರು. ಎಡಿವಾಳ ಕರೋಡಗಿರಿ ನಾಕಾಕ್ಕೆ ಬೆಂಕಿಇಟ್ಟು ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ಗಾಣದಾಳ, ಮದ್ಲಾಪೂರಗಳ ಕರೋಡಗಿರಿ ನಾಕಾಗಳನ್ನು ಸುಟ್ಟುಹಾಕಿದರು. ರಾಯಚೂರಿನ ನೀರು ಸರಬರಾಜಿನ ಪಂಪ್ಹೌಸ್ಗೆ ದಾಳಿ ಮಾಡಿದಾಗ ಎಂ. ನಾಗಪ್ಪ, ಪಿ. ವೀರಣ್ಣ, ಬಸವರಾಜಸ್ವಾಮಿ, ಈಶ್ವರರಾಜ, ಮುಂತಾದವರನ್ನು ಮುನ್ನಚ್ಚರಿಕೆಯ ಕ್ರಮವಾಗಿ ಬಂಧಿಸಲಾಯಿತು. ಹೀಗೆ ಈ ಭಾಗದಲ್ಲಿ ಹೋರಾಟದ ನೂರಾರು ಪ್ರಕರಣಗಳು ದಾಖಲಾದವು. ಸ್ವಾತಂತ್ರ್ಯವನ್ನೇ ಗುರಿಯಾಗಿಸಿಕೊಂಡಿದ್ದ ಸ್ವತಂತ್ರ್ಯ ಸೇನಾನಿಗಳು ತಮ್ಮ ಜೀವವನ್ನು ಪಣವಾಗಿಟ್ಟಿದ್ದು ಸ್ವಾತಂತ್ರ್ಯ ಹೋರಾಟ ಕಂಡ ರೋಮಾಂಚನಕಾರಿ ದಾಖಲೆಯಾಗಿದೆ. 12 ಅಕ್ಟೋಬರ್ 1947ರಂದು ಗುಂಜಳ್ಳಿಯ ಭೀಮಸೇನರಾವ್ ಕುಲಕಣರ್ೀಯವರು ಪೊಲೀಸ್ಗೌಡ, ಮಾಲೀಗೌಡ, ಕುಲಕಣರ್ಿಯವರನ್ನೆಲ್ಲ ಒಂದೆಡೆ ಸೇರಿಸಿ ರಾಜೀನಾಮೆ ನೀಡಿ ನಿಜಾಮ ಸಕರ್ಾರದ ವಿರುದ್ದ ಹೋರಾಟಕ್ಕೆ ಅಣಿಗೊಳಿಸಿದರು.ಹೈದರಾಬಾದ್ ಸಂಸ್ಥಾನದ ಉದ್ದಗಲಕ್ಕೂ ನಿಜಾಮಶಾಹಿ ವಿರುದ್ಧದ ಹೋರಾಟ ತೀವ್ರಗೊಂಡಾಗ ಅಸಹಾಯದಾಯಕ ನಿಜಾಮರು ಇಂಗ್ಲೇಂಡಿನ ಪ್ರಧಾನಿ ಸರ್ ವಿನಸ್ಟನ್ ಚಚರ್ಿಲ್ರ ಸಹಾನುಭೂತಿ ಗಳಿಸಲು ಪ್ರಯತ್ನಿಸಿ ಪಾಕಿಸ್ತಾನದೊಂದಿಗೆ ಮೈತ್ರಿ ಮಾಡಿಕೊಂಡರು. ಪೋಚರ್್ಗೀಸರೊಂದಿಗೆ ರಾಜಕೀಯ ಸಂಬಂಧ ಬೆಳೆಸಿ ಭಾರತದ ಮೇಲೆ ಯುದ್ದವನ್ನು ಮಾಡಲು ಸನ್ನಧ್ದರಾದರು. ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವದರೊಂದಿಗೆ ಹೈದರಾಬಾದ್ನಲ್ಲಿ ಶಸ್ತ್ರಾಸ್ತ್ರದ ಕಾಖರ್ಾನೆಯನ್ನು ಆರಂಭಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಭಾರತ ಸಕರ್ಾರದ ಗೃಹಮಂತ್ರಿ ಹಾಗೂ ಉಕ್ಕಿನಮನುಷ್ಯ ಖ್ಯಾತಿಯ ಸಧರ್ಾರ ವಲ್ಲಾಭಾಯಿ ಪಟೇಲ್ರು 13 ಸೆಪ್ಟೆಂಬರ್ 1948ರಂದು ಪೊಲೀಸ್ ಆ್ಯಕ್ಷನ್ (ಆಪರೇಷನ್ ಪೊಲೋ) ಕೈಗೊಂಡಿತು. ಹೈದರಾಬಾದ್ ಪ್ರಾಂತ್ಯವನ್ನು ವಿವಿಧ ದಿಕ್ಕುಗಳಿಂದ ಆಕ್ರಮಿಸಿದ ಭಾರತೀಯ ಸೈನ್ಯ ಹೈದರಬಾದಿನ ಮೇಲೆ ಮುತ್ತಿಗೆ ಹಾಕಿತು. ಭಾರತದ ಪ್ರಧಾನ ದಂಡನಾಯಕ ಲೆ.ಜ ಮಹಾರಾಜಸಿಂಗ್ರ ನೇತೃತ್ವದಲ್ಲಿ ಮೇಜರ್ ಜನರಲ್ ಡಿ.ಎಸ್ ಬ್ರಾ ಜನರಲ್ ಜಯಂತನಾಥ ಚೌದ್ರಿ, ಜನರಲ್ ಎ.ಎ.ರುದ್ರಬ್ರಿಗೇಡಿಯರ್, ಶೋಯದತ್ತ್ಸಿಂಗ್ ಮೊದಲಾದವರು ಭಾರತೀಯ ಸೈನ್ಯವನ್ನು ಮುನ್ನಡೆಸಿದರು. ಭಾರತೀಯ ಸೈನ್ಯವನ್ನು ನಿಜಾಮ ಸಕರ್ಾರದ ಸೈನ್ಯ ಪಠಾಣರ ಪಡೆ, ರಜಾಕಾರರು ಇಲ್ಲಿಯೂ ಅಡೆ-ತಡೆಯೊಡ್ಡಲಿಲ್ಲ. ಆದರೆ, ವಳದುರ್ಗ ಮತ್ತು ರಾಯಚೂರು ಜಿಲ್ಲೆಯ ಮುನೀರಾಬಾದ್ನಲ್ಲಿ ಚಿಕ್ಕಪ್ರಮಾಣದ ಯುದ್ದವನ್ನು ಎದುರಿಸಿದ ಸೈನಿಕರು ಭಾರತೀಯ ಸೈನ್ಯಕ್ಕೆ ಅಂತಿಮವಾಗಿ ಸೋತು ಶರಣಾದರು.ಕೇವಲ ನಾಲ್ಕು ದಿನಗಳ ಸೈನ್ಯಾಚರಣೆಯಲ್ಲಿ ಹೈದರಬಾದ್ ನವಾಬನು ಭಾರತೀಯ ಸೈನ್ಯಕ್ಕೆ ಶರಣಾಗಿ ಭಾರತದ ಒಕ್ಕೂಟದಲ್ಲಿ ಸೇರುವ ಒಪ್ಪಂದಕ್ಕೆ 17ಸೆಪ್ಟೆಂಬರ್ 1948 ಸಂಜೆ 05ಗಂಟೆಗೆ ಸಹಿ ಹಾಕಿದರು. ಮಾರನೇಯ ದಿನ 18 ಸೆಪ್ಟೆಂಬರ್ 1948ರ ಮುಂಜಾನೆಯ ಸೂರ್ಯಕಿರಣಗಳೊಂದಿಗೆ ಹೈದ್ರಾಬಾದ್ ಪ್ರಾಂತ್ಯವು ಭಾರತ ಸಕರ್ಾರದಲ್ಲಿ ವಿಧಿವತ್ತಾಗಿ ವೀಲಿನಗೊಂಡಿತು. ಆಗ ರಾಯಚೂರು ಜಿಲ್ಲೆಯ ಜನತೆ ಅಖಂಡ ಭಾರತದ ಅವಿಭಾಜ್ಯ ಅಂಗವಾಗಿ ಮೆರೆಯುವ ಸೌಭಾಗ್ಯದ ಸಂತಸದ ಕ್ಷಣಗಳನ್ನು ಅನುಭವಿಸಿದರು.ಹೈದರಬಾದ್ ಸಂಸ್ಥಾನದ ವಿಮೋಚನೆಯಲ್ಲಿ ಹೋರಾಟ ಕೇವಲ ನಾಯಕರಿಗೆ ಮಾತ್ರ ಸೀಮಿತಗೊಳ್ಳದೇ ಸಾಮಾನ್ಯರು ಮತ್ತು ಅವರ ಪರಿವಾರ ಪಾಲ್ಗೊಂಡಿರುವುದು ಭಾರತೀಯ ಚರಿತ್ರೆ ಕಂಡ ರೋಮಾಂಚನಕಾರಿ ಅಧ್ಯಾಯ. ಡಾಮಹಾವೀರ ಕಲ್ಯಾಣಕಾರಿ, ಫೀರೋಜಿರಾವ್ ನಿಜಾಮಕಾರಿ, ದೇವೂಜಿರಾವ್ ಮಿಧಾರಕೇರಿ, ರಾಂಪ್ರಕಾಶ ಮಲ್ಕಾರಿ, ಮನೋಜರಾವ್ ಮಲ್ಕಾರಿ, ನರಸೋಜಿರಾವ್ ನಿಜಾಮಕಾರಿ, ನರಸೋಜಿರಾವ್ ಜಗತಕಾರಿ, ಮೋಚಿರಾವ್, ತಿಪ್ಪೋಜಿರಾವ್ ಕಲ್ಯಾಣಕಾರಿ, ಪಂಡಿತ ಮಾಣಿಕ್ಯರಾವ್, ರಾಮೋಜಿರಾವ್ ಕಲ್ಯಾಣಕಾರಿ, ಸ್ವಾಮಿ ಸುಧಾನಂದ ಜೀ ಮುಂತಾದವರ ಅಮರತ್ಯಾಗ, ಬಲಿದಾನಗಳ ಫಲವಾಗಿ ನಾವೀಂದು ಸ್ವಾತಂತ್ರ್ಯದ ಸ್ವಚ್ಛಂದ ಗಾಳಿಯಲ್ಲಿ ಉಸಿರಾಡಲು ಸಾಧ್ಯವಾಗಿದೆ.16-9-1948ರಂದು ರಜಾಕಾರರು, ಪಠಾಣರು ರಾಯಚೂರಿನ ಬಜಾರಿನಲ್ಲಿ ನುಗ್ಗೇ ವ್ಯಾಪಾರಿಗಳನ್ನು ಲೂಟಿ, ಕೊಲೆ ಮುಂತಾದ ವಿಧ್ವಾಂಸಕಾರಿ ಕೃತ್ಯಗಳನ್ನು ಆರಂಭಿಸಿದರು. ಎರಡು ದಿನಗಳಲ್ಲಿ 50ಸಾವಿರ ಮೊತ್ತದ ಹಣವಸ್ತುಗಳು ಲೂಟಿಯಾದವು.ಮುನ್ನೂರು ನಾಗಣ್ಣ, ತಿಮ್ಮಾಪೂರ ಪೇಟೆಯ ದಾಸಪ್ಪ, ಕೊಂದಡ್ಡಿ ನರಸಣ್ಣ ಮತ್ತು ಅವರ ಸಂಗಡಿಗರು ರಾಯಚೂರಿನ ಜನರನ್ನೆಲ್ಲ ಕೂಡಿಕೊಂಡು ಲೂಟಿಯನ್ನು ತಡೆಯಲು ಪ್ರಯತ್ನಿಸಿದರು. ನಾಲ್ಕುಜನರನ್ನು ಕೊಂದ ರಜಾಕಾರರು ಅವರ ತಲೆಗಳನ್ನು ಬೆಟ್ಟದ ಮೇಲೆ ತೂಗುಹಾಕಿದರು. ರಾಯಚೂರು ಜಿಲ್ಲೆಯಾಧ್ಯಂತ ರೂಪಿಸಿದ್ದ ಹೋರಾಟದಲ್ಲಿ ಹಲವಾರು ಹೃದಯವಂಥ ಮುಸ್ಲಿಂ ಪರಿವಾರದವರು ಹಿಂದೂ ಸ್ವಾತಂತ್ರ್ಯ ಸೇನಾನಿಗಳನ್ನು ರಕ್ಷಿಸುವುದು ಮಾನವೀಯತೆಗೆ ಸಂದ ಗೌರವವಾಗಿದೆ. ಮಾನವ ಚರಿತ್ರೆಯಲ್ಲಿ ವ್ಯಕ್ತಿಗಿಂತ ಸಮಾಜ ಶ್ರೇಷ್ಠ. ಸಮಾಜಕ್ಕಿಂತ ಧರ್ಮ ಶ್ರೇಷ್ಠ. ಧರ್ಮಕ್ಕಿಂತ ರಾಷ್ಟ್ರ ಶ್ರೇಷ್ಠ ಎನ್ನುವುದು ಮತ್ತೊಮ್ಮೆ ರುಜುವಾತುಗೊಂಡಿತು. ಇಷ್ಟೆಲ್ಲ ಸಮಸ್ಯೆ ಹೋರಾಟಗಳ ಮಧ್ಯೆ ಅಂದಿನ ಡೆಪ್ಯೂಟಿ ಕಲೆಕ್ಟರ್ ಆಗಿದ್ದ ರಾಮಪ್ಪನವರು ಜಿಲ್ಲೆಯಾಧ್ಯಂತ ಶಾಂತಿ ಮತ್ತು ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಕೈಗೊಂಡರು.17 ಸೆಪ್ಟೆಂಬರ್ 1948ರ ಸಂಜೆ 5ಗಂಟೆ ಹೈದ್ರಾಬಾದ್ ಸಂಸ್ಥಾನದ ನಿಜಾಮರು ಭಾರತ ಸಕರ್ಾರದ ಒಕ್ಕೂಟದಲ್ಲಿ ಸೇರುವ ಇಂಗಿತ ವ್ಯಕ್ತಪಡಿಸಿ ಒಪ್ಪಂದಕ್ಕೆ ಸಹಿ ಹಾಕುವದರೊಂದಿಗೆ 224ವರ್ಷಗಳ ಅಸಫಜಹಾ ಮನೆತನದ ಆಡಳಿತ ಕೊನೆಗೊಂಡು ಇತಿಹಾಸದ ಪುಟಗಳನ್ನು ಸೇರಿತು.ಅಯ್ಯಪ್ಪ ತುಕ್ಕಾಯಿ

Thursday, August 19, 2010

ಯಡಿಯೂರಪ್ಪನಿಗೆ ಕಾನೂನಿನ ಪೆಟ್ಟು!ಶಾಸಕ ನಂದೀಶರೆಡ್ಡಿಗೆ ಲತ್ತಿಪೆಟ್ಟು!!




ಯಡಿಯೂರಪ್ಪನಿಗೆ ಕಾನೂನಿನ ಪೆಟ್ಟು!ಶಾಸಕ ನಂದೀಶರೆಡ್ಡಿಗೆ ಲತ್ತಿಪೆಟ್ಟು!!ಅತೀ ಕಡಿಮೆ ಅಧಿಕಾರಾವಧಿಯಲ್ಲಿ ಅತೀ ಹೆಚ್ಚು ಅಡ್ನಾಡಿ ಕೆಲಸಗಳನ್ನು ಮಾಡಿದ ಮಹಾತ್ಸಾಧನೆಗೆ ಏನಾದರೂ ಒಂದು ಪ್ರಶಸ್ತಿ ಅಂತ ಇಟ್ಟಿದ್ದಿದ್ದರೆ ಪ್ರಾಯಶಃ ಅದು ಕನರ್ಾಟಕದ ಇಂದಿನ ಬಿಜೆಪಿ ಸಕರ್ಾರಕ್ಕೆ ಸಿಗುತ್ತಿತ್ತೇನೋ? ರಾಜ್ಯದಲ್ಲಿ ಬಿಜೆಪಿಗಳು ಮಾಡಿರುವ ಕೆಲಸಗಳೇ ಹಾಗಿವೆ. ಮೊದಲ ಬಾರಿಗೆ ಅವು ಅಧಿಕಾರಕ್ಕೇರಿವೆ. ಇನ್ನೊಂದ್ಸಾರಿ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಭರವಸೆ ಇದ್ದಿದ್ರೆ ಈಗ ಒಂದಿಷ್ಟು ಲೂಟಿ ಹೋಡಿಯೋಣ, ಮುಂದೆ ಮತ್ತೆ ಅಧಿಕಾರಕ್ಕೆ ಬಂದಾಗ ಇನ್ನೊಂದಿಷ್ಟು ಲೂಟಿ ಹೊಡೆಯೋಣ ಅಂತನಾದ್ರೂ ಯೋಚಿಸುತ್ತಿದ್ದವು. ಆದರೆ ಮತ್ತೆ ಅಧಿಕಾರಕ್ಕೇರುತ್ತೇವೆ ಅನ್ನೋ ಭರವಸೆಯೇ ಅವರಿಗೇ ಇಲ್ಲ. ತಾವು ಈ ಎರಡು ವರ್ಷಗಳಲ್ಲಿ ಮಾಡಿರುವ ಘನಂದಾರಿ ಕೆಲಸಗಳನ್ನು ನೋಡಿ ಜನ ಛೀ... ಥೂ... ಅಂತ ಹಾದಿಬೀದಿಯಲ್ಲಿ ಉಗಿಯುತ್ತಿರುವುದು ಅವರಿಗೂ ಗೊತ್ತಿದೆ. ಮುಂದೆಂದೂ ಮತ್ತೆ ತಮ್ಮನ್ನು ಜನ ಅಧಿಕಾರಕ್ಕೆ ತರುವುದಿಲ್ಲ ಎಂಬುದು ಅವರಿಗೆ ಖಾತ್ರಿಯಾಗಿಬಿಟ್ಟಿದೆ. ಹಾಗಾಗಿ, ಈಗ ಅಧಿಕಾರ ಇರುವಾಗಲೇ ಎಷ್ಟು ಸಾಧ್ಯವೋ ಅಷ್ಟು ರಾಜ್ಯದ ಸಂಪತ್ತನ್ನು ಲೂಟಿ ಹೊಡೆದುಕೊಂಡು ಹೋಗಬೇಕು ಎಂಬ ತೀಮರ್ಾನಕ್ಕೆ ಅವರು ಬಂದುಬಿಟ್ಟಿದ್ದಾರೆ. ಪರಿಣಾಮವಾಗಿಯೇ ಎಲ್ಲಿ ಕೈಯಿಟ್ಟರೂ ಒಂದೊಂದು ಹಗರಣಗಳು ಕೈಗೆಟುಕುತ್ತವೆ. ಬಿಜೆಪಿಯ ಯಾರ ಬಳಿ ಹೋದರೂ ಆತ ತಿನ್ನಬಾರದ್ದನ್ನೆಲ್ಲಾ ತಿಂದು ಮೈಕೈ ಹೊಲಸು ಮಾಡಿಕೊಂಡು ಗಬ್ಬು ವಾಸನೆ ಹೊಡೆಯುತ್ತಿರುತ್ತಾನೆ. ಇವರ ಆಟಾಟೋಪಗಳಿಗೆ ಅಡೆತಡೆಯೊಡ್ಡುವ, ಇವರೆಲ್ಲಾ ಲೂಟಿಗಳಿಗೆ ಅಡ್ಡಲಾಗಿ ನಿಲ್ಲುವ, ಇವರ ಆಜ್ಞೆಗಳನ್ನು ತಲೆಬಾಗಿ ಪಾಲನೆ ಮಾಡದ ಅಧಿಕಾರಿಗಳನ್ನು ಪುಟ್ಬಾಲಿನಂತೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಗರ್ಾವಣೆ ಮಾಡುತ್ತಲೇ ಹೋಗುತ್ತಾರೆ. ಅವರ ಜಾಗಕ್ಕೆ ತಮಗೆ ನಾಯಿಯಂತೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಅಧಿಕಾರಿಗಳನ್ನು ತಂದು ಕೂರಿಸಿಕೊಳ್ಳುತ್ತಾರೆ (ಬಳ್ಳಾರಿಯ ಜಿಲ್ಲಾಧಿಕಾರಿ ಶಿವಪ್ಪನಂತವರು).ಇತ್ತೀಚೆಗೆ ಬೆಂಗಳೂರಿನ ಕೆ.ಆರ್.ಪುರ ವ್ಯಾಪ್ತಿಯಲ್ಲಿರುವ ಕ್ಯಾಲಸನಹಳ್ಳಿಯಲ್ಲಿ ಬಿಜೆಪಿಯ ಭೂಗಳ್ಳ ಶಾಸಕ ನಂದೀಶ್ ರೆಡ್ಡಿ ಸ್ವಾತಂತ್ರ್ಯ ಯೋಧರಿಗೆ ಮೀಸಲಿಟ್ಟ ಜಮೀನನ್ನು ನುಂಗಿ ನೀರು ಕುಡಿಯಲು ಹವಣಿಸಿದ್ದು ಹಾಗೂ ಅದಕ್ಕೆ ಪ್ರತಿರೋಧ ಒಡ್ಡಿದ ಅಲ್ಲಿನ ತಹಶೀಲ್ದಾರ್ ಆಶಾ ಪವರ್ೀನ್ಗೆ ಕೊಡಬಾರದಷ್ಟು ಕಿರುಕುಳ ಕೊಟ್ಟಿದ್ದು, ಕೊನೆಗೆ ಆಕೆಯನ್ನು ವಗರ್ಾವಣೆ ಮಾಡಿ ಕೋಟರ್ಿನಿಂದ, ಜನರಿಂದ ಕ್ಯಾಕರಿಸಿ ಉಗಿಸಿಕೊಂಡಿದ್ದು ಇದೆಲ್ಲಾ ಬಿಜೆಪಿಗಳು ಎರಡು ವರ್ಷಗಳಿಂದ ಚಾಚೂ ತಪ್ಪದೇ ಮಾಡಿಕೊಂಡು ಬಂದಿರುವ ಅಡ್ನಾಡಿ ಕೆಲಸಗಳ ಸಾಲಿಗೆ ಮೊತ್ತೊಂದು ಸೇರ್ಪಡೆಯಷ್ಟೆ. ಅದು ಅವರ ಘನಂದಾರಿ ಕೆಲಸದ ಆರಂಭವೂ ಅಲ್ಲ, ಅಂತ್ಯವೂ ಅಲ್ಲ.ಅದು ಪ್ರಾರಂಭವಾಗಿದ್ದು ಹೀಗೆ...ಬೆಂಗಳೂರಿನ ಕೆ.ಆರ್.ಪುರಂನ ಕ್ಯಾಲಸನಹಳ್ಳಿಯ ಸವರ್ೇ ನಂಬರ್ 11ರಲ್ಲಿ 12 ಎಕರೆ ಸಕರ್ಾರಿ ಜಮೀನಿದೆ. ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಅದರ ಈವೊತ್ತಿನ ಮಾಕರ್ೆಟ್ ಬೆಲೆ ಏನಿಲ್ಲವೆಂದರೂ ಎಪ್ಪತ್ತು ಕೋಟಿ. ಅಸಲಿಗೆ ಆ ಜಮೀನನ್ನು ಕೆಲವು ಸ್ವಾತಂತ್ರ್ಯ ಯೋಧರಿಗೆ ಹಂಚಿಕೆ ಮಾಡಿ ರಾಜ್ಯ ಸಕರ್ಾರ 1966ರಲ್ಲಿಯೇ ಆದೇಶ ಹೊರಡಿಸಿತ್ತು. ಅದರ ಪ್ರಕಾರ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಉತ್ತರಕನ್ನಡ ಜಿಲ್ಲೆಯ ಕಡೆಯವರಾದ ವಿಠಲ್ರಾವ್, ವೆಂಕಟಾಚಲಮ್ಮ, ಸಿದ್ದಣ್ಣ, ಸುಬ್ಬರಾವ್, ಕೃಷ್ಣಮೂತರ್ಿ, ಲಕ್ಷ್ಮೀ ಎಂಬುವವರು ಈಗಾಗಲೇ ಕ್ಯಾಲಸನಹಳ್ಳಿಯ ಸಕರ್ಾರಿ ಗೋಮಾಳ ಭೂಮಿಗೆ ಹಣವನ್ನು ಪಾವತಿಸಿ ಮಾಲೀಕರಾಗಿದ್ದರೆ ಇನ್ನುಳಿದಂತೆ ರಾಮಕೃಷ್ಣಹೆಗಡೆಯ ಸಂಬಂಧಿ ಜಿ.ಎಸ್ ಹೆಗಡೆ ಅಂಕೋಲಕರ್, ಗೋವಿಂದ್, ಎಸ್.ಎಸ್ ಹೆಗಡೆ ಎಂಬುವವರಿಗೆ ತಲಾ 4 ಎಕರೆಯಂತೆ ಮಂಜೂರಾಗಿದ್ದರೂ ಅವರ್ಯಾರೂ ಇತ್ತ ಹೆಜ್ಜೆ ಹಾಕಿರಲಿಲ್ಲ. ಇದು ಹೆಚ್ಚೂ ಕಡಿಮೆ ನಲ್ವತ್ತೈದು ವರ್ಷಗಳ ಹಿಂದಿನ ಕತೆ. ಆಗ ಬೆಂಗಳೂರು ಈಗಿನಂತಿರಲಿಲ್ಲ. ಕೆ.ಆರ್.ಪುರದ ಈ ಜಾಗವೂ ಒಂದು ರೀತಿಯಲ್ಲಿ ಕಾಡಿನಂತಿತ್ತು. ಹಾಗಾಗಿ, ಫಲಾನುಭವಿ ಸ್ವಾತಂತ್ರ್ಯ ಯೋಧರು ಈ ನಲ್ವತ್ತು ವರ್ಷ ಅತ್ತ ಹೆಜ್ಜೆಯನ್ನೂ ಹಾಕಿರಲಿಲ್ಲ. ಈಗ ಬೆಂಗಳೂರು ಅಗಾಧವಾಗಿ ಬೆಳೆದು ನಿಂತಿದೆ. ಅಡಿ ಅಡಿ ನೆಲಕ್ಕೆ ಚಿನ್ನದ ಬೆಲೆ ಬಂದುಬಿಟ್ಟಿದೆ. ರಿಯಲ್ ಎಸ್ಟೇಟ್ ಬಿಸಿನೆಸ್ ಅತ್ಯಂತ ಲಾಭದಾಯಕ ವ್ಯವಹಾರವಾಗಿ ಮಾರ್ಪಟ್ಟಿದೆ. ಅದೇ ವೇಳೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಕರ್ಾರಿ ಜಮೀನನ್ನು ನುಂಗಿ ನೀರು ಕುಡಿದು ಕೋಟ್ಯಾಧಿಪತಿಗಳಾಗಿರುವ ದೊಡ್ಡ ಭೂಗಳ್ಳರ ಹಿಂಡೂ ಹುಟ್ಟಿಕೊಂಡಿದೆ. ಯಾವಾಗಲೂ ಹಡಬಿ ದುಡ್ಡು ತಿನ್ನುವುದಕ್ಕೇ ಹೊಂಚುಹಾಕುವ ಇಂತಹ ಖದೀಮರಿಗೆ ಸಕರ್ಾರಿ ಜಾಗೆಗಳು ಎಲ್ಲೆಲ್ಲಿವೆ ಅಂತ ಚೆನ್ನಾಗಿ ಗೊತ್ತಿರುತ್ತೆ. ಅದು ತಮಗೆ ಸೇರಿದ್ದು ಅಂತ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳುವುದು, ಒಂದೇ ಸಲ ಗುಳುಂ ಮಾಡುವುದು ಅವರ ಕಾಯಕವಾಗಿ ಬಿಟ್ಟಿದೆ. ಅಂಥವರಲ್ಲಿ ಇಂದಿನ ಕೆ.ಆರ್.ಪುರಂನ ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಕೂಡ ಒಬ್ಬ. ತನ್ನ ಏರಿಯಾದಲ್ಲೇ ಕ್ಯಾಲಸನಹಳ್ಳಿಯ ಸವರ್ೇ ನಂಬರ್ 11ರಲ್ಲಿ ಎಪ್ಪತ್ತು ಕೋಟಿ ಬೆಲೆ ಬಾಳುವ 12 ಎಕರೆ ಸಕರ್ಾರಿ ಜಮೀನು ಸಹಜವಾಗಿಯೇ ಅವನ ಕಣ್ಣು ಕುಕ್ಕಿಸುತ್ತಿತ್ತು. ಅದನ್ನು ಹೇಗಾದರೂ ಮಾಡಿ ಗುಳುಂ ಮಾಡುವುದಕ್ಕೆ ಆತ ಹೊಂಚು ಹಾಕಿ ಕುಳಿತಿದ್ದ. ಈ ಮಹಾತ್ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಭಂಟ ಬಾಬುರೆಡ್ಡಿಗೆ ವಹಿಸಿಕೊಟ್ಟಿದ್ದ. ಬೆಂಗಳೂರು ಬೆಳೆದ ಮೇಲಾದರೂ ಆ ಸ್ವಾತಂತ್ರ್ಯಯೋಧರ ಕುಟುಂಬಗಳನ್ನು ಹುಡುಕಿ ಅವರಿಗೆ ಭೂಮಿ ಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿತ್ತು. ಆದರೆ ಇಷ್ಟು ವರ್ಷಗಳಲ್ಲಿ ಅಂತಹ ಕೆಲಸವನ್ನು ಇಲ್ಲಿಗೆ ಬಂದ ಯಾವೊಬ್ಬ ತಹಶೀಲ್ದಾರನೂ ಮಾಡಲಿಲ್ಲ. ಅಂತಹ ಕೆಲಸಕ್ಕೆ ಕೈಹಾಕಿದ್ದು ಈಗಿನ ತಹಶೀಲ್ದಾರ್ ಆಶಾ ಪವರ್ಿನ್. ಪ್ರಾಯಶಃ ನಂದೀಶ ರೆಡ್ಡಿ ಈ ಭೂಮಿ ಸ್ವಾಹ ಕಾರ್ಯಕ್ರಮಕ್ಕೆ ಮಹೂರ್ತ ಫಿಕ್ಸ್ ಮಾಡುತ್ತಿದ್ದುದು ಆಕೆಯ ಗಮನಕ್ಕೆ ಬಂದಿರಬೇಕು. ಹಾಗಾಗಿ ಕೂಡಲೇ ಕಾರ್ಯಪ್ರವೃತ್ತಳಾದ ಆಕೆ ಈ ಭೂಮಿ ಮಂಜೂರಾದ ಸ್ವಾತಂತ್ರ್ಯ ಯೋಧರ ಕುಟುಂಬಗಳನ್ನು ಹುಡುಕಿ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿಬಿಟ್ಟಳು. ಆಶಾಳನ್ನು ಮನೆಗೆ ಕರೆಸಿಕೊಂಡು ಒದೆ ತಿಂದ ನಂದೀಶರೆಡ್ಡಿ!ವಾಸ್ತವದಲ್ಲಿ ಆಶಾ ಪವರ್ೀನ್ ಇಟ್ಟ ಹೆಜ್ಜೆ ನಂದೀಶ ರೆಡ್ಡಿಗೆ ತಳಮಳವನ್ನುಂಟು ಮಾಡಿದೆ. ತನ್ನ ಜೇಬು ಸೇರಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಹಡಬಿ ಆಸ್ತಿಯನ್ನು ಪವರ್ೀನ್ ಹೀಗೆ ಕೈಗೆ ಬಂದದ್ದನ್ನು ಬಾಯಿಗೆ ಬಾರದಂತೆ ತಪ್ಪಿಸುತ್ತಿರುವುದನ್ನು ಕಂಡು ನಂದೀಶರೆಡ್ಡಿಗೆ ಎಲ್ಲಿಲ್ಲದ ಸಿಟ್ಟುಬಂದಿದೆ. ಕೂಡಲೆ ಆಕೆಯನ್ನು ಸಂಬಂಧಪಟ್ಟ ಕಡತಗಳ ಸಮೇತ ತನ್ನ ಮನೆಗೆ ಬರುವಂತೆ ಹೇಳಿ ಕಳಿಸಿದ್ದಾನೆ. ಮೊದಲೇ ಆಶಾ ದಿಟ್ಟ ಮಹಿಳೆ. ತಹಶೀಲ್ದಾರಾಗುವ ಮೊದಲು ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದಾಕೆ. ಆಗಲೇ ಇಂತ ಪುಂಡ ಪೋಕರಿಗಳನ್ನು ಅಟ್ಟಾಡಿಸಿಕೊಂಡು ಬಡಿದಾಕೆ. ಸಖತ್ ಹೈಟ್, ಪರ್ಸನಾಲಿಟಿ ಹೊಂದಿರುವ ಆಶಾಳಿಗೆ ತನ್ನದೇ ಆದ ಬೆಂಬಲಿಗ ಪಡೆ ಕೂಡ ಇದೆ! ಈಗ ಯಾಕೆ ನಂದೀಶ ಕರೆಯುತ್ತಿದ್ದಾನೆಂದು ಗೊತ್ತಿದ್ದೂ ಗೊತ್ತಿದ್ದೂ ಧೈರ್ಯದಿಂದ ಕಡತ ತೆಗೆದುಕೊಂಡು ಅವನ ಮನೆಗೆ ಹೋಗಿದ್ದಳು. ಇದೇ ಜೂನ್ 16ರಂದು ಆಕೆ ನೇರವಾಗಿ ಸಂಬಂಧಪಟ್ಟ ಕಡತಗಳ ಸಮೇತ ನಂದೀಶ ರೆಡ್ಡಿಯ ಮನೆಯಲ್ಲಿ ಪ್ರತ್ಯಕ್ಷಳಾದಾಗ ಸಣ್ಣದಂದು ಫೈಟಿಂಗ್ಗೆ ಅಖಾಡ ರೆಡಿಯಾಗಿತ್ತು. ಅವಳ ಕೈಯಲ್ಲಿದ್ದ ಕಡತವನ್ನು ಕೊಡುವಂತೆ ನಂದೀಶ್ ರೆಡ್ಡಿ ಕೇಳಿದಾಗ ಆಕೆ ಒಪ್ಪಿಲ್ಲ. ಆದರೂ ಹಠ ಬಿಡದ ಆತ ಆಕೆಯನ್ನು ಎಳೆದಾಡಿ ಕಡತ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. (ಒಬ್ಬ ಮಹಿಳಾ ಅಧಿಕಾರಿಯೊಂದಿಗೇನೇ ಈ ಬಿಜೆಪಿ ಎಮ್ಮೆಲ್ಲೆಗಳು ಈ ರೀತಿ ಗುಂಡಾಗಳಂತೆ ವತರ್ಿಸುತ್ತಾರೆಂದರೆ ಇನ್ನು ಸಾಮಾನ್ಯ ಜನರ ಪಾಡೇನು?) ಆಕೆ ಅದನ್ನು ವಾಪಾಸ್ಸು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ ಅದನ್ನಾತ ತನ್ನ ಹಿಂಬಾಲಕನಿಗೆ ಕೊಟ್ಟ. ತಕ್ಷಣವೇ ಆ ಹಿಂಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಮತ್ತೆ ಆಶಾ ಅವನನ್ನು ಬೆನ್ನು ಹತ್ತಿ ಓಡತೊಡಗಿದರೆ ಇದೇ ನಂದೀಶ ಆಕೆಗೆ ಅಡ್ಡ ಬಂದಿದ್ದಾನೆ. ಸಿಟ್ಟಿಗೆದ್ದ ಆಶಾ ತನ್ನ ಹಳೆಯ ಪೊಲೀಸ್ ವರಸೆಯನ್ನು ಬಳಸಿ ನಂದೀಶನಿಗೊಂದು ಲಾತ ಕೊಟ್ಟು ಅವನು ಕೆಡವಿ ಅಲ್ಲಿಂದ ಓಡಿದ್ದಾಳೆ. ಕೊನೆಗೆ ಮೂಲೆಯಲ್ಲಿ ಕಡತದೊಂದಿಗೆ ಅವಿತು ಕುಳಿತಿದ್ದ ಹಿಂಬಾಲಕನನ್ನೂ ಹಿಡಿದು ಅವನಿಗೂ ನಾಲ್ಕು ಬಾರಿಸಿ ಕಡತ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ. ಹೀಗೆ, ನಂದೀಶ, ಆತನ ಹಿಂಬಾಲಕರು ಮತ್ತು ಸೆಕ್ಯೂರಿಟಿ ಗಾಡರ್್ಗಳ ಕೋಟೆಯನ್ನು ಬೇಧಿಸಿ ಸಕರ್ಾರಿ ಕಡತವನ್ನು ವಾಪಸ್ಸು ತರುವಲ್ಲಿ ಕೊನೆಗೂ ಆಕೆ ಯಶಸ್ವಿಯಾಗಿದ್ದಾಳೆ. ಸೇಡು ತೀರಿಸಿಕೊಳ್ಳಲು ಸಸ್ಪೆಂಡ್, ಟ್ರಾನ್ಸ್ಫರ್ತ್ಈಗ ನಂದೀಶ ರೆಡ್ಡಿ ಅಕ್ಷರಶಃ ಇಂಗು ತಿಂದ ಮಂಗನಾಗಿದ್ದಾನೆ. ಒಂದೆಡೆ ಆಶಾ ಪವರ್ೀನ್ ಎಂಬ ಮಹಿಳೆಯಿಂದ ದೈಹಿಕವಾಗಿ ಒದೆ ತಿಂದಿದ್ದ, ಇನ್ನೊಂದೆಡೆ ಅದೇ ಮಹಿಳಾ ಅಧಿಕಾರಿ ಇವನ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ಮಾನಸಿಕವಾಗಿಯೂ ಒದ್ದಿದ್ದಳು. ಈಗದನ್ನು ನಂದೀಶ ಹೇಗಾದರೂ ಮಾಡಿ ತೀರಿಸಿಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವನ ಹಿಂಬಾಲಕರ ಮುಂದೆ ನಾಚಿಕೆಯಿಂದ ತಲೆತಗ್ಗಿಸಬೇಕಾದ ಹೀನಾಯ ಪರಿಸ್ಥಿತಿ ಎದುರಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಪ್ಪತ್ತು ಕೋಟಿ ಬೆಲೆಬಾಳುವ ಆಸ್ತಿಯೊಂದು ಕೈತಪ್ಪಿ ಕಂಡವರ ಪಾಲಾಗಿ ಬಿಡುತ್ತಿತ್ತು. ಎಲ್ಲಿಯ ತನಕ ಆಶಾ ಪವರ್ೀನ್ ಇಲ್ಲಿ ತಹಶೀಲ್ದಾರಾಗಿರುತ್ತಾಳೋ ಅಲ್ಲಿಯ ತನಕ ಅದು ತನ್ನ ಕೈವಶವಾಗುವುದು ಸಾಧ್ಯವಿಲ್ಲ ಎಂಬ ಅಸಲೀಯತ್ತೂ ಆತನಿಗೆ ಗೊತ್ತಿತ್ತು. ಇದೆಲ್ಲದಕ್ಕೆ ಪರಿಹಾರ ಎಂದರೆ ಆಶಾಳನ್ನು ಕೆಲಸದಿಂದ ಸಸ್ಪೆಂಡ್ ಮಾಡಬೇಕು ಇಲ್ಲವೇ ಕನಿಷ್ಠ ಅಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ಒಳಗೊಳಗೇ ಆತ ಲೆಕ್ಕ ಹಾಕಿದ.ಅಂತೂ ಆಕೆಯಿಂದ ಒದೆ ತಿಂದು ಮಾನಸಿಕವಾಗಿ ನುಜ್ಜುಗುಜ್ಜಾಗಿದ್ದ ನಂದೀಶ ಮುಖ್ಯಮಂತ್ರಿ ಯಡ್ಡಿಯ ಕಿವಿ ತಿಕ್ಕಿದ್ದಾನೆ. ಮೊದಲೇ ನಮ್ಮ ಮುಖ್ಯಮಂತ್ರಿ ಕಂಡವರ ಚಾಡಿ ಮಾತು ಕೇಳಿ ಗುಂಡಿಗೆ ಬೀಳೋದರಲ್ಲಿ ಎತ್ತಿದ ಕೈ. ಈಗ ನಂದೀಶ ಬಂದು ಕಿವಿ ತಿಕ್ಕಿದ ತಕ್ಷಣವೇ ಒಂದು ಕ್ಷಣ ಯೋಚನೆ ಮಾಡದೆ ಆಶಾಳನ್ನು ಸಸ್ಪೆಂಡ್ ಮಾಡುವ ಆದೇಶ ಘಟನೆ ನಡೆದ ಮಾರನೇ ದಿನವೇ ಹೊರಡಿಸಿಬಿಟ್ಟ!ಅಂತೂ ಕೊನೆಗೆ ಸೇಡು ತೀರಿಸಿಕೊಂಡೆ ಎಂದು ನಂದೀಶ ಬೀಗುವ ಹೊತ್ತಿಗೆ ಆಶಾ ಅದಕ್ಕೂ ಪರಿಹಾರ ರೆಡಿ ಮಾಡಿಕೊಂಡಿದ್ದಳು. ಪ್ರಾಯಶಃ ನಂದೀಶ ಇಂಥ ಕೆಲಸ ಮಾಡುತ್ತಾನೆ ಎಂದು ಆಕೆ ಮೊದಲೇ ನಿರೀಕ್ಷಿಸಿದ್ದಳೋ ಏನೋ ಅಂತೂ ಸಸ್ಪೆಂಡ್ ಆದೇಶ ಕೈ ತಲುಪುತ್ತಿದ್ದಂತೆಯೇ ಆಕೆ ಕನರ್ಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಹೋಗಿ ಈ ಸಸ್ಪೆಂಡ್ ಆದೇಶಕ್ಕೆ ತಡೆಯಾಜ್ಞೆ ತಂದುಬಿಟ್ಟಳು. ಸಕರ್ಾರಿ ಅಧಿಕಾರಿಗಳನ್ನು ವಗರ್ಾವಣೆ ಮಾಡುವಾಗ ಅನುಸರಿಸಬೇಕಾದ ಕನಷ್ಠ ನೀತಿ, ನಿಯಮ, ನಡಾವಳಿಗಳ್ಯಾವನ್ನೂ ಈ ಪ್ರಕರಣದಲ್ಲಿ ಅನುಸರಿಸಲಾಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ನ್ಯಾಯಮಂಡಳಿ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಲ್ಲದೇ ಮುಖ್ಯಮಂತ್ರಿಯ ಮುಖಕ್ಕೆ ಮಂಗಳಾರತಿಯನ್ನೂ ಮಾಡಿತು. ಈಗ ನಂದೀಶ ನಿಜಕ್ಕೂ ಹುಚ್ಚು ನಾಯಿ ಕಡಿತಕ್ಕೆ ಸಿಕ್ಕವನಂತೆ ಪೆಚ್ಚಾಗಿ ಕುಳಿತಿದ್ದ. ಸಸ್ಪೆಂಡ್ ಮಾಡುವುದಕ್ಕಂತೂ ಆಗಲಿಲ್ಲ. ಕನಿಷ್ಠ ಟ್ರಾನ್ಸ್ಫರ್ ಆದ್ರೂ ಮಾಡಿಸಿ ಮುಖ ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆ ಅವನಿಗೆ. ಅಂತು ಮತ್ತೆ ಯಡ್ಡಿ ಕಿವಿಯಲ್ಲಿ ಬಿಸಿಗಾಳಿ ಊದಿ ವಗರ್ಾವಣೆ ಆದೇಶವನ್ನೂ ಹೊರಡಿಸುವಲ್ಲಿ ಯಶಸ್ವಿಯಾದ. ಆಕೆಯನ್ನು ಕೆ.ಆರ್ ಪುರಂನ ತಹಶೀಲ್ದಾರ ಕಚೇರಿಯಿಂದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ವಗರ್ಾವಣೆ ಮಾಡಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಶಿವಕುಮಾರ ಎಂಬ ಅಧಿಕಾರಿಯನ್ನು ತಹಶೀಲ್ದಾರರನ್ನಾಗಿ ಮಾಡಿ ಕೂರಿಸಿದ. ಆದರೆ ಆಶಾ ಬಹಳ ಚಾಣಾಕ್ಷೆ. ಈ ವಗರ್ಾವಣೆ ಆದೇಶ ಕೈಸೇರುತ್ತಿದ್ದಂತೆಯೇ ಅದಕ್ಕೂ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದುಬಿಟ್ಟಳು! ತಡೆಯಾಜ್ಞೆಯ ಪ್ರತಿಯನ್ನು ಕೈಯಲ್ಲಿ ಹಿಡಿದು ಆಶಾ ಆಫೀಸಿಗೆ ಬಂದರೆ ತಾಲ್ಲೂಕು ಆಫೀಸಿಗೆ ಬೀಗ ಜಡಿಯಲಾಗಿತ್ತು! ಅಸಲೀಯತ್ತೇನೆಂದರೆ ವಗರ್ಾವಣೆಗೆ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದ್ದು ಗೊತ್ತಾದ ತಕ್ಷಣ ನಂದೀಶ ಹತಾಷೆಯಿಂದ ತನ್ನ ಬಾಡಿಗೆ ಗೂಂಡಾಗಳನ್ನು ಕಳಿಸಿ ಕೆ.ಆರ್.ಪುರಂ ತಹಶೀಲ್ದಾರ್ ಕಚೇರಿಗೆ ಬೀಗ ಜಡಿಸಿದ್ದ! ಕೈಲಾಗದವರು ಮೈ ಪರಚಿಕೊಂಡಿದ್ದರಂತಲ್ಲಾ ಹಾಗೆ. ಇದು ನಂದೀಶನದ್ದೇ ಕೆಲಸ ಎಂಬ ಬಗ್ಗೆ ಆಫೀಸಿನಲ್ಲಿದ್ದವರಿಗಾಗಲೀ, ಆಶಾಗಾಗಲೀ ಯಾವುದೇ ಅನುಮಾನ ಇರಲಿಲ್ಲ. ಹಿಂದು ಮುಂದು ನೋಡದೇ ಬೀಗ ಒಡೆಸಿ ಒಳ ನಡೆದುಬಿಟ್ಟಳು. ಅಲ್ಲಿಗೆ ನಂದೀಶನಿಗೆ ಅಘಾತದ ಮೇಲೆ ಮತ್ತೊಂದು ಅಘಾತವಾಯಿತು. ಈಗ ಮಾನ ಮಯರ್ಾದೆ ಉಳಿಸಿಕೊಳ್ಳೋದೇ ಆತನಿಗೆ ಕಷ್ಟವಾಯಿತು. ಕೂಡಲೇ ಆಶಾಳ ಕೋಣೆಯ ಎದುರು ಇನ್ನೊಂದು ಕುಚರ್ಿ ತರಿಸಿ ಹಾಕಿ ಅದರ ಮೇಲೆ ಶಿವಕುಮಾರ್ನನ್ನು ಕೂರಿಸಿದ. ಅಲ್ಲಿಗೆ ಒಂದೇ ತಾಲ್ಲೂಕು ಆಫೀಸಿಗೆ ಇಬ್ಬರು ತಹಶೀಲ್ದಾರರಾದಂತಾಯಿತು. ನಂದೀಶನಿಗೆ ಏನೂ ಕಿತ್ತುಕೊಳ್ಳಲಾಗಲಿಲ್ಲ. ಒಬ್ಬ ಹೆಣ್ಣು ಅಧಿಕಾರಿಯಿಂದ ಒದೆಯ ಮೇಲೆ ಒದೆ ತಿಂದು ಸುಸ್ತಾಗಿದ್ದ ಆತ ಕೊಟ್ಟ ಕೊನೆಯ ಆಯ್ಕೆಯಾಗಿ ಆಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಇನ್ನೊಂದಿಷ್ಟು ಮೈ ಪರಚಿಕೊಂಡ. ಆಶಾ ಪವರ್ೀನ್ ಏನು ಕಡಿಮೆ ಗಿರಾಕಿಯೇ? ಆಕೆಯೂ ಒಂದು ಕಂಪ್ಲೇಂಟ್ ಲಾಡ್ಜ್ ಮಾಡಿದ್ದಾಳೆ. ಅಲ್ಲಿಗೆ ಒಂದು ಹಂತದ ಜಟಾಪಟಿ ಮುಗಿದಂತಾಗಿದೆ. ಸಧ್ಯಕ್ಕೆ ನಂದೀಶ ರೆಡ್ಡಿ ನೆಲಕ್ಕೆ ಬಿದ್ದು ಮಣ್ಣು ತಿಂದಿದ್ದಾನೆ. ಆದ್ರೂ ಮೀಸೆ ಮಣ್ಣಾಗಿಲ್ಲ ಅಂತ ಅಲ್ಲಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾನೆ! ಬಿಜೆಪಿ ಎಮ್ಮೆಲ್ಲೆಗಳು, ಮಂತ್ರಿ ಮಹೋದಯರು ಸಕರ್ಾರಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಾರೆ, ತಮ್ಮ ಲೂಟಿಗೆ ಅಡ್ಡ ಬಂದವರನ್ನು ಹೇಗೆ ಹಿಂಸಿಸುತ್ತಾರೆ ಎನ್ನೋದಕ್ಕೆ ಇದೊಂದು ಉದಾಹರಣೆಯಷ್ಟೆ. ಈ ಬಿಜೆಪಿಗಳು ಬಾಯ್ತೆರೆದರೆ ದೇಶಭಕ್ತಿ, ರಾಮರಾಜ್ಯ, ಪ್ರಾಮಾಣಿಕತೆ ಎಂತೆಲ್ಲಾ ಅಣಿಮುತ್ತುಗಳನ್ನು ಸುರಿಸುತ್ತವೆ. ಇವರ ಭಾಷಣಗಳನ್ನು ಕೇಳಿದರೆ ಆಹಾ ಇವರೆಂಥ ಮಹಾನ್ ದೇಶಭಕ್ತರು. ಇಂಥ ಮಹಾನುಭಾವರು ಇನ್ನೂ ಇದ್ದಾರಲ್ಲ ಅನ್ನಿಸುತ್ತೆ. ಆದರೆ ಒಂಚೂರು ಒಳಹೊಕ್ಕು ನೋಡಿದರೆ ಅಸಲಿ ಕಣ್ಣಿಗೆ ರಾಚುತ್ತದೆ. ಈ ಒಬ್ಬೊಬ್ಬ ಪುಢಾರಿಯೂ ನೂರಾರು, ಸಾವಿರಾರು ಕೋಟಿ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ ಎಂದರೆ ಅವರ ದೇಶಭಕ್ತಿ, ದೇಶಪ್ರೇಮ, ಪ್ರಾಮಾಣಿಕತೆ, ರಾಮರಾಜ್ಯ ಎಂತಹದ್ದು ಎಂಬುದು ಅರ್ಥವಾಗಿಬಿಡುತ್ತದೆ. ಎಲ್ಲಾ ಅಧಿಕಾರಿಗಳೂ ಆಶಾ ಪವರ್ೀನ್ ಥರ ಇರೋದಿಲ್ಲ. ಇವರ ಕಾಟ ತಾಳಲಾರದೇ ಬಹುತೇಕ ಅಧಿಕಾರಿಗಳು ಹೆದರಿ ಎಮ್ಮೆಲ್ಲೆಗಳು, ಎಂಪಿಗಳು, ಮಂತ್ರಿಮಹೋದಯರು ಹೇಳಿದಂತೆ ಕೆಲಸ ಮಾಡಿ ಬಿಡುತ್ತಾರೆ. ಆ ಮೂಲಕ ಸಕರ್ಾರಿ ಸಂಪತ್ತು ಕಳ್ಳರ ಪಾಲಾಗುವುದಕ್ಕೆ ತಾವೇ ಸಹಕಾರ ಕೊಟ್ಟು ಬಿಡುತ್ತಾರೆ.(ಬಳ್ಳಾರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ರೆಡ್ಡಿಗಳಿಗೆ ಹೆದರಿ ಸಕರ್ಾರದ ಸಂಪತ್ತನ್ನು ಲೂಟಿ ಮಾಡಲು ಸಹಕರಿಸುತ್ತಿದ್ದಾರೆ) ನಮ್ಮಲ್ಲಿ ಅಲ್ಲೋ ಇಲ್ಲೋ ಒಬ್ಬೊಬ್ಬರು ಆಶಾ ಪವರ್ೀನ್ ಥರ ಅಧಿಕಾರಿಗಳು ಇರ್ತಾರೆ. ಅಂಥವರು ಮಾತ್ರ ನಂದೀಶರೆಡ್ಡಿಯಂತಹ ನೆಲಗಳ್ಳರಿಗೆ ದಂಡಂದಶಗುಣಂ ಎಂದು ಪಾಠ ಕಲಿಸುತ್ತಾರೆ.ಒಟ್ಟಾರೆ ಈ ವ್ಯವಸ್ಥೆಯ ಸುಧಾರಣೆಗೆ ಆಶಾಪವರ್ಿನ್ರಂತೆ ಇನ್ನುಳಿದ ಅಧಿಕಾರಿಗಳು ದಿಟ್ಟತನದಿಂದ ಕೆಲಸ ಮಾಡಬೇಕು.
ಆಶಾ ಎಂಬ ಅಪರಂಜಿ.ಆಶಾ ಪವರ್ೀನಳ ಜಾಯಮಾನವೇ ಅಂತದು. ತಾನಂತೂ ಎಂದು ಭ್ರಷ್ಟಾಚಾರ ಮಾಡುವವಳಲ್ಲ, ತನ್ನ ಮೂಲಕ ಇತರರೂ ಮಾಡುವುದಕ್ಕೆ ಬಿಡುವವಳಲ್ಲ. ಸಾರ್ವಜನಕ ಸಂಪತ್ತನ್ನು ಮೋಸ, ವಂಚನೆಯ ಮೂಲಕ ಗುಳುಂ ಮಾಡುವದಕ್ಕೆ ಯಾರಾದರೂ ಕೈಹಾಕಿದರೆ, ಹಿಂದೆ-ಮುಂದೆ ನೋಡದೇ ಉಗಿದು ಕಳುಹಿಸುತ್ತಾಳೆ.ಅದು ನಂದೀಶರೆಡ್ಡಿಯಾಗಿರಲಿ, ಅಥವಾ ಅವರ ಅಪ್ಪನಾಗಿರಲಿ ಯಾರನ್ನು ಬಿಡುವುದಿಲ್ಲ.ಆಶಾಪವರ್ಿನ್ರಲ್ಲಿ ಈ ರೀತಿಯ ಕೆಚ್ಚು ಬರುವದಕ್ಕೆ ಪ್ರಾಯಶಃ ಅವರ ಅಪ್ಪನೇ ಕಾರಣವಿರಬೇಕು. ಮೂಲತಃ ಕೆ.ಆರ್ ಪೇಟೆಯವರಾದ ಅವರ ತಂದೆ ಹಿರಿಯ ಎಡಪಂಥೀಯ ಚಿಂತಕ ಎಸ್.ಕೆ ಕರೀಂಖಾನ್ ಅವರ ಪ್ರಭಾವಕ್ಕೆ ಒಳಗಾಗಿದ್ದವರು. ಜನಪರ ಮತ್ತು ಪ್ರಗತಿಪರ ಮೌಲ್ಯಗಳನ್ನು ಮೈಗೂಡಿಸಿಕೊಂಡು ನಂಬಿದ ಮೌಲ್ಯಗಳಿಗೆ ಚ್ಯುತಿ ಬಾರದಂತೆ, ಆದರ್ಶಪ್ರಾಯವಾಗಿ ಬದುಕಿದವರು. ದೊಡ್ಡ-ದೊಡ್ಡ ಹುದ್ದೆಗಳನ್ನು ಅಲಂಕರಿಸುವದಕ್ಕೆ ಶ್ರೀಮಂತನಾಗಿ ಬೆಳೆಯುವದಕ್ಕೆ ಎಷ್ಟೇ ಅವಕಾಶಗಳಿದ್ದರೂ ಅದ್ಯಾವ ವ್ಯಾಮೋಹಕ್ಕೂ ಬಲಿಯಾಗದೇ ಶಿಕ್ಷಕರಾಗಿಯೇ ಮುಂದುವರೆದವರು. ಅದೇ ರೀತಿಯಲ್ಲಿ ಆಶಾಪವರ್ಿನ್ರನ್ನು ಬೆಳೆಸಿದ್ದರು.ಹೀಗೆ ತಂದೆಯ ಪ್ರಗತಿಪರ ಚಿಂತನೆಗಳನ್ನು ಅಂತರ್ಗತ ಮಾಡಿಕೊಂಡ ಆಶಾಪವರ್ಿನ್ ತಮ್ಮ ಬದುಕಿನಲ್ಲಿಯೂ ಅವುಗಳನ್ನು ಅಳವಡಿಸಿಕೊಂಡರು. ಮುಂದೆ ಓದಿ ಪೊಲೀಸ್ ಇಲಾಖೆಯಲ್ಲಿ ಸೇರಿದ್ದಾಗಲೂ ಆ ಮೌಲ್ಯಗಳನ್ನು ಕಾಪಾಡಿಕೊಂಡು ಬಂದರು. ಸಾಮಾನ್ಯವಾಗಿ ಪೊಲೀಸ್ ಇಲಾಖೆ ಹೇಗಿರುತ್ತದೆಂದರೆ, ಒಮ್ಮೆ ಅದರೊಳಗೆ ಹೋದರೆ ಸಾಕು ಪ್ರಾಮಾಣಿಕರು ಒಂದು ರಾತ್ರಿ ಕಳೆಯುವದರೊಳಗಾಗಿ ಭ್ರಷ್ಟರಾಗಿ ಬಿಡುತ್ತಾರೆ. ಆದರೆ, ಆಶಾಪವರ್ಿನ್ ಅದಕ್ಕೆ ಅಪವಾದವಾಗಿದ್ದರು. 2001-03ರತನಕ ಸೆಂಟ್ರಲ್ ಕ್ರೈಂ ಬ್ರ್ಯಾಂಚಿನಲ್ಲಿದ್ದಾಗಲಿ ನಂತರ ಕಮಷರ್ಿಯಲ್ ಸ್ಟ್ರೀಟ್ ಪೊಲೀಸ್ ಸ್ಟೇಷನ್ನಲ್ಲಾಗಲಿ ಅಥವಾ ಆರ್.ಟಿ ನಗರ ಟ್ರಾಫಿಕ್ ಪೊಲೀಸ್ ಠಾಣಿಯಲ್ಲಾಗಲಿ, ಬಂದಾಗ ಒಂದೇ ಒಂದು ಭ್ರಷ್ಟಾಚಾರವನ್ನು ಮಾಡಲಿಲ್ಲ. ಭ್ರಷ್ಟರ ಮಧ್ಯೆದಲ್ಲಿಯೇ ಇದ್ದು ಕೊಂಡು ಪರಿಶುದ್ದರಾಗಿ ಉಳಿಯುವುದು ಬಹಳ ಕಷ್ಟ. ಆದರೆ, ಪವರ್ಿನ್ರವರು ಅದನ್ನು ಸಾಧಿಸಿ ತೋರಿಸಿದ್ದರು.ಈ ಕಾರಣಕ್ಕಾಗಿಯೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ತುತ್ತಾಗಿ ಹಲವು ಬಾರಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎತ್ತಂಗಡಿಯೂ ಆಗಬೇಕಾಯಿತು. ಆದರೂ, ಅವರು ಎಂದೆಂದಿಗೂ ಎದೆಗುಂದಲಿಲ್ಲ. ಅನೇಕ ಅಡ್ಡಿ-ಆತಂಕಗಳನ್ನು ಯಶಸ್ವಿಯಾಗಿ ಎದುರಿಸಿ ಜನರಿಂದ ಸೈ ಎನಿಸಿಕೊಂಡಿದ್ದಾರೆ.ನಂದೀಶರೆಡ್ಡಿ ಅದ್ಯಾವ ಗಳಿಗೆಯಲ್ಲಿ ಇವರನ್ನು ತೊಡವಿದನೋ ಅಥವಾ ಆತನ ಗ್ರಹಾಚಾರ ನೆಟ್ಟಗಿರಲಿಲ್ಲವೋ ಏನೋ ಅಂತೂ ಆಶಾಪವರ್ಿನ್ ಕೈಯಲ್ಲಿ ಸಿಕ್ಕು ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿದ್ದಾನೆ. ತಾನು ತಿನ್ನುವುದಲ್ಲದೇ ಕೋಟರ್ಿನಿಂದ ಯಡ್ಡಿಗೂ ತಿನ್ನಿಸುತ್ತಿದ್ದಾನೆ.
ಮಾದ್ಯಮಗಳ ದಿವಾಳಿಕೋರತನಕೆ.ಆರ್.ಪುರಂ ಶಾಸಕ ನಂದೀಶರೆಡ್ಡಿಯ ಹಿಡಿತದಲ್ಲಿ ಕೆಲವೊಂದು ಟಿವಿ ಚಾನೆಲ್ಗಳ ವರದಿಗಾರರು ಕೆಲಸ ಮಾಡುತ್ತಿದ್ದಾರೆೆ! ಅವರಿಗೆ ತಿಂಗಳಿಗೆ ಇಂತಿಷ್ಟು ಎಂದು ಮಾಮೂಲಿಯನ್ನು ನಂದೀಶರೆಡ್ಡಿ ನೀಡುತ್ತಾನೆ! ಈ ಕಾರಣವಾಗಿ ರಾಜ್ಯದ ಯಾವೊಂದು ಚಾನೆಲ್ಗಳು ಪವರ್ಿನ್ರ ಪ್ರಕರಣದ ಕುರಿತು ವಾಸ್ತವ ವರದಿಯನ್ನು ಪ್ರಸಾರ ಮಾಡಿಲ್ಲ. ಅಮೇರಿಕಾದಲ್ಲಿ ಶೋಭಕ್ಕ ನೈಟ್ಪ್ಯಾಂಟ್ ಹಾಕಿದರೆ, ಪೊಲೀಸ್ ಜೀಪಿನ ಮೇಲೆರಿ ಸಿದ್ದರಾಮಯ್ಯ ಲುಂಗಿಮೇಲೆ ಕಟ್ಟಿದರೆ, ಅರ್ಧಗಂಟೆ ವಿಶೇಷ ಕಾರ್ಯಕ್ರಮ ಮಾಡುವ ಚಾನೆಲ್ಗಳು ಒಬ್ಬ ಹಿರಿಯ ಕೆ.ಎ.ಎಸ್ ಅಧಿಕಾರಿಗೆ ಆಗಿರುವ ಅನ್ಯಾಯವನ್ನು ವಾಸ್ತವಿಕವಾಗಿ ತಿಳಿದಿದ್ದರೂ ಏನು ಮಾಹಿತಿ ಇಲ್ಲದಂತೆ ವತರ್ಿಸುತ್ತಿವೆ.ಭ್ರಷ್ಟಾಚಾರದ ವಿರುದ್ಧ ಧ್ವನಯೆತ್ತ ಬೇಕಾದ ಚಾನೆಲ್ಗಳು ಭ್ರಷ್ಟರ ಎಂಜಲು ತಿಂದು ಅವರ ಪರವಾಗಿ ಕೆಲಸ ಮಾಡುತ್ತಿವೆ. ಸಮಾಜದಲ್ಲಿ ಸತ್ಯ, ನಿಷ್ಟೆ, ಕಾನೂನನ್ನು ಕಾಪಾಡಬೇಕಾದ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಜನಸಾಮಾನ್ಯರು ಮಾಧ್ಯಮಗಳ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಬಗೆಯುತ್ತಿವೆ. ಸಮಾಜವನ್ನು ಸರಿದಾರಿಯಲ್ಲಿ ನಡೆಸಬೇಕಾದ ಮಾಧ್ಯಮ ತಾನೇ ತಪ್ಪುದಾರಿಯಲ್ಲಿ ನಡೆದರೆ ಸಮಾಜದ ಗತಿ ಏನಾಗಬಹುದು? ಪರಿಸ್ಥಿತಿ ಹೀಗೆ ಮುಂದುವರೆದರೆ ಮಾಧ್ಯಮಗಳು ಸಂಪೂರ್ಣವಾಗಿ ಜನಸಾಮಾನ್ಯರ ನಂಬಿಕೆಯನ್ನು ಕಳೆದುಕೊಂಡು ವಿನಾಶದ ಅಂಚಿಗೆ ತಲುಪುವದರಲ್ಲಿ ಸಂದೇಹವಿಲ್ಲ. ಅದರಂತೆ ಆಶಾಪವರ್ಿನ್ರ ಪ್ರಕರಣದಲ್ಲಿ ಮಾಧ್ಯಮಗಳು ಇದನ್ನೇ ಮಾಡಿವೆ!ಮಾದ್ಯಮಗಳ ಮಾತು ಒತ್ತಟ್ಟಿಗಿರಲಿ. ಒಬ್ಬ ಮಹಿಳಾ ಅಧಿಕಾರಿಗೆ ಹೀಗೆ ಜನಪ್ರತಿನಧಿಯೊಬ್ಬ ಈ ಪಾಟಿ ಕಿರುಕುಳ ಕೊಡುತ್ತಿದ್ದರೆ ಮಹಿಳಾ ಸಂಘಟನೆಗಳಾದರೂ ಮುಂದೆ ಬಂದು ಪ್ರತಿಭಟಿಸಬೇಡವೆ? ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾರವರನ್ನು ಹೊರತುಪಡಿಸಿದರೆ, ಮಹಿಳಾ ಮೀಸಲಾತಿಯ ಕುರಿತು ಗಂಟೆಗಟ್ಟಲೇ ಮಾತನಾಡುವ ಯಾವ ಮಹಿಳಾ ಸಂಘಟನೆಗಳೂ, ಯಾವ ಮಹಿಳಾಮಣಿಗಳು ಈ ಕಡೆ ಕಣ್ಣು ಹಾಯಿಸಲೇ ಇಲ್ಲ! ದುರಂತ ಎಂದರೆ ಇದೇ ಅಲ್ಲವೆ?
ಎಂ.ಲಿಂಗರಾಜು,

ತಕ್ಕಡಿ ಈಗ 3ತುಕ್ಕಡಿಹಟ್ಟಿ


ತಕ್ಕಡಿ ಈಗ 3ತುಕ್ಕಡಿಹಟ್ಟಿ ಚಿನ್ನದ ಗಣೆಯ ಸಿಬ್ಬಂದಿ ಹಾಗೂ ಕಾಮರ್ಿಕರನ್ನು ಪ್ರತಿನಿಧಿಸುವ ಯೂನಿಯನ್ ಒಂದಾದ (ಎ.ಐ.ಟಿ.ಯು.ಸಿ) ತಕ್ಕಡಿ ಸಂಘಟನೆಯೂ ಈಗ 3ತುಕ್ಕಡಿಯಾಗಿ ಹೋಗಿದೆ. ಎಲ್ಲ ವಿಷಯದಲ್ಲೂ ಸರಿಸಮಾನ ಆಗಿರಬೇಕಾದ ತಕ್ಕಡಿ ಈಗ ಬ್ಯಾಲೆನ್ಸ್ ಕಳೆದುಕೊಂಡಿದೆ. ತಕ್ಕಡಿಯನ್ನು ತೂಗುವವರು ಬಳ್ಳಾರಿಯಲ್ಲಿದ್ದರೆ, ಅವುಗಳ ತೂಕದ ಕಲ್ಲುಗಳು ಮಾತ್ರ ಹಟ್ಟಿಯಲ್ಲಿ ಉಳಿದಿವೆ. ಅದರಲ್ಲಿ ನಮ್ಮದು ಹೆಚ್ಚು ತೂಕ, ನಿಮ್ಮದು ಕಡಿಮೆ ತೂಕ ಎಂಬ ಕಿತ್ತಾಟ ಈಗ ಶುರುವಾಗಿದೆ. ಕಾಮರ್ಿಕರು ವಾಲೇಬಾಬನ ಆಡಳಿತ ಬೇಸತ್ತು ಅದಕ್ಕೆ ಪಯರ್ಾಯವಾಗಿ ಇವರನ್ನು ಆಯ್ಕೆ ಮಾಡಿದ್ದರು. ಆದರೆ, ಇವರುಗಳು ಕೂಡ ಆತನ ಆಡಳಿತದಿಂದ ಹೊರತಾಗಿಲ್ಲ. ಒಟ್ಟಿನಲ್ಲಿ ಕಾಮರ್ಿಕರಿಗೆ ಊದುವದನ್ನು ಬಿಟ್ಟು ಬಾರಿಸುವದನ್ನು ತೆಗೆಂದುಕೊಂಡಂತಾಗಿದೆ. ಎಲ್ಲ ವಿಷಯದಲ್ಲಿ ವಾಲೇಬಾಬುಗಿಂತ ನಾವೇನು ಕಡಿಮೆ ಎಂಬದನ್ನು ಸಾಭೀತುಮಾಡಿದ್ದಾರೆ ಈ ಕಾಮ್ರೇಡುಗಳು. ವಾಲೇಬಾಬು ತನ್ನ ಆಡಳಿತದಲ್ಲಿ ಬಿಟ್ಟಿ ಬಂದದ್ದೆಲ್ಲ ತಾನೊಬ್ಬನೇ ತಿಂದು ಮಿಕ್ಕಿ ಉಳಿದ ಅಷ್ಟಿಷ್ಟನ್ನು ತನ್ನ ಹಿಂಬಾಲಕರಿಗೆ ನೀಡುತ್ತಿದ್ದ. ಈಗ ಅದೇ ಪದ್ದತಿಯನ್ನು ಸ್ವಲ್ಪ ವಿಭಿನ್ನವಾಗಿ ಕಾಮ್ರೇಡ್ಗಳು ಮುಂದುವರೆಸಿದ್ದಾರೆ. (ವಾಲೇಬಾಬು ತನ್ನ ಹೆಂಡತಿಯ ಕೈಯಲ್ಲಿ ಕಂಪನಿ ಮನೆ ಕೀಲಿಗಳನ್ನು ಕೊಟ್ಟು ಹಣತೆಗೆದುಕೊಳ್ಳುತ್ತಿದ್ದರೆ, ಇವರು ನೇರವಾಗಿ ನಾಮನಿದರ್ೇಶಿತ ಸದಸ್ಯರ ಮುಖಾಂತರ ಆಫ್ಬಾಟಲ್ ಡ್ರಿಂಕ್ಸ್ ಅರ್ಧಕೆಜಿ ಕಾರಕ್ಕೆ ಮನೆ ಕೀಲಿಗಳನ್ನು ಕೊಡಿಸುತ್ತ್ತಿದ್ದಾರೆ.) ಇನ್ನೊಂದು ಈ ಕಾಮ್ರೇಡ್ಗಳ ಸಂಘಟನೆಯಲ್ಲಿ ನಾಮನಿದರ್ೇಶಿತ (ನಲ್ಲದ) ಸದಸ್ಯನಿಂದ ಹಿಡಿದು ಚುನಾಯಿತಿ ಪ್ರತಿನಿಧಿಗಳವರೆಗೆ ಹಣಕ್ಕಾಗಿ ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಲು ಹೊರಟಿದ್ದಾರೆ. ಯಾರಾದರೂ ಕಾಮರ್ಿಕರು ಇದನ್ನು ಪ್ರಶ್ನಿಸಿದರೆ, ಆಗ ಇದನ್ನೇ ವಾಲೇಬಾಬು ಮಾಡುತ್ತಿದ್ದ ಕೇಳುವವರು ಆವಾಗ ಎಲ್ಲಿಗೆ ಹೋಗಿದ್ದೀರಿ. ಅದನ್ನು ಬಿಟ್ಟು ನಮ್ಮನ್ನು ಕೇಳುವದಕ್ಕೆ ಬಂದಿರೇನು ಎಂದು ಗದರಿಸುತ್ತಾರೆ.? ಇಂತಹ ಎಷ್ಟೋ ಘಟನೆಗಳು ನಮ್ಮ ಪತ್ರಿಕೆಯ ಕಣ್ಮುಂದೆ ನಡೆದಿವೆ. (ಮೊನ್ನೆಯೇ ಆ ಸಂಘಟನೆ ಅಧ್ಯಕ್ಷರ ಒಂದು ಜಮೀನಿನ ಪ್ರಕರಣದಲ್ಲಿ ಹಣದ ಸಂಬಂಧ ದೊಡ್ಡ ವಾಗ್ವಾದವೇ ನಡೆದು ಹೋಗಿ ಕೊನೆಗೆ ಅಧ್ಯಕ್ಷರಿಗೆ ಮರಳಿ ಹಣ ನೀಡುವಂತಾಯಿತು.) ಇವರ ಎಲ್ಲಾ ಚಾಕ-ಚಕ್ಯತೆಯನ್ನು ಗೊತ್ತು ಮಾಡಿಕೊಂಡಿರುವ ಗಣಿ ಆಡಳಿತ ಮಂಡಳಿ ಇವರ ನಡುವೆ ಇರುವ ಕಂದಕವನ್ನು ಇನ್ನಷ್ಟು ಆಳವಾಗಿ ತೋಡಲು ಜೆ.ಸಿ.ಬಿಗಳನ್ನು ಬಳಸಿಕೊಳ್ಳುತ್ತಿದೆ. ಎ.ಐ.ಟಿ.ಯು.ಸಿ ಮುಖಂಡರು ಹಾಗೂ ಕಾಮರ್ಿಕ ಸಂಘದ ಅಧ್ಯಕ್ಷರು ಆದ ಯಂಗ್&ಎನಜರ್ಿಟಿಕ್ ಮ್ಯಾನ್ ಅರವಿಂದ ಮಳೆಬೆನ್ನೂರು ಸಂಘಟನೆಯಲ್ಲಿ ತಲೆದೋರಿರುವ ಭಿನ್ನಮತವನ್ನು ಸರಿಪಡಿಸಲು ಈಗಾಗಲೇ ಸುಮಾರು ಬಾರಿ ಎಲ್ಲ ಸದಸ್ಯರನ್ನು ಕರೆದು ಸಭೆಮಾಡಿದಾಗ್ಯೂ ಅವೆಲ್ಲವುಗಳು ವಿಫಲವಾಗಿ ಹೋಗಿವೆ. ಕಾಮರ್ಿಕರಿಗೆ ಮನೆ ವಿತರಿಸುವಲ್ಲಿ ಹಣ, ಕಾಮರ್ಿಕರಿಗೆ ಯಾವುದಾದರೂ ಒಂದು ಸೌಲಭ್ಯವನ್ನು ಕೊಡಿಸುವಲ್ಲಿ ಹಣ, ವಗರ್ಾವಣಿಗಳನ್ನೂ ಮಾಡುವಲ್ಲಿ ಹಣ ಒಟ್ಟಿನಲ್ಲಿ ಹಣ ಎಲ್ಲೇಲ್ಲಿ ಸಿಗುತ್ತದೆಯೋ ಅಲ್ಲಿ ಎಲ್ಲ ತಮ್ಮ ಕೈಚಳಕ ತೋರಿಸುತ್ತಾ ಕಾಮ್ರೇಡ್ಗಳು ಸನ್ಮಾನ್ಯ ಶ್ರೀ ವಾಲೇಬಾಬು ಅವರಿಗೆ ಮಾದರಿಯಾಗಿದ್ದಾರೆ. ಕಾಮರ್ಿಕ ಸಂಘಕ್ಕೆ ಒಂದೇ ಬಾರಿಗೆ 18 ಸದಸ್ಯರು ಆಯ್ಕೆಗೊಂಡಾಗ ಕಾಮರ್ಿಕರು ತಮ್ಮ ಸಮಸ್ಯೆಗಳೆಲ್ಲ ಇತ್ಯರ್ಥವಾಗಿ ಹೋಗುತ್ತವೆ, ತಕ್ಕಡಿ ಈ ಬಾರಿ ಎಲ್ಲರನ್ನು ಒಂದೇ ತೂಕದ ಮೇಲೆ ತೂಗಿ ನ್ಯಾಯ ಒದಗಿಸಿಕೊಡುತ್ತದೆ, ನಮ್ಮ ಮಕ್ಕಳಿಗೆ ನೌಕರಿ ಖಚಿತ, ವಿಶೇಷ ಸೌಲಭ್ಯಗಳು ನಮಗೆ ಸಿಗಬಹದು ಎಂಬಿತ್ಯಾದಿ ಹಗಲುಗನಸನ್ನು ಕಾಮರ್ಿಕ ವರ್ಗ ಕಂಡಿತ್ತು. ಆದರೆ, ದುರಂತಕ್ಕೆ ತಕ್ಕಡಿ ಹೇಳಿದ ಯಾವೊಂದು ಪ್ರಮುಖ ಭೇಡಿಕೆಗಳು ಈವರೆಗೆ ಈಡೇರಲಿಲ್ಲ. (ಅದಕ್ಕೆ ಬೇರೆ-ಬೇರೆ ಕಾರಣಗಳು ಇರಬಹುದು) ಪ್ರಮುಖವಾಗಿ ಕಾಮರ್ಿಕರ ಮಕ್ಕಳಿಗೆ ವಿ.ಆರ್.ಎಸ್.ನ ಅಡಿಯಲ್ಲಿ ಕೆಲಸವೊಂದನ್ನು ದೊರಕಿಸಿಕೊಟ್ಟರೆ, ಎಷ್ಟೋ ಜನರು ಇಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ದಿನೇ ದಿನೇ ಕಾಮರ್ಿಕರು ನಿವೃತ್ತಿಯ ಅಂಚಿಗೆ ತಲುಪುತ್ತಿದ್ದಾರೆ. ಅವರ ಮಕ್ಕಳು ವಯಸ್ಸುಗಳು ಮುಗಿಯುತ್ತಿವೆ. ಅವರಿಗೆ ಮುಂದೆ ಕುಟುಂಬ ನಿರ್ವಹಣೆ ತೊಂದರೆಯಾಗುತ್ತಿದೆ.ಇನ್ನು ದಿನಗೂಲಿ ನೌಕರರ ಪಾಡು ಕೇಳುವವರು ಇಲ್ಲವಂತಾಗಿದೆ. ವಾಲೇಬಾಬು ಚುನಾವಣಿಯಲ್ಲಿ ಗೆಲ್ಲುವ ಸಂದರ್ಭದಲ್ಲಿಯೂ ಇವರ ನೇಮಕಾತಿಯ ವಿಷಯವನ್ನು ಮಾತನಾಡಿ 3ವರ್ಷ7ತಿಂಗಳು ಕಾರ್ಯಭಾರ ಮಾಡಿದನು. ತದನಂತರ ಬಂದ ಕಾಮ್ರೇಡುಗಳು 30 ತಿಂಗಳು ತನಕ ಮಾಡಿದ್ದು ಅದನ್ನೇ. ವಿಧಿವಶ ಕಂಪನಿ ಮಾತ್ರ ಸಕರ್ಾರದ ಮಟ್ಟದಲ್ಲಿ ದಿನಗೂಲಿಗಳ ಫೈಲಿಗೆ ಸಹಿ ಬಿದ್ದರೆ ನಾವು ನೇಮಕ ಮಾಡಿಕೊಳ್ಳುತ್ತೇವೆ ಅಲ್ಲಿಯವರೆಗೆ ಅವರು ಗುತ್ತೇದಾರನ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳುತ್ತಿದೆ. ಇದರ ಮಧ್ಯೆ ದಿನಗೂಲಿಗಳು ಈಗ ಸಿಗುತ್ತಿರುವ ಫುಡ್ಕಿಟ್ನ ಆಸೆಗಾಗಿ ದುಡಿಯುತ್ತಲೇ ಸಾಗಿದ್ದಾರೆ. ಇನ್ನು ಹಟ್ಟಿಯ ಗಣಿಗಾರಿಕೆ ವಿಷಯಕ್ಕೆ ಬಂದರೆ, ಮೊದಲಿನ ಪರಿಸ್ಥಿತಿಗೂ ಮತ್ತೂ ಕಂಪನಿಯನ್ನು ಈಗಿನ ಪರಿಸ್ಥಿತಿಗೆ ಹೊಲಿಸಿದರೆ, ಸ್ವಲ್ಪಮಟ್ಟಿನ ಸುಧಾರಣೆಯಾಗಿರುವುದು ಕಂಡುಬರುತ್ತದೆ. ಯಾಕೆಂದರೆ ಅನುಭವಿಗಳ ಕೊರತೆಯನ್ನು ಕಂಪನಿ ಈ ಮೊದಲು ಅನುಭವಿಸುತ್ತಿತ್ತು. ಆದರೆ, ಈಗ ಪ್ರಕಾಶ, ಕಪಿಲವಾಸ್ತುನಂತಹ ಹಿರಿಯ ಅಧಿಕಾರಿಗಳು ಕಂಪನಿಗೆ ಮತ್ತೇ ಮರಳಿ ಪ್ರವೇಶಿಸಿರುವುದರಿಂದ ವೈಜ್ಞಾನಿಕ ತಳಹದಿಯ ಮೇಲೆ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಒಂದು ಕಡೆಯೂ ಕಂಪನಿಯೂ ಎಲ್ಲ ದೃಷ್ಟಿಕೋನದಿಂದ ಸುರಕ್ಷಿತವಾಗಿದೆ. ಇದೊಂದೇ ಕಾಮರ್ಿಕರಿಗೆ ಸಮಾಧಾನವಾಗಿರುವ ವಿಷಯ. ಕಂಪನಿಯಲ್ಲಿನ ಉತ್ಪಾದನೆ ಅಥವಾ ಬೆಳವಣಿಗೆಯೂ ಕುಂಠಿತವಾಗಿದ್ದರೆ ಅದಕ್ಕೆ ಹೊಣೆಗಾರರನ್ನಾಗಿ ಕಂಪನಿ ಕಾಮರ್ಿಕರನ್ನು ಮಾಡುತ್ತಿತ್ತು. ಆಗ ಕಾಮರ್ಿಕ ಸಂಘ ಅನಿವಾರ್ಯವಾಗಿ ಕಾಮರ್ಿಕರ ಮೇಲೆ ಇಲ್ಲಸಲ್ಲದ ಗೂಬೆಗಳನ್ನು ಕೂರಿಸುತ್ತಿತ್ತು. ಅಂತಹ ಯಾವ ಬೆಳವಣಿಗೆಗಳು ಇಲ್ಲಿಯವರೆಗೆ ನಡೆದಿಲ್ಲ. ಕಾಮರ್ಿಕ ಸಂಘವು ಮೇ1 ಮತ್ತು ಆಗಸ್ಟ್15, ಜನೆವರಿ26ರ ಭಾಷಣಗಳಿಗೆ ಮಾತ್ರ ಸೀಮಿತವಾಗಿ ಹೋಗಿವೆ. ಕೊನೆಯ ಮೇ ದಂದು ಇದೇ ತಕ್ಕಡಿ ಸಂಘಟನೆಯೂ ತೆಲುಗಿನ ಸಿನಿಮಾ ನಟ, ನಿದರ್ೇಶಕ, ನಿಮರ್ಾಫಕ ಮಾದಲ ರಂಗಾರಾವ್ರವರನ್ನು ಕರೆಸಿ ಬಹುದೊಡ್ಡ ಬಹಿರಂಗ ಸಭೆಯೊಂದನ್ನು ಏರ್ಪಡಿಸಿ ಈ ಮೊದಲು ತಾನು ಕೊಟ್ಟ ಭರವಸೆಗಳು ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಬೊಬ್ಬೆ ಇಟ್ಟಿತು. ಆದರೆ, ಅವ್ಯಾವುಗಳು ಇಲ್ಲಿಯವರೆಗೆ ಜಾರಿಗೆ ಬಂದಿರುವುದಿಲ್ಲ.ವೇತನ ಒಪ್ಪಂದದ ಮೇಲೆ ಎಲ್ಲರ ಕಣ್ಣು ಮುಂಬರುವ ಚುನಾವಣೆಯಲ್ಲಿ ಆಯ್ಕೆಯಾಗುವವರು ಕಾಮರ್ಿಕರ ವೇತನ ಒಪ್ಪಂದವನ್ನು ಮಾಡುತ್ತಾರೆ. ಇದರಲ್ಲಿ ಪ್ರಧಾನ ಕಾರ್ಯದಶರ್ಿಯ ಪಾತ್ರ ಮಹತ್ವದ್ದಾಗಿರುತ್ತದೆ. ಕಾರಣ ಎಲ್ಲರೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಹುದ್ದೆಯ ಅರ್ಹತೆ ಇಲ್ಲದವನು ಆ ಸ್ಥಾನಕ್ಕೆ ಆಯ್ಕೆಯಾದರೆ, ಕಾಮರ್ಿಕರ ಗತಿ ಅದೋಗತಿ. (ಇನ್ನೇನು ಊರುಬಿಡಬೇಕು ಎಂದು ಯೋಚಿಸುತ್ತಿದ್ದ ವಾಲೇಬಾಬುಗೆ ಈ ಹಿಂದೆ ಕಾಮರ್ಿಕರು ಜಿ.ಎಸ್ ಹುದ್ದೆಗೆ ಆಯ್ಕೆ ಮಾಡಿ 40 ತಿಂಗಳು ದೊಡ್ಡ ಯಾತನೆಯನ್ನು ಅನುಭವಿಸಿದ್ದಾರೆ.)ಕಾಮರ್ಿಕ ಏನೆನ್ನುತ್ತಾನೆ? ಕಾಮರ್ಿಕನಿಗೆ ಇಲ್ಲಿಯವರೆಗೆ ಕಾಮರ್ಿಕ ಸಂಘಗಳು ಏನು ಮಾಡಿವೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಲ್ಲಪ್ಪ ಶಾಪ್ಟಿನ ಹಲವಾರು ಹಿರಿಯ ಕಾಮರ್ಿಕರನ್ನು ಪತ್ರಿಕೆ ಸಂಪಕರ್ಿಸಿದಾಗ ; ನೋಡಿ ಸಾರ್ ನಾವು 35ವರ್ಷ ಕಂಪನಿಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದೇವೆ. ನಾವು ಎಲ್ಲ ಯೂನಿಯನ್ಗಳನ್ನು ನೋಡಿದ್ದೇವೆ. ಎಲ್ಲ ಲೀಡರ್ಗಳನ್ನು ಕಂಡಿದ್ದೇವೆ. ಕಂಪನಿಯ ಆಡಳಿತ ವರ್ಗವು ನಮಗೆ ಚನ್ನಾಗಿ ಗೊತ್ತಿದೆ. ಆದರೆ ಇಂದು ಅಸಹಾಯಕರಾಗಿ ನಾವುಗಳು ನಮ್ಮ ಮುಂದಿನ ಜೀವನ ಲಹರಿಗಾಗಿ ನಮ್ಮ ಮಕ್ಕಳಿಗೆ ಕೆಲಸ ಕೊಡಿ ಎಂದು ಅಂಗಲಾಚಿಕೊಳ್ಳುತ್ತಿದ್ದೇವೆ. ಆದರೆ, ಪ್ರತಿಬಾರಿ ಆಯ್ಕೆಯಾಗುವ ಎಲ್ಲ ಯೂನಿಯನ್ ಮುಖಂಡರು ನಮಗಿರುವ ಅನಿವಾರ್ಯತೆಯನ್ನು ಬಳಸಿಕೊಂಡು ನಮ್ಮ ಕುಟುಂಬಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ. ನಮಗೆ ವಾಲೇಬಾಬು ಬಂದರೆನು? ಅಮೀರಅಲಿ ಬಂದರೇನು? ನಮ್ಮ ಮಕ್ಕಳಿಗೆ ಕೆಲಸ ಬೇಕು ಎಂಬುದೊಂದೇ ನಮಗೆ ಮುಖ್ಯ. ನಾವು ಈ ಕಂಪನಿಯ ಏಳಿಗೆಗಾಗಿ ಇಷ್ಟು ಇಷ್ಟು ಹಗಲಿರುಳು ದುಡಿದಿದ್ದೇವೆ. ಅಂತಹದರಲ್ಲಿ ಕಂಪನಿ ನಮ್ಮ ಮಕ್ಕಳಿಗೆ ಕರೆದು ಕೆಲಸ ಕೊಡಬೇಕಿತ್ತು. ಅದನ್ನು ಬಿಟ್ಟು ನಾವುಗಳು ರೊಕ್ಕ ತಗೊಂಡು ಆದ್ರೂ ಕೂಡ ನಮ್ಮ ಮಕ್ಕಳಿಗೆ ನೌಕರಿಗೆ ಕೊಡಸ್ರೀ ಎಂದು ಯೂನಿಯನ್ ಲೀಡರ್ಗಳ ಹತ್ತಿರ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗಿ ನಾವೇನು ಕಾಮರ್ಿಕ ಸಂಘದ ಬಗ್ಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಙಠಣಟಿರ & ಚಿಟಿರಡಿಥಿ ಟಚಿಟಿ ರಡಿಠಣಠಿತಕ್ಕಡಿಯಲ್ಲಿ ತುಕ್ಕಡಿಯಾದ ಯಂಗ್ ಅರವಿಂದ ಮಳೆಬೆನ್ನೂರು & ಆ್ಯಂಗ್ರೀ ಎಸ್.ಎಂ ಶಫಿಯವರದ್ದು ಒಂದು ಗುಂಪು ಈಗಾಗಲೇ ಕಾಮರ್ಿಕ ಸಂಘದ ಚುನಾವಣೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಶಫಿಯವರು ಇನ್ನೇನು ಕೆಲವು ತಿಂಗಳುಗಳಲ್ಲಿ ನಿವೃತ್ತಿಯಾಗುತ್ತಾರೆ. ಅವರು ಆಗಿ ಒಪ್ಪಿದರೆ, ಮತ್ತೊಂದು ಅವಧಿಗೆ ಪ್ರಧಾನಕಾರ್ಯದಶರ್ಿ ಸ್ಥಾನಕ್ಕೆ ಕಣಕ್ಕಿಳಿಸುವುದು. ಇಲ್ಲವಾದರೆ, ಬಳ್ಳಾರಿಯ ಭೂಪತಿಯನ್ನು ಕಣಕ್ಕಿಳಿಸಬೇಕೆಂಬುದು ಯಂಗ್ಮ್ಯಾನ್ನ ಒಳಾಲೋಚನೆ. ಇದಕ್ಕೆ ಶಫೀಯ ಸಮ್ಮತಿ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಲ್ಲಿ ಅಮೀರಅಲಿ ಆಗಲಿ, ಶಾಂತಪ್ಪ ಮಳ್ಳಿ ಆಗಲಿ ಜಿ.ಎಸ್ ಆಗುವುದು ಮಳೆಬೆನ್ನೂರು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಅರವಿಂದ ಮಳೆಬೆನ್ನೂರವರು ತಮ್ಮ ಯೋಜನೆಯ ಹಿನ್ನಲೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.ಅಮೀರ್ಅಲಿ ಅಲಿಯಾಸ್ ಸ್ಟೇಟ್ಪಾರ್ವಡರ್್ಅನಂತ ಸುಬ್ಬರಾವ್ನ ಅವಧಿಯಲ್ಲಿ ಪರೋಕ್ಷ ಜಿ.ಎಸ್ ಆಗಿ, ನಂತರ ತಾನೇ ಇನ್ನೊಂದು ಅವಧಿಯಲ್ಲಿ ಜಿ.ಎಸ್ ಆಗಿ ಕೆಲಸ ಮಾಡಿದ ಅಮೀರಅಲಿ ತಕ್ಕಡಿಯಲ್ಲಿ ನೇರವಾದ ಮಾತುಗಳನ್ನು (ಡಾಮಿನೇಟೆಡ್ ಪರ್ಸನ್) ಆಡುತ್ತಾ ಬೇರೆಯವರ ಕೆಂಗಣ್ಣಿಗೆ ಗುರಿಯಾಗಿರುವ ವ್ಯಕ್ತಿ. ಇವರು ಕಳೆದ ಚುನಾವಣೆಯಲ್ಲಿ ಜಿ.ಎಸ್ ಹುದ್ದೆಗೆ ಸ್ಪದರ್ೆ ಮಾಡಬೇಕೆಂದು ಬಯಸಿದಾಗ ಅವರ ಸ್ವಜಾತಿಯವರೇ, ಅಮೀರಲಿಗೆ ಜಿ.ಎಸ್ ಕೊಟ್ಟರೆ ನಾವ್ಯಾರು ತಕ್ಕಡಿಯ ಸಮೀಪಕ್ಕೆ ಬರುವುದಿಲ್ಲ ಎಂಬ ಸಂದೇಶವನ್ನು ಸಂಘಟನೆಯ ಹಿರಿಯರಿಗೆ ನೀಡಿದ್ದರು. ಆ ಕಾರಣ ಸಂಘಟನೆ ಕಳೆದ ಬಾರಿ ಅಮೀರಅಲಿಯನ್ನು ಬಿಟ್ಟು, ಸಂಘಟನೆ ತೊರೆದು ಹೋಗಿದ್ದ ಶಫಿಯವರಿಗೆ ಮಣೆ ಹಾಕಿತ್ತು.ಆದರೆ, ಅಮೀರಅಲಿ ಈ ಅವಧಿಯ 30ತಿಂಗಳು ಬೆಳಿಗ್ಗೆ 8ರಿಂದ ಸಂಜೆ 5ರವೆಗೆ ಕೆಲಸ ಮಾಡುತ್ತಾ ಅದರೊಳಗಡೆಯೇ ಕಾಮರ್ಿಕರ ಸಮಸ್ಯೆಗಳನ್ನು ಬಗೆಹರಿಸುತ್ತಾ ಬರುತ್ತಿದ್ದಾರೆ. ಕಾರಣ ಇದೇ ಮಾನದಂಡದನ್ವಯ ಅಮೀರಲಿಗೆ ಜಿ.ಎಸ್ ಸ್ಥಾನ ನೀಡಬೇಕೆಂಬುದು ಕೆಲವರ ಅಭಿಮತವಾಗಿದೆ. ಇನ್ನೊಂದೆಡೆ ಕಳೆದ ಚುನಾವಣೆಯಲ್ಲಿ ಅಮೀರಲಿಯನ್ನು ವಿರೋಧಿಸಿದ್ದ ಸ್ವಜಾತಿ ಗುಂಪೊಂದು ಇತ್ತೀಚಿಗೆ ಸಭೆ ಸೇರಿ ಶಫಿಯನ್ನು ಬೆಂಬಲಿಸದಂತೆ ತಿಮರ್ಾನ ತೆಗೆದುಕೊಂಡಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಇದರಲ್ಲಿ ಒಂದು ಸ್ಪಷ್ಟವಾಗಿ ಗಮನಸಿಬೇಕಾದದ್ದೆಂದರೆ, (ಅಮೀರಲಿ ಜಿ.ಎಸ್ ಆದರೆ ತನ್ನದೇ ಆಡಳಿತ ಶುರುಮಾಡುತ್ತಾನೆ, ಮತ್ತು ಈತ ಸಂಘಟನೆಯಲ್ಲಿ ಎಲ್ಲರನ್ನು ತುಳಿಯುತ್ತಾನೆ ಎಂಬ ಹೆದರಿಕೆಗೆ ಯಾರು ನೇರವಾಗಿ ಈತನ ಬೆಂಬಲಕ್ಕೆ ಕೆಲವೊಂದು ಬಾರಿ ಬರುವುದಿಲ್ಲ. ಇದು ಈಗಾಗಲೇ ಅಧ್ಯಕ್ಷರಿಗೆ ಗೊತ್ತಾಗಿದೆ.) ಆದರೆ, ಕಾಮರ್ಿಕರು ಮಾತ್ರ ಬಹಳ ಜಾಗರೂಕತೆಯಿಂದ ಈ ಬಾರಿ ಮತವನ್ನು ಚಲಾಯಿಸುತ್ತಾರೆ. ಯಾಕೆಂದರೆ, ಈ ಸಲ ಅಗ್ರೀಮೆಂಟ್ ಇದೆ. ತಕ್ಕಡಿಯಲ್ಲಿ ಅಮೀರಲಿ ಹಾಗೂ ಅಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೆರಿರುವದರಿಂದ ಅಮೀರಲಿ ಸಂಘಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಗುಮಾನಿ ಕೂಡ ಎಲ್ಲೆಡೆ ಹರಡಿದೆ!ಶಾಂತಪ್ಪ ಮಳ್ಳಿ ಅಲಿಯಾಸ್ ಸೂಪರ್ಫಾಸ್ಟ್.ಕಳೆದ ಬಾರಿ ಪ್ರಧಾನ ಕಾರ್ಯದಶರ್ಿ ಸ್ಥಾನದಿಂದ ವಂಚಿತರಾದ ಶಾಂತಪ್ಪ ಮಳ್ಳಿ ಈ ಬಾರಿ ಅನಿವಾರ್ಯವಾಗಿ ಸಂಘಟನೆ ನನಗೆ ಜಿ.ಎಸ್ ಸ್ಥಾನಕ್ಕೆ ಸ್ಪದರ್ೇ ಮಾಡಲು ಅವಕಾಶ ಮಾಡಿ ಕೊಡುತ್ತದೆ ಎಂದು ತಿಳಿದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೀರಅಲಿಗೆ ಎದುರಾಳಿಯಾಗಿರುವ ಎಲ್ಲ ಸದಸ್ಯರು ಮಳ್ಳಿಯ ಪರ ಬಹಿರಂಗವಾಗಿ ಕೆಲಸ ಮಾಡುತ್ತಾರೆ. ಯಾಕೆಂದರೆ ನಾಳೆ ಮಳ್ಳಿ ಜಿ.ಎಸ್ ಆದರೆ, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎಂಬ ದುರಾಸೆ.ಆದರೆ, ಮಳ್ಳಿ ಜಿ.ಎಸ್ ಸ್ಥಾನಕ್ಕೆ ಅರ್ಹರಲ್ಲ ಎಂಬುದನ್ನು ಕೆಲವೊಬ್ಬರು ಈಗಾಗಲೇ ಕಾಮರ್ಿಕರ ಮಧ್ಯೆ ಹೇಳಿಕೊಂಡು ತಿರುಗುತ್ತಿದ್ದಾರೆ. ಮತ್ತು ಮಳ್ಳಿಗೆ ಜಿ.ಎಸ್ ಕುರಿತು ತಕ್ಕಡಿಯಲ್ಲಿಯೇ ಕೆಲವು ಸದಸ್ಯರಿಗೆ ಅಸಮಧಾನ ಮತ್ತು ಅಸಮಧಾನವಿದೆ.ಮುಂಬರುವ ಚುನಾವಣಿಯಲ್ಲಿ ಎಲ್ಲರೂ ಜಿ.ಎಸ್ ಹುದ್ದೆಗಾಗಿ ಕುಸ್ತ್ತಿ-ಮಸ್ತಿ ಮಾಡುತ್ತಿರುವುದರಿಂದ ಕಾಮರ್ಿಕರ ಮಧ್ಯೆ ಸಮಾನವಾಗಿರಬೇಕಾದ ತಕ್ಕಡಿ ಮೂರು ತುಕ್ಕಡಿಯಾಗಿ ಹೋಗಿದೆ. ಈ ಪರಿಸ್ಥಿತಿಯನ್ನು ವಾಲೇಬಾಬು ಅಗಲಿ ಅಥವಾ ಇನ್ನುಳಿದ ಬೇರೆ ಸಂಘಟನೆಯವರಾಗಲಿ ಬಳಸಿಕೊಂಡು ಮೊದಲಿನ ಪರಿಸ್ಥಿತಿ ನಿಮರ್ಾಣ ಮಾಡಿದರೆ, ಆಶ್ಚರ್ಯಪಡಬೇಕಾಗಿಲ್ಲ!
ಸತ್ಯ. ಆಗಸ್ಟ 15 2010

ಶಿವಪುತ್ರ ಭೇರಿ ನೆನಪು ಮಾತ್ರಹುಲ್ಲಾಗು


ಶಿವಪುತ್ರ ಭೇರಿ ನೆನಪು ಮಾತ್ರಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗುಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿವೇಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ,ಎಲ್ಲರೊಳಗೊಂದಾಗು ನೀ ಮಂಕು ತಿಮ್ಮ ಡಿ.ವಿ.ಜಿಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎನ್ನುವ ತಾತ್ವಿಕ ಮತ್ತು ತಾಕರ್ಿಕ ಸತ್ಯ ಮಿಥ್ಯೆಗಳ ಮಧ್ಯೆ ಕೆಲ ಸಾವುಗಳು ಸಾಮಾಜಿಕ ಹೋರಾಟ ಮತ್ತು ಕ್ಷೇತ್ರಕ್ಕೆ ಆಘಾತವನ್ನು ನೀಡುತ್ತವೆ. 09 ಜೂನ್ 2010ರಂದು ನಿಧನರಾದ ಶಿವಪುತ್ರಪ್ಪ ಭೇರಿಯವರ ಆಕಸ್ಮಿಕ ನಿಧನದಿಂದಾಗಿ ರಾಯಚೂರು ಜಿಲ್ಲೆಯ ಒಬ್ಬ ವಿಚಾರವಾದಿ, ಎಡಪಂಥೀಯ ಹೋರಾಟಗಾರ, ಸಮನ್ವಯ ಸಾಹಿತ್ಯದ ಚಿಂತಕ, ಖ್ಯಾತ ಹೋರಾಟಗಾರ, ಪ್ರಗತಿಪರ ಚಿಂತಕನನ್ನು ಕಳೆದುಕೊಂಡಂತಾಗಿದೆ.ಐವತ್ತೆಂಟರ ಹೊಸ್ತಿಲಿನಲ್ಲಿ ಕಾಲಿರಿಸಿದ್ದ ಶಿವಪುತ್ರಪ್ಪ ಭೇರಿ ಸಕರ್ಾರಿ ಹುದ್ದೆಯಲ್ಲಿದ್ದರೂ ಇತರರಿಗಿಂತ ತೀರಾ ಭಿನ್ನ. ಸಾಮಾನ್ಯವಾಗಿ ಸಕರ್ಾರಿ ನೌಕರರು ತಮ್ಮ ಕಛೇರಿಯ ಕಾಯರ್ಾವಧಿಯ ಹೆಚ್ಚಿನ ಸಮಯವನ್ನು ವೇತನ ತುಟ್ಟಿಭತ್ಯೆ, ಪ್ರವಾಸಭತ್ಯೆಯ ಲೆಕ್ಕಚಾರದಲ್ಲಿ ತೊಡಗುತ್ತಾರೆ. ಯಾವುದೋ ಆಯೋಗದ ಶಿಫಾರಸ್ಸಿನ ಮೇರೆಗೆ ವೇತನ ಪರಿಷ್ಕರಣೆಯಾದಾಗ ಪ್ರತಿಯೊಬ್ಬ ಸಕರ್ಾರಿ ಹಾಗೂ ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ವೈಯಕ್ತಿಕ ಲಾಭದ ಗರಿಷ್ಠ ಪ್ರಯೋಜನ ಕುರಿತು ದಿನವಿಡೀ ಚಚರ್ಿಸುವ ಸಂದರ್ಭ ಸಾಮಾನ್ಯ. ಆದರೆ, ಈ ನೀತಿ ಸಕಲ ಸಕರ್ಾರಿ ನೌಕರರಿಗೆ ಅನ್ವಯವಾಗುವುದಿಲ್ಲ. ಕರ್ತವ್ಯಪರ, ನ್ಯಾಯನಿಷ್ಠುರ, ಕಾಯಕ ಪ್ರಜ್ಞೆ, ಪ್ರಾಮಾಣೆಕತೆಯನ್ನೇ ಮೈಗೂಡಿಸಿಕೊಂಡಿರುವ ಸಕರ್ಾರಿ ನೌಕರರು ತಮ್ಮ ಸಂಬಳದ ಪ್ರಮಾಣಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸುವ ಮುಖಾಂತರ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕಂದಾಯ ಇಲಾಖೆಯ ಮುಖಾಂತರ ಸಕರ್ಾರಿ ನೌಕರಿಗೆ ಸೇರಿದ ಶಿವಪುತ್ರಪ್ಪ ಭೇರಿ, ನೌಕರರ ನೈಜಹಕ್ಕುಗಳನ್ನು ದೊರಕಿಸಿ ಕೊಡುವಲ್ಲಿ ಸಕಲರ ನೀರಿಕ್ಷೆಗಳನ್ನು ಮೀರಿ ಹೋರಾಟಗಳನ್ನು ರೂಪಿಸುತ್ತಿದ್ದರು. ಸಾಮಾನ್ಯವಾಗಿ ಸಕರ್ಾರಿ ನೌಕರರು ಜನಪರ ಹೋರಾಟಗಳನ್ನು ಕೈಗೊಂಡಾಗ ಸಕರ್ಾರದ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸಕರ್ಾರದ ಕೆಂಗಣ್ಣಿನೊಂದಿಗೆ ಮೇಲಾಧಿಕಾರಿಗಳ ದೈನಂದಿನ ಕಿರಿಕಿರಿಗಳನ್ನು ಅನುಭವಿಸುವುದು ಅನಿವಾರ್ಯ.ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಸಂಘದ ನಾಯಕ ತಾಳ್ಮೆ ಕಳೆದುಕೊಳ್ಳುವುದು ಸಾಮಾನ್ಯ ಮತ್ತು ಸ್ವಾಭಾವಿಕ. ಆದರೆ, ಎಂತಹದೇ ವೈಫರಿತ್ಯಗಳು ನೌಕರರಲ್ಲಿ ಸಂಭವಿಸಿದಾಗ ತಮ್ಮ ಸಂಯಮವನ್ನು ಕಳೆದುಕೊಳ್ಳದೇ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯನ್ನು ಹತ್ತು ವರ್ಷಗಳವರೆಗೆ ಮುಂದುವರೆಸಿದರು. ರಾಯಚೂರು ಜಿಲ್ಲಾ ಸಕರ್ಾರಿ ನೌಕರರ ಸಂಘಟನೆಯ 3ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡವರು. ಭೇರಿಯವರ ಸಂಘಟನಾ ಸಾಮಥ್ರ್ಯದ ಪ್ರತೀಕವೆಂದೇ ಪರಿಗಣಿಸಬೇಕು.ರಾಯಚೂರು ಜಿಲ್ಲೆಯ ದಲಿತ ಪರಿವಾರದ ರಾಮಣ್ಣ ಹನುಮಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಶಿವಪುತ್ರಪ್ಪ ಭೇರಿ, ತಮ್ಮ ಪ್ರೌಢ ಶಿಕ್ಷಣವನ್ನು ನಗರದ ಸಕರ್ಾರಿ ಬಾಲಕರ ಪ್ರೌಢಶಾಲೆಯಲ್ಲಿ ಪೂರೈಸಿದವರು. ನಿರಂತರ ಅಧ್ಯಯನ ಶೀಲತೆಯ ಪ್ರಭಾವದಿಂದಾಗಿ ಶಿವಪುತ್ರಪ್ಪನವರು ಶಾಲೆಯಲ್ಲಿಗಿಂತ ಸಮಾಜದಲ್ಲೇ ಕಲಿತ್ದೇ ಹೆಚ್ಚು. ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತಗೊಳ್ಳದೇ ಪರಿವರ್ತನಾಶೀಲ ಸಾಮಾಜಿಕ ವೇದನೆಗಳಿಗೆ ನಿರಂತರ ಸ್ಪಂದಿಸುವದರ ಮುಖಾಂತರ ಹೋರಾಟಮಯ ಬದುಕಿನ ಮುಂಚೂಣಿ ನಾಯಕನಾಗಿ ರೊಪಗೊಂಡವರು. ರಾಯಚೂರು ಜಿಲ್ಲೆಯ ಬಂಡಾಯ ಸಾಹಿತ್ಯ, ಪ್ರಗತಿಪರ ಹೋರಾಟಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳುವದರ ಜೊತೆಗೆ ಬಂಡಾಯದ ಗೆಳೆಯರಾದ ಬಾಬು ಬಂಡಾರಿಗಲ್, ಸಮುದಾಯದ ಗೆಳೆಯರಾದ ಕರಿಯಪ್ಪ ಮಾಸ್ತಾರ್ ಮತ್ತು ಅನೇಕ ಜಿಲ್ಲೆಯ ಸಾಹಿತಿಗಳೊಂದಿಗೆ ವೈಚಾರಿಕತೆಯ ಚಚರ್ೆಗಳನ್ನು ಮಾಡುತ್ತಿದ್ದರು. ತಮ್ಮ 58ರ ಸಾರ್ಥಕ ಬದುಕಿನ ಏರಿಳಿತಗಳಲ್ಲಿ ಎದುರಾದ ನೋವು-ಸಂಕಟಗಳಿಗೆ ಮುಖಾಮುಖಿಯಾಗುವದರ ಮುಖಾಂತರ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡವರು. ದಲಿತ ಬಂಡಾಯ, ಸಮತಾವಾದ, ಮಾಕ್ಸರ್ಿಸಂ, ಲೆನಿನ್ಸಂ ಮುಂತಾದ ಹೋರಾಟಗಾರರ ಬದುಕಿನ ಮೌಲ್ಯಗಳನ್ನು ತನ್ನಂತರಂಗದಲ್ಲಿ ರೂಡಿಸಿಕೊಂಡವರು. ಸಮಾಜದ ಸಾಮಾಜಿಕ ವಿಜ್ಞಾನಿಯಾಗಿ ವೈಚಾರಿಕ ಬದುಕಿನ ಚಲನೆಶೀಲತೆಯನ್ನು ಮೈಗೂಡಿಸಿಕೊಂಡವರು.ನೆರೆರಾಜ್ಯ ಆಂದ್ರಪ್ರದೇಶದ ಮಾದರಿಯಲ್ಲಿ ಮಾದಿಗರ ಮೀಸಲಾತಿ ಹೋರಾಟ ಸಮಿತಿಯನ್ನು ಸಂಘಟಿಸುವದರ ಮುಖಾಂತರ ಬೆಂದವರ ಬದುಕಿಗೆ ನೋವು ನಿವಾರಣೆಯ ಮಲಾಮ್ನ್ನು ಸವರಿದವರು. ಯಾವುದೇ ಸಂದರ್ಭದಲ್ಲಿ ಎದೆಗುಂದದೆ, ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸದೇ ಶಿವಪುತ್ರಪ್ಪ ಭೇರಿ ಜನಪರ ಹೋರಾಟಗಳಿಗೆ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದರು. ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘಟಿಸುವ ಹಲವಾರು ಹೋರಾಟಗಳಿಗೆ ಏಕಪಕ್ಷೀಯ ನಿಧರ್ಾರ ತೆಗೆದುಕೊಳ್ಳದೇ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಗೆ ಅನುಗುಣವಾಗಿ ಸಂಗಾತಿಗಳೊಂದಿಗೆ ಮುಕ್ತವಾಗಿ ಚಚರ್ಿಸಿ ಸಾರ್ವಜನಿಕ ಅಭಿಪ್ರಾಯಗಳನ್ನು ಕ್ರೋಡಿಕರಿಸುವ ಮೂಲಕ ಹೋರಾಟಗಳಲ್ಲಿ ಹೋರಾಟಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಸ್ವರೂಪವನ್ನು ಕಣ್ಣಾರೆ ಕಂಡ ರಾಜ್ಯ ಸಮಿತಿಯ ಪಧಾದಿಕಾರಿಗಳು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಸಕರ್ಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಹಿಂದೆ ಒಂದು ಸಕರ್ಾರ ಜಾಣ ಕುರುಡತನವನ್ನು ಪ್ರದಶರ್ಿಸಿದಾಗ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಪಧಾಧಿಕಾರಿಗಳು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ನಿಧರ್ಾರ ಕೈಗೊಂಡರು. ಅಂದಿನ ಹೋರಾಟದಲ್ಲಿ ಶಿವಪುತ್ರಪ್ಪ ಭೇರಿಯವರ ಕೆಚ್ಚೆದೆಯ ಪಾತ್ರ ಪ್ರಮುಖವಾಗಿತ್ತು. ಇದು ರಾಜ್ಯ ನಾಯಕರ ಮೆಚ್ಚುಗೆಗೂ ಪಾತ್ರವಾಯಿತು. ಹಲವಾರು ಸಂದರ್ಭಗಳಲ್ಲಿ ಶಿವಪುತ್ರಪ್ಪ ಭೇರಿಯವರ ಹೋರಾಟದ ಶೈಲಿ ರಾಜ್ಯದ ಇತರ ಜಿಲ್ಲೆಗಳಿಗೂ ಶ್ರೇಷ್ಠ ಮಾದರಿಯಾಗಿತ್ತು. ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಮಟ್ಟದ ನಾಯಕರು ಭೇರಿಯವರ ಸಲಹೆ ಸೂಚನೆಗಳನ್ನು ಪಡೆದು ಹೋರಾಟದ ಯೋಜನೆಗಳನ್ನು ರೂಪಿಸುತ್ತಿದ್ದರು ಎನ್ನುವುದು ಆಶ್ಚರ್ಯವಾದರೂ ಸತ್ಯ ಸಂಗತಿ. ತಮ್ಮ ಹೋರಾಟದ ಮನೋಭಾವದಿಂದಾಗಿ ಶಿವಪುತ್ರಪ್ಪ ಭೇರಿ ರಾಯಚೂರು ಜಿಲ್ಲೆಯ ಸಂಘಟನೆಯ ಗೌರವವನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸುವುದು ಜಿಲ್ಲೆಯ ಜನಪರ ಚಳುವಳಿಯ ಚರಿತ್ರೆಯ ಹೆಗ್ಗಳಿಕೆ. ಶಿವಪುತ್ರಪ್ಪ ಭೇರಿಯವರು ಜಿಲ್ಲಾ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡದ್ದು ಚರಿತ್ರೆಯ ಒಂದು ಪರ್ವಕಾಲ. ಪಿವಿ ನರಸಿಂಹರಾವ್ ಪ್ರಧಾನಮಂತ್ರಿಯಾಗಿ ಆಡಳಿತ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಂದಿನ ಹಣಕಾಸು ಸಚಿವರು ಮತ್ತು ಇಂದಿನ ಪ್ರಧಾನಿಯಾಗಿರುವ ಡಾ. ಮನಮೋಹನ್ಸಿಂಗ್ರು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಆಥರ್ಿಕ ಪ್ರಗತಿಯ ಧೋರಣೆಗೆ ಅನುಗುಣವಾಗಿ ಎಲ್.ಪಿ.ಜಿ ಜಾರಿಗೆ ಬಂದಿತು. ಎಲ್.ಪಿ.ಜಿಯ ನೆಪದಲ್ಲಿ ತೃತೀಯ ಹಾಗೂ ಅಭಿವೃದ್ದಿ ಶೀಲ ರಾಷ್ಟ್ರಗಳ ಕುತಂತ್ರಗಳಿಗೆ ಬಲಿಯಾಗಬೇಕಾಯಿತು. ಇವೆಲ್ಲವುಗಳ ಪ್ರಭಾವ ನೇರವಾಗಿ ಸಕರ್ಾರಿ ನೌಕರರ ಮೇಲೆ ಕಂಡು ಬಂತು. ನೌಕರಿ ಮಾಡುತ್ತೇವೆ ಎನ್ನುವವರಿಗೆ ಕಡ್ಡಾಯದ ರಜೆ ನಿಯಮ ಜಾರಿಗೆ ಬಂದಿತು. ಇಂತಹ ಕ್ಲಿಷ್ಠ ಪರಿಸ್ಥಿತಿಯಲ್ಲಿ ಮೂಕಪ್ರೇಕ್ಷಕನಾಗದ ಭೇರಿ ಜನಾಭಿಪ್ರಾಯವನ್ನು ರೂಪಿಸುವದರ ಮುಖಾಂತರ ಹಲವಾರು ಹೋರಾಟಗಳಿಗೆ ಸೈದ್ದಾಂತಿಕ ನೆಲೆಗಟ್ಟನ್ನು ರೂಪಿಸಿದರು. ಹಂತಹಂತವಾಗಿ ರಾಯಚೂರು ಜಿಲ್ಲೆಯ ಒಬ್ಬ ಚಿಂತಕನಾಗಿ ಸೂಫಿ ಸಾಹಿತ್ಯದ ಪ್ರತಿಪಾಧಕನಾಗಿ, ಧೀಮಂತ ಹೋರಾಟಗಾರನಾಗಿ ಶೋಷಿತ ದಲಿತರ ಬದುಕಿನ ಹೊಸ ಭರವಸೆಗಳ ಸಂಘಟನೆಯ ನೇತಾರನಾಗಿ ಇನ್ನೂ ಎತ್ತೆರೆತ್ತರಕ್ಕೆ ಬೆಳೆಯಬಲ್ಲ, ಸಕಲರ ನಿರೀಕ್ಷೆಗಳನ್ನು ಪೂರೈಸಬಲ್ಲ ಶಿವಪುತ್ರಪ್ಪ ಭೇರಿಯವರ ಕೌಟುಂಬಿಕ ಬದುಕಿನ ಒಂದು ಅನಿರೀಕ್ಷಿತ ಶಾಕ್ ಅವರಿಗೆ ಹೆಚ್ಚಿನ ಆಘಾತವನ್ನು ನೀಡಿತು. ಭವಿಷ್ಯದಲ್ಲಿ ಕುಟುಂಬದವರ ಕನಸುಗಳನ್ನೆಲ್ಲ ಸಾಕಾರಗೊಳಿಸ ಬೇಕಾಗಿದ್ದ, ಜೀವನದ ಸಂಧ್ಯಾಕಾಲದಲ್ಲಿ ಊರುಗೋಲು ಆಗಬೇಕಾಗಿದ್ದ ಮಗ ಅಪಘಾತದಲ್ಲಿ ತೀರಿಕೊಂಡಾಗ ಭೇರಿ ಅಂತಮರ್ುಖಿಯಾದರು. ಬದುಕಿನ ವೈರುಧ್ಯಗಳಿಗೆ ಸಾಂತ್ವಾನ ನೀಡುವ ಸೂಫಿ ಸಾಹಿತ್ಯದ ಅಂತರಂಗದ ಮೌಲ್ಯಗಳಲ್ಲಿ ಹೊಸ ಬೆಳಕನ್ನು ಕಂಡುಕೊಂಡರು. ಹೊಸ ಬೆಳಕಿನ ಹುಡುಕಾಟದಲ್ಲಿ ಸಮಗ್ರವಾಗಿ ಅಪರ್ಿಸಿಕೊಂಡಿದ್ದ ಶಿವಪುತ್ರ ಭೇರಿಯ ಆಕಸ್ಮಿಕ ಸಾವು ನೈಜಜನಪರ ಹೋರಾಟಗಳಿಗೆ ಮತ್ತು ಹೋರಾಟಗಾರರಿಗೆ ಆದ ಬಹುದೊಡ್ಡ ನಷ್ಟವಾಗಿದೆ.ಅಭೌತಿಕ ಸಂಸ್ಕೃತಿಯಿಂದ ಭೌತಿಕ ಸಂಸ್ಕೃತಿಯ ಆಸೆ-ಆಮಿಷಗಳಿಗೆ ಬಲಿಯಾಗಿ ಪ್ರತಿಯೊಬ್ಬರು ಹಣದ ದಾಹಕ್ಕಾಗಿ ತಮ್ಮನ್ನು ತಾವೇ ಮಾರಾಟದ ವಸ್ತುಗಳನ್ನಾಗಿ ರೂಪಿಸಿಕೊಳ್ಳುತ್ತಿರುವ ಸಂಕಷ್ಟ ಪರಿಸ್ಥಿತಿಯಲ್ಲಿ ಶಿವಪುತ್ರಪ್ಪ ಭೇರಿಯವರಂತಹ ನಾಯಕರು ಮೇಲಿಂದ ಮೇಲೆ ಕೇವಲ ನೆನಪು ಮಾತ್ರ ಆಗದೇ ಅನಿವಾರ್ಯವೂ ಆಗುತ್ತಾರೆ. ಶಿವಪುತ್ರಪ್ಪ ಭೇರಿಯವರ ನಿಧನದಿಂದ ರಾಯಚೂರು ಜಿಲ್ಲೆಯ ಹೋರಾಟದ ಒಂದು ಯುಗ ಅಂತ್ಯಗೊಂಡಿದೆ ಎನ್ನುವುದು ಜಿಲ್ಲೆಯ ಪ್ರತಿಯೊಬ್ಬ ಚಿಂತನಶೀಲರ ಮನದಾಳದಲ್ಲಿ ಕಂಡು ಬರುವ ಸಾಮಾನ್ಯ ಸಂಗತಿ. ಸಾವು ಎಲ್ಲರಿಗೂ ಬರುತ್ತದೆ. ಆದರೆ, ಎಷ್ಟು ಜನ ಸಾವಿಗಿಂತ ಮುಂಚಿನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ. ಸಾರ್ಥಕತೆಯನ್ನೇ ಬದುಕಿನ ಮೌಲ್ಯವಾಗಿಸಿಕೊಂಡಿದ್ದ ಶಿವಪುತ್ರಪ್ಪ ಭೇರಿ ಭೌತಿಕ ಲೋಕದಿಂದ ಕಣ್ಮರೆಯಾದರೂ ಅವರ ಅಭಿಮಾನ ಬಳಗದ ಮನದಾಳದಲ್ಲಿ ಮಾತ್ರ ಶಾಶ್ವತವಾಗಿ ನೆಲೆಸಿದ್ದಾರೆ.
ಅಯ್ಯಪ್ಪ ತುಕ್ಕಾಯಿ

ಬಳ್ಳಾರಿ ಜನಾರ್ದನರೆಡ್ಡಿ ಪಾಟರ್ಿ (ಬಿ.ಜೆ.ಪಿ)


ಬಳ್ಳಾರಿ ಜನಾರ್ದನರೆಡ್ಡಿ ಪಾಟರ್ಿ (ಬಿ.ಜೆ.ಪಿ)ರೆಡ್ಡಿಗಳ ಪಂಥಾಹ್ವಾನವನ್ನು ಸ್ವೀಕರಿಸಿ ಕಾಂಗ್ರೇಸ್ನವರು ಬಳ್ಳಾರಿಗೆ ಹೋಗುತ್ತಿರುವುದು,ಅದಿರು ರಪ್ತು ನಿಷೇದ,ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವುದು,ಶ್ರೀರಾಮುಲು ತನ್ನ ಬಳ್ಳಾರಿಗೆ ದೃಷ್ಟಿಯಾಗಬಾರದೆಂಬ ಕಾರಣಕ್ಕೆ ಪದೇ ಪದೇ ಬರುವ ತಲೆ ಕೂದಲನ್ನು ಬೊಳಿಸಿಕೊಂಡಿರುವುದು,ತಾಸಿನಿಂದ ತಾಸಿಗೆ ಉಲ್ಟಾಹೊಡೆಯುವ ಬ್ರಾಂಡಿ ಮಂತ್ರಿ ಬ್ರಾಂಡ್ನ ಶಾಸಕರು,ಇದೆಲ್ಲವನ್ನು ಮನರಂಜನೆಯಾಗಿ ಜನಸಾಮಾನ್ಯರಿಗೆ ಉಣಬಡಿಸುತ್ತಿರುವ ಮಾಧ್ಯಮಗಳು,ಒಟ್ಟಾರೆ ಈ ಎಲ್ಲಾ ಬೆಳವಣೆಗೆಗಳನ್ನು ಕನರ್ಾಟಕ ರಾಜ್ಯ ಎಂದೆಂದೂ ಕಂಡಿದ್ದಿಲ್ಲ.!ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅನಿವಾರ್ಯವಾಗಿ ಕಾಣಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಾಸ್ತವಿಕ ನೆಲಗಟ್ಟಿನ ಮೇಲೆ ಪ್ರಸ್ತುತ ವಿಧ್ಯಮಾನಗಳತ್ತ ಒಂದು ಝಲಕ್..!ಎಲ್ಲಾ ರೀತಿಯ ಜನವಿರೋಧಿ ನೀತಿಗಳನ್ನು ಕಟಿಬದ್ದವಾಗಿ ಜಾರಿಗೆ ತರುವಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇದರಿಂದ ದೇವೆಗೌಡರ ಜೆ.ಡಿ.ಎಸ್ ಪಕ್ಷವು ಹೊರತಾಗಿಲ್ಲ. ಕಾಂಗ್ರೇಸ್ ಮತ್ತು ಜೆ.ಡಿ.ಎಸ್ ಗಳು ಜಾತ್ಯಾತೀತ ವಿಚಾರಗಳನ್ನು ಹೇಳಿಕೊಂಡು ತಮ್ಮ ಆಚರಣೆಯಲ್ಲಿ ಅದೇ ಜಾತಿಯತೆಯನ್ನೇ ಮಾಡುತ್ತವೆ. ಆದರೆ, ಬಿಜೆಪಿಗಳಿಗೆ ಜಾತಿಯತೇ ಎನ್ನುವುದೇ ಒಂದು ಬಹಿರಂಗ ಅಜೆಂಡಾ. ಕೋಮು-ಜ್ವಾಲೆ-ದಳ್ಳುರಿಗಳನ್ನು ಹುಟ್ಟುಹಾಕುವ ಇತಿಹಾಸ ಬಿಜೆಪಿಗಳಿಗೆ ಇದ್ರೆ, ಅವೆಲ್ಲವುಗಳಿಗೆ ನೀರು ಗೊಬ್ಬರ ಹಾಕಿ ಬೆಳಿಸುವ ಕೀತರ್ಿ ಜೆ.ಡಿ.ಎಸ್ ಕಾಂಗ್ರೇಸ್ಗಳಿಗಿದೆ.ಅಂದ ಮೇಲೆ ಇವರ್ಯಾರು ಸಾಚಾಗಳಲ್ಲ, ಸಮಾಜದ ಉದ್ದಾರಕರಲ್ಲ ಎಂಬುದು ಜನರಿಗೆ ಗೊತ್ತು. ಆದ್ಯಾಗ್ಯೂ ಜನತೆಗೆ ಚುನಾವಣೆಯಲ್ಲಿ ಅನಿವಾರ್ಯತೆ ಇರುವದರಿಂದ ಈ ಎಲ್ಲರನ್ನು ಅವಲಂಭಿಸಿದ್ದಾರೆ. (ಚುನಾವಣೆಯ ಸಂದರ್ಭದಲ್ಲಿ ಹಣ, ಹೆಂಡಕ್ಕಾಗಿ ಮತಗಳನ್ನು ಮಾರಿಕೊಳ್ಳುವುದು ಸೇರಿದಂತೆ ಮುಂತಾದವುಗಳು)ಚೆಡ್ಡಿಗಳ ರಾಜಕೀಯ ಪಕ್ಷ ರೆಡ್ಡಿಗಳ ಪಾಟರ್ಿಯಾದದ್ದು ಹೀಗೆ...!ಬಿಜೆಪಿಯೂ ಸಕರ್ಾರವನ್ನು ರಚಿಸಲು ಪೂರ್ಣಪ್ರಮಾಣದ ಬಹುಮತವನ್ನು ಪಡೆಯದೇ ಹೋದಾಗ ಬಳ್ಳಾರಿಯ ರೆಡ್ಡಿಗಳು ಹಡಬೆ ದುಡ್ಡಲ್ಲಿ ಆಪರೇಷನ್ ಕಮಲ ಎಂಬ ಹೆಸರಿನಡಿ ಬೇರೆ ಪಕ್ಷಗಳ ಶಾಸಕರನ್ನು ಕೊಂಡುಕೊಂಡರು. ನಂತರ ಅವ್ರುಗಳಿಗೆ ಉಪ ಚುನಾವಣೆಯಲ್ಲಿ ಗೆಲ್ಲಲು ಕೋಟಿಗಟ್ಟಲೇ ಹಣವನ್ನು ನೀಡಿ ಕೊನೆಗೆ ಅವರು ಗೆಲ್ಲುವಂತೆಯೂ ನೋಡಿಕೊಂಡರು. ಅದೊಂದು ಸುವರ್ಣ ಸಮಯ ಬಿಜೆಪಿಯ ಎಲ್ಲಾ ಮುಖಂಡರಿಗೆ ಹರ್ಷವನ್ನು ತಂದುಕೊಟ್ಟಿತ್ತು.! ಯಾಕೆಂದರೆ, ಯಾವುದೇ ತತ್ವ-ಸಿದ್ದಾಂತಗಳಿಂದ ಬಂದಿರದ ರೆಡ್ಡಿಗಳು ಏಕಾಏಕಿ ಬೀಳುತ್ತಿರುವ ಸಕರ್ಾರವನ್ನು ಅಷ್ಟೊಂದು ಸಲೀಸಾಗಿ ಉಳಿಸಿದ್ದಾರೆಂದರೆ ಮಾಮೂಲಿಯಲ್ಲ ಎಂದು ತಿಳಿದ ಕೇಂದ್ರ ನಾಯಕರಿಗೆ ಅಚ್ಚರಿಯಾಯಿತು..!ಆಗಲೇ ರೆಡ್ಡಿಗಳು ಕನರ್ಾಟಕದಲ್ಲಿದ್ದ ಭಾರತೀಯ ಜನತಾ ಪಾಟರ್ಿಯನ್ನು ಬಳ್ಳಾರಿ ಜನಾರ್ಧನರೆಡ್ಡಿ ಪಾಟರ್ಿ ಎಂದು ಬಿಜೆಪಿಗೆ ಮರುನಾಮಕರಣ ಮಾಡಿಕೊಂಡರು. ಕ್ರಮೇಣ ಸಕರ್ಾರವೆಂದರೆ ನಾವು ನಾವಂದರೆ ಸಕರ್ಾರ ಎಂಬ ಅಹಂ ರೆಡ್ಡಿಗಳಿಗೆ ಬಂದು ಬೀಗತೊಡಗಿದರು. ಹಡಬೆ ದುಡ್ಡಿಗೆ ಹರಾಜಾಗಿದ್ದ ಶಾಸಕರೆಲ್ಲ ಇವರ ಬೆಂಗಾವಲಿಗೆ ನಿಂತರು. ನಂತರ ಆಡಳಿತದಲ್ಲಿ ಯಾವುದೇ ತೊಂದರೆಯಾಗದಂತೆ ತಮಗೆ ಬೇಕಾದ ಡಿಸಿ, ಎಸ್ಪಿಗಳನ್ನು ಹಾಕಿಸಿಕೊಂಡರು. ಅದರಂತೆ ಸಕರ್ಾರದಲ್ಲಿ ತಮಗೆ ಬೇಡವಾದ ಅಧಿಕಾರಿಗಳನ್ನು ವರ್ಗ ಮಾಡಿಸ ತೊಡಗಿದರು. ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡುವಂತೆ ಪಕ್ಷದ ಹಿರಿಯ ಮುಖಂಡರ ಮೇಲೆ ಒತ್ತಡವನ್ನು ಹಾಕಿ ಯಶಸ್ವಿಯಾದರು. ಇನ್ನೂ ವಿರೋಧಪಕ್ಷವಾದ ಕಾಂಗ್ರೇಸ್ ಹಾಗೂ ಜೆ.ಡಿ.ಎಸ್ ಪಕ್ಷಗಳನ್ನು ಒಂದೇ ಸಮನೆ ತೆಗಳುತ್ತಾ, ಸೇಡಿನ ರಾಜಕಾರಣ ಮಾಡುತ್ತ ಬಂದರು. ವೈ.ಎಸ್.ಆರ್ ಮಗನೊಂದಿಗೆ ಕೋಟಿಗಟ್ಟಲೇ ಬಜೆಟ್ನೊಂದಿಗೆ ಬ್ರಾಹ್ನೀಣಿ ಸ್ಟೀಲ್ ಕೈಗಾರಿಕೆಯೊಂದನ್ನು ಆರಂಭಿಸಲು ಯೋಜನೆಯೊಂದನ್ನು ಹಾಕಿದರು. ಅದಕ್ಕೆ ಪೂರಕವಾಗಿ ಮಂದಿಯ ಕೂದಲಿನ ದೇವರಾದ ತಿರುಪತಿ ತಿಮ್ಮಪ್ಪನಿಗೆ ವಜ್ರಭರಿತ ಕೀರಿಟವೊಂದನ್ನು ನೀಡಿದರು. ಹೀಗೆ ರೆಡ್ಡಿಗಳ ದರ್ಪ ಜಾಸ್ತಿಯಾಗುತ್ತಾ ಸಾಗಿದಂತೆ ಅವರಿಗೆ ಗಾಡಫಾದರ್ ಆಗಿದ್ದ ಆಗಿನ ಮುಖ್ಯಮಂತ್ರಿ ವೈ.ಎಸ್.ಆರ್ ರಾಜಶೇಖರ ರೆಡ್ಡಿ ಹೆಲಿಕ್ಯಾಪ್ಟರ್ ಪತನದಲ್ಲಿ ಸಾವನ್ನಪ್ಪಿದರು. ಅಲ್ಲಿಂದಲೇ ರೆಡ್ಡಿಗಳಿಗೆ ತಮ್ಮ ಅಂತ್ಯದ ಮುನ್ಸೂಚನೆಗಳು ಬರತೊಡಗಿದವು.ಇವರ ಈ ಎಲ್ಲಾ ದುರಾಡಳಿತವನ್ನು ದಿನನಿತ್ಯ ಕಾಣುತ್ತಿದ್ದ ವಿರೋಧಪಕ್ಷಗಳಿಗೆ ಹೊಟ್ಟೆಯಲ್ಲಿ ಮೆಣಸಿನಕಾರ ಕಲಸಿದಂತಾಗುತ್ತಿತ್ತು. ಆದರೂ ಕೂಡ ಅದನ್ನೆಲ್ಲ ಸಹಿಸಿಕೊಂಡು ಕಾಂಗ್ರೇಸ್ ಮತ್ತು ಜೆ.ಡಿ.ಎಸ್ನವರು ಸಮಯಕ್ಕಾಗಿ ಕಾದು ಕುಳಿತಿದ್ದರು. (ಬಿಜೆಪಿಯ ವಿರುದ್ದ ಸಮರಕ್ಕೆ ಬೀದರನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲು ಕುಮಾರಸ್ವಾಮಿ ಆಗಸ್ಟ್ ತಿಂಗಳಿನಲ್ಲಿ ದಿನಾಂಕವನ್ನು ನಿಗದಿ ಮಾಡಿದ್ದರು.)ಆದರೆ,ಮೊನ್ನೆ ಸದನದಲ್ಲಿ ಬಿಜೆಪಿ ಕೆಲವು ಎಂ.ಎಲ್.ಎಗಳು ತಾಕತ್ತಿದ್ರೆ, ನೀವು ಬಳ್ಳಾರಿಗೆ ಬರ್ರೀ.. ನಿಮ್ಮನ್ನು ನೋಡಿಕೊಳ್ಳುತ್ತೀವಿ ಎಂದು ಸಿದ್ರಾಮಯ್ಯನ ಪಡೆಗೆ ಸವಾಲು ಹಾಕಿದಾಗ, ಅವಕಾಶಕ್ಕಾಗಿ ಕಾದು ಕೂತಿದ್ದ (ಬಿಸಿಯಿದ್ದಾಗಲೇ ಕಬ್ಬಿಣವನ್ನು ಬಡಿದರೆ, ಬಗ್ಗುತ್ತದೆ ಎಂಬಂತೆ) ಕಾಂಗ್ರೇಸ್ನವರು ಒಳಗೊಳಗೆ ಸಭೆಗಳನ್ನು ಮಾಡಿ, ಹೈಕಮಾಂಡ್ನಿಂದ ಅನುಮತಿಯನ್ನು ಪಡೆದು ಬಳ್ಳಾರಿಗೆ ಪಾದಯಾತ್ರೆ ಮಾಡುವ ಕಾರ್ಯಕ್ರಮವನ್ನು ರೂಪಿಸಿಯೇ ಬಿಟ್ಟರು. ಕೋಮಾ ಸ್ಥಿತಿಯಲ್ಲಿದ್ದ ಕಾಂಗ್ರೇಸ್ಗೆ ಇದೊಂದು ಪಾದಯಾತ್ರೆಯೂ ಸ್ವಲ್ಪ ಆಸರೆಯಾಯಿತು. ರೆಡ್ಡಿಗಳು ಸಿದ್ದರಾಮ್ಯನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಸವಾಲು ಹಾಕಿದ್ದರೆ, ಇದಕ್ಕೆ ಇಷ್ಟೊಂದು ಮಹತ್ವ ಬರುತ್ತಿರಲಿಲ್ಲವೇನೋ? ಯಾಕೆಂದರೆ ಸಿದ್ದರಾಮಯ್ಯ ಈಗ ಅನುಭವಿ ರಾಜಕಾರಣಿ ಮತ್ತು ರಾಜಕೀಯ ಮುತ್ಸದ್ಧಿ ದೇವೆಗೌಡರನ್ನೇ ಎದುರು ಹಾಕಿಕೊಂಡು ಚಳುವಳಿಗಳನ್ನು ಕಟ್ಟಿದ ಒಚಿ ಟಜಚಿಜಜಡಿ ಇದರ ಜೊತೆಯಲ್ಲಿ ಸಿದ್ದರಾಮಯ್ಯನಿಗೆ ಹೇಳಿಕೊಳ್ಳುವಷ್ಟು ಜನ ಬೆಂಬಲವಿದೆ. ಅದರಂತೆ ಎಲ್ಲ ಕುರುಬರ ಪಾಲಿಗೆ ಪರಮೋಚ್ಛ ನಾಯಕ ಸಿದ್ದರಾಮಯ್ಯ. (ಇಲ್ಲಿ ಈಶ್ವರಪ್ಪ, ಬಂಡೆಪ್ಪ ಕಾಶೆಂಪೂರನನ್ನು ಕುರುಬರು ತಮ್ಮ ನಾಯಕರೆಂದು ಎಂದು ಹೇಳಿಕೊಳ್ಳುವುದಿಲ್ಲ.) ಕಾರಣ ಇಷ್ಟೆಲ್ಲ ಹಿನ್ನಲೆಯಿರುವ ಸಿದ್ದರಾಮಯ್ಯನಿಗೆ ಸವಾಲು ಹಾಕಿರುವದರಿಂದ ಕಾಂಗ್ರೇಸ್ ಪ್ರತಿಷ್ಟೆಯ ಪ್ರಶ್ನೆಯಾಗಿ ಪಾದಯಾತ್ರೆಯನ್ನು ಕೈಗೆತ್ತಿಕೊಂಡಿತು.ಇನ್ನು ಪಾದಯಾತ್ರೆ ನಡೆಯುತ್ತಲೇ ಸಾಗಿದೆ. ಆದರೆ, ಬಳ್ಳಾರಿ ಜನಾರ್ಧನರೆಡ್ಡಿ ಪಕ್ಷದ ನಾಯಕರು ಜೈಲು, ರೌಡಿಸಂ, ಕೊಲೆ ಅಂತ ಏನೆಲ್ಲ ಪ್ರಕ್ರಿಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದೆಲ್ಲ ಸಾಲದೆಂಬಂತೆ ತಲೆಗಳನ್ನು ಬೊಳಿಸಿಕೊಂಡು ಬಳ್ಳಾರಿ ಜಿಲ್ಲೆಯಲ್ಲಿ ಪಾದಯಾತ್ರೆಗಳನ್ನು ಮಾಡಲು ಆರಂಭಿಸಿದ್ದಾರೆ. ಶ್ರೀರಾಮುಲು ತಲೆಬೊಳಿಸಿದ್ದನ್ನು ಕಂಡು ಆತನ ಅಭಿಮಾನಿಗಳು ತಲೆಬೊಳಿಸುತ್ತಿದ್ದರಿಂದ ನಮ್ಮ ಹಡಪದ ಅಪ್ಪಣ್ಣನವರಿಗೆ ಗಿರಾಕಿಗಳು ಜಾಸ್ತಿಯಾದಂತಾಗಿದೆ.ಚೆಡ್ಡಿಗಳಿಗೆ ರೆಡ್ಡಿಗಳು ನುಂಗಲಾರದ ತುತ್ತು!ಸಕರ್ಾರವನ್ನು ರಚಿಸುವ ಸಂದರ್ಭದಲ್ಲಿ ರೆಡ್ಡಿಗಳನ್ನು ಬೇಷ್ ಎಂದು ಒಪ್ಪಿಕೊಂಡಿದ್ದ ಸಂಘಪರಿವಾರಿಗಳಿಗೆ ಅದೇ ರೆಡ್ಡಿಗಳು ಇಂದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸಕರ್ಾರವನ್ನು ಯಶಸ್ವಿಯಾಗಿ 5ವರ್ಷ ಪೂರೈಸಿ ಇಲ್ಲಿಂದಲೇ ಭದ್ರಬುನಾದಿಯೊಂದನ್ನು ಹಾಕಬೇಕೆಂದಿದ್ದ ಸಂಘಪರಿವಾರಿಗಳ ಆಲೋಚನೆ ಮಣ್ಣುಮುಕ್ಕುತ್ತಿದೆ! ಈ ಅವಧಿಯೊಳಗಡೆ ತನ್ನ ಕಿಲಾಡಿ ಸಂಘಟನೆಗಳನ್ನು ಕಟ್ಟಿ ಹಿಂದುತ್ವದ ವಿಷಭೀಜವನ್ನು ಬಿತ್ತಲು ಚಿಂತನೆಯನ್ನು ಮಾಡಿತ್ತು.ಆದರೆ,ಕಾಂಗ್ರೇಸ್ಸಿಗರು ಮಾಡುತ್ತಿರುವ ಪಾದಯಾತ್ರೆ, ಪಕ್ಷದಲ್ಲಿನ ಭಿನ್ನಮತ, ರೆಡ್ಡಿಗಳ ಕುರಿತು ಜನತೆಗಿರುವ ಅಸಹ್ಯ ಅಸಮಧಾನ, ಕುಲಾಂತರಿ ಶಾಸಕರೆಲ್ಲ ವಾರಕ್ಕೊಮ್ಮೆ ರೆಸಾಟರ್್ಗಳಲ್ಲಿ ಸೇರುತ್ತಾ ಸಭೆಗಳನ್ನು ಮಾಡುತ್ತಿರುವುದು, ರೆಡ್ಡಿಗಳನ್ನು ಸಂಪುಟದಿಂದ ತೆಗೆದುಹಾಕಿದರೆ ತಮ್ಮ ಬುಡಕ್ಕೆಲ್ಲಿ ಪೆಟ್ಟು ಬೀಳುತ್ತದೆ ಎಂಬ ಭಯ, ಯಡಿಯೂರಪ್ಪ ರೆಡ್ಡಿಗಳನ್ನು ತೆಗೆದುಹಾಕುವಂತೆ ಮಾಡುತ್ತಿರುವ ಒತ್ತಡ, ಹಡಬೆ ದುಡ್ಡಿನ ಶಾಸಕರನ್ನೆಲ್ಲ ಕಂಡು ಸಂಘಪರಿವಾರಿಗಳ ನಿದ್ದೆಬಾರದಂತಾಗಿದೆ. ಏನಾದರೂ ಅವಸರದಿಂದ ಕ್ರಮಗಳನ್ನು ತೆಗೆದುಕೊಳ್ಳಲು ಸಕರ್ಾರದಲ್ಲಿ ಎಡವಟ್ಟಾಗುವುದೇ ಜಾಸ್ತಿಯಿದೆ.ಆದ್ದರಿಂದ ಸಂಘಪರಿವಾರಿಗಳ ದಿನಾಲು ಕೇಶವಕೃಪದಲ್ಲಿ ಕುಳಿತು ಬೈಠಕ್ಗಳ ಮೇಲೆ ಬೈಠಕ್ ಮಾಡುತ್ತಾ, ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಂಘಪರಿವಾರಕ್ಕೆ ರಾಷ್ಟ್ರಮಟ್ಟದಲ್ಲಿ ಬೇಕಾದ ಸುಷ್ಮಾಸ್ವರಾಜ್ಳೇ ಈ ರೆಡ್ಡಿಗಳಿಗೆ ಮಹಾತಾಯಿಯಾಗಿದ್ದಾಳೆ. ಇನ್ನು ತಾಯಿಯನ್ನು ಕರೆಸಿ ಮಕ್ಕಳಿಗೆ ಬುದ್ದಿ ಕಲಿಸಬೇಕೆಂಬ ಕಾರ್ಯವು ಸಮರ್ಪಕವಾಗಿ ಆಗುತ್ತಿಲ್ಲ. ಅದರಂತೆ ಇದರ ಇರಾದೆಯೂ ಯಾರೊಬ್ಬರಿಗಿಲ್ಲ.! ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಂಘಪರಿವಾರಿಗಳು ತಾವು ತೋಡಿದ ಹಳ್ಳಕ್ಕೆ ತಾವೇ ಬೀಳಬೇಕಾದ ಪರಿಸ್ಥಿತಿ ಎದುರಾಗಿರುವುದಂತು ಸತ್ಯ.

Sunday, May 23, 2010

ಇವರ್ಯಾರೆಂಬುದು ನಿಮಗೆ ಗೊತ್ತಾ..?




ಇವರ್ಯಾರೆಂಬುದು ನಿಮಗೆ ಗೊತ್ತಾ..? ಕಾಮರ್ಿಕರ ಹೋರಾಟದ ಸಂಕೇತವಾಗಿ, ಕಾಮರ್ಿಕರ ನ್ಯಾಯಬದ್ದ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನೇ ಅಪರ್ಿಸಿದ ಸಂಗಾತಿಗಳಿಗೆ ಶ್ರದ್ಧಾಂಜಲಿ ಅಪರ್ಿಸುವ ದಿನವಾಗಿ ಕಾಮರ್ಿಕರ ಹಕ್ಕೋತ್ತಾಯಗಳ ದಿನವಾಗಿ ಶೋಷಿತ ಸಮಾಜದ ಜಾಗದಲ್ಲಿ ಮನುಷ್ಯ ಮನಷ್ಯನನ್ನು ಶೋಷಿತ ಮಾಡುವಂತಹ ಒಂದು ಹೊಸ ಸಮಾಜದ ಸೃಷ್ಟಿಗಾಗಿ ಹೋರಾಡಲು ಪಣತೊಡಬೇಕಿರುವ ದಿನವಾಗಿ ಇತಿಹಾಸದುದ್ದಕ್ಕೂ ಕಾಮರ್ಿಕರು ಆಚರಿಸಿಕೊಂಡು ಬಂದಿರುವ ಈ ಮೇ ದಿನಾಚರಣೆಯನ್ನು ಕೆಲವರು ಸತ್ವಹೀನಗೊಳಿಸಿದ್ದಾರೆ. ಕಾಮರ್ಿಕರಲ್ಲಿ ಮೇ ದಿನದ ಸ್ಪೂತರ್ಿಯನ್ನು ತುಂಬುವ ಬದಲಿಗೆ ಅದನ್ನು ವಾಡಿಕೆಯ ಆಚರಣೆಯನ್ನಾಗಿಸಿದ್ದಾರೆ. ಅಂತರಾಷ್ಟ್ರೀಯ ಕಾಮರ್ಿಕ ವರ್ಗದ ಮುಷ್ಕರಗಳು18ನೇ ಶತಮಾನದಲ್ಲಿ ಕಾಮರ್ಿಕರನ್ನು ದಿನಕ್ಕೆ 14, 16 ಕೆಲವೊಮ್ಮೆ 20ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಕಡಿಮೆ ಕೂಲಿ, ದಣಿವರಿಯದ ದುಡಿಮೆ, ನಿಕೃಷ್ಣವಾದ ಜೀವನಮಟ್ಟ, ಯಾವುದೇ ಸೌಲಭ್ಯಗಳಿಂದ ಹೀನಾಯ ಕೆಲಸದ ವಾತಾವರಣ ಇವೆಲ್ಲದರಿಂದಾಗಿ ಕಾಮರ್ಿಕರ ಜರ್ಝರಿತರಾಗಿದ್ದರು. ಏನಾಗುತ್ತಿದೆ ಎಂದು ಯೋಚಿಸಲು ಪುರುಸೊತ್ತಿಲ್ಲದ ದುಡಿಮೆ ಅವರದ್ದಾಗಿತ್ತು. ನಮ್ಮ ಈ ಸತತ ದುಡಿಮೆಯಿಂದ ರೋಸಿ ಹೋದ ಕಾಮರ್ಿಕರು ಪ್ರತಿಭಟನೆ ತೋರಲಾರಂಭಿಸಿದರು. ಮೊದಲಿಗೆ ತಮ್ಮ ಕಾಖರ್ಾನೆಗಳನ್ನು ಅಥವಾ ಕೈಗಾರಿಕಾ ಶಾಖೆಗಳಲ್ಲಿ ನಂತರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಘಟನಾ ಬಲವನ್ನು ಅರಿಯಲಾರಂಭಿಸಿದ ಕಾಮರ್ಿಕರು ಬಂಡವಾಳ ಶಾಹಿಗಳ ವಿರುದ್ದ ಐಕ್ಯ ಹೋರಾಟಗಳನ್ನು ನಡೆಸಿದರು. 1864 ಸೆಪ್ಟೆಂಬರ್ 28ರಂದು ಲಂಡನ್ನಲ್ಲಿ ರೂಪುಗೊಂಡ ಅಂತರಾಷ್ಟ್ರೀಯ ಕಾಮರ್ಿಕ ಸಂಘಟನೆ ಕಾಮರ್ಿಕರ ಐಕ್ಯಹೋರಾಟಕ್ಕೆ ಒಂದು ತಿರುವು ಬಿಂದುವಾಯಿತು.1886ರಲ್ಲಿ ಲಂಡನ್ ಹಾಗೂ ಎಡಿನ್ಬಗರ್್ಗಳಲ್ಲಿನ ಟೈಲರ್ಗಳ ಮುಷ್ಕರ, 1867ರಲ್ಲಿ ಬೆಲ್ಜಿಯಂ ಗಣಿ ಕಾಮರ್ಿಕರ ಮುಷ್ಕರ, 1868ರಲ್ಲಿ ಜೀನಿವಾ ಕಟ್ಟಡ ನಿಮರ್ಾಣ ಕಾಮರ್ಿಕರ ಮುಷ್ಕರ, 1871 ಮಾಚರ್್ನಿಂದ ಸೆಪ್ಟೆಂಬರ್ನವರೆಗೆ ಆಂಟ್ವೆರ್ಪ್ನಲ್ಲಿ ನಡೆದ ಸಿಗರೇಟ್ ಕಾಮರ್ಿಕರ ಮುಷ್ಕರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಮತ್ತು ಸೌಹಾರ್ದತೆಯನ್ನು ಪಡೆಯಲಾರಂಭಿಸಿದವು. ಒಟ್ಟಾರೆ, 1860ರ ಅಂತ್ಯ ಹಾಗೂ 1870ರ ಆರಂಭದ ಅವಧಿ ಬಹಳಷ್ಟು ಕಾಮರ್ಿಕರ ಮುಷ್ಕರಗಳನ್ನು ಹಾಗೂ ಕಾಮರ್ಿಕರ ಪರಸ್ಪರ ಬೆಂಬಲ ವ್ಯಕ್ತಪಡಿಸಿದ ಅವಧಿಯಾಗಿತ್ತು. ಹೀಗಾಗಿ ಈ ವಾತಾವರಣ ಮಿಲಿಯಾಂತರ ಕಾಮರ್ಿಕರಲ್ಲಿ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿತು.ಈ ಅವಧಿಯಲ್ಲೇ ಅಂದರೆ, 1871ರಲ್ಲಿ ನಡೆದ ಪ್ಯಾರಿಸ್ ಕಮ್ಯೂನ್ (ಕಮ್ಯೂನಿಷ್ಟ ಪಕ್ಷದ ನೇತೃತ್ವದಲ್ಲಿ ಕ್ಷೀಪ್ರಕ್ರಾಂತಿಯ ಮೂಲಕ ಕಾಮರ್ಿಕರು ರಾಜ್ಯಾಧಿಕಾರವನ್ನು ವಶಪಡಿಸಿಕೊಂಡರು) ಪಡೆದ ವಿಜಯ ಕಾಮರ್ಿಕರ ಐಕ್ಯತೆಯಲ್ಲಿ ನಿಣರ್ಾಯಕ ಪಾತ್ರವನ್ನು ವಹಿಸಿತು. ಇದನ್ನು ಬೆಂಬಲಿಸಿ ಇಂಗ್ಲೇಂಡ್, ಬೆಲ್ಜಿಯಂ, ಹಾಲೆಂಡ್ ಹಾಗೂ ಅನೇಕ ನಗರಗಳಲ್ಲಿ ಬೃಹತ್ ಸಮೂಹ ಪ್ರದರ್ಶನಗಳು ನಡೆದವು. ಆದರೆ, ಸೂಕ್ತ ಇಲ್ಲದ ಕಾರಣ ಪ್ಯಾರಿಸ್ ಕಮ್ಯೂನ್ನ ಯಶಸ್ಸು ಅಲ್ಪಾವಧಿಯಲ್ಲಿಯೇ ಕೊನೆಗೊಂಡಿತು. ಪ್ರಾನ್ಸಿನ ಪ್ರತಿಗಾಮಿ ಸಕರ್ಾರ ಈ ಕಮ್ಯೂನಾಡರ್್ಗಳ ಮೇಲೆ ತೀವ್ರ ದಮನ ನಡೆಸಿದ್ದರಿಂದಾಗಿ ಅವರು ದೇಶವನ್ನೇ ತೊರೆದು ಇಂಗ್ಲೇಂಡ್, ಅಮೇರಿಕಾ ಹಾಗೂ ಸ್ವಿಟ್ಜರ್ಲೆಂಡ್ಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಪ್ಯಾರಿಸ್ ಕಮ್ಯೂನ್ನ ಯಶಸ್ಸು ಹಾಗೂ ಮೊಟ್ಟಮೊದಲ ಅಂತರಾಷ್ಟ್ರೀಯ ಕಾಮರ್ಿಕ ಸಂಘಟನೆಯ ಪ್ರಭಾವವನ್ನು ಕಂಡು ಹೆದರಿದ ಬಹುತೇಕ ಯುರೋಪಿಯನ್ ಸಕರ್ಾರಗಳು ಅದರ ಮೇಲೆ ತೀವ್ರ ನಿರ್ಬಂಧವನ್ನು ಹೇರಿ ಅದನ್ನು ಕಾನೂನುಬಾಹಿರಗೊಳಿಸಿದವು. ಇದೆಲ್ಲದರ ಪರಿಣಾಮವಾಗಿ 1872ರ ಹೊತ್ತಿಗೆ ಈ ಸಂಘಟನೆ ಛಿದ್ರಗೊಂಡಿತು. ಅಷ್ಟುಹೊತ್ತಿಗಾಗಲೇ ಕಲ್ಪನಾವಾದಿ ಸಮಾಜವಾದದ ಅನೇಕ ಪ್ರವೃತ್ತಿಗಳನ್ನು ಸೋಲಿಸಿ ಮಾಕ್ಸರ್್ವಾದ ಕಾಮರ್ಿಕ ವರ್ಗದ ಸಿದ್ದಾಂತವಾಗಿ ಬೆಳೆದಿತ್ತು. ಬಹುತೇಕ ಬಂಡವಾಳ ಶಾಹಿ ದೇಶಗಳಲ್ಲಿನ ಕಾಮರ್ಿಕರ ಪರಿಸ್ಥಿತಿ ಹೆಚ್ಚು-ಕಡಿಮೆ ಒಂದೇ ಇದ್ದುದರಿಂದಲೂ ಕಾಮರ್ಿಕ ವರ್ಗದ ಚಳುವಳಿ ಅಂತರಾಷ್ಟ್ರೀಯಕರಣಗೊಂಡುದರ ಪರಿಣಾಮವಾಗಿಯೂ ಕಾಮರ್ಿಕರ ಬೇಡಿಕೆಗಳು ಏಕರೂಪವಾಗಿದ್ದವು. ಕಾಮರ್ಿಕರ ಶೋಷಣೆ ನಿಲ್ಲಬೇಕು ಹಾಗೂ ಅವರಿಗೆ ಸಾಮಾಜಿಕ ಆಥರ್ಿಕ ಹಕ್ಕುಗಳಿರಬೇಕು ಎನ್ನುವ ಬೇಡಿಕೆಗಳು ವ್ಯಾಪಕವಾಗಿದ್ದವು. ಈ ಬೇಡಿಕೆಗಳಲ್ಲಿ ಮುಖ್ಯವಾಗಿ ದಿನಕ್ಕೆ 8ಗಂಟೆಗಳ ಕೆಲಸ ಎನ್ನುವುದು ಯುರೋಪ ಮತ್ತು ಅಮೇರಿಕಾದ ಕಾಮರ್ಿಕರ ಅಂತರಾಷ್ಟ್ರೀಯ ಸಂಘಟನೆಯ ಘೋಷಣೆಯಾಗಿತ್ತು.ಪ್ರಪಂಚದ ಅತಿ ಮುಖ್ಯವಾದ ಕೈಗಾರಿಕಾ ದೇಶವಾಗಿದ್ದ ಅಮೇರಿಕಾದಲ್ಲಿ ಆಗ ಕಾಮರ್ಿಕರು 16ಗಂಟೆಗಳ ಕಾಲ ದುಡಿಯಬೇಕಾಗಿತ್ತು. ಚಿಕಾಗೋ ಅಮೇರಿಕಾದ ಕಾಮರ್ಿಕರ ಚಳುವಳಿಯ ಪ್ರಮುಖ ಕೇಂದ್ರವಾಗಿತ್ತಷ್ಟೇ ಅಲ್ಲದೇ ಮಿಲಿಟೆಂಟ್ ಹೋರಾಟಗಳ ಪರಂಪರೆಯನ್ನು ಹೊಂದಿತ್ತು.ಪ್ಯಾರಿಸ್ ಕಮ್ಯೂನ್ ನಡೆದ ಮರುವರ್ಷ ಅಂದರೆ 1872ರಲ್ಲಿ ಚಿಕಾಗೋದ ಕಾಮರ್ಿಕರು ರಕ್ತ ಇಲ್ಲವೇ ರೊಟ್ಟಿ ಎಂಬ ಬ್ಯಾನರ್ನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದರು. ಆಗವರನ್ನು ಚಿಕಾಗೋದ ಪೋಲಿಸರು ರಕ್ತದಲ್ಲಿಯೇ ಮುಳುಗಿಸದ್ದರು. ಇಂತಹದೇ ಮತ್ತೊಂದು ಬೃಹತ್ ಪ್ರತಿಭಟನೆ 1877ರಲ್ಲಿ ನಡೆಯಿತು.1877ರ ಬೃಹತ್ ಪ್ರತಿಭಟನೆಯ ನಂತರ ಕಾಮರ್ಿಕರು ಸೇನಾತ್ಮಕವಾಗಿ ಸಿದ್ದಗೊಳ್ಳಲಾರಂಭಿಸಿದರು. ಎಲ್ಲ ಕಡೆ ರಹಸ್ಯ ಕಾಮರ್ಿಕ ಸಂಘಟನೆಗಳು, ಸೊಸೈಟಿಗಳು, ಕಾಮರ್ಿಕ ವರ್ಗದ ಪಕ್ಷಗಳು ರೂಪುಗೊಂಡವು. ನಿದರ್ಿಷ್ಟವಾಗಿ ಚಿಕಾಗೋದಲ್ಲಿ ರ್ಯಾಡಿಕಲ್ ವಾತಾವರಣ ನಿಮಾರ್ಣವಾಗಿತ್ತು. ಅಲ್ಲಿಯೇ ಬಹುದೊಡ್ಡದಾಗಿದ್ದ ಸೆಂಟ್ರಲ್ ಲೇಬರ್ ಯೂನಿಯನ್ನ ಮುಂಚೂಣೆ ತಂಡದಲ್ಲಿ ಕ್ರಾಂತಿಕಾರಿಗಳಿದ್ದರು.ಜರ್ಮನಿಯರೇ, ಹೆಚ್ಚಿದ್ದ ಇದು ಮಾಲೀಕರ ಖಾಸಗಿ ಗೂಂಡಾಗಳನ್ನು ಎದುರಿಸಲು ಲೆಹರ್ ಹಾಗೂ ವೆಹರ್ ಎಂಬ ಸಶಸ್ತ್ರ ಮಿಲಿಷಯ್ಗಳನ್ನು ರೂಪಿಸಿಕೊಂಡಿತ್ತು. ಇವರೊಂದಿಗೆ ಇಂಗ್ಲೀಷ್ ಮಾತನಾಡುವ ಇಂಗ್ಲೀಷ್ ಕ್ಲಬ್, ಜೆಕ್ಮೂಲದ ಬೊಹೆಮಿಯಾನ್ ಶಾಪರ್್ಶೂಟರ್ಸ್ಗಳು ಹಾಗೂ ಪ್ರೆಂಚ್ ಗುಂಪು ಕೂಡ ಇತ್ತು. ಶೋಷಕರ ವಿರುದ್ದ ನಿಲ್ಲಬೇಕಿದ್ದಲ್ಲಿ ಕಾಮರ್ಿಕ ವರ್ಗ ಸಶಸ್ತ್ರವಾಗಿರಬೇಕೆನ್ನುವುದು ಸೆಂಟ್ರಲ್ ಲೇಬರ್ ಯೂನಿಯನ್ನ ನಿರ್ಣಯವಾಗಿತ್ತು. ಇಲ್ಲಿಯ ಕಾಮರ್ಿಕರಿಗೆ ಶಿಕ್ಷಣವನ್ನು ನೀಡಲು ಪಾರ್ಸನ್ ಎಂಬುವವರು ಇಂಗ್ಲೀಷ್ನಲ್ಲಿ ಪತ್ರಿಕೆಯನ್ನು ಹೊರತ್ತಿದ್ದರೆ, ಆಗಸ್ಟ್ ಸ್ಫೈಸ್ ಎನ್ನುವವರು ಜರ್ಮನಿಯಲ್ಲಿ ಪತ್ರಿಕೆಯನ್ನು ಹೊರತರುತ್ತಿದ್ದರು. ಇವರು ಇಬ್ಬರು ಕಾಮರ್ಿಕರ ಸಂಘಟನೆಗಳ ಮುಖಂಡರು ಆಗಿದ್ದರು.ಶ್ರಮಶಕ್ತಿ ಹೋರಾಟ! ರಕ್ತ-ಸಿಕ್ತ ಬಾವುಟ!! ಅದುವೆ ಕೆಂಬಾವುಟ!!!ಅಮೇರಿಕಾ ಹಾಗೂ ಕೆನಡಾದ ಯೂನಿಯನ್ಗಳು ಸೇರಿ ಮಾಡಿಕೊಂಡ ಅಮೇರಿಕನ್ ಪೆಡರೇಷನ್ ಆಪ್ ಲೇಬರ್ ಎಂಬ ಸಂಘಟನೆ ಕಾಮರ್ಿಕ ವರ್ಗದ ಚಳುವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. 1885ರಲ್ಲಿ ನಡೆದ ಇದರ ಮಹಾಧಿವೇಶನದಲ್ಲಿ 8ಗಂಟೆಗಳ ಕೆಲಸದ ಬೇಡಿಕೆಯನ್ನು ಮುಂದಿಡಲು ನಿರ್ಧರಿಸಲಾಯಿತು. ಕಾಮರ್ಿಕ ಸಂಘಟನೆಗಳು ಹಾಗೂ ಆಡಳಿತ ಮಂಡಳಿಯ ನಡುವೆ ಮಾತುಕತೆಯನ್ನು ನಡೆಸುವುದು ಹಾಗೂ ಆ ಒಪ್ಪಂದಕ್ಕೆ ಬರಲಾಗದಿದ್ದಲ್ಲಿ 1886ರ ಮೇ 1ರಂದು ಮುಷ್ಕರ ನಡೆಸಲು ನಿರ್ಧರಿಸಲಾಯಿತು. ಕಾಮರ್ಿಕ ಸಂಘಟನೆ ಹಾಗೂ ಆಡಳಿತ ಮಂಡಳಿಯಲ್ಲಿ ನಡೆದ ಹಲವು ಸುತ್ತಿನ ಮಾತುಕತೆಗಳು ಫಲಿಸಲಿಲ್ಲ. ಹಾಗಾಗಿ ಮೇ 1ರ ಮುಷ್ಕರಕ್ಕೆ ಕಾಮರ್ಿಕರು ಮುಂದಾದರು. ಚಿಕಾಗೋದಲ್ಲಿ ಮೇ ದಿನದ ಸಿದ್ದತೆಗಳು ಭರದಿಂದ ಸಾಗಿದವು.ಕಾಮರ್ಿಕರ ಹೋರಾಟವನ್ನು ದಮನಿಸಲು ಬಂಡವಾಳಶಾಹಿಗಳು ತಮ್ಮ ಸಿದ್ದತೆಯನ್ನು ಮಾಡಿಕೊಂಡವು. ನ್ಯಾಷನಲ್ ಗಾಡರ್್ ಕಾವಲ್ರಿ, ಪೊಲೀಸರಷ್ಟೇ ಅಲ್ಲದೇ ಬಂಡವಾಳಿಗರ ಖಾಸಗಿ ಗೂಂಡಾಗಳು ಸಶಸ್ತ್ರರಾಗಿ ಆದೇಶಕ್ಕಾಗಿ ಕಾಯತೊಡಗಿದರು. ಬೂಜ್ವರ್ಾ ದಿನಪತ್ರಿಕೆಗಳು ಚಿಕಾಗೋದ ನಾಯಕರುಗಳ ವಿರುದ್ದ ಇಲ್ಲ-ಸಲ್ಲದ ಅಪಪ್ರಚಾರ ಮಾಡಿದರು. ಭೂಗತರಾಗಿದ್ದ ಆಗಸ್ಪ್ಸ್ಪೈಸ್ ಹಾಗೂ ಪಾಸರ್್ನ್ ಹೇಡಿಗಳೆಂದು, ಅಪಾಯಕಾರಿ ಕೊಲೆಗಡುಕರೆಂದು, ಕ್ರಾಂತಿಯ ಕಿತಾಪತಿದಾರರೆಂದು ದೂರಿದವು. ಮುಷ್ಕರ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಕಾಮರ್ಿಕರ ಮೇಲೆ ನಿದರ್ಾಕ್ಷಿಣ್ಯವಾಗಿ ದಮನ ಮಾಡುವುದು, ಕೆಲಸದಿಂದ ವಜಾ ಮಾಡುವುದಾಗಿ ಹೆದರಿಸಲಾಯಿತು. ಆದರೆ ಕಾಮರ್ಿಕರು ಈ ಅಪಪ್ರಚಾರಗಳಿಂದಾಗಲಿ, ಬೆದರಿಕೆಯಿಂದಾಗಲಿ ಹಿಂದೆ ಸರಿಯಲಿಲ್ಲ. 1886ರ ಮೇ ಕಾಮರ್ಿಕ ಚಳುವಳಿಯ ಇತಿಹಾಸದಲ್ಲಿಯೇ ಮರೆಯಲಾಗದ ಒಂದು ಮಹತ್ತರವಾದ ದಿನ ಅಂದು ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಾವಿರಾರು ಕಾಮರ್ಿಕರು ತಮ್ಮ ಸಂಘಟಿತ ಬಲವನ್ನು ಪ್ರದಶರ್ಿಸಿದರು. ಚಿಕಾಗೋದ 30.000ಕಾಮರ್ಿಕರು ದಿನಕ್ಕೆ 8ಗಂಟೆಗಳ ಕಾಲ ಮಾತ್ರ ನಮ್ಮ ದುಡಿತ ಎಂದು ಘೋಷಣೆ ಹಾಕುತ್ತಾ ಬೀದಿಗೆ ಇಳಿದರು. ಎಲ್ಲ ರೈಲುಗಳು ನಿಂತವು. ಬಂದರುಗಳು ಕೆಲಸ ಸ್ಥಗಿತಗೊಂಡಿತ್ತು. ಯಾವ ಪ್ಯಾಕ್ಟರಿಗಳ ಚಿಮುಣಿಯಿಂದ ಹೊಗೆ ಬರಲಿಲ್ಲ. ಮಿಲಿಯಾಂತರ ದುಡಿಯುವ ಜನ ಎಚ್ಚೆತ್ತಿದ್ದಾರೆ. ಅವರು ಸಾಗುತ್ತಿರುವದು ನೋಡಿ ಪೀಕಡರೆಲ್ಲ ನಡುಗುತ್ತಿದ್ದಾರೆ. ಅವರ ಅಧಿಕಾರ ಇಷ್ಟರಲ್ಲೇ ಅಂತ್ಯಗಾಣಲಿದೆ. ಎಂದು ಹಾಡುತ್ತಾ ಕಾಮರ್ಿಕರು ಮತ್ತು ಅವರ ಕುಟುಂಬದವರು ರಸ್ತೆಯುದ್ದಕ್ಕೂ ಸಾಗಿದರು. ಚಿಕಾಗೋ ನಗರದ ಹೇ ಮಾರುಕಟ್ಟೆ ಚೌಕದಲ್ಲಿ ಸಾವಿರಾರು ಕಾಮರ್ಿಕರು ಸೇರಿದರು. ಆದರೆ, ಮೊದಲೇ ಯೋಜಿಸಿದ್ದಂತೆ ಕಾಮರ್ಿಕರ ಈ ಬೃಹತ್ ಪ್ರದರ್ಶನದ ಮೇಲೆ ಪೋಲಿಸರು ಗುಂಡಿನ ಮಳೆಗೆರದರು. ಕ್ಷಣಾರ್ಧದಲ್ಲಿ ಹೇಮಾರುಕಟ್ಟೆಯ ಚೌಕ ಕಾಮರ್ಿಕರು ಹರಿಸಿದ ರಕ್ತದಿಂದ ಕೆಂಪಾಯಿತು. ಮೇ 1ರಂದು ಕಾಮರ್ಿಕರು ಹರಿಸಿದ ರಕ್ತದ ಸಂಕೇತವಾಗಿಯೇ ಇಂದು ಕಾಮರ್ಿಕರ ಕೈಯಲ್ಲಿ ಕೆಂಬಾವುಟ ರಾರಾಜಿಸುತ್ತಿದೆ. ಅಂದು ಅಮೇರಿಕಾದ ಎಲ್ಲ ಪ್ರಮುಖ ನಗರಗಳಲ್ಲಿ ಎಂಟು ಗಂಟೆಗಳ ಕೆಲಸವನ್ನು ಒತ್ತಾಯಿಸುವ ಕಾಮರ್ಿಕರ ಪ್ರದರ್ಶನಗಳು ನಡೆದವು. ಡೆಟ್ರಾಯಿಟ್ನಲ್ಲಿ ಸಾವಿರಾರು ಕಾಮರ್ಿಕರು ಎಂಟು ಗಂಟೆಗಳ ಪ್ರದರ್ಶನ ನಡೆಸಿದರು. ನ್ಯೂಯಾಕರ್್ನಲ್ಲಿ ಸಾವಿರಾರು ಕಾಮರ್ಿಕರು ಪಂಜಿನ ಮೆರವಣಿಗೆ ನಡೆಸಿದರು. ಲೂಯಿಸ್ ವಿಲ್ಲೆ, ಕೆಂಟಕಿಗಳಲ್ಲಿ ಆರು ಸಾವಿರಕ್ಕಿಂತಲೂ ಹೆಚ್ಚಿನ ಕಾಮರ್ಿಕರು ನಿಷೇಧವನ್ನು ಮುರಿದು ಮೆರವಣಿಗೆಯಲ್ಲಿ ಸೇರಿದರು.ಆ ಸಮಯದಲ್ಲಿ ಅಮೇರಿಕಾದಲ್ಲಿಯೂ ಕೂಡ ಕಾಮರ್ಿಕರ ಹೋರಾಟಗಳು ಮೇ ಉದ್ದಕ್ಕೂ ನಡೆದವು. ಮೇ 2ರಂದು ಚಿಕಾಗೋದ ಉದ್ಯಮಪತಿಗಳು ಮುಷ್ಕರದಲ್ಲಿ ಪಾಲ್ಗೊಂಡ ಕಾಮರ್ಿಕರನ್ನು ಕೆಲಸದಿಂದ ವಜಾ ಮಾಡುವುದಾಗಿ ಘೋಷಿದ್ದನ್ನು ಪ್ರತಿಭಟಿಸಿ ಮೇ 3ರಂದು ರಾಷ್ಟ್ರಾಧ್ಯಂತ 3,40,000 ಕಾಮರ್ಿಕರು ಬೀದಿಗಿಳಿದರು. ಮೇ 4ರಂದು ಹೇ ಮಾರುಕಟ್ಟೆಯಲ್ಲಿ ಇಂತಹದ್ದೇ ಒಂದು ಪ್ರತಿಭಟನೆಯ ಸಮಯದಲ್ಲಿ ಎಲ್ಲಿಂದಲೋ ಬಂದ ಬಾಂಬೊಂದು ಪೊಲೀಸರ ಮೇಲೆ ಬಿದ್ದಾಗ ಒಬ್ಬ ಪೇದೆ ಸ್ಥಳದಲ್ಲಿಯೇ ಸತ್ತು ಆರು ಜನ ಪೊಲೀಸರು ತೀವ್ರವಾಗಿ ಗಾಯಗೊಂಡರು. ಇದರಿಂದಾಗಿ ರೊಚ್ಚಿಗೆದ್ದ ಪೊಲೀಸರು ಯದ್ವಾ-ತದ್ವಾ ಗುಂಡು ಹಾರಿಸದ್ದರಿಂದ ಹಲವಾರು ಕಾಮರ್ಿಕರು ಕೊಲ್ಲಲ್ಪಟ್ಟರು. ನೂರಾರು ಜನರು ಗಾಯಗೊಂಡರು.ನಂತರ ಪೊಲೀಸರ ಮೇಲೆ ಬಾಂಬ್ ಎಸೆದ ಘಟನೆಯನ್ನೇ ನೆಪವಾಗಿಟ್ಟುಕೊಂಡು ಪ್ರಭುತ್ವ ಕಾಮರ್ಿಕ ಸಂಘಟನೆಗಳ ಮೇಲೆ ದಾಳಿ ಮಾಡಲಾರಂಭಿಸಿತು. ಸಾವಿರಾರು ಕ್ರಾಂತಿಕಾರಿಗಳನ್ನು ಮುಷ್ಕರ ನಿರತರನ್ನು ಬಂಧಿಸಲಾಯಿತು. ಕಾಮರ್ಿಕ ಸಂಘಟನೆಗಳ ಕಛೇರಿಗಳ ಮೇಲೆ ದಾಳಿ ನಡೆದವು. ಮೇ ಮಧ್ಯಾವಧಿಯಲ್ಲಿ ಚಿಕಾಗೋದಲ್ಲಿ ನಡೆದ ಕೋಟರ್್ ವಿಚಾರಣಿಯಲ್ಲಿ ಏಳು ಮಂದಿ ಕಾಮರ್ಿಕರ ಮುಖಂಡರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಇವರುಗಳೇ ಆಲ್ಬಟರ್್ ಆರ್ ಪಾಸರ್್ನ್, ಆಗಸ್ಟ್ ಸ್ಪೈಸ್, ಮೈಕಲ್ ಚ್ವಾಬ್, ಸ್ವಾಮುವೆಲ್ ಫಿಲ್ಡ್ನ್, ಅಡೋಲ್ಪ್ ಫಿಷರ್, ಜಾಜರ್್ ಏಂಗೆಲ್, ಲೂಯಿಸ್ ಲಿಂಗ್ ಹಾಗೂ ಆಸ್ಕರ್ನೀಬೇಗಳಾಗದ್ದರು.ತೀಂಗಳಾನುಗಟ್ಟಲೇ ನಡೆದ ವಿಚಾರಣೆಯಲ್ಲಿ 1887ರ ನವೆಂಬರ್ 11ರಂದು ಫಿಲ್ಡ್ನ್ ಹಾಗೂ ಚ್ವಾಬ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಪಾಸರ್್ನ್, ಸ್ಪೈಸ್, ಪೀಷರ್ ಹಾಗೂ ಎಂಗೆಲ್ರನ್ನು ಗಲ್ಲಿಗೇರಿಸಲಾಯಿತು. ಲೂಯಿಸ್ಲಿಂಗ್ರನ್ನು ಬಂದನದಲ್ಲಿದ್ದಾಗಲೇ ತಲೆಗೆ ಡೈನೆಮೆಟ್ ಟೋಪಿಯನ್ನು ಹಾಕಿ ಸಿಡಿಸಿ ಕೊಲ್ಲಲಾಯಿತು. ಆ ದಿನವನ್ನು ಅಮೇರಿಕಾದಾದ್ಯಂತವಷ್ಟೇ ಅಲ್ಲ ಪ್ರಾನ್ಸ್, ಇಟಲಿ, ರಷ್ಯಾ, ಹಾಲೆಂಡ್ ಹಾಗೂ ಸ್ಪೇನ್ಗಳಲ್ಲಿ ಕಪ್ಪು ಶುಕ್ರವಾರವೆಂದು ಆಚರಿಸುವ ಮೂಲಕ ತಮ್ಮ ನಾಯಕರಿಗೆ ಶೃದ್ದಾಂಜಲಿ ಅಪರ್ಿಸುವರು.ಮೇ 1ರ ಹೋರಾಟವನ್ನು ಅಮೇರಿಕಾದ ಕಾಮರ್ಿಕ ವರ್ಗ ಮುಂದುವರೆಸಿತು. ಹೀಗೆ ಕಾಮರ್ಿಕರು ಹಲವಾರು ವರ್ಷಗಳವೆರೆಗೆ ನಿರಂತರವಾಗಿ ಹೋರಾಡಿದ ಫಲವಾಗಿ ಬಂಡವಾಳಶಾಹಿಗಳು ಎಂಟು ಗಂಟೆಗಳ ಕೆಲಸವನ್ನು ಅನಿವಾರ್ಯವಾಗಿ ಒಪ್ಪಿಕೊಂಡರು.ನಂತರ 1891ರ ಆಗಸ್ಟ್ನಲ್ಲಿ ನಡೆದ 2ನೇ ಮಹಾಧಿವೇಶನದಲ್ಲಿ ಮೇ ಒಂದನ್ನು ಅಂತರಾಷ್ಟ್ರೀಯ ಕಾಮರ್ಿಕ ವರ್ಗದ ದಿನವೆಂದು ಘೋಷಿಸಲಾಯಿತು.ಹೀಗೆ ಮೇ1*ಮೊಟ್ಟ ಮೊದಲ ಬಾರಿಗೆ ಬಂಡವಾಳವಾದದ ವಿರುದ್ಧ ಕಾಮರ್ಿಕರು ಒಗ್ಗಟ್ಟಿನಿಂದ ಸಿಡಿದೆದ್ದ ದಿನವಾಗಿ..* ಕಾಮರ್ಿಕರು ತಮ್ಮ ಸಂಘಟಿತ ಬಲವನ್ನು ಪ್ರದಶರ್ಿಸಿದ ದಿನವಾಗಿ...* ಕಾಮರ್ಿಕರ ಹಕ್ಕೋತ್ತಾಯದ ದಿನವಾಗಿ...ಬಂಡವಾಳಶಾಹಿ ಸಮಾಜದ ಮಿಥ್ಯೆಯನ್ನು ಅರಿತು ಸಮಾಜವಾದದ ಅಗತ್ಯವನ್ನು ಕಂಡ ದಿನವಾಗಿ ಜಗತ್ತಿನಾಧ್ಯಂತ ಆಚರಿಸಲ್ಪಡುತ್ತದೆ.ವಿಶ್ವದ ಕಾಮರ್ಿಕರೇ ಒಂದಾಗಿ ! ಕಾಮರ್ಿಕ ವರ್ಗದ ಚಳುವಳಿ ಚಿರಾಯುವಾಗಲಿ !!ಎಂ ಲಿಂಗರಾಜು, ಸಂಪಾದಕರು.

Gulbarga in hands of dictators




ಸವರ್ಾಧಿಕಾರಿಗಳ ಕೈಯಲ್ಲಿ ಗುಲ್ಬಗರ್ಾವಿವೇಚನೆ ಎಂಬುದೇ ಇಲ್ಲದ ರಾಜಕಾರಣಿಗಳನ್ನು ಅಧಿಕಾರಶಾಹಿ ಹೇಗೆ ದಿಕ್ಕು ತಪ್ಪಿಸುತ್ತದೆ ಎಂಬುದಕ್ಕೆ ಕಲಬುಗರ್ಿಯ ಪೌರ ಕಾಮರ್ಿಕರ ಹೋರಾಟವೆ ಒಂದು ಉದಾಹರಣೆಯಾಗಿದೆ. ಡಾ. ಆರ್. ವಿಶಾಲ ಎಂಬ ಜಿಲ್ಲಾಧಿಕಾರಿ, ಸವರ್ಾಧಿಕಾರಿ ಮನೋಭಾವನೆಯ ಪೋಲಿಸ್ ವರಿಷ್ಠಾಧಿಕಾರಿ ಪದ್ಮನಯನ ಇವರ ಜುಗಲಬಂದಿ ಇಡೀ ಕಲಬುಗರ್ಿ ಜಿಲ್ಲೆಲ್ಲಿ ಆಡಳಿತ ಎಕ್ಕುಟ್ಟಿ ಹೋಗಲು ಕಾರಣವಾಗಿದೆ. ಕಲಬುಗರ್ಿಯ ಎಚ್ಚೆತ್ತ ಜನಗಳ ಸಂಕೇತ ಎಂದೆ ಬಿಂಬಿತವಾಗಿರುವ ಮಾಜಿಮಂತ್ರಿ ಎಸ್. ಕೆ.ಕಾಂತಾ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮಗ್ಗಲು ಮುಳ್ಳಾಗಿದ್ದಾರೆ.ಜನಪರ ಕಾರ್ಯವನ್ನು ಯಾವತ್ತೂ ಹಾದರ್ಿಕವಾಗಿ ಸ್ವಾಗತಿಸುವ ಆದರೆ ಜನಪರವಲ್ಲದ ಸರಕಾರದ ಧೋರಣೆಗಳನ್ನು ಎಂದಿಗೂ ತನ್ನ ಹೋರಾಟಗಳ ಮೂಲಕ ವಿರೋಧಿಸುತ್ತ ಬಂದಿರುವ ಎಸ್.ಕೆ.ಕಾಂತಾ ಸಹಜವಾಗಿ ಎಂದಿನಂತೆ ಸರಕಾರದ ಕೆಲವು ತಪ್ಪು ನಧರ್ಾರಗಳನ್ನು ವಿರೋಧಿಸುತ್ತಿರುವುದೆ ಇವರೀರ್ವರಿಗೆ ನುಂಗಲಾಗದ ತುತ್ತಾಗಿದೆ. ಸರಕಾರ ನದಿ ಸಿನ್ನೂರ, ಫರಹತಾಬಾದ್ಗಳಲ್ಲಿ ಸ್ಥಾಪಿಸಬೇಕೆಂದು ಉದ್ದೇಶಿಸಿರುವ ವಿದ್ಯುತ್ ಸ್ಥಾವರ ಘಟಕಕ್ಕೆ 1516 ಎಕರೆ ಭೂಮಿಯನ್ನು ಕಬಳಿಸಬೇಕೆಂದು ಹೊಂಚು ಹಾಕಿತ್ತು. ಸ್ಥಳೀಯ ರೈತರ ಅರಿವಿಗೆ ಬಾರದಂತೆ ಭೂಸ್ವಾಧೀನ ಕಾಯ್ದೆ 17(1) ಮತ್ತು 17(4) ತುತರ್ು ಕಾಯ್ದೆಯ ಅಡಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ತುದಿಗಾಲಲ್ಲಿ ನಂತಿತ್ತು. ಸರಕಾರದ ಈ ದುಷ್ಟ ನತಿಯನ್ನು ಪ್ರಜ್ಞೆ ಇರುವ ಯಾರಾದರೂ ಖಂಡಿಸಬೇಕಾದುದೆ.ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ಎಸ್.ಕೆ.ಕಾಂತಾ ಎಂದಿನ ತನ್ನ ದೃಢ ನಲುವುಗಳೊಂದಿಗೆ ಹೋರಾಟಕ್ಕೆ ನಂತಿರುವುದೆ ಜಿಲ್ಲಾಡಳಿತಕ್ಕೆ ಇರಿಸುಮುರಿಸು ತಂದಿಟ್ಟಿದೆ. ಸದರಿ ರೈತರ ಒಪ್ಪಿಗೆ ಇಲ್ಲದೆ, ಗ್ರಾಮ ಪಂಚಾಯತಿಗಳ ಒಪ್ಪಿಗೆ ಪಡೆಯದೆ, ಅತ್ಯಂತ ಫಲವತ್ತಾದ ಭೂಮಿಯನ್ನು (ವರ್ಷಕ್ಕೆ ಸುಮಾರು 90 ಕೋಟಿ ರೂಪಾಯಿ ದವಸ ದಾನ್ಯ ಬೆಳೆಯುವ) ಕೊಡುವುದು ಸಾಧ್ಯವೆ ಇಲ್ಲ ಎಂದು ರೈತರೆಲ್ಲ ಒಕ್ಕೂರಲಿನಲ್ಲಿ ಕೂಗುವಂತೆ ಕಾಂತಾ ಅವರೆಲ್ಲರನ್ನು ಹುರಿದುಂಬಿಸಿದರು. ಅಲ್ಲದೆ ಜಿಲ್ಲಾಧಿಕಾರಿಯೊಂದಿಗೆ ಈ ಕುರಿತು ಹಲವು ಸುತ್ತಿನ ಮಾತುಕತೆಗಳ ಮೂಲಕ ಜಮೀನು ಬಿಟ್ಟು ಕೊಡುವುದು ಸಾಧ್ಯವೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಜೊತೆಗೆ ಹಿಂದಿನ ಜಿಲ್ಲಾಧಿಕಾರಿ ಸತ್ಯಮೂತರ್ಿ ಈ ಕುರಿತು ಸರಕಾರಕ್ಕೆ ನದಿಸಿನ್ನೂರ ಹಾಗೂ ಫರತಾಬಾದನಲ್ಲಿ ವಿದ್ಯುತ್ ಘಟಕ ಸ್ಥಾಪಿಸಬೇಕೆಂದು ಉದ್ದೇಶಿಸಿರುವ ಭೂಮಿ ಅತ್ಯಂತ ಫಲವತ್ತಾಗಿದ್ದು, ಸದರಿ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಒಳಿತು ಎಂಬ ಒಕ್ಕಣಿಯನ್ನು ಇಂದಿನ ಜಿಲ್ಲಾಧಿಕಾರಿಗಳ ಕಣ್ಣ ಮುಂದೆ ಇಟ್ಟರು. ಜಿಲ್ಲಾ ಉಸ್ತುವಾರಿ ಅಧಿಕಾರಿ ಸಚಿವ ಲಕ್ಷ್ಮಣ ಸೌದಿ ಕೂಡ ರೈತರ ಫಲವತ್ತಾದ ಭೂಮಿ ಕಸಿಯುವುದು ಬೇಡ ಎಂಬ ಹೇಳಿಕೆಯನ್ನೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದೆಲ್ಲದರಿಂದ ಜಿಲ್ಲಾಧಿಕಾರಿಗೆ ಅಂಡಿನಲ್ಲಿ ಮೆಣಸಿನ ಕಾಯಿ ಇಟ್ಟಂತಾಯಿತು.ಗುಲಬಗರ್ಾ ರೈಲು ನಿಲ್ದಾಣದ ಪಕ್ಕದಲ್ಲಿಯೆ ಇರುವ ತಾರಫೈಲ್ ಬಡಾವಣೆ ಎಲ್ಲರೂ ಬಲ್ಲಂತೆ ಸಮಾಜದ ಅತ್ಯಂತ ಕೆಳ ಸ್ಥರದಲ್ಲಿ ಇರುವ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ವಾಸವಾಗಿರುವ ಕಾಲೋನ. ಈ ಬಡಾವಣೆಗೆ ಸರಕಾರದ ಸಂರಕ್ಷಣೆ ಬೇಕು. ಆದರೆ ತನ್ನ ಜೀಪಿನ ಮೇಲೆ ಯಾವುದೋ ಅವಿವೇಕಿ ಕಲ್ಲು ತೂರಿದ ಎಂಬುದನ್ನೆ ಮುಂದೆ ನೆಪ ಇಟ್ಟುಕೊಂಡು ತಾರ್ಫೈಲ್ ದಲಿತರ ಮೇಲೆ ಎಸ್ಪಿ ಪದ್ಮನಯನ ನಡೆಸಿದ ಗೂಂಡಾಗಿರಿ ಖಂಡನಯವಾದುದು. ತನ್ನ ನೇತೃತ್ವದಲ್ಲಿ ಪೋಲಿಸ್ ದಂಡು ತಕ್ಕೊಂಡು ಹೋಗಿ ದಲಿತರೆಲ್ಲರ ಮನೆ ಬಾಗಿಲು- ಕಿಟಕಿಗಳನ್ನು ಮುರಿದು ಅವರ ಅಡುಗೆಯ ಪಾತ್ರೆ ಪಗಡೆಗಳನ್ನು ಹೊರಗೆ ಬಿಸಾಕಿ, ಮಕ್ಕಳು ಮುದುಕರು, ಹೆಣ್ಣುಮಕ್ಕಳೆನ್ನದೆ ಪೋಲಿಸ್ ಲಾಠಿ ಬೀಸಿದ್ದಾರೆ. ಅವರೆಲ್ಲರನ್ನೂ ವಿನಾಕಾರಣ ಬೆಳಗಾಂವಿಯ ಜೇಲಿಗೆ ಕಳಿಸಿ ಪೋಲಿಸರು ತಮ್ಮ ದೌರ್ಜನ್ಯ ಮೆರೆದಿದ್ದಾರೆ.ಇದಲ್ಲದೆ ಈ ಹಿಂದೆ ಹಲವಾರು ಸಲ ಗುಲಬಗರ್ಾದಲ್ಲಿ ರಾತ್ರಿಯಾಗುವುದೆ ತಡ ಹಲವಾರು ಅಂಗಡಿ ಮುಂಗಟ್ಟುಗಳ ಕೀಲಿ ಮುರಿದು ಧರೋಡೆಗಳು ನಡೆದು ಹೋಗಿವೆ. ಹೆಣ್ಣು ಮಕ್ಕಳ ಕತ್ತಿನಲ್ಲಿನ ಸರ, ಮಾಂಗಲ್ಯಗಳು ನಂತ ನಂತಲೆ ಮಟಾಮಾಯವಾಗುತ್ತಿವೆ. ಕೊಲೆಗಡುಕರಂತೂ ನಭರ್ೀತಿಯಿಂದ ತಿರುಗುತ್ತಿದ್ದಾರೆ. ವಿಚಿತ್ರವೆಂದರೆ ಪೋಲಿಸರೆ ಅಂಗಡಿ ಅಂಗಡಿಗೆ ಹೋಗಿ ಹಪ್ತಾ ವಸೂಲಿಗೆ ಇಳಿದಿರುವ ದೃಶ್ಯ ಸಾಮಾನ್ಯ. ದೊಂಬಿ, ರಾಬರಿ ಮಾಡುವ ಹುಡುಗರೆಲ್ಲ ಪೋಲಿಸರ ನೆಂಟರಂತೆ ನತ್ಯವೂ ಪೋಲಿಸರ ಜೊತೆ ತಿರುಗಾಡುತ್ತಿದ್ದಾರೆ.ಇದನ್ನೆಲ್ಲ ಗಮನಸುತ್ತಿದ್ದ ಯಾರಿಗಾದರೂ ಸರಕಾರದ ಅಧಿಕಾರಿಗಳ ಬಗೆಗೆ ರೋಷ ಉಕ್ಕದೆ ಇರುತ್ತದೆಯೆ ? ಸಹಜವಾಗಿಯೆ ಎಸ್.ಕೆ. ಕಾಂತಾ ಈ ಎಲ್ಲ ಅಸಂಗತ ಸಂಗತಿಗಳ ಕುರಿತು ಮಾಧ್ಯಮದ ಮೂಲಕ ಸರಕಾರದ ಗಮನಕ್ಕೆ ತಂದಿದ್ದಾರೆ. ಪೋಲಿಸರ ಗೂಂಡಾಗಿರಿಯ ಮೂಲಕ ಎಂಥ ಅನಾಹುತಗಳಾಗುತ್ತಿವೆ ಎಂಬುದನ್ನು ಕಾಂತಾ ಸರಕಾರದ ಮುಖ್ಯಸ್ಥರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಗೃಹ ಮಂತ್ರಿಯನ್ನು ಈ ಸಂಬಂಧ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿಯನ್ನು ಜರಿದರು. ಇದರಲ್ಲಿ ತಪ್ಪೇನು ಇದೆ ? ಆದರೆ ಕಂಡದ್ದು ಕಂಡಂತೆ ಆಡಿದರೆ ಕೆಲವರಿಗೆ ಕೆಂಡದಂಥ ಕೋಪ ಎಂಬಂತೆ ಪದ್ಮನಯನ ತಾನು ಕುಳಿತ ಖುಚರ್ಿಯಲ್ಲಿಯೆ ಕುದ್ದು ಹೋಗುತ್ತಿದ್ದಾನೆ.ಎಸ್.ಕೆ.ಕಾಂತಾ ಅವರ ನ್ಯಾಯಯುತವಾದ, ಜನಪರವಾದ ಹೋರಾಟಗಳನ್ನು ತಪ್ಪಾಗಿ ಅಥರ್ೈಸಿಕೊಂಡಿರುವ ಅಧಿಕಾರಿದ್ವಯರಿಬ್ಬರೂ ಕಾಂತಾ ಅವರನ್ನು ಹೇಗಾದರೂ ಸೈ ಹಣಿಯಬೇಕೆಂದು ತೀಮರ್ಾನಸಿಕೊಂಡವರಂತೆ ಒಂದೊಂದೆ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಎಸ್.ಕೆ. ಕಾಂತಾ ಅವರ ಶಕ್ತಿ ಇರುವುದೆ ದಲಿತರ- ಅಲ್ಪಸಂಖ್ಯಾತರ ಅಥವಾ ತುಳಿತಕ್ಕೆ ಒಳಗಾದವರ ಜೊತೆಗೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಂಡ ಈ ನಾಮರ್ಧರಿಬ್ಬರು ವಿನಾಕಾರಣ ಅಧಿಕಾರ ದುರುಪಯೋಗ ಮಾಡಿಕೊಂಡು ದೌರ್ಜನ್ಯವೆಸಗುತ್ತಿದ್ದಾರೆ.ನದಿಸಿನ್ನೂರು ಹಾಗೂ ಫರತಾಬಾದ ರೈತರ ಮೇಲೆ ಪೋಲಿಸರನ್ನು ಛೂಬಿಟ್ಟು ಹಣಿಯಲು ಯತ್ನಿಸಿದರು. ಜೈಲಿಗೆ ಹಾಕಿದರು. ಇದೂ ಸಾಲದೆಂಬಂತೆ ಅವರನ್ನು ಕೈಕೊಳಹಾಕಿ ಅವರ ಮನೋಸ್ಥೈರ್ಯವನ್ನು ಕುಸಿಯುವಂತೆ ನೋಡಿಕೊಂಡರು. ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ನಡೆಸಿದ ಚಳುವಳಿಯನ್ನು ಹತ್ತಿಕ್ಕಲು ನಾನಾ ರೀತಿಯ ಪ್ರಯತ್ನಗಳನ್ನು ಜಿಲ್ಲಾಡಳಿತ ಇಂದಿಗೂ ಮುಂದುವರೆಸಿಕೊಂಡು ನಡೆದಿದೆ. ಕನರ್ಾಟಕ ರಕ್ಷಣಾ ವೇದಿಕೆಯ ಅರುಣಕುಮಾರ ಪಾಟೀಲ, ಸುಲಫಲ ಮಠದ ಮಹಾಂತ ಶಿವಾಚಾರ್ಯ, ಅಲ್ಲಮಪ್ರಭು ಪಾಟೀಲ ಮುಂತಾದವರ ಮೇಲೆ ಕೇಸುಗಳನ್ನು ಜಡಿದು ಜೈಲಿಗೆ ತಳ್ಳುವ ಯತ್ನ ಆರಂಭಿಸಿದೆ.ಪೌರಕಾಮರ್ಿಕರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ನಗರಪಾಲಿಕೆ ಕಛೇರಿಯ ಮುಂದೆ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. ಸಹಜವಾಗಿ ಸರಕಾರದ ಮಂತ್ರಿಗಳು ನಗರಕ್ಕೆ ಬಂದಾಗ ಅವರೆಲ್ಲರ ಗಮನ ಸೆಳೆಯಬೇಕೆಂದು ಚಳುವಳಿ ರೂಪಿಸಿದರೆ ಅದನ್ನು ವಿಫಲಗೊಳಿಸಲು ಮುದ್ದಾಂ ಜಿಲ್ಲಾಡಳಿತವು ಒಂದು ದಿನ ಮುಂಚೆಯೆ ಈ ಸತ್ಯಾಗ್ರಹಿಗಳನ್ನು ಹಿಡಿದು ಜೈಲಿಗೆ ಕಳಿಸುತ್ತದೆ. ಸಾರ್ವಜನಕ ಆಸ್ತಿ ಪಾಸ್ತಿಯನ್ನು ತಾನೇ ನಾಶಗೊಳಿಸಿ, ಬಸ್ಗಳಿಗೆ ಬೆಂಕಿ ಹಚ್ಚಿ ಸತ್ಯಾಗ್ರಹಿಗಳೆ ಇದನ್ನೆಲ್ಲ ಮಾಡಿದ್ದಾರೆ ಎಂಬಂತೆ ವ್ಯವಸ್ಥಿತ ಪಿತೂರಿ ನಡೆಸಿದೆ.!ಗುಲಬಗರ್ಾ ಅಧಿಕಾರಿಗಳಿಬ್ಬರ ದುಷ್ಟ ಬುದ್ಧಿಯನ್ನು ಅರಿತ ಕಾಂತಾ ಅವರು ಸಹಜವಾಗಿ ಅತ್ಯಂತ ಹುಷಾರಿಯಿಂದ ತಾವೇ ಆಮರಣ ಉಪವಾಸ ಆರಂಭಿಸಿದ್ಧಾರೆ. ಹೇಗಾದರೂ ಸೈ ಕಾಂತಾ ಅವರನ್ನು ಆ ಮೂಲಕ ಇಲ್ಲಿನ ಜನತೆಯನ್ನು ಬಗ್ಗು ಬಡಿಯಲೆ ಬೇಕೆಂದು ನಂತಿರುವ ಸರಕಾರದ ಅಧಿಕಾರಿಗಳಿಬ್ಬರೂ ತಮ್ಮ ಕರ್ತವ್ಯಗಳನ್ನು ಮೀರಿ ಅನಾಚಾರಿಗಳಂತೆ ವತರ್ಿಸುತ್ತಿದ್ದಾರೆ. ಮಹಾನಗರ ಪಾಲಿಕೆಯ ಮುಂದೆ ಆಮರಣ ಸತ್ಯಾಗ್ರಹ ಆರಂಭಿಸಿದ ಕಾಂತಾ ಅವರು ಹಾಗೂ ಅವರು ಆರಂಭಿಸಿದ ಚಳುವಳಿಯ ವಿಷಯ ಕುರಿತು ಸರಕಾರಕ್ಕೆ ತಪ್ಪು ತಪ್ಪಾದ ಮಾಹಿತಿಗಳನ್ನು ನಡುತ್ತ ದಿಕ್ಕು ತಪ್ಪಿಸುತ್ತಿದ್ದಾರೆ.ಆಮರಣ ಉಪವಾಸದಿಂದ ಎಸ್.ಕೆ. ಕಾಂತಾ ಅವರ ಆರೋಗ್ಯ ದಿನೆ ದಿನೆ ಹದಗೆಡುತ್ತದೆ ಎಂಬ ಸಬೂಬು ನಡುತ್ತ ಯಾರಿಗೂ ಹೇಳದೆ ಕೇಳದೆ ಜಿಲ್ಲಾಡಳಿತ ಸತ್ಯಾಗ್ರಹ ಸ್ಥಳದಿಂದ ಬಲವಂತವಾಗಿ ಹೊರಗಡೆ ಹಾಕಿಬಿಟ್ಟಿದೆ. ಇದನ್ನು ತಡೆಯಲು ಬಂದ ಪೌರ ಕಾಮರ್ಿಕರ ಮೇಲೆ ಲಾಠಿ ಚಾರ್ಜ ಮಾಡಿ ಗೂಂಡಾಗಿರಿ ನಡೆಸಿದೆ. ಪೋಲಿಸರ ದಬ್ಬಾಳಿಕೆ ನತಿಯನ್ನು ಖಂಡಿಸಿ ಹೋರಾಟಕ್ಕೆ ದುಮುಕಿದ ಸುಲಫಲ ಮಠದ ಮಹಾಂತ ಶಿವಾಚಾರ್ಯರ ಮೇಲೆ ಇಲ್ಲ ಸಲ್ಲದ ಕೇಸ್ಗಳನ್ನು ಹೆಟ್ಟಿ ಗಪ್- ಚುಪ್ ಕುಳಿತುಕೊಳ್ಳುವಂತೆ ಹೆದರಿಸುತ್ತಿದೆ.ಪ್ರಜಾಪ್ರಭುತ್ವ ವಿರೋಧಿಯಾದ, ಸವರ್ಾಧಿಕಾರಿ ಧೋರಣೆಯ ಜಿಲ್ಲೆಯ ಇಬ್ಬರು ಅಧಿಕಾರಿಗಳು ಇಲ್ಲಿಂದ ಎತ್ತಂಗಡೆ ಮಾಡದೆ ಹೋದರೆ ಯಡಿಯೂರಪ್ಪ ಸರಕಾರದ ಮಾನ ಗುಲಬಗರ್ಾದ ಬೀದಿ ಬೀದಿಗಳಲ್ಲಿ ಹರಾಜಾಗುವ ಕಾಲ ದೂರವಿಲ್ಲವೆನಸುತ್ತದೆ.ಅವಿವೇಕಿ ಅಧಿಕಾರಿಯ ಮಾತುಕೇಳಿ ಮೊಂಡು ಹಠಕ್ಕೆ ಬಿದ್ದಿರುವ ಸರಕಾರರಾಜ್ಯಪೌರ ಕಾಮರ್ಿಕ ಸಚಿವ ಸುರೇಶ ಕುಮಾರ ಹಾಗೂ ಗುಲಬಗರ್ಾ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣಸೌದಿ ಇಬ್ಬರೂ ಕೂಡಿಯೇ ಯಾವುದೊ ಸರಕಾರಿ ಬಂಗ್ಲೆಯಲ್ಲಿ ಗಡದ್ದಾಗಿ ನದ್ದೆ ಮಾಡುತ್ತಿರಬೇಕೆನೆಸುತ್ತದೆ. ಏಕೆಂದರೆ ಸತತ ಮೂರು ವರ್ಷಗಳಿಂದ ಗುಲಬಗರ್ಾ ಮಹಾನಗರ ಪಾಲಿಕೆಯ ಕಾಮರ್ಿಕ ನೌಕರರು ಒಂದೆ ಸಮನೇ ಬೊಬ್ಬೆ ಹೊಡೆಯುತ್ತಿದ್ದರೂ ಅದಕ್ಕೆ ಸ್ಪಂದಿಸಿಲ್ಲ. ಸುಮಾರು 477 ಜನ ಪೌರ ಕಾಮರ್ಿಕರು 34 ತಿಂಗಳುಗಳಿಂದಲೂ ಸಂಬಳವಿಲ್ಲದೆ ಕೆಲಸ ಮಾಡಿ ಹೈರಾಣಾಗಿ ಹೋಗಿದ್ದಾರೆ. ತಮ್ಮ ಹಸಿದ ಹೊಟ್ಟೆಯ ನೋವನ್ನು ಸರಕಾರಕ್ಕೆ ನ್ಯಾಯಯುತವಾಗಿ ತಿಳಿಸಬೇಕು ಎಂದುಕೊಂಡು ಚಳುವಳಿ ನಡೆಸಿದರು, ರಸ್ತಾರೋಖೋ ಏರ್ಪಡಿಸಿದರು, ಕೊನೆಗೆ ಆಮರಣ ಉಪವಾಸ ಕುಳಿತರೂ ಮೊಂಡು ವಾದಕ್ಕೆ ಬಿದ್ದ ಸರಕಾರದ ಪ್ರತಿನಧಿಗಳು ಇತ್ತ ಸುಳಿಯದೆ ಗದರ್ಿಗಮ್ಮತ್ತು ನಡೆಸಿದ್ದಾರೆ.ಈ ನಡುವೆ ಜಿಲ್ಲೆಗೆ ಹತ್ತಾರು ಬಾರಿ ಮುಖ್ಯ ಮಂತ್ರಿ ಯಡಿಯೂರಪ್ಪ ಭೇಟಿ ನಡಿದಾಗಲಾದರೂ ತಮ್ಮ ಪ್ರತಿಭಟನೆಯನ್ನು ತೋರಿಸಬೇಕೆಂದಿದ್ದ ಕಾಮರ್ಿಕರನ್ನು ಬೆಳಗಾಂವಿಯ ಹಿಂಡಲಗಾ ಜೇಲಿಗೆ ಕಳಿಸಿದೆ. ಸಾರ್ವಜನಕ ನೆಮ್ಮದಿಯನ್ನು ಕೆಡಿಸುವ ಕೇಸು ಜಡಿದು ಎಸ್. ಕೆ. ಕಾಂತಾ ಎಂಬ ಮಾಜಿ ಮಂತ್ರಿಗಳನ್ನೂ ಅದು ನಧರ್ಾಕ್ಷಿಣ್ಯವಾಗಿ ಜೇಲಿನಲ್ಲಿ ಬಂಧಿಸಿ ಇಟ್ಟು ತನ್ನ ಮಾನವನ್ನು ಹರಾಜು ಹಾಕಿಕೊಂಡಿದೆ.ಈ ಕುರಿತು ಉಪಕಾಮರ್ಿಕ ಆಯುಕ್ತರ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು, ಯಾರನ್ನೂ ಕೆಲಸದಿಂದ ತೆಗೆದು ಹಾಕುವಂತ್ತಿಲ್ಲ ಎಂದು ಅದು ಸ್ಪಷ್ಟವಾಗಿ ತೀಪರ್ು ನಡಿದೆ. ಅಲ್ಲದೆ 2007 ರ ಜೂನ್ ತಿಂಗಳಲ್ಲಿ 477 ಜನ ಕಾಮರ್ಿಕರ ಗುತ್ತಿಗೆ ಅವಧಿ ಮುಗಿದಿದ್ದರೂ ಇಂದಿನವರೆಗೆ ಅವರಿಂದ ಪಾಲಿಕೆ ಕೆಲಸವನ್ನು ಮಾಡಿಸಿಕೊಳ್ಳುತ್ತಿದೆ. ಸಹಜವಾಗಿಯೆ ಕಾಂತಾ ಯಾರು ಪಾಲಿಕೆ ನೌಕರರಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತೀರೋ ಅವರು ಸಂಬಳ ನಡಿ ಎಂದು ಹೇಳುತ್ತಾರೆ. ಇಲ್ಲ ಮೊದಲೆ ಅವರಿಗೆಲ್ಲ ಯಾವುದೋ ಕಾಂಟ್ರ್ಯಾಕ್ಟರ್ ಮೂಲಕ ಪಗಾರ ಕೊಡುತ್ತಿದ್ದೇವು ಎಂದರೆ ಆ ಕಂಟ್ರ್ಯಾಕ್ಟದಾರರ ವಿಳಾಸ, ಲೈಸನ್ಸ್ ನಂಬರ ಕೊಡಿರಿ ಎಂದು ಕೇಳುತ್ತಾರೆ. ಮೂರು ವರ್ಷದ ಪೌರಕಾಮರ್ಿಕರ ಬಾಕಿ ಸಂಬಳ ಪಡೆದ ನಂತರ ನವು ಸ್ವಸಹಾಯ ಗುಂಪುಗಳ ಮೂಲಕ ಕೆಲಸಕ್ಕೆ ಬನ್ನ ಎಂದು ಆರ್ಡರ ಮಾಡಿದರೆ ಕಾಮರ್ಿಕರು ತಮಗೆ ಅನುಕೂಲವಾದರೆ ಕೆಲಸಕ್ಕೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಇಷ್ಟು ಸರಳ ಸಂಗತಿ ದನಾ ಕಾಯುವ ಹುಡುಗನಗೂ ಗೊತ್ತಾಗುತ್ತದೆ ಆದರೆ ಸರಕಾರದ ಖದೀಮ ಅಧಿಕಾರಿಗಳಿಗೆ ಆ ಮೂಲಕ ಆಡಳಿತಾರೂಢ ಮಂತ್ರಿಗಳಿಗೆ ಅರ್ಥವಾಗದೆ ಇರುವುದು ಸೂಜಿಗ ಎಂದು ಕಾಂತಾ ನುಡಿಯುತ್ತಾರೆ.ಜಟ್ಟಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎಂಬ ವಾದ ಸರಕಾರ ಮಾತ್ರ ಈ ನೌಕರರ ಕಡೆ ದಿವ್ಯ ನರ್ಲಕ್ಷ್ಯ ವಹಿಸಿದೆ ಮಾತ್ರವಲ್ಲ, ಅದು ತನ್ನ ಕಳ್ಳಾಟವನ್ನೂ ಪೌರ ನೌಕರರೊಂದಿಗೆ ನಡೆಸಿದೆ. ಪೌರ ಕಾಮರ್ಿಕರ ಬಾಕಿ ಇರುವ 9.26 ಕೋಟಿ ರೂಪಾಯಿ ವೇತನವನ್ನು ಅದು ಸ್ವ ಸಹಾಯ ಸಂಘಗಳ ಮೂಲಕ ಪಾವತಿ ಮಾಡುವುದಾಗಿ ಸರಕಾರ ಲಿಖಿತ ಭರವಸೆ ನಡುತ್ತ, ಪೌರ ಕಾಮರ್ಿಕರನ್ನು ಕಾಯಂಗೊಳಿಸದೆ ಇರುವ ಹುನ್ನಾರದಲ್ಲಿ ತೊಡಗಿದೆ.ಸರಕಾರದ ದುರುದ್ದೇಶವನ್ನು ಸಂಪೂರ್ಣವಾಗಿ ಬಲ್ಲ ಮಾಜಿ ಮಂತ್ರಿ ಎಸ್.ಕೆ. ಕಾಂತಾ ಪ್ರತಿಭಟಿಸಿ ದಿನಾಂಕ 3-5-2010 ರಂದು ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಗುಲಬಗರ್ಾದ ಸಂಪೂರ್ಣ ಸಂಘಟನೆಗಳು, ಮಠಾಧೀಶರು ಇದರಿಂದ ರೊಚ್ಚಿಗೆದ್ದ ಮಠಾಧೀಶರು ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ವಸ್ತು ಸ್ಥಿತಿಯನ್ನು ಸರಕಾರಕ್ಕೆ ತಿಳಿಸಬೇಕಾದ ಅಧಿಕಾರಿಗಳು ತಮ್ಮ ದುಷ್ಟ ನತಿಗಳಿಂದ ಕಾಂತಾ ಅವರನ್ನು ಜಿಲ್ಲೆಯಿಂದಲೆ ಪೋಲಿಸರ ಮೂಲಕ ಎತ್ತಂಗಡಿ ಮಾಡಿ ರಾಯಚೂರಿಗೆ ಗುಟ್ಟಾಗಿ ಕಳಿಸಿದೆ. ಎಸ್.ಕೆ. ಕಾಂತಾ ಬಹುತೇಕರು ಬಲ್ಲಂತೆ ಅನ್ಯಾಯವನ್ನು ಕಂಡಾಗ ಪ್ರತಿಭಟಿಸುವ ಒಂದು ಅಸ್ತ್ರ. ಪ್ರಾಮಾಣಿಕ, ನೇರ-ನಷ್ಠುರ ಗುಣಗಳಿಗೆ ಹೆಸರಾದವರು. ಇಂಥವರು ತಮ್ಮ ಎಪ್ಪತ್ತೆರಡರ ಇಳಿ ವಯಸ್ಸನ್ನೂ ಲೆಕ್ಕಿಸದೆ ಪೌರಕಾಮರ್ಿಕರ ಪರವಾಗಿ ಆಮರಣ ಕುಳಿತು, ಜೀವನದೊಂದಿಗೆ ಹೋರಾಟ ನಡೆಸಿದ್ದಾರೆ. ಇನ್ನಾದರೂ ಸರಕಾರ ತನ್ನ ಮೊಂಡು ಧೋರಣೆಯನ್ನು ಬದಿಗೆ ಸರಿಸಿ , ಕಾಮರ್ಿಕರ ಸಂಬಳವನ್ನು ಈ ಮೊದಲು ಕೊಟ್ಟಂತೆ ಪೌರ ಆಯುಕ್ತರ ಕಚೇರಿಯ ಮುಖಾಂತರವೆ ಬಿಡುಗಡೆ ಮಾಡಿಸಬೇಕು. ಆದರೆ ಜಾವೇದ ಅಖ್ತರ ಎಂಬ ಅವಿವೇಕಿ ಅಧಿಕಾರಿಯ ಮಾತು ಕೇಳಿ ತನ್ನ ಮಾನವನ್ನು ಹರಾಜು ಹಾಕಿಕೊಳ್ಳಬಾರದು.ಸರಕಾರದ ಹಠಮಾರಿ ಧೋರಣೆಯಿಂದ ಹೊತ್ತಿ ಉರಿಯಲಿರುವ ಗುಲಬಗರ್ಾಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಂದ ಸರಕಾರ ಅವರಿಗೆ ಸಂಬಳವೇ ನಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ.ಆಡಳಿತಾಧಿಕಾರಿಯ ಮಾತುಕೇಳಿ ಮೊಂಡು ಹಠಕ್ಕೆ ಬಿದ್ದಿರುವ ಸರಕಾರ ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? !ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ, ಸಂವಿಧಾನಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನಡುತ್ತಿತ್ತು. ಈಗಲೂ ಅದು ನಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನವು ಯಾವುದೋ ಏಜೆನ್ಸ ಮೂಲಕ ನಮಗೆ ಸಂಬಳ ನಡುತ್ತಿದ್ದರೆ ಅವರ ಹೆಸರು ಲೈಸನ್ಸ್, ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಬಂದ ಮೇಲೆ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ.

इंडियन जौर्न्लिस्ट अरे नो सो लिबरल - दिनेश ameenmattu

इंडियन जौर्न्लिस्ट अरे नो सो लिबरल - दिनेश
ಪೊಲೀಸರ ನೈತಿಕ ಸ್ಥೈರ್ಯವನ್ನು ಕುಂದಿಸುವಂತಹ ವರದಿಗಳನ್ನು ಮಾಧ್ಯಮಗಳು ಮಾಡಬಾರದು. ಅದರಂತೆಯೇ ಮಾಧ್ಯಮಗಳ ಕೊರಳು ಹಿಸುಕುವ ಕೆಲಸವನ್ನು ಪೊಲೀಸರೂ ಮಾಡಬಾರದು. ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ತಮ್ಮನ್ನು ತೊಡಗಿಸಿಕೊಂಡಿರುವ ಈ ಎರಡು ವರ್ಗಗಳು ಪರಸ್ಪರ ಕಾದಾಟಕ್ಕೆ ಇಳಿದರೆ, ಅದರಿಂದ ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿಗೇ ಹಾನಿಯಾಗುವುದು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಈ ಬೆಳವಣಿಗೆ ಅಪಾಯಕಾರಿ. ದಿವಂಗತ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಆಡಳಿತದ ಕಿರು ಅವಧಿಯನ್ನು ಹೊರತುಪಡಿಸಿದರೆ, ಕನರ್ಾಟಕದಲ್ಲಿ ಮಾಧ್ಯಮಗಳು ನಿಭರ್ೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ಹಿಂದೆಯೂ ಇತ್ತು. ಈಗಲೂ ಇದೆ. ಪತ್ರಕರ್ತರ ಹತ್ತಾರು ದೌರ್ಬಲ್ಯಗಳ ಅಸ್ತ್ರ ತಮ್ಮ ಬತ್ತಳಿಕೆಯಲ್ಲಿರುವದರಿಂದ ಅವರ ಬಾಯಿ ಮುಚ್ಚಿಸಲು ಪೊಲೀಸರ ಲಾಠಿ ಇಲ್ಲವೇ, ಕಾನೂನಿನ ದಂಡದ ಅಗತ್ಯ ಇಲ್ಲದಿರುವುದೂ ಕೂಡ ಈಗಿನ ಆಳುವ ವರ್ಗಗಳ ಈ ಔದಾರ್ಯಕ್ಕೆ ಕಾರಣ ಇರಬಹುದು. ಪತ್ರಕರ್ತರ ಸಮೂಹದಲ್ಲಿರುವ ಇಂತಹ ಕಪ್ಪುಕುರಿಗಳಿಂದಾಗಿಯೇ ಸಕರ್ಾರ ಮತ್ತು ಅದರ ಭಾಗವೇ ಆಗಿರುವ ಪೊಲೀಸರು ಒಮ್ಮೊಮ್ಮೆ ಎಲ್ಲ ಪತ್ರಕರ್ತರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಪ್ರಜಾವಾಣಿ ಪತ್ರಿಕೆಗೆ ಇತ್ತೀಚಿಗೆ ಪೊಲೀಸರಿಂದ ಬಂದಿರುವ ಎರಡು ನೋಟಿಸ್ಗಳು ಇದಕ್ಕೆ ಉದಾಹರಣೆ. ಮೊದಲನೆಯ ನೋಟಿಸ್ ಒಬ್ಬ ನಕ್ಸಲೀಯ ನಾಯಕನ ಸಂದರ್ಶನದ ಪ್ರಕಟಣಿಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ನೀಡಿದ್ದು. ಎರಡನೇಯ ನೋಟಿಸ್ ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣದಲ್ಲಿ ಬೇಕಾಗಿರುವ ನಟಿ ರಂಜಿತ ಸಿಐಡಿ ಅಧಿಕಾರಿಗಳ ಮುಂದೆ ರಹಸ್ಯವಾಗಿ ಹಾಜರಾಗಿದ್ದರು ಎನ್ನುವ ವರದಿಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಐಡಿ ಅಧಿಕಾರಿಯೊಬ್ಬರು ಜಾರಿಗೊಳಿಸಿದ್ದು. ವಿಚಿತ್ರವೆಂದರೆ ಈ ಎರಡು ನೋಟಿಸ್ಗಳು ಸುದ್ದಿ ಬರೆದ ವರದಿಗಾರರಿಗೆ ಜಾರಿಯಾಗಿವೆ, ವಿನಹ ಸಂಪಾದಕರಿಗಲ್ಲ. ಮೊದಲನೇ ಪ್ರಕರಣಕ್ಕೆ ಸಂಭಂದಿಸಿದ ಎರಡನೇ ನೋಟಿಸ್ ನೀಡುವಾಗಲೂ ಪೊಲೀಸರು ಅದನ್ನು ಸಹಸಂಪಾದಕರಿಗೆ ಜಾರಿ ಮಾಡಿದ್ದಾರೆ. ಇದು ಪತ್ರಿಕೆಗೆ ಸಂಬಂಧಿಸಿದ ಕಾನೂನಿನ ಪರಿಜ್ಞಾನ ಇಲ್ಲದೇ ಮಾಡಿರುವ ಅಡ್ಡಕಸುಬಿ ಕೆಲಸವೆನ್ನುವುದು ಪೊಲೀಸರ ಈ ನಡವಳಿಕೆಯಿಂದಲೇ ಸ್ಪಷ್ಟವಾಗುತ್ತದೆ. ನೋಟಿಸ್ ಜಾರಿಗೊಳಿಸಿರುವ ಪೊಲೀಸರು ಪ್ರಕಟಿತ ವರದಿಗಳಿಗೆ ಸಂಬಂದಿಸಿದ ಹೆಚ್ಚಿನ (ಅಪ್ರಕಟಿತ) ಮಾಹಿತಿಗಳನ್ನು ನೀಡಬೇಕೆಂದು ತಿಳಿಸಿದ್ದಾರೆ. ಆರು ದಶಕಗಳಿಗಿಂತ ಹೆಚ್ಚು ಕಾಲ ಓದುಗರ ಪ್ರೀತಿ-ವಿಶ್ವಾಸದ ತುತ್ತು ಉಂಡು ಬೆಳೆದಿರುವ ಪತ್ರಿಕೆಯೊಂದಕ್ಕೆ ಇಂತಹ ಸಣ್ಣಪುಟ್ಟ ಬೆದರಿಕೆಗಳನ್ನು ನಿಭಾಯಿಸುವ ಶಕ್ತಿ ಇದ್ದೇ ಇದೆ. ಆದ್ದರಿಂದ ಈ ನೋಟಿಸ್ಗಳದ್ದು ದೊಡ್ಡ ಸಂಗತಿಯೇನಲ್ಲ. ಆದರೆ, ಮಾಧ್ಯಮದ ಮೇಲೆ ಆಳುವ ವರ್ಗದ ಕಣ್ಣು ಬಿದ್ದಿರುವುದು ಕೇವಲ ಕನರ್ಾಟಕಕ್ಕೆ ಸೀಮಿತ ಅಲ್ಲ ಎನ್ನುವುದು ಗಮನಿಸುವಂತಹದ್ದು. ಕೇಂದ್ರದಲ್ಲಿರುವ ಯುಪಿಎ ಸಕರ್ಾರ ಮತ್ತು ನಕ್ಸಲೀಯ ಚಟುವಟಿಕೆಗಳು ನಡೆಯುತ್ತಿರುವ ರಾಜ್ಯಗಳ ಸಕರ್ಾರ ಕೂಡ ಮಾಧ್ಯಮದ ಮೇಲೆ ಕೆಂಗಣ್ಣು ಬೀರುತ್ತಿವೆ. ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಸುದ್ದಿಮೂಲವನ್ನು ಬಹಿರಂಗಗೊಳಿಸುವದಕ್ಕೆ ಸಂಬಂಧಿಸಿದ ಹಳೆಯ ಚಚರ್ೆಯನ್ನು ಮತ್ತೇ ಹುಟ್ಟು ಹಾಕಿದೆ. ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಕೇಂದ್ರ ಮತ್ತು ಸಂಬಂದಿತ ರಾಜ್ಯ ಸಕರ್ಾರಗಳನ್ನು ಇರುಸುಮುರಿಸಿಗೆ ಈಡುಮಾಡಿವೆ. ಪೊಲೀಸರ ಭೇಟೆಗೆ ಸಿಗದ ಮಾವೋವಾದಿಗಳನ್ನು ಪತ್ರಕರ್ತರು ಸುಲಭದಲ್ಲಿ ಸಂದಶರ್ಿಸಿ ವರದಿ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಾವೋವಾದಿ ನಾಯಕ ಕಿಶನ್ಜೀ, ಅಧಿಕೃತ ರಾಜಕೀಯ ಪಕ್ಷದ ನಾಯಕನಂತೆ ಆಗಾಗ ಪತ್ರಿಕಾಗೋಷ್ಠಿ ಕರೆದು ಸಕರ್ಾರವನ್ನು ಅಣುಕಿಸುತ್ತಿದ್ದಾರೆ. ದಾಂತೇವಾಡದ ದಟ್ಟಅರಣ್ಯದಲ್ಲಿ ಹಲವು ದಿನಗಳ ಕಾಲ ನಕ್ಸಲೀಯರ ಜೊತೆ ಇದ್ದು ಬಂದು ಧೀರ್ಘ ಲೇಖನವೊಂದನ್ನು ಬರೆದ ಖ್ಯಾತಲೇಖಕಿ ಅರುಂಧತಿರಾಯ್ ನೇರವಾಗಿ ಗೃಹಸಚಿವ ಪಿ.ಚಿದಂಬರಂ ವಿರುದ್ದವೇ ಕೆಲವು ನಿದರ್ಿಷ್ಟ ಆರೋಪಗಳನ್ನು ಮಾಡಿದ್ದಾರೆ. ನಕ್ಸಲೀಯ ಚಟುವಟಿಕೆಗಳಿರುವ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳ ಜತೆ ಗೃಹಸಚಿವರದ್ದು ಹಳೆಯ ಸಂಭಂದಗಳಲ್ಲೊಂದು ಎನ್ನುವುದು ಆ ಆರೋಪಗಳಲ್ಲೊಂದು. ಸಾಮಾನ್ಯವಾಗಿ ಸಕರ್ಾರವೊಂದು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಾಗ ಮೊದಲು ದಾಳಿ ಮಾಡುವುದು ಮಾಧ್ಯಮಗಳ ಮೇಲೆ. ಕಿಶನ್ಜಿ ಸಂದರ್ಶನ ಮಾಡಿದ್ದ ಪತ್ರಿಕೆಗಳ ವಿರುದ್ದ ಕ್ರಮಕೈಗೊಳ್ಳಲು ಒಂದು ಹಂತದಲ್ಲಿ ಗೃಹಸಚಿವರು ಉದ್ದೇಶಿಸಿದ್ದರಂತೆ. ಆದರೆ ಸಂಪುಟ ಸಭೆಯಲ್ಲಿಯೇ ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅವರ ಉದ್ದೇಶ ಈಡೇರಲಿಲ್ಲ. ಈಗ ಸಾರ್ವಜನಿಕ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಛತ್ತೀಸ್ಗಡ ಪೊಲೀಸರು ಅರುಂಧತಿ ರಾಯ್ ವಿರುದ್ಧ ಛತ್ತೀಸ್ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ 2005 ಅಡಿಯಲ್ಲಿ ಕ್ರಮಕೈಗೊಳ್ಳುವ ತಯಾರಿ ನಡೆಸಿದ್ದಾರಂತೆ. ಇದೇ ಕಾಯಿದೆಯಡಿ ಮಾನವ ಹಕ್ಕು ಕಾರ್ಯಕರ್ತರಾದ ವಿನಾಯಕ ಸೇನ್ ಅವರನ್ನು ಛತ್ತೀಸ್ಗಡ ಪೊಲೀಸರು ಎರಡು ವರ್ಷಗಳ ಬಂಧನದಲ್ಲಿಟ್ಟಿದ್ದರು. ಕನರ್ಾಟಕದಲ್ಲಿಯೂ ಅಕ್ರಮ ಚಟುವಟಿಕೆ ಕಾನೂನು ಇದೆ. ಅದರ ಅಡಿಯಲ್ಲಿಯೇ ಪೊಲೀಸರು ಪ್ರಜಾವಾಣಿಗೆ ನೋಟಿಸ್ ಜಾರಿಗೊಳಿಸಿದ್ದು.. ಭಾರತದ ಸಂವಿಧಾನದಲ್ಲಿ ಪತ್ರಿಕೆಗಳಿಗೆ ವಿಶೇಷ ಸ್ಥಾನಮಾನವೇನಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅದರಲ್ಲಿ ಪ್ರತ್ಯೇಕ ಉಲ್ಲೇಖವು ಇಲ್ಲ. ಸಂವಿಧಾನದ ಪರಿಚ್ಛೇದ 19(ಎ)ರಲ್ಲಿರುವ ಮೂಲಭೂತ ಹಕ್ಕುಗಳಲ್ಲಿ ಸೇರಿಕೊಂಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿಯೇ ಪತ್ರಿಕಾ ಸ್ವಾತಂತ್ರ್ಯ ಸೇರಿಕೊಂಡಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆಂದು ಸಂವಿಧಾನ ರಚನೆಯಾದಾಗ ಕೆಲವು ಹಿರಿಯ ಪತ್ರಕರ್ತರು ಒತ್ತಾಯಿಸಿದ್ದರು. ಆದರೆ, ಸಂವಿಧಾನ ರಚನಾ ಮಂಡಳಿ ಒಬ್ಬ ಸಾಮಾನ್ಯ ಪ್ರಜೆಗಿರುವಷ್ಟೇ ಸ್ವಾತಂತ್ರ್ಯ ಒಬ್ಬ ಪತ್ರಕರ್ತನಿಗೂ ಇರುತ್ತದೆ. ಅದಕ್ಕಿಂತ ಹೆಚ್ಚಿಲ್ಲ, ಕಡಿಮೆಯೂ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡಾ ಸಂಪೂರ್ಣವಾದುದೇನಲ್ಲ. ಅದನ್ನು ಕೂಡಾ ಹೊಸ ಕಾನೂನು ರಚನೆ ಮೂಲಕ ನಿಯಂತ್ರಿಸಲು ಸಾಧ್ಯ. ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಏಕತೆ, ಬೇರೆ ದೇಶಗಳ ಜತೆಗಿನ ಸ್ನೇಹ ಸಂಬಂಧ, ಸಾರ್ವಜನಿಕ ಶಾಂತಿ, ಶಿಷ್ಟಾಚಾರ, ನೈತಿಕತೆ, ನ್ಯಾಯಾಲಯದ ನಿಂದೆ, ಮಾನನಷ್ಟ ಹಾಗೂ ಅಪರಾಧ ಇಲ್ಲವೇ ಹಿಂಸೆಗೆ ಪ್ರಚೋದನೆ ದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಕಾನೂನು ರಚಿಸಬಹುದು ಎಂದು ಸಂವಿಧಾನದ ಪರಿಚ್ಛೇದ 19(2) ಹೇಳಿದೆ. ಅನೇಕ ಹಿರಿಯ ಪತ್ರಕರ್ತರು ಈ ನಿದರ್ಿಷ್ಟ ಪರಿಚ್ಛೇದ ಸೇರ್ಪಡೆಯನ್ನು ವಿರೋಧಿಸಿದ್ದರು. ಈ ಕಾರಣದಿಂದಾಗಿಯೇ ಪತ್ರಿಕಾ ಸ್ವಾತಂತ್ರ್ಯ ಎಂಬುದು ಅಂತಿಮವಾಗಿ ನ್ಯಾಯಾಲಯದ ವ್ಯಾಖ್ಯಾನವನ್ನೇ ಅವಲಂಭಿಸಿದೆ. ಈ ಮೂಲಕ ಸಕರ್ಾರದ ಕೈಗೆ ಮಾಧ್ಯಮಗಳನ್ನು ಮಣಿಸುವ ಪರಮೋಚ್ಛ ಅಧಿಕಾರವನ್ನು ನೀಡಿದಂತಾಗಿದೆ. 1975ರಲ್ಲಿ ಆಂತರಿಕ ಗಲಭೆಯ ಕಾರಣ ನೀಡಿ ಆಗಿನ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ತುತರ್ು ಪರಿಸ್ಥಿತಿಯನ್ನು ಹೇರಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನೇ ಅಮಾನತ್ನಲ್ಲಿರಿಸಿದ್ದು ಪರಮೋಚ್ಛ ಅಧಿಕಾರದ ದುರುಪಯೋಗಕ್ಕೆ ಉತ್ತಮ ಉದಾಹರಣಿ. ಒಬ್ಬ ಶಾಸಕ ಇಲ್ಲವೇ ಸಂಸದನಿಗೆ ಸದನದೊಳಗೆ ಮಾತನಾಡಲು ವಿಶೇಷ ಅಧಿಕಾರ (ಪ್ರಿವಿಲೇಜ್) ಇದೆ. ಸದನದೊಳಗಿನ ಅವರ ನಡುವಳಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಾಗದಂತಹ ವಿಶೇಷ ರಕ್ಷಣಿ (ಇಮ್ಯೂನಿಟಿ) ಕೂಡಾ ಇದೆ. ಇಂತಹದ್ದೇ ರಕ್ಷಣಿ ಪತ್ರಕರ್ತರಿಗೂ ನೀಡಬೇಕೆಂದು ಬೇಡಿಕೆ ಕೇವಲ ಮಾತ್ರವಲ್ಲ ಜಗತ್ತಿನಾಧ್ಯಂತ ಪತ್ರಕರ್ತರು ಕೇಳುತ್ತಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ ಒಬ್ಬ ಪತ್ರಕರ್ತ ತಾನು ಸಂಪಾದಿಸಿದ ಮಾಹಿತಿಯನ್ನು ಸುದ್ದಿಯಾಗಿ ಬರೆಯಲು ಹೊರಟಾಗ ಅದರ ಮೂಲವನ್ನು ತಿಳಿಸುತ್ತಾನೆ. ಸುದ್ದಿಗೆ ವಿಶ್ವಾಸಾರ್ಹತೆಯನ್ನು ತಂದುಕೊಡುವುದೇ ಈ ಮೂಲಗಳು. ಆದರೆ, ಈ ಸಂಪ್ರದಾಯಕ್ಕೂ ಕೆಲವು ಅಪವಾದಗಳಿರುತ್ತವೆ. ಸುದ್ದಿಯನ್ನು ಓದುವ ಒಬ್ಬ ಓದುಗ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಅದರ ಮೂಲ ತಿಳಿದುಕೊಳ್ಳುವುದು ಅಗತ್ಯ. ಆದರೆ, ಮಾಹಿತಿ ನೀಡುವ ಒಬ್ಬ ವ್ಯಕ್ತಿಗೆ ತನ್ನ ಗುರುತನ್ನು ಬಚ್ಚಿಟ್ಟುಕೊಳ್ಳಲು ಅವನದ್ದೇ ಆದ ಕಾರಣಗಳಿರಬಹುದು. ತನ್ನ ಗುರುತನ್ನು ಬಹಿರಂಗಪಡಿಸದಿದ್ದರೆ ಮಾತ್ರ ನೀಡುವುದಾಗಿ ಹೇಳಬಹುದು. ಅಂತಹ ಸಂದರ್ಭಗಳಲ್ಲಿ ಪತ್ರಕರ್ತರು ಸುದ್ದಿ ಮೂಲವನ್ನು ಬಹಿರಂಗಪಡಿಸದೇ ವರದಿ ಮಾಡುವುದು ಅನಿವಾರ್ಯವಾಗುತ್ತದೆ. ಎಂದು ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಮಾಡಿರುವ ಅಧ್ಯಯನವೊಂದು ಹೇಳಿದೆ. ಆದರೆ, ಬೇರೆ ಹಲವು ದೇಶಗಳಂತೆ ಭಾರತದಲ್ಲಿಯೂ ಸುದ್ದಿಮೂಲವನ್ನು ಬಹಿರಂಗಗೊಳಿಸದಿರುವ ವಿಶೇಷ ಅಧಿಕಾರ ಪತ್ರಕರ್ತರಿಗೆ ಇಲ್ಲ. ಭಾರತದ ಸಂವಿಧಾನಕ್ಕೆ ಮಾದರಿಯಾದ ಇಂಗ್ಲೇಂಡಿನ ಸಂವಿಧಾನದಲ್ಲಿಯೂ ಪತ್ರಿಕಾ ಸ್ವಾಂತ್ರ್ಯದ ಪ್ರತ್ಯೇಕ ಉಲ್ಲೇಖ ಇಲ್ಲ. ಪತ್ರಕರ್ತರಿಗೆ ವಿಶೇಷ ರಕ್ಷಣಿಯೂ ಇಲ್ಲ. ಬಹುತೇಕ ದೇಶಗಳಲ್ಲಿಯೂ ಇದೇ ಸ್ಥಿತಿ. ಅಮೇರಿಕದ ಸ್ಥಿತಿ ಮಾತ್ರ ಬಹಳಷ್ಟು ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಅಲ್ಲಿನ ಸಂವಿಧಾನದಲ್ಲಿಯಾಗಲಿ, ರಾಷ್ಟ್ರಮಟ್ಟದ ಕಾನೂನಿನಲ್ಲಿಯಾಗಲಿ ಪತ್ರಕರ್ತರಿಗೆ ಸುದ್ದಿಮೂಲವನ್ನು ಬಹಿರಂಗಪಡಿಸದೆ ಇರುವದಕ್ಕೆ ವಿಶೇಷ ರಕ್ಷಣಿ ಇಲ್ಲ. ಆದರೆ, ಇಲ್ಲಿನ ರಾಜ್ಯಗಳ ಮಟ್ಟದಲ್ಲಿ ರೂಪಿಸಲಾಗಿರುವ ರಕ್ಷಣಾ ಕಾನೂನು (ಶೀಲ್ಡ್ ಲಾ) ಪತ್ರಕರ್ತರಿಗೆ ಕೆಲವೊಂದು ರಕ್ಷಣೆಗಳನ್ನು ನೀಡಿದೆ. 1973ರಲ್ಲಿಯೇ ಜಾರಿಗೊಳಿಸಲಾದ ಈ ಕಾನೂನು ಪ್ರತಿರಾಜ್ಯದಲ್ಲಿಯೂ ಭಿನ್ನವಾಗಿದೆ. ಉದಾಹರಣಿಗೆ ಅಲಬಾಮದಲ್ಲಿ ಕೇವಲ ಪತ್ರಿಕೆ, ಟಿವಿ ಮತ್ತು ರೇಡಿಯೋಗಳಿಗೆ ಮಾತ್ರ ರಕ್ಷಣಿ ಇದ್ದರೆ, ನ್ಯೂಯಾಕರ್್ನಲ್ಲಿ ವಾರಪತ್ರಿಕೆ, ಸುದ್ದಿ ಸಂಸ್ಥೆ, ಪತ್ರಿಕಾ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗುತ್ತದೆ. ಓರೆಗಾನ್ ಮತ್ತು ನ್ಯೂಮೆಕ್ಸಿಕೋದಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿರುವ ಎಲ್ಲ ಮಾಧ್ಯಮಗಳಿಗೂ ಕಾನೂನು ರಕ್ಷಣಿ ಇದೆ. ಇದೇ ರೀತಿ ಕೆಲವು ರಾಜ್ಯಗಳಲ್ಲಿ ಸುದ್ದಿಮೂಲ ಕಾಪಾಡಲು ಮಾತ್ರ ರಕ್ಷಣಿ ಇದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಸುದ್ದಿಗಳಿಗೂ ರಕ್ಷಣಿ ಇದೆ. ನ್ಯಾಯಮೂತರ್ಿ ಕೆ.ಕೆ ಮ್ಯಾಥ್ಯೂ ಅಧ್ಯಕ್ಷರಾಗಿದ್ದ ಕಾನೂನು ಆಯೋಗ 30ವರ್ಷಗಳ ಹಿಂದೆ ಸಮೂಹ ಮಾಧ್ಯಮಗಳಿಂದ ಸುದ್ದಿ ಮೂಲದ ಪ್ರಕಟಣಿ ಎಂಬ ವಿಷಯದ ಬಗ್ಗೆಯೇ ನಡೆಸಿದ ಅಧ್ಯಯನದಲ್ಲಿ ಅಮೇರಿಕಾದ ಈ ಕಾನೂನನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಈ ಶಿಲ್ಡ್ ಕಾನೂನು ಆಧಾರದಲ್ಲಿಯೇ ಭಾರತದಲ್ಲಿ ಪತ್ರಕರ್ತರ ಸುದ್ದಿ ಮೂಲದ ರಕ್ಷಣಿಗಾಗಿ ಕಾನೂನು ರೂಪಿಸಬೇಕೆಂದು ಆ ಆಯೋಗ ಶಿಫಾರಸ್ಸು ಕೂಡ ಮಾಡಿತ್ತು.