Sunday, May 23, 2010

ಇವರ್ಯಾರೆಂಬುದು ನಿಮಗೆ ಗೊತ್ತಾ..?




ಇವರ್ಯಾರೆಂಬುದು ನಿಮಗೆ ಗೊತ್ತಾ..? ಕಾಮರ್ಿಕರ ಹೋರಾಟದ ಸಂಕೇತವಾಗಿ, ಕಾಮರ್ಿಕರ ನ್ಯಾಯಬದ್ದ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನೇ ಅಪರ್ಿಸಿದ ಸಂಗಾತಿಗಳಿಗೆ ಶ್ರದ್ಧಾಂಜಲಿ ಅಪರ್ಿಸುವ ದಿನವಾಗಿ ಕಾಮರ್ಿಕರ ಹಕ್ಕೋತ್ತಾಯಗಳ ದಿನವಾಗಿ ಶೋಷಿತ ಸಮಾಜದ ಜಾಗದಲ್ಲಿ ಮನುಷ್ಯ ಮನಷ್ಯನನ್ನು ಶೋಷಿತ ಮಾಡುವಂತಹ ಒಂದು ಹೊಸ ಸಮಾಜದ ಸೃಷ್ಟಿಗಾಗಿ ಹೋರಾಡಲು ಪಣತೊಡಬೇಕಿರುವ ದಿನವಾಗಿ ಇತಿಹಾಸದುದ್ದಕ್ಕೂ ಕಾಮರ್ಿಕರು ಆಚರಿಸಿಕೊಂಡು ಬಂದಿರುವ ಈ ಮೇ ದಿನಾಚರಣೆಯನ್ನು ಕೆಲವರು ಸತ್ವಹೀನಗೊಳಿಸಿದ್ದಾರೆ. ಕಾಮರ್ಿಕರಲ್ಲಿ ಮೇ ದಿನದ ಸ್ಪೂತರ್ಿಯನ್ನು ತುಂಬುವ ಬದಲಿಗೆ ಅದನ್ನು ವಾಡಿಕೆಯ ಆಚರಣೆಯನ್ನಾಗಿಸಿದ್ದಾರೆ. ಅಂತರಾಷ್ಟ್ರೀಯ ಕಾಮರ್ಿಕ ವರ್ಗದ ಮುಷ್ಕರಗಳು18ನೇ ಶತಮಾನದಲ್ಲಿ ಕಾಮರ್ಿಕರನ್ನು ದಿನಕ್ಕೆ 14, 16 ಕೆಲವೊಮ್ಮೆ 20ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಕಡಿಮೆ ಕೂಲಿ, ದಣಿವರಿಯದ ದುಡಿಮೆ, ನಿಕೃಷ್ಣವಾದ ಜೀವನಮಟ್ಟ, ಯಾವುದೇ ಸೌಲಭ್ಯಗಳಿಂದ ಹೀನಾಯ ಕೆಲಸದ ವಾತಾವರಣ ಇವೆಲ್ಲದರಿಂದಾಗಿ ಕಾಮರ್ಿಕರ ಜರ್ಝರಿತರಾಗಿದ್ದರು. ಏನಾಗುತ್ತಿದೆ ಎಂದು ಯೋಚಿಸಲು ಪುರುಸೊತ್ತಿಲ್ಲದ ದುಡಿಮೆ ಅವರದ್ದಾಗಿತ್ತು. ನಮ್ಮ ಈ ಸತತ ದುಡಿಮೆಯಿಂದ ರೋಸಿ ಹೋದ ಕಾಮರ್ಿಕರು ಪ್ರತಿಭಟನೆ ತೋರಲಾರಂಭಿಸಿದರು. ಮೊದಲಿಗೆ ತಮ್ಮ ಕಾಖರ್ಾನೆಗಳನ್ನು ಅಥವಾ ಕೈಗಾರಿಕಾ ಶಾಖೆಗಳಲ್ಲಿ ನಂತರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಘಟನಾ ಬಲವನ್ನು ಅರಿಯಲಾರಂಭಿಸಿದ ಕಾಮರ್ಿಕರು ಬಂಡವಾಳ ಶಾಹಿಗಳ ವಿರುದ್ದ ಐಕ್ಯ ಹೋರಾಟಗಳನ್ನು ನಡೆಸಿದರು. 1864 ಸೆಪ್ಟೆಂಬರ್ 28ರಂದು ಲಂಡನ್ನಲ್ಲಿ ರೂಪುಗೊಂಡ ಅಂತರಾಷ್ಟ್ರೀಯ ಕಾಮರ್ಿಕ ಸಂಘಟನೆ ಕಾಮರ್ಿಕರ ಐಕ್ಯಹೋರಾಟಕ್ಕೆ ಒಂದು ತಿರುವು ಬಿಂದುವಾಯಿತು.1886ರಲ್ಲಿ ಲಂಡನ್ ಹಾಗೂ ಎಡಿನ್ಬಗರ್್ಗಳಲ್ಲಿನ ಟೈಲರ್ಗಳ ಮುಷ್ಕರ, 1867ರಲ್ಲಿ ಬೆಲ್ಜಿಯಂ ಗಣಿ ಕಾಮರ್ಿಕರ ಮುಷ್ಕರ, 1868ರಲ್ಲಿ ಜೀನಿವಾ ಕಟ್ಟಡ ನಿಮರ್ಾಣ ಕಾಮರ್ಿಕರ ಮುಷ್ಕರ, 1871 ಮಾಚರ್್ನಿಂದ ಸೆಪ್ಟೆಂಬರ್ನವರೆಗೆ ಆಂಟ್ವೆರ್ಪ್ನಲ್ಲಿ ನಡೆದ ಸಿಗರೇಟ್ ಕಾಮರ್ಿಕರ ಮುಷ್ಕರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಮತ್ತು ಸೌಹಾರ್ದತೆಯನ್ನು ಪಡೆಯಲಾರಂಭಿಸಿದವು. ಒಟ್ಟಾರೆ, 1860ರ ಅಂತ್ಯ ಹಾಗೂ 1870ರ ಆರಂಭದ ಅವಧಿ ಬಹಳಷ್ಟು ಕಾಮರ್ಿಕರ ಮುಷ್ಕರಗಳನ್ನು ಹಾಗೂ ಕಾಮರ್ಿಕರ ಪರಸ್ಪರ ಬೆಂಬಲ ವ್ಯಕ್ತಪಡಿಸಿದ ಅವಧಿಯಾಗಿತ್ತು. ಹೀಗಾಗಿ ಈ ವಾತಾವರಣ ಮಿಲಿಯಾಂತರ ಕಾಮರ್ಿಕರಲ್ಲಿ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿತು.ಈ ಅವಧಿಯಲ್ಲೇ ಅಂದರೆ, 1871ರಲ್ಲಿ ನಡೆದ ಪ್ಯಾರಿಸ್ ಕಮ್ಯೂನ್ (ಕಮ್ಯೂನಿಷ್ಟ ಪಕ್ಷದ ನೇತೃತ್ವದಲ್ಲಿ ಕ್ಷೀಪ್ರಕ್ರಾಂತಿಯ ಮೂಲಕ ಕಾಮರ್ಿಕರು ರಾಜ್ಯಾಧಿಕಾರವನ್ನು ವಶಪಡಿಸಿಕೊಂಡರು) ಪಡೆದ ವಿಜಯ ಕಾಮರ್ಿಕರ ಐಕ್ಯತೆಯಲ್ಲಿ ನಿಣರ್ಾಯಕ ಪಾತ್ರವನ್ನು ವಹಿಸಿತು. ಇದನ್ನು ಬೆಂಬಲಿಸಿ ಇಂಗ್ಲೇಂಡ್, ಬೆಲ್ಜಿಯಂ, ಹಾಲೆಂಡ್ ಹಾಗೂ ಅನೇಕ ನಗರಗಳಲ್ಲಿ ಬೃಹತ್ ಸಮೂಹ ಪ್ರದರ್ಶನಗಳು ನಡೆದವು. ಆದರೆ, ಸೂಕ್ತ ಇಲ್ಲದ ಕಾರಣ ಪ್ಯಾರಿಸ್ ಕಮ್ಯೂನ್ನ ಯಶಸ್ಸು ಅಲ್ಪಾವಧಿಯಲ್ಲಿಯೇ ಕೊನೆಗೊಂಡಿತು. ಪ್ರಾನ್ಸಿನ ಪ್ರತಿಗಾಮಿ ಸಕರ್ಾರ ಈ ಕಮ್ಯೂನಾಡರ್್ಗಳ ಮೇಲೆ ತೀವ್ರ ದಮನ ನಡೆಸಿದ್ದರಿಂದಾಗಿ ಅವರು ದೇಶವನ್ನೇ ತೊರೆದು ಇಂಗ್ಲೇಂಡ್, ಅಮೇರಿಕಾ ಹಾಗೂ ಸ್ವಿಟ್ಜರ್ಲೆಂಡ್ಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಪ್ಯಾರಿಸ್ ಕಮ್ಯೂನ್ನ ಯಶಸ್ಸು ಹಾಗೂ ಮೊಟ್ಟಮೊದಲ ಅಂತರಾಷ್ಟ್ರೀಯ ಕಾಮರ್ಿಕ ಸಂಘಟನೆಯ ಪ್ರಭಾವವನ್ನು ಕಂಡು ಹೆದರಿದ ಬಹುತೇಕ ಯುರೋಪಿಯನ್ ಸಕರ್ಾರಗಳು ಅದರ ಮೇಲೆ ತೀವ್ರ ನಿರ್ಬಂಧವನ್ನು ಹೇರಿ ಅದನ್ನು ಕಾನೂನುಬಾಹಿರಗೊಳಿಸಿದವು. ಇದೆಲ್ಲದರ ಪರಿಣಾಮವಾಗಿ 1872ರ ಹೊತ್ತಿಗೆ ಈ ಸಂಘಟನೆ ಛಿದ್ರಗೊಂಡಿತು. ಅಷ್ಟುಹೊತ್ತಿಗಾಗಲೇ ಕಲ್ಪನಾವಾದಿ ಸಮಾಜವಾದದ ಅನೇಕ ಪ್ರವೃತ್ತಿಗಳನ್ನು ಸೋಲಿಸಿ ಮಾಕ್ಸರ್್ವಾದ ಕಾಮರ್ಿಕ ವರ್ಗದ ಸಿದ್ದಾಂತವಾಗಿ ಬೆಳೆದಿತ್ತು. ಬಹುತೇಕ ಬಂಡವಾಳ ಶಾಹಿ ದೇಶಗಳಲ್ಲಿನ ಕಾಮರ್ಿಕರ ಪರಿಸ್ಥಿತಿ ಹೆಚ್ಚು-ಕಡಿಮೆ ಒಂದೇ ಇದ್ದುದರಿಂದಲೂ ಕಾಮರ್ಿಕ ವರ್ಗದ ಚಳುವಳಿ ಅಂತರಾಷ್ಟ್ರೀಯಕರಣಗೊಂಡುದರ ಪರಿಣಾಮವಾಗಿಯೂ ಕಾಮರ್ಿಕರ ಬೇಡಿಕೆಗಳು ಏಕರೂಪವಾಗಿದ್ದವು. ಕಾಮರ್ಿಕರ ಶೋಷಣೆ ನಿಲ್ಲಬೇಕು ಹಾಗೂ ಅವರಿಗೆ ಸಾಮಾಜಿಕ ಆಥರ್ಿಕ ಹಕ್ಕುಗಳಿರಬೇಕು ಎನ್ನುವ ಬೇಡಿಕೆಗಳು ವ್ಯಾಪಕವಾಗಿದ್ದವು. ಈ ಬೇಡಿಕೆಗಳಲ್ಲಿ ಮುಖ್ಯವಾಗಿ ದಿನಕ್ಕೆ 8ಗಂಟೆಗಳ ಕೆಲಸ ಎನ್ನುವುದು ಯುರೋಪ ಮತ್ತು ಅಮೇರಿಕಾದ ಕಾಮರ್ಿಕರ ಅಂತರಾಷ್ಟ್ರೀಯ ಸಂಘಟನೆಯ ಘೋಷಣೆಯಾಗಿತ್ತು.ಪ್ರಪಂಚದ ಅತಿ ಮುಖ್ಯವಾದ ಕೈಗಾರಿಕಾ ದೇಶವಾಗಿದ್ದ ಅಮೇರಿಕಾದಲ್ಲಿ ಆಗ ಕಾಮರ್ಿಕರು 16ಗಂಟೆಗಳ ಕಾಲ ದುಡಿಯಬೇಕಾಗಿತ್ತು. ಚಿಕಾಗೋ ಅಮೇರಿಕಾದ ಕಾಮರ್ಿಕರ ಚಳುವಳಿಯ ಪ್ರಮುಖ ಕೇಂದ್ರವಾಗಿತ್ತಷ್ಟೇ ಅಲ್ಲದೇ ಮಿಲಿಟೆಂಟ್ ಹೋರಾಟಗಳ ಪರಂಪರೆಯನ್ನು ಹೊಂದಿತ್ತು.ಪ್ಯಾರಿಸ್ ಕಮ್ಯೂನ್ ನಡೆದ ಮರುವರ್ಷ ಅಂದರೆ 1872ರಲ್ಲಿ ಚಿಕಾಗೋದ ಕಾಮರ್ಿಕರು ರಕ್ತ ಇಲ್ಲವೇ ರೊಟ್ಟಿ ಎಂಬ ಬ್ಯಾನರ್ನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದರು. ಆಗವರನ್ನು ಚಿಕಾಗೋದ ಪೋಲಿಸರು ರಕ್ತದಲ್ಲಿಯೇ ಮುಳುಗಿಸದ್ದರು. ಇಂತಹದೇ ಮತ್ತೊಂದು ಬೃಹತ್ ಪ್ರತಿಭಟನೆ 1877ರಲ್ಲಿ ನಡೆಯಿತು.1877ರ ಬೃಹತ್ ಪ್ರತಿಭಟನೆಯ ನಂತರ ಕಾಮರ್ಿಕರು ಸೇನಾತ್ಮಕವಾಗಿ ಸಿದ್ದಗೊಳ್ಳಲಾರಂಭಿಸಿದರು. ಎಲ್ಲ ಕಡೆ ರಹಸ್ಯ ಕಾಮರ್ಿಕ ಸಂಘಟನೆಗಳು, ಸೊಸೈಟಿಗಳು, ಕಾಮರ್ಿಕ ವರ್ಗದ ಪಕ್ಷಗಳು ರೂಪುಗೊಂಡವು. ನಿದರ್ಿಷ್ಟವಾಗಿ ಚಿಕಾಗೋದಲ್ಲಿ ರ್ಯಾಡಿಕಲ್ ವಾತಾವರಣ ನಿಮಾರ್ಣವಾಗಿತ್ತು. ಅಲ್ಲಿಯೇ ಬಹುದೊಡ್ಡದಾಗಿದ್ದ ಸೆಂಟ್ರಲ್ ಲೇಬರ್ ಯೂನಿಯನ್ನ ಮುಂಚೂಣೆ ತಂಡದಲ್ಲಿ ಕ್ರಾಂತಿಕಾರಿಗಳಿದ್ದರು.ಜರ್ಮನಿಯರೇ, ಹೆಚ್ಚಿದ್ದ ಇದು ಮಾಲೀಕರ ಖಾಸಗಿ ಗೂಂಡಾಗಳನ್ನು ಎದುರಿಸಲು ಲೆಹರ್ ಹಾಗೂ ವೆಹರ್ ಎಂಬ ಸಶಸ್ತ್ರ ಮಿಲಿಷಯ್ಗಳನ್ನು ರೂಪಿಸಿಕೊಂಡಿತ್ತು. ಇವರೊಂದಿಗೆ ಇಂಗ್ಲೀಷ್ ಮಾತನಾಡುವ ಇಂಗ್ಲೀಷ್ ಕ್ಲಬ್, ಜೆಕ್ಮೂಲದ ಬೊಹೆಮಿಯಾನ್ ಶಾಪರ್್ಶೂಟರ್ಸ್ಗಳು ಹಾಗೂ ಪ್ರೆಂಚ್ ಗುಂಪು ಕೂಡ ಇತ್ತು. ಶೋಷಕರ ವಿರುದ್ದ ನಿಲ್ಲಬೇಕಿದ್ದಲ್ಲಿ ಕಾಮರ್ಿಕ ವರ್ಗ ಸಶಸ್ತ್ರವಾಗಿರಬೇಕೆನ್ನುವುದು ಸೆಂಟ್ರಲ್ ಲೇಬರ್ ಯೂನಿಯನ್ನ ನಿರ್ಣಯವಾಗಿತ್ತು. ಇಲ್ಲಿಯ ಕಾಮರ್ಿಕರಿಗೆ ಶಿಕ್ಷಣವನ್ನು ನೀಡಲು ಪಾರ್ಸನ್ ಎಂಬುವವರು ಇಂಗ್ಲೀಷ್ನಲ್ಲಿ ಪತ್ರಿಕೆಯನ್ನು ಹೊರತ್ತಿದ್ದರೆ, ಆಗಸ್ಟ್ ಸ್ಫೈಸ್ ಎನ್ನುವವರು ಜರ್ಮನಿಯಲ್ಲಿ ಪತ್ರಿಕೆಯನ್ನು ಹೊರತರುತ್ತಿದ್ದರು. ಇವರು ಇಬ್ಬರು ಕಾಮರ್ಿಕರ ಸಂಘಟನೆಗಳ ಮುಖಂಡರು ಆಗಿದ್ದರು.ಶ್ರಮಶಕ್ತಿ ಹೋರಾಟ! ರಕ್ತ-ಸಿಕ್ತ ಬಾವುಟ!! ಅದುವೆ ಕೆಂಬಾವುಟ!!!ಅಮೇರಿಕಾ ಹಾಗೂ ಕೆನಡಾದ ಯೂನಿಯನ್ಗಳು ಸೇರಿ ಮಾಡಿಕೊಂಡ ಅಮೇರಿಕನ್ ಪೆಡರೇಷನ್ ಆಪ್ ಲೇಬರ್ ಎಂಬ ಸಂಘಟನೆ ಕಾಮರ್ಿಕ ವರ್ಗದ ಚಳುವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿತ್ತು. 1885ರಲ್ಲಿ ನಡೆದ ಇದರ ಮಹಾಧಿವೇಶನದಲ್ಲಿ 8ಗಂಟೆಗಳ ಕೆಲಸದ ಬೇಡಿಕೆಯನ್ನು ಮುಂದಿಡಲು ನಿರ್ಧರಿಸಲಾಯಿತು. ಕಾಮರ್ಿಕ ಸಂಘಟನೆಗಳು ಹಾಗೂ ಆಡಳಿತ ಮಂಡಳಿಯ ನಡುವೆ ಮಾತುಕತೆಯನ್ನು ನಡೆಸುವುದು ಹಾಗೂ ಆ ಒಪ್ಪಂದಕ್ಕೆ ಬರಲಾಗದಿದ್ದಲ್ಲಿ 1886ರ ಮೇ 1ರಂದು ಮುಷ್ಕರ ನಡೆಸಲು ನಿರ್ಧರಿಸಲಾಯಿತು. ಕಾಮರ್ಿಕ ಸಂಘಟನೆ ಹಾಗೂ ಆಡಳಿತ ಮಂಡಳಿಯಲ್ಲಿ ನಡೆದ ಹಲವು ಸುತ್ತಿನ ಮಾತುಕತೆಗಳು ಫಲಿಸಲಿಲ್ಲ. ಹಾಗಾಗಿ ಮೇ 1ರ ಮುಷ್ಕರಕ್ಕೆ ಕಾಮರ್ಿಕರು ಮುಂದಾದರು. ಚಿಕಾಗೋದಲ್ಲಿ ಮೇ ದಿನದ ಸಿದ್ದತೆಗಳು ಭರದಿಂದ ಸಾಗಿದವು.ಕಾಮರ್ಿಕರ ಹೋರಾಟವನ್ನು ದಮನಿಸಲು ಬಂಡವಾಳಶಾಹಿಗಳು ತಮ್ಮ ಸಿದ್ದತೆಯನ್ನು ಮಾಡಿಕೊಂಡವು. ನ್ಯಾಷನಲ್ ಗಾಡರ್್ ಕಾವಲ್ರಿ, ಪೊಲೀಸರಷ್ಟೇ ಅಲ್ಲದೇ ಬಂಡವಾಳಿಗರ ಖಾಸಗಿ ಗೂಂಡಾಗಳು ಸಶಸ್ತ್ರರಾಗಿ ಆದೇಶಕ್ಕಾಗಿ ಕಾಯತೊಡಗಿದರು. ಬೂಜ್ವರ್ಾ ದಿನಪತ್ರಿಕೆಗಳು ಚಿಕಾಗೋದ ನಾಯಕರುಗಳ ವಿರುದ್ದ ಇಲ್ಲ-ಸಲ್ಲದ ಅಪಪ್ರಚಾರ ಮಾಡಿದರು. ಭೂಗತರಾಗಿದ್ದ ಆಗಸ್ಪ್ಸ್ಪೈಸ್ ಹಾಗೂ ಪಾಸರ್್ನ್ ಹೇಡಿಗಳೆಂದು, ಅಪಾಯಕಾರಿ ಕೊಲೆಗಡುಕರೆಂದು, ಕ್ರಾಂತಿಯ ಕಿತಾಪತಿದಾರರೆಂದು ದೂರಿದವು. ಮುಷ್ಕರ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಕಾಮರ್ಿಕರ ಮೇಲೆ ನಿದರ್ಾಕ್ಷಿಣ್ಯವಾಗಿ ದಮನ ಮಾಡುವುದು, ಕೆಲಸದಿಂದ ವಜಾ ಮಾಡುವುದಾಗಿ ಹೆದರಿಸಲಾಯಿತು. ಆದರೆ ಕಾಮರ್ಿಕರು ಈ ಅಪಪ್ರಚಾರಗಳಿಂದಾಗಲಿ, ಬೆದರಿಕೆಯಿಂದಾಗಲಿ ಹಿಂದೆ ಸರಿಯಲಿಲ್ಲ. 1886ರ ಮೇ ಕಾಮರ್ಿಕ ಚಳುವಳಿಯ ಇತಿಹಾಸದಲ್ಲಿಯೇ ಮರೆಯಲಾಗದ ಒಂದು ಮಹತ್ತರವಾದ ದಿನ ಅಂದು ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಾವಿರಾರು ಕಾಮರ್ಿಕರು ತಮ್ಮ ಸಂಘಟಿತ ಬಲವನ್ನು ಪ್ರದಶರ್ಿಸಿದರು. ಚಿಕಾಗೋದ 30.000ಕಾಮರ್ಿಕರು ದಿನಕ್ಕೆ 8ಗಂಟೆಗಳ ಕಾಲ ಮಾತ್ರ ನಮ್ಮ ದುಡಿತ ಎಂದು ಘೋಷಣೆ ಹಾಕುತ್ತಾ ಬೀದಿಗೆ ಇಳಿದರು. ಎಲ್ಲ ರೈಲುಗಳು ನಿಂತವು. ಬಂದರುಗಳು ಕೆಲಸ ಸ್ಥಗಿತಗೊಂಡಿತ್ತು. ಯಾವ ಪ್ಯಾಕ್ಟರಿಗಳ ಚಿಮುಣಿಯಿಂದ ಹೊಗೆ ಬರಲಿಲ್ಲ. ಮಿಲಿಯಾಂತರ ದುಡಿಯುವ ಜನ ಎಚ್ಚೆತ್ತಿದ್ದಾರೆ. ಅವರು ಸಾಗುತ್ತಿರುವದು ನೋಡಿ ಪೀಕಡರೆಲ್ಲ ನಡುಗುತ್ತಿದ್ದಾರೆ. ಅವರ ಅಧಿಕಾರ ಇಷ್ಟರಲ್ಲೇ ಅಂತ್ಯಗಾಣಲಿದೆ. ಎಂದು ಹಾಡುತ್ತಾ ಕಾಮರ್ಿಕರು ಮತ್ತು ಅವರ ಕುಟುಂಬದವರು ರಸ್ತೆಯುದ್ದಕ್ಕೂ ಸಾಗಿದರು. ಚಿಕಾಗೋ ನಗರದ ಹೇ ಮಾರುಕಟ್ಟೆ ಚೌಕದಲ್ಲಿ ಸಾವಿರಾರು ಕಾಮರ್ಿಕರು ಸೇರಿದರು. ಆದರೆ, ಮೊದಲೇ ಯೋಜಿಸಿದ್ದಂತೆ ಕಾಮರ್ಿಕರ ಈ ಬೃಹತ್ ಪ್ರದರ್ಶನದ ಮೇಲೆ ಪೋಲಿಸರು ಗುಂಡಿನ ಮಳೆಗೆರದರು. ಕ್ಷಣಾರ್ಧದಲ್ಲಿ ಹೇಮಾರುಕಟ್ಟೆಯ ಚೌಕ ಕಾಮರ್ಿಕರು ಹರಿಸಿದ ರಕ್ತದಿಂದ ಕೆಂಪಾಯಿತು. ಮೇ 1ರಂದು ಕಾಮರ್ಿಕರು ಹರಿಸಿದ ರಕ್ತದ ಸಂಕೇತವಾಗಿಯೇ ಇಂದು ಕಾಮರ್ಿಕರ ಕೈಯಲ್ಲಿ ಕೆಂಬಾವುಟ ರಾರಾಜಿಸುತ್ತಿದೆ. ಅಂದು ಅಮೇರಿಕಾದ ಎಲ್ಲ ಪ್ರಮುಖ ನಗರಗಳಲ್ಲಿ ಎಂಟು ಗಂಟೆಗಳ ಕೆಲಸವನ್ನು ಒತ್ತಾಯಿಸುವ ಕಾಮರ್ಿಕರ ಪ್ರದರ್ಶನಗಳು ನಡೆದವು. ಡೆಟ್ರಾಯಿಟ್ನಲ್ಲಿ ಸಾವಿರಾರು ಕಾಮರ್ಿಕರು ಎಂಟು ಗಂಟೆಗಳ ಪ್ರದರ್ಶನ ನಡೆಸಿದರು. ನ್ಯೂಯಾಕರ್್ನಲ್ಲಿ ಸಾವಿರಾರು ಕಾಮರ್ಿಕರು ಪಂಜಿನ ಮೆರವಣಿಗೆ ನಡೆಸಿದರು. ಲೂಯಿಸ್ ವಿಲ್ಲೆ, ಕೆಂಟಕಿಗಳಲ್ಲಿ ಆರು ಸಾವಿರಕ್ಕಿಂತಲೂ ಹೆಚ್ಚಿನ ಕಾಮರ್ಿಕರು ನಿಷೇಧವನ್ನು ಮುರಿದು ಮೆರವಣಿಗೆಯಲ್ಲಿ ಸೇರಿದರು.ಆ ಸಮಯದಲ್ಲಿ ಅಮೇರಿಕಾದಲ್ಲಿಯೂ ಕೂಡ ಕಾಮರ್ಿಕರ ಹೋರಾಟಗಳು ಮೇ ಉದ್ದಕ್ಕೂ ನಡೆದವು. ಮೇ 2ರಂದು ಚಿಕಾಗೋದ ಉದ್ಯಮಪತಿಗಳು ಮುಷ್ಕರದಲ್ಲಿ ಪಾಲ್ಗೊಂಡ ಕಾಮರ್ಿಕರನ್ನು ಕೆಲಸದಿಂದ ವಜಾ ಮಾಡುವುದಾಗಿ ಘೋಷಿದ್ದನ್ನು ಪ್ರತಿಭಟಿಸಿ ಮೇ 3ರಂದು ರಾಷ್ಟ್ರಾಧ್ಯಂತ 3,40,000 ಕಾಮರ್ಿಕರು ಬೀದಿಗಿಳಿದರು. ಮೇ 4ರಂದು ಹೇ ಮಾರುಕಟ್ಟೆಯಲ್ಲಿ ಇಂತಹದ್ದೇ ಒಂದು ಪ್ರತಿಭಟನೆಯ ಸಮಯದಲ್ಲಿ ಎಲ್ಲಿಂದಲೋ ಬಂದ ಬಾಂಬೊಂದು ಪೊಲೀಸರ ಮೇಲೆ ಬಿದ್ದಾಗ ಒಬ್ಬ ಪೇದೆ ಸ್ಥಳದಲ್ಲಿಯೇ ಸತ್ತು ಆರು ಜನ ಪೊಲೀಸರು ತೀವ್ರವಾಗಿ ಗಾಯಗೊಂಡರು. ಇದರಿಂದಾಗಿ ರೊಚ್ಚಿಗೆದ್ದ ಪೊಲೀಸರು ಯದ್ವಾ-ತದ್ವಾ ಗುಂಡು ಹಾರಿಸದ್ದರಿಂದ ಹಲವಾರು ಕಾಮರ್ಿಕರು ಕೊಲ್ಲಲ್ಪಟ್ಟರು. ನೂರಾರು ಜನರು ಗಾಯಗೊಂಡರು.ನಂತರ ಪೊಲೀಸರ ಮೇಲೆ ಬಾಂಬ್ ಎಸೆದ ಘಟನೆಯನ್ನೇ ನೆಪವಾಗಿಟ್ಟುಕೊಂಡು ಪ್ರಭುತ್ವ ಕಾಮರ್ಿಕ ಸಂಘಟನೆಗಳ ಮೇಲೆ ದಾಳಿ ಮಾಡಲಾರಂಭಿಸಿತು. ಸಾವಿರಾರು ಕ್ರಾಂತಿಕಾರಿಗಳನ್ನು ಮುಷ್ಕರ ನಿರತರನ್ನು ಬಂಧಿಸಲಾಯಿತು. ಕಾಮರ್ಿಕ ಸಂಘಟನೆಗಳ ಕಛೇರಿಗಳ ಮೇಲೆ ದಾಳಿ ನಡೆದವು. ಮೇ ಮಧ್ಯಾವಧಿಯಲ್ಲಿ ಚಿಕಾಗೋದಲ್ಲಿ ನಡೆದ ಕೋಟರ್್ ವಿಚಾರಣಿಯಲ್ಲಿ ಏಳು ಮಂದಿ ಕಾಮರ್ಿಕರ ಮುಖಂಡರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಯಿತು. ಇವರುಗಳೇ ಆಲ್ಬಟರ್್ ಆರ್ ಪಾಸರ್್ನ್, ಆಗಸ್ಟ್ ಸ್ಪೈಸ್, ಮೈಕಲ್ ಚ್ವಾಬ್, ಸ್ವಾಮುವೆಲ್ ಫಿಲ್ಡ್ನ್, ಅಡೋಲ್ಪ್ ಫಿಷರ್, ಜಾಜರ್್ ಏಂಗೆಲ್, ಲೂಯಿಸ್ ಲಿಂಗ್ ಹಾಗೂ ಆಸ್ಕರ್ನೀಬೇಗಳಾಗದ್ದರು.ತೀಂಗಳಾನುಗಟ್ಟಲೇ ನಡೆದ ವಿಚಾರಣೆಯಲ್ಲಿ 1887ರ ನವೆಂಬರ್ 11ರಂದು ಫಿಲ್ಡ್ನ್ ಹಾಗೂ ಚ್ವಾಬ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಪಾಸರ್್ನ್, ಸ್ಪೈಸ್, ಪೀಷರ್ ಹಾಗೂ ಎಂಗೆಲ್ರನ್ನು ಗಲ್ಲಿಗೇರಿಸಲಾಯಿತು. ಲೂಯಿಸ್ಲಿಂಗ್ರನ್ನು ಬಂದನದಲ್ಲಿದ್ದಾಗಲೇ ತಲೆಗೆ ಡೈನೆಮೆಟ್ ಟೋಪಿಯನ್ನು ಹಾಕಿ ಸಿಡಿಸಿ ಕೊಲ್ಲಲಾಯಿತು. ಆ ದಿನವನ್ನು ಅಮೇರಿಕಾದಾದ್ಯಂತವಷ್ಟೇ ಅಲ್ಲ ಪ್ರಾನ್ಸ್, ಇಟಲಿ, ರಷ್ಯಾ, ಹಾಲೆಂಡ್ ಹಾಗೂ ಸ್ಪೇನ್ಗಳಲ್ಲಿ ಕಪ್ಪು ಶುಕ್ರವಾರವೆಂದು ಆಚರಿಸುವ ಮೂಲಕ ತಮ್ಮ ನಾಯಕರಿಗೆ ಶೃದ್ದಾಂಜಲಿ ಅಪರ್ಿಸುವರು.ಮೇ 1ರ ಹೋರಾಟವನ್ನು ಅಮೇರಿಕಾದ ಕಾಮರ್ಿಕ ವರ್ಗ ಮುಂದುವರೆಸಿತು. ಹೀಗೆ ಕಾಮರ್ಿಕರು ಹಲವಾರು ವರ್ಷಗಳವೆರೆಗೆ ನಿರಂತರವಾಗಿ ಹೋರಾಡಿದ ಫಲವಾಗಿ ಬಂಡವಾಳಶಾಹಿಗಳು ಎಂಟು ಗಂಟೆಗಳ ಕೆಲಸವನ್ನು ಅನಿವಾರ್ಯವಾಗಿ ಒಪ್ಪಿಕೊಂಡರು.ನಂತರ 1891ರ ಆಗಸ್ಟ್ನಲ್ಲಿ ನಡೆದ 2ನೇ ಮಹಾಧಿವೇಶನದಲ್ಲಿ ಮೇ ಒಂದನ್ನು ಅಂತರಾಷ್ಟ್ರೀಯ ಕಾಮರ್ಿಕ ವರ್ಗದ ದಿನವೆಂದು ಘೋಷಿಸಲಾಯಿತು.ಹೀಗೆ ಮೇ1*ಮೊಟ್ಟ ಮೊದಲ ಬಾರಿಗೆ ಬಂಡವಾಳವಾದದ ವಿರುದ್ಧ ಕಾಮರ್ಿಕರು ಒಗ್ಗಟ್ಟಿನಿಂದ ಸಿಡಿದೆದ್ದ ದಿನವಾಗಿ..* ಕಾಮರ್ಿಕರು ತಮ್ಮ ಸಂಘಟಿತ ಬಲವನ್ನು ಪ್ರದಶರ್ಿಸಿದ ದಿನವಾಗಿ...* ಕಾಮರ್ಿಕರ ಹಕ್ಕೋತ್ತಾಯದ ದಿನವಾಗಿ...ಬಂಡವಾಳಶಾಹಿ ಸಮಾಜದ ಮಿಥ್ಯೆಯನ್ನು ಅರಿತು ಸಮಾಜವಾದದ ಅಗತ್ಯವನ್ನು ಕಂಡ ದಿನವಾಗಿ ಜಗತ್ತಿನಾಧ್ಯಂತ ಆಚರಿಸಲ್ಪಡುತ್ತದೆ.ವಿಶ್ವದ ಕಾಮರ್ಿಕರೇ ಒಂದಾಗಿ ! ಕಾಮರ್ಿಕ ವರ್ಗದ ಚಳುವಳಿ ಚಿರಾಯುವಾಗಲಿ !!ಎಂ ಲಿಂಗರಾಜು, ಸಂಪಾದಕರು.

Gulbarga in hands of dictators




ಸವರ್ಾಧಿಕಾರಿಗಳ ಕೈಯಲ್ಲಿ ಗುಲ್ಬಗರ್ಾವಿವೇಚನೆ ಎಂಬುದೇ ಇಲ್ಲದ ರಾಜಕಾರಣಿಗಳನ್ನು ಅಧಿಕಾರಶಾಹಿ ಹೇಗೆ ದಿಕ್ಕು ತಪ್ಪಿಸುತ್ತದೆ ಎಂಬುದಕ್ಕೆ ಕಲಬುಗರ್ಿಯ ಪೌರ ಕಾಮರ್ಿಕರ ಹೋರಾಟವೆ ಒಂದು ಉದಾಹರಣೆಯಾಗಿದೆ. ಡಾ. ಆರ್. ವಿಶಾಲ ಎಂಬ ಜಿಲ್ಲಾಧಿಕಾರಿ, ಸವರ್ಾಧಿಕಾರಿ ಮನೋಭಾವನೆಯ ಪೋಲಿಸ್ ವರಿಷ್ಠಾಧಿಕಾರಿ ಪದ್ಮನಯನ ಇವರ ಜುಗಲಬಂದಿ ಇಡೀ ಕಲಬುಗರ್ಿ ಜಿಲ್ಲೆಲ್ಲಿ ಆಡಳಿತ ಎಕ್ಕುಟ್ಟಿ ಹೋಗಲು ಕಾರಣವಾಗಿದೆ. ಕಲಬುಗರ್ಿಯ ಎಚ್ಚೆತ್ತ ಜನಗಳ ಸಂಕೇತ ಎಂದೆ ಬಿಂಬಿತವಾಗಿರುವ ಮಾಜಿಮಂತ್ರಿ ಎಸ್. ಕೆ.ಕಾಂತಾ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮಗ್ಗಲು ಮುಳ್ಳಾಗಿದ್ದಾರೆ.ಜನಪರ ಕಾರ್ಯವನ್ನು ಯಾವತ್ತೂ ಹಾದರ್ಿಕವಾಗಿ ಸ್ವಾಗತಿಸುವ ಆದರೆ ಜನಪರವಲ್ಲದ ಸರಕಾರದ ಧೋರಣೆಗಳನ್ನು ಎಂದಿಗೂ ತನ್ನ ಹೋರಾಟಗಳ ಮೂಲಕ ವಿರೋಧಿಸುತ್ತ ಬಂದಿರುವ ಎಸ್.ಕೆ.ಕಾಂತಾ ಸಹಜವಾಗಿ ಎಂದಿನಂತೆ ಸರಕಾರದ ಕೆಲವು ತಪ್ಪು ನಧರ್ಾರಗಳನ್ನು ವಿರೋಧಿಸುತ್ತಿರುವುದೆ ಇವರೀರ್ವರಿಗೆ ನುಂಗಲಾಗದ ತುತ್ತಾಗಿದೆ. ಸರಕಾರ ನದಿ ಸಿನ್ನೂರ, ಫರಹತಾಬಾದ್ಗಳಲ್ಲಿ ಸ್ಥಾಪಿಸಬೇಕೆಂದು ಉದ್ದೇಶಿಸಿರುವ ವಿದ್ಯುತ್ ಸ್ಥಾವರ ಘಟಕಕ್ಕೆ 1516 ಎಕರೆ ಭೂಮಿಯನ್ನು ಕಬಳಿಸಬೇಕೆಂದು ಹೊಂಚು ಹಾಕಿತ್ತು. ಸ್ಥಳೀಯ ರೈತರ ಅರಿವಿಗೆ ಬಾರದಂತೆ ಭೂಸ್ವಾಧೀನ ಕಾಯ್ದೆ 17(1) ಮತ್ತು 17(4) ತುತರ್ು ಕಾಯ್ದೆಯ ಅಡಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ತುದಿಗಾಲಲ್ಲಿ ನಂತಿತ್ತು. ಸರಕಾರದ ಈ ದುಷ್ಟ ನತಿಯನ್ನು ಪ್ರಜ್ಞೆ ಇರುವ ಯಾರಾದರೂ ಖಂಡಿಸಬೇಕಾದುದೆ.ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ಎಸ್.ಕೆ.ಕಾಂತಾ ಎಂದಿನ ತನ್ನ ದೃಢ ನಲುವುಗಳೊಂದಿಗೆ ಹೋರಾಟಕ್ಕೆ ನಂತಿರುವುದೆ ಜಿಲ್ಲಾಡಳಿತಕ್ಕೆ ಇರಿಸುಮುರಿಸು ತಂದಿಟ್ಟಿದೆ. ಸದರಿ ರೈತರ ಒಪ್ಪಿಗೆ ಇಲ್ಲದೆ, ಗ್ರಾಮ ಪಂಚಾಯತಿಗಳ ಒಪ್ಪಿಗೆ ಪಡೆಯದೆ, ಅತ್ಯಂತ ಫಲವತ್ತಾದ ಭೂಮಿಯನ್ನು (ವರ್ಷಕ್ಕೆ ಸುಮಾರು 90 ಕೋಟಿ ರೂಪಾಯಿ ದವಸ ದಾನ್ಯ ಬೆಳೆಯುವ) ಕೊಡುವುದು ಸಾಧ್ಯವೆ ಇಲ್ಲ ಎಂದು ರೈತರೆಲ್ಲ ಒಕ್ಕೂರಲಿನಲ್ಲಿ ಕೂಗುವಂತೆ ಕಾಂತಾ ಅವರೆಲ್ಲರನ್ನು ಹುರಿದುಂಬಿಸಿದರು. ಅಲ್ಲದೆ ಜಿಲ್ಲಾಧಿಕಾರಿಯೊಂದಿಗೆ ಈ ಕುರಿತು ಹಲವು ಸುತ್ತಿನ ಮಾತುಕತೆಗಳ ಮೂಲಕ ಜಮೀನು ಬಿಟ್ಟು ಕೊಡುವುದು ಸಾಧ್ಯವೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಜೊತೆಗೆ ಹಿಂದಿನ ಜಿಲ್ಲಾಧಿಕಾರಿ ಸತ್ಯಮೂತರ್ಿ ಈ ಕುರಿತು ಸರಕಾರಕ್ಕೆ ನದಿಸಿನ್ನೂರ ಹಾಗೂ ಫರತಾಬಾದನಲ್ಲಿ ವಿದ್ಯುತ್ ಘಟಕ ಸ್ಥಾಪಿಸಬೇಕೆಂದು ಉದ್ದೇಶಿಸಿರುವ ಭೂಮಿ ಅತ್ಯಂತ ಫಲವತ್ತಾಗಿದ್ದು, ಸದರಿ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಒಳಿತು ಎಂಬ ಒಕ್ಕಣಿಯನ್ನು ಇಂದಿನ ಜಿಲ್ಲಾಧಿಕಾರಿಗಳ ಕಣ್ಣ ಮುಂದೆ ಇಟ್ಟರು. ಜಿಲ್ಲಾ ಉಸ್ತುವಾರಿ ಅಧಿಕಾರಿ ಸಚಿವ ಲಕ್ಷ್ಮಣ ಸೌದಿ ಕೂಡ ರೈತರ ಫಲವತ್ತಾದ ಭೂಮಿ ಕಸಿಯುವುದು ಬೇಡ ಎಂಬ ಹೇಳಿಕೆಯನ್ನೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದೆಲ್ಲದರಿಂದ ಜಿಲ್ಲಾಧಿಕಾರಿಗೆ ಅಂಡಿನಲ್ಲಿ ಮೆಣಸಿನ ಕಾಯಿ ಇಟ್ಟಂತಾಯಿತು.ಗುಲಬಗರ್ಾ ರೈಲು ನಿಲ್ದಾಣದ ಪಕ್ಕದಲ್ಲಿಯೆ ಇರುವ ತಾರಫೈಲ್ ಬಡಾವಣೆ ಎಲ್ಲರೂ ಬಲ್ಲಂತೆ ಸಮಾಜದ ಅತ್ಯಂತ ಕೆಳ ಸ್ಥರದಲ್ಲಿ ಇರುವ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ವಾಸವಾಗಿರುವ ಕಾಲೋನ. ಈ ಬಡಾವಣೆಗೆ ಸರಕಾರದ ಸಂರಕ್ಷಣೆ ಬೇಕು. ಆದರೆ ತನ್ನ ಜೀಪಿನ ಮೇಲೆ ಯಾವುದೋ ಅವಿವೇಕಿ ಕಲ್ಲು ತೂರಿದ ಎಂಬುದನ್ನೆ ಮುಂದೆ ನೆಪ ಇಟ್ಟುಕೊಂಡು ತಾರ್ಫೈಲ್ ದಲಿತರ ಮೇಲೆ ಎಸ್ಪಿ ಪದ್ಮನಯನ ನಡೆಸಿದ ಗೂಂಡಾಗಿರಿ ಖಂಡನಯವಾದುದು. ತನ್ನ ನೇತೃತ್ವದಲ್ಲಿ ಪೋಲಿಸ್ ದಂಡು ತಕ್ಕೊಂಡು ಹೋಗಿ ದಲಿತರೆಲ್ಲರ ಮನೆ ಬಾಗಿಲು- ಕಿಟಕಿಗಳನ್ನು ಮುರಿದು ಅವರ ಅಡುಗೆಯ ಪಾತ್ರೆ ಪಗಡೆಗಳನ್ನು ಹೊರಗೆ ಬಿಸಾಕಿ, ಮಕ್ಕಳು ಮುದುಕರು, ಹೆಣ್ಣುಮಕ್ಕಳೆನ್ನದೆ ಪೋಲಿಸ್ ಲಾಠಿ ಬೀಸಿದ್ದಾರೆ. ಅವರೆಲ್ಲರನ್ನೂ ವಿನಾಕಾರಣ ಬೆಳಗಾಂವಿಯ ಜೇಲಿಗೆ ಕಳಿಸಿ ಪೋಲಿಸರು ತಮ್ಮ ದೌರ್ಜನ್ಯ ಮೆರೆದಿದ್ದಾರೆ.ಇದಲ್ಲದೆ ಈ ಹಿಂದೆ ಹಲವಾರು ಸಲ ಗುಲಬಗರ್ಾದಲ್ಲಿ ರಾತ್ರಿಯಾಗುವುದೆ ತಡ ಹಲವಾರು ಅಂಗಡಿ ಮುಂಗಟ್ಟುಗಳ ಕೀಲಿ ಮುರಿದು ಧರೋಡೆಗಳು ನಡೆದು ಹೋಗಿವೆ. ಹೆಣ್ಣು ಮಕ್ಕಳ ಕತ್ತಿನಲ್ಲಿನ ಸರ, ಮಾಂಗಲ್ಯಗಳು ನಂತ ನಂತಲೆ ಮಟಾಮಾಯವಾಗುತ್ತಿವೆ. ಕೊಲೆಗಡುಕರಂತೂ ನಭರ್ೀತಿಯಿಂದ ತಿರುಗುತ್ತಿದ್ದಾರೆ. ವಿಚಿತ್ರವೆಂದರೆ ಪೋಲಿಸರೆ ಅಂಗಡಿ ಅಂಗಡಿಗೆ ಹೋಗಿ ಹಪ್ತಾ ವಸೂಲಿಗೆ ಇಳಿದಿರುವ ದೃಶ್ಯ ಸಾಮಾನ್ಯ. ದೊಂಬಿ, ರಾಬರಿ ಮಾಡುವ ಹುಡುಗರೆಲ್ಲ ಪೋಲಿಸರ ನೆಂಟರಂತೆ ನತ್ಯವೂ ಪೋಲಿಸರ ಜೊತೆ ತಿರುಗಾಡುತ್ತಿದ್ದಾರೆ.ಇದನ್ನೆಲ್ಲ ಗಮನಸುತ್ತಿದ್ದ ಯಾರಿಗಾದರೂ ಸರಕಾರದ ಅಧಿಕಾರಿಗಳ ಬಗೆಗೆ ರೋಷ ಉಕ್ಕದೆ ಇರುತ್ತದೆಯೆ ? ಸಹಜವಾಗಿಯೆ ಎಸ್.ಕೆ. ಕಾಂತಾ ಈ ಎಲ್ಲ ಅಸಂಗತ ಸಂಗತಿಗಳ ಕುರಿತು ಮಾಧ್ಯಮದ ಮೂಲಕ ಸರಕಾರದ ಗಮನಕ್ಕೆ ತಂದಿದ್ದಾರೆ. ಪೋಲಿಸರ ಗೂಂಡಾಗಿರಿಯ ಮೂಲಕ ಎಂಥ ಅನಾಹುತಗಳಾಗುತ್ತಿವೆ ಎಂಬುದನ್ನು ಕಾಂತಾ ಸರಕಾರದ ಮುಖ್ಯಸ್ಥರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಗೃಹ ಮಂತ್ರಿಯನ್ನು ಈ ಸಂಬಂಧ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿಯನ್ನು ಜರಿದರು. ಇದರಲ್ಲಿ ತಪ್ಪೇನು ಇದೆ ? ಆದರೆ ಕಂಡದ್ದು ಕಂಡಂತೆ ಆಡಿದರೆ ಕೆಲವರಿಗೆ ಕೆಂಡದಂಥ ಕೋಪ ಎಂಬಂತೆ ಪದ್ಮನಯನ ತಾನು ಕುಳಿತ ಖುಚರ್ಿಯಲ್ಲಿಯೆ ಕುದ್ದು ಹೋಗುತ್ತಿದ್ದಾನೆ.ಎಸ್.ಕೆ.ಕಾಂತಾ ಅವರ ನ್ಯಾಯಯುತವಾದ, ಜನಪರವಾದ ಹೋರಾಟಗಳನ್ನು ತಪ್ಪಾಗಿ ಅಥರ್ೈಸಿಕೊಂಡಿರುವ ಅಧಿಕಾರಿದ್ವಯರಿಬ್ಬರೂ ಕಾಂತಾ ಅವರನ್ನು ಹೇಗಾದರೂ ಸೈ ಹಣಿಯಬೇಕೆಂದು ತೀಮರ್ಾನಸಿಕೊಂಡವರಂತೆ ಒಂದೊಂದೆ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಎಸ್.ಕೆ. ಕಾಂತಾ ಅವರ ಶಕ್ತಿ ಇರುವುದೆ ದಲಿತರ- ಅಲ್ಪಸಂಖ್ಯಾತರ ಅಥವಾ ತುಳಿತಕ್ಕೆ ಒಳಗಾದವರ ಜೊತೆಗೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಂಡ ಈ ನಾಮರ್ಧರಿಬ್ಬರು ವಿನಾಕಾರಣ ಅಧಿಕಾರ ದುರುಪಯೋಗ ಮಾಡಿಕೊಂಡು ದೌರ್ಜನ್ಯವೆಸಗುತ್ತಿದ್ದಾರೆ.ನದಿಸಿನ್ನೂರು ಹಾಗೂ ಫರತಾಬಾದ ರೈತರ ಮೇಲೆ ಪೋಲಿಸರನ್ನು ಛೂಬಿಟ್ಟು ಹಣಿಯಲು ಯತ್ನಿಸಿದರು. ಜೈಲಿಗೆ ಹಾಕಿದರು. ಇದೂ ಸಾಲದೆಂಬಂತೆ ಅವರನ್ನು ಕೈಕೊಳಹಾಕಿ ಅವರ ಮನೋಸ್ಥೈರ್ಯವನ್ನು ಕುಸಿಯುವಂತೆ ನೋಡಿಕೊಂಡರು. ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ನಡೆಸಿದ ಚಳುವಳಿಯನ್ನು ಹತ್ತಿಕ್ಕಲು ನಾನಾ ರೀತಿಯ ಪ್ರಯತ್ನಗಳನ್ನು ಜಿಲ್ಲಾಡಳಿತ ಇಂದಿಗೂ ಮುಂದುವರೆಸಿಕೊಂಡು ನಡೆದಿದೆ. ಕನರ್ಾಟಕ ರಕ್ಷಣಾ ವೇದಿಕೆಯ ಅರುಣಕುಮಾರ ಪಾಟೀಲ, ಸುಲಫಲ ಮಠದ ಮಹಾಂತ ಶಿವಾಚಾರ್ಯ, ಅಲ್ಲಮಪ್ರಭು ಪಾಟೀಲ ಮುಂತಾದವರ ಮೇಲೆ ಕೇಸುಗಳನ್ನು ಜಡಿದು ಜೈಲಿಗೆ ತಳ್ಳುವ ಯತ್ನ ಆರಂಭಿಸಿದೆ.ಪೌರಕಾಮರ್ಿಕರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ನಗರಪಾಲಿಕೆ ಕಛೇರಿಯ ಮುಂದೆ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ. ಸಹಜವಾಗಿ ಸರಕಾರದ ಮಂತ್ರಿಗಳು ನಗರಕ್ಕೆ ಬಂದಾಗ ಅವರೆಲ್ಲರ ಗಮನ ಸೆಳೆಯಬೇಕೆಂದು ಚಳುವಳಿ ರೂಪಿಸಿದರೆ ಅದನ್ನು ವಿಫಲಗೊಳಿಸಲು ಮುದ್ದಾಂ ಜಿಲ್ಲಾಡಳಿತವು ಒಂದು ದಿನ ಮುಂಚೆಯೆ ಈ ಸತ್ಯಾಗ್ರಹಿಗಳನ್ನು ಹಿಡಿದು ಜೈಲಿಗೆ ಕಳಿಸುತ್ತದೆ. ಸಾರ್ವಜನಕ ಆಸ್ತಿ ಪಾಸ್ತಿಯನ್ನು ತಾನೇ ನಾಶಗೊಳಿಸಿ, ಬಸ್ಗಳಿಗೆ ಬೆಂಕಿ ಹಚ್ಚಿ ಸತ್ಯಾಗ್ರಹಿಗಳೆ ಇದನ್ನೆಲ್ಲ ಮಾಡಿದ್ದಾರೆ ಎಂಬಂತೆ ವ್ಯವಸ್ಥಿತ ಪಿತೂರಿ ನಡೆಸಿದೆ.!ಗುಲಬಗರ್ಾ ಅಧಿಕಾರಿಗಳಿಬ್ಬರ ದುಷ್ಟ ಬುದ್ಧಿಯನ್ನು ಅರಿತ ಕಾಂತಾ ಅವರು ಸಹಜವಾಗಿ ಅತ್ಯಂತ ಹುಷಾರಿಯಿಂದ ತಾವೇ ಆಮರಣ ಉಪವಾಸ ಆರಂಭಿಸಿದ್ಧಾರೆ. ಹೇಗಾದರೂ ಸೈ ಕಾಂತಾ ಅವರನ್ನು ಆ ಮೂಲಕ ಇಲ್ಲಿನ ಜನತೆಯನ್ನು ಬಗ್ಗು ಬಡಿಯಲೆ ಬೇಕೆಂದು ನಂತಿರುವ ಸರಕಾರದ ಅಧಿಕಾರಿಗಳಿಬ್ಬರೂ ತಮ್ಮ ಕರ್ತವ್ಯಗಳನ್ನು ಮೀರಿ ಅನಾಚಾರಿಗಳಂತೆ ವತರ್ಿಸುತ್ತಿದ್ದಾರೆ. ಮಹಾನಗರ ಪಾಲಿಕೆಯ ಮುಂದೆ ಆಮರಣ ಸತ್ಯಾಗ್ರಹ ಆರಂಭಿಸಿದ ಕಾಂತಾ ಅವರು ಹಾಗೂ ಅವರು ಆರಂಭಿಸಿದ ಚಳುವಳಿಯ ವಿಷಯ ಕುರಿತು ಸರಕಾರಕ್ಕೆ ತಪ್ಪು ತಪ್ಪಾದ ಮಾಹಿತಿಗಳನ್ನು ನಡುತ್ತ ದಿಕ್ಕು ತಪ್ಪಿಸುತ್ತಿದ್ದಾರೆ.ಆಮರಣ ಉಪವಾಸದಿಂದ ಎಸ್.ಕೆ. ಕಾಂತಾ ಅವರ ಆರೋಗ್ಯ ದಿನೆ ದಿನೆ ಹದಗೆಡುತ್ತದೆ ಎಂಬ ಸಬೂಬು ನಡುತ್ತ ಯಾರಿಗೂ ಹೇಳದೆ ಕೇಳದೆ ಜಿಲ್ಲಾಡಳಿತ ಸತ್ಯಾಗ್ರಹ ಸ್ಥಳದಿಂದ ಬಲವಂತವಾಗಿ ಹೊರಗಡೆ ಹಾಕಿಬಿಟ್ಟಿದೆ. ಇದನ್ನು ತಡೆಯಲು ಬಂದ ಪೌರ ಕಾಮರ್ಿಕರ ಮೇಲೆ ಲಾಠಿ ಚಾರ್ಜ ಮಾಡಿ ಗೂಂಡಾಗಿರಿ ನಡೆಸಿದೆ. ಪೋಲಿಸರ ದಬ್ಬಾಳಿಕೆ ನತಿಯನ್ನು ಖಂಡಿಸಿ ಹೋರಾಟಕ್ಕೆ ದುಮುಕಿದ ಸುಲಫಲ ಮಠದ ಮಹಾಂತ ಶಿವಾಚಾರ್ಯರ ಮೇಲೆ ಇಲ್ಲ ಸಲ್ಲದ ಕೇಸ್ಗಳನ್ನು ಹೆಟ್ಟಿ ಗಪ್- ಚುಪ್ ಕುಳಿತುಕೊಳ್ಳುವಂತೆ ಹೆದರಿಸುತ್ತಿದೆ.ಪ್ರಜಾಪ್ರಭುತ್ವ ವಿರೋಧಿಯಾದ, ಸವರ್ಾಧಿಕಾರಿ ಧೋರಣೆಯ ಜಿಲ್ಲೆಯ ಇಬ್ಬರು ಅಧಿಕಾರಿಗಳು ಇಲ್ಲಿಂದ ಎತ್ತಂಗಡೆ ಮಾಡದೆ ಹೋದರೆ ಯಡಿಯೂರಪ್ಪ ಸರಕಾರದ ಮಾನ ಗುಲಬಗರ್ಾದ ಬೀದಿ ಬೀದಿಗಳಲ್ಲಿ ಹರಾಜಾಗುವ ಕಾಲ ದೂರವಿಲ್ಲವೆನಸುತ್ತದೆ.ಅವಿವೇಕಿ ಅಧಿಕಾರಿಯ ಮಾತುಕೇಳಿ ಮೊಂಡು ಹಠಕ್ಕೆ ಬಿದ್ದಿರುವ ಸರಕಾರರಾಜ್ಯಪೌರ ಕಾಮರ್ಿಕ ಸಚಿವ ಸುರೇಶ ಕುಮಾರ ಹಾಗೂ ಗುಲಬಗರ್ಾ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣಸೌದಿ ಇಬ್ಬರೂ ಕೂಡಿಯೇ ಯಾವುದೊ ಸರಕಾರಿ ಬಂಗ್ಲೆಯಲ್ಲಿ ಗಡದ್ದಾಗಿ ನದ್ದೆ ಮಾಡುತ್ತಿರಬೇಕೆನೆಸುತ್ತದೆ. ಏಕೆಂದರೆ ಸತತ ಮೂರು ವರ್ಷಗಳಿಂದ ಗುಲಬಗರ್ಾ ಮಹಾನಗರ ಪಾಲಿಕೆಯ ಕಾಮರ್ಿಕ ನೌಕರರು ಒಂದೆ ಸಮನೇ ಬೊಬ್ಬೆ ಹೊಡೆಯುತ್ತಿದ್ದರೂ ಅದಕ್ಕೆ ಸ್ಪಂದಿಸಿಲ್ಲ. ಸುಮಾರು 477 ಜನ ಪೌರ ಕಾಮರ್ಿಕರು 34 ತಿಂಗಳುಗಳಿಂದಲೂ ಸಂಬಳವಿಲ್ಲದೆ ಕೆಲಸ ಮಾಡಿ ಹೈರಾಣಾಗಿ ಹೋಗಿದ್ದಾರೆ. ತಮ್ಮ ಹಸಿದ ಹೊಟ್ಟೆಯ ನೋವನ್ನು ಸರಕಾರಕ್ಕೆ ನ್ಯಾಯಯುತವಾಗಿ ತಿಳಿಸಬೇಕು ಎಂದುಕೊಂಡು ಚಳುವಳಿ ನಡೆಸಿದರು, ರಸ್ತಾರೋಖೋ ಏರ್ಪಡಿಸಿದರು, ಕೊನೆಗೆ ಆಮರಣ ಉಪವಾಸ ಕುಳಿತರೂ ಮೊಂಡು ವಾದಕ್ಕೆ ಬಿದ್ದ ಸರಕಾರದ ಪ್ರತಿನಧಿಗಳು ಇತ್ತ ಸುಳಿಯದೆ ಗದರ್ಿಗಮ್ಮತ್ತು ನಡೆಸಿದ್ದಾರೆ.ಈ ನಡುವೆ ಜಿಲ್ಲೆಗೆ ಹತ್ತಾರು ಬಾರಿ ಮುಖ್ಯ ಮಂತ್ರಿ ಯಡಿಯೂರಪ್ಪ ಭೇಟಿ ನಡಿದಾಗಲಾದರೂ ತಮ್ಮ ಪ್ರತಿಭಟನೆಯನ್ನು ತೋರಿಸಬೇಕೆಂದಿದ್ದ ಕಾಮರ್ಿಕರನ್ನು ಬೆಳಗಾಂವಿಯ ಹಿಂಡಲಗಾ ಜೇಲಿಗೆ ಕಳಿಸಿದೆ. ಸಾರ್ವಜನಕ ನೆಮ್ಮದಿಯನ್ನು ಕೆಡಿಸುವ ಕೇಸು ಜಡಿದು ಎಸ್. ಕೆ. ಕಾಂತಾ ಎಂಬ ಮಾಜಿ ಮಂತ್ರಿಗಳನ್ನೂ ಅದು ನಧರ್ಾಕ್ಷಿಣ್ಯವಾಗಿ ಜೇಲಿನಲ್ಲಿ ಬಂಧಿಸಿ ಇಟ್ಟು ತನ್ನ ಮಾನವನ್ನು ಹರಾಜು ಹಾಕಿಕೊಂಡಿದೆ.ಈ ಕುರಿತು ಉಪಕಾಮರ್ಿಕ ಆಯುಕ್ತರ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು, ಯಾರನ್ನೂ ಕೆಲಸದಿಂದ ತೆಗೆದು ಹಾಕುವಂತ್ತಿಲ್ಲ ಎಂದು ಅದು ಸ್ಪಷ್ಟವಾಗಿ ತೀಪರ್ು ನಡಿದೆ. ಅಲ್ಲದೆ 2007 ರ ಜೂನ್ ತಿಂಗಳಲ್ಲಿ 477 ಜನ ಕಾಮರ್ಿಕರ ಗುತ್ತಿಗೆ ಅವಧಿ ಮುಗಿದಿದ್ದರೂ ಇಂದಿನವರೆಗೆ ಅವರಿಂದ ಪಾಲಿಕೆ ಕೆಲಸವನ್ನು ಮಾಡಿಸಿಕೊಳ್ಳುತ್ತಿದೆ. ಸಹಜವಾಗಿಯೆ ಕಾಂತಾ ಯಾರು ಪಾಲಿಕೆ ನೌಕರರಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತೀರೋ ಅವರು ಸಂಬಳ ನಡಿ ಎಂದು ಹೇಳುತ್ತಾರೆ. ಇಲ್ಲ ಮೊದಲೆ ಅವರಿಗೆಲ್ಲ ಯಾವುದೋ ಕಾಂಟ್ರ್ಯಾಕ್ಟರ್ ಮೂಲಕ ಪಗಾರ ಕೊಡುತ್ತಿದ್ದೇವು ಎಂದರೆ ಆ ಕಂಟ್ರ್ಯಾಕ್ಟದಾರರ ವಿಳಾಸ, ಲೈಸನ್ಸ್ ನಂಬರ ಕೊಡಿರಿ ಎಂದು ಕೇಳುತ್ತಾರೆ. ಮೂರು ವರ್ಷದ ಪೌರಕಾಮರ್ಿಕರ ಬಾಕಿ ಸಂಬಳ ಪಡೆದ ನಂತರ ನವು ಸ್ವಸಹಾಯ ಗುಂಪುಗಳ ಮೂಲಕ ಕೆಲಸಕ್ಕೆ ಬನ್ನ ಎಂದು ಆರ್ಡರ ಮಾಡಿದರೆ ಕಾಮರ್ಿಕರು ತಮಗೆ ಅನುಕೂಲವಾದರೆ ಕೆಲಸಕ್ಕೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಇಷ್ಟು ಸರಳ ಸಂಗತಿ ದನಾ ಕಾಯುವ ಹುಡುಗನಗೂ ಗೊತ್ತಾಗುತ್ತದೆ ಆದರೆ ಸರಕಾರದ ಖದೀಮ ಅಧಿಕಾರಿಗಳಿಗೆ ಆ ಮೂಲಕ ಆಡಳಿತಾರೂಢ ಮಂತ್ರಿಗಳಿಗೆ ಅರ್ಥವಾಗದೆ ಇರುವುದು ಸೂಜಿಗ ಎಂದು ಕಾಂತಾ ನುಡಿಯುತ್ತಾರೆ.ಜಟ್ಟಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ ಎಂಬ ವಾದ ಸರಕಾರ ಮಾತ್ರ ಈ ನೌಕರರ ಕಡೆ ದಿವ್ಯ ನರ್ಲಕ್ಷ್ಯ ವಹಿಸಿದೆ ಮಾತ್ರವಲ್ಲ, ಅದು ತನ್ನ ಕಳ್ಳಾಟವನ್ನೂ ಪೌರ ನೌಕರರೊಂದಿಗೆ ನಡೆಸಿದೆ. ಪೌರ ಕಾಮರ್ಿಕರ ಬಾಕಿ ಇರುವ 9.26 ಕೋಟಿ ರೂಪಾಯಿ ವೇತನವನ್ನು ಅದು ಸ್ವ ಸಹಾಯ ಸಂಘಗಳ ಮೂಲಕ ಪಾವತಿ ಮಾಡುವುದಾಗಿ ಸರಕಾರ ಲಿಖಿತ ಭರವಸೆ ನಡುತ್ತ, ಪೌರ ಕಾಮರ್ಿಕರನ್ನು ಕಾಯಂಗೊಳಿಸದೆ ಇರುವ ಹುನ್ನಾರದಲ್ಲಿ ತೊಡಗಿದೆ.ಸರಕಾರದ ದುರುದ್ದೇಶವನ್ನು ಸಂಪೂರ್ಣವಾಗಿ ಬಲ್ಲ ಮಾಜಿ ಮಂತ್ರಿ ಎಸ್.ಕೆ. ಕಾಂತಾ ಪ್ರತಿಭಟಿಸಿ ದಿನಾಂಕ 3-5-2010 ರಂದು ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಗುಲಬಗರ್ಾದ ಸಂಪೂರ್ಣ ಸಂಘಟನೆಗಳು, ಮಠಾಧೀಶರು ಇದರಿಂದ ರೊಚ್ಚಿಗೆದ್ದ ಮಠಾಧೀಶರು ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ವಸ್ತು ಸ್ಥಿತಿಯನ್ನು ಸರಕಾರಕ್ಕೆ ತಿಳಿಸಬೇಕಾದ ಅಧಿಕಾರಿಗಳು ತಮ್ಮ ದುಷ್ಟ ನತಿಗಳಿಂದ ಕಾಂತಾ ಅವರನ್ನು ಜಿಲ್ಲೆಯಿಂದಲೆ ಪೋಲಿಸರ ಮೂಲಕ ಎತ್ತಂಗಡಿ ಮಾಡಿ ರಾಯಚೂರಿಗೆ ಗುಟ್ಟಾಗಿ ಕಳಿಸಿದೆ. ಎಸ್.ಕೆ. ಕಾಂತಾ ಬಹುತೇಕರು ಬಲ್ಲಂತೆ ಅನ್ಯಾಯವನ್ನು ಕಂಡಾಗ ಪ್ರತಿಭಟಿಸುವ ಒಂದು ಅಸ್ತ್ರ. ಪ್ರಾಮಾಣಿಕ, ನೇರ-ನಷ್ಠುರ ಗುಣಗಳಿಗೆ ಹೆಸರಾದವರು. ಇಂಥವರು ತಮ್ಮ ಎಪ್ಪತ್ತೆರಡರ ಇಳಿ ವಯಸ್ಸನ್ನೂ ಲೆಕ್ಕಿಸದೆ ಪೌರಕಾಮರ್ಿಕರ ಪರವಾಗಿ ಆಮರಣ ಕುಳಿತು, ಜೀವನದೊಂದಿಗೆ ಹೋರಾಟ ನಡೆಸಿದ್ದಾರೆ. ಇನ್ನಾದರೂ ಸರಕಾರ ತನ್ನ ಮೊಂಡು ಧೋರಣೆಯನ್ನು ಬದಿಗೆ ಸರಿಸಿ , ಕಾಮರ್ಿಕರ ಸಂಬಳವನ್ನು ಈ ಮೊದಲು ಕೊಟ್ಟಂತೆ ಪೌರ ಆಯುಕ್ತರ ಕಚೇರಿಯ ಮುಖಾಂತರವೆ ಬಿಡುಗಡೆ ಮಾಡಿಸಬೇಕು. ಆದರೆ ಜಾವೇದ ಅಖ್ತರ ಎಂಬ ಅವಿವೇಕಿ ಅಧಿಕಾರಿಯ ಮಾತು ಕೇಳಿ ತನ್ನ ಮಾನವನ್ನು ಹರಾಜು ಹಾಕಿಕೊಳ್ಳಬಾರದು.ಸರಕಾರದ ಹಠಮಾರಿ ಧೋರಣೆಯಿಂದ ಹೊತ್ತಿ ಉರಿಯಲಿರುವ ಗುಲಬಗರ್ಾಗುಲಬಗರ್ಾ ಪೌರಕಾಮರ್ಿಕ ಸಂಬಳದ ಸಮಸ್ಯೆ ಯಡ್ಡಿ ಸರಕಾರದ ಜಿದ್ದಿನಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ. ಚಳುವಳಿಗಾರರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೂಡಿ ಅವರಿಗೆ ಜೇಲಿಗೆ ಅಟ್ಟುವ ಜಿಲ್ಲಾಡಳಿತ ಕಾರ್ಯವೂ ಅಷ್ಟೆ ನಾಚಿಕೆಯಿಲ್ಲದೆ ನಡೆದುಹೋಗುತ್ತಿದೆ. 477 ಪೌರ ಕಾಮರ್ಿಕರಿಗೆ ಈ ಮೊದಲು ಗುಲಬಗರ್ಾ ಮಹಾನಗರ ಪಾಲಿಕೆ ತಾನೇ ಸಂಬಳ ವಿತರಿಸುತ್ತಿತ್ತು. ಆದರೆ ಅದೇನು ಕಾರಣವೋ ಒಮ್ಮಿದೊಮ್ಮೆ ಅಂದರೆ 35 ತಿಂಗಳ ಹಿಂದಿನಂದ ಸರಕಾರ ಅವರಿಗೆ ಸಂಬಳವೇ ನಡಲಿಲ್ಲ. ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಧರಣಿ, ರಸ್ತೆ ರೋಖೋ, ರೈಲ್ ರೋಖೋ ಹಾಗೂ ಸತ್ಯಾಗ್ರಹ ಕೊನೆಗೆ ಆಮರಣ ಉಪವಾಸ ಎಂದು ಕುಳಿತ ಮೇಲೆಯೆ ಸರಕಾರ ಅರೆಕಣ್ಣು ತೆರೆದಿದೆ. ಆದರೂ ಅದರೊಳಗೂ ತನ್ನ ಕಪಿಚೇಷ್ಟೆಯನ್ನು ಸರಕಾರ ಬಿಟ್ಟುಕೊಟ್ಟಿಲ್ಲ.ಆಡಳಿತಾಧಿಕಾರಿಯ ಮಾತುಕೇಳಿ ಮೊಂಡು ಹಠಕ್ಕೆ ಬಿದ್ದಿರುವ ಸರಕಾರ ಕಾಂತಾ ಅವರ ಆಮರಣ ಉಪವಾಸವನ್ನು ಅವರ ಆರೋಗ್ಯದ ನೆಪವೊಡ್ಡಿ (ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಾ.ಆರ್. ವಿಶಾಲ್ ಎಂಬ ಜಿಲ್ಲಾಧಿಕಾರಿ ಕೂಡಿಕೊಂಡು) ಒತ್ತಾಯ ಪೂರ್ವಕವಾಗಿ ಸತ್ಯಾಗ್ರಹದ ಸ್ಥಳದಿಂದ ಎತ್ತುಕೊಂಡು ಒಯ್ದರು. ಆದರೆ ಅವರನ್ನು ಗುಲಬಗರ್ಾಕ್ಕಿಂತಲೂ ಅತ್ಯುತ್ತಮವಲ್ಲದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ದಾಖಲು ಮಾಡುವ ಮೂಲಕ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟರು. ಕಾಂತಾ ಅವರ ದೇಹದಲ್ಲಿ ಗ್ಲುಕೋಸ್ ಪ್ರಮಾಣ 50 ರಷ್ಟು ಆಗಿತ್ತು. ಇದು ನಜಕ್ಕೂ ಕಳವಳದ ಸಂಗತಿ. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಗ್ಲುಕೋಸ್ ಪ್ರಮಾಣ 100 ರಷ್ಟು ಇರಬೇಕು. ಇದು ಹೀಗೆ ಮುಂದುವರೆದುದೆ ಆದರೆ ಕಾಂತಾ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆಗಳಿತ್ತು. ಇದನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢಪಡಿಸಿದ್ದರು. ಇಂಥ ಸಂದರ್ಭದಲ್ಲಿಯೂ ಜಿಲ್ಲಾಡಳಿತ ಕಾಂತಾ ಅವರ ಅನಾರೋಗ್ಯದ ಸ್ಥಿತಿಯಲ್ಲಿಯೂ ಅಲ್ಲಿ - ಇಲ್ಲಿ ಸುತ್ತಾಡಿಸಿ ರಾತ್ರಿ 12 ಗಂಟೆಗೆ ಆಸ್ಪತ್ರೆಯ ಮುಖ ತೋರಿಸಿದರೆಂದರೆ ಏನರ್ಥ? ಒಂದು ಕಡೆ ಕಾಂತಾ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು, ಎಂದು ಹೇಳುವ ಜಿಲ್ಲಾಡಳಿತವೇ ಅವರನ್ನು ಬೇಕಂತಲೆ ಹಗಲೆಲ್ಲ ಅಲ್ಲಲ್ಲಿ ಸುತ್ತಾಡಿಸಿದ್ದು ಏತಕ್ಕೆ ? !ಇದೆಲ್ಲಕ್ಕಿಂತ ಮುಖ್ಯವಾಗಿ ಗುಲಬಗರ್ಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಎಸ್.ಕೆ.ಕಾಂತಾ ಮಗ್ಗಲು ಮುಳ್ಳಾಗಿದ್ದಾರೆ. ಎಸ್.ಕೆ.ಕಾಂತಾ ಪ್ರತಿಯೊಂದನ್ನು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕೆಂದು ಬಯಸುತ್ತಾರೆ. ಜನವಿರೋಧಿಯಾದ, ಸಂವಿಧಾನಕ ಶಕ್ತಿಯನ್ನು ಕಾಂತಾ ತಮ್ಮ ಎಂದಿನ ಹೋರಾಟದ ಮೂಲಕ ಬಗ್ಗು ಬಡಿಯುತ್ತಾರೆ. ಇದೆಲ್ಲ ಭ್ರಷ್ಟ ಅಧಿಕಾರಿಗಳಿಗೆ ನುಂಗಲಾಗದ ತುತ್ತಾಗಿದೆ. ಜೊತೆಗೆ ಯಡ್ಡಿಯ ಸರಕಾರಕ್ಕೂ ಕೂಡ ಕಾಂತಾ ನ್ಯಾಯಯುತವಾಗಿ, ಜನಪರ ಹೋರಾಟಗಳ ಮೂಲಕ ಬೆಳೆಯುವುದು ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ.ಹಾಗಾಗಿ ಬೇಕಿಲ್ಲದ ಗಂಡ ಮೊಸರಿನಲ್ಲಿಯೂ ಕಲ್ಲು ಹುಡುಕಿದಂತೆ ನೆವ ಮಾಡಿಕೊಂಡು ಪೌರ ಕಾಮರ್ಿಕರ ಹೋರಾಟದ ನ್ಯಾಯಯುತ ಬೇಡಿಕೆಯನ್ನು ಹಿತ್ತಲಬಾಗಿಲ ಮೂಲಕ ಪರಿಹರಿಸಬೇಕೆಂದು ಸರಕಾರ ಹೊರಟಿದೆ. ಆದರೆ ಕಾಂತಾ ಮಾತ್ರ ಸರಕಾರ ನಲುವು ಏನೇ ಇದ್ದರೂ ಅದು ಪಾರದರ್ಶಕವಾಗಿ, ಸಂವಿಧಾನಕವಾಗಿ ಇರಲಿ. ಅಂದರೆ ಈ ಹಿಂದೆ ಪಾಲಿಕೆಯೇ ತನ್ನ ಕಾಮರ್ಿಕರಿಗೆ ನೇರ ಸಂಬಳ ನಡುತ್ತಿತ್ತು. ಈಗಲೂ ಅದು ನಡಲಿ. ಅಂದಿಲ್ಲದ ಸ್ವಸಹಾಯ ಸಂಘಗಳು ಈಗ ಏಕೆ ಬಂದವು. ಒಂದು ವೇಳೆ ಅಂದೆ ನವು ಯಾವುದೋ ಏಜೆನ್ಸ ಮೂಲಕ ನಮಗೆ ಸಂಬಳ ನಡುತ್ತಿದ್ದರೆ ಅವರ ಹೆಸರು ಲೈಸನ್ಸ್, ಹೆಸರು ತಿಳಿಸಿ ಎಂದು ಹೇಳಿದ್ದೆ ಸರಕಾರಕ್ಕೆ ಅಂಡಿನಲ್ಲಿ ಮೆಣಸಿನಕಾಯಿ ಇಟ್ಟಂತಾಗಿದೆ. ಇಲ್ಲವೆ ನಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದಾಗಿ ಬರಹದ ಮೂಲಕ ತಿಳಿಸಿ ಎಂದು ಹೇಳಿದ್ದು ಸರಕಾರಕ್ಕೆ ನುಂಗಲಾಗದ ತುತ್ತಾಗಿದೆ.ಎಸ್.ಕೆ.ಕಾಂತಾ ಅವರನ್ನು ಓಪೆಕ್ ಆಸ್ಪತ್ರೆಯಿಂದ ಬಂದ ಮೇಲೆ ಸಮಸ್ಯೆ ಬಗೆಹರಿಸುತ್ತೇನೆ ಎಂದೆಳಿ ಕರೆಯಿಸಿಕೊಂಡ ಮುಖ್ಯ ಮಂತ್ರಿ ಮತ್ತದೆ ರಾಗ ಹಾಡಿ ವಾಪಾಸು ಕಳಿಸಿದ್ದಾರೆ. ಇದರಿಂದ ವ್ಯಗ್ರರಾದ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರು ಸಂಬಳ ಕೊಡಿ ಇಲ್ಲವೆ ವಿಷ ನಡಿ ಎಂಬ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಂಡು ಪಾಲಿಕೆ ಅಧಿಕಾರಿಗಳಿಗೆ ದಿಗ್ಭಂದನೆ ಚಳುವಳಿ ಶುರುಮಾಡಿದ್ದಾರೆ. ಆದರೆ ಸರಕಾರ ಮಾತ್ರ ಮೊಂಡು ಹಟಕ್ಕೆ ಬಿದ್ದು ಕಾಂತಾ ಮತ್ತವರ ಬೆಂಬಲಿಗರನ್ನು ಜೈಲಿಗೆ ತಳ್ಳುವ ಮೂಲಕ ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಇದು ಹೀಗೆ ಮುಂದುವರೆದುದೆ ಆದರೆ ಗುಲಬಗರ್ಾ ಹೊತ್ತಿ ಉರಿಯುವುದರಲ್ಲಿ ಯಾವುದೆ ಅನುಮಾನವಿಲ್ಲ.

इंडियन जौर्न्लिस्ट अरे नो सो लिबरल - दिनेश ameenmattu

इंडियन जौर्न्लिस्ट अरे नो सो लिबरल - दिनेश
ಪೊಲೀಸರ ನೈತಿಕ ಸ್ಥೈರ್ಯವನ್ನು ಕುಂದಿಸುವಂತಹ ವರದಿಗಳನ್ನು ಮಾಧ್ಯಮಗಳು ಮಾಡಬಾರದು. ಅದರಂತೆಯೇ ಮಾಧ್ಯಮಗಳ ಕೊರಳು ಹಿಸುಕುವ ಕೆಲಸವನ್ನು ಪೊಲೀಸರೂ ಮಾಡಬಾರದು. ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ತಮ್ಮನ್ನು ತೊಡಗಿಸಿಕೊಂಡಿರುವ ಈ ಎರಡು ವರ್ಗಗಳು ಪರಸ್ಪರ ಕಾದಾಟಕ್ಕೆ ಇಳಿದರೆ, ಅದರಿಂದ ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿಗೇ ಹಾನಿಯಾಗುವುದು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಈ ಬೆಳವಣಿಗೆ ಅಪಾಯಕಾರಿ. ದಿವಂಗತ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಆಡಳಿತದ ಕಿರು ಅವಧಿಯನ್ನು ಹೊರತುಪಡಿಸಿದರೆ, ಕನರ್ಾಟಕದಲ್ಲಿ ಮಾಧ್ಯಮಗಳು ನಿಭರ್ೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ಹಿಂದೆಯೂ ಇತ್ತು. ಈಗಲೂ ಇದೆ. ಪತ್ರಕರ್ತರ ಹತ್ತಾರು ದೌರ್ಬಲ್ಯಗಳ ಅಸ್ತ್ರ ತಮ್ಮ ಬತ್ತಳಿಕೆಯಲ್ಲಿರುವದರಿಂದ ಅವರ ಬಾಯಿ ಮುಚ್ಚಿಸಲು ಪೊಲೀಸರ ಲಾಠಿ ಇಲ್ಲವೇ, ಕಾನೂನಿನ ದಂಡದ ಅಗತ್ಯ ಇಲ್ಲದಿರುವುದೂ ಕೂಡ ಈಗಿನ ಆಳುವ ವರ್ಗಗಳ ಈ ಔದಾರ್ಯಕ್ಕೆ ಕಾರಣ ಇರಬಹುದು. ಪತ್ರಕರ್ತರ ಸಮೂಹದಲ್ಲಿರುವ ಇಂತಹ ಕಪ್ಪುಕುರಿಗಳಿಂದಾಗಿಯೇ ಸಕರ್ಾರ ಮತ್ತು ಅದರ ಭಾಗವೇ ಆಗಿರುವ ಪೊಲೀಸರು ಒಮ್ಮೊಮ್ಮೆ ಎಲ್ಲ ಪತ್ರಕರ್ತರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಪ್ರಜಾವಾಣಿ ಪತ್ರಿಕೆಗೆ ಇತ್ತೀಚಿಗೆ ಪೊಲೀಸರಿಂದ ಬಂದಿರುವ ಎರಡು ನೋಟಿಸ್ಗಳು ಇದಕ್ಕೆ ಉದಾಹರಣೆ. ಮೊದಲನೆಯ ನೋಟಿಸ್ ಒಬ್ಬ ನಕ್ಸಲೀಯ ನಾಯಕನ ಸಂದರ್ಶನದ ಪ್ರಕಟಣಿಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ನೀಡಿದ್ದು. ಎರಡನೇಯ ನೋಟಿಸ್ ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣದಲ್ಲಿ ಬೇಕಾಗಿರುವ ನಟಿ ರಂಜಿತ ಸಿಐಡಿ ಅಧಿಕಾರಿಗಳ ಮುಂದೆ ರಹಸ್ಯವಾಗಿ ಹಾಜರಾಗಿದ್ದರು ಎನ್ನುವ ವರದಿಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಐಡಿ ಅಧಿಕಾರಿಯೊಬ್ಬರು ಜಾರಿಗೊಳಿಸಿದ್ದು. ವಿಚಿತ್ರವೆಂದರೆ ಈ ಎರಡು ನೋಟಿಸ್ಗಳು ಸುದ್ದಿ ಬರೆದ ವರದಿಗಾರರಿಗೆ ಜಾರಿಯಾಗಿವೆ, ವಿನಹ ಸಂಪಾದಕರಿಗಲ್ಲ. ಮೊದಲನೇ ಪ್ರಕರಣಕ್ಕೆ ಸಂಭಂದಿಸಿದ ಎರಡನೇ ನೋಟಿಸ್ ನೀಡುವಾಗಲೂ ಪೊಲೀಸರು ಅದನ್ನು ಸಹಸಂಪಾದಕರಿಗೆ ಜಾರಿ ಮಾಡಿದ್ದಾರೆ. ಇದು ಪತ್ರಿಕೆಗೆ ಸಂಬಂಧಿಸಿದ ಕಾನೂನಿನ ಪರಿಜ್ಞಾನ ಇಲ್ಲದೇ ಮಾಡಿರುವ ಅಡ್ಡಕಸುಬಿ ಕೆಲಸವೆನ್ನುವುದು ಪೊಲೀಸರ ಈ ನಡವಳಿಕೆಯಿಂದಲೇ ಸ್ಪಷ್ಟವಾಗುತ್ತದೆ. ನೋಟಿಸ್ ಜಾರಿಗೊಳಿಸಿರುವ ಪೊಲೀಸರು ಪ್ರಕಟಿತ ವರದಿಗಳಿಗೆ ಸಂಬಂದಿಸಿದ ಹೆಚ್ಚಿನ (ಅಪ್ರಕಟಿತ) ಮಾಹಿತಿಗಳನ್ನು ನೀಡಬೇಕೆಂದು ತಿಳಿಸಿದ್ದಾರೆ. ಆರು ದಶಕಗಳಿಗಿಂತ ಹೆಚ್ಚು ಕಾಲ ಓದುಗರ ಪ್ರೀತಿ-ವಿಶ್ವಾಸದ ತುತ್ತು ಉಂಡು ಬೆಳೆದಿರುವ ಪತ್ರಿಕೆಯೊಂದಕ್ಕೆ ಇಂತಹ ಸಣ್ಣಪುಟ್ಟ ಬೆದರಿಕೆಗಳನ್ನು ನಿಭಾಯಿಸುವ ಶಕ್ತಿ ಇದ್ದೇ ಇದೆ. ಆದ್ದರಿಂದ ಈ ನೋಟಿಸ್ಗಳದ್ದು ದೊಡ್ಡ ಸಂಗತಿಯೇನಲ್ಲ. ಆದರೆ, ಮಾಧ್ಯಮದ ಮೇಲೆ ಆಳುವ ವರ್ಗದ ಕಣ್ಣು ಬಿದ್ದಿರುವುದು ಕೇವಲ ಕನರ್ಾಟಕಕ್ಕೆ ಸೀಮಿತ ಅಲ್ಲ ಎನ್ನುವುದು ಗಮನಿಸುವಂತಹದ್ದು. ಕೇಂದ್ರದಲ್ಲಿರುವ ಯುಪಿಎ ಸಕರ್ಾರ ಮತ್ತು ನಕ್ಸಲೀಯ ಚಟುವಟಿಕೆಗಳು ನಡೆಯುತ್ತಿರುವ ರಾಜ್ಯಗಳ ಸಕರ್ಾರ ಕೂಡ ಮಾಧ್ಯಮದ ಮೇಲೆ ಕೆಂಗಣ್ಣು ಬೀರುತ್ತಿವೆ. ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಸುದ್ದಿಮೂಲವನ್ನು ಬಹಿರಂಗಗೊಳಿಸುವದಕ್ಕೆ ಸಂಬಂಧಿಸಿದ ಹಳೆಯ ಚಚರ್ೆಯನ್ನು ಮತ್ತೇ ಹುಟ್ಟು ಹಾಕಿದೆ. ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಕೇಂದ್ರ ಮತ್ತು ಸಂಬಂದಿತ ರಾಜ್ಯ ಸಕರ್ಾರಗಳನ್ನು ಇರುಸುಮುರಿಸಿಗೆ ಈಡುಮಾಡಿವೆ. ಪೊಲೀಸರ ಭೇಟೆಗೆ ಸಿಗದ ಮಾವೋವಾದಿಗಳನ್ನು ಪತ್ರಕರ್ತರು ಸುಲಭದಲ್ಲಿ ಸಂದಶರ್ಿಸಿ ವರದಿ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಾವೋವಾದಿ ನಾಯಕ ಕಿಶನ್ಜೀ, ಅಧಿಕೃತ ರಾಜಕೀಯ ಪಕ್ಷದ ನಾಯಕನಂತೆ ಆಗಾಗ ಪತ್ರಿಕಾಗೋಷ್ಠಿ ಕರೆದು ಸಕರ್ಾರವನ್ನು ಅಣುಕಿಸುತ್ತಿದ್ದಾರೆ. ದಾಂತೇವಾಡದ ದಟ್ಟಅರಣ್ಯದಲ್ಲಿ ಹಲವು ದಿನಗಳ ಕಾಲ ನಕ್ಸಲೀಯರ ಜೊತೆ ಇದ್ದು ಬಂದು ಧೀರ್ಘ ಲೇಖನವೊಂದನ್ನು ಬರೆದ ಖ್ಯಾತಲೇಖಕಿ ಅರುಂಧತಿರಾಯ್ ನೇರವಾಗಿ ಗೃಹಸಚಿವ ಪಿ.ಚಿದಂಬರಂ ವಿರುದ್ದವೇ ಕೆಲವು ನಿದರ್ಿಷ್ಟ ಆರೋಪಗಳನ್ನು ಮಾಡಿದ್ದಾರೆ. ನಕ್ಸಲೀಯ ಚಟುವಟಿಕೆಗಳಿರುವ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳ ಜತೆ ಗೃಹಸಚಿವರದ್ದು ಹಳೆಯ ಸಂಭಂದಗಳಲ್ಲೊಂದು ಎನ್ನುವುದು ಆ ಆರೋಪಗಳಲ್ಲೊಂದು. ಸಾಮಾನ್ಯವಾಗಿ ಸಕರ್ಾರವೊಂದು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಾಗ ಮೊದಲು ದಾಳಿ ಮಾಡುವುದು ಮಾಧ್ಯಮಗಳ ಮೇಲೆ. ಕಿಶನ್ಜಿ ಸಂದರ್ಶನ ಮಾಡಿದ್ದ ಪತ್ರಿಕೆಗಳ ವಿರುದ್ದ ಕ್ರಮಕೈಗೊಳ್ಳಲು ಒಂದು ಹಂತದಲ್ಲಿ ಗೃಹಸಚಿವರು ಉದ್ದೇಶಿಸಿದ್ದರಂತೆ. ಆದರೆ ಸಂಪುಟ ಸಭೆಯಲ್ಲಿಯೇ ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅವರ ಉದ್ದೇಶ ಈಡೇರಲಿಲ್ಲ. ಈಗ ಸಾರ್ವಜನಿಕ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಛತ್ತೀಸ್ಗಡ ಪೊಲೀಸರು ಅರುಂಧತಿ ರಾಯ್ ವಿರುದ್ಧ ಛತ್ತೀಸ್ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ 2005 ಅಡಿಯಲ್ಲಿ ಕ್ರಮಕೈಗೊಳ್ಳುವ ತಯಾರಿ ನಡೆಸಿದ್ದಾರಂತೆ. ಇದೇ ಕಾಯಿದೆಯಡಿ ಮಾನವ ಹಕ್ಕು ಕಾರ್ಯಕರ್ತರಾದ ವಿನಾಯಕ ಸೇನ್ ಅವರನ್ನು ಛತ್ತೀಸ್ಗಡ ಪೊಲೀಸರು ಎರಡು ವರ್ಷಗಳ ಬಂಧನದಲ್ಲಿಟ್ಟಿದ್ದರು. ಕನರ್ಾಟಕದಲ್ಲಿಯೂ ಅಕ್ರಮ ಚಟುವಟಿಕೆ ಕಾನೂನು ಇದೆ. ಅದರ ಅಡಿಯಲ್ಲಿಯೇ ಪೊಲೀಸರು ಪ್ರಜಾವಾಣಿಗೆ ನೋಟಿಸ್ ಜಾರಿಗೊಳಿಸಿದ್ದು.. ಭಾರತದ ಸಂವಿಧಾನದಲ್ಲಿ ಪತ್ರಿಕೆಗಳಿಗೆ ವಿಶೇಷ ಸ್ಥಾನಮಾನವೇನಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅದರಲ್ಲಿ ಪ್ರತ್ಯೇಕ ಉಲ್ಲೇಖವು ಇಲ್ಲ. ಸಂವಿಧಾನದ ಪರಿಚ್ಛೇದ 19(ಎ)ರಲ್ಲಿರುವ ಮೂಲಭೂತ ಹಕ್ಕುಗಳಲ್ಲಿ ಸೇರಿಕೊಂಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿಯೇ ಪತ್ರಿಕಾ ಸ್ವಾತಂತ್ರ್ಯ ಸೇರಿಕೊಂಡಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕೆಂದು ಸಂವಿಧಾನ ರಚನೆಯಾದಾಗ ಕೆಲವು ಹಿರಿಯ ಪತ್ರಕರ್ತರು ಒತ್ತಾಯಿಸಿದ್ದರು. ಆದರೆ, ಸಂವಿಧಾನ ರಚನಾ ಮಂಡಳಿ ಒಬ್ಬ ಸಾಮಾನ್ಯ ಪ್ರಜೆಗಿರುವಷ್ಟೇ ಸ್ವಾತಂತ್ರ್ಯ ಒಬ್ಬ ಪತ್ರಕರ್ತನಿಗೂ ಇರುತ್ತದೆ. ಅದಕ್ಕಿಂತ ಹೆಚ್ಚಿಲ್ಲ, ಕಡಿಮೆಯೂ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡಾ ಸಂಪೂರ್ಣವಾದುದೇನಲ್ಲ. ಅದನ್ನು ಕೂಡಾ ಹೊಸ ಕಾನೂನು ರಚನೆ ಮೂಲಕ ನಿಯಂತ್ರಿಸಲು ಸಾಧ್ಯ. ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಏಕತೆ, ಬೇರೆ ದೇಶಗಳ ಜತೆಗಿನ ಸ್ನೇಹ ಸಂಬಂಧ, ಸಾರ್ವಜನಿಕ ಶಾಂತಿ, ಶಿಷ್ಟಾಚಾರ, ನೈತಿಕತೆ, ನ್ಯಾಯಾಲಯದ ನಿಂದೆ, ಮಾನನಷ್ಟ ಹಾಗೂ ಅಪರಾಧ ಇಲ್ಲವೇ ಹಿಂಸೆಗೆ ಪ್ರಚೋದನೆ ದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಕಾನೂನು ರಚಿಸಬಹುದು ಎಂದು ಸಂವಿಧಾನದ ಪರಿಚ್ಛೇದ 19(2) ಹೇಳಿದೆ. ಅನೇಕ ಹಿರಿಯ ಪತ್ರಕರ್ತರು ಈ ನಿದರ್ಿಷ್ಟ ಪರಿಚ್ಛೇದ ಸೇರ್ಪಡೆಯನ್ನು ವಿರೋಧಿಸಿದ್ದರು. ಈ ಕಾರಣದಿಂದಾಗಿಯೇ ಪತ್ರಿಕಾ ಸ್ವಾತಂತ್ರ್ಯ ಎಂಬುದು ಅಂತಿಮವಾಗಿ ನ್ಯಾಯಾಲಯದ ವ್ಯಾಖ್ಯಾನವನ್ನೇ ಅವಲಂಭಿಸಿದೆ. ಈ ಮೂಲಕ ಸಕರ್ಾರದ ಕೈಗೆ ಮಾಧ್ಯಮಗಳನ್ನು ಮಣಿಸುವ ಪರಮೋಚ್ಛ ಅಧಿಕಾರವನ್ನು ನೀಡಿದಂತಾಗಿದೆ. 1975ರಲ್ಲಿ ಆಂತರಿಕ ಗಲಭೆಯ ಕಾರಣ ನೀಡಿ ಆಗಿನ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ತುತರ್ು ಪರಿಸ್ಥಿತಿಯನ್ನು ಹೇರಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನೇ ಅಮಾನತ್ನಲ್ಲಿರಿಸಿದ್ದು ಪರಮೋಚ್ಛ ಅಧಿಕಾರದ ದುರುಪಯೋಗಕ್ಕೆ ಉತ್ತಮ ಉದಾಹರಣಿ. ಒಬ್ಬ ಶಾಸಕ ಇಲ್ಲವೇ ಸಂಸದನಿಗೆ ಸದನದೊಳಗೆ ಮಾತನಾಡಲು ವಿಶೇಷ ಅಧಿಕಾರ (ಪ್ರಿವಿಲೇಜ್) ಇದೆ. ಸದನದೊಳಗಿನ ಅವರ ನಡುವಳಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಾಗದಂತಹ ವಿಶೇಷ ರಕ್ಷಣಿ (ಇಮ್ಯೂನಿಟಿ) ಕೂಡಾ ಇದೆ. ಇಂತಹದ್ದೇ ರಕ್ಷಣಿ ಪತ್ರಕರ್ತರಿಗೂ ನೀಡಬೇಕೆಂದು ಬೇಡಿಕೆ ಕೇವಲ ಮಾತ್ರವಲ್ಲ ಜಗತ್ತಿನಾಧ್ಯಂತ ಪತ್ರಕರ್ತರು ಕೇಳುತ್ತಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ ಒಬ್ಬ ಪತ್ರಕರ್ತ ತಾನು ಸಂಪಾದಿಸಿದ ಮಾಹಿತಿಯನ್ನು ಸುದ್ದಿಯಾಗಿ ಬರೆಯಲು ಹೊರಟಾಗ ಅದರ ಮೂಲವನ್ನು ತಿಳಿಸುತ್ತಾನೆ. ಸುದ್ದಿಗೆ ವಿಶ್ವಾಸಾರ್ಹತೆಯನ್ನು ತಂದುಕೊಡುವುದೇ ಈ ಮೂಲಗಳು. ಆದರೆ, ಈ ಸಂಪ್ರದಾಯಕ್ಕೂ ಕೆಲವು ಅಪವಾದಗಳಿರುತ್ತವೆ. ಸುದ್ದಿಯನ್ನು ಓದುವ ಒಬ್ಬ ಓದುಗ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಅದರ ಮೂಲ ತಿಳಿದುಕೊಳ್ಳುವುದು ಅಗತ್ಯ. ಆದರೆ, ಮಾಹಿತಿ ನೀಡುವ ಒಬ್ಬ ವ್ಯಕ್ತಿಗೆ ತನ್ನ ಗುರುತನ್ನು ಬಚ್ಚಿಟ್ಟುಕೊಳ್ಳಲು ಅವನದ್ದೇ ಆದ ಕಾರಣಗಳಿರಬಹುದು. ತನ್ನ ಗುರುತನ್ನು ಬಹಿರಂಗಪಡಿಸದಿದ್ದರೆ ಮಾತ್ರ ನೀಡುವುದಾಗಿ ಹೇಳಬಹುದು. ಅಂತಹ ಸಂದರ್ಭಗಳಲ್ಲಿ ಪತ್ರಕರ್ತರು ಸುದ್ದಿ ಮೂಲವನ್ನು ಬಹಿರಂಗಪಡಿಸದೇ ವರದಿ ಮಾಡುವುದು ಅನಿವಾರ್ಯವಾಗುತ್ತದೆ. ಎಂದು ಕೆಲವು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ಮಾಡಿರುವ ಅಧ್ಯಯನವೊಂದು ಹೇಳಿದೆ. ಆದರೆ, ಬೇರೆ ಹಲವು ದೇಶಗಳಂತೆ ಭಾರತದಲ್ಲಿಯೂ ಸುದ್ದಿಮೂಲವನ್ನು ಬಹಿರಂಗಗೊಳಿಸದಿರುವ ವಿಶೇಷ ಅಧಿಕಾರ ಪತ್ರಕರ್ತರಿಗೆ ಇಲ್ಲ. ಭಾರತದ ಸಂವಿಧಾನಕ್ಕೆ ಮಾದರಿಯಾದ ಇಂಗ್ಲೇಂಡಿನ ಸಂವಿಧಾನದಲ್ಲಿಯೂ ಪತ್ರಿಕಾ ಸ್ವಾಂತ್ರ್ಯದ ಪ್ರತ್ಯೇಕ ಉಲ್ಲೇಖ ಇಲ್ಲ. ಪತ್ರಕರ್ತರಿಗೆ ವಿಶೇಷ ರಕ್ಷಣಿಯೂ ಇಲ್ಲ. ಬಹುತೇಕ ದೇಶಗಳಲ್ಲಿಯೂ ಇದೇ ಸ್ಥಿತಿ. ಅಮೇರಿಕದ ಸ್ಥಿತಿ ಮಾತ್ರ ಬಹಳಷ್ಟು ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಅಲ್ಲಿನ ಸಂವಿಧಾನದಲ್ಲಿಯಾಗಲಿ, ರಾಷ್ಟ್ರಮಟ್ಟದ ಕಾನೂನಿನಲ್ಲಿಯಾಗಲಿ ಪತ್ರಕರ್ತರಿಗೆ ಸುದ್ದಿಮೂಲವನ್ನು ಬಹಿರಂಗಪಡಿಸದೆ ಇರುವದಕ್ಕೆ ವಿಶೇಷ ರಕ್ಷಣಿ ಇಲ್ಲ. ಆದರೆ, ಇಲ್ಲಿನ ರಾಜ್ಯಗಳ ಮಟ್ಟದಲ್ಲಿ ರೂಪಿಸಲಾಗಿರುವ ರಕ್ಷಣಾ ಕಾನೂನು (ಶೀಲ್ಡ್ ಲಾ) ಪತ್ರಕರ್ತರಿಗೆ ಕೆಲವೊಂದು ರಕ್ಷಣೆಗಳನ್ನು ನೀಡಿದೆ. 1973ರಲ್ಲಿಯೇ ಜಾರಿಗೊಳಿಸಲಾದ ಈ ಕಾನೂನು ಪ್ರತಿರಾಜ್ಯದಲ್ಲಿಯೂ ಭಿನ್ನವಾಗಿದೆ. ಉದಾಹರಣಿಗೆ ಅಲಬಾಮದಲ್ಲಿ ಕೇವಲ ಪತ್ರಿಕೆ, ಟಿವಿ ಮತ್ತು ರೇಡಿಯೋಗಳಿಗೆ ಮಾತ್ರ ರಕ್ಷಣಿ ಇದ್ದರೆ, ನ್ಯೂಯಾಕರ್್ನಲ್ಲಿ ವಾರಪತ್ರಿಕೆ, ಸುದ್ದಿ ಸಂಸ್ಥೆ, ಪತ್ರಿಕಾ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗುತ್ತದೆ. ಓರೆಗಾನ್ ಮತ್ತು ನ್ಯೂಮೆಕ್ಸಿಕೋದಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿರುವ ಎಲ್ಲ ಮಾಧ್ಯಮಗಳಿಗೂ ಕಾನೂನು ರಕ್ಷಣಿ ಇದೆ. ಇದೇ ರೀತಿ ಕೆಲವು ರಾಜ್ಯಗಳಲ್ಲಿ ಸುದ್ದಿಮೂಲ ಕಾಪಾಡಲು ಮಾತ್ರ ರಕ್ಷಣಿ ಇದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಸುದ್ದಿಗಳಿಗೂ ರಕ್ಷಣಿ ಇದೆ. ನ್ಯಾಯಮೂತರ್ಿ ಕೆ.ಕೆ ಮ್ಯಾಥ್ಯೂ ಅಧ್ಯಕ್ಷರಾಗಿದ್ದ ಕಾನೂನು ಆಯೋಗ 30ವರ್ಷಗಳ ಹಿಂದೆ ಸಮೂಹ ಮಾಧ್ಯಮಗಳಿಂದ ಸುದ್ದಿ ಮೂಲದ ಪ್ರಕಟಣಿ ಎಂಬ ವಿಷಯದ ಬಗ್ಗೆಯೇ ನಡೆಸಿದ ಅಧ್ಯಯನದಲ್ಲಿ ಅಮೇರಿಕಾದ ಈ ಕಾನೂನನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಈ ಶಿಲ್ಡ್ ಕಾನೂನು ಆಧಾರದಲ್ಲಿಯೇ ಭಾರತದಲ್ಲಿ ಪತ್ರಕರ್ತರ ಸುದ್ದಿ ಮೂಲದ ರಕ್ಷಣಿಗಾಗಿ ಕಾನೂನು ರೂಪಿಸಬೇಕೆಂದು ಆ ಆಯೋಗ ಶಿಫಾರಸ್ಸು ಕೂಡ ಮಾಡಿತ್ತು.

ಕಾಯಿಲೆಗಳನ್ನು ತಡೆಯುವಲ್ಲಿ ಸ್ವಚ್ಛತೆಯ ಪಾತ್ರಪ್ರಸ್ತುತ


ಕಾಯಿಲೆಗಳನ್ನು ತಡೆಯುವಲ್ಲಿ ಸ್ವಚ್ಛತೆಯ ಪಾತ್ರಪ್ರಸ್ತುತ ಸಮಾಜದಲ್ಲಿ ಸ್ವಚ್ಛತೆಯಿಂದಿರುವುದು ಬಹಳ ಮುಖ್ಯ। ಸ್ವಚ್ಛತೆ ಇದ್ದಲ್ಲಿ ದೈವತ್ವ ಇರುತ್ತದೆ ಎಂಬುದು ವಾಡಿಕೆ. ನಾವುಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಮನುಷ್ಯನಿಗೆ ಬರುವ ಶೇಕಡಾ50ರಷ್ಟು ಕಾಯಿಲೆಗಳನ್ನು ತಡೆಹಿಡಿಯಬಹುದು. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗಗಳಿಗೆ ಬ್ರೇಕ್ ಹಾಕಬಹುದು. ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇದಿ, ಮಲೇರಿಯಾ, ಟೈಫಾಯಿಡ್, ಜಂತು ದೇಹದ ವಿವಿಧ ಅಂಗಗಳಿಗೆ ತಗುಲುವ ಸಾಂಕ್ರಾಮಿಕತೆಯನ್ನು ನಿಯಂತ್ರಣದಲ್ಲಿಡಬಹುದು.ಭಯಾನಕ ರೋಗಗಳಾದ ಕ್ಷಯ, ಮೆನಿನ್ಜೈಟಿಸ್, ಡೆಂಗ್ಯೂ, ಎನ್ಸಫಲೈಟಿಸ್ ಇವುಗಳನ್ನು ಸಹಿತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರಿಂದ ತಡೆ ಹಿಡಿಯಬಹುದು.ನಮ್ಮ ಪರಿಸರದ ಸುತ್ತಮುತ್ತ ಹೊಲಸು, ನಿಮರ್ಾಣವಾದರೆ, ಬ್ಯಾಕ್ಟೀರಿಯಾ, ವೈರಸ್ಗಳು ಅದರಲ್ಲಿ ಉದ್ಬವವಾಗುತ್ತವೆ. ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳದೇ ಹೋದರೆ, ಇವುಗಳು ನಮ್ಮ ದೇಹವನ್ನು ಪ್ರವೇಶಿಸುವದರಲ್ಲಿ ಅನುಮಾನವಿಲ್ಲ. ಇವುಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಪರಿಸರವನ್ನು ಹಾಳು ಮಾಡುತ್ತವೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೇ ಅದೇ ರೋಗರುಜಿನುಗಳಿಗೆ ತವರು ಮನೆಯಾಗುತ್ತದೆ.ನಾವುಗಳು ಸಾಮಾನ್ಯವಾಗಿ 3ವಿಧಗಳಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.* ವೈಯಕ್ತಿಕ ಸ್ವಚ್ಛತೆ* ಮನೆಯ ಸುತ್ತಮುತ್ತ ಸ್ವಚ್ಛತೆ* ಮನೆಯ ಒಳಗಡೆ ಸ್ವಚ್ಛತೆಪ್ರತಿಯೊಬ್ಬನು ತಾನು ವೈಯಕ್ತಿಕವಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡಾಗ ಎಲ್ಲ ರೋಗಗಳಿಂದ ದೂರವಿರಲು ಸಾಧ್ಯ. ಸಾಮಾನ್ಯವಾಗಿ ಪ್ರತಿನಿತ್ಯ ಬೆಳಿಗ್ಗೆ ಸಂಜೆ ಹಲ್ಲು ಉಜ್ಜಿ, ಸ್ನಾನ ಮಾಡುವದರಿಂದ ಕೆಲವೊಂದು ರೋಗಗಳು ಮಾನವನ ದೇಹವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆಗಾಗ ಕೈ-ಕಾಲಿನ ಉಗುರುಗಳನ್ನು ತೆಗೆದುಕೊಂಡು ಅತಿಯಾಗಿ ಕೂದಲು ಬೆಳೆಯದಂತೆ ಕ್ಷೌರ ಮಾಡಿಸಿಕೊಳ್ಳಬೇಕು. ಊಟಕ್ಕಿಂತ ಮುಂಚೆ ಹಾಗೂ ಮಲಮೂತ್ರಗಳಿಗೆ ಹೋಗಿಬಂದ ಮೇಲೆ ಸಾಬೂನುಗಳಿಂದ ಕೈ-ಕಾಲು ತೊಳೆದುಕೊಳ್ಳಬೇಕು. ದಿನಾಲು ಶುಭ್ರವಾದ ಬಟ್ಟೆಯನ್ನು ತೊಳೆದು ಹಾಕಿಕೊಳ್ಳಬೇಕು. ಸ್ವಚ್ಛತೆಯಲ್ಲಿ ಪ್ರಮುಖವಾಗಿ ಶುದ್ದ ನೀರು ಕುಡಿಯುವುದು ಒಳ್ಳೆಯದು. ಫಿಲ್ಟರ್ ಇದ್ದರೆ ಇನ್ನು ಅತ್ಯುತ್ತಮ. ದಿನಾಲು ತರಕಾರಿ ಹಣ್ಣುಗಳನ್ನು ಹೆಚ್ಚೆಚ್ಚು ಸೇವಿಸುವದರಿಂದ ದೇಹದಲ್ಲಿ ವಿಟಮಿನ್ಗಳ ಅಂಶ ಹೆಚ್ಚಾಗುತ್ತದೆ. ಒಟ್ಟಾರೆ ಇದೆಲ್ಲದರಿಂದ ಮನಸ್ಸು ಉಲ್ಲಾಸವಾಗಿರುತ್ತದೆ. ಇದು ವೈಯಕ್ತಿಕ ಸ್ವಚ್ಛತೆಯ ಮಹತ್ವ.ಮನೆಯ ಸ್ವಚ್ಛತೆಪ್ರತಿಯೊಬ್ಬರಿಗೆ ವೈಯಕ್ತಿಕ ಸ್ವಚ್ಛತೆಯೂ ಎಷ್ಟು ಮುಖ್ಯವೋ ಹಾಗೆಯೇ ಮನೆಯ ಸ್ವಚ್ಛತೆಯೂ ಅಷ್ಟೇ ಪ್ರಾಮುಖ್ಯ.ಮನೆಯನ್ನು ಒಂದು ದೇವಸ್ಥಾನದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕಸ, ಧೂಳು ಬರದಂತೆ ಜಾಗರೂಕತೆ ವಹಿಸಬೇಕು. ಅಡುಗೆ ಕೋಣಿಯನ್ನು ಶುಚಿತ್ವದಿಂದಿಡಬೇಕು. ಮತ್ತು ಅಡುಗೆ ಸಾಮಾನುಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು. ಮನೆಯೊಳಗೆ ಶುಭ್ರಗಾಳಿ ಬರುವಂತೆ ಕಿಟಿಕಿ ಬಾಗಿಲುಗಳನ್ನು ತೆರೆಯಬೇಕು. ಮನೆಯೊಳಗೆ ಸೊಳ್ಳೆ-ಜಿರಲೆಗಳು ಪ್ರವೇಶಿಸದಂತೆ ಪರದೆಗಳನ್ನು ಉಪಯೋಗಿಸಬೇಕು. ಕಲುಷಿತ ನೀರು ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳಬೇಕು. ದಿನಕ್ಕೊಂದು ಬಾರಿಯಾದರೂ ಒಳಚರಂಡಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷೆ ಮಾಡುತ್ತಿರಬೇಕು. ಮನೆಯ ಶೌಚಾಲಯವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು.ಮನೆಯ ಆವರಣದ ಸ್ವಚ್ಛತೆಮನೆಯ ಸುತ್ತ-ಮುತ್ತ ಗಲೀಜು ಆಗದಂತೆ ಮುಂಜಾಗ್ರತೆ ವಹಿಸಿ ಆಗಾಗ ಬಿದ್ದ ಕಸವನ್ನು ಗೂಡಿಸಿಕೊಂಡು ನಿಂತ ನೀರು ನಿಲ್ಲದಂತೆ ನೋಡಬೇಕು. ಮನೆಯ ಆವರಣದಲ್ಲಿ ಗಿಡಗಳನ್ನು ಬೆಳೆಸಬೇಕು. ಇದರಿಂದ ತಂಪಾದ ಗಾಳಿ, ವಾತಾವರಣ ನಿಮರ್ಾಣವಾಗುತ್ತದೆ.ಹೀಗೆಲ್ಲ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರಿಂದ ಪರಿಸರವು ಹಿತವಾಗಿ ಜೀವನವು ಸುಂದರವಾಗಿರುತ್ತದೆ.ಮುಂದಿನ ಸಂಚಿಕೆಯ ಮತ್ತೊಂದು ಮಾಲಿಕೆಯಲ್ಲಿ ಇನ್ನೊಂದು ಸಲಹೆ. ನೀರಿಕ್ಷಿಸಿ...