Saturday, December 17, 2011

ನಿಂಗಪ್ಪ ಕಡೇಮನಿಯವರಿಗೆ ನ್ಯಾಷನಲ್ ಫೆಲೋಶಿಪ್

ಸ್ವತಂತ್ರ ಪೂರ್ವ ಮತ್ತು ನಂತರ ಭಾರತದ ಈ ನೆಲದಲ್ಲಿ ಹಲವಾರು ರೀತಿಯಲ್ಲಿ ಮನುಕುಲವನ್ನು ವಗರ್ೀಕರಿಸಿ ಒಡೆದಾಳುವ ಪದ್ದತಿ ರೂಡಿಗತವಾಗಿ ಬಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ದಲಿತಪರ ಹೋರಾಟಗಳು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಹೋರಾಟವೆಂಬ ಅಸ್ತ್ರವನ್ನು ಇನ್ನು ಕೂಡ ಮುಂದುವರಿಸಿಕೊಂಡು ಬರುತ್ತಲೇ ಇವೆ. ಆದರೆ, ದಲಿತರು ತೃಪ್ತಿಕರವಾದಂತಹ ಹಂತವನ್ನು ತಲುಪುವಲ್ಲಿ ವಿಫಲವಾಗಿವೆಂಬುದು ಮಾತ್ರ ಬಹಳ ವಿಷಾದಕರ ಸಂಗತಿ.
ಶಿಕ್ಷಕರಾದ ನಿಂಗಪ್ಪ ಕಡೇಮನಿಯವರು ತಮ್ಮ ವಿದ್ಯಾಥರ್ಿ ಜೀವನದಲ್ಲಿ ದಲಿತ ಸಂಘಟನೆಗಳಲ್ಲಿ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಖರಿಯನ್ನು ಮೆಲುಕು ಹಾಕಿದಾಗ ಇಂದಿನ ಯುವ ಪೀಳಿಗೆ ದಿಗ್ಬ್ರಾಂತಗೊಳ್ಳುತ್ತದೆ.

ಬಡತನದ ಬವಣಿಯಲ್ಲಿ ಬೆಂದಂತ, ಒಂದು ದಲಿತ ಕುಟುಂಬದಲ್ಲಿ 09/6/1982ರಂದು ಸ್ವ(ಕು)ಗ್ರಾಮವಾದ ಲಿಂಗಸ್ಗೂರು ತಾಲ್ಲೂಕಿನ ಹಿರೇನಗನೂರು ಎಂಬಲ್ಲಿ ಸಿದ್ದಪ್ಪ, ಯಲ್ಲಮ್ಮ ದಂಪತಿಗಳಿಗೆ 4ನೇ ಮಗನಾಗಿ ಜನಿಸಿದ ಇವರು, ಪ್ರಾಥಮಿಕ ಶಾಲೆಯ ವಿದ್ಯಾಬ್ಯಾಸವನ್ನು ಹಿರೇನಗನೂರಿನಲ್ಲಿಯೇ ಪೂರ್ಣಗೊಳಿಸಿದರು. ಉತ್ತರ ಕನರ್ಾಟಕದ ದಲಿತ ಚಳುವಳಿಗಳಲ್ಲಿ ಅಂದು ಮುಂಚೂಣಿಯಲ್ಲಿದ್ದ ನಗನೂರು ಭೀಮಣ್ಣನವರ ಪ್ರಭಾವಕ್ಕೊಳಗಾಗಿ, ದಲಿತರ ಚಿಂತನೆ, ಹೋರಾಟಗಳಲ್ಲಿ ಸಮಾಜದಲ್ಲಿನ ಸಮಾನತೆಗಾಗಿ ದುಡಿಯುವ ಹುಮ್ಮಸ್ಸು ಆ ಬಾಲ್ಯದಲಿಯೇ ರೂಡಿಸಿಕೊಂಡರು. ಒಟ್ಟಾರೆ ಈ ಎಲ್ಲಾ ವಿಚಾರಧಾರೆಗಳು ಅವರಲ್ಲಿ ಕ್ರಮೇಣ ಚಿಗುರೊಡೆಯ ತೊಡಗಿದವು.

ನಂತರ ಮಾನ್ವಿ ತಾಲ್ಲೂಕಿನ ಅಡವಿ ಅಮರೇಶ್ವರ ಸಕರ್ಾರಿ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿದ್ದುಕೊಂಡೆ ಪಡೆದರು. ಆ ವಸತಿ ನಿಲಯದ ಅವ್ಯವಸ್ಥೆಯನ್ನು ಕಂಡು ಅಂದೇ ಅವರಲ್ಲಿ ಹೋರಾಟದ ಕಿಚ್ಚು ಹತ್ತತೊಡಗಿತ್ತು. ಆಗ ಆ ವಯಸ್ಸಿನಲ್ಲಿ ನಿಲಯದ ವಿದ್ಯಾಥರ್ಿಗಳನ್ನು ಸಂಘಟಿಸಿ, ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಂಡರು. ನಂತರ 1999ರಲ್ಲಿ ಪ್ರೌಢಶಾಲಾ ವಿದ್ಯಾಬ್ಯಾಸವನ್ನು ಪೂರ್ಣಗೊಳಿಸಿ, ಪ್ರಥಮ ದಜರ್ೆಯಲ್ಲಿ ಎಸ್.ಎಸ್.ಎಲ್.ಸಿಯನ್ನು ಪಾಸು ಮಾಡಿದರು. ತದನಂತರ ಜೀವನದಲ್ಲಿನ ಮಹೋನ್ನತವಾದ ಗುರಿಯನ್ನು ತಲುಪುವ ಉದ್ದೇಶವನ್ನಿಟ್ಟುಕೊಂಡು ಹುನಗುಂದದ ಎಸ್.ವಿ.ಎಂ ಕಾಲೇಜಿನಲ್ಲಿ ಪಿ.ಯು.ಸಿ ವಿಜ್ಞಾನ ವಿಭಾಗವನ್ನು ಆಯ್ಕೆಮಾಡಿಕೊಂಡರು.ಕೌಟುಂಬಿಕ ಕಾರಣಗಳಿಂದಾಗಿ ಹಾಗೂ ಆಥರ್ಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದುದರಿಂದ ವಿಜ್ಞಾನ ವಿಭಾಗವನ್ನು ಕೈಬಿಡುವ ಪರಿಸ್ಥಿತಿ ಎದುರಾಯಿತು.

ಆದರೂ, ಛಲ ಬಿಡದೇ 2002ರಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿದರು. ಆದರೆ, ವಿಜ್ಞಾನ ವಿಭಾಗದಲ್ಲಿಯೇ ಮುಂದುವರೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಮಹೋನ್ನತವಾಗಿ ಹೊಂದಿದ್ದ ಗುರಿಗೆ, ಕಟ್ಟಿಕೊಂಡಿದ್ದ ಕನಸುಗಳಿಗೆ ನೀರೆರಚಿದಂತಾಯಿತು. ನಂತರ 2003ರಲ್ಲಿ ಪಿ.ಯು.ಸಿ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗದಿಂದ ಪ್ರಥಮ ದಜರ್ೆಯಲ್ಲಿ ತೇರ್ಗಡೆ ಹೊಂದಿದರು. ಮತ್ತು ಬಿ.ಎ ಪದವಿಗಾಗಿ ಲಿಂಗಸ್ಗೂರಿನ ವಿ.ಸಿ.ಬಿ ಕಾಲೇಜಿಗೆ ಸೇರಿಕೊಂಡರು. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಕಂಡು, ಇಂದಿನ ಯುಗದಲ್ಲಿ ಶಿಕ್ಷಣದಲ್ಲಿ ಬದಲಾವಣಿಗಳನ್ನು ತರಬೇಕೆಂಬ ಗುರಿಯೊಂದಿಗೆ, ವಿದ್ಯಾಲಯದ ವಿದ್ಯಾಥರ್ಿಗಳನ್ನೆಲ್ಲ ಸಂಘಟಿಸಿ, ಶಿಕ್ಷಣದ ಸುಧಾ ರಣಿಗೆ ಹಲವಾರು ಕಾರ್ಯಕ್ರಮ ಯೋಜನೆಗಳನ್ನು ಹಾಕಿಕೊಂಡು ಕಾರ್ಯಗಾರ ಗಳನ್ನು ನಡೆಸಿ, ಇವರ ವಿಚಾರ ವಿವಿಯಲ್ಲಿ ಚಚರ್ೆಗೆ ಅವಕಾಶವಿತ್ತವು. ಹಾಗೂ ಹಿಂದುಳಿದ ಶೋಷಿತರ ವಿದ್ಯಾಥರ್ಿಗಳ ನಿಲಯದಲ್ಲಿ ಮೂಲಸೌಕರ್ಯಗಳನ್ನು ಒದಗಿಸು ವದಕ್ಕಾಗಿ ವಿವಿಧ ರೀತಿಯ ಹೋರಾಟದ ಹಾದಿಗ ಳನ್ನು ತುಳಿದು, ಇದರಲ್ಲಿ ಯಶಸ್ಸನ್ನು ಕಂಡರು. ಹೀಗೆ ವಿದ್ಯಾಥರ್ಿಪರ ಹೋರಾಟಗಳನ್ನು ಹಮ್ಮಿ ಕೊಂಡು, ಈ ಭಾಗದಲ್ಲಿಯೇ ಯುವ ವಿದ್ಯಾಥರ್ಿ ಮುಖಂಡನೆಂಬ ವಿಷಯ ಮನೆಮಾತಾಯಿತು. 2003ರಲ್ಲಿ ಕನರ್ಾಟಕ ಕಲಾ ಮಹಾವಿದ್ಯಾಲಯದ ಪ್ರತಿಯೊಂದು ವಿದ್ಯಾಥರ್ಿ ನಿಲಯಗಳಿಗೆ ಭೇಟಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿ, ಅವರ ಹಕ್ಕುಗಳಿಗಾಗಿ ದನಿಗೂಡಿಸಿದರು.

ಇಂತಹ ಸಂದರ್ಭದಲ್ಲಿ ಕೌಟುಂಬಿಕ ಒತ್ತಾಯದ ಮೇರೆಗೆ ಡಿ.ಇಡಿ ವೃತ್ತಿಪರ ಶಿಕ್ಷಣವನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು 2007ರಲ್ಲಿ ವೃತ್ತಿಪರ ಶಿಕ್ಷಣವನ್ನು ಮುಗಿಸಿದರು. ನಂತರ 2007ರಲ್ಲಿ ಸಹಶಿಕ್ಷಕರಾಗಿ ಸಕರ್ಾರಿ ಸೇವೆಗೆ ಸೇರಿಕೊಂಡರು. ಇದರಿಂದ ಸಮಸ್ಥ ವಿದ್ಯಾಥರ್ಿ ಬಳಗ ಅನಾಥವಾದಂತಾಗಿತ್ತು.

2010/11ರಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದರು. ಈ ಸ್ನಾತಕೋತ್ತರ ಪದವಿ ಪಡೆಯುವ ಸಮಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಅವಿರತವಾಗಿ ಶ್ರಮಿಸಿದ್ದಾರೆ. ಹೀಗೆ ಸಕರ್ಾರಿ ಸೇವೆಯಲ್ಲಿದ್ದುಕೊಂಡೇ, ದಲಿತರ ಏಳ್ಗೆಗಾಗಿ, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಹೋರಾಟವನ್ನು ವೈಯಕ್ತಿಕವಾಗಿ ಮುನ್ನಡೆಸಿಕೊಂಡು ಹೊರಟಿದ್ದಾರೆ.

ಇಂತಹ ಕೆಚ್ಚೆದೆಯ ದಲಿತಪರ ಹೋರಾಟಗಳನ್ನು ಮೈಗೂಡಿಸಿಕೊಳ್ಳಲು ನಗನೂರು ಭೀಮಣ್ಣ, ಬಾಲಸ್ವಾಮಿಕೊಡ್ಲಿ ಮಾನ್ವಿಯ ಯಲ್ಲಪ್ಪ ನಕ್ಕುಂದಿ, ಚಿನ್ನಪ್ಪ ಕೊಟ್ರಿಕಿಯಂತಹ ನಾಯಕರು ಪ್ರೇರಣಿಯಾಗಿದ್ದರು.

ಇಂದು ನಿಂಗಪ್ಪ ಕಡೇಮನಿಯವರ ಸಾಮಾಜಿಕ ಕಳಕಳಿಯನ್ನು ಪರಿಗಣಿಸಿರುವ ಅಖಿಲ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ, "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್" ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
VKBH

No comments:

Post a Comment

Thanku