Thursday, October 27, 2011

ವೆಂಕಟೇಶ ಬೇವಿನಬೆಂಚಿಯವರಿಗೆ, "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್"

ಬಡತನವು ನಮ್ಮನ್ನು ದುಖಿಃತರನ್ನಾಗಿ ಹಾಗೆಯೇ ಬುದ್ದಿವಂತರನ್ನಾಗಿ ಮಾಡುತ್ತದಂತೆ - ಬ್ರೈಕ್

ಬಡತನ ಮತ್ತು ಕಷ್ಟದ ದಿನಗಳನ್ನು ಸ್ಪೂತರ್ಿ ಯಾಗಿಸಿಕೊಂಡು ಹಲವಾರು ಸಾಧನೆಗಳನ್ನು ಮಾಡಿದ ವೆಂಕಟೇಶ ಬೆವಿನಬೆಂಚಿಯವರಿಗೆ 2011/12ರ ಸಾಲಿನ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ಲಭಿಸಿದೆ. ವೆಂಕಟೇಶ್ ಬೆವಿನಬೆಂಚಿಯವರು ದಿನಾಂಕ 01/06/1982ರಲ್ಲಿ ತಂದೆ ತಿಪ್ಪಯ್ಯ ನರಸಮ್ಮ ದಂಪತಿಗಳ ಮಗನಾಗಿ ಜನಿಸಿದರು. ಸದರಿ ಗ್ರಾಮವು ರಾಯಚೂ ರಿನಿಂದ ಸುಮಾರು 30 ಕಿ.ಮೀ ಅಂತರದಲ್ಲಿದೆ. ಈ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳು ಸಂದರೂ ಕುಡ ಇನ್ನೂ ಸಕರ್ಾರಿ ಬಸ್ಸಿನ ವ್ಯವಸ್ಥೆಯಿಲ್ಲ ಮತ್ತು ಕಳೆದ ಏಳೆಂಟು ವರ್ಷಗಳಿಚೆಗೆ ಈ ಗ್ರಾಮವು ವಿದ್ಯುತ್ನ್ನು ಕಂಡಿದೆ.

ಈ ಗ್ರಾಮದಲ್ಲಿ ಸಮರ್ಪಕವಾದ ಕುಡಿಯುವ ನೀರಿಲ್ಲ, ಆಳುದ್ದ ಗುಂಡಿ ಬಿದ್ದ ರಸ್ತೆಗಳು, ಒಟ್ಟಾರೆ ಈ ಊರು ಕುಗ್ರಾಮವಾಗಿ ಪರಿಣಮಿಸಿದೆ. ಇಂತಹ ಗ್ರಾಮದಲ್ಲಿ ಅರಳಿದ ಪ್ರತಿಭೆ ವೆಂಕಟೇಶ್ 11 ಡಿಸೆಂಬರ್ 2011ರಂದು ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಸಮ್ಮೇಳನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆಂದರೆ, ಸಾಮಾನ್ಯವಾದದ್ದೇನಲ್ಲ. ವೆಂಕಟೇಶ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸುಗ್ರಾಮದಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಜೇಗರಕಲ್ನಲ್ಲಿ ಪಡೆದರು. ಸಮಾಜಕಲ್ಯಾಣ ಇಲಾಖೆ ನಡೆಸುತ್ತಿರುವ ಹಾಸ್ಟೇಲ್ನಲ್ಲಿ ಅಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವೆಂಕಟೇಶ ನಂತರ ರಾಯಚೂರಿನ ಠ್ಯಾಗೋರ್ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಬಿ.ಎ ಪದವಿ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಮುಂದುವರೆಸಿ, ಪದವಿಯಲ್ಲಿಯೂ ಪ್ರಥಮ ದಜರ್ೆಯಲ್ಲಿ ಉತ್ತೀರ್ಣರಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದರು.

ಇವರು ಓದುವ ರೀತಿಯನ್ನು ನೋಡಿ, ಊರಿನ ಜನ ತಮ್ಮ ಮಕ್ಕಳಿಗೆ ಇವರ ಉದಾಹರಣೆಯನ್ನು ನೀಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಹೇಳುತ್ತಿದ್ದರಂತೆ. ವೆಂಕಟೇಶ ಮುಂದೊಂದು ದಿನ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುತ್ತಾರೆಂದು ಊರಿನ ಜನತೆ ಅಂದಾಜಿಸಿದ್ದರು. ಇದೀಗ ವೆಂಕಟೇಶ ಅದನ್ನು ಸಾಬೀತು ಮಾಡಿದ್ದಾರೆ.

ಪದವಿ ಶಿಕ್ಷಣ ಮುಗಿಸಿದ ನಂತರ ಬಿ.ಇಡಿ ಶಿಕ್ಷಣ ಪಡೆದು ಶಿಕ್ಷಕರಾಗಿ ಮಕ್ಕಳಿಗೆ ತಮ್ಮ ಜ್ಞಾನವನ್ನು ಧಾರೆಯರೆಬೇಕೆಂದು ಅಂದುಕೊಂಡಾಗ ಬಿ.ಇಡಿ ಶಿಕ್ಷಣ ಪಡೆಯಲು ಸಕರ್ಾರಿ ಸೀಟು ಸಿಗಲೇ ಇಲ್ಲ. ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದು ಬಿ.ಇಡಿ ಮಾಡಲೂ ಆಗಲಿಲ್ಲ. ಯಾಕೆಂದರೆ, ಮೊದಲೇ ವೆಂಕಟೇಶ ದಲಿತ ಕುಟುಂಬದಿಂದ ಬಂದಂತವರು. ಕಿತ್ತು ತಿನ್ನುವ ಬಡತನ ಬೇರೆ. ಒಪ್ಪತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಅವರದ್ದಾಗಿತ್ತು. ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮ ಹಾಗೂ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಡ ಇವರ ಮೇಲಿದ್ದರಿಂದ ಶಿಕ್ಷಕರಾಗುವ ಕನಸು ಕನಸಾಗಿಯೇ ಉಳಿಯಿತು.

ಕುಟುಂಬ ನಿರ್ವಹಣೆ ಜೊತೆಯಲ್ಲಿ ಮುಂದಿನ ಶಿಕ್ಷಣಕ್ಕಾಗಿ ಬೇಕಾಗುವ ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳಲು ವೆಂಕಟೇಶ ರಾಯಚೂರಿನ ಆಕಾಶ ವಾಣಿಯಲ್ಲಿ ಅರೆಕಾಲಿಕ ನೌಕರರಾಗಿ ಸೇರಿಕೊಂಡರು. ಹಾಗೆ ಒಂದು ವರ್ಷ ಬಹಳ ಚುರುಕಾಗಿ ಕಾರ್ಯ ನಿರ್ವಹಿಸಿ, ಆಕಾಶವಾಣಿಯಲ್ಲಿ ಪ್ರಸಾರವಾಗುವ ಮಾಧ್ಯಮಗಳ ವಿಷಯವನ್ನು ಅರಿತು, ಪತ್ರಿಕೋದ್ಯಮದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು.

ಕೆಲವು ದಿನಗಳ ನಂತರ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬೆಂಗಳೂರು ವಿವಿಗೆ ಅಜರ್ಿಯನ್ನು ಸಲ್ಲಿಸಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶದಲ್ಲಿ ಪಾಸಾಗಿದ್ದರೂ ಕೂಡ ದಲಿತ ಎಂಬ ಒಂದೇ ಕಾರಣಕ್ಕೆ ಪ್ರವೇಶಾತಿಗೆ ಅನುಮತಿ ನೀಡಲಿಲ್ಲ. ನಂತರ ಅದೇ ಪದವಿಗೆ ಮಂಗಳೂರು ವಿವಿಯಲ್ಲಿ ಪ್ರಯತ್ನಿಸಿದರೂ ಕೂಡ ಜಾತಿ ಕಾರಣಕ್ಕೆ ಪ್ರವೇಶ ಸಿಗಲಿಲ್ಲ. ಮತ್ತೇ ಬೆಂಗಳೂರು ವಿವಿಯಲ್ಲಿ ಒಂದು ವರ್ಷದ ನಂತರ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಗೆ ಪ್ರವೇಶದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಕ್ಕೆ ಎಂ.ಎಸ್.ಸಿ (ವಿದ್ಯುನ್ಮಾನ ಮಾಧ್ಯಮ) ಅಭ್ಯಾಸ ಮಾಡಲು ಪ್ರವೇಶಾತಿ ದೊರೆಯಿತು.

ಬೆಂಗಳೂರು ವಿವಿಯಲ್ಲಿ ಅಭ್ಯಾಸ ಮಾಡುವಾಗ ಬುಡ್ಗೆ ಜಂಗಮ (ದಲಿತರ) ಬಗ್ಗೆ ಒಂದು ಅದ್ಬುತ ಸಾಕ್ಷ್ಯ ಚಿತ್ರವನ್ನು ಮಾಡಿದ್ದಾರೆ.

ವೆಂಕಟೇಶರ ಹುಟ್ಟೂರಿನಲ್ಲಿ ಇದುವರೆಗೂ ಯಾರೊಬ್ಬರು ಸ್ನಾತಕೋತ್ತರ ಪದವಿಯನ್ನು ಪಡೆದಿಲ್ಲ! ಹೀಗಾಗಿ ಮೊಟ್ಟಮೊದಲಿಗೆ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ವೆಂಕಟೇಶ ಅವರಿಗೆ ಸಲ್ಲುತ್ತದೆ. ಪ್ರಾಥಮಿಕ ಶಿಕ್ಷಣದಿಂದಿಡಿದು ಪದವಿಯವರೆಗೆ ಹಾಸ್ಟೇಲ್ಗಳಲ್ಲಿಯೇ ವೆಂಕಟೇಶರು ತಮ್ಮ ವಿದ್ಯಾಬ್ಯಾಸವನ್ನು ಮುಗಿಸಿದರು.

ಬಡತನ ಹೆಚ್ಚಿದ್ದರಿಂದ ಅವರ ಸ್ನಾತಕೋತ್ತರ ಪದವಿ ಮುಗಿದ ತಕ್ಷಣವೇ 2006ರಲ್ಲಿ ಟಿವಿ 9 ಖಾಸಗಿ ಚಾನೆಲ್ನಲ್ಲಿ ಸುದ್ದಿ ಸಂಪಾದಕರಾಗಿ ಸೇರಿಕೊಂಡರು. ನಂತರ ಹಲವಾರು ಕಾರಣಗಳಿಂದ ಟಿವಿ 9 ಚಾನೆಲ್ ಬಿಟ್ಟು 2008 ರಿಂದ ಸುವರ್ಣ ಚಾನೆಲ್ನಲ್ಲಿ ಕಾರ್ಯನಿರ್ವಹಿಸಿದರು. ನಂತರ ಅದೇ ವರ್ಷ ಕೇಂದ್ರ ಸಕರ್ಾರದ ಒಡೆತನದಲ್ಲಿರುವ ರಾಯಚೂರು ಆಕಾಶವಾಣಿಯಲ್ಲಿ ಕಾರ್ಯನಿವರ್ಾಹಕರಾಗಿ ಕೇಂದ್ರಸಕರ್ಾರದ ಸೇವೆಗೆ ಸೇರಿಕೊಂಡರು. ಪ್ರಸ್ತುತ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಇಲಾಖೆ ನಡೆಸುವ ಹತ್ತಾರು ಶಿಬಿರಗಳಲ್ಲಿ ಭಾಗವಹಿಸುತ್ತಾ, ಸಾರ್ವಜನಿಕವಾಗಿ ಕೇಳುಗರು ಕೇಳುವ ಪ್ರಶ್ನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು. ಜನಸಾಮಾನ್ಯರಿಗೆ ಸಮಾಜದ ಕುರಿತು ಎಂತಹ ತಿಳುವಳಿಕೆಗಳನ್ನು ಹೇಳಬೇಕೆಂಬುದನ್ನು ಈಗಾಗಲೇ ಕರಗತ ಮಾಡಿಕೊಂಡಿದ್ದಾರೆ.

ಪ್ರತಿವರ್ಷ ದೆಹಲಿ, ಪುನಾ, ಭುವನೇಶ್ವರಿ, ತ್ರಿವೇಂಡ್ರಂ ದೇಶದ ಇನ್ನಿತರ ರಾಜಧಾನಿಗಳಲ್ಲಿ ನಡೆಯುವ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಭಾಗವಹಿಸಿ ತಮ್ಮ ವೃತ್ತಿಪರತೆಯನ್ನು ಪ್ರದಶರ್ಿಸುತ್ತಿದ್ದಾರೆ.

ಯಾವ ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು ಬಡತನ ಮತ್ತು ಹಸಿವು ಕಲಿಸುತ್ತವೆ. ಹಾಗಾಗಿ ವೆಂಕಟೇಶರವರು ಬಡತನ ಮತ್ತು ಹಸಿವು ಕಲಿಸಿದ ಪಾಠಗಳಿಂದ ಪ್ರೇರಣಿಗೊಂಡು ಕೇಂದ್ರಸಕರ್ಾರದ ವೃತ್ತಿಯಲ್ಲಿದ್ದುಕೊಂಡೇ ಶೋಷಣೆಗೊಳಗಾದ ಸಮುದಾಯಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಾಗುವಷ್ಟು ಸಹಕಾರವನ್ನು ಮಾಡುತ್ತಾ ಬಂದಿದ್ದಾರೆ.

ವೆಂಕಟೇಶರಿಗೆ ಸಂಘಟನೆಯಲ್ಲಿ ವರ್ಗಕಲ್ಪನೆ ಇತ್ತು. ಹಾಗಾಗಿ ಅವರು ಸಮಾಜದ ಹೋರಾಟಗಳಿಗಿಂತ ವರ್ಗಹೋರಾಟಗಳಿಗೆ ಹೆಚ್ಚು ಆಸಕ್ತಿ ನೀಡುತ್ತಿದ್ದರು. 2000ರಲ್ಲಿ ಕಂಬಾಲಪಲ್ಲಿಯಲ್ಲಿ ನಡೆದ ನರಮೇಧವನ್ನು ವಿರೋಧಿಸಿ ರಾಯಚೂರಿನಲ್ಲಿ ಪ್ರತಿಭಟನೆ ನಡೆದಾಗ ವಿದ್ಯಾಥರ್ಿ ಸಂಘಟನೆಯಿಂದ ವೆಂಕಟೇಶ ಬಹುಮುಖ್ಯ ಪಾತ್ರ ವಹಿಸಿದ್ದರು.

ಇಂದು ಜಾಗತೀಕರಣ ಪ್ರಭಾವದಿಂದ ದಲಿತ ಚಳುವಳಿಗಳು, ಪ್ರಗತಿಪರ ಹೋರಾಟಗಳು ಕುಂಠಿತಗೊಳ್ಳುತ್ತಿವೆ. ಆದರೆ, ವೆಂಕಟೇಶರವರು ಶೋಷಿತ ಸಮುದಾಯಗಳು ಅನುಭವಿಸುವ ನೋವನ್ನು ತಮ್ಮದೇ ದೃಷ್ಟಿಕೋನದಿಂದ ಅವಲೋಕಿಸಿ ಪರಿಹಾರಗಳನ್ನು ಹುಡುಕಿ ಕೊಡುತ್ತಾರೆ. ಜಿಲ್ಲೆಯಲ್ಲಿ ಅದೆಷ್ಟೋ ವಿದ್ಯಾಥರ್ಿಗಳು ಇವರ ನಾಯಕತ್ವದಲ್ಲಿ ಪಳಗಿ, ಇಂದು ನಾಯಕರಾಗಿದ್ದಾರೆ. ಇಡೀ ವ್ಯವಸ್ಥೆಯ ಬದಲಾವಣಿಗೆ ನಮ್ಮಿಂದಾದದ್ದನ್ನು ಕೊಡುಗೆ ನೀಡಲೇಬೇಕೆಂಬ ಮನೋಭಾವನೆ ಅವರಿಗಿದೆ.

ದಲಿತ ಸಮುದಾಯದ ಕಾಳಜಿ, ಅಭಿಮಾನ ಹಾಗೂ ಅವರ ಹೋರಾಟದ ಬದುಕನ್ನು ಪರಿಗಣಿಸಿ, ಈ ಬಾರಿ ನವದೆಹಲಿಯ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿ, 2011ನೇ ಸಾಲಿನ "ಡಾ.ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್" ನ್ನು ನೀಡಿ ಗೌರವಿಸುತ್ತಿದೆ.

ಡಿಸೆಂಬರ್ 11/12 ರಂದು ನವದೆಹಲಿಯಲ್ಲಿ ಲೋಕಸಭೆಯ ಸ್ಪೀಕರ್ ಮೀರಾಕುಮಾರಿಯವರಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ವೆಂಕಟೇಶ ಇನ್ನು ಮುಂದಿನ ದಿನಗಳಲ್ಲಿಯೂ ಸಮಾಜದ ಅಭಿವೃದ್ಧಿಗಾಗಿ ಹೆಚ್ಚೆಚ್ಚು ಶ್ರಮಿಸಲಿ ಎಂದು ಈ ಸಂದರ್ಭದಲ್ಲಿ ಪತ್ರಿಕೆಯ ಬಳಗದ ವತಿಯಿಂದ ಹಾರೈಸೋಣ.

ನರಸಿಂಹ ಗುಂಜಳ್ಳಿ,
ಸಂಶೋಧನಾ ವಿದ್ಯಾಥರ್ಿ,
ಮಂಗಳೂರು ವಿಶ್ವವಿದ್ಯಾಲಯ

ಕುಗ್ರಾಮದಲ್ಲಿ ಐಟಿ ಉದ್ಯಮ ಆರಂಭಿಸಿರುವ ಜಂಬುನಾಥ

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಗೋರೆಬಾಳ ಎಂಬ

ಕುಗ್ರಾಮದಲ್ಲಿ ಐಟಿ ಉದ್ಯಮ ಆರಂಭಿಸಿರುವ ಜಂಬುನಾಥ

ಮಾಡುವ ಛಲ ಮನದೊಳಗಿದ್ದರೆ ಕಲ್ಲುಬಂಡೆಯೂ ಕರಗಿ ನೀರಾಗುತ್ತದೆ. ಯುವಕರೆಲ್ಲಾ ಉದ್ಯೋಗವನ್ನರಸಿ, ದೊಡ್ಡ ದೊಡ್ಡ ಶಹರಗಳತ್ತ ವಲಸೇ ಹೊರಟಿದ್ದರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಯುವಕನೊಬ್ಬ ಹಳ್ಳಿಯಲ್ಲೊಂದು ಐಟಿ ಕೇಂದ್ರ ಸ್ಥಾಪಿಸಿ ಹಳ್ಳಿ ಯುವಕರನ್ನು ಐಟಿ ಉದ್ಯೋಗಿಗಳನ್ನಾಗಿ ಪರಿವತರ್ಿಸುತ್ತಿದ್ದಾನೆ ಎನ್ನುತ್ತಾರೆ ನಮ್ಮ ಪ್ರತಿನಿಧಿ ಜನನಿ.

ರಾಯಚೂರು ಜಿಲ್ಲೆ ಕನರ್ಾಟಕ ಭೂಪಟದಲ್ಲಿ ಬಿಸಿಲು ಮತ್ತು ಬರಗಾಲಕ್ಕೆ ಹೆಸರುವಾಸಿಯಾಗಿದೆ.. ಈ ಜಿಲ್ಲೆಯೊಂದರಿಂದಲೇ ಪ್ರತಿವರ್ಷ ಶೇ.50ರಷ್ಟು ಕುಟುಂಬಗಳು ಪೂನಾ, ಮುಂಬಯಿ, ಬೆಂಗಳೂರಿನಂತಹ ಮಹಾನಗರಗಳಿಗೆ, ಒಪ್ಪತ್ತಿನ ಆಹಾರಕ್ಕಾಗಿ, ಉದ್ಯೋಗವನ್ನರಿಸಿ ಗುಳೇ ಹೋಗುತ್ತವೆ.

ದಿನವೊಂದಕ್ಕೆ ರಾಯಚೂರು ಜಿಲ್ಲೆಯಿಂದ ಬೆಂಗಳೂರು ನಗರವೊಂದಕ್ಕೆ 30 ಕ್ಕೂ ಹೆಚ್ಚು ಸಕರ್ಾರಿ ಬಸ್ಸುಗಳು ಹೊರಡುತ್ತವೆ. ಅದರಲ್ಲಿ 15ಕ್ಕೂ ಹೆಚ್ಚು ವಾಹನಗಳಲ್ಲಿ ಉದ್ಯೋಗವನ್ನರಿಸಿ ಗುಳೇ ಹೋಗುವವರೇ ತುಂಬಿರುತ್ತಾರೆ. ಇಂತಹದೊಂದು ಸನ್ನಿವೇಶವನ್ನು ನಾನು ಮೊನ್ನೆ ಸಿಂಧನೂರಿನ ಬಸ್ನಿಲ್ದಾಣದಲ್ಲಿ ನೋಡುತ್ತಿದ್ದಾಗ, ಎದುರಿಗೆ ಒಬ್ಬ ಯುವತಿ, ಪಕ್ಕಾ ಐಟಿ ಉದ್ಯೋಗಿಯಂತೆ ನಿಲ್ದಾಣದಿಂದ ಎದುರು ಬಂದಳು. ನಂತರ ಅವಳನ್ನು ಪರಿಚಯಿಸಿಕೊಂಡು ಕುಶಲೋಪರಿ ವಿಚಾರಿಸುತ್ತಿರುವಾಗ, ಕೆಲವೊಂದು ಮಾಹಿತಿಗಳು ಲಭ್ಯವಾದವು.

ಆ ಮಾಹಿತಿಯನ್ನಾಧರಿಸಿಯೇ ಈ ವರದಿಯನ್ನು ಮಾಡುತ್ತಿದ್ದೇನೆ.

ಮೇಲಿನ ಎರಡು ಮೂರು ಚಿತ್ರಗಳಲ್ಲಿ ಕಾಣುವ ಜನರ ಕಾರ್ಯವೈಖರಿಯನ್ನು ನೋಡಿದರೆ, ಪ್ರತಿಯೊಬ್ಬರಿಗೂ ಬೆಂಗಳೂರಿನ ಯಾವುದೋ ಕಾಲ್ಸೆಂಟರ್ ಒಂದರ ಚಿತ್ರವಿರಬೇಕೆಂದು ಅನಿಸುತ್ತದೆ. ಆದರೆ, ಅದ್ಯಾವುದು ಬೆಂಗಳೂರಿನ ಕಂಪನಿ ಚಿತ್ರವಲ್ಲ. ನಮ್ಮ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ತಲೆ ಎತ್ತಿರುವ ಬಿಪಿಓ ಕೇಂದ್ರದ್ದು..

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಯಚೂರಿನ ಕುಗ್ರಾಮ ಗೊರೆಬಾಳಕ್ಯಾಂಪಿನಲ್ಲಿ ಸ್ಥಾಪಿಸಲ್ಪಟ್ಟ ಸಿದ್ದೇಶ್ವರ ಐಟಿ ಸೆಲ್ಯೂಷನ್ ಎನ್ನವ ಸಾಪ್ಟವೇರ್ ಕಂಪನಿ ಅದು.

ಕ್ಯಾಂಪು ಗುಡಿಸಲುಗಳು ಮಧ್ಯದಲ್ಲಿಯೇ ತಲೆಎತ್ತಿರುವ ಬಿಪಿಒ ಕೇಂದ್ರದಲ್ಲಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ನೂರಾರು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಜಂಬುನಾಥ ಮಳೇಮಠ ಎಂಬುವವರು ಉದ್ಯೋಗವನ್ನು ನೀಡುತ್ತಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊರೆಬಾಳ ಗ್ರಾಮದ ನಾಟಿ ವೈದ್ಯ ಸಿದ್ದಯ್ಯ ಎನ್ನುವವರ ಮಗ ಜಂಬುನಾಥ ಎಂಬಿಏ ಮುಗಿಸಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಪ್ರತಿ ತಿಂಗಳೂ 60 ಸಾವಿರ ವೇತನ ಪಡೆದು ಕೆಲಸ ಮಾಡುತ್ತಿದ್ದರು.

ಆದರೆ, ಜಂಬುನಾಥರ ತಂದೆ ತಾಯಿಗಳು ಒಂದು ಬಾರಿ ತಮ್ಮ ಮಗನನ್ನು ಈ ರೀತಿ ಪ್ರಶ್ನಿಸುತ್ತಾರಂತೆ..

ಬೆಂಗಳೂರಿಗೆ ಹೋಗಿ ಕೆಲಸ ಮಾಡುವದಕ್ಕಿಂತ, ಅದೇ ಕೆಲಸವನ್ನು ನಮ್ಮಲ್ಲಿ ಮಾಡಿ, ನಾವುಗಳೇ ನೂರಾರು ಜನರಿಗೆ ಉದ್ಯೋಗ ನೀಡಲು ಬರುವುದಿಲ್ಲವೇ? ಇಲ್ಲಿಯೇ ಕೆಲಸವನ್ನು ಆರಂಭಿಸುವದರಿಂದ ಸುತ್ತಮುತ್ತಲಿನ ವಿದ್ಯಾವಂತ ಜನರು ಗುಳೇ ಹೋಗುವುದು ತಪ್ಪುತ್ತದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮಗನಿಗೆ ಕೇಳಿದರಂತೆ.

ನಂತರ ಮನದಲ್ಲಿಯೇ ಚಿಂತಿಸಿದ ಜಂಬುನಾಥ ತಾನಿರುವ ಹಳ್ಲಿಯಲ್ಲಿಯೇ ಸ್ನೇಹಿತರು ಹಾಗೂ ಬಂಧುಗಳ ಸಹಕಾರದೊಂದಿಗೆ 85 ಲಕ್ಷ ಬಂಡವಾಳ ಹಾಕಿ ಸಾಪ್ಟವೇರ್ ಕಂಪನಿ ತೆರೆಯಲು ದೃಡ ನಿಧರ್ಾರ ಮಾಡಿದರು. ಆರಂಭದಲ್ಲಿ ವಿದ್ಯುತ್ ಸಂಪರ್ಕದ ಅಡಚಣೆ, ಉದ್ಯೋಗಿಗಳ ಕೊರತೆಯಂತಹ ಸಮಸ್ಯಗಳನ್ನು ಪ್ರಯಾಸದಿಂದ ಎದುರಿಸಿದ ಜಂಬುನಾಥ ಕೊನೆಕೊನೆಗೆ ವಿದ್ಯುತ್ ಸಮಸ್ಯಗೆ ತನ್ನದೇ ಆದ ಜನರೇಟರ್ ಸ್ಥಾಪಿಸಿಕೊಂಡರು. ಅಕ್ಕ ಪಕ್ಕದ ನಗರಗಳಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳನ್ನು ವಿಶ್ವಾಸಕ್ಕೆ ಪಡೆದು ಐಟಿ ಹಾಗೂ ಬಿಪಿಓ ಹಳ್ಳಿಯಲ್ಲಿ ಪ್ರಾರಂಬಿಸಿದರು.

ಇಂದು ಒಂದು ನೂರು ಯುವಕರು 30 ಯುವತಿಯರು ಹಾಗೂ 20ಕ್ಕೂ ಹೆಚ್ಚು ಇಂಜಿನಿಯರ್ಗಳು ಶೆಟಲೈಟ್ ಆಧಾರಿತ 4ಎಂಬಿ ಲೈನ್ ಹೊಂದಿರುವ ಈ ಕೇಂದ್ರದಲ್ಲಿ ಹಗಲಿರಳೂ ದುಡಿಯುತ್ತಿದ್ದಾರೆ, ದೂರದ ಅಮೇರಿಕಾದ ಲಿಗಲ್ ಪ್ರೊಸೆಸಿಂಗ್ ಡಾಟಾ ಎಂಟ್ರಿ , ಕನರ್ಾಟಕ ಸರಕಾರದ ಸದಾಶಿವ ಆಯೋಗದ ಸಮೀಕ್ಷೆಯ ಡಾಟಾ ಎಂಟ್ರಿ, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆಧಾರ್ ಯೋಜನೆಯ ಡಾಟಾ ಎಂಟ್ರಿ ಕಾರ್ಯ ಈಗ ಇಲ್ಲಿ ನಡೆಯುತ್ತಿದೆ, ಜೊತೆಗೆ ಸ್ಥಳೀಯ ರೈಸ್ ಮಿಲ್, ಶಾಲಾ ಕಾಲೇಜುಗಳಿಗೂ ಸಾಪ್ಟವೇರ್ ತಯಾರಿಸಿಕೊಡಲಾಗುತ್ತಿದೆ, ಅಷ್ಠೇ ಅಲ್ಲ ಉತ್ತರ ಕನರ್ಾಟಕದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಆಶಯದೊಂದಿಗೆ ಪ್ರಾರಂಭಗೊಂಡ ಒಂದು ವರ್ಷದ ಅವಧಿಯಲ್ಲೇ ಬೆಂಗಳೂರಿನಲ್ಲಿ ವ್ಯವಹಾರಿಕ ಶಾಖೆ ತೆರೆಯಲಾಗಿದೆ. ಮುಂದಿನ ತಿಂಗಳು ಸಿಂಗಪೂರಿನಲ್ಲೂ ಈ ಕಂಪನಿಯ ಶಾಖೆ ಪ್ರಾರಂಭವಾಗಲಿದೆ, ಈ ಯುವಕನ ಸಾಧನೆಯ ಛಲ, ನವ ನವೀನ ದೃಷ್ಠಿಕೋನ ಗಮನಿಸಿದ ದಶಕದ ಇತಿಹಾಸವಿರುವ ಓಂ ಸಾಪ್ಟವೇರ್ ಕಂಪನಿ ಈ ಯುವಕನೊಂದಿಗೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ, ಬರುವ ಮಾರ್ಚ ವೇಳೆಗೆ ತಾನು ಹಾಕಿದ ಬಂಡವಾಳ ವಾಪಾಸಾಗುವ ಹುಮ್ಮಸಿನಲ್ಲಿರುವ ಮಳೆಮಠ 2013ರ ವೇಳೆಗೆ 1000 ಯುವಕರಿಗೆ ಉದ್ಯೋಗ ನೀಡುವ ಉದ್ಯಮವಾಗಿ ಬೆಳೆಸುವ ಆಕಾಂಕ್ಷೆ ಹೊಂದಿರುವುದಾಗಿ ನಮ್ಮೊಂದಿಗೆ ಹೇಳಿದರು.

ನಮ್ಮದು ಹಿಂದುಳಿದ ಪ್ರದೇಶ ಇಲ್ಲಿ ಸವಲತ್ತುಗಳಿಲ್ಲ ಹೀಗಾಗಿ ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆ ಎಂದು ಸದಾ ಉದಾಸೀನ ಮಾತುಗಳನ್ನಾಡುವವರ ಮದ್ಯೆ ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಸಾದಿಸಿ ತೊರಿಸಿದ ಈ ಯುವಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಗೆ ಅಪವಾದ ಎಂಬುವಂತೆ ಬೆಂಗಳೂರಿಗೆ ಸೀಮಿತವಾಗಿದ್ದ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ಹಳ್ಳಿಗೆ ತಂದ ಕಿರ್ತಗೆ ಪಾತ್ರವಾಗಿದ್ದಾನೆ.

ಅಮೇರಿಕಾದಲ್ಲಿ ಸಿಡಿದೆದ್ದ ಬಂಡಾಯ - ಒಂದು ಆಶಾಭಾವನೆ?

ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣ ಹೋಮನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಇಸ್ಲಾಂ ಭಯೋತ್ಪಾದನೆಗೆ ಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿ ರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ ಆದರೆ, ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯು ತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ ಎನ್ನುತ್ತಾರೆ ಹರ್ಷಕುಮಾರ ಕುಗ್ವೆ.

ಹಲವಾರು ದಿನಗಳಿಂದ ನನಗೆ ಒಂದು ಬಯಕೆ ಯಿತ್ತು. ಅದೇನೆಂದರೆ ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ 17ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ ಸಾಲಿನಲ್ಲಿ ಈಗ ಅಮೆರಿಕದ ಜನರೂ ಹೊಸ ಹೆಜ್ಜೆ ಇಟ್ಟಿರುವುದು ನೋಡಿ ಖುಷಿಯಾಗಿದೆ. ಈ ಬಂಡಾಯ ಎಲ್ಲಿಯವರಗೆ ನಡೆಯುತ್ತದೆ, ಏನು ಸಾಧಿ ಸುತ್ತದೆ, ಯಾವುದೂ ಖಾತ್ರಿಯಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಮುಕ್ತ ಮನಸ್ಸಿ ನಿಂದ ಬೆಂಬಲಿಸಬೇಕಾದ ಚಳವಳಿ ಇದು ಎಂದು ಮಾತ್ರ ಹೇಳಬಹುದು. ಇದಕ್ಕೆ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮುನ್ನ ಇಲ್ಲಿ ಏನೇನಾಗುತ್ತಿದೆ ಎಂದು ನೋಡೋಣ.

ನಿಜಕ್ಕೂ ಅಚ್ಚರಿಯ ಹಾಗೂ ಬೇಸರದ ಸಂಗತಿ ಯೆಂದರೆ ಅಲ್ಲಿ ನಡೆಯುತ್ತಿರುವ ಇಂತಹ ಒಂದು ಅದ್ಭುತ ಬೆಳವಣಿಗೆ ನಮ್ಮ ಮಾಧ್ಯಮಗಳ ಪ್ರತಿಕ್ರಿಯೆ ಏನೂ ಇಲ್ಲವೆನ್ನುವಷ್ಟರ ಮಟ್ಟಿಗಿರುವುದು. ಇದು ಮಾಧ್ಯಮಗಳ ಜಾಣಮೌನವಾ? ಇದು ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಮಾತ್ರವಲ್ಲ. ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳೂ ಬೇಕೆಂದೇ ಈ ಚಳವಳಿಯ ಕುರಿತು ಉಪೇಕ್ಷೆಯನ್ನೂ ಹಾಗೂ ಅಪ ಪ್ರಚಾರವನ್ನೂ ನಡೆಸುತ್ತಿವೆ. ಈಜಿಪ್ಟಿನ, ಲಿಬಿಯಾದ, ಆಥವಾ ನಮ್ಮದೇ ಅಣ್ಣಾ ಚಳವಳಿಗಳನ್ನು ಮುಖ ಪುಟದಲ್ಲಿ ವಾರಗಟ್ಟಲೆ ವರದಿ ಮಾಡಿದ ಪತ್ರಿಕೆಗಳಿಗೆ, ಟೀವಿ ಚಾನಲ್ಗಳಿಗೆ ಈಗ ಕನಿಷ್ಟ ಒಂದು ವರದಿ ಯನ್ನೂ ಮಾಡದಿರುವಂತದ್ದು ಏನಾಗಿದೆ?!

ಈಗ ಅಮೆರಿಕದಲ್ಲಿ ಆರಂಭಗೊಂಡಿರುವ ಚಳುವಳಿ ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ (ಔಛಿಛಿಣಠಿಥಿ ಘಚಿಟಟ ಖಣಡಿಜಜಣ) ಚಳವಳಿ. ಮೊದಲಿಗೆ ಹತ್ತಾರು ಸಂಖ್ಯೆ ಯಲ್ಲಿ ಚಳವಳಿಗಾರರು ಆರಂಭಿಸಿದ ಈ ಚಳವಳಿ ಯಲ್ಲಿ ದಿನಕಳೆದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸಿಕೊಂಡು ಕಾಳ್ಗಿಚ್ಚಿನಂತೆ ಅಮೆರಿ ಕಾದಾದ್ಯಂತ ವ್ಯಾಪಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಹೊಸಪೀಳಿಗೆಯ ವಿದ್ಯಾಥರ್ಿಗಳು, ಯುವಕರು, ಕಾಮರ್ಿಕರು ಸೇರಿಕೊ ಳ್ಳುತ್ತಿದ್ದಾರೆ. ಮಾತ್ರವಲ್ಲ ವಾಲ್ಸ್ಟ್ರೀಟ್ ವಶಪ ಡಿಸಿಕೊಳ್ಳಿ ಚಳವಳಿಯನ್ನು ಬೆಂಬಲಿಸಿ ವಾಷಿಂಗ್ಟನ್ ಡಿಸಿ, ಬೋಸ್ಟನ್, ಚಿಕಾ ಗೋ, ಫಿಲಡೆಲ್ಫಿಯಾ, ಹೂಸ್ಟನ್, ಪೋಟರ್್ಲೆಂಟ್, ಓರೆಗಾಂವ್, ಸಿಯಾಟಲ್, ಹೂಸ್ಟನ್, ಟೆಕ್ಸಾಸ್, ಮುಂತಾದ ಹತ್ತಾರು ಕಡೆಗಳಲ್ಲಿ ಅದೇ ಮಾದರಿಯ ಚಳವಳಿಗಳೂ ಆರಂಭಗೊಳ್ಳುತ್ತಿವೆ. ದೊಡ್ಡ ಮತ್ತು ಸಣ್ಣ ಸುಮಾರು ಇನ್ನೂರು ನಗರಗಳಲ್ಲಿ ಪ್ರತಿಭ ಟನೆಗಳಾಗಿವೆ. ಮೊದಮೊದಲು ಇದನ್ನು ಬರೀ ಪಡ್ಡೆ ಹುಡುಗರ ಬಂಡಾಯ ಎಂದು ಉಪೇಕ್ಷೆ ಮಾಡಿ ದ್ದವರಿಗೆ ಈಗ ಆಘಾತವಾಗಿದೆ. ಅಮೆರಿಕದ ಹಲವಾರು ದೊಡ್ಡ ಕಾಮರ್ಿಕ ಸಂಘಟನೆಗಳೂ ನೆನ್ನೆಯಷ್ಟೇ ತಮ್ಮ ಬಹಿರಂಗ ಬೆಂಬಲವನ್ನು ಘೋಷಿಸಿವೆ. ವಾಲ್ಸ್ಟ್ರೀಟ್ ಬಳಿ ಇರುವ ಝುಕ್ಕೊಟ್ಟಿ ಪಾಕರ್್ನಲ್ಲಿ ನೂರಾರು ಕಾರ್ಯಕರ್ತರು ಕಾಡರ್್ ಬೋಡರ್್ ಜೋಪಡಿ ಕಟ್ಟಿ ಕೊಂಡು ಕಳೆದ ಹದಿನೈದು ಇಪ್ಪತ್ತು ದಿನಗಳಂದ ಜಾಂಡಾ ಹೂಡಿದ್ದರೆ ಇವರಿಗೆ ಬಂಬಲವಾಗಿ ಅಮೆರಿ ಕದಾದ್ಯಂತ ಸಾವಿರಾರು ಜನರು ಕೇರಾಫ್ ಆಕ್ಯುಪೈ ವಾಲ್ಸ್ಟ್ರೀಟ್ ವಿಳಾಸಕ್ಕೆ ತಮ್ಮ ಕೈಲಾಗುವಂತಾದ್ದನ್ನೆಲ್ಲಾ ಸಹಾಯ ಮಾಡುತ್ತಿದ್ದಾರೆ. ಊಟ, ಬಟ್ಟೆ, ಬರೆ, ಮೊಬೈಲ್ ಫೋನ್ಗಳಿಗೆ ಬೇಕಾದ ಬ್ಯಾಟರಿಗಳು, ಬ್ಯಾಕಪ್ ಸರಕುಗಳು, ಬಾರಿಸಲು ಡ್ರಮ್ಗಳು, ಪೀಪಿಗಳು, ಹೀಗೆ ಏನೇನು ಸಾಧ್ಯವೋ ಎಲ್ಲಾ ಅಂಚೆಯ ಮೂಲಕ ಹರಿದು ಬರುತ್ತವೆ. ಗ್ರೀನ್ ಪೀಸ್ ಸಂಘಟನೆ ಈಗ ಪ್ರತಿಭಟನೆಯ ಸ್ಥಳದಲ್ಲಿ ಸೌರ ವಿದ್ಯುತ್ನ್ನು ನೀಡಿದೆ. ಈಜಿಪ್ಟ್, ಗ್ರೀಸ್, ಸ್ಪೇನ್ ಹಾಗೂ ಐಸ್ ಲ್ಯಾಂಡ್ಗಳಲ್ಲಿನ ನಮ್ಮ ಸಹೋದರಂತೆಯೇ ನಾವು ಕ್ರಾಂತಿಕಾರಿ ಅರಬ್ ಬಂಡಾಯವನ್ನು ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪುನರ್ಸ್ಥಾಪಿಸಲು ಬಳ ಸುತ್ತಿದ್ದೇವೆ. ಇದರಲ್ಲಿ ಭಾಗವಹಿಸುವ ಪ್ರತಿಯಿಬ್ಬರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಅಹಿಂಸಾ ಮಾರ್ಗವನ್ನು ಬಳಸುತ್ತಿದ್ದೇವೆ. ... ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳಿ ಒಂದು ನಾಯಕ ರಹಿತ ಚಳವಳಿ. ಇದರಲ್ಲಿ ಬೇರೆ ಬೇರೆ ವರ್ಣ, ಲಿಂಗ, ರಾಜಕೀಯ ದೃಷ್ಟಿಕೋನಗಳ ಜನರು ಭಾಗ ವಹಿಸುತ್ತಿದ್ದಾರೆ. ನಮ್ಮೆಲ್ಲರಲ್ಲಿರುವ ಸಮಾನ ಅಂಶವೆಂದರೆ 1% ಜನರ ದುರಾಸೆ ಹಾಗೂ ಭ್ರಷ್ಟಾ ಚಾರವನ್ನು 99% ಜನರಾದ ನಾವು ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ.

ಇಲ್ಲಿ ಮೊಳಗುತ್ತಿರುವ ಘೋಷಣೆಗಳನ್ನೂ ನೋಡಿ-

ನಾವು ಬಹಳ ಮಂದಿ, ಅವರು ಕೆಲವೇ ಮಂದಿ, ನಾವು ಎದ್ದು ನಿಂತರೆ ಅವರೇನು ಮಾಡ್ತಾರೆ?; ಅವರು ಎಷ್ಟು ಅಂತ ಶ್ರೀಮಂತರಾಗುತ್ತಲೇ ಹೋಗುತ್ತಾರೆ? ಮೊದಲು ವಿದ್ಯಾಥರ್ಿಗಳ ಎಲ್ಲಾ ಸಾಲ ಮನ್ನಾ ಮಾಡಿ; ಅವರು ಹೇಳ್ತಾರೆ ಕಟ್ ಬ್ಯಾಕ್, ನಾವು ಹೇಳ್ತೀವಿ- ಫೈಟ್ ಬ್ಯಾಕ್; ಸಾಲ ಪಾವತಿಗೆ ಒಂದೇ ದಾರಿ- ಯುದ್ಧ ನಿಲ್ಲಿಸಿ, ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಹೀಗೆ ಇಂತಹ ಹಲವಾರು ಘೋಷಣೆಗಳನ್ನು ಹಾಕುತ್ತಾ ಹುಮ್ಮಸ್ಸಿ ನಿಂದ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರ ಚಳುವ ಳಿಗೆ ಇಂದಿನ ಸಂದರ್ಭದಲ್ಲಿ ಜಾಗತಿಕ ಮಟ್ಟದ ಪ್ರಾಮುಖ್ಯತೆ ಇದೆ.

ಈ ಚಳವಳಿಯ ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾದವೆಂದರೆ,

* ಜನರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.

* ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಖಾತ್ರಿಗೊಳಿಸಬೇಕು.

* ಸಾಮಾಜಿಕ ಭದ್ರತಾ ಕ್ರಮಗಳನ್ನು ಕಡಿತಗೊಳಿಸದೇ ಹೆಚ್ಚಿಸಬೇಕು.

* ಎಲ್ಲರಿಗೂ ಹೆಲ್ತ್ ಕೇರ್ವ್ಯವಸ್ಥೆ ಜಾರಿಗೊಳಿಸುವುದು.

* ಸಕರ್ಾರದ ಆದಾಯ ಹೆಚ್ಚಿಸಲಿಕ್ಕಾಗಿ ಶೇಕಡಾ 10ಷ್ಟು ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಬೇಕು

* ದೊಡ್ಡ ಕಾಪರ್ೊರೇಟ್ ಸಂಸ್ಥೆಗಳು ಜನತೆಯ ಭಾಗ ಅಲ್ಲ ಎಂದು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು.

* ಉಚಿತ ಕಾಲೇಜು ಶಿಕ್ಷಣ ನೀಡಬೇಕು.

* ಮೂಲಸೌಕರ್ಯಗಳಿಗಾಗಿ (ನೀರು, ಒಳಚರಂಡಿ, ರೈಲ್ವೆ, ರಸ್ತೆ, ಸೇತುವೆ, ವಿದ್ಯುತ್) ಒಂದು ಲಕ್ಷಕೋಟಿ ಡಾಲರ್ ಮೀಸಲಿಡಬೇಕು.

* ಪರಿಸರ ಸಂರಕ್ಷಣೆಗಾಗಿ ಎಂಟು ಲಕ್ಷ ಕೋಟಿ ಡಾಲರ್ ಮೀಸಲಿಡಬೇಕು.

* ತೈಲ ಇಂಧನಾಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕೊನೆಗೊಳಿಸಿ ಪಯರ್ಾಯ ಮಾರ್ಗ ಗಳನ್ನು ಅಭಿವೃದ್ಧಿಪಡಿಸಬೇಕು.

* ಲಿಂಗ ಹಾಗೂ ಜನಾಂಗೀಯ ಭೇಧಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನಹಕ್ಕು ತಿದ್ದು ಪಡಿ ತರಬೇಕು, ಇತ್ಯಾದಿ.

ವಾಲ್ಸ್ಟ್ರೀಟ್ ವಶಪಡಿಸಿಕೊಳ್ಳಿ ಚಳವಳಿಯ ಲೋಗೋ ನೋಡಿ. ಗೂಳಿಯ ಮೇಲೆ ನೃತ್ಯಗೈ ಯುತ್ತಿರುವ ಯುವತಿಯ ಚಿತ್ರ! ಈ ಚಳವಳಿ ತನ್ನ ಕೇಂದ್ರವನ್ನು ವಾಲ್ಸ್ಟ್ರೀಟನ್ನೇ ಕೇಂದ್ರಮಾಡಿಕೊಂಡಿ ರುವುದಕ್ಕೆ ಕಾರಣವಿದೆ. ಇಂದು ಅಮೆರಿಕದ ಇಡೀ ಹಣಕಾಸು ವ್ಯವಹಾರ ನಡೆಯುವುದು ವಾಲ್ಸ್ಟ್ರೀ ಟ್ನಲ್ಲಿ. ಜಗತ್ತಿನ ಅತಿದೊಡ್ಡ ಶೇರು ಮಾರುಕಟ್ಟೆ ಯಾದ ನ್ಯೂಯಾಕರ್್ ಸ್ಟಾಕ್ ಎಕ್ಸ್ಚೇಂಜ್ ಹಾಗೂ ನಾಸ್ಡಾಕ್, ಅಮೆರಿಕನ್ ಸ್ಟಾಕ್ ಎಕ್ಸ್ ಚೇಂಜ್, ಎಲ್ಲಾ ಇರುವುದು ಇಲ್ಲೇ.

ತಮ್ಮ ಚಳವಳಿಗೆ ಮುಖ್ಯವಾಹಿನಿ ಮಾಧ್ಯಮಗಳು ಬೆಂಬಲ ನೀಡಲಾರವು ಎಂಬ ಸಂಶಯವಿಟ್ಟು ಕೊಂಡೇ ಚಳವಳಿಗಾರರು ಸಾಧ್ಯವಿರುವ ಎಲ್ಲಾ ಪಯರ್ಾಯ ಮಾಧ್ಯಮಗಳನ್ನೂ ಬಳಸಿಕೊಳ್ಳು ತ್ತಿದ್ದಾರೆ. ಆಕ್ಯುಪೈ ವಾಲ್ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯನ್ನೂ ಹೊರತರುತ್ತಿದ್ದಾರೆ. ಅದರ ಮೊದಲ ಸಂಚಿಕೆಯ ಮುಖಪುಟದಲ್ಲೇ ಕ್ರಾಂತಿ ಈಗ ತಾಯ್ನಾಡಿನಲ್ಲೇ ಭುಗಿಲೆದ್ದಿದೆ ಎಂಬ ಒಕ್ಕಣೆಯಿತ್ತು. ಇದರೊಂದಿಗೆ ಫೇಸ್ಬುಕ್, ಟ್ವಿಟರ್ಗಳು, ಯೂಟ್ಯೂಬ್, ವೆಬ್ಸೈಟ್ ಹೀಗೆ ಎಲ್ಲವೂ ನಿರಂತ ರವಾಗಿ ಜನಸಾಮಾನ್ಯರಿಗೆ ಸುದ್ದಿವಾಹಿನಿಗಳಾಗಿ, ಚಚರ್ಾ ವೇದಿಕೆಗಳಾಗಿ ಕೆಲಸ ಮಾಡುತ್ತಿವೆೆ. ಇದೀಗ ಆನ್ಲೈನ್ ಚಚರ್ೆಗಳನ್ನು ಆರಂಭಿಸಿದ್ದಾರೆ. ಜನರು ವ್ಯಾಪಕವಾಗಿ ಬಳಸುವ ವಿಕಿಪಿಡಿಯಾ ಕೂಡಾ ಚಳವಳಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅರಬ್ ಹಾಗೂ ಭಾರತದಲ್ಲೇ ಸಾಕಷ್ಟು ಕೆಲಸ ಮಾಡಿರುವ ಇವುಗಳೆಲ್ಲಾ ಅಮೆರಿಕದಲ್ಲಿ ಮಾಡದಿ ರುತ್ತವೆಯೆ?

ಸೆಪ್ಟೆಂಬರ್ 17ರಿಂದ ಆರಂಭವಾದ ಈ ಚಳ ವಳಿಯ ಮೊದಲ ದಿನ ಸುಮಾರು ಒಂದು ಸಾವಿರ ಕಾರ್ಯಕರ್ತರು ಬೀದಿಗಳಲ್ಲಿ ಜಮಾಯಿಸಿ ಝುಕ್ಕೊಟ್ಟಿ ಪಾಕರ್್ನಲ್ಲಿ ಕಾಡರ್್ಬೋರ್ಡಗಳ ಸಹಾಯದಿಂದ ಜೋಪಡಿ ಹಾಕಿಕೊಂಡು ತಂಗಿದ್ದರು, (ನ್ಯೂಯಾ ಕರ್್ ಪೋಲೀಸ್ ಇಲಾಖೆ ಟೆಂಟ್ ಬಳಕೆಯನ್ನು ನಿಷೇಧಿಸಿದ ಕಾರಣ). ಆ ವಾರ ಪೋಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಸೆ.24ರಂದು ಕನಿಷ್ಟ 80 ಜನರನ್ನು ಬಂಧಿಸಲಾಗಿತ್ತು. ಅಂದು ನಡೆದ ಜಟಾ ಪಟಿಯಲ್ಲಿ ಮೂವರು ಮಹಿಳೆ ಯರ ಮೇಲೆ ಪೋಲೀ ಸರು ಬಲೆಯನ್ನು ಬೀಸಿ ಪೆಪ್ಪರ್ (ಮೆಣಸುಕಾಳಿನ ದ್ರವ) ಸಿಂಪಡಿಸಿ ಹಲ್ಲೆ ನಡೆಸಿದ್ದರು. ಇದನ್ನು ಕೂಡಲೇ ಯೂಟ್ಯೂಬ್ನಲ್ಲಿ ಬಹಿರಂಗಪಡಿಸಿದ ಪ್ರತಿಭಟನಾ ಕಾರರು ಆ ಪೋಲೀಸ್ ಅಧಿಕಾರಿಯ ಸಂಪೂರ್ಣ ವಿವರ, ಫೋನ್ನಂಬರ್ಗಳನ್ನೂ ಪ್ರಕಟಿಸಿದ್ದರು. ಯಾವುದೇ ಪೊಲೀಸ್ ಅಧಿಕಾರಿ ಕೆಟ್ಟದಾಗಿ ವತರ್ಿಸಿದ ಮರುಕ್ಷಣವೇ ಆತನ ಎಲ್ಲಾ ವರ್ತನೆಯನ್ನೂ ವಿಡಿ ಯೋ ಸಮೇತ ಜಗತ್ತಿನ ವೀಕ್ಷಣೆಗೆ ಬಿಡಲಾಗುತ್ತಿದೆ!

ಅಕ್ಟೋಬರ್ 1ರಂದು ಬ್ರೂಕ್ಲಿನ್ ಸೇತುವೆ ಮೇಲೆ ಪ್ರತಿಭಟಿಸಿದ ಸುಮಾರು 700 ಜನರನ್ನು ಪೋಲೀಸರು ಬಂಧಿಸಿದ್ದರು. ಇಲ್ಲಿ ಹೀಗೆ ಬಂಧಿಸುವಾಗ ಪೋಲೀಸರು ಕೆಟ್ಲಿಂಗ್ ಎಂಬ ತಂತ್ರ ವನ್ನು ಪ್ರಯೋಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಡೆಸುವಂತೆ ಹಠಾತ್ ಲಾಠಿ ಚಾಜರ್ು, ಗೋಲಿಬಾರ್ಗಳನ್ನು, ಹಲ್ಲೆಗಳನ್ನು ಅಮೆರಿ ಕದಲ್ಲಿ ನಡೆಸಿ ಸುಲಭವಾಗಿ ದಕ್ಕಿಸಿಕೊಳ್ಳಲು ಸಾಧ್ಯವಾ ಗುವುದಿಲ್ಲ. ಮಾನವಹಕ್ಕು, ಪ್ರಜಾತಂತ್ರಗಳ ಕುರಿತ ಮುಂದುವರಿದ ದೇಶಗಳ ಜನರ ಜನರ ಪ್ರಜ್ಞಾಮಟ್ಟ ಹೆಚ್ಚಿರುವುದರಿಂದ ಪೋಲೀಸ್ ಅಧಿಕಾರಿಗಳು ಮನಬಂ ದಂತೆ ವತರ್ಿಸಲು ಬರುವುದಿಲ್ಲ. ಹೀಗಾಗಿ ಪ್ರತಿಭಟನಾ ಕಾರರನ್ನು ಆದಷ್ಟು ಚದುರಿಸಿ, ದಿಕ್ಕು ತಪ್ಪಿಸಿ ಗುಂಪು ಗುಂಪಾಗಿ ಬಂದಿಸುವ ತಂತ್ರ ಹೂಡುವ ಕೆಟ್ಲಿಂಗ್ ಕೂಡಾ ಬಹಳಷ್ಟು ಸಲ ಟೀಕೆಗೊಳಗಾಗಿದೆ. ನಂತರ ಅಕ್ಟೋಬರ್ 5 ರಂದು ನ್ಯೂಯಾಕರ್್ ನಗರದ ಹತ್ತಾರು ಶಾಲಾಕಾಲೇಜುಗಳ ಸಾವಿರಾರು ವಿದ್ಯಾ ಥರ್ಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಂಡರು. ಅಂದು ನಡೆದ ಮೆರವಣಿಗೆಯಲ್ಲಿ ಸುಮಾರು 15,000 ಜನರು ಪಾಲ್ಗೊಂಡಿದ್ದರು. ಹೀಗೆ ದಿನೇ ದಿನೇ ಆಂದೋಲನದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಲೇ ಇದ್ದಾರೆ.

1999ರಲ್ಲಿ ಸಿಯಾಟಲ್ನಲ್ಲಿ ನಡೆದ ಘಖಿಔ ಸಮ್ಮೇ ಳನದ ವಿರುದ್ಧ ಹಾಗೂ ನಂತರ ಇರಾಕ್ ಯುದ್ಧದ ವಿರುದ್ಧ ಬೃಹತ್ ಚಳವಳಿ ನಡೆದಿದ್ದವು ಅವುಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಾದರೂ ಅವು ನಿದರ್ಿಷ್ಟ ದಿನಗಳಂದು ನಡೆದ ಸೀಮಿತ ಪ್ರದರ್ಶನಗಳು. ಆದರೆ ಈಗ ನಡೆಯುತ್ತಿರುವುದು ಬೇರೆಯದೇ ಸ್ವರೂಪದ್ದು.

ಹಾಗಾದರೆ ಇಡೀ ಜಗತ್ತಿಗೇ ಬುದ್ಧಿ ಹೇಳುವ ಅಮೆ ರಿಕದಂತ ಅಮೆರಿಕದಲ್ಲಿ ಇಂತಹ ಒಂದು ಬಂಡಾಯ ಹುಟ್ಟಿಕೊಂಡಿರುವುದು ಯಾಕೆ? ಈಗ ಹುಟ್ಟಿರುವ ಚಳವಳಿಯ ವ್ಯಾಪ್ತಿಯೇನು? ಇದರ ಶಕ್ತಿ ಏನು? ದೌರ್ಬಲ್ಯಗಳೇನು? ಈ ಕುರಿತು ಕೊಂಚ ತಲೆಕೆಡಿ ಸಿಕೊಳ್ಳುವ ಅಗತ್ಯ ಭಾರತೀಯರಿಗೂ ಇದೆ. ಯಾಕೆ ಇದರ ಅಗತ್ಯ ನಮಗಿದೆ ಎಂದರೆ 2ನೇಯ ವಿಶ್ವ ಮಹಾಯುದ್ಧದ ನಂತರ ದಲ್ಲಿ ಅದರಲ್ಲೂ ಸೋವಿ ಯತ್ ಒಕ್ಕೂಟ ಕುಸಿದ ಮೇಲೆ ಇಡೀ ಜಗತ್ತನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವುದು ಅಮೆರಿಕ. ನೂರಾ ರು ದೇಶಗಳಲ್ಲಿ ಬುಡಮೇಲು ಕೃತ್ಯಗಳನ್ನು, ಸಾವಿರಾರು ಪ್ರಾಕ್ಸಿ ಯುದ್ಧಗಳನ್ನು ನಡೆಸುತ್ತಾ ಇಡೀ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಪದತಲದಲ್ಲಿ ಬೀಳು ವಂತೆ ಮಾಡಿಕೊಂಡು ಕೇಕೆ ಹಾಕುತ್ತಿರುವುದು ಅಮೆರಿಕ. ಒಂದು ಕಡೆ ಮುಕ್ತ ಆಥರ್ಿಕ ತೆಯ ನೀತಿಗ ಳನ್ನು ಎಲ್ಲರ ಮೇಲೆ ಹೇರುತ್ತಲೇ ತಾನು ಮಾತ್ರ ರಕ್ಷಣಾತ್ಮಕ ನೀತಿಗಳನ್ನು ಪಾಲಿಸಿ ಕೊಂಡು ಇಬ್ಬಗೆಯ ನೀತಿಯನ್ನು ಪಾಲಿಸು ತ್ತಿರುವುದು ಇದೇ ಅಮೆರಿಕ. ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣ ಹೋಮನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿ ರುವ ಇಸ್ಲಾಂ ಭಯೋತ್ಪಾದನೆಗೆ ಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿ ರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನು ಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿ ಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯು ತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ.

ಜಾಗತೀಕರಣ ಎಂದರೆ ಅಮೇರಿಕೀಕರಣ ಎಂದು ಬಣ್ಣಿಸುವ ನಮ್ಮ ಡಾ. ಯು. ಆರ್. ಅನಂತ ಮೂತರ್ಿಯಂತವರ ಅಭಿಪ್ರಾಯ ಮುಖ್ಯವಾಗುವುದು ಈ ಕಾರಣದಿಂದಲೇ.

ಇಂತಿಪ್ಪ ಅಮೆರಿಕ ಪ್ರಭುತ್ವದ ವಿರುದ್ಧ ಅಮೆರಿಕದ ಪ್ರಜೆಗಳೇ ದಂಗೆಯೇಳುವ ಸ್ಥಿತಿ ಉಂಟಾಗಿದೆ ಎಂದರೆ ನಾವು ಕಂಡಿತಾ ಇದನ್ನು ಕೊಂಚ ಹತ್ತಿರದಿಂದ ಗಮನಿ ಸುವ ಅಗತ್ಯವಿದೆ. ಇದಕ್ಕಾಗಿ ಈ ಚಳವಳಿಗೆ ಕಾರಣ ವಾಗಿರುವ ಅಮೆರಿಕ ಆಥರ್ಿಕತೆಯನ್ನು ಸಂಕ್ಷಿಪ್ತವಾಗಿ ಯಾದರೂ ಅರಿಯಬೇಕಾಗುತ್ತದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಅಮೆರಿಕ ತನ್ನ ಸಕರ್ಾರದ ಋಣಾರ್ಹತೆ ಮಟ್ಟವನ್ನು ಅಲ್ಲಿನ ಪ್ರಮುಖ ಮೌಲ್ಯ ಮಾಪನಾ ಸಂಸ್ಥೆಗಳಲ್ಲೊಂದಾದ ಎಸ್&ಪಿ ಂಂಂ ಯಿ ಂದ ಂಂ+ಗೆ ಇಳಿಸಿತ್ತು. ತಾನು ಸುಸ್ತಿದಾರನಾಗುವ (ಆಜಜಿಚಿಣಟಣಜಡಿ) ಹಂತಕ್ಕೆ ಹೋಗುವುದನ್ನು ತಪ್ಪಿಸಲು ಒಬಾಮಾ ಸಕರ್ಾರವು ಸಾಲ ಒಪ್ಪಂದ ಕಾಯ್ದೆಯನ್ನು (ಆಜಛಣಛಿಜಟಟಿರ ಂಛಿಣ) ಜಾರಿ ಮಾಡಿತು.

ಇನ್ನೂ ಸ್ವಲ್ಪ ಹಿಂದಕ್ಕೆ ಹೋಗೋಣ. 2008ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದ ಸಬ್ಪ್ರೈಂ ಗೃಹಸಾಲ ಬಿಕ್ಕಟ್ಟು ಸ್ಪೋಟಗೊಂಡಿತ್ತು. ಅಮೆರಿಕಾದ ವಾಣಿಜ್ಯ ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಎಲ್ಲಾ ಹಣಕಾಸು ಉದ್ದಿಮೆಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಈ ಸಬ್ಪ್ರೈಮ್ ಗೃಹಸಾಲ ಮಾರುಕಟ್ಟೆ ಯೊಳಗೆ ಕಾಲಿಟ್ಟಿದ್ದವು. ಅಗ್ಗದ ಬಡ್ಡಿ ದರದಲ್ಲಿ ನೀಡತೊ ಡಗಿದ್ದ ಗೃಹಸಾಲ ಉದ್ದಿಮೆಗೆ ಕಾಲಿಟ್ಟ ಹಣಕಾಸು ಸಂಸ್ಥೆಗಳು ಬೃಹತ್ ಮಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸತೊಡಗಿದ್ದೇ ಬೃಹತ್ ಪ್ರಮಾಣದ ಬಂಡ ವಾಳ ಸಂಚಯವಾಗತೊಡಗಿತ್ತು. ಆದರೆ ಯಾವಾಗ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಜನರು ಗೃಹಸಾಲದ ಕಂತು ಕಟ್ಟಲಾರದೆ ಡಿಫಾಲ್ಟರ್ ಆಗತೊಡಗಿದ್ದರೋ ಆಗ ಈ ಉದ್ದಿಮೆಯನ್ನವಲಂಭಿಸಿ ಬಹುದೂರ ಹೋಗಿಬಿ ಟ್ಟದ್ದ ಆಥರ್ಿಕತೆಯೆಲ್ಲವೂ ಕುಸಿಯತೊಡಗಿತ್ತು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತೆಂದರೆ 2007ರ ಡಿಸೆಂಬರ್ನಲ್ಲಿ ಅಮೆರಿಕಾದಲ್ಲಿ ಬ್ಯಾಂಕುಗಳಿಗೆ ಬಾಕಿ ಬರಬೇಕಿದ್ದ ಈ ಸಬ್ಫ್ರೈಮ್ ಗೃಹ ಸಾಲದ ಒಟ್ಟು ಮೊತ್ತ 70 ಲಕ್ಷ ಕೋಟಿರೂಗಳು! ಅದೇ ವರ್ಷ 12 ಲಕ್ಷ ಮನೆಗಳು ಜಪ್ತಿಯಾದವು. ಹೀಗೆ ಜಪ್ತಿಯಾಗಿ ಅಕ್ಷರಶಃ ಬೀದಿಗೆ ಬಿದ್ದವರ ಸಂಖ್ಯೆ 45 ಲಕ್ಷ ದಾಟಿತ್ತು!. ಮನೆಗಳ ಬೆಲೆಗಳು ಶೇಕಡಾ 40 ರಷ್ಟು ಕುಸಿದಿದ್ದರೂ ಕೊಳ್ಳುವವರೇ ಗತಿ ಇರಲಿಲ್ಲ. 1.86 ಕೋಟಿ ಮನೆಗಳು ಹೀಗೆ ದೂಳು ಹಿಡಿದು ಕೂತಿದ್ದವು. ಆದರೆ ಆ ಮನೆಗಳಲ್ಲಿರ ಬೇಕಾದವರು ಬೀದಿ ಮೂಲೆಗಳಲ್ಲಿ, ತಮ್ಮ ಕಾರು ಗಳೊಳಗೆ, ರೈಲು ಬೋಗಿಗಳಲ್ಲಿ, ಪಾಕರ್್ಗಳಲ್ಲಿ ರಾತ್ರಿ ಗಳನ್ನು ಕಳೆಯುವ ಪರಿಸ್ಥಿತಿ ಬಂದೊದಗಿತ್ತು!

ಮತ್ತೊಂದೆಡೆ ಲೀಮಾನ್ ಬ್ರದರ್ಲಿನಂತಹ ಅತಿ ದೊಡ್ಡ ಹೂಡಿಕೆ ಬ್ಯಾಂಕುಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳನ್ನು ಸಕರ್ಾರ ರಾಷ್ಟ್ರೀಕರಣ ಮಾಡಿ ಉಳಿಸಿ ಕೊಂಡಿತು. ಅಮೆರಿಕ ಸಕರ್ಾರ ಕೂಡಲೇ ಸುಮಾರು 700 ಶತಕೋಟಿ ಡಾಲರುಗಳ ಬೇಲೌಟ್ (ಃಚಿಟ ಠಣಣ) ನೀಡಿತ್ತು. ಹಣಕಾಸು ಸಂಸ್ಥೆಗಳಿಗೆ ತಾತ್ಕಾಲಿಕ ಸಾಲ ನೀಡುವ ಕಮಷರ್ಿಯಲ್ ಪೇಪರ್ ಕೂಡಾ ಕುಸಿದು ಬಿದ್ದಿದ್ದು ಈ ದಿಢೀರ್ ಅವಘಡಗಳಿಗೆ ಕಾರಣ ವಾಗಿತ್ತು. ಆಥರ್ಿಕತೆಯ ಈ ಬಿಕ್ಕಟ್ಟಿನಿಂದಾಗಿ ಅಂದು ಅಮೆರಿಕ ಒಂದರಲ್ಲಿ ಕೆಲಸ ಕಳೆದುಕೊಂಡವರು 12 ಲಕ್ಷಕ್ಕಿಂತ ಹೆಚ್ಚು ಮಂದಿ! ಈ ಬಿಕ್ಕಟ್ಟು ಅಂದು ಇತರ ದೇಶಗಳಿಗೂ ಹರಡಿ ಎಲ್ಲೆಡೆ ಇದೇ ಬೆಳವಣಿಗೆಗಳಾದವು.

1930ರಲ್ಲಾದಂತೆಯೇ ಮತ್ತೊಂದು ಆಥರ್ಿಕ ಮಹಾ ಕುಸಿತದ (ಖಿಜ ಉಡಿಜಚಿಣ ಆಜಠಿಠಿಡಿಜಠಟಿ) ಮು ನ್ಸೂಚನೆ ದೊರೆತು ಜಗತ್ತು ತಲ್ಲಣಗೊಂಡಿತ್ತು. ಇದು ಅಮೆರಿಕದಲ್ಲಿ ಡಬಲ್ ಡಿಪ್ ರಿಶೆಷನ್ ಸ್ಥಿತಿ. ಅಂದರೆ ಈಗಾಗಲೇ ಒಂದು ಬಿಕ್ಕಟ್ಟಿನಿಂದ ಪೂತರ್ಿ ಚೇತರಿಸಿಕೊ ಳ್ಳುವಷ್ಟರಲ್ಲೇ ಮತ್ತೊಂದು ಆಥರ್ಿಕ ಕುಸಿತದ ಭಯ!

2008ರಲ್ಲಿ ಈ ಕುಸಿತವಾದಾಗ ಅಮೆರಿಕ ಸಕರ್ಾರ ಹಾಗೂ ಅನೇಕ ಆಥರ್ಿಕ ಪಂಡಿತರು ಗೃಹಸಾಲ ಮಾರುಕಟ್ಟೆಯನ್ನು ದೂರಿದರಾಗಲೀ ಈ ಸಮಸ್ಯೆಯ ಕಾರಣವನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡು ಹಿಡಿ ಯುವ ಪ್ರಯತ್ನ ಮಾಡಲಿಲ್ಲ.

ಇಷ್ಟಕ್ಕೆಲ್ಲ ಇರುವ ಮೂಲ ಕಾರಣವನ್ನು ಹೆಚ್ಚಿನ ವಿವರಗಳನ್ನೂ ಅಂಕಿ ಅಂಶಗಳನ್ನು ನೀಡುವ ಗೊಡ ವೆಗೆ ಹೋಗದೇ ಅತ್ಯಂತ ಸರಳವಾಗಿ ಹೀಗೆ ಹೇಳಬ ಹುದು - ಅದು ಅಮೆರಿಕ ಕೇಂದ್ರಿತ ಜಾಗತಿಕ ಮಾರು ಕಟ್ಟೆ ವ್ಯವಸ್ಥೆ ನೈಜವಾದ ಆಥರ್ಿಕತೆಯಿಂದ (ಅಂದರೆ ಉತ್ಪಾದನೆಯನ್ನು, ಉದ್ಯೋಗ ಬೆಳವಣಿಗೆಯನ್ನು ಆಧ ರಿಸಿದ ಆಥರ್ಿಕತೆ) ವಿಮುಖಗೊಂಡು ಹಣಕಾಸು ಬಂಡ ವಾಳವನ್ನು ಅಗಾಧವಾಗಿ ಸಂಚಯಿಸಿಕೊಳ್ಳುತ್ತಾ ಹೋದ ದ್ದು. (ಜಿಟಿಚಿಟಿಛಿಚಿಟ ದಚಿಣಠಟಿ ಠಜಿ ಜಛಿಠಟಿಠಟಥಿ) ಕೊನೆಗೆ ಇಡೀ ಆಥರ್ಿಕತೆಯೇ ಸಾಲದ ವ್ಯಸನ ಕ್ಕೊಳಗಾಗಿ ಈಗ ದಿವಾಳಿ ಹಂತಕ್ಕೆ ತಲುಪಿದ್ದು. ಉತ್ಪಾ ದನೆ ಆಧಾರಿತ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಒಂದು ಹಂತದಲ್ಲಿ ಸ್ಥಗಿತಗೊಂಡು ಸಾಲಾಧಾರಿತ ಸಟ್ಟಾ ವ್ಯಾಪಾ ರದ (ಠಿಜಛಿ ಣಟಚಿಣತಜ ಛಣಟಿಜ) ಪ್ರಾಬಲ್ಯ ತೀವ್ರ ಗೊಂಡಿದ್ದು. ಇದು ಬೇರೇನೂ ಆಗಿರದೇ ಹಣಕಾಸು ಮಾರುಕಟ್ಟೆಯೊಳಗಿನ ಜೂಜು ಮಾತ್ರವಾಗಿದ್ದದ್ದು.

ಅಮೆರಿಕದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗಣನೆಗೆ ತೆಗೆ ದುಕೊಂಡರೆ 1954ರಲ್ಲಿ ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದಾಗ ಅಲ್ಲಿನ ಸಾಲ ಶೇಕಡಾ 153ರಷ್ಟಿದ್ದರೆ 2007ರಲ್ಲಿ ಶೇಕಡಾ 373ರಷ್ಟಿತ್ತೆಂದರೆ ಸಾಲದ ಪಾತ್ರ ವನ್ನು ಊಹಿಸಬಹುದು. ಪ್ರಪಂಚದ ಅತಿದೊಡ್ಡ ಸಾಲ ಗಾರನಾಗಿರುವ ಅಮೆರಿಕದ ಈಗಿನ 14 ಲಕ್ಷ ಕೋಟಿ ಡಾಲರ್ಗಳು!. ಮಾತ್ರವಲ್ಲ ಅತ್ತ ನೈಜ ಆಥರ್ಿಕತೆ ಯಾವ ಬೆಳವಣಿಗೆಯನ್ನೂ ಕಾಣದೇ ಬಡತನ, ನಿರುದ್ಯೋಗ ಗಳು ಕ್ರಮೇಣ ಹೆಚ್ಚತೊಡಗಿದ್ದರೆ ಆಥರ್ಿಕತೆಯನ್ನು ಹೀಗೆ ಬರೀ ಪೇಪರ್ ಮೇಲಿನ ಹಣದ (ಕಂಪ್ಯೂಟರ್ ಎಂದು ಓದಿಕೊಳ್ಳಿ) ಮೇಲೆಯೇ ನಿಲ್ಲಿಸಿದ ಪರಿಣಾಮ ವಾಗಿ ದೊಡ್ಡ ಕಾಪರ್ೊರೇಷನ್ಗಳು ವಿಪರೀತ ಲಾಭ ಮಾಡತೊಡಗಿದವು. ಮಧ್ಯಮ ವರ್ಗದವರ ಆದಾ ಯದಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ ಈ ಹಣಕಾಸು ಸಂಸ್ಥೆಗಳು ಸಾವಿರ ಸಾವಿರ ಪಟ್ಟು ಲಾಭ ಮಾಡಿ ಕೊಂಡವು. ಅಮೇರಿಕಾದಲ್ಲಿ 2001ರಲ್ಲಿ ಹಣಕಾಸು ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಶೇಕಡಾ 1ರಷ್ಟು ಹಣ ಕಾಸು ಬಂಡವಾಳವು ಅಲ್ಲಿನ ಕೆಳಹಂತದ ಶೇಕಡಾ 80ರಷ್ಟು ಜನರ ಒಟ್ಟು ಆದಾಯದ ನಾಲ್ಕು ಪಟ್ಟು ಇತ್ತು. 2006ರಲ್ಲಿ ಅಮೆರಿಕಾದ ಕೇವಲ 60 ಅತಿದೊಡ್ಡ ಶ್ರೀಮಂತರ ಬಳಿ ಶೇಖರಣೆಗೊಂಡಿದ್ದ ಸಂಪತ್ತು 630 ಶತಕೋಟಿ ಡಾಲರುಗಳಷ್ಟು ಎಂದರೆ ಯೋಚಿಸಿ!. ಆಥರ್ಿಕತೆ ಎಂದರೇ ಹಣಕಾಸು ಆಥರ್ಿ ಕತೆ ಎಂದು ಆದ ಪರಿಣಾಮವಾಗಿ ಇಡೀ ವ್ಯವಸ್ಥೆಯನ್ನು ನಿಯಂತ್ರಿ ಸುವವರೇ ಈ ಕಾಪರ್ೊರೇಟರ್ಗಳಾದರು. ಹೀಗೆ ಪ್ರಜಾ ಪ್ರಭುತ್ವ ವ್ಯವಸ್ಥೆಗಳು ಕಾಪರ್ೊರೇಟ್ ಪ್ರಭುತ್ವಗಳಾಗಿ ಪರಿವರ್ತನೆಯಾದವು.

ಆದರೆ ಒಳಗೆ ಯಾವ ಹೂರಣವೂ ಇಲ್ಲದೇ ಹೀಗೆ ಬಲೂನಿನಂತೆ ಊದಿಕೊಳ್ಳುತ್ತಲೇ ಹೋದ ಆಥರ್ಿಕತೆ ಭಾರೀ ಸದ್ದಿನೊಂದಿಗೆ ಒಡೆದು ಜಗತ್ತಿನ ಆಥರ್ಿಕ ವ್ಯವಸ್ಥೆ ಯನ್ನು ಅಲ್ಲೋಲ ಕಲ್ಲೋಲ ಮಾಡುವ ಸೂಚನೆ 2008 ರಲ್ಲಿ ಸಿಕ್ಕಿತ್ತು. ಆದರೆ ತಾವು ಆಥರ್ಿಕತೆಯಲ್ಲಿ ಸೃಷ್ಟಿಸಿದ್ದ ನಿಜವಾದ ಸಮಸ್ಯೆಯನ್ನು ಸರಿಪಡಿಸಲು ಬಂಡವಾಳದ ನೇತಾರರು ತಯಾರಿಲ್ಲ.

ಹೀಗೆ ಆಥರ್ಿಕತೆಯನ್ನು ಹಣಕಾಸಿನ ನೀರಗುಳ್ಳೆಯ ಮಟ್ಟಕ್ಕೆ ಸೀಮಿತಗೊಳಿಸುವುದರ ಅಪಾಯವನ್ನು 1930 ರ ದಶಕದಲ್ಲೇ ಪ್ರಸಿದ್ಧ ಆರ್ಥಶಾಸ್ತ್ರಜ್ಞ ಕೀನ್ಸ್ ವಿವರಿಸಿದ್ದರು. ಕೀನ್ಸ್ ಒಬ್ಬ ಬಂಡವಾಳವಾದಿ ವ್ಯವಸ್ಥೆಯ ಪರವಾದ ಅರ್ಥಜ್ಞನೇ ಆಗಿದ್ದರೂ ಅವರು ಪ್ರತಿಪಾದಿಸಿದ್ದು ವಿವೇ ಚನಾಶೀಲ ಬಂಡವಾಳವಾದವನ್ನು. ಬದಲಾಗಿ ಇಂದು ಬೆಳೆದಿರುವ ದುರಾಸೆಯ ವಿಕೃತ ಬಂಡವಾಳವಾದವನ್ನು ಖಂಡಿತಾ ಆಗಿರಲಿಲ್ಲ. 1930ರ ದಶಕದಲ್ಲಿ ಅಮೆರಿಕ ಕೇಂದ್ರಿತ ಜಾಗತಿಕ ಹಣಕಾಸು ವ್ಯವಸ್ಥೆಯ ಜಾಡು ಹಿಡಿದ ಪೌಲ್ ಸ್ವೀಜಿಯಂತಹ ಎಡಪಂಥೀಯ ಅರ್ಥಶಾಸ್ತ್ರಜ್ಞರೂ ಸಹ ಸನಿಹದಲ್ಲೇ ಬಂದೆರಗಲಿರುವ ಭಾರೀ ಅಪಾಯವನ್ನು ತಿಳಿಸಿದ್ದರು. ಇದು ಇಡೀ ಜಗ ತ್ತನ್ನು ಮತ್ತೊಂದು ಮಹಾನ್ ಆಥರ್ಿಕಕುಸಿತಕ್ಕೆ ಕೊಂಡೊ ಯ್ಯಲಿದೆ ಎಂದೂ ಅಂಕಿ ಅಂಶಗಳ ಸಮೇತ ತಿಳಿಸಿ ದ್ದರು. ಅವರು ಹೇಳಿದ್ದೆಲ್ಲಾ ಈಗ ಸಾಕ್ಷಾತ್ಕಾರವಾಗಿತ್ತಿದೆ.

ಇಂತಹ ಒಂದು ಸಂದರ್ಭದಲ್ಲಿ ಹುಟ್ಟಿ ಕೊಂಡಿರುವ ಅಮೆರಿಕದ ಈ ಚಳವಳಿ ವಾಲ್ಸ್ಟ್ರೀಟ್ ವಶಪಡಿಸಿ ಕೊಳ್ಳುವ ಕರೆ ನೀಡಿ ಹೊರಟಿರುವುದು ಅರ್ಥಪೂರ್ಣ ವಾಗಿದೆ. ಪ್ರಪಂಚದ ಪ್ರಜಾಪ್ರಭುತ್ವವಾದಿಗಳೆಲ್ಲರೂ ಸ್ವಾಗತಿಸಬೇಕಾದ ಬೆಳವಣಿಗೆ ಇದು. ಜಗತ್ತಿನ ಜನ ಸಾಮಾನ್ಯರ ಸಾಕ್ಷಿಪ್ರಜ್ಞೆ ಎಂದೇ ಕರೆಯಬಹುದಾದ ನೋಮ್ ಚಾಮ್ಸ್ಕಿ ಕೂಡಾ ಈ ಚಳವಳಿಯ ಕುರಿತು ಪ್ರತಿಕ್ರಿಯಿಸಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಚಳವಳಿ ತನ್ನನ್ನು ತಾನು ನಾಯಕರಹಿತ ಎಂದು ಘೋಷಿಸಿಕೊಂಡಿದೆ. ಆದರೆ ಇದರಲ್ಲಿ ಒಳಿತೂ ಉಂಟು, ಕೆಡುಕೂ ಉಂಟು. ಒಬ್ಬ ನಾಯಕ ಅಥವಾ ಇಲ್ಲದೇ ಪ್ರತಿಯೊಂದು ನಿಧರ್ಾರವನ್ನೂ ಸಾಮೂ ಹಿಕವಾಗಿ ತೆಗೆದುಕೊಳ್ಳುತ್ತಿರುವ ಕಾರಣ ಸಕರ್ಾರಕ್ಕೆ ಈ ಚಳವಳಿಯನ್ನು ಹತ್ತಿಕ್ಕಲು ಸುಲಭ ಸಾಧ್ಯವಾಗ ಲಾರದು. ಮತ್ತು ಒಬ್ಬನ ಅಭಿಪ್ರಾಯವನ್ನು ಇಡೀ ಚಳ ವಳಿಯ ಮೇಲೆ ಹೇರಲು ಸಾಧ್ಯವಾಗಲಾರದು. ಆದರೆ ಇಡೀ ಜಗತ್ತಿನ ಚಳವಳಿಗಳನ್ನು ನೋಡಿದರೆ ಅಲ್ಲಿ ಒಬ್ಬ ನಾಯಕನಿರುತ್ತಾನೆ ಎಂದರೆ ಆತನ ಬೆನ್ನಿಗೆ ಒಂದು ಸಿದ್ದಾಂತವೂ ಇರುತ್ತದೆ. ಆ ಸಿದ್ಧಾಂತ ಎಷ್ಟು ಮಾನವೀಯವಾಗಿರುತ್ತದೆಯೋ ಅಷ್ಟು ಗಟ್ಟಿತನ ಆ ಚಳವಳಿ ಗಿರುತ್ತದೆ. ಒಂದೊಮ್ಮೆ ಆ ನಾಯಕ ಸಾಮೂಹಿಕ ಪ್ರಜ್ಞೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುವಂತಾದಾಗ ಆ ಚಳುವಳಿ ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯಿ ರುತ್ತದೆ. ಅಮೆರಿಕದಲ್ಲೇ ನೋಡುವುದಾದರೆ ಈ ಹಿಂದೆ ಸಮಾನತೆಗಾಗಿ ಚಳವಳಿ ನಡೆಸಿದ ಮಾಟರ್ಿನ್ ಲೂಥರ್ಕಿಂಗ್ ಜ್ಯೂನಿ ಯರ್ ಹಾಗೂ ರೋಸಾಪಾಕರ್್ರಂತ ಉದಾತ್ತ ವ್ಯಕ್ತಿಗಳ ಉದಾಹರಣೆಗಳಿವೆ. ಈಗಿನ ಚಳವಳಿ ಪ್ರಮುಖವಾಗಿ ಅಲ್ಲಿನ ಮಧ್ಯಮ ವರ್ಗದ ಕೈಯ ಲ್ಲಿರುವುದರಿಂದ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿ ಸುತ್ತದೆ ಎನ್ನುವುದೂ ಸಂಶಯಕ್ಕೆಡೆ ಮಾಡಿದೆ. ಸಧ್ಯಕ್ಕೆ ಈ ಚಳವಳಿ ಹಲವಾರು ವಿಚಾರಧಾರೆಗಳ ಕಾಕ್ಟೇಲ್ ಆಗಿದೆ. ಇಲ್ಲಿ ಎನ್.ಜಿ.ಒಗಳು ಟ್ರೇಡ್ ಯೂನಿಯನ್ ಕಾರ್ಯಕರ್ತರು, ಪೈಲಟ್ಗಳು, ಶಿಕ್ಷಕರ ಸಂಘಗಳು, ಬಲಪಂಥೀಯರು, ಎಡಪಂಥೀ ಯರು, ಅನಾಕರ್ಿಸ್ಟರು, ಒಂದೆರಡು ಮಾವೋವಾದಿ ಗುಂಪುಗಳ ಕಾರ್ಯಕ ರ್ತರು ಹೀಗೆ ಎಲ್ಲಾ ಬಗೆಯವರೂ ಒಂದಲ್ಲಾ ಒಂದು ಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಕೂಡಾ ಚಳವ ಳಿಯ ನೀತಿ ನಿರೂ ಪಣೆಗಳ ಮೇಲೆ, ಕಾರ್ಯಕರ್ತರ ಮೇಲೆ ತಂತಮ್ಮ ಸಿದ್ದಾಂತಗಳನ್ನು ಹೇರುವ ಪ್ರಯ ತ್ನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿ ಗೊಂದಲ ಮೂಡಿಸುವ ಸಾಧ್ಯತೆಯೂ ಇರುತ್ತದೆ. ಈ ಚಳವಳಿಗೆ ಬೆಂಬಲಿಸುತ್ತಲೇ ಇದನ್ನು ಹಲವಾರು ಬಗೆಯಲ್ಲಿ ದಿಕ್ಕು ತಪ್ಪಿಸುವ ಪ್ರಯತ್ನವನ್ನೂ ಡೆಮಾಕ್ರಾಟರು, ರಿಪಬ್ಲಿಕನ್ನರು ಮಾಡುತ್ತಿರುವುದೂ ಗೋಚರಿಸುತ್ತಿದೆ.

ಅಮೆರಿಕದ ಪ್ರಭುತ್ವಕ್ಕೆ ಚಳವಳಿಗಳನ್ನು ಎಲ್ಲಾ ರೀತಿ ಯಲ್ಲೂ ಬಗ್ಗು ಬಡಿಯುವ ವಿಧಾನಗಳೂ ಗೊತ್ತಿವೆ. ಸೈನಿಕವಾಗಿಯೂ, ರಾಜಕೀಯವಾಗಿಯೂ ನೂರಾರು ಚಳವಳಿಗಳನ್ನು ಹುಟ್ಟು ಹಾಕಿದ ಹಾಗೂ ಬಗ್ಗುಬಡಿದ ಚರಿತ್ರೆಯೇ ಅಮೆರಿಕದ ಪೆಂಟಗನ್ಗೆ ಇದೆ. ಈಗ ಭುಗಿಲೆದ್ದ ಚಳವಳಿಯನ್ನು ಅಗತ್ಯ ಬಂದರೆ ಅತ್ಯಂತ ತೀವ್ರವಾಗಿ ಸಕರ್ಾರ ಹತ್ತಿಕ್ಕ ಬಹುದು. ಈಗ ಅಮೆ ರಿಕದಲ್ಲಿ ಮತ್ತೊಂದು ತಿಯನ ನ್ಮನ್ ಚೌಕ ಮರು ಕಳಿಸಬಹುದು. ಆದರೆ ಇಂದಿನ ಅಮೆರಿಕದ ಟೆಕ್ ಸ್ಯಾವಿ ಪೀಳಿಗೆಯ ಮುಂದೆ ಅಂತದ್ದೊಂದನ್ನು ನಡೆ ಸುವುದೇನೂ ಸುಲಭಸಾಧ್ಯವಲ್ಲ. ಎಚ್ಚೆತ್ತ ಜನಶಕ್ತಿಯ ಮುಂದೆ ಎಲ್ಲಾ ಬಗೆಯ ಸವರ್ಾಧಿಕಾರಗಳೂ ಮಂಡಿ ಯೂರಿರುವುದೂ ಇತಿಹಾಸವೇ ಅಲ್ಲವೇ?

ಇದೇ ಸಂದರ್ಭ ಅಮೆರಿಕನ್ನರಿಗೆ ಮತ್ತೊಂದು ಅವ ಕಾಶವನ್ನೂ ಸೃಷ್ಟಿಸಿದೆ. ಅದೇನೆಂದರೆ ಅವರು ನಿಜವಾದ ಅರ್ಥದಲ್ಲಿ ಮನುಷ್ಯರಾಗುವ ಅವಕಾಶ!. ವಾಸ್ತವದಲ್ಲಿ ಇಂದು ಅಮೆರಿಕದ ಶ್ರೀಮಂತಿಕೆ ನಿಂತಿರುವುದೇ ತೃತೀಯ ಜಗತ್ತಿನ ಸಂಪತ್ತಿನ ಲೂಟಿಯನ್ನಾಧರಿಸಿ ಹಾಗೂ ಬಡದೇಶಗಳ ಜನರ ಅಗ್ಗದ ಶ್ರಮವನ್ನು ದೋಚಿದ್ದರ ಪರಿಣಾಮವಾಗಿ. ಯಾವ ಸಕರ್ಾರಗಳು ಬಂಡವಾಳಿಗರ ಲಾಭಕ್ಕಾಗಿ ಸರಕು ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸಿ ತಾವು ಸಾಲದ ಬಲೆಯಲ್ಲಿ ಬೀಳುವ ಜೊತೆಗೆ ಜನರನ್ನೂ ಸಾಲದ ವ್ಯಸನಕ್ಕೆ ಗುರಿಮಾಡಿದ್ದರೋ ಆ ಎಲ್ಲಾ ಸಕರ್ಾರಗಳನ್ನೂ ಅಮೆರಿಕನ್ನರು ಚುನಾವಣೆಯಿಂದ ಚುನಾವಣೆಗೆ ಗೆಲ್ಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸಕರ್ಾರಗಳ ಇಂತಹ ನೀತಿಗಳನ್ನು ಹಾಗೂ ತಮ್ಮ ಅನುಭೋಗೀ ಸಂಸ್ಕೃತಿಯ ಕುರಿತ ದೊಡ್ಡ ಮಟ್ಟದಲ್ಲಿ ಮರುಚಿಂತನೆ ನಡೆಸಿ ಇದು ವರೆಗೆ ಕಾಪರ್ೊರೇಟ್ಪ್ರಭುತ್ವಗಳು ಪ್ರೇರೇಪಿಸುತ್ತಾ ಬಂದಿ ರುವ ಲ್ಯಾವಿಶ್ ಬದುಕಿನ ರೀತಿ ರಿವಾಜುಗಳನ್ನು ಧಿಕ್ಕರಿಸಿ ಆದಷ್ಟು ಸರಳ ಹಾಗೂ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಅವಕಾಶವನ್ನಾದರೂ ಈಗಿನ ಚಳವಳಿ ಸೃಷ್ಟಿಸಿದರೆ ಅದೇ ಚಳವಳಿಯ ಅತಿದೊಡ್ಡ ಯಶಸ್ಸಾಗಲಿದೆ. ಈ ಜಗತ್ತನ್ನು ಎಲ್ಲಾ ಬಗೆಯ ಬಿಕ್ಕಟ್ಟುಗಳಿಂದಲೂ ರಕ್ಷಿಸಬಹುದಾದ ಏಕೈಕ ದಾರಿಯಿದು.
ಕೃಪೆ- ಇಬ್ಬನಿ ಬ್ಲಾಗ್

ಜ್ಞಾನಪೀಠ ಪ್ರಶಸ್ತಿಯ ಚಂದ್ರಶೇಖರ ಕಂಬಾರ

ಅಪ್ಪಟ ಜಾನಪದ ಕವಿ, ರಂಗಕಮಿ೯, ನಾಟಕಕಾರ, ಕಾದಂಬರಿಕಾರ, ನಾಡು-ನುಡಿ ಸಂಸ್ಕೃತಿಯ ಚಿಂತಕ, ಚಲನಚಿತ್ರ ನಿದೇರ್ಶಕ, ಉತ್ತಮ ಹಾಡುಗಾರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ
ಚಂದ್ರಶೇಖರ ಕಂಬಾರ್ಗೆ ರಾಷ್ಟ್ರೀಯ ಮಟ್ಟದ ಸಾಹಿತ್ಯ ವಲಯದ ಅತ್ಯುನ್ನತ ಪ್ರಶಸ್ತಿಯಾಗಿರುವ ಜ್ಞಾನಪೀಠ ಪ್ರಶಸ್ತಿಯ ಗರಿ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ವೇದಿಕೆಗಳಲ್ಲಿ ಚಿರಪರಿಚಿತರಾಗಿರುವ ಚಂದ್ರಶೇಖರ ಕಂಬಾರ್ ಬೆಂಗಳೂರಿನಂತಹ ಕಾಂಕ್ರೀಟ್ ಜಂಗಲಿನಲ್ಲಿ ವಾಸಿಸುತ್ತಿದ್ದರೂ, ಎದೆಯಾಳದಲ್ಲಿ ಮಾನವ ಪ್ರೀತಿಯನ್ನು, ಮೆದುಳಿನಲ್ಲಿ ಶೋಷಿತ, ದಲಿತ ಹೋರಾಟಗಳನ್ನು ಅದುಮಿಟ್ಟುಕೊಂಡ ಮಹಾನ್ ಚೇತನ.ಬೆಂಗಳೂರಿನ ಕಾಲೇಜಿನ ಪ್ರಾದ್ಯಾಪಕರಾಗಿ, ಹಂಪಿ ವಿವಿಯನ್ನು ತುಂಬಾ ಅಚ್ಚುಕಟ್ಟಾಗಿ ಬೆಳೆಸಿ, ತಮ್ಮ ಕಲಾನೈಪುಣ್ಯತೆಯನ್ನು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರಗಳಿಗೆ ಪಸರಿಸಿದ ಕಂಬಾರ ಮೂಲತಃ ಹಳ್ಳಿಗಾಡಿನ ಮನುಷ್ಯ.

ಬೆಳಗಾವಿ ಜಿಲ್ಲೆಯ ಕಂಬಾರ ಬಸವಣ್ಣೆಪ್ಪ ಕಂಬಾರ, ಚೆನ್ನವ್ವ ದಂಪತಿಯ ಪುತ್ರರಾಗಿ ಜನಿಸಿದ ಚಂದ್ರಶೇಖರ ಕಂಬಾರ ಕಡುಬಡತನದ ಬೇಗೆಯಲ್ಲಿ ಮಿಂದೆದ್ದು ಬಂದ ಅಪ್ಪಟ ಚಿನ್ನ. ಹಳ್ಳಿಗಾಡಿನಿಂದ ಬಂದು ಇಷ್ಟು ಎತ್ತರಕ್ಕೆ ಏರಿರುವ ಕಂಬಾರ ಪ್ರಸ್ತುತ ಗ್ರಾಮೀಣ ಪ್ರತಿಭೆಗಳಿಗೆಲ್ಲ ಶ್ರೇಷ್ಟ ಮಾದರಿ.

ಡಾ.ಚಂದ್ರಶೇಖರ ಕಂಬಾರಗೆ ಸಂದಿರುವ ಜ್ಞಾನಪೀಠ ಪ್ರಶಸ್ತಿಯ ಸಂತಸವನ್ನು ಆರುವರೆಕೋಟಿ ಕನ್ನಡಿಗರೆಲ್ಲರೂ, ಸವಿಯಲು ಪ್ರಮುಖವಾಗಿ 2 ಕಾರಣಗಳಿವೆ.

13 ವರ್ಷಗಳ ಹಿಂದೆ (1998) ಗಿರೀಶ್ ಕಾನಾ೯ಡ೯ಗೆ ಈ ಪ್ರಶಸ್ತಿ ಲಭಿಸಿತ್ತು. ಇದೇ ಸಂದರ್ಭದಲ್ಲಿ ಭಾರತೀಯ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡಿಗರ ಸಂತಸವನ್ನು ಇಮ್ಮಡಿಗೊಳಿಸಿದೆ. ರಾಷ್ಟ್ರೀಯ ಭಾಷೆ ಹಿಂದಿಗೆ ಏಳು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದರೆ, ಆರುವರೆ ಕೋಟಿ ಜನತೆಯ ಮಾತೃಭಾಷೆ ಹಾಗೂ ಪ್ರಾದೇಶಿಕ ಭಾಷೆಯಾಗಿರುವ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳ ಮನ್ನಣೆ.

75ರ ಹರೆಯದ ಚಂದ್ರಶೇಖರ ಕಂಬಾರ ವಂಶ ಪಾರಂಪರ್ಯ ವೃತ್ತಿಯಾದ ಕಂಬಾರಿಕೆಯೊಂದಿಗೆ, ಸಾರಸ್ವತ ಲೋಕದ ಕಮ್ಮಾರಿಕೆಯನ್ನು ಅರ್ಥ ಪೂರ್ಣವಾಗಿ ನಿರ್ವಹಿಸಿದರು. ಪ್ರಾಥಮಿಕ ಶಿಕ್ಷಣವನ್ನು ಘೋಡಗೇರಿಯಲ್ಲಿ ಪೂರೈಸಿ, ಬೆಳಗಾವಿಯ ಲಿಂಗರಾಜು ಕಾಲೇಜಿನಿಂದ ಬಿ.ಎ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಎಂ.ಎ ಕನ್ನಡ ಪದವಿಯನ್ನು ಪಡೆದರು.

ಧಾರವಾಡದಲ್ಲಿ ಎಂ.ಎಂ ಕಲ್ಬುಗಿ೯, ಡಾ.ಸಿದ್ದ ಲಿಂಗ ಪಟ್ಟಣಶೆಟ್ಟಿ, ಆಂಗ್ಲಭಾಷಾ ಪ್ರಾದ್ಯಾಪಕ ಡಾ.ಗಿರಡ್ಡಿ ಗೋವಿಂದರಾಜರ್ ಕ್ಲಾಸ್ಮೇಟ್ಗಳಾಗಿ, ದೇಶಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು.

ಧಾರವಾಡದಲ್ಲಿ ಕಂಬಾರರಿಗೆ ಆದ ನಿರಾಸೆ, ಅವರ ಜೀವನದ ದಿಕ್ಕನ್ನೆ ಬದಲಿಸಿತು. ಕರ್ನಾಟಕ ಕಾಲೇಜಿನ ಉಪನ್ಯಾಸಕ ಹುದ್ದೆ, ತಮ್ಮ ಮತ್ತೊಬ್ಬ ಗೆಳೆಯನ ಪಾಲಾದಾಗ ಬೆಂಗಳೂರಿನತ್ತ ಪಯಣ ಬೆಳೆಸಿ, ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪನವರ ನೆಚ್ಚಿನ ಶಿಷ್ಯರಾದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾದ್ಯಾಪಕರಾಗಿ ನೇಮಕ ಗೊಂಡ ಕಂಬಾರರಿಗೆ ಬೆಂಗಳೂರಿನ ಬಹುಸಂಸ್ಕೃತಿ, ವಾತಾವರಣ ಬಹುಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು.

ಗಡಿನಾಡು ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಯಿಂದ ಬೆಳಗಾಂವ್, ಧಾರವಾಡ ಬೆಂಗಳೂರಿನ ವರೆಗೆ ಕಂಬಾರರು ನಡೆದು ಬಂದ ದಾರಿ ಕೇವಲ ಸಾಧನೆಯ ಮಾರ್ಗ ಮಾತ್ರ ಆಗದೇ, ಗ್ರಾಮೀಣ ಪ್ರದೇಶದ ಯುವಜನಾಂಗಕ್ಕೆ ರೋಮಂಚನಕಾರಿ ಅನುಭವದ ಪ್ರೇರಣಿಯನ್ನು ಸೃಷ್ಟಿಸುವ ಯಶಸ್ವಿ ಕಥಾನಾಯಕನ ಯಶೋಗಾಥೆಯಾಗಿದೆ.

ಬೆಂಗಳೂರು ವಿವಿ ಪ್ರಾದ್ಯಾಪಕರಾಗಿ, ಕನಾ೯ಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿವಿಯ ಪ್ರಪ್ರಥಮ ಕುಲಪತಿಯಾಗಿ, ಕನ್ನಡ ಜಾನಪದ ವಿಶ್ವಕೋಶದ ಸಂಪಾದಕರಾಗಿ, ನವದೆಹಲಿಯ ರಾಷ್ಟ್ರೀಯ ರಂಗಭೂಮಿಯ ಸಂಚಾಲಕರಾಗಿ, ರಾಜ್ಯದ ಜಾನಪದ, ಯಕ್ಷಗಾನ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಮೈಸೂರಿನ ರಂಗಾಯ ಣದ ಅಧ್ಯಕ್ಷರಾಗಿ ಅಮೇರಿಕಾದ ಚಿಕಾಗೋ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಡಾ.ಚಂದ್ರಶೇಖರ ಕಂಬಾರ ತಾವು ಕಾಯಕ ಮಾಡಿದ ಸಂಸ್ಥೆಗಳ ಗೌರವವನ್ನು ಆಗಸದೆತ್ತರಕ್ಕೆ ಹೆಚ್ಚಿಸಿದ್ದಾರೆ.

ಹೇಳತೇನಕೇಳ, ತಕರಾರಿನವರು, ಸಾವಿರದ ನೆರಳು ಹಾಗೂ ಬೆಳ್ಳಿಮೀನು ಶಿಷಿ೯ಕೆಯ ನಾಲ್ಕು ಕವನ ಸಂಕಲನಗಳು, ಜೈಸಿದ ನಾಯಕ, ಸಣ್ಣಕಥಾ ಸಂಕ ಲನ, ಜಿ.ಕೆ ಮಾಸ್ತಾರರ ಪ್ರಣಯ ಪ್ರಸಂಗ, ಕರಿಮಾ ಯಿ, ಸಿಂಗಾರೆವ್ವ ಮತ್ತು ಅರಮನೆ ಮುಂತಾದ ಕಾದಂಬರಿಗಳು, ಜೋಕುಮಾರ ಸ್ವಾಮಿ, ಚಾಳೇಶ, ಕಾಡುಕುದುರೆ, ನಾಯಿಕಥೆ, ಹರಕೆಯ ಕುರಿ, ನಾಯಿ ಕಥೆ, ಹರಕೆಯ ಕುರಿ, ಅಂಗಿಮ್ಯಾಲಂಗಿ, ಸಿರಿಸಂಪಿಗೆ, ಮಹಾಮಾಯಿ, ಶಿವರಾತ್ರಿಗಳಂತಹ ಹತ್ತಕ್ಕೂ ಹೆಚ್ಚು ನಾಟಕಗಳು. ಉತ್ತರಕನಾ೯ಟಕ ಜನಪದ ರಂಗ ಭೂಮಿ ಕುರಿತು ಮಹಾಪ್ರಭಂದವನ್ನು ಸೃಷ್ಠಿಸಿರುವ ಚಂದ್ರಶೇಖರ ಕಂಬಾರ ಸಾಹಿತ್ಯ ಕ್ಷೇತ್ರದ ನೈಜ ಆರಾಧಕ.

ಚಂದ್ರಶೇಖರ ಕಂಬಾರ ಮತ್ತು ಕನ್ನಡ ಬೆಳ್ಳಿತೆರೆಯ ಮಧ್ಯೆ ಅವಿನಾಭಾವ ಸಂಬಂಧ. ಕಂಬಾರರು ರಚಿಸಿ ರುವ ಕರಿಮಾಯಿ, ಕಾಡುಕುದುರೆ ಹಾಗೂ ಸಂಗೀತ ಚಲನಚಿತ್ರಗಳು ಜನಪ್ರಿಯವಾಗಿ ಅಪ್ಪಟ ಗ್ರಾಮೀಣ ಶೈಲಿಯ ನೈಜ ಜನಪದ ಪರಂಪರೆಯ ಪ್ರತಿಬಿಂಬಗಳಾಗಿವೆ. ಜಿ.ಕೆ ಮಾಸ್ತಾರರ ಪ್ರಣಯ ಪ್ರಸಂಗ ಕಿರುತೆರೆಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಸೂಟುಬೂಟಿನಲ್ಲಿ ಮಿರ್ರನೇ ಮಿಂಚುವ ಕಂಬಾರ, ಕಚ್ಚೆಪಂಜೆ ಧರಿಸಿ ತಲೆಗೆ ರುಮಾಲು ಸುತ್ತಿಕೊಂಡು ತಮ್ಮ ನೆಚ್ಚಿನ ಜನಪದ ಗೀತೆಯನ್ನು ಹಾಡಲಾ ರಂಭಿಸಿದರೆ, ಸಭೆ ಮತ್ತು ಸಭಾಂಗಣವನ್ನೆಲ್ಲ ಮರೆತು ಇಡೀ ಪ್ರೇಕ್ಷಕವರ್ಗವನ್ನು ಸಮ್ಮೋಹಿನಿ ಮೋಡಿ ಗೊಳಪಡಿಸುತ್ತಾರೆ. ಕಂಬಾರರ ಹಾಡುಗಾರಿಕೆಯನ್ನು ಆಲಿಸುವುದು ಜೀವನದ ಒಂದು ರೋಮಾಂಚ ನಕಾರಿ ಅನುಭವವೆಂದು ಹಳೆಯ ಸಂಗಾತಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಅವರೇ ರಚಿಸಿದ ಒಂದು ಜನಪ್ರಿಯಗೀತೆ ಹೋರಾಟದ ಕಿಚ್ಚನ್ನು ಉದ್ದೀಪನಗೊಳಿಸುತ್ತದೆ. ಮರೆತೆನೆಂದರೆ ಮರೆಯಲಿ ಹ್ಯಾಂಗ್ ಎಂಬ ಹಾಡು ಮಾವೋತ್ಸೇತುಂಗ್ ಕುರಿತು ಬರೆಯಲಾಗಿದೆ.

ಸಾಹಿತ್ಯ ವಲಯ, ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಕಂಬಾರರು ತಮ್ಮ ಸ್ವರಚಿತ ಕವನಗಳನ್ನು ಓದುವದಕ್ಕಿಂತ ಸುಶ್ರಾವ್ಯವಾಗಿ ಹಾಡುವ ಸದಭಿರುಚಿಯನ್ನೇ ಪ್ರೇಕ್ಷಕ ವರ್ಗ ಇಷ್ಟಪಡುತ್ತದೆ. ಕನಾ೯ಟಕ ಜಾನಪದ ಸಿರಿಸಂಪಿಗೆಯ ಸಿರಿಗಂಧವನ್ನು ತಮ್ಮ ಕಾವ್ಯದು ದ್ದಕ್ಕೂ ಪ್ರವಹಿಸುವ ಕಂಬಾರರ ಜಾನಪದ ಆಸಕ್ತಿ ಕನ್ನಡ ಸಾಹಿತ್ಯದ ಪರಂಪರೆಗೆ ಸಂದ ವಿಶಿಷ್ಟ ಗೌರವವಾಗಿದೆ.

ಭಾರತದ ಪ್ರಮುಖ ಪ್ರಾದೇಶಿಕ ಭಾಷೆ ಯಾಗಿರುವ ಕನ್ನಡಕ್ಕೆ ಐದು ಸಾವಿರ ವರ್ಷಗಳ ಇತಿಹಾಸ, ಮೂರು ಸಾವಿರ ವರ್ಷಗಳ ಸಾಂಸ್ಕೃತಿಕ ಪರಂಪರೆ, ಒಂದು ಸಾವಿರ ವರ್ಷಗಳ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಶ್ರೀಮಂತ ಭಾಷೆ ಯಾಗಿದೆ.

44ವರ್ಷಗಳ ಹಿಂದೆ ಶುಭಾರಂಭಗೊಂಡ (1967) ಪ್ರಪ್ರಥಮ ಜ್ಞಾನಪೀಠ ಪರಂಪರೆಗೆ ನಾಂದಿ ಹಾಡಿದವರು ರಾಷ್ಟ್ರಕವಿ ಕುವೆಂಪು. ಮಲೆನಾಡಿನ ಜೀವನ ಸಂಸ್ಕೃತಿಯನ್ನು ತಮ್ಮ ಸಕಲ ಸಾಹಿತ್ಯ ಕೃತಿಗಳುದ್ದಕ್ಕೂ ಸಾರುವ ಕುವೆಂಪುರವರ ಮಹಾ ಕಾವ್ಯ ಶ್ರೀರಾಮಾಯಣ ದರ್ಶನಂ ಕೃತಿಗೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

2ನೇ ಜ್ಞಾನಪೀಠ ಪ್ರಶಸ್ತಿ ಆರು ವರ್ಷಗಳ ನಂತರ (1973) ದ.ರಾ.ಬೇಂದ್ರೆಯವರ ಮಹಾ ಕಾವ್ಯ ನಾಕು ತಂತಿಗೆ ಲಭಿಸಿತು. 3ನೇ ಜ್ಞಾನಪೀಠ ಪ್ರಶಸ್ತಿ ಕಡಲ ತೀರದ ಭಾರ್ಗವರೆಂದೆ ಖ್ಯಾತಿ ಗಳಿಸಿದ ಡಾ.ಶಿವರಾಮ ಕಾರಂತರ ಜನಪ್ರಿಯ ಕಾದಂಬರಿ ಮೂಕಜ್ಜಿಯ ಕನಸುಗಳು (1977) ಕೃತಿಯ ಪಾಲಾಯಿತು. 4ನೇಯ ಜ್ಞಾನಪೀಠ ಪ್ರಶಸ್ತಿಯೂ ಕನ್ನಡದ ಆಸ್ತಿ ಎಂದೇ ಪರಿಗಣಿಸಲ್ಪಟ್ಟ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ (1983) ಕೃತಿ ಪಡೆದುಕೊಂಡಿತು.

7ವರ್ಷಗಳ ಅಂತರದಲ್ಲಿ (1990) ಹಿರಿಯ ತತ್ವಜ್ಞಾನಿ, ಪ್ರಾದ್ಯಾಪಕ ಡಾ.ವಿ.ಕೃ ಗೋಕಾಕರ "ಭಾರತ ಸಿಂಧು ರಶ್ಮೀ" ಪಡೆದುಕೊಂಡಿತು. ಮತ್ತೇರಡು ಜ್ಞಾನಪೀಠ ಪ್ರಶಸ್ತಿಗಳನ್ನು ಸಮಗ್ರ ಸಾಹಿತ್ಯಕ್ಕಾಗಿ ಡಾ.ಯು.ಆರ್ ಅನಂತಮೂರ್ತಿ (1994) ಹಾಗೂ ರಂಗಕಮಿ೯, ಸಾಹಿತಿ ಗಿರೀಶ್ ಕಾನಾ೯ಡ್ ಮುಡಿಗೇರಿದವು.

ಪ್ರಸ್ತುತ 8ನೇ ಜ್ಞಾನಪೀಠ ಪ್ರಶಸ್ತಿಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ.ಚಂದ್ರಶೇಖರ ಕಂಬಾರರು ವರಕವಿ ದ.ರಾ ಬೇಂದ್ರೆಯವರ ಕಾವ್ಯ ಸತ್ವದೊಂದಿಗೆ ಜಾನಪದ ಸೊಗಡನ್ನು ಮೈಗೂಡಿಸಿ ಕೊಂಡಿದ್ದಾರೆ. ಮುನ್ನಡೆದಿರುವ ಕನ್ನಡ ಕುಲಕೋಟಿಯ ಸರ್ವಶ್ರೇಷ್ಠ ಸಾಹಿತಿಗಳ ಹೆಜ್ಜೆಯಲ್ಲಿ ಹೊಸ ಬೆಳಕನ್ನು ಕಾಣುತ್ತಿರುವ ಡಾ.ಚಂದ್ರಶೇಖರ ಕಂಬಾರರು ವೈವಿದ್ಯಮಯ ಸಾಹಿತ್ಯದಲ್ಲಿ ಹೊಸತನದೊಂದಿಗೆ ತಾಜಾತನವನ್ನು ಕಾಣಲು ಸಾಧ್ಯ.

ಡಾ.ಚಂದ್ರಶೇಖರ ಕಂಬಾರರ 8ನೇ ಜ್ಞಾನಪೀಠ ಪ್ರಶಸ್ತಿಯನ್ನು ಕನಾ೯ಟಕದ ಜನತೆ ತುಂಬುಹೃದಯದಿಂದ ಸ್ವಾಗತಿಸುತ್ತಿರುವ ಸಂದರ್ಭದಲ್ಲಿ ಉತ್ತರಕನಾ೯ಟಕ ಜನತೆ ವಿಶಿಷ್ಠ ರೀತಿಯಲ್ಲಿ ಆನಂದಿ ಸುತ್ತಿದ್ದಾರೆ. ಇಲಿಯವರೆಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಲೆನಾಡಿನ ಸಾಹಿತಿಗಳಾದ ಕುವೆಂಪು, ಕಾರಂತ, ಮಾಸ್ತಿ ಹಾಗು ಅನಂತಮೂರ್ತಿಯವರಿಗೆ ಸಂದಿದ್ದರೆ, ಉಳಿದ ಮೂರು ಪ್ರಶಸ್ತಿಗಳನ್ನು ಹಾವೇರಿ ಜಿಲ್ಲೆಯ ಸವಣೂರಿನ ಡಾ.ವಿ.ಕೃ ಗೋಕಾಕ, ಧಾರವಾಡದ ದ.ರಾ ಬೇಂದ್ರೆ ಹಾಗೂ ಗಿರೀಶ್ ಕಾನಾ೯ಡಗೆ ಲಭಿಸಿದೆ. ಈ ಬಾರಿ ಚಂದ್ರಶೇಖರ ಕಂಬಾರರ ಜ್ಞಾನಪೀಠ ಬಯಲು ಸೀಮೆಯ ಗ್ರಾಮೀಣ ಜನರ ಸಂತಸವನ್ನು ಇಮ್ಮಡಿಗೊಳಿಸಿದೆ.

ಜ್ಞಾನಪೀಠದ ಗೌರವದೊಂದಿಗೆ ಚಂದ್ರಶೇಖರ ಕಂಬಾರ ಭಾರತೀಯ ರಾಷ್ಟ್ರೀಯ ಭಾಷೆಯೊಂದಿಗೆ ಇತರ ಸಕಲ ಪ್ರಾದೇಶಿಕಗಳನ್ನು ಮೀರಿ ಹೊಸ ವಿನೂತನ ದಾಖಲೆಯನ್ನು ನಿಮರ್ಿಸಿದ ಶುಭ ಸಂದರ್ಭದಲ್ಲಿ ಆರುವರೆ ಕೋಟಿ ಕನ್ನಡಿಗರ ಶುಭಕಾಮನೆಗಳು.

ಅಯ್ಯಪ್ಪ ತುಕ್ಕಾಯಿ, ಸಾಹಿತಿಗಳು ರಾಯಚೂರು.

ನಾನು ನಿಮ್ಮ ಮಿತ್ರ ನನ್ನನೇಕೆ ಸಾಯಿಸುತ್ತೀರಿ.. Dr.Mavinkatti

ಉರಗ ಜಾತಿಗೆ ಸೇರಿದ ಪ್ರಾಣಿಯೊಂದನ್ನು ನಾವು ನೋಡಿದರೆ ಸಾಕು, ಅದನ್ನು ಹೊಡೆದು ಸಾಯಿಸುತ್ತೇವೆ.

ಊಸರವಳ್ಳಿ ಜೀವಂತವಿರುವಾಗ ಯಾರೊಬ್ಬರಿಗೂ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ, ಜನಸಾಮಾನ್ಯರು ಮಾತ್ರ ಅದನ್ನು ಕಂಡಲ್ಲಿಯೇ ಸಾಯಿಸಿಯೇ ಮುಂದೆ ಹೋಗುತ್ತಾರೆ.

ಆ ಪ್ರಾಣಿ ಹಾವು ಎಂದರೆ, ನಿಮ್ಮ ಊಹೆ ಖಂಡಿತ ತಪ್ಪಾಗುತ್ತದೆ.

ಇಲ್ಲಿ ನಾವುಗಳು ವಿವರಣೆ ನೀಡಬಯಸುತ್ತಿರುವ ಪ್ರಾಣಿ ಮೊದಲಿಗೆ ಹೇಳಿದಂತೆ ಉರಗ ಜಾತಿಗೆ ಸೇರಿರುವ ಗೋಸುಂಬಿ "ಊಸರವಳ್ಳಿ".

ಒಬ್ಬ ವ್ಯಕ್ತಿ ಮೋಸ ಮಾಡಿದಾಗ, ಆತನನ್ನು ನಾವುಗಳು ಗೋಸುಂಬಿಗೆ ಹೋಲಿಸುತ್ತೇವೆ. ಅಂತಹ ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿದರೆ ಊಸರವಳ್ಳಿಯನ್ನು ಯಾವ ಸಂದರ್ಭದಲ್ಲಿ, ಯಾರೊಬ್ಬರು ನೆನಪಿಸುವುದಿಲ್ಲ.

ಊಸರವಳ್ಳಿಯ ಕುರಿತು ಒಂದಿಷ್ಟು...

* ಪರಿಸರಕ್ಕೆ ತಕ್ಕಂತೆ, ವೈರಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಬಣ್ಣ ಬದಲಿಸುವ ಪ್ರಾಣಿ.

* ಸಾವಯುವ ಕೃಷಿಕರಿಗೆ ಬಹುಪಯೋಗಿ ಯಾಗಿರುವ ಊಸರವಳ್ಳಿ, ಹೊಲ (ರಸಾಯನಿಕ ಗೊಬ್ಬರಗಳನ್ನು ಹಾಕಿದ ಹೊಲಗದ್ದೆಗಳನ್ನು ಹೊರತುಪಡಿಸಿ) ಗಳಲ್ಲಿ ಬೆಳೆನಾಶ ಮಾಡುವಂತಹ ಕ್ರಿಮಿಕೀಟಗಳನ್ನು ಸೇವಿಸಿ ಬದುಕುತ್ತದೆ.

* ಬಹಳಷ್ಟು ನಿಧಾನವಾಗಿ ಈ ಪ್ರಾಣಿ ಚಲಿಸುತ್ತದೆ ಮತ್ತು ಇದಕ್ಕೆ ಹರಿತವಾದ ಹಲ್ಲುಗಳಿರುವುದಿಲ್ಲ. ಅಂದಮೇಲೆ ಇನ್ನೊಬ್ಬರಿಗೆ ಕಚ್ಚುವ ಪ್ರಶ್ನೆಯೇ ಬರುವುದಿಲ್ಲ. ಮರಗಿಡಗಳನ್ನು ಹತ್ತಲು ಸಣ್ಣದಾದ ಉಗುರುಗಳು ಮಾತ್ರ ಇರುತ್ತವೆ.

ಊಸರವಳ್ಳಿಗಿಂತ ಹಾವು ಎಷ್ಟೋ ವಿಷಕಾರಿ ಇದ್ದರೂ ಜನಮಾತ್ರ ಹಾವಿಗಿಂತ ಊಸರವಳ್ಳಿಯನ್ನೇ ಹೊಡೆದು ಸಾಯಿಸಿತ್ತಿರುವುದು ವಿಷಾದನೀಯ. ಮೂಡನಂಬಿಕೆಯ ಪರಮಾವಧಿಯಡಿ ಇದು ಜನಸಾಮಾನ್ಯರಿಗೆ ಬಲಿಯಾಗುತ್ತಿರುವುದು ಮಾತ್ರ ದುರಂತ.

ಮಾನವನು ಊಸರವಳ್ಳಿಯನ್ನು ಸತ್ತ ನಂತರ ಇನ್ನೊಬ್ಬರಿಗೆ ಹಾನಿ ಮಾಡಲು ಬಳಸುತ್ತಾನೆ. ಆದರೆ, ಈ ಪ್ರಾಣಿ ಜೀವಂತವಿರುವಾಗ ಯಾರೊಬ್ಬರಿಗೂ ಹಾನಿಯನ್ನುಂಟು ಮಾಡುವುದಿಲ್ಲ.

ಪ್ರಕೃತಿಯಲ್ಲಿ ಊಸರವಳ್ಳಿಯ ಸಂತತಿ ಕಡಿಮೆಯಾಗುತ್ತಿದೆ. ಅಪರೂಪಕ್ಕೊಮ್ಮೆ ಈ ಪ್ರಾಣಿ ಜನಸಾಮಾನ್ಯರಿಗೆ ಕಣ್ಣಿಗೆ ಬೀಳುತ್ತಿರುವದರಿಂದ ಇದರ ಮೇಲೆ ಹಲವು ಊಹಾಪೋಹಗಳು ಸೃಷ್ಟಿಯಾಗಿವೆ.

ಇದರ ನೆರಳು, ಉಸಿರು ಬಿದ್ದರೆ, ಮನುಷ್ಯ ಸಾಯುತ್ತಾನೆಂಬ ನಂಬಿಕೆ ಜನರಲ್ಲಿ ಉಳಿದುಕೊಂಡಿದೆ. ಅದನ್ನು ಹುಸಿಗೊಳಿಸಲೆಂದೆ, ಚಿತ್ರದಲ್ಲಿ ಖ್ಯಾತ ಅರವಳಿಕೆ ತಜ್ಞರಾದ ಡಾ.ರವೀಂದ್ರನಾಥ ಮಾವಿನಕಟ್ಟಿಯವರು ಊಸರವಳ್ಳಿಯನ್ನು ಕೈಯಲ್ಲಿ ಹಿಡಿದಿದ್ದಾರೆ.

ಜನಸಾಮಾನ್ಯರಿಗೆ ಊಸರವಳ್ಳಿಯ ಕುರಿತು ಸರಿಯಾದ ಮಾಹಿತಿ ಇಲ್ಲದಿದ್ದಕ್ಕೆ, ಅದರ ಸಂತತಿಯೂ ಕೂಡ ನಶಿಸಿ ಹೋಗುತ್ತಿದೆ.

ಊಸರವಳ್ಳಿಯಲ್ಲಿ ನಾನಾ ಪ್ರಭೇದಗಳಿದ್ದು, ಆಯಾ ಪ್ರಭೇದಗಳ ಊಸರವಳ್ಳಿಗಳು ಮಾತ್ರ ಕೆಲವು ಬಣ್ಣವನ್ನು ಬದಲಾಯಿಸುತ್ತವೆ.

ಇದರ ಎರಡು ಕಣ್ಣುಗಳು ಬೇರೆ ಬೇರೆ ದೃಶ್ಯಗಳನ್ನು ನೋಡುತ್ತವೆ. ಅದರ ಕಾಲುಗಳು ಗಿಳಿಯ ಪಾದಗಳನ್ನು ಹೋಲುತ್ತವೆ. ಬೇರೆ ಪ್ರಾಣಿಗಳಂತೆ ಇದು ವೇಗವಾಗಿ ಓಡುವುದಿಲ್ಲ. ಊಸರವಳ್ಳಿಯ ಮೆದುಳಿನಿಂದ ಸಂದೇಶ ಬಂದಾಗ ಮಾತ್ರ ಅದು ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸಿ, ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಇದರ ಚರ್ಮವು ಪಾರದರ್ಶಕವಾಗಿದ್ದು, ಈ ಚರ್ಮದ ಕೆಳಬಾಗದಲ್ಲಿ ಬಣ್ಣವನ್ನು ಬದಲಾಯಿಸುವ ಜೀವಕೋಶಗಳಿರುತ್ತವೆ. ಈ ಜೀವಕೋಶಗಳ ಆಕೃತಿ ಹೆಚ್ಚುಕಡಿಮೆ ಆಗುವುದರಿಂದ ತನ್ನಿಂದತಾನೇ ಬಣ್ಣ ಬದಲಾಯಿಸುತ್ತದೆ.

ಹೀಗೂ ಉಂಟೇ...

ಹೀಗೂ ಉಂಟೇ...


ಮೊಬೈಲು ರಿಂಗಣಿಸಿದಾಗ ಮೇಜಿನ ಮೇಲಿದ್ದ ಫೋನನ್ನು ಎತ್ತಿಕೊಳ್ಳಲು ಅಡಿಗೆ ಮನೆ ಯಿಂದ ನಾ ಹೆಜ್ಜೆ ಹಾಕಿದೆ. ಮೊಬೈಲನ್ನು ನೋಡಿ ದಾಗ ಯಾವುದೋ ಅನ್ ನೋನ್ ನಂಬರು. ಕರೆಯನ್ನು ಸ್ವೀಕರಿಸಿ ನಾ ಹಲೋ ಎಂದಾಗ, ದಿವ್ಯಾ ಭಾರತೀ ಏನಮ್ಮಾ? ಎಂದು ಆ ಕಡೆ ಯಿಂದ ಧ್ವನಿಯೊಂದು ಕೇಳಿ ಬಂತು. ಪರಿಚಿ ತವಾದ ಧ್ವನಿಯೇ ಎಂದು ಅನಿಸಿದರೂ ಯಾರ ದೆಂದು ಗೊತ್ತಾಗಲೊಲ್ಲದು.

ಹೌದು ನಾನೇ ದಿವ್ಯಾ. ನೀವು ಯಾರು ಎಂದು ಗೊತ್ತಾಗಲಿಲ್ಲ ಎಂದೆ. ನಾನಮ್ಮಾ, ನಿಮ್ಮ ಅಂಕಲ್ ರವಿ ಶಂಕರ್. ನಿಮ್ಮ ತಂದೆಯ ಪಕ್ಕದ ಮನೆಯ ಅಂಕಲ್ ಕಣಮ್ಮಾ. ಗೊತ್ತಾಯಿ ತೇನಮ್ಮಾ? ಎಂದರು ಆ ಕಡೆಯಿಂದ. ಗೊತ್ತಾ ಯಿತು ಅಂಕಲ್. ಸಾರಿ ಅಂಕಲ್, ನಿಮ್ಮ ಧ್ವನಿ ತಕ್ಷಣ ಗೊತ್ತಾಗಲಿಲ್ಲ. ನಮಸ್ಕಾರ ಅಂಕಲ್. ಹೇಗಿ ದ್ದೀರಿ? ಆಂಟಿ ಹೇಗಿದ್ದಾರೆ? ಬಹಳ ದಿನಗಳ ನಂತರ ಫೋನು ಮಾಡಿದ್ದೀರಿ. ವಿಶೇಷವೇನು ಅಂಕಲ್? ಎಂದೆ.

ರವಿ ಶಂಕರ್ ಅಂಕಲ್ ಊರಲ್ಲಿ ನಮ್ಮ ಮನೆಯ ಪಕ್ಕದ ಮನೆಯವರು. ಮುಖ್ಯಗುರು ಗಳು ಎಂದು ಸೇವೆಯಿಂದ ನಿವೃತ್ತಿಯಾಗಿ ಎರಡು ವರ್ಷಗಳಾಗಿವೆ. ಅಪ್ಪಾಜಿಗಿಂತ ಎರಡು ಮೂರು ವರ್ಷ ಚಿಕ್ಕವರಿರಬೇಕು. ಅವರೂ, ನಾವೂ ಒಂದೇ ಮನೆಯವರಂತೆಯೇ ಇದ್ದೇವೆ.

ಅಂಥಹ ವಿಶೇಷ ವಿಷಯವೇನಿಲ್ಲಮ್ಮಾ. ನಾಳೆ ರವಿವಾರವಲ್ಲವಾ? ನೀನು ಊರಲ್ಲಿಯೇ ಇರುವಿಯಾ ಹೇಗೆ? ಏಕೆಂದರೆ ಇತ್ತೀಚಿಗೆ ಮದುವೆಯಾವಳು ನೀನು. ಎಷ್ಟಾದರೂ ಹೊಸ ಜೋಡಿ ನಿಮ್ಮದು. ನೀನು, ನಿನ್ನ ಗಂಡ ಜಮ್ಮಂತ ಎಲ್ಲಾದರೂ ಸುತ್ತಾಡುವ ಪ್ರೋಗ್ರ್ಯಾಂ ಏನಾದರೂ ಹಾಕಿಕೊಂಡಿರುವಿಯಾ ಹೇಗೆ? ಅಂತಹದ್ದೇನೂ ಪ್ರೋಗ್ರ್ಯಾಂ ಇಲ್ಲದೇ ನೀನು ಊರಲ್ಲಿಯೇ ಇರುವುದಾದರೆ ನಾ ನಾಳೆ ನಿಮ್ಮಲ್ಲಿಗೆ ಬರಬೇ ಕೆಂದಿರುವೆ. ಜರೂರಿಯಾದ ವಿಷಯವೊಂದರ ಬಗ್ಗೆ ನಿನ್ನ ಜೊತೆ ಮಾತಾಡುವುದಿದೆ. ನೀ ಚೆನ್ನಾಗಿರುವಿ ತಾನೆ? ಎಂದಿದ್ದರು ಅಂಕಲ್.

ಅಂಕಲ್, ನಾವು ಊರಲ್ಲಿಯೇ ಇರುತ್ತೇವೆ. ನೀವು ದಯವಿಟ್ಟು ಬನ್ನಿರಿ. ನೀವು ಬರುತ್ತೀರಿ ಎನ್ನುವುದನ್ನು ಕೇಳುತ್ತಿರುವುದಕ್ಕೇ ನನಗೆ ಬಹಳ ಸಂತೋಷವೆನಿಸುತ್ತಿದೆ. ಬರುವಾಗ ಜೊತೆಯಲ್ಲಿ ಆಂಟಿಯನ್ನೂ ಕರೆದುಕೊಂಡು ಬನ್ನಿರಿ. ಆಂಟಿಯನ್ನು ನೋಡದೇ ಬಹಳ ದಿನಗಳಾಗಿವೆ. ನಿಮ್ಮ ಆಶೀವರ್ಾದದಿಂದ ನಾವು ಇಲ್ಲಿ ಚೆನ್ನಾಗಿ ದ್ದೇವೆ. ಆಂಟಿ, ಅಪ್ಪ, ಅಮ್ಮ ಹೇಗಿರುವರು? ನಾ ಕೇಳಿದೆ. ನನಗೆ ಒಂದು ರೀತಿಯ ಖುಷಿ ಯಾಗಿತ್ತು. ಅಂಕಲ್ ಜೊತೆ ಒಂದು ರೀತಿಯ ಅವಿನಾಭಾವ ಸಂಬಂಧ ಬೆಳೆದು ಬಂದಿತ್ತು. ಅವರು ನನಗೆ ಖಾಸಾ ಚಿಕ್ಕಪ್ಪನಂತೆಯೇ ಇದ್ದರು ನಾ ಚಿಕ್ಕವಳಾಗಿದ್ದಾಗಿನಿಂದ.

ಆಯಿತಮ್ಮಾ ಹಾಗಾದರೆ ನಾ ನಾಳೆ ಬೆಳಿಗ್ಗೆ 11 ಗಂಟೆಯ ಸುಮಾರು ನಿಮ್ಮನೆಲ್ಲಿರುತ್ತೇನೆ. ಬಂದಾಗ ಅಲ್ಲಿಯೇ ವಿವರವಾಗಿ ಮಾತಾ ಡೋಣ ಎನ್ನುತ್ತಾ ಅಂಕಲ್ ಫೋನು ಕಟ್ ಮಾಡಿದ್ದರು. ನಮ್ಮ ಊರಿನಿಂದ ಇಲ್ಲಿಗೆ ಒಂದು ತಾಸಿನ ಪ್ರಯಾಣ ಅಷ್ಟೆ. ಇಲ್ಲಿನ ಬಸ್ ನಿಲ್ದಾಣಕ್ಕೆ ಬಂದ ಕೂಡಲೇ ಒಂದು ರಿಂಗ್ ಕೊಟ್ಟರೆ ಬಸ್ ನಿಲ್ದಾಣಕ್ಕೆ ಬಂದು ಕರೆದುಕೊಂಡು ಬರುವುದಾಗಿ ತಿಳಿಸಿದೆ.

ರವಿ ಶಂಕರ್ ಅಂಕಲ್ ಬರುತ್ತಿರುವುದಕ್ಕೆ ಮನಸ್ಸು ಒಂದೆಡೆ ಗರಿಗೆದರಲು ತೊಡಗಿದ್ದರೆ, ಇನ್ನೊಂದೆಡೆ, ಜರೂರಿಯಾದ ವಿಷಯವೊಂದರ ಬಗ್ಗೆ ಮಾತಾಡುವುದಿದೆ ಎಂಬ ಅವರ ಮಾತಿನ ಒಕ್ಕಣೆಯಿಂದ ಒಂದು ರೀತಿಯ ಆತಂಕ ಶುರು ವಾಗಿತ್ತು ಮನದಲ್ಲಿ. ಯಾವ ಜರೂರಿ ಮಾತೋ ಏನೋ ಎಂದು ಕುತೂಹಲಕ್ಕೆ ಎಡೆ ಮಾಡಿಕೊ ಟ್ಟಿದ್ದರು ಅಂಕಲ್. ಮನಸ್ಸು ಮಂಥನದಲ್ಲಿ ಮುಳು ಗಿತ್ತು.

ಮೇಡಂ ಗಾಢವಾದ ಯೋಚನೆಯಲ್ಲಿದ್ದ ಹಾಗಿದೆ? ಎಂದು ದಿಗಂತ್ ಹೇಳಿದಾಗಲೇ ನಾ ಯೋಚನಾ ಲಹರಿಯಿಂದ ಹೊರ ಬಂದಿದ್ದೆ. ಟಿ.ವಿ. ನೋಡುತ್ತಲೇ, ನನ್ನ ಮತ್ತು ಅಂಕಲ್ ನಡುವಿನ ಫೋನಿನಲ್ಲಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ದಿಗಂತನಿಗೆ ನಾ ಮಾತಿನ ವಿವರ ಹೇಳುತ್ತಾ, ಅವನ ಪಕ್ಕದಲ್ಲಿ ಕುಳಿತೆ. ದಿಗಂತ್ ನನ್ನ ಭುಜದ ಮೇಲೆ ಕೈ ಹಾಕುತ್ತಾ, ಯಾಕೋ ನೀ ಸ್ವಲ್ಪ ಡಿಪ್ರೆಸ್ ಆದ ಹಾಗೆ ಕಾಣುತ್ತಿರುವಿ ಎಂದ. ಹಾಗೇನೂ ಇಲ್ಲಪ್ಪಾ ಎಂದೆನ್ನುತ್ತಾ ಅವನ ಕುತ್ತಿಗೆ ಬಳಸಿದೆ ವಿಷಯ ಮರೆಸಲು.

ಮರುದಿನ ಬೆಳಿಗ್ಗೆ 11 ಗಂಟೆಯ ಸುಮಾರು ರವಿ ಶಂಕರ್ ಅಂಕಲ್ರ ಫೊನು ಬಂತು. ದಿಗಂತ್ ಮತ್ತು ನಾ ಇಬ್ಬರೂ ಬಸ್ ನಿಲ್ದಾಣಕ್ಕೆ ಹೊರಟೆವು. ಅವ ತನ್ನ ಹೀರೋ ಹೊಂಡಾ ಗಾಡಿಯಲ್ಲಿ, ನಾ ನನ್ನ ಸ್ಕೂಟಿಯಲ್ಲಿ. ಆಂಟಿ ಸಹ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ನನಗೆ ಅಲ್ಲಿ ಅಂಕಲ್ ಒಬ್ಬ ರನ್ನೇ ಕಂಡು ಕೊಂಚ ನಿರಾಸೆಯಾಗಿದ್ದುದರಿಂದ ಮನದಾಳದ ನೋವನ್ನು ಅವರೊಂದಿಗೆ ಹಂಚಿ ಕೊಂಡಾಗ, ಇಲ್ಲಮ್ಮಾ, ಅವಳಿಗೆ ಓಡಾಟ ಅಂದರೇ ಅಲಜರ್ಿ ವಯಸ್ಸಿನ ಪ್ರಭಾವದಿಂದ ಬೇಗ ಆಯಾಸ ಪಟ್ಟುಕೊಳ್ಳುತ್ತಾಳೆ. ನೀ ಹೇಳಿದ್ದನ್ನು ನಾ ಆಕೆಗೆ ತಿಳಿಸಿದರೂ, ಆಕೆ ಒಲ್ಲೆ ಎಂದಳು. ನೀನೇನೂ ಬೇಸರ ಮಾಡಿಕೊಳ್ಳಬೇಡಮ್ಮಾ ಎಂದು ಅವರು ಸಮಾಧಾನ ಮಾಡಿದರು. ದಿಗಂತ್ನ ಪರಿಚಯ ಮಾಡಿದೆ ಅಂಕಲ್ಗೆ. ಅಂಕಲ್ರನ್ನು ತನ್ನ ಗಾಡಿಯಲ್ಲಿ ಹತ್ತಿಸಿಕೊಂಡ ದಿಗಂತ್. ಅವರ ಹಿಂದೆ ನಾ ನನ್ನ ಗಾಡಿಯಲ್ಲಿ ಹೊರಟೆ.

ಮನೆಗೆ ಬರುತ್ತಲೇ ಅಂಕಲ್ಗೆ ಫ್ರೆಷ್ ಆಗಲು ವ್ಯವಸ್ಥೆ ಮಾಡಿದೆ. ಟಿಫಿನ್ ಮಾಡಲು ಒತ್ತಾಯಿ ಸಿದರೆ ಬೇಡವೆಂದರು. ಊರಿನಲ್ಲಿಯೇ ಮುಗಿಸಿ ಕೊಂಡು ಬಂದಿರುವುದಾಗಿ ತಿಳಿಸಿದುದರಿಂದ ನಾ ಚಹವನ್ನಷ್ಟೇ ಮಾಡಿಕೊಟ್ಟು ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಮಿತ ಆಹಾರ, ಚಟುವಟಿಕೆಯ ಜೀವನದ ಶೈಲಿಯಿಂದ 62-63ರ ರವಿ ಶಂಕರ್ ಅಂಕಲ್ 50ರ ವಯಸ್ಸಿನವರಂತೆ ಕಾಣುತ್ತಿದ್ದರು. ಚಹ ಹೀರುತ್ತಾ ಮಾತಿಗಿಳಿದರು ಅಂಕಲ್. ವಿಷಯ ತಿಳಿದುಕೊಳ್ಳಬೇಕೆಂಬ ಕುತೂಹಲ, ತವಕ ನನಗಿದ್ದುದರಿಂದ ಮನೆಗೆ ಬಂದ ಕೂಡಲೇ ಪ್ರಸ್ತಾ ಪಿಸಬೇಕೆಂದಾಕೆ ಸಂಯಮದಿಂದ ಸುಮ್ಮನಿದ್ದೆ ಅವರೇ ಪ್ರಾರಂಭಿಸಲೆಂದು.

ಮೊದಲನೆಯದಾಗಿ, ನಿಮ್ಮ ಜೋಡಿ ನೋಡಿ ನನಗೆ ತುಂಬಾ ಸಂತೋಷವಾಗಿದೆ. ನನ್ನ ಅಭಿನಂದನೆಗಳು ಇಬ್ಬರಿಗೂ. ಎರಡನೆಯದಾಗಿ ಈಗ ನಿನ್ನ ತಂದೆಯವರ ರಾಯಭಾರಿಯಾಗಿ ನಾ ಇಲ್ಲಿಗೆ ಬಂದಿದ್ದೇನೆ ಎಂದು ನನ್ನ ನೋಡುತ್ತಾ ಹೇಳಿದ ಅಂಕಲ್ ಸ್ವಲ್ಪ ಹೊತ್ತು ಮೌನಿಗಳಾದರು. ಅಂಕಲ್ ಅಂತಮರ್ುಖಿಯಾದುದನ್ನು ಗಮನಿಸಿದ ನಾನು ಮತ್ತು ದಿಗಂತ್ ಮುಖ ಮುಖ ನೋಡಿ ಕೊಂಡೆವು. ಮೌನವನ್ನು ಮುರಿದು ನಾನೇ, ಅಂಕಲ್ ಅದೇನಿದ್ದರೂ ಹೇಳಿ ಬಿಡಿ. ಎಂಥಹ ಪರಸ್ಥಿತಿ ಬಂದರೂ ಅದನ್ನು ಎದುರಿಸಲು ನಾವಿಬ್ಬರೂ ಸನ್ನದ್ಧರಾಗಿದ್ದೇವೆ ಎಂದೆ.

ನೋಡಮ್ಮಾ, ಭಾರತೀ, ವಿಷಯವೇನು ಅಂಥಹ ಗಂಭೀರವಾದುದು ಅಲ್ಲ ನಿಜವಾಗಿಯೂ. ನೀ ಸಣ್ಣವಳಿದ್ದಾಗಿನಿಂದಲೂ ನಿನ್ನನ್ನು ನಾ ನೋಡಿರುವೆ. ನಿನ್ನ ಮನಸ್ಸು ಎಂಥಹದೆಂದು ನಾ ಬಲ್ಲೆ. ನಿನ್ನ ತಂದೆ ಹೇಳಿ ಕಳುಹಿಸಿರುವ ವಿಷಯ ವ್ಯವಹಾರಿಕವಾಗಿದ್ದರೂ, ವಿಶಾಲ ಮನಸ್ಸಿನಿಂದ ವಿಶ್ಲೇಷಿದರೆ ಏನೂ ಅಲ್ಲ ಎಂದು ನನ್ನ ಅಭಿಪ್ರಾಯ. ದೊಡ್ಡ ಮನಸ್ಸು ಮುಖ್ಯ ಅಷ್ಟೆ ಎಂದು ಹೇಳಿ ಸುಮ್ಮನಾದ ಅಂಕಲ್ ತುಸು ಸಮಯದ ನಂತರ, ಮೊದಲನೆಯದಾಗಿ, ನಿನ್ನ ತಂದೆ ನಿನ್ನ ಲಗ್ನದ ಖಚರ್ಿಗೆಂದು ನಿನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಟ್ಟಿರುವ ಎರಡು ಲಕ್ಷ ರೂಪಾಯಿಗಳ ಫಿಕ್ಸೆಡ್ ಡಿಪಾಜಿಟ ಹಣ ಅವರಿಗೇ ವಾಪಾಸು ಕೊಡ ಬೇಕಂತೆ. ಏಕೆಂದರೆ, ನೀ ಅವರ ಮನಸ್ಸಿಗೊಪ್ಪುವ ಸ್ವಜಾತಿ ಹುಡುಗನನ್ನು ಲಗ್ನವಾಗದೇ ನೀನೇ ಪ್ರೀತಿಸಿ, ಮದುವೆಯಾಗಿರುವ ಹುಡುಗ ಬೇರೆ ಜಾತಿಯ ವರಾಗಿರುವುದರಿಂದ ಎಂದರು ಅಂಕಲ್ ತುಸು ಅಳುಕುತ್ತಾ.

ಅಂಕಲ್, ನನ್ನ ಮದುವೆಯಾಗಿರುವುದಂತೂ ನಿಜ. ಮನುಷ್ಯ ಜಾತಿಯ ಹುಡುಗನನ್ನು ಮದುವೆ ಯಾಗಿರುವೆ. ಮದುವೆಯೆಂದ ಮೇಲೆ ಖಚರ್ುಇದ್ದೇ ಇರುತ್ತೆ. ನನ್ನ ಹೆಸರಿನಲ್ಲಿದ್ದ ದುಡ್ಡನ್ನು ಮದುವೆಗೆ ಬಳಸಿರುವೆನೆಂದು ತಿಳಿದುಕೊಳ್ಳಿರಿ. ನಾನೇನು ಗಪ್-ಚಿಪ್ ಆಗಿ ಮದುವೆ ಆಗಿಲ್ಲ. ನನ್ನ ಮತ್ತು ದಿಗಂತ್ನ ಮದುವೆಯ ಬಗ್ಗೆ ಅಪ್ಪ, ಅಮ್ಮನ ಜೊತೆ ವಿವರವಾಗಿ ಚಚರ್ಿಸಿದ್ದೇನೆ. ನಮ್ಮ ಮದುವೆಯನ್ನು ಅವರೇ ಮಾಡಿಕೊಡಬೇಕೆಂದು ಕಳಕಳಿಯಿಂದ, ದೈನ್ಯತೆಯಿಂದ ಬೇಡಿಕೊಂಡಿದ್ದೇವೆ. ಅಪ್ಪನದು ಒಂದೇ ಹಟ. ಜಾತಿ, ಜಾತಿ ಎಂದು ಬಡಕೊಂಡರು. ಯಾರ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ನಮ್ಮನ್ನು ಹರಸಿ, ಆಶೀರ್ವ ದಿಸಬೇಕಾಗಿದ್ದ ಅವರು ಜಾತಿಯ ಭೂತದ ಬೆನ್ನತ್ತಿ ತಮ್ಮ ಮನಸ್ಸಿನ ಹಟದ ಸಾಧನೆಗಾಗಿ ನಮ್ಮಿಂದ ತಾವೇ ದೂರ ಉಳಿದರು. ನನಗೆ ಮದುವೆಯಾದಾಗ ಮೂವತ್ತು ದಾಟಿತ್ತು ಎಂದು ನಿಮಗೆ ಗೊತ್ತೇ ಇದೆಯೆಂದು ನಾ ತಿಳಿಯುವೆ. ನನಗೆ 25ರಲ್ಲೇ ಅದೆಷ್ಟು ಚೆಂದದ ವರಗಳು ಬಂದಿದ್ದವೆಂದೂ ನಿಮಗೆ ಗೊತ್ತು. ಯಾತಕ್ಕಾಗಿ ನನ್ನ ಮದುವೆ ತಡವಾಯಿತು ಎಂದು ಅದೂ ಸಹ ನಿಮಗೊತ್ತಿದೆ. ನನಗೆ ಸರಿಯಾದ ಟೈಮಿನಲ್ಲಿ ಮದುವೆಯಾಗಿದ್ದರೆ, ಅವರೇ ಆರಿಸಿದ ನಮ್ಮ ಜಾತಿಯ ಹುಡುಗನನ್ನೇ ಮದುವೆಯಾಗುತ್ತಿರಲಿಲ್ಲವೇ? ನೀವೇ ಹೇಳಿ.

ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು ನಿಮ್ಮಂಥಹ ಹಿರಿಯರೇ ಹೇಳುತ್ತಾರೆ. ಮೂವತ್ತಾದ ಮೇಲೆ ಕಂಕಣ ಬಲ ಕೂಡಿ ಬಂದರೂ ಮುತ್ತಿನಂಥಹ ಹುಡುಗನೇ ನನಗೆ ಸಿಕ್ಕಿದ್ದಾನೆ. ನನ್ನ ಮದುವೆ ಯನ್ನು ಉದ್ದೇಶಪೂರ್ವಕವಾಗಿ, ತಮ್ಮ ಸ್ವಾರ್ಥ ಕ್ಕಾಗಿ, ಹಣದಾಸೆಗಾಗಿ ತಡಮಾಡಿದ ನನ್ನ ತಂದೆ ಯನ್ನು ನಾ ದಿನಾಲೂ ನೆನೆಯುವೆ ಧನ್ಯತೆ ಯಿಂದ. ದಿಗಂತ್ನಂಥಹ ಹುಡುಗನನ್ನು ಪಡೆದಿ ರುವುದು ಅಪ್ಪ, ಅಮ್ಮ, ಮತ್ತು ನಿಮ್ಮಂಥಹ ಹಿರಿ ಯರ ಆಶೀವರ್ಾದದಿಂದವೆಂದೇ ನಾ ತಿಳಿದಿರುವೆ. ಪುನರ್-ಜನ್ಮದಲ್ಲಿ ನನಗೆ ನಂಬಿಕೆಯಿರದೇ ಇರುವುದರಿಂದ ದಿಗಂತ್ನಂಥಹ ಗಂಡನನ್ನು ಪಡೆಯುವುದಕ್ಕೆ ಪೂರ್ವ ಜನ್ಮದ ಪುಣ್ಯ ಎಂದು ನಾ ಹೇಳದೇ ನಿಮ್ಮಂಥಹ ಹಿರಿಯರು ಮಾಡಿದ ಪುಣ್ಯ ಎಂದು ತಿಳಿದುಕೊಂಡಿರುವೆ. ನಾ ನನ್ನ ಮನದಲ್ಲಿದ್ದ ದುಗುಡವನ್ನು ಇನ್ನೂ ಹೇಳಬೇಕೆಂದಿದ್ದುದನ್ನು ದಿಗಂತ್ ತಡೆದ.

ಅಂಕಲ್, ದಿವ್ಯಾ ಭಾರತಿಯ ಮನಸ್ಸಿಗೆ ತುಂಬಾ ನೋವಾಗಿದೆ, ಆಘಾತವಾಗಿದೆ. ಅದಕ್ಕಾಗಿ ಈ ರೀತಿ ಹೇಳುತ್ತಿದ್ದಾಳೆ. ನೀವೇನೂ ಬೇಸರ ಮಾಡಿಕೊಳ್ಳಬೇಡಿರಿ. ನೀವು ದಯವಿಟ್ಟು ಎರಡನೇ ವಿಚಾರವನ್ನು ಹೇಳಬಹುದು. ದಿಗಂತ್ ಅಂಕಲ್ಗೆ ಬಿನ್ನವಿಸಿಕೊಂಡ. ನಮ್ಮಪ್ಪನ ಮೊದಲನೇ ಬೇಡಿಕೆಗೆ ಏನು ಅರ್ಥ ಹೇಳದೇ, ಎರಡನೇ ವಿಚಾರವೇ ನೆಂದು ಕೇಳುತ್ತಿರುವ ದಿಗಂತ್ನ ವಿಚಾರದ ಧೋರ ಣೆಯೇ ಏನೆಂದು ನನಗೆ ಅರ್ಥವಾಗುತ್ತಿಲ್ಲವಲ್ಲಾ ಎಂದು ಒಳಗೊಳಗೇ ಕುದಿಯ ತೊಡಗಿದೆ. ಕಣ್ಸನ್ನೆಯಿಂದ ನನಗೆ ಸುಮ್ಮನಿರಲು ತಿಳಿಸುತ್ತಿದ್ದ ದಿಗಂತ್ ನನಗೆ.

ಎರಡನೆಯದಾಗಿ, ನಿನ್ನ ಡಿ.ಎಡ್., ಬಿ.ಎ., ಬಿ.ಎಡ್., ವಿದ್ಯಾಭ್ಯಾಸಕ್ಕಾಗಿ ನಿಮ್ಮ ಅಪ್ಪಾಜಿ ಕಡಿಮೆಯೆಂದರೂ ನಾಲ್ಕೈದು ಲಕ್ಷ ಹಣ ಖಚರ್ು ಮಾಡಿರುವರಂತೆ. ಅದರಲ್ಲಿ ಕನಿಷ್ಟ ಎರಡು ಲಕ್ಷವಾದರೂ ನೀ ಅವರಿಗೆ ವಾಪಾಸು ಕೊಡ ಬೇಕಂತೆ ಎಂದರು ಅಂಕಲ್ ಬೇರೆ ಕಡೆಗೆ ನೋಡುತ್ತಾ. ನಮ್ಮ ದೃಷ್ಟಿ ಎದುರಿಸುವ ಧೈರ್ಯ ಅವರಿಗಿದ್ದಂತೆ ತೋರುತ್ತಿರಲಿಲ್ಲ.

ನಾ ಹುಟ್ಟಿದಾಗಿನಿಂದ ನನ್ನ ಹೊಟ್ಟೆ, ಬಟ್ಟೆಗೆ ಖಚರ್ು ಮಾಡಿದ್ದನ್ನು ಸೇರಿಸಿ ಹೇಳು ಎಂದು ನಮ್ಮ ಅಪ್ಪನಿಗೆ ನೀವು ಹೇಳಲಿಲ್ಲವೇ ಅಂಕಲ್?

ನಿಮ್ಮ ಅಪ್ಪಾಜಿ ಹೇಳಿದ ವಿಚಾರ ನನಗೂ ಸಮಂಜಸವೆನಿಸಲಿಲ್ಲ. ನೀ ಹೇಳಿದ್ದನ್ನೇ ನಾನೂ ಸಹ ನಿನ್ನ ಅಪ್ಪನಿಗೆ ಹೇಳಿದೆ. ಅವನದು ಮೊದಲಿನಿಂದಲೂ ಒಂದು ತರಹ ಹಟಮಾರಿ ಸ್ವಭಾವ. ತಾ ಅಂದಿದ್ದೇ ನಡೆಯಬೇಕೆನ್ನುವವ. ಅವನ ಇಚ್ಛೆಯ ವಿರುದ್ಧವಾಗಿ ನ ಮದುವೆ ಯಾಗಿರುವುದಕ್ಕೆ ಹಟಮಾರಿ ಧೋರಣೆ ಇನ್ನೂ ಹೆಚ್ಚಾಗಿದೆ ಎಂದು ಹೇಳಬಹುದು. ಮನುಷ್ಯ ಜಿದ್ದಿಗೆ ಬಿದ್ದಿದ್ದಾನೆ ಅಷ್ಟೇ. ನಿನೇ ಹೊಂದಿಕೊಂಡು ಹೋಗಬೇಕು ಎಂದರು ಅಂಕಲ್.

ಕೊಡುವುದಕ್ಕೆ ಆಗುವುದಿಲ್ಲವೆಂದರೆ ಅವರು ಏನು ಮಾಡಬಹುದು ಅಂಕಲ್.

ನಿ ಹಾಗೆ ಕೇಳಿದರೆ ನಾ ಏನು ಹೇಳಲಮ್ಮಾ? ಜೀವನವೆನ್ನುವುದು ನಂಬಿಗೆ, ವಿಶ್ವಾಸದ ತಳಹದಿಯ ಮೇಲೆ ಸಾಗುತ್ತಿದೆ. ತಂದೆ ತನ್ನ ಅಸಹಾಯಕತೆಯಿಂದ ಹೀಗೆ ಕೇಳುತ್ತಿರಬಹುದು ಎಂದು ವಿಚಾರ ಮಾಡಿ ಅವರ ಬೇಡಿಕೆಯನ್ನು ನೀ ಪರಿಗಣಿಸಬಹುದು. ಅವರು ನಿನಗೆ ಜನ್ಮ ಕೊಟ್ಟ ತಂದೆಯಾಗಿರುವುದರಿಂದ ಕೇಳುತ್ತಿರುವರು. ನಿನ್ನನ್ನು ಕೇಳಲು ನನಗೆ ಹಕ್ಕಿದೆಯೇ? ಎಂದು ಇನ್ನೇನೋ ಹೇಳಿ ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು ಅಂಕಲ್.

ಆಯಿತು ಅಂಕಲ್, ನೀವು ಹೇಳಿದಂತೆ ನನ್ನ ಮಾವನವರ ಬೇಡಿಕೆಯನ್ನು ಈಡೇರಿಸಲು ನಾವು ಸಿದ್ಧರಾಗಿದ್ದೇವೆ. ದಿವ್ಯಾ ಭಾರತಿ ನಿಮ್ಮ ಜೊತೆ ಆ ರೀತಿ ಹೇಳುತ್ತಿದ್ದರೂ ಅವಳ ಹೃದಯ ಯಾವಾಗಲೂ ಆಕೆಯ ಅಪ್ಪ, ಅಮ್ಮನ ಬಗ್ಗೆ ಮಿಡಿಯುತ್ತಿರುತ್ತದೆ. ದಿಗಂತ್ ಒಮ್ಮಿಂದೊಮ್ಮೆಲೇ ತನ್ನ ನಿಲುವನ್ನು ಪ್ರಕಟಿಸಿದಾಗ ನನಗೆ ಅಚ್ಚರಿಯ ಅನುಭವ.

ಏಯ್, ಏಯ್, ನೀ ಏನು ಹೇಳುತ್ತಿರುವಿ ಎನ್ನುವುದು ನಿನ್ನ ಅರಿವಿಗೆ ಇದೆಯೇ? ಸ್ವಲ್ಪ ವಿಚಾರ ಮಾಡಿ ಹೇಳು. ಮತ್ತೆ ಅಪ್ಪಾಜಿಗೆ ಕೊಡು ವುದಕ್ಕಾಗಿ ಎಲ್ಲಿಯಾದರೂ ಕಳ್ಳ ಗಂಟು ಗಿಂಟು ಇಟ್ಟಿರುವಿಯಾ ಹೇಗೆ? ಎಂದು ದಿಗಂತ್ನಿಗೆ ಎಚ್ಚರಿಸಲು ಪ್ರಯತ್ನಿಸುವುದರ ಜೊತೆಗೆ ಕೆಣಕಿದೆ.

ನಿನಗೆ ತಿಳಿಯದ ವಿಷಯವೇನಿದೆ ಭಾರತಿ? ನನ್ನ, ನಿನ್ನ ಬ್ಯಾಂಕ್ ಪಾಸ್ ಪುಸ್ತಕಗಳು ಅಲ್ಲೇ ಟೇಬಲ್ಲಿನ ಮೇಲೆಯೇ ಇವೆ ಅಲ್ಲವೇ?

ಮತ್ತೆ ದುಡ್ಡು ಕೊಡಲು ಹೇಗೆ ಒಪ್ಪಿಕೊಂಡಿರುವಿರಿ?

ಅಂಕಲ್, ಫಿಕ್ಸಡ್ ಡಿಪಾಸಿಟ್ದ ಬಾಂಡ ನ್ನಂತೂ ನಾವು ಹಾಗೇ ಇಟ್ಟಿದ್ದೇವೆ. ನಾಳೆ, ಅಥವಾ ನಾಡದು ಅದರ ದುಡ್ಡನ್ನು ಮಾವನವರ ಬ್ಯಾಂಕ್ ಖಾತೆಗೆ ಜಮಾ ಮಾಡಿಸುತ್ತೇವೆ. ಉಳಿದ ಎರಡು ಲಕ್ಷವನ್ನು ಕಂತುಗಳಲ್ಲಿ ಕೊಡುವ ವಿಚಾರವಿದೆ. ಈ ತಿಂಗಳ ಕೊನೆಗೆ ಒಂದು ಲಕ್ಷ ಕೊಡುತ್ತೇವೆ. ಉಳಿದ ಇನ್ನೊಂದು ಲಕ್ಷವನ್ನು ಮೂರು ತಿಂಗಳೊಳಗೆ ಕೊಡುತ್ತೇವೆ. ಏಕೆಂದರೆ, ಇನ್ನೆರಡು ತಿಂಗಳಲ್ಲಿ ಬ್ಯಾಂಕಿನಲ್ಲಿನ ನನ್ನ ಲೋನ್ ಮುಗಿಯುತ್ತೆ. ಪುನಃ ಹೊಸದೊಂದು ಲೋನ್ ತೆಗೆದುಕೊಂಡು ಕೊಡುವೆವು ಅಷ್ಟೆ ಅಂದ ದಿಗಂತ್. ಇದಿಷ್ಟೂ ಹೇಳಿ ದಿಗಂತ್ ಸ್ವಲ್ಪ ಹೊತ್ತು ಮೌನಿಯಾದ. ಅವನು ಇನ್ನೂ ಏನನ್ನೋ ಹೇಳಲು ಇಚ್ಛಿಸುತ್ತಿದ್ದಾನೆ ಎಂದು ಅವನ ಮುಖ ನೋಡುತ್ತಾ ಕುಳಿತಿದ್ದ ನಾನು ಮತ್ತು ಅಂಕಲ್ ಅರಿತು ಸುಮ್ಮನೇ ಕುಳಿತಿದ್ದೆವು. ಸ್ವಲ್ಪ ಮೌನದ ನಂತರ, ದಿಗಂತ್ ಪುನಃ ಶುರು ಮಾಡಿದ.

ಅಂಕಲ್, ನಾ ಇನ್ನೊಂದು ಮಾತನ್ನು ಹೇಳ ಲಿಚ್ಛಿಸುವೆ. ನನಗಂತೂ ಹಿಂದೆ ಇಲ್ಲ, ಮುಂದೆ ಇಲ್ಲ. ದಿವ್ಯಾನೇ ನನಗೆ ಸರ್ವಸ್ವ. ನನ್ನ ಮತ್ತು ದಿವ್ಯಾಳ ಮದುವೆಗೆ ಮುಂಚೆ ನನಗೆ ಅನಾಥಪ್ರಜ್ಞೆ ಕಾಡುತ್ತಿತ್ತು. ಜೀವನದಲ್ಲಿ ಆಸಕ್ತಿಯನ್ನು ಕಳೆದು ಕೊಂಡಿದ್ದ ನನಗೆ ಜೀವನ ಎಂದರೆ ಇಷ್ಟು ಸುಂದರ ವಾಗಿರುತ್ತದೆಯೇ ಎಂದು ತಿಳಿಸಿಕೊಟ್ಟವಳು ಇವಳು. ಇಂಥಹ ಚೆಂದದ, ಸಜ್ಜನಿಕೆಯ ಜೊತೆಗಾತಿಯನ್ನು ನನಗಾಗಿಯೇ ಹೆತ್ತಿರುವ ಆಕೆಯ ತಂದೆ ತಾಯಿಗಳಿಗೆ ನಾ ಚಿರಋಣಿಯಾಗಿರುವೆ. ಅವಳ ತಂದೆ, ತಾಯಿ ಗಳನ್ನೇ ನನ್ನ ತಂದೆ, ತಾಯಿಗಳೆಂದು ನಾ ತಿಳಿದು ಕೊಳ್ಳುವೆ. ದಿಗಂತ್ ಇಷ್ಟು ಹೇಳುವಷ್ಟರಲ್ಲಿ ಭಾವುಕ ನಾಗಿದ್ದ, ಗದ್ಗದಿತನಾಗತೊಡಗಿದ್ದ. ಅವನು ಭಾವುಕ ನಾಗಿ ಮಾತಾಡುತ್ತಿದ್ದಂತೆ ಅವನ ಮಾತುಗಳಿಂದ ನಾನೂ ಭಾವುಕಳಾಗತೊಡಗಿದ್ದೆ. ದಿಗಂತ್ನ ಭಾವ ನಾತ್ಮಕ ಸಂಬಂಧದ ಮಾತುಗಳಿಂದ ನನ್ನ ಗಂಟ ಲುಬ್ಬಿ ಬರತೊಡಗಿತ್ತು. ನನ್ನ ಮನಸ್ಸು ನೆನಪಿನಾಳಕ್ಕೆ ಇಳಿಯತೊಡಗಿತ್ತು.

ನಾ ಪಿ.ಯು.ಸಿ.ಯಲ್ಲಿದ್ದಾಗಲೇ ನನ್ನ ಅಕ್ಕನಿಗೆ ಮದುವೆಯಾಗಿ ತನ್ನ ಗಂಡನೊಂದಿಗೆ ಬೆಂಗಳೂರು ಸೇರಿಕೊಂಡಿದ್ದಳು. ತಮ್ಮನೊಬ್ಬ ಮಾಸ್ತರನ ಮಗನಾಗಿ ಎಸ್.ಎಸ್.ಎಲ್.ಸಿ. ಪಾಸಾಗಲು ತಿಣಿಕಾಡುತ್ತಿದ್ದ. ಇದರಿಂದ ಅಪ್ಪನಿಗೆ ನಿರಾಶೆಯಾಗುವುದರ ಜೊತೆಗೆ ಮನಸ್ಸಿಗೂ ಆಘಾತವಾಗಿತ್ತು. ಪಿ.ಯು.ಸಿ. ಮುಗಿಸಿದ ಕೂಡಲೇ ಡಿ.ಎಡ್. ಮಾಡಿಕೊಂಡು ಶಿಕ್ಷಕಿಯಾಗಬೇಕೆಂಬ ನನ್ನ ಅಪ್ಪಾಜಿಯ ಮಾತನ್ನು ನಾ ಚಾಚೂ ತಪ್ಪದೇ ಪಾಲಿಸಿ ಡಿ.ಎಡ್. ಮಾಡಿ ಕೊಂಡೆ. ನನ್ನ ಡಿ.ಎಡ್. ಮುಗಿದು ಒಂದು ವರ್ಷ ವಾದರೂ ನನಗೆ ನೌಕರಿ ಸಿಗದಿದ್ದುದರಿಂದ ಬಿ.ಎ.ಗೆ ಸೇರಲು ಮನಸ್ಸು ಮಾಡಿದೆ. ನಮ್ಮ ಊರಲ್ಲಿ ಬಿ.ಎ. ಕೋಸರ್್ ಇರದಿದ್ದುದರಿಂದ ಬೇರೆ ಊರಿನಲ್ಲಿ, ಹಾಸ್ಟೆಲಿನಲ್ಲಿ ಇದ್ದು ಓದಬೇಕಾಗಿದ್ದುದರಿಂದ ಖಚರ್ು ಹೆಚ್ಚಾಗುತ್ತದೆಯೆಂದು ಅಪ್ಪಾಜಿ ವಿರೋಧಿಸುತ್ತಿದ್ದರೂ ನಾ ಅಮ್ಮನ ವಶೀಲಿಯಿಂದ ಬಿ.ಎ.ಗೆ ಸೇರಿಕೊಂಡೆ. ಬಿ.ಎ. ಮುಗಿಯುತ್ತಲೇ ಬಿ.ಎಡ್.ಗೂ ಸೇರಿಕೊಂಡೆ. ಬಿ.ಎಡ್. ಮುಗಿಸಿ ಎರಡು ವರ್ಷವಾದರೂ ನನಗೆ ಉದ್ಯೋಗ ಸಿಗಲಿಲ್ಲ. ಈ ಮಧ್ಯೆ ಸಂಬಂಧ ಬೆಳೆಸಲು ವರಗಳು ಹುಡುಕಿಕೊಂಡು ಬಂದರೂ, ನಮ್ಮ ಮಗಳಿಗೆ ಉದ್ಯೋಗಕ್ಕೆ ಸೇರುವ ಆಸಕ್ತಿ ಇರು ವುದರಿಂದ ಸಧ್ಯಕ್ಕೆ ಅವಳ ಮದುವೆ ಇಲ್ಲ ಎಂದು ಸಾಗ ಹಾಕುತ್ತಿದ್ದರು ಅಪ್ಪಾಜಿ. ನನ್ನ ವಿದ್ಯಾಭ್ಯಾಸಕ್ಕಾಗಿ ಮಾಡಿದ್ದ ಸಾಲದ ಮೊತ್ತವನ್ನು ನನ್ನ ನೌಕರಿಯ ಪಗಾರದ ಹಣದಿಂದ ತೀರಿಸಬೇಕೆಂದು ಅಪ್ಪಾಜಿಯ ಮನದಲ್ಲಿತ್ತು.

ನನಗಾಗಲೇ 27 ತುಂಬಿದ್ದವು. ಇತ್ತ ಉದ್ಯೋ ಗವೂ ಇಲ್ಲ, ಅತ್ತ ಮದುವೆಯೂ ಇಲ್ಲ. ವಯಸ್ಸಿಗೆ ಸಹಜ ಪ್ರೀತಿ, ಪ್ರೇಮದ ಕನಸುಗಳು ಗರಿಗೆದ ರುತ್ತಿದ್ದರೂ ಸಂಯಮದಿಂದ ಸಹಿಸಿಕೊಂಡಿದ್ದೆ. ಶ್ರೀನಿವಾಸರಾವ್ ಅವರ ಮಗಳಾಗಿದ್ದುದಕ್ಕೆ ನನ್ನನ್ನು ನಾನೇ ಹಳಿದುಕೊಳ್ಳುತ್ತಿದ್ದೆ. ಅಪ್ಪಾಜಿಯ ನಡವಳಿಕೆ ಯಿಂದ ಅಮ್ಮ ಪದ್ಮಾವತಿ ಬಾಯಿ ಸಹ ಅಸಹಾ ಕಳಾಗಿದ್ದಳು. ಅತ್ತ ಗಂಡ, ಇತ್ತ ಮಗಳ ಭವಿಷ್ಯದ ಚಿಂತೆಯಲ್ಲಿ ಬಸವಳಿದಿದ್ದಳು.

ಅಂತೂ ನನಗೆ 27 ತುಂಬಿದ ಸ್ವಲ್ಪೇ ದಿನಗಳಲ್ಲಿ ಈಗ ಕೆಲಸ ಮಾಡುತ್ತಿರುವ ಹಳ್ಳಿಯ ಹೈಸ್ಕೂಲಿನಲ್ಲಿ ನನಗೆ ಶಿಕ್ಷಕಿಯೆಂದು ಕೆಲಸ ಸಿಕ್ಕಾಗ ನಮ್ಮ ಕುಟುಂಬ ದವರಿಗೆಲ್ಲಾ ಹೇಳಲಿಕ್ಕೆ ಬಾರದಷ್ಟು ಸಂತೋಷ ವಾಗಿತ್ತು. ನಮ್ಮ ತಾಲೂಕಿನ ಪಕ್ಕದ ತಾಲೂಕಿನ ಈ ಹಳ್ಳಿ, ತಾಲೂಕು ಕೇಂದ್ರದಿಂದ ಆರು ಕಿ.ಮೀ. ದೂರದಲ್ಲಿದೆ ಅಷ್ಟೆ. ನನ್ನಂತೆಯೇ ತಾಲೂಕು ಕೇಂದ್ರ ದಿಂದ ಸಮೀಪದ ಹಳ್ಳಿಗಳ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಹುಡುಗಿಯರ ಜೊತೆ ತಾಲೂಕು ಕೇಂದ್ರದಲ್ಲಿ ಮನೆ ಮಾಡಿಕೊಂಡು ಶಾಲೆಗೆ ದಿನಾಲೂ ಹೋಗಿ ಬರುವುದು ಶುರು ಮಾಡಿದ್ದೆ. ನನ್ನ ಸಂಬಳದ ಹಣದಲ್ಲಿ ನನ್ನ ಖಚರ್ಿಗೆ ಬೇಕಾಗುವಷ್ಟನ್ನೇ ಇಟ್ಟುಕೊಂಡು ಉಳಿದದ್ದನ್ನು ಅಪ್ಪಾಜಿಗೆ ಕಳುಹಿಸುತ್ತಿದ್ದೆ.

ನಾ ನೌಕರಿಗೆ ಸೇರಿ ಎರಡು ವರ್ಷವಾದರೂ ಅಪ್ಪಾಜಿ ನನ್ನ ಮದುವೆಯ ಬಗ್ಗೆ ಉತ್ಸಾಹ ತೋರಿ ಸಲಿಲ್ಲ. ಈ ಮಧ್ಯೆ ನಮ್ಮ ಶಾಲೆಯಲ್ಲಿ ವಿಜ್ಞಾನದ ಶಿಕ್ಷಕನೆಂದು ಕೆಲಸ ಮಾಡುತ್ತಿದ್ದ ದಿಗಂತ್ ನನ್ನ ಮನಸ್ಸು ತುಂಬತೊಡಗಿದ್ದ. ಆತನ ಮಿತ ಭಾಷಿತ್ವ, ಕಾರ್ಯ ತತ್ಪರತೆ, ಸ್ತ್ರೀಯರ ಬಗ್ಗೆ ಆತನಿಗಿದ್ದ ಗೌರವ ಭಾವನೆಗಳು ನನ್ನನ್ನು ಸೆಳೆಯತೊಡಗಿದ್ದವು. ಅವನ ಎಲ್ಲಾ ಗುಣಗಳು ನನ್ನನ್ನು ಚುಂಬಕದಂತೆ ಆಕಷರ್ಿಸುತ್ತ್ತಿದ್ದುದರಿಂದ ನನಗರಿವಿಲ್ಲದಂತೆ ನಾ ಅವನನ್ನು ಪ್ರೀತಿಸತೊಡಗಿದ್ದೆ. ಅವನ ಮತ್ತು ನನ್ನ ಜಾತಿ ಬೇರೆ ಬೇರೆ ಆಗಿದ್ದುದರಿಂದ ನನ್ನ ಒಂದು ಮನಸ್ಸು ಹಿಂದೇಟು ಹಾಕುತ್ತಿತ್ತು. ಏಕೆಂದರೆ, ನಮ್ಮ ಅಪ್ಪಾಜಿ ಮೊದಲೇ ಕಟ್ಟಾ ಸಂಪ್ರದಾಯಸ್ಥ. ನಾ ಉದ್ಯೋಗಕ್ಕೆ ಸೇರಿದ 3ನೇ ವರ್ಷದಲ್ಲಿ ನನಗೆ ಶಾಲೆಗೆ ಹೋಗಿ ಬರಲು ಅನುಕೂಲವಾಗಲೆಂದು ಬ್ಯಾಂಕಲ್ಲಿ ಲೋನ್ ತೆಗೆದುಕೊಂಡು ಸ್ಕೂಟಿ ಯೊಂದನ್ನು ತೆಗೆದುಕೊಂಡುದುದರಿಂದ ತಿಂಗಳು ತಿಂಗಳು ಅಪ್ಪಾಜಿಗೆ ಕಳುಹಿಸುವ ಹಣದಲ್ಲಿ ಕಡಿಮೆ ಮಾಡಿದುದರಿಂದ ಅಪ್ಪಾಜಿಯ ಮುಂಗೋಪ ಎದುರಿಸಬೇಕಾಯಿತು.

ಹೀಗೇ ನನಗೆ ಮೂವತ್ತು ತುಂಬಿ ಹೋಗಿತ್ತು. ನನ್ನ ಮದುವೆಯ ಬಗ್ಗೆ ಮಾತುಕತೆಗಳೇ ಶುರು ವಾಗಲಿಲ್ಲ. ಕೊನೆಗೆ ನಾನೇ ಗಟ್ಟಿ ನಿಧರ್ಾರ ತೆಗೆದು ಕೊಂಡು ಒಂದು ದಿನ ನನ್ನ ಮನದಿಚ್ಛೆಯನ್ನು ದಿಗಂತ್ನಿಗೆ ತಿಳಿಸಿದ್ದೆ. ದಿಗಂತ್ನೆ ನನ್ನ ಬಗ್ಗೆ ಸಂಪೂರ್ಣ ಒಲವಿದ್ದರೂ ಜಾತಿಯ ಸಲುವಾಗಿ ಹಿಂದೇಟು ಹಾಕತೊಡಗಿದ್ದ. ನಾನು ಬೆನ್ನು ಬಿಡದ ಬೇತಾಳನಂತೆ ಒಂದು ದಿನ ದಿಗಂತ್ನಿಗೆ, ನೋಡು ದಿಗಂತ್, ನಿನಗೀಗಾಲೇ 35 ದಾಟಿದೆ. ಇದೇ ರೀತಿ ನೀ ಮುಂದುವರಿದರೆ ನೀ ಬ್ರಹ್ಮಚಾರಿಯಾಗಿಯೇ ಉಳಿ ಯಬೇಕಾಗುತ್ತದೆ. ನನ್ನನ್ನೂ ಬ್ರಹ್ಮಚಾರಿಣಿಯಾಗಿಯೇ ಉಳಿಸಿ ಬಿಡುವಿ. ನಿನ್ನ ಹೊರತು ನಾ ಬೇರೆ ಯಾರನ್ನೂ ಮದುವೆಯಾಗಲಾರೆ ಎಂದಿದ್ದೆ ತುಂಬಾ ಸೀರಿಯಸ್ಸಾಗಿ. ಕೊನೆಗೆ ನನ್ನ ಮನಸ್ಸಿಗೆ ತನ್ನ ಮನಸ್ಸು ಸೇರಿಸಿದ್ದ ದಿಗಂತ್. ನಮ್ಮಿಬ್ಬರ ಮನದಿಚ್ಛೆಯನ್ನು ಅಪ್ಪಾಜಿ, ಅಮ್ಮನಿಗೆ ತಿಳಿಸಿ, ನಮ್ಮ ಮದುವೆ ನೆರವೇರಿಸಲು ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಮುಂದೆ ನಮ್ಮ ಮದುವೆಗೆ ಸಾಕಷ್ಟು ಅಡೆ ತಡೆಗಳನ್ನು ಒಡ್ಡಿದರೂ ನಾವು ಅವೆಲ್ಲವುಗಳನ್ನು ಧೈರ್ಯದಿಂದ ಎದುರಿಸಿ ನಾನು, ದಿಗಂತ್ ಸತಿ ಪತಿಗಳಾದೆವು. ನಾ ನೆನಪಿನ ಪುಟಗಳನ್ನು ತಿರುವಿ ಹಾಕಿದ್ದೆ.

ದಿಗಂತ್ನ ಉದಾತ್ತ ವಿಚಾರಗಳು, ದೊಡ್ಡ ಮನಸ್ಸು ನನ್ನನ್ನು ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡಿದ್ದವು. ನನಗರಿಯದಂತೆ ನನ್ನ ಕಣ್ಣಲ್ಲಿ ನೀರಿ ಳಿಯತೊಡಗಿದ್ದವು. ನನ್ನ ಅವಸ್ಥೆಯನ್ನು ನೋಡಿದ ದಿಗಂತ್ನ ಮನಸ್ಸಿಗೆ ಸಹಿಸಲಸಾಧ್ಯವಾದ ನೋವು ಆಗುತ್ತಿದೆಯೆಂದು ಅವನ ಮುಖ ನೋಡಿದರೇ ಅನಸುತ್ತಿತ್ತು. ನಾವಿಬ್ಬರೇ ಇದ್ದರೆ ಪರಸ್ಪರರು ತಬ್ಬಿ ಹಿಡಿದುಕೊಂಡು ಸಮಾಧಾನ ಮಾಡಿಕೊ ಳ್ಳುತ್ತಿದ್ದೆವೋ ಏನೋ? ಆದರೆ ನಮ್ಮೊಂದಿಗೆ ಅಂಕಲ್ ಇದ್ದರಲ್ಲ. ಅಷ್ಟರಲ್ಲಿ ಅಂಕಲ್, ನೋಡಮ್ಮಾ ಭಾರತಿ, ನಿನ್ನ ಮನದ ಭಾವನೆ ಗಳನ್ನು ನಾ ಓದಬಲ್ಲೆ. ನಿನ್ನ ತಂದೆಗೆ ಅರ್ಥವಾದರೆ ಒಳ್ಳೆಯದು. ಎನಿವೇ ನಿನಗೆ ದಿಗಂತ್ನಂಥಹ ವಿಶಾಲ ಹೃದಯಿ ಗಂಡ ಸಿಕ್ಕಿರುವುದಕ್ಕೆ ನನಗಂತೂ ಹೇಳಲಾರದಷ್ಟು ಸಂತೋಷವಾಗುತ್ತಿದೆ. ನಿಮ್ಮ ದಾಂಪತ್ಯ ಜೀವನ ಸುಂದರವೂ, ಸುಖಕರವೂ, ಅರ್ಥ ಪೂರ್ಣವೂ ಆಗಿರಲಿ ಎಂದು ನಾ ಹಾರೈಸಿ, ಆಶೀರ್ವದಿಸುವೆ.

ಪಟ್ಟಬದ್ಧ ಹಿತಾಸಕ್ತಿಗಳು ಜಾತಿ ಪದ್ಧತಿಯನ್ನು ಪೋಷಿಸಿಕೊಂಡು ಬಂದಿವೆ ನಮ್ಮ ದೇಶದಲ್ಲಿ. ಜಾತಿಯ ಪದ್ಧತಿಯನ್ನು ಬೇರುಸಹಿತ ಕಿತ್ತೆಸೆಯುವುದರ ಸಲು ವಾಗಿ ಹನ್ನೆರಡನೇ ಶತಮಾನದಲ್ಲಿ ಕ್ರಾಂತಿಕಾರಿ ಆಂ ದೋಲನ ನಡೆದರೂ ಈಗ 21ನೆಯ ಶತಮಾನದ ಲ್ಲೂ ಜಾತಿಯ ಭೂತದ ಅಟ್ಟಹಾಸ ಮುಂದುವರಿ ದಿರುವುದು ತುಂಬಾ ವಿಷಾದಕರ ಎಂದು ನನ್ನ ಅನಿ ಸಿಕೆ. ನೀವಿಬ್ಬರೂ ಜಾತಿಯನ್ನು ಮೆಟ್ಟಿ ನಿಂತಿರುವಿರಿ. ಆದರ್ಶ ದಂಪತಿಗಳಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರಿ ಎಂದು ಅಂಕಲ್ ಭಾವೋದ್ವೇಗದಿಂದ ಹೇಳು ತ್ತಿದ್ದಂತೆ ನಾನು, ದಿಗಂತ್ ಇಬ್ಬರೂ ಅವರ ಪಾದ ಗಳಿಗೆರಗಿ ಆಶೀವರ್ಾದ ಪಡೆದೆವು ಹೊಸ ಹುರು ಪಿನಿಂದ.ಇಬ್ಬರ ಮುಖದಲ್ಲೂ ಸಂತಸದ ಅಲೆಗಳಿದ್ದವು.

ಎಸ್. ಶೇಖರಗೌಡ,
ಮುಖ್ಯ ವ್ಯವಸ್ಥಾಪಕರು,
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಆರ್.ಸಿ.ಪಿ.ಸಿ., (9448989332)

ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ - ರಂಜಾನ್ ದಗಾ೯

ದೇವರು ಮಸೀದಿ, ಮಂದಿರದಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಗುರು ಖಾದರಿಪೀರಾ ಅವರ ಆಶಯವಾಗಿತ್ತು. ಆದ್ದರಿಂದ ಅವರಿಗೆ ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ವೆನಿಸಿತ್ತು ಎನ್ನುತ್ತಾರೆ ಸಂಶೋಧಕ ರಂಜಾನ್ ದಗಾ೯.

ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ (1822-1896) ಅವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದವರು. ಕನ್ನಡದ ಮೊದಲ ಮುಸ್ಲಿಂ ತತ್ತ್ವಪದಕಾರರಾದ ಗುಲಬಗಾ೯ ಜಿಲ್ಲೆ ಜೇವಗಿ೯ ತಾಲ್ಲೂಕಿನ ಚೆನ್ನೂರು ಜಲಾಲಸಾಹೇಬರು ಇವರ ಹಿರಿಯ ಸಮಕಾಲೀನರು. (1770-1850) ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜನಮನ ಸೂರೆಗೊಂಡ ತತ್ತ್ವಪದಕಾರ ಶಿಶುನಾಳ ಶರೀಫರು (1819-1889) ಇವರ ಸಮಕಾಲೀನರು. ಈ ಮೂವರು ಕನ್ನಡದಲ್ಲಿ ಬರೆದ ಮೊದಲ ಮುಸ್ಲಿಂ ಕವಿಗಳಾಗಿದ್ದಾರೆ.

ಚೆನ್ನೂರ ಜಲಾಲಸಾಹೇಬರ ಮೂರು ತತ್ತ್ವಪದಗಳು ಸಿಕ್ಕಿವೆ. ಹಿಂದುಗಳು ಮತ್ತು ಮುಸಲ್ಮಾನರನ್ನು ಅವರು ಭಾವೈಕ್ಯದ ಕಡೆಗೆ ಸೆಳೆದರು. ಮಾನವಕುಲದ ಮೂಲ ಒಂದೇ ಎಂದು ತಿಳಿಸಿದರು. ಸೂಫಿ ಇಸ್ಲಾಂ ತತ್ತ್ವ, ಶರಣರ ನಡೆ ನುಡಿ ಸಿದ್ಧಾಂತ ಮತ್ತು ಕಳಸದ ಗುರು ಗೋವಿಂದಭಟ್ಟರಿಂದ ಸಂಪಾದಿಸಿದ ಉಪನಿಷತ್ ಜ್ಞಾನದ ಮೂಲಕ ಶಿಶುನಾಳ ಶರೀಫರು ನಿಗು೯ಣ ನಿರಾಕಾರ ಬ್ರಹ್ಮನೆನಿಸಿದ ಪರಮಾತ್ಮನನ್ನು ಅನುಭಾವಿಸಿದರು. ಬೋಧ ಒಂದೇ ಬ್ರಹ್ಮನಾದ ಒಂದೇ ಎಂದು ಸಾರಿದರು. ಗುರು ಖಾದರಿ ಪೀರಾ ಅವರು ಶರಣ ಮತ್ತು ಸೂಫಿ ತತ್ತ್ವದ ಮೂಲಕ ಅದ್ವೈತವನ್ನು ಸಾಧಿಸಿದರು. ಮಾನವಕುಲದ ಏಕತೆ ಮತ್ತು ಮಾನವರ ಒಳಗೇ ದೇವರಿದ್ದಾನೆ ಎಂಬುದರ ಕುರಿತು ಅವರು ಮನ ಮುಟ್ಟುವಂತೆ ಬರೆದ 255 ತತ್ತ್ವಪದಗಳು ಸಿಕ್ಕಿವೆ. ಅವುಗಳಲ್ಲಿ ಕೆಲವೊಂದು ಉದು೯ ಭಾಷೆಯಲ್ಲಿವೆ ಕೆಲವೊಂದು ಉದು೯ ಮಿಶ್ರಿತ ಕನ್ನಡ ಭಾಷೆಯಲ್ಲಿವೆ. ಉಳಿದ ಬಹುಪಾಲು ತತ್ತ್ವ ಪದಗಳು ರಾಯಚೂರು ಭಾಗದ ಜನಪದ ಕನ್ನಡದಲ್ಲಿವೆ. ನಿಜಾಂ ಆಡಳಿತದಿಂದಾಗಿ ಅಂದಿನ ದಿನಗಳಲ್ಲಿ ಉದು೯ ಭಾಷೆಯ ಪ್ರಭಾವವಿರುವ ಆ ಪ್ರದೇಶದಲ್ಲಿ ಈ ಸೂಫಿಸಂತ ಕನ್ನಡದಲ್ಲಿ ಬರೆದದ್ದು ಕನ್ನಡವನ್ನು ಕಡೆಗಣಿಸುವವರ ಕಣ್ಣು ತೆರೆಸುವಂಥದ್ದಾಗಿದೆ.

ಈ ಮೂವರು ತತ್ತ್ವಪದಕಾರರ ಆಶಯ ಒಂದೇ ಆಗಿ ತ್ತು. ಆದರೆ ಗುರು ಖಾದರಿಪೀರಾ ಅವರು ಇಸ್ಲಾಂ ತತ್ತ್ವಗಳ ರಹಸ್ಯವನ್ನು ಭೇದಿಸಿ ಕನ್ನಡಿಗರಿಗೆ ಮಾನವ ಏಕತೆಯ ಮಹತ್ವವನ್ನು ತಿಳಿಸಿದ್ದು ವಿಶಿಷ್ಟವಾಗಿದೆ. ಅಹಂ ಬ್ರಹ್ಮಾಸ್ಮಿ (ನಾನೇ ದೇವರು) ಎಂದು ಶಂಕರಾಚಾರ್ಯರು ಹೇಳಿದರೆ. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಬಸವಣ್ಣನವರು ತಿಳಿಸಿದರು. ನಾನು ದೇವರಲ್ಲ ಆದರೆ ನನ್ನೊಳಗಿನ ದೇವರ ದಾಸ ನಾನು ಎಂಬದು ಇದರ ಅರ್ಥ. ಇದೇ ವಿಚಾರವನ್ನು ಪವಿತ್ರ ಕುರಾನ್ ತಿಳಿಸುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟವರು ಮತ್ತು ಆ ಮೂಲಕ ಸೂಫಿಗಳ ಪ್ರೇಮತತ್ತ್ವವನ್ನು ಸಾರಿದವರು ಗುರು ಖಾದರಿ ಪೀರಾ ಅವರು.

ವನಹನು ಅಕ್ರಬಮಿನ್ ಹಬ್ಲಿಲ್ ವರೀದ್ ಎಂಬ ಕುರಾನ್ ವಾಕ್ಯ ದೇವರು ಕಾಯದಲ್ಲಿ ಇದ್ದಾನೆ ಎಂಬ ಭಾವಾರ್ಥವನ್ನು ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೇ ಗುರು ಪೀರಾ ಅವರು ಕನ್ನಡದಲ್ಲಿ ಹೀಗೆ ಹೇಳಿ ದ್ದಾರೆ: ನನ್ನ ಮನೆಯಲ್ಲಿ ಇದ್ದಾನೊ ನಲ್ಲಾ; ಇವನೇ ಅವನೆಂದು ತಿಳಿಯಲಿಲ್ಲಾ

ಗುರು ಖಾದರಿಪೀರಾ ಅವರು ಕನ್ನಡ, ಹಿಂದಿ, ಉದು೯, ಸಂಸ್ಕೃತ, ಪಾಸಿ೯ ಮತ್ತು ಅರಬಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಣತರಾಗಿದ್ದರು. ಆದರೆ ಕನ್ನಡದಲ್ಲಿ ಸೂಫಿ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಬಹಳ ಆಸಕ್ತಿ ವಹಿಸಿದರು.

ಅನ ಅಲ್ ಹಖ್ (ನಾನೇ ಸತ್ಯ) ಎಂದು ಹೇಳಿದ ಇರಾನಿನ ಸೂಫಿ ಸಂತ ಮನಸೂರ್ ಅಲ್ ಹಲ್ಲಾಜ್ (858-922) ನನ್ನು ದೈವನಿಂದನೆಯ ಆರೋಪ ಹೊರಿಸಿ ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿ ಗಲ್ಲಿಗೇರಿಸಲಾಯಿತು. ಸತ್ಯ ಎಂಬುದು ಅಲ್ಲಾಹನ 99 ಹೆಸರುಗಳಲ್ಲಿ ಒಂದಾಗಿರುವು ದರಿಂದ ಮನಸೂರ್ ಹೇಳುವ ಸಾಲಿನ ಅರ್ಥ ನಾನೇ ದೇವರು ಎಂದು ಆಗುತ್ತದೆ ಎಂದು ಮೂಲಭೂತವಾದಿಗಳು ಪ್ರತಿಪಾ ದಿಸಿದರು. ಈ ಕಾರಣದಿಂದಲೇ ಅವನನ್ನು ಗಲ್ಲಿಗೇರಿಸ ಲಾಯಿತು. ಗುರು ಖಾದರಿಪೀರಾ ಕೂಡ ಇಂಥ ಪರಂಪರೆಗೆ ಸೇರಿದ ಸೂಫಿಸಂತ. ಈ ಹಿನ್ನೆಲೆಯಲ್ಲೇ ಅವರು ಇಸ್ಲಾಂ ತತ್ತ್ವಜ್ಞಾನವನ್ನು ವ್ಯಾಖ್ಯಾನಿಸಿದರು.

ಒಬ್ಬನೇ ದೇವರು. ಆದರೆ ಮಾನವರೆಲ್ಲರಲ್ಲಿ ಆತ ಇರುವುದರಿಂದ ಎಲ್ಲರೂ ದೇವರು. ಎಲ್ಲರಲ್ಲಿ ದೇವರಿರುವುದರಿಂದ ಅವನನ್ನು ಸ್ವರ್ಗದಲ್ಲಿ, ಕಾಬಾ-ಕಾಶಿಯಲ್ಲಿ ಅಥವಾ ಮಂದಿರ-ಮಸೀದಿಗಳಲ್ಲಿ ಹುಡುಕಬೇಕಿಲ್ಲ. ಆತ ಇರುವುದು ದೇಹ ಎಂಬ ಮಂದಿರದೊಳಗೆ ಎಂಬುದು ಖಾದರಿಪೀರಾ ಅವರ ಅಚಲ ನಂಬಿಕೆಯಾಗಿತ್ತು. ಹೀಗೆ ಅವರ ಏಕದೇವೋಪಾಸನೆಯ ಪರಿಕಲ್ಪನೆ ಪ್ರತಿಯೊಬ್ಬ ಮಾನವನೊಳಗಿನ ಘನದ ಮೂಲಕ ಮಾನವನ ಘನತೆಯನ್ನು ಎತ್ತಿಹಿಡಿಯುವಂಥದ್ದಾಗಿದೆ.

ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಮಹಮ್ಮದ್ ಪೈಗಂಬರರ ವಚನಗಳಾದ ಹದೀಸ್ ಅನ್ನು ಅವರು ಕೂಲಂಕಷವಾಗಿ ಅಧ್ಯಯನ ಮಾಡಿದರು. ಇಸ್ಲಾಮಿನ ಮಾನವೀಯ ಪರಂಪರೆಯ ವಕ್ತಾರರಾದರು. ಆ ಮೂಲಕ ಸೂಫಿ ಜೀವಕಾರುಣ್ಯ ಮತ್ತು ಪ್ರೇಮತತ್ತ್ವವನ್ನು ತಮ್ಮ ತತ್ತ್ವಪದಗಳ ಮೂಲಕ ಸಾರಿದರು. ಶರಣರ ವಚನಗಳ ಅಧ್ಯಯನದೊಂದಿಗೆ ವೇದೋಪನಿಷತ್ತುಗಳ ಅಧ್ಯಯನವನ್ನೂ ಮಾಡಿದರು. ವೈದಿಕರ ಜಡ ವಿಚಾರಗಳನ್ನು ದೂರ ಸರಿಸಿ, ಮಾನವೀಯ ಚಿಂತನೆಗಳನ್ನು ಸ್ವೀಕರಿಸಿ, ಶರಣರ ತತ್ವಕ್ಕೆ ಮಾರುಹೋಗಿ ಸೂಫಿ ತತ್ವದ ಜೊತೆ ಸಮೀಕರಿಸಿದರು. ಸೂಫಿ, ಶರಣ, ಸಂತ ಮತ್ತು ದಾಸರ ತತ್ತ್ವಗಳೊಳಗಿನ ಜೀವಪರ ನಿಲುವನ್ನು ಎತ್ತಿಹಿಡಿದ ಗುರು ಖಾದರಿಪೀರಾ ಅವರು ಈ ನಾಲ್ಕೂ ವಿಚಾರಧಾರೆಗಳನ್ನು ತತ್ತ್ವಪದಕಾರರಾಗಿ ಸ್ವೀಕರಿಸಿದ್ದಾರೆ. ಇವುಗಳ ಒಳತೋಟಿಯ ಪ್ರಜ್ಞೆಯೊಂದಿಗೆ ಅನೇಕ ಕಡೆಗಳಲ್ಲಿ ಇವುಗಳನ್ನು ಸಮಾನಾರ್ಥದಲ್ಲಿ ಬಳಸಿದ್ದಾರೆ. ಅಷ್ಟೇ ಅಲ್ಲದೆ ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ. ಹೀಗಾಗಿ ಅವರ ತತ್ವ್ವಪದಗಳು ಸೂಫಿ ಮತ್ತು ಶರಣ ತತ್ವಗಳ ಮಹಾ ಸಂಗಮವಾಗಿವೆ.

19ನೇ ಶತಮಾನದ ಅಂತ್ಯದವರೆಗೆ ಕನ್ನಡಿಗರಿಗೆ ವಚನಗಳು ಪ್ರಕಟಿತ ಗ್ರಂಥರೂಪದಲ್ಲಿ ಲಭ್ಯವಿರಲಿಲ್ಲ. ವಚನಕಟ್ಟುಗಳು ಪೂಜೆಯ ವಸ್ತುಗಳಾಗಿ ಪರಿಣಮಿಸಿದ್ದವು. ಇಂಥ ಸ್ಥಿತಿಯಲ್ಲಿ ಗುರು ಖಾದರಿಪೀರಾ ಅವರು ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ತತ್ವ ಎಲ್ಲ ದೃಷ್ಟಿಯಿಂದಲೂ ಸೂಫಿತತ್ತ್ವಕ್ಕೆ ಸಮನಾಗಿದೆ ಎಂಬುದನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ತಾವೊಬ್ಬ ಬಸವಣ್ಣನ ಅನುಯಾಯಿಯಾಗಿದ್ದು ಬಸವಣ್ಣನೇ ತಮ್ಮ ಪ್ರಾಣ ಎಂದು ಸಾರಿದ್ದಾರೆ. ಅವರ ವಿಚಾರಗಳು ಮುಖ್ಯವಾಗಿ ಬಸವಣ್ಣನವರ ವಿಚಾರಗಳೊಂದಿಗೆ ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ನಮ್ಮೊಳಗಿನ ಘನದ ಪೂಜೆ ಮಾತ್ರ ನಿಜವಾದ ಪೂಜೆ ಎಂಬುದು ಇವರಿಬ್ಬರ ನಿಲುವಾಗಿದೆ.

ಖಾದರಿಪೀರಾ ಅವರ ಪೂರ್ವಜರು ಪೈಗಂಬರರ ಅಳಿಯ ಹಜರತ್ ಅಲಿ ಅವರ ವಂಶಸ್ಥರು.700 ವರ್ಷಗಳಷ್ಟು ಹಿಂದೆ ಇರಾಕ್ ರಾಜಧಾನಿ ಬಾಗ್ದಾದ್ನಿಂದ ಖ್ಯಾತ ಸೂಫಿಸಂತ ಮಹಬೂಬೇ ಸುಬಹಾನಿ ಅವರ ಮೊಮ್ಮಗ ಸೈಯ್ಯದ್ ವಲಿ ಉಲ್ಲಾ ಷಾ ಖಾದರಿ ಅವರು ತಮ್ಮ 13ನೇ ವಯಸ್ಸಿನಲ್ಲಿ ಒಂಟಿಯಾಗಿ ಭಾರತಕ್ಕೆ ಬಂದರು...

ಸಾಲಗುಂದಾ ಗ್ರಾಮದಲ್ಲಿ ಸೈಯದ್ ಷಾ ಮೊಹಿಯುದ್ದೀನ್ ಖಾದರಿ ಮತ್ತು ಬಿಜಾಪುರದ ಸೂಫಿ ಹಾಷಂಪೀರ ಸಂತತಿಯ ಯೂಸುಫ್ ಹುಸೇನಿಯವರ ಪುತ್ರಿ ಸೈಯದಾ ಸೋಗರಾಬೀ ಸಾಹೇಬ ಬೀಬಿ ಪುಣ್ಯ ದಂಪತಿಗಳ ಉದರದಲ್ಲಿ ದಿನಾಂಕ 11.5.1822 ಸೋಮವಾರದಂದು ಆಲಾ ಹಜರತ್ ಇಮಾಮ್ ಸೈಯದ್ ಅಬ್ದುಲ್ ಖಾದಿರ್ ಖಾದರಿ ಹಸನಿ ಉಲ್ ಹುಸೈನಿ ಹಾಷಮಿ (ಗುರು ಖಾದರಿಪೀರಾ) ಅವರು ಜನಿಸಿದರು ಸಹಾ ನುಭೂತಿ, ಮಾನವತಾವಾದ, ಸರ್ವಧರ್ಮ ಸಮಾನತೆ ಮತ್ತು ಜಾತ್ಯತೀತತೆಯನ್ನು ಮೈಗೂಡಿಸಿಕೊಂಡ ಜ್ಞಾನಾಕಾಂಕ್ಷಿಗಳಾದ ಇವರು ತಂದೆಯವರಿಂದ ಖಿಲಾಪತ್ (ಜ್ಞಾನದೀಕ್ಷೆ) ಪಡೆದು ಗುರುಪೀಠವನ್ನು ಅಲಂಕರಿಸಿದರು.

ತಮ್ಮ 22ನೇ ವಯಸ್ಸಿನಲ್ಲಿ ಬಿಜಾಪುರದ ಮಹಾನ್ ಸೂಫಿ ಯಾದ ಅಮೀನುದ್ದೀನ್ ಆಲಾ ಶೇರ್ ಏ ಖುದಾ ಬಿಜಾಪುರಿ ಅವರ ಸಂತತಿಯ ಅಸದುಲ್ಲಾ ಹುಸೈನಿಯವರ ಪುತ್ರಿ ಸೈಯದಾ ಬೀಬಿ ಜೈನಬ್ ಅವರ ಸಂಗಡ ಇವರ ವಿವಾಹ ನೆರವೇರಿತು..

ಉದು೯ ಭಾಷೆಯಲ್ಲಿ ಫೈಜುಲ್ ಹೈದರಿಯಾ, ಕನ್ನಡ ಭಾಷೆಯಲ್ಲಿ ಜ್ಞಾನಸಮುದ್ರ ಮತ್ತು ಹಿಂದಿ ಭಾಷೆಯಲ್ಲಿ ಸಾಕ್ಷಾ ತ್ಕಾರ ಎಂಬ ಪದ್ಯರೂಪದ ಮಹಾನ್ ಕೃತಿಗಳನ್ನು ರಚಿಸಿದರು. ಈ ಗ್ರಂಥಗಳಲ್ಲಿ ವ್ಯಕ್ತವಾದ ಎಲ್ಲಾ ಪದ್ಯಗಳ ಕೊನೆಯಲ್ಲಿ ಗುರುಪೀರಾ ಎಂಬ ಅಂಕಿತನಾಮದಿಂದ ಮಹಬೂಬೇ ಸುಬ ಹಾನಿ ಪೀರಾನೇಪೀರ್ ದಸ್ತಗೀರ್ ಅವರಿಗೆ ಅರ್ಪಣೆ ಮಾಡಿ ಕೊನೆಗೊಳಿಸಿದ್ದಾರೆ. ಎಂದು ಅವರ ಮೊಮ್ಮಗ ಡಾ. ಎಸ್.ಎ. ಖಾದರಿ (ಹಾಷಮಿ) ಅವರು ಜ್ಞಾನಸಮುದ್ರ ಗ್ರಂಥದ ಆರಂಭ ದಲ್ಲಿ ಗ್ರಂಥಕರ್ತ ಶ್ರೀಗುರು ಖಾದರಿಪೀರಾ ಅವರ ಕುರಿತು ಬರೆದ ಪರಿಚಯ ಲೇಖನದಲ್ಲಿ ತಿಳಿಸಿದ್ದಾರೆ.

ಜ್ಞಾನಸಮುದ್ರ ಗ್ರಂಥದಲ್ಲಿನ ತತ್ತ್ವಪದಗಳನ್ನು ಗುರು ಖಾದರಿಪೀರಾ ಅವರ ಶಿಷ್ಯರಾಗಿದ್ದ ದಿವಂಗತ ಮದಿರೆ ತಿಮ್ಮಪ್ಪ ಮತ್ತು ಅವರ ಮಗ ರಂಗಪ್ಪ ಸಾಲಗುಂದ ಅವರು ಏಕತಾರ ದೊಂದಿಗೆ ಸುಶ್ರಾವ್ಯವಾಗಿ ಹಾಡುವುದನ್ನು 1971ರಲ್ಲಿ ಕಂಡು ಎಸ್.ಎ. ಖಾದರಿರವರು ಆಕಷ೯ತರಾದರು. 1973ರಲ್ಲಿ ಶಿಷ್ಯ ವೃಂದದ ಸಹಕಾರದಿಂದ ಭಜನಾ ಮಂಡಳಿ ರಚಿಸಿ ಈ ತತ್ತ್ವ ಪದಗಳನ್ನು ಸಿಂಧನೂರು, ಆಲೂರು, ಆದವಾನಿ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲಿ ಜನಪ್ರಿಯಗೊಳಿಸಿದರು. ಕ್ರಿಸ್ತ ಶಕ 2000ದಲ್ಲಿ ಜ್ಞಾನಸಮುದ್ರ ಗ್ರಂಥವನ್ನು ಪ್ರಕಟಿಸಿದರು ಎಂದು ಆರ್. ಅಬ್ದುಲ್ ವಾಹಬ್ ಖಾದರಿ ಅವರು ಜ್ಞಾನಸ ಮುದ್ರ ಗ್ರಂಥದ ಬೆನ್ನುಡಿಯಲ್ಲಿ ಬರೆದಿದ್ದಾರೆ.

ಇಸ್ಲಾಂ ಎಂದರೆ ಶಾಂತಿಯೊ ಜಾಣ

ತಿಳಿದು ನುಡಿಯುವುದೇ ಸುಜ್ಞಾನ

ಹುರುಫೆ ಮುಖತ್ತಿಯಾತ ತಿಳಿಯದೆ

ಹೆಂಗ ತಿಳಿಯತೈತೊ ಖುರಾನ

ಎಂದು ಗುರು ಖಾದರಿಪೀರಾ ಅವರು ಬರೆದು ಮುಲ್ಲಾ ಮೌಲ್ವಿಗಳಿಗೆ ಸವಾಲು ಹಾಕಿದ್ದಾರೆ. ಮೌಲ್ವಿಗಳಿಗೆ ಗೊತ್ತಿದೆ; ಖುರಾನಿನಲ್ಲಿ ಹುರುಫೇ ಮುಖತ್ತಿಯಾತ ಎನ್ನುವ 29 ಸಂಕೇತ ಅಕ್ಷರಗಳಿವೆ. ಅಲೀಫ್, ಲಾಮ್, ಮೀಂ, ಯಾಸೀನ್ ಮುಂತಾ ದ ಈ ಸಂಕೇತ ಅಕ್ಷರಗಳಿಗೆ ಎಲ್ಲಿಯೂ ಅರ್ಥ ಸಿಗುವುದಿಲ್ಲ. ಸೂಫೀಜಂನಲ್ಲಿ ಇವುಗಳಿಗೆ ಗೌಪ್ಯವಾಗಿ ಅರ್ಥ ತಿಳಿಸಲಾಗುವುದು. ಇದರಿಂದ ನಮಗೆ ತಿಳಿಯುವುದೇನೆಂದರೆ ಗುರುಪೀರಾರವರಿಗೆ ಇವುಗಳ ಅರ್ಥ ತಿಳಿದಿದೆ ಎಂದು. ಆದುದರಿಂದ ಹುರಫೇ ಮುಕತ್ತಿಯಾತ ತಿಳಿಯದೆ ಖುರಾನ ತಿಳಿಯುವುದಿಲ್ಲಾ ಎಂದು ಸಾಧಿಕ್ ಹುಸೇನ್ ಖಾದರಿ ಅಲ್ ಅನ್ಸಾರಿ ಅವರು ಜ್ಞಾನಸಮುದ್ರಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

ಮಾನವಧರ್ಮಕ್ಕೆ ಜಯವಾಗಲಿ; ಮಾನವರಿಂದ ಮಾನ ವರು ಉದ್ಧಾರವಾಗಲಿ ಎಂಬ ಸಂದೇಶದೊಂದಿಗೆ ಗುರು ಖಾದರಿಪೀರಾ ಅವರು ಗ್ರಾಮ್ಯಭಾಷೆಯಲ್ಲಿ ತತ್ತ್ವಪದಗಳನ್ನು ಬರೆದು ಖುರಾನ್ ತಿರುಳನ್ನು ಮತ್ತು ಶರಣರ ವಚನಗಳ ತಿರುಳನ್ನು ಒಂದಾಗಿಸಿ ಲೋಕಾರ್ಪಣೆ ಮಾಡಿದ್ದಾರೆ.

ತತ್ತ್ವಪದಗಳು ಜನಪದ ತತ್ತ್ವಜ್ಞಾನವನ್ನೂ ಒಳಗೊಂಡಿರುತ್ತವೆ. ವಿಶ್ವಮಾನ್ಯವಾದ ಧರ್ಮತತ್ತ್ವಗಳನ್ನು ಜನಪದ ತತ್ತ್ವ ಜ್ಞಾನದೊಂದಿಗೆ ಕೂಡಿಸುವುದರ ಮೂಲಕ ರಾಯಚೂರು ಭಾಗದ ಕನ್ನಡ ಜನರ ಆಡುಭಾಷೆಯಲ್ಲಿ ಸಾಮರಸ್ಯದ ಸಾಹಿತ್ಯ ಸೃಷ್ಟಿಸಿದ ಕೀತಿ೯ ಗುರು ಖಾದರಿಪೀರಾ ಅವರಿಗೆ ಸಲ್ಲುತ್ತದೆ. ಆ ಮೂಲಕ ಮೂಲಭೂತವಾದಿಗಳು ಅರಿಯದಂಥ ಧರ್ಮದ ತಿರುಳನ್ನು ಜನಸಾಮಾನ್ಯರಿಗೆ ನೀಡಿ ಅವರ ಬದುಕನ್ನು ಅರ್ಥಪೂರ್ಣಗೊಳಿಸಿದ್ದಾರೆ.

ಗುಡಿಗುಂಡಾರದ ಜಗಳವ್ಯಾಕೊ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ
ಶಿವ ಕಾಣಲಿಲ್ಲ ನೀ ಶಿವನು; ನಿನ್ನ ದೇಹದ ಗುಡಿಯೊಳಗೆ ಕುಂತಾನು ಅವನು
ನೀನೆ ಗುಡಿಯಾಗಿ ಗುಡಿ ಕಟ್ಟುವದ್ಯಾಕೊ ಸಾಕಪ್ಪ ಸಾಕು ನಿನ್ನ ಗುಡಿಜನಗಳ ಸಾಕು

ನಿರಾಕಾರ ನಿರಾಹಾರ ಶಿವಗ ಯಪ್ಪ ನಿನ್ನಂತೆ ರೂಪ ಮಾಡಿ ಅವಗ
ಎಲ್ಲ ನಿನ್ನ ಲಾಭಕ್ಕಾಗಿ ಮಾಡಿಟ್ಟು ಅವಗ ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೊ
ಎಲ್ಲರಿಗೆ ಗುರು ಒಬ್ಬ ಸಾಕೊ ಭೇದ ಮಾಡುವ ಕೆರಗುರು ನಮಗ್ಯಾಕಬೇಕು
ಭೇದ ಮಾಡುವ ಜಗದ್ಘಾತಕರ್ಯಾಕೊ ಮಾನವ ಪ್ರೀತಿಯೆ ಮಾನವ ತಿಳಿಯಬೇಕು

ಪ್ರೀತಿಯ ರೂಪಧಾರಿ ಅವನು; ನೀವು ಪ್ರೀತಿ ಮಾಡಿರಿ ಸಿಗುವನವನು
ಪ್ರೀತಿಯಿಂದಲೇ ಭಕುತಿ, ಪ್ರೀತಿಯಿಂದಲೇ ಮುಕುತಿ, ಪ್ರೀತಿ ಇಲ್ಲದ ಬದುಕು ಬಾಳುವುದ್ಯಾಕೊ

ಜಾತಿಭೇದಗಳಿಲ್ಲ ಶಿವಗ ಯಪ್ಪಾ ಹೆಂಡರಿಲ್ಲ ಮಕ್ಕಳಿಲ್ಲ ಅವಗ
ನೋಡಿಬಂದವರಿಲ್ಲಿ ಹೇಳಲಿಲ್ಲ ನಮಗ: ಕರುಣಾಳು ಗುರುಪೀರ ಭೇದಬುದ್ಧಿ ನಮಗ್ಯಾಕೊ
ಸಾಲಗುಂದಿಪುರದೊಳಗೆ ಖಾತ್ರಿ ನೀವು ಮರಿಯದೆ ಮಾಡಬೇಕು ಪ್ರೀತಿ
ಗುರುಪೀರ ಖಾದರಿಯ ಪ್ರೀತಿಯೇ ಬಲು ಖಾತ್ರಿ; ಪ್ರೀತಿ ಇಲ್ಲದ ಬದುಕು ಬಾಳುವದ್ಯಾಕೊ

ಭೇದ ಮೂಡಿಸುವ ಯಾವುದನ್ನೂ ಖಾದರಿಪೀರಾ ಅವರು ಸ್ವೀಕರಿಸುವುದಿಲ್ಲ. ಸೌಹಾರ್ದಕ್ಕಾಗಿ ಅವರು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಪ್ರೀತಿಯಿಂದ ಮಾತ್ರ ಸೌಹಾ ರ್ದ ಸಾಧ್ಯ ಎಂಬುದನ್ನು ಅವರು ಪದೆ ಪದೆ ಒತ್ತಿ ಹೇಳಿದ್ದಾರೆ. ಕುಲ, ಗೋತ್ರ, ಜಾತಿಗಳು ಮಾನವನ ಏಕತೆಗೆ ಬಹುದೊಡ್ಡ ಕಂಟಕಗಳಾಗಿವೆ ಎಂಬುದನ್ನು ಮನಂಬುಗುವಂತೆ ತಿಳಿಸಿದ್ದಾರೆ.
150 ವರ್ಷಗಳಷ್ಟು ಹಿಂದೆಯೇ ಅವರು ಗುಡಿಗುಂಡಾ ರಗಳ ಜಗಳಗಳ ಕುರಿತು ಪ್ರಸ್ತಾಪಿಸಿದ್ದಾರೆ. ಗುಡಿವಿವಾ ದಗಳಿಂದ ಈ ದೇಶ ಇನ್ನೂ ಮುಕ್ತವಾಗಿಲ್ಲ. ಸಾವಿರಾರು ಜನರು ಈ ಘರ್ಷಣೆಗಳಿಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾನಿಯಾಗಿದೆ. ವಿವಿಧ ಸಮಾಜಗ ಳನ್ನು ಒಂದುಗೂಡಿಸದೆ ದೇಶದ ಉದ್ಧಾರವಾಗುವುದಿಲ್ಲ. ಅದಕ್ಕಾಗಿ ಗುರು ಖಾದರಿಪೀರಾ ಅವರಂತೆ ಪ್ರತಿಯೊಬ್ಬರಲ್ಲಿ ದೇವರನ್ನು ಕಂಡು ಪ್ರತಿಯೊಬ್ಬರ ಘನತೆ ಗೌರವಗಳನ್ನು ಮಾನ್ಯಮಾಡುತ್ತ ಮಾನವಕುಲ ಒಂದೇ ಎಂದು ದಯಾ ಭಾವ ಮತ್ತು ಪ್ರೇಮಭಾವ ದೊಂದಿಗೆ ಬದುಕುವುದರಿಂದ ಮಾತ್ರ ಈ ದೇಶ ಔನ್ನತ್ಯಕ್ಕೆ ಏರಲು ಸಾಧ್ಯ.

ಬಂಗಾರ ಗಟ್ಟಿಯಿಂದ ತಮ್ಮ ಇಲ್ಲಿ ವಸ್ತ ಮಾಡ್ಯಾರಲ್ಲ
ಬಂಗಾರ ಬ್ಯಾರೆ ವಸ್ತ ಬ್ಯಾರೆ ಎಂದು ಹೇಳತಾರ ಜನರೆಲ್ಲ
ಬಂಗಾರವೆ ವಸ್ತ ವಸ್ತವೆ ಬಂಗಾರ ಮೂಲ ತಿಳಿಯಲಿಲ್ಲ

ಸಾಲಗುಂದಿಪುರದೊಳಗೆ ಸೇರಿ ನೀ ನೋಡು ನಿನ್ನ ಮೊದಲ
ಗುರುಪೀರಖಾದರಿ ಕೇಳಿ ತಿಳಿದು ತಾವು ನೋಡಿ ಹೇಳ್ಯಾರಲ್ಲಾ
ಮನುಷ್ಯರೇ ದೇವರು, ದೇವರೇ ಮನುಷ್ಯರು ಬಿಚ್ಚಿ ಹೇಳಿದರೆಲ್ಲ

ಮನುಷ್ಯರೊಳಗೆ ದೇವರಿದ್ದಾನೆ. ಆ ದೇವರು ಮನುಷ್ಯ ರೂಪದಲ್ಲಿದ್ದಾನೆ. ಇದನ್ನು ತಿಳಿದವ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಹೀಗೆ ಒಂದಾದಾಗ ಆತ ಅಂತಃ ಕರಣ ಮತ್ತು ಪ್ರೇಮ ಭಾವವನ್ನು ತಾಳುತ್ತಾನೆ. ಆ ಮೂಲಕ ದೇವಸ್ವರೂಪನೇ ಆಗುತ್ತಾನೆ. ಈ ಪ್ರಕ್ರಿಯೆಯನ್ನು ಅನುಭವಿ ಸುವ ಮೊದಲು ಮಾನವ ರೂಪದಲ್ಲಿರುವ ನಾವು ನಿಜ ಮಾನವರಾಗಬೇಕಾಗುತ್ತದೆ. ನಿಜಮಾನವರಾದ ಮನುಷ್ಯರೇ ದೇವರು. ಹೀಗೆ ದೇವರೇ ಮನುಷ್ಯರೂಪದಲ್ಲಿರುವ ಕ್ರಮವನ್ನು ಗುರು ಖಾದರಿಪೀರಾ ಅವರು ತಿಳಿಸಿದ್ದಾರೆ.

ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕಂಡು
ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕೂಡಿ

ಸತ್ಯವನು ನಾ ತಿಳಕೊಂಡೆ ಜನರಿಗೆ ನಾ ಕೆಟ್ಟವ ಕಂಡೆ
ಪ್ರೀತಿ ಮಾಡಿ ಎಲ್ಲ ಪಡಕೊಂಡೆ ಸದ್ಗುರುವಿನ ಕಂಡೆ

ಮಾನವರು ಉನ್ನತಿಯನ್ನು ಸಾಧಿಸಬೇಕಾದರೆ ತಮ್ಮೊಳಗಿನ ದೇವರಲ್ಲಿ, ಅಂದರೆ ತಮ್ಮ ಆತ್ಮಸಾಕ್ಷಿಯಲ್ಲಿ ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಬೇಕು. ಅಲ್ಲದೆ ತಮ್ಮೊಳ ಗಿನ ದೇವರು ಹೇಳಿದಂತೆ ಕೇಳುವುದರ ಮೂಲಕ ಆ ದೇವರೊಡನೆ ಕೂಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸಕಲಜೀವಾತ್ಮರಿಗೆ ಲೇಸನೇ ಬಯಸುವಂಥ ಮನಸ್ಸು ರೂಪು ಗೊಳ್ಳುವುದು. ಆಗ ಜಾತಿ, ವರ್ಣ, ಮೇಲು, ಕೀಳು ಮುಂತಾ ದ ಮಾನಸಿಕ ಹೊಲಸು ಮಾಯವಾಗುವವು. ಹೀಗೆ ಮಾನವ ಉದಾತ್ತವಾಗುವನು. ಆದರೆ ವರ್ಣವ್ಯವಸ್ಥೆಯಿಂದ ಲಾಭ ಪಡೆಯುವವರು ಇಂಥ ಮಾನಸಿಕ ಸ್ಥಿತಿಗೆ ವಿರುದ್ಧವಾಗಿರು ತ್ತಾರೆ. ಎಲ್ಲರೂ ಸಮಾನರಾದಾಗ ಅವರ ಅಸ್ತಿತ್ವವೇ ಉಳಿಯು ವುದಿಲ್ಲ. ಹೀಗಾಗಿ ಅಂಥವರ ದೃಷ್ಟಿಯಲ್ಲಿ ಇಂಥ ಉತ್ತಮರು ಕೆಟ್ಟವರಾಗಿ ಕಾಣುತ್ತಾರೆ. ಆದರೆ ಉತ್ತಮರು ಯಾವುದಕ್ಕೂ ಎದೆಗುಂದದೆ ಜಗತ್ತನ್ನು ಪ್ರೀತಿಸುತ್ತಲೇ ಮುಂದೆ ಮುಂದೆ ಸಾಗುತ್ತ ತಮ್ಮೊಳಗಿನ ಅರಿವೆಂಬ ಸದ್ಗುರುವಾದ ದೇವರನ್ನು ಕಾಣುತ್ತಾರೆ. ಅರಿವು ಎಂದರೆ ಬೇರೆ ಅಲ್ಲ. ನಮ್ಮೊಳಗೇ ದೇವರಿದ್ದಾನೆ ಎಂಬುದೇ ಅರಿವು. ಸಕಲ ಜೀವಿಗಳಲ್ಲಿ ದೇವರಿ ದ್ದಾನೆ ಎಂಬುದೇ ಅರಿವು. ಈ ಕಾರಣದಿಂದ ಸಕಲಜೀವಾ ತ್ಮರಿಗೆ ಲೇಸನ್ನೇ ಬಯಸಬೇಕು. ಸಕಲರ ಜೊತೆ ಪ್ರೇಮಭಾ ವದಿಂದ ಇರಬೇಕು. ದಯೆಯೇ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕು ಎಂದು ನಾವು ನಿರ್ಧರಿಸುವಂತೆ ಮಾಡುವುದೇ ಅರಿವು.

ದೇವರು ಒಬ್ಬನಲ್ಲೊ ಯಪ್ಪ ಬಹಳ ಬಹಳ ಮಂದಿ ಹಾರ
ದೇವರು ಅಲ್ಲೆ ಅಲ್ಲೊ ಜಾಣ ಅವರು ಇಲ್ಲೆ ಇಲ್ಲೆ ಹಾರ
ತೆತ್ತೀಸ ಕೋಟಿ ಎಣಿಸಿ ಹೇಳಿದರು; ಎಲ್ಲರೂ ಇಲ್ಲೇ ಹಾರ ಅವರೆ
ನಾವಾಗಿ ಇರುತಾರ; ಹೇಳಬ್ಯಾಡ ಸತ್ಯ ಹೊಡಿಯುತಾರ

ಹೂವಿನೊಳ್ ವಾಸನೆ, ಹಾಲಿನೊಳಗೆ ತುಪ್ಪ ಎಲ್ಲರೂ ಒಪ್ತಾರ
ಗುರುಪೀರಾ ಖಾದರಿ ಬಿಚ್ಚಿ ಹೇಳಿದರೆ ಎಗರಿ ಬೀಳತಾರ

ದೇವರು ಬಹಳ ಮಂದಿ ಇದ್ದಾರೆ ಎಂದರೆ ಬಹುದೇ ವೋಪಾಸನೆ ಮಾಡಬೇಕೆಂದಲ್ಲ. ಪ್ರತಿಯೊಬ್ಬರು ತಮ್ಮೊಳಗಿನ ದೇವರನ್ನು ಆರಾಧಿಸಬೇಕು ಎಂದು ಅರ್ಥ. ಪ್ರತಿಯೊಬ್ಬರು ತಮ್ಮೊಳಗಿನ ದೇವರ ಜೊತೆ ಬದುಕಲು ಕಲಿತರೆ ಇಡೀ ವಿಶ್ವ ಸುಲಿಗೆಯಿಂದ, ಮೇಲುಕೀಳು ಭಾವನೆಯಿಂದ, ಹಿಂಸೆ, ಅತ್ಯಾಚಾರ, ಕೊಲೆ ಮತ್ತು ಯುದ್ಧಗಳಿಂದ ಮುಕ್ತವಾಗುತ್ತದೆ. ಹೂವಿನಲ್ಲಿ ವಾಸನೆ ಇರುವಂತೆ, ಹಾಲಿನೊಳಗೆ ತುಪ್ಪ ಇರುವಂತೆ ದೇವರು ನಮ್ಮೊಳಗೆ ಇರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಅವರವರ ಒಳಗಿರುವ ದೇವರ ಉಪಾಸನೆ ಮಾಡಬೇಕು ಮತ್ತು ಕೊನೆಗೆ ಆ ದೇವರೇ ಆಗಬೇಕು. ಆದರೆ ವಿಶ್ವಮಾನವರಾಗದೇ ಎಲ್ಲರೀತಿಯ ಶೋಷಣೆಯನ್ನು ಮಾಡುತ್ತ ಬದುಕ ಬಯಸುವವರು ಈ ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಇಂಥ ನಿಜತತ್ತ್ವಕ್ಕೆ ವಿರೋಧ ವ್ಯಕ್ತಪ ಡಿಸುತ್ತಲೇ ಇರುತ್ತಾರೆ.

ಹೇ ತೊಗಲಿನ ಕಾಯ ಭೇದವೇಕೊ ಮಹಾರಾಯ
ಮೈಯಲ್ಲಾ ನಿನಗೆ ಗಾಯ ನಿನ್ನಂತೆ ಅವರ ಕಾಯ
ಶಿವನಿರುವ ಗುಡಿಯೇ ತೊಗಲು ಮುಂದೆ ಕುಂತ ನಂದಿಯೇ
ತೊಗಲು; ಇವನು ತೊಗಲು, ಶಿವನು ತೊಗಲು, ಅರಿವು ಎಂಬ
ಗುರುಪೀರನೆ ತೊಗಲು

ಇಲ್ಲಿ ಗುರು ಖಾದರಿಪೀರಾ ಅವರು ತೊಗಲನ್ನು ನಶ್ವರ ವಸ್ತುವಿನ ಸಂಕೇತವಾಗಿ ಬಳಸಿದ್ದಾರೆ. ದೇಹ ಎಂಬುದು ವಸ್ತು, ಅರಿವಿನ ಮೂಲಕ ಆ ದೇಹದೊಳಗಿನ ಚೈತನ್ಯವನ್ನು ದೇವರೆಂಬುದನ್ನು ಮನಗಾಣಬೇಕು ಎಂದು ಸೂಚಿಸಿದ್ದಾರೆ. ಈ ಸತ್ಯವನ್ನು ಹೇಳುವ ಗುರು ಕೂಡ ಇತರರಂತೆ ವಸ್ತುವೇ ಆಗಿದ್ದಾನೆ. ಆದರೆ ಪ್ರತಿಯೊಂದು ವಸ್ತುವಿನ ಒಳಗೆ ದೇವರಿದ್ದಾನೆ.

ಪರಮ ಸುಂದರ ನೀನು, ನಿನ್ನ ಮಂದಿರ ನಾನು
ಸುಂದರ ಮಂದಿರವು ಎರಡು ಒಂದಾಗಿರಲು

ಕಲ್ಲು ಮೂರುತಿ ಮಾಡಿ ನಲ್ಲನೆಂದೆನುತಿರಲು
ನಲ್ಲ ಬಂದೊಡೆ ಕಲ್ಲು ಮೂರುತಿ ಸರಿಸಲು

ನಿನ್ನ ರಥವು ನಾನು, ರಥಕೆ ಸಾರಥಿ ನೀನು
ಎರಡು ಚಕ್ರದ ಆಟ ಇರಿಸು ಒಂದಾಗಿರಲು

ವಸ್ತುವೆಂಬುದು ಮಂದಿರ; ಅದರೊಳಗಿನ ಚೈತನ್ಯವೇ ಪರಮ ಸುಂದರ. ಅದುವೇ ಸತ್ಯ. ಅದುವೇ ಶಿವ. ಆ ಚೈತನ್ಯವೇ ಎಲ್ಲ ದೇವರುಗಳ ಮೂಲ. ಅದುವೇ ಪರಮ ಸುಂದರ. ವಸ್ತು ಎಂಬದು ಮತ್ತು ಮಾನವಕುಲ ಎಂಬುದು ರಥ ಮಾತ್ರ. ಆ ಪರಮ ಸುಂದರ ಚೈತನ್ಯವೇ ಸಾರಥಿ. ಈ ವಸ್ತು ಮತ್ತು ಚೈತನ್ಯದ ಅಭೇದ್ಯ ಸಂಬಂಧವೇ ಅದ್ವೈತ.

ಪಂಚಭೂತ ರಂಗಮಂಟಪ ರಚಿಸಿ; ಇದರೊಳು ಆತ್ಮದ ಪೀಠವ ಇರಿಸಿ ಕುಂತು
ಕಾಣದಂತೆ ನನ್ನೊಳು ಸೂತ್ರಧಾರಿಯಾಗಿ ನೀನು ನಾನಾಗಿ ಪಾತ್ರ ಮಾಡಿದ್ಯಾ

ಪ್ರತಿಯೊಂದು ಜೀವ ಪಂಚಮಹಾಭೂತಗಳಿಂದಲೇ ಸೃಷ್ಟಿಯಾಗಿದೆ. ಆ ಜೀವಿಗಳೊಳಗಿನ ಆತ್ಮದ ಪೀಠದ ಮೇಲೆ ಚೈತನ್ಯವೆಂಬ ದೇವರು ಕಾಣದಂತೆ ಆತ್ಮಸಾಕ್ಷಿಯಾಗಿ ಕುಳಿತು ಬದುಕಿನ ಸೂತ್ರಧಾರಿಯಾಗಿದ್ದಾನೆ. ಆತ ಆ ಜೀವಿಯ ಪಾತ್ರ ಮಾಡುತ್ತಿದ್ದಾನೆ. ಆದ್ದರಿಂದ ಆತ್ಮಸಾಕ್ಷಿಯೇ ದೇವರು. ಜೀವಿಯು ತನ್ನ ಆತ್ಮಸಾಕ್ಷಿಯ ಆದೇಶವನ್ನು ಪಾಲಿಸಿದರೆ ದುಃಖಕ್ಕೆ ಈಡಾಗುವುದಿಲ್ಲ.

ಎಲ್ಲ ಮಾನವರು ಒಂದೇ ಎಂಬ ನಿಜತತ್ತ್ವ ನೀ ತಿಳಿಬೇಕು
ಭೇದ ಮಾಡದೆ ಸರ್ವಜನರಲ್ಲಿ ರಬ್ಬಿಲಾಲನ ನೀ ಕಾಣಬೇಕು

ಹೀಗೆ ಎಲ್ಲರೊಳಗೂ ಒಂದೇ ತೆರನಾದ ಆತ್ಮಸಾಕ್ಷಿ ಇರು ತ್ತದೆ. ಆ ಮೂಲಕ ಎಲ್ಲರಲ್ಲೂ ಒಬ್ಬನೇ ದೇವರಿದ್ದಾನೆ. ಆ ದೇವರನ್ನು ನಮ್ಮ ಅರಿವಿನ ಕಣ್ಣುಗಳಿಂದ ಕಾಣುವುದರ ಮೂಲ ಕ ಎಲ್ಲ ಮಾನವರು ಒಂದೇ ಎಂಬ ಸತ್ಯವನ್ನು ಅರಿಯಬೇಕು. ಈ ನಿಜತತ್ತ್ವವನ್ನು ಅರಿತವನು ಜಾತಿ, ಧರ್ಮ, ದೇಶ ಮತ್ತು ಭಾಷೆಗಳ ಹೆಸರಿನಲ್ಲಿ ಜನರಲ್ಲಿ ಭೇದಭಾವ ಮಾಡದೆ ಎಲ್ಲ ರಲ್ಲೂ ದೇವರನ್ನೇ ಕಾಣುವನು. ತಾನು ಎಲ್ಲರೊಳಗೆ ಎಲ್ಲರೂ ತನ್ನೊಳಗೆ ಎಂದು ಬದುಕುವನು. ಹೀಗೆ ಬದುಕುವ ಅರಿವನ್ನು ಮೂಡಿಸುವುದೇ ನಮಾಜ (ಪ್ರಾರ್ಥನೆ) ಎಂದು ಖಾದರಿಪೀರಾ ತಿಳಿಸಿದ್ದಾರೆ. ಪ್ರಾರ್ಥನೆ ಎಂಬುದು ಸಕಲಜೀವಾತ್ಮರನ್ನು ಪ್ರೀತಿಸುವ ಮನಸ್ಸನ್ನು ರೂಪಿಸುವಂಥದ್ದು.

ಹೊಂದಿಕೊಂಡು ಒಂದಾಗಿರಲಿಲ್ಲಾ; ಕೂಡಿ ಬಾಳಲಿಲ್ಲಾ
ಶಾಂತಿ ಎಂಬುದೇ ಸಿಗಲಿಲ್ಲಾ ಪ್ರೀತಿ ಮಾಡಲಿಲ್ಲಾ

ಭೇದ ಮಾಡುವರೆಲ್ಲಾ ಬಲವಿದ್ದಲ್ಲಿ ಬಾಗುವರೆಲ್ಲಾ
ಪ್ರೀತಿ ಏನೆಂಬುದು ತಿಳೀಲಿಲ್ಲಾ ಹಾಳಾದರೆಲ್ಲಾ

ಪ್ರೀತಿ ಇಲ್ಲದೆ ಮಾನವನ ಮನಸ್ಸಿನಲ್ಲಿ ಶಾಂತಿ ಲಭಿಸದು. ಭಾವೈಕ್ಯದಿಂದ ಬದುಕುವ ಪ್ರಜ್ಞೆ ಮೂಡದು. ಭೇದಭಾವ ದಿಂದಾಗಿ ಬಲವುಳ್ಳವರು ಬಲಹೀನರನ್ನು ಗುಲಾಮಗಿರಿಗೆ ತಳ್ಳುವರು. ಲೋಕದಲ್ಲಿ ಅಶಾಂತಿಯ ವಾತಾವರಣ ನಿಮಾ೯ಣವಾಗುವುದು. ಹೀಗೆ ಪ್ರೀತಿಯ ಮಹತ್ವವನ್ನು ಅರಿಯದೇ ಜನರು ಹಾಳಾಗಿಹೋಗುವರು ಎಂದು ಖಾದರಿಪೀರಾ ಅವರು ಖೇದ ವ್ಯಕ್ತಪಡಿಸುತ್ತಾರೆ.

ರಾಜಭೋಗದ ದರ್ಪ ಸಿರಿ ಸಂಪತ್ತಿನ ದರ್ಪ
ಬುದ್ಧಿವಂತಿಕೆಯ ದರ್ಪ ದೊಡ್ಡವನೆಂಬುವ ದರ್ಪ
ಜೀವ ಹೋದಮ್ಯಾಲೆ ಏನಿಲ್ಲೊ ಮರುಳೆ

ಪ್ರತಿಯೊಬ್ಬರು ಪ್ರತಿಕ್ಷಣವೂ ಸಾವಿನ ದವಡೆಯ ಕಡೆಗೆ ಸಾಗುತ್ತಿರುತ್ತಾರೆ. ಇದನ್ನು ಅರಿಯದೆ ಅಧಿಕಾರ, ಶ್ರೀಮಂತಿಕೆ, ಬುದ್ಧಿವಂತಿಕೆ ಮತ್ತು ದೊಡ್ಡಸ್ತಿಕೆಯ ದರ್ಪದಿಂದ ಬದುಕು ವವರು ಕೂಡ ಎಲ್ಲವನ್ನೂ ಇಲ್ಲೇ ಬಿಟ್ಟು ಸಾಯುವರು. ಅವರ ಸೊಕ್ಕು ಧಿಮಾಕುಗಳೆಲ್ಲ ಅರ್ಥಹೀನವಾಗುತ್ತವೆ ಎಂಬುದನ್ನು ಆ ಧಿಮಾಕಿನವರು ಅರಿಯುವಂತೆ ಎಚ್ಚರಿಸುತ್ತಾರೆ.

ಸಾಧು ಆಗಿ ನೀ ಸಾಧನೆ ಇಲ್ಲದೆ ಭೋಗವ ಭೋಗಸೈತಿ ನಿನ್ನ ಮನ
ಯೋಗದ ತೋರಿಕೆ, ಜಾಗದ ಮಹಿಮೆ ಮನಸೆಲ್ಲಿ ಜಾರೈತಿ
ಹೇಳು ನಿನ್ನ ಮನಸೆಲ್ಲಿ ಜಾರೈತಿ

ಇಂಥ ವಿಷಮಸ್ಥಿತಿಯಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ತತ್ತ್ವದರ್ಶನ ಮಾಡಿಸಬೇಕಾದ ಧರ್ಮಗುರುಗಳು ಕೂಡ ಯಾವುದೇ ಸಾಧನೆ ಇಲ್ಲದೆ ಭೋಗಕ್ಕೆ ಮನಸೋತು ಅದರಲ್ಲೇ ನಿತ್ಯಾನಂದವನ್ನು ಕಾಣುತ್ತಿದ್ದಾರೆ. ತೋರಿಕೆಯ ಯೋಗ ಮತ್ತು ಧ್ಯಾನ ಹಾಗೂ ತಾವು ಪ್ರತಿನಿಧಿಸುತ್ತಿರುವ ಸುಕ್ಷೇತ್ರದ ಮಹಿಮೆ ಯಿಂದಾಗಿ ಇಂಥ ಧರ್ಮಗುರುಗಳು ವರ್ಚಸ್ಸನ್ನು ಬೆಳೆಸಿ ಕೊಂಡು ಮನೋ ಕಾಮನೆಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಇಂಥವರನ್ನು ಪ್ರಶ್ನಿಸುವ ಕ್ರಮವಿದು.

ದುಷ್ಟಶಕ್ತಿ ಹೇಳಿದಾ ಮಾತು ವೇದವಾಕ್ಯ ಬಡವನಿಗಾಯ್ತು
ಬಡವ ಹೇಳಲಾರದಂಗಾಯ್ತು ಹೇಳಿದರೆ ಹೆಣ ಸಿಗದಂಗಾಯ್ತು
ಶಕ್ತಿಶಾಲಿ ನೀನಾಗಬೇಕು ಸತ್ಸಂಗ ನಿನ್ನ ಉಸಿರಾಗಬೇಕು
ಮಾನವಂತರ ಮಾನ ನಿನ್ನಯ ಮಾನವಾಗಿ ತಿಳಿಯಬೇಕೊ

ಈ ದುಷ್ಟಶಕ್ತಿಗಳೆಲ್ಲ ಕೂಡಿ ಬಡವರ ಜೀವ ತಿನ್ನುತ್ತವೆ. ಇಂಥ ಅಧಿಕಾರಬಲ, ಧನಬಲ, ಅಂತಸ್ತುಬಲ ಮತ್ತು ಧರ್ಮ ಬಲ ಇದ್ದವರು ಹೇಳಿದ ಮಾತುಗಳನ್ನು ಬಡವರು ವೇದವಾ ಕ್ಯವೆಂಬಂತೆ ಸ್ವೀಕರಿಸುವುದು ಅನಿವಾರ್ಯವಾಗಿದೆ. ಒಂದುವೇಳೆ ಸ್ವೀಕರಿಸದೆ ಇದ್ದರೆ ಆತನ ಹೆಣವೂ ಸಿಗದಂಥ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಇಂದಿಗೂ ಮುಂದುವರಿದಿದೆ. ಇಂಥ ಸ್ಥಿತಿಯಲ್ಲಿ ಬಡವರು ಸತ್ಸಂಗ ಮಾಡುತ್ತ ದುಷ್ಟಶಕ್ತಿಗಳನ್ನು ಎದುರಿಸುವ ಕ್ರಮವನ್ನು ಅವರು ಬಹಳ ಮಾಮಿ೯ಕವಾಗಿ ಸೂಚಿಸಿದ್ದಾರೆ. ಸದಾ ನೋವು ಮತ್ತು ಅಪಮಾನಕ್ಕೆ ಒಳಗಾಗುವ ಬಡವರು ಒಂದಾಗದೆ ಇದ್ದಾಗ ಅವರನ್ನು ಬಲವುಳ್ಳವರು ಬಹಳ ಹೀನಾ ಯವಾಗಿ ಕಾಣುತ್ತಾರೆ ಎಂಬುದನ್ನು ಗುರು ಖಾದರಿಪೀರಾ ಅವರು ಕೋತಿ ಕರಡಿ ರಾಕ್ಷಸರು ತತ್ತ್ವಪದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಕೋತಿ ಕರಡಿ ರಾಕ್ಷಸರು ನಾವು ಹಿಂದೆ ಉಳಿದವರು
ದೇವಿ ದೇವತರೆಲ್ಲ ಮುಂದೊರೆದ ಹಾರುವರು

ಗುಡಿಗಳು ಹುಟ್ಟಲು ಕಾರಣರ್ಯಾರು; ಅದಕೆ ಪೂಜಾರಿ ಅವರು
ದಾನ ನೀಡಲು ಹಿಂದುಳಿದವರು; ಬೇಡುವವರೇ ಹಿರಿಯರು

ಸಹಾಯ ಮಾಡಿದ ಜಾಂಬುವಂತಗೆ ಕರಡಿಯೆಂದು ಕರೆದವರ್ಯಾರು
ಅಪಕಾರ ಮಾಡಿದವರು ದೇವರಾಗಿ ಮೆರಿತಿಹರು

ಜಾನಕಿಯ ತಂದವರ್ಯಾರು; ಕಪಿಸೈನ್ಯ ನಮ್ಮವರ ಹೆಸರು
ಕಷ್ಟದಿಂದ ಪಾರು ಮಾಡಲು ನಾವೇ ಪ್ರಜೆಗಳು, ಅವರೆ ರಾಜರು

ಯಲ್ಲಮ್ಮ ಯಾರವರು; ಹಿಂದುಳಿದ ನಾವೇ ಜೋಗಮ್ಮನವರು
ಕೊರಳಲ್ಲಿ ಕೆರು ಕಟ್ಟಿಕೊಂಡು ಬೆತ್ತಲಾಗಿ ನಮ್ಮವರು

ದೇವರ ಹೆಸರಿನಲ್ಲಿ ವ್ಯಭಿಚಾರ ಮಾಡುವರ್ಯಾರು; ಯಾಗದ ನೆಪದಲ್ಲಿ
ಕುರಿಕೋಣಕೋಳಿ ನುಂಗಿ ಮಂತ್ರ ಹೇಳಿದವರ್ಯಾರು

ಹಕ್ಕು ಕೇಳಬಾರದು ಯಾರು, ಹಿಂದುಳಿದ ನಾವೇ ಶೂದ್ರ ಜನರು
ಸತ್ತರೆ ಸುಡುವರ್ಯಾರು ನಾವೆ ಸಂಕಟರಮಣರು

ಗುರುಪೀರ ನಮ್ಮವರು ಬೈಲುಮಾಡಿ ತೋರಿದರು ಶೂದ್ರರಲ್ಲಾ
ನಾವೇ ರಾಜರು ಎಂದು ಸತ್ಯ ಹೇಳಿದವರು ಇವರೆ ನಮ್ಮ ಗುರುಗಳು

ದುಡಿಯುವ ಬಹುಪಾಲು ಶೂದ್ರ ಜನರೇ ರಾಜರು ಎಂಬ ಸತ್ಯವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಗುರು ಖಾದರಿ ಪೀರಾ ಅವರು ಕಾಲ೯ ಮಾಕ್ಸ೯ರ ಮತ್ತು ಸ್ವಾಮಿ ವಿವೇಕಾನಂದರ ಸಮಕಾಲೀನರು ಕೂಡ ಆಗಿದ್ದಾರೆ. ಕಾಲ೯ ಮಾಕ್ಸ೯ರ  ಅವರು ಕಾಮಿ೯ಕ ಸವಾ೯ಧಿಕಾರದ ಬಗ್ಗೆ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಶೂದ್ರರು ಈ ಜಗತ್ತನ್ನು ಆಳಬೇಕು ಎಂದು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಖಾದರಿ ಪೀರಾ ಅವರು ಶೂದ್ರರಲ್ಲಾ; ನಾವೇ ರಾಜರು ಎಂದು ಹೇಳಿದ್ದು ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತ ಬಂದ ಶೂದ್ರ ಜನಾಂಗದ ಬಗ್ಗೆ ಅವರಿಗೆ ಇರುವ ಕಾಳಜಿ ಯನ್ನು ತೋರಿಸುತ್ತದೆ.

ಸೌಹಾರ್ದ ಎಂಬುದು ತೋರಿಕೆಯ ಮಾತುಗಳಿಂದ ಸೃಷ್ಟಿ ಯಾಗುವಂಥದ್ದಲ್ಲ. ಮೇಲ್ಜಾತಿ ಮತ್ತು ಮೇಲ್ವರ್ಗದ ದೌರ್ಜನ್ಯ ವನ್ನು ಅಲ್ಲಗಳೆಯುತ್ತ, ಕೆಳಜಾತಿ ಮತ್ತು ಕೆಳವರ್ಗಗಳ ಜನಸ ಮುದಾಯಗಳ ಬಗ್ಗೆ ಅಂತಃಕರಣದ ವಾತಾವರಣ ಸೃಷ್ಟಿಸುತ್ತ ಸರ್ವಧರ್ಮ ಸಮಭಾವದ ಪ್ರಜ್ಞೆಯೊಂದಿಗೆ ಮಾನವೀಯ ಚಿಂತನೆಗಳನ್ನು ಹರಡಿದಾಗ ಸೌಹಾರ್ದದ ವಾತಾವರಣ ಸೃಷ್ಟಿಯಾಗುತ್ತದೆ. ಸೌಹಾರ್ದ ಸೃಷ್ಟಿಯಲ್ಲಿ ಕಾಳಜಿ, ಹೋರಾಟ, ಇದ್ದದ್ದನ್ನು ಇದ್ದ ಹಾಗೆ ಹೇಳುವ ನೈತಿಕ ಶಕ್ತಿ, ಸರ್ವಧರ್ಮ ಸಮಭಾವ ಮತ್ತು ಮಾನವ ಏಕತೆಯ ಪ್ರಜ್ಞೆ ಹೆಚ್ಚಿನ ಪಾತ್ರ ವಹಿಸುತ್ತವೆ. ಗುರು ಖಾದರಿಪೀರಾ ಅವರು ತಮ್ಮ ಬದುಕಿನಲ್ಲಿ ಸಾಧಿಸಿದ್ದು ಇದನ್ನೇ. ಅವರ ಸಾಧನೆಯ ಸಂಕೇತವಾಗಿ ಜ್ಞಾನಸಮುದ್ರ ನಮ್ಮ ಕಣ್ಣೆದುರಿಗಿದೆ.

ಶಿಶುನಾಳ ಶರೀಫರು ನಮಗೆ ಭಾವಪೂರ್ಣ ತತ್ತ್ವಪದ ಕಾರರಾಗಿ ಕಂಡುಬಂದರೆ ಸೂಫಿ ದೃಷ್ಟಿಕೋನದ ಧರ್ಮಗುರು ಖಾದರಿಪೀರಾ ಅವರು ಪ್ರಜ್ಞಾಪೂರ್ಣ ತತ್ತ್ವಪದಕಾರರಾಗಿ ಕಂಡುಬರುತ್ತಾರೆ. ದೇವರು ಎಲ್ಲರಲ್ಲಿ ಇದ್ದಾನೆ ಎಂದು ಪ್ರತಿಪಾದಿಸುವ ಅವರು ಗುಡಿ ಮಸೀದಿಗಳ ಬಗ್ಗೆ ಉದಾಸೀನ ಭಾವ ತಾಳುತ್ತಾರೆ. ನಮ್ಮ ದೇಹಗಳೇ ಗುಡಿ ಮಸೀದಿಗಳು ಎಂದು ಸಾರುವ ಅವರು ಜಾತಿ, ವರ್ಣ, ಶೋಷಣೆ ಮುಂತಾದ ಅನಿಷ್ಟಗಳ ಬಗ್ಗೆ ಸಾತ್ವಿಕ ಕೋಪವನ್ನು ವ್ಯಕ್ತಪಡಿ ಸುತ್ತಾರೆ. ಅಸ್ಪೃಶ್ಯರ ಮತ್ತು ಶೂದ್ರರ ಪರವಾಗಿ ನಿಲ್ಲುತ್ತಾರೆ. ತೋರಿಕೆಯ ದೇವರುಗಳನ್ನು ನಿರಾಕರಣೆ ಮಾಡುವ ಅವರು ಗಣಪತಿ, ದೇವಿ ಮುಂತಾದ ದೇವತೆಗಳನ್ನು ಕೂಡ ಸಂಕೇತಾ ರ್ಥದಲ್ಲಿ ನೋಡಿ ಪ್ರೇಮಭಾವದಿಂದಲೇ ಬರೆದಿದ್ದಾರೆ. ಸೂಫಿ ಪ್ರೇಮತತ್ತ್ವವು ಯಾವುದನ್ನೂ ನಿರಾಕರಿಸುವುದಿಲ್ಲ. ಆದರೆ ಮಾನವಘನತೆಗೆ ಕುಂದು ತರುವ ಯಾವುದನ್ನೂ ಸ್ವೀಕರಿಸುವುದಿಲ್ಲ.

ದಾನಧರ್ಮದ ನೆಪಕಾಗಿ ಜನರಲ್ಲಿ ತನ್ನಯ ಹಿತಕ್ಕಾಗಿ
ಕ್ವಾಣ ಕಡಿಯುವ ಧರ್ಮವೆ ಅಲ್ಲಾ; ಮಾರೆಮ್ಮನಿಗೆ ಅದು
ಬೇಕಿಲ್ಲಾ

ಪ್ರಾಣಿಬಲಿ ಕೊಡುವುದು ಧರ್ಮ ಅಲ್ಲ ಎಂದು ಹೇಳುವ ಅವರು, ಇದ್ದವರು ಜನರಿಂದ ತಮಗೆ ಲಾಭವಾಗುವ ಉದ್ದೇ ಶದಿಂದಲೇ ದಾನಧರ್ಮದ ನೆಪದೊಂದಿಗೆ ಇಂಥ ಸಂಪ್ರದಾ ಯಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅವರ ಸೂಕ್ಷ್ಮಪ್ರಜ್ಞೆಯ ಪ್ರತೀಕವಾಗಿದೆ.

ಮಾರೆಮ್ಮಾ ಅಲ್ಲಾ ತಮ್ಮಾ ಮಾ ಅಮ್ಮ ಎಂದು ತಿಳಿಸುತ್ತಾರೆ. ಅಮ್ಮನಿಗೆ ನೀ ತಿಳಿ ತಮ್ಮ; ಮನ್ಯಾಗ ಐದಾಳ ನಿಮ್ಮಮ್ಮ ಎಂದು ಹೇಳಿ ಮನೆಯೊಳಗಿನ ಅಮ್ಮನ ಸೇವೆ ಮಾಡಬೇಕೆನ್ನುತ್ತಾರೆ. ಅಮ್ಮನಂಥ ದೇವರು ಇಲ್ಲಾ; ಅಮ್ಮ ನಿಂದಲೇ ದೇವರು ಎಲ್ಲಾ ಎಂದು ಸಾರುತ್ತಾರೆ. ಹೀಗೆ ಮಾನವೀಯತೆ ಮತ್ತು ದೈವತ್ವದ ಮಧ್ಯೆ ಅಭೇದ್ಯ ಕಲ್ಪಿಸುವ ಅವರ ಕ್ರಮ ವಿಶಿಷ್ಟವಾಗಿದೆ.

ಅವರು ಮಾನವೀಯ ತತ್ತ್ವವನ್ನು ಸಾರುತ್ತಲೇ ಸಮಾ ಜದ ನಿಜಸ್ವರೂಪವನ್ನು ಅನಾವರಣಗೊಳಿಸುತ್ತ ಕಾವ್ಯರಚನೆ ಮಾಡಿದ್ದಾರೆ. ಒಳಗಿನ ಮಾತು ಸಂಗಯ್ಯನೇ ಬಲ್ಲ ಎಂಬ ತತ್ತ್ವಪದದಲ್ಲಿ ಅವರು ನಮ್ಮ ಸಮಾಜದ ನಿಜಸ್ವರೂಪವನ್ನು ಹೀಗೆ ತೋರಿಸಿದ್ದಾರೆ.

ಒಳಗಿನ ಮಾತು ಸಂಗಯ್ಯನೇ ಬಲ್ಲ; ಲಿಂಗಯ್ಯ ತಾನಾಗಿ ನೋಡ್ಯಾನ
ಲಿಂಗಸಂಗದ ಕೂನಾವು ತಾನಾಗಿ ಗುರುಪೀರಾ ಖಾದರಿ ಹೇಳ್ಯಾನ

ಸುಳ್ಳರಂಗ ನಿ ಇರದಿದ್ದರ ಇಲ್ಲಿ ಹುಚ್ಚನೆನ್ನುವರು ತಿಳಿ ನೀನಾ
ಬಟ್ಟೆತೊಟ್ಟು ಬಿಚ್ಚಿಡುವ ಜನರಿಗೆ ಸತ್ಯ ಕೆಟ್ಟ ಸಂಕಟರಮಣ

ಪ್ರೀತಿ ಮಾಡುವ ಜನರಿಗೆ ಜಗದಲ್ಲಿ ಅಸುರರೆಂದರು ತಿಳಿ ನೀನಾ
ಕುಡಿತ ಕಡಿತ ಜಡಿತೆಲ್ಲಾ ಮಾಡಿ ಇಲ್ಲಿ ದೇವರಾದರು ತಿಳಿ ಜಾಣಾ

ಕಾಲಿಗೆ ತಲೆಯೆಂದು ತಲೆಗೆ ಕಾಲೆಂದು ಪಂಡಿತರಾಗ್ಯಾರೊ ತಿಳಿ ನೀನಾ
ಸುರ ಅಸುರರ ಮೂಲಾ ಗುಟ್ಟು ತಿಳಿದ ಶರಣರಿಗಾಯಿತು ಅವಮಾನ

ಎಲ್ಲ ಧರ್ಮದಲ್ಲಿ ಮಣ್ಣಿಗೆ ಸುಣ್ಣ ಹೊಡೆದು ಸುಳ್ಳು ಹೇಳಿದವರಿಗೆ ಘನಸ್ಥಾನ
ಸತ್ಯ ಹೇಳಿದ ಸೂಫಿಸಂತರಿಗೆ ಗಲ್ಲಿಗೇರಿಸ್ಯಾರೊ ತಿಳಿ ನೀನಾ

ಮೂರು ಕಾಲದೊಳು ಬದಲಾಗುವ ಜನ ನೋಡಿ ತಿಳಿಯೊ ನೀ ಅವರ ಗುಣ
ಸಾಲಗುಂದಿಪುರದೊಳು ನೀ ಹಸನಾಗಿ ವೆಸನ ಮಾಡಿ ತಿಳಿ ನಿನ್ನ ನೀನಾ

ಗುರುವೇ ಖಾದರಿ ಪೀರನಾಗಿ ಹೇಳೋ ಇದ್ದದ್ದು ಇದ್ದಾಂಗ ಜಗದ ಗುಣ
ಸತ್ಯಶರಣರಿಗೆ ಕಾಡಿಸಿ ಕೊಲೆಮಾಡಿ ಬೆಂಕಿಯಂಥ ಶರಣೆಂದ ಜನ

ಇನ್ನೊಂದು ತತ್ತ್ವಪದದಲ್ಲಿ ಇಲ್ಲಿ ಧರ್ಮ ಎಂಬುದು ಬಂದೀಖಾನೆ ಅಲ್ಲಿ ನರಕ ಎಂಬುವ ಬಂದೀಖಾನೆ.. .. ಪ್ರೀತಿಯೇ ನಿಜಧರ್ಮ ನನ್ನ ಗುರುವಿನಾಣೆ ಎಂದು ಪ್ರೇಮದ ಉತ್ಕಟ ಭಾವವನ್ನು ಮೆರೆದಿದ್ದಾರೆ. ಎಲ್ಲ ಸೂಫಿ ಗಳಂತೆ ಅವರಿಗೆ ಪ್ರೇಮವೇ ಧರ್ಮವಾಗಿತ್ತು. ಬಸವಣ್ಣನವರ ದಯೆ ಮತ್ತು ಭಕ್ತಿಯನ್ನು ಅವರು ಪೇಮದ ಆದಿ ಮತ್ತು ಅಂತ್ಯವಾಗಿ ಕಾಣುತ್ತಾರೆ. ಅವರ ಬಡವರ ಬಸವ ಕವನ ಇದಕ್ಕೆ ಸಾಕ್ಷಿ.

ಬಸವ ಬಡವರ ಬಸವ ಕರುಣಾಸಾಗರ ಬಸವ
ಅಲ್ಲಮನ ಪ್ರಾಣ ಬಸವ ಅಕ್ಕನ ಮಾನ ಬಸವ

ಸರ್ವರೊಳು ಗುರುಸಂಗನ ಕಂಡ ಕಲ್ಯಾಣ ಬಸವ
ಬಸವ ನಿನ್ನಯ ವಾಸ ಕೂಡಲಸಂಗನ ಧ್ಯಾಸ
ಸತ್ಯ ಸಾರುವ ಧೀಶ ನಿನ್ನ ನೆನೆಯುವ ಧ್ಯಾಸ

ಮರೆತು ಬಾಳೆನಯ್ಯಾ ಬಸವ ನನ್ನುಸಿರು ನನ್ನ ಬಸವ
ಭೇದ ಅಳಿದವನೆ ಬಸವ ಪ್ರೀತಿ ತಿಳಿಸಿದವನೆ ಬಸವ
ಜಾತಿ ಧರ್ಮಕೆ ಅತೀತನಾಗಿ ಮಾನವತೆಯ ಪ್ರಾಣ ಬಸವ

ಎಲ್ಲಾ ನನ್ನವರೆಂದು ಭೇದವಿಲ್ಲದ ಬಂಧು
ಎಲ್ಲಾ ಮಾನವರೊಂದು ಎಲ್ಲರೂ ಶರಣರೆಂದು
ಎಲ್ಲರೊಳು ತಾ ಕಿರಿಯನೆಂದು ತನ್ನ ತಾನು ತಿಳಿದ ಬಸವ

ಬಿಜ್ಜಳನಿಗೆ ಬಸವನೇ ಮಂತ್ರ; ಹಾರವನ ಸ್ಥಾನ ಅತಂತ್ರ
ಕೊಂಡಿ ಮಂಚಣ್ಣನ ಕುತಂತ್ರ ಮಂತ್ರಿಪದವಿ ಬಿಟ್ಟುನಿಂತ
ದೀನರಾ ಮಾನ ಬಸವ ಬಡವರ ಪ್ರಾಣ ಬಸವ

ಬಡಜಂಗಮರು ಶಿವನೆಂದು ಸಾರಿದ ಧೀರಬಸವ
ಸಾಲಗುಂದಿಪುರದ ಜನರ ಪ್ರೀತಿಪ್ರಾಣವೆ ಬಸವ
ಗುರುಪೀರಾ ಖಾದರಿಯ ಜೀವದಾಜೀವ ಬಸವ

19ನೇ ಶತಮಾನದಲ್ಲಿ ಬಸವಣ್ಣ ಎಂದರೆ ಎತ್ತು ಎಂದು ತಿಳಿದಂಥ ವಾತಾವರಣವಿತ್ತು. ಕನ್ನಡಿಗರಲ್ಲಿ ವಚನಪ್ರಜ್ಞೆಯೇ ಮೂಡಿರಲಿಲ್ಲ. ಇಂಥ ಸ್ಥಿತಿಯಲ್ಲಿ ಖಾದರಿಪೀರಾ ಅವರು ಬಸವಣ್ಣನವರ ಬಗ್ಗೆ ಸೂಕ್ಷ್ಮ ವಿವರಣೆಗಳೊಂದಿಗಿನ ಒಳನೋಟವನ್ನು ಹೊಂದಿದ ಪದರಚನೆ ಮಾಡಿದ್ದು ಇಂದಿನ ವಚನತಜ್ಞರನ್ನು ಕೂಡ ಬೆರಗುಗೊಳಿಸುವಂಥದ್ದಾಗಿದೆ.

ಬಸವಣ್ಣ ಹುಟ್ಟಿದ ವಿಜಾಪುರದಲ್ಲೇ ಹುಟ್ಟಿದ ಪ್ರಖ್ಯಾತ ಸೂಫಿ ಸಂತರಾಗಿದ್ದ ಹಾಗೂ ತಮ್ಮ ಪತ್ನಿ ಸಯ್ಯದಾ ಬೀಬಿ ಜೈನಬ್ರವರ ಪೂರ್ವಜರಾಗಿದ್ದ ಖಾಜಾ ಅಮೀನುದ್ದೀನ ಆಲಾ (1597-1675) ಅವರ ಬಗ್ಗೆ ಖಾದರಿಪೀರಾ ಅವರು ಬರೆದದ್ದು ಶರಣ ಮತ್ತು ಸೂಫಿ ಬದುಕಿನಲ್ಲಿ ಯಾವುದೇ ಭೇದವಿಲ್ಲ ಎಂಬುದನ್ನು ಸೂಚಿಸುತ್ತದೆ.

ಸದ್ಗುರು ಅಮೀನ್ ಆಲಾ ಭೇದ ತೊರೆದು ನಿನೇ ಮೌಲಾ
ಕರುಣಿಸಿ ನನ್ನ ಮ್ಯಾಲೆ ನೀನಾದಿ ನನ್ನ ಶೀಲಾ

ಅಜ್ಞಾನಿಗಳಿಗೆ ನೀನು ಜ್ಞಾನದಾನ ಮಾಡುವಾತ
ಧರ್ಮಜಾತಿಭೇದ ಅತೀತಾ ಖ್ವಾಜಾ ಅಮೀನ್ ಆಲಾ

ದೊರೆಗಳಿಗೆ ದೊರೆಯಾದಾತ ಬಡವರಿಗೆ ನೀ ವಿಧಾತ
ಸರ್ವರಲಿ ನೀನೆ ಪ್ರಾಣ ಆಖಾ ಅಮೀನ್ ಆಲಾ

ಪ್ರೀತಿ ಒಂದೇ ನಿನ್ನ ಮಾತ; ಸಿದ್ಧ ನಾಥರಿಗೆ ನೀ ನಾಥ
ಭೇದವಿಲ್ಲೊ ನಿನಗೆ ತಾತಾ ಮೌಲಾ ಅಮೀನ್ ಆಲಾ

ಶೂನ್ಯ ಮರ್ಮ ತಿಳಿಸಿದಾತ ಭಯ ಬಯಲು ಮಾಡುವಾತ
ಧ್ಯಾನ ಜಪತಪಿಲ್ಲದಂತೆ ಮಮಾ ಮೋಕ್ಷ ಅಮೀನ್ ಆಲಾ

ಶಿರಹಟ್ಟಿ ಫಕೀರಸ್ವಾಮಿಗಳು ಖಾಜಾ ಅಮೀನುದ್ದೀನ ಅವರ ಶಿಷ್ಯರಾಗಿದ್ದರು. ಫಕೀರಸ್ವಾಮಿಗಳು ಹುಟ್ಟಿದಾಗ ಖಾಜಾ ಅಮೀ ನರು ಇಟ್ಟ ಹೆಸರೇ ಭಾವೈಕ್ಯದ ಪ್ರತೀಕವಾದ ಫಕೀರಸ್ವಾಮಿ. ಈ ಹೆಸರಿನಲ್ಲಿ ಸೂಫಿ ಮತ್ತು ಶರಣ ತತ್ತ್ವದ ಸಂಗಮವಾಗಿದೆ. ಇದು ಅಮೀನರ ಕನಸಾಗಿತ್ತು.

ತಮ್ಮ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರ ತತ್ತ್ವಗಳ ಜೊತೆ ಬಸವಣ್ಣ ಮತ್ತು ಖಾಜಾ ಅಮೀನರ ತತ್ತ್ವಗಳನ್ನು ಒಂದಾಗಿಸಿ ಮಾನವ ಏಕತೆಯ ತತ್ತ್ವಪದಗಳನ್ನು ಬರೆದ ಖಾದರಿಪೀರಾ ಅವರು ಈ ಧರ್ಮ ವ್ಯಾಕೊ ಈ ಜಾತಿಯಾಕೊ ಎಂಬ ಪದ್ಯದಲ್ಲಿ ಮೊದಲು ಮಾನವನಾಗು ಎಂಬುದನ್ನು ಒತ್ತಿಹೇಳಿದ್ದಾರೆ.

ಈ ಧರ್ಮವ್ಯಾಕೊ ಈ ಜಾತಿಯಾಕೊ
ಮೊದಲಿಗೆ ಮಾನವ ನೀನಾಗು ಸಾಕು

ಕರುಣೆಯೇ ನಿಜಧರ್ಮ ತಿಳಿದರೆ ಸಾಕು; ಪ್ರೀತಿಯೇ ನಿಜಪೂಜೆ ಈ ಭೇದವ್ಯಾಕೊ

ಸ್ನೇಹದಿ ನೀ ಸನಹ ಬರಲಿಲ್ಲವ್ಯಾಕೊ ಮೊದಲಿಗೆ ಮಾನವ ನೀನಾಗು ಸಾಕು

ತಿಳಿಯದೆ ಏನೇನು ನೀ ಮಾಡಿ ಕೆಟ್ಟಿ; ದೇವರ ಹೆಸರೇಳಿ ನೀನೆ ತಿಂದಿಟ್ಟಿ

ನಿರಾಕಾರ ನಿರಾಹಾರ; ಇಲ್ಲದವನಗ್ಯಾಕೊ, ಕಲ್ಲಿಗೆ ಎಡೆಮಾಡಿ ಕೆಡಿಸುವುದ್ಯಾಕೊ

ಮಾನವರೆಲ್ಲರೊಂದೆ ಎಂದ್ಹೇಳುವುದ್ಯಾಕೊ; ನಾಲ್ಕು ವರ್ಣದ ಭೇದ ಬಿಡುನೀ ಸಾಕು

ಮಾನವನೇ ನಿಜಧರ್ಮ ತಿಳಿದರೆ ಸಾಕೊ; ಸತ್ಯವೇ ಶಿವರೂಪ ನೀನಾಗಬೇಕು
ಹಸಿದ ಹೊಟ್ಟಿಗೆ ಹಿಟ್ಟು ಕೊಡಲಿಲ್ಲವ್ಯಾಕೊ ಕಲ್ಲುದೇವರಿಗೆಂದು ಯಡೆ ಮಾಡುವದ್ಯಾಕೊ

ಬೇಡುವವನಿಗೆ ನೀಡು ಕೆಡಸುವುದ್ಯಾಕೊ; ಉಡುವ ತಿನ್ನುವ ವಸ್ತು ನೀ ಸುಡುವುದ್ಯಾಕೊ
ಈ ಗೊಳ್ಳು ಧರ್ಮ ಈ ಜೊಳ್ಳು ಜಾತಿ: ಪ್ರೀತಿ ತಿಳಿಯದೆ ನೀನು ಹೀಂಗ್ಯಾಕ ಸಾಯ್ತಿ
ಈ ಕ್ರೋಧವ್ಯಾಕೊ ಈ ಭೇದ ಸಾಕೊ; ಮೊದಲಿಗೆ ಮಾನವ ನೀನಾಗು ಸಾಕು
ಕೈಯೊಳಗಿನ ಗಂಟೆ ನೋಡಲಿಲ್ಲವ್ಯಾಕೊ; ಆರತಿ ಬೆಳಕಲ್ಲಿ ಶಿವ ಕಾಣಲಿಲ್ಯಾಕೊ
ನೀ ದೇವನಾಗಿರುವಿ ತಿಳಿದರೆ ಸಾಕೊ; ಕಣ್ಣು ಮುಚ್ಚಿ ಬೆಕ್ಕಿನಂತೆ ಹಾಲು ಕುಡಿಯುವುದ್ಯಾಕೊ
ಪುರ ಸಾಲಗುಂದದೊಳಗೆ ಕೂಡಲಿಲ್ಲವ್ಯಾಕೊ; ತಿಳಿದು ಮತ್ತಿದರೊಳಗೆ ಬೆರಿಲಿಲ್ಲವ್ಯಾಕೊ
ಗುರುಪೀರ ಖಾದರಿಯ ದಯವೊಂದೇ ಸಾಕೊ; ಪ್ರೀತಿಯೆ ನಿಜಧರ್ಮ ತಿಳಿದೆಡುವೂದ್ಯಾಕೊ

ಮಾನವೀಯತೆ ಇಲ್ಲದ್ದು ಏನೇ ಇದ್ದರೂ ಅರ್ಥಹೀನ ಎಂಬ ಅವರ ದೃಢನಿಲುವು ಸದಾಕಾಲ ಮಾನವರನ್ನು ಎಚ್ಚರ ಗೊಳಿಸುವಂಥದ್ದಾಗಿದೆ. ಮಾನವೀಯತೆಯ ಅಭಾವದಿಂದಾ ಗಿಯೇ ನಮಗೆ ಮಂದಿರ ಮಸೀದಿ ವಿವಾದಗಳು ದೊಡ್ಡದಾ ಗುತ್ತವೆ. ಅಂದಿನ ದಿನಗಳಲ್ಲೇ ಇಂಥ ಸಮಸ್ಯೆಗಳು ಕುರಿತು ಗುಡಿಗುಂಡಾರದ ಜಗಳವ್ಯಾಕೊ ಯಪ್ಪ; ಮಾನವಗೆ ಮಾನ ವನು ತಾ ತಿಳಿಯಬೇಕು.

ಎಲ್ಲರೊಳಗೆ ಜೀವಶಿವನಿರುವಾಗ ಗುಡಿಕಟ್ಟಿ ಅವನಿಗೆ ಬಂಧ ನವ್ಯಾಕೊ ಎಂದು ಬುದ್ದಿ ಹೇಳಿದ್ದಾರೆ. ಈ ಬುದ್ಧಿ ನಮಗೆಲ್ಲ ಬಂದಿದ್ದರೆ ರಾಮಜನ್ಮಭೂಮಿ ವಿವಾದದಲ್ಲಿ ಸಹಸ್ರಾರು ಜನರು ಪ್ರಾಣ ಕಳೆದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗುವ ಪ್ರಸಂಗ ಬರುತ್ತಿರಲಿಲ್ಲ.

ಇವನ ಎಲ್ಲೆಲ್ಲಿ ಹುಡುಕಿದೆನಲ್ಲ ಅವನು ನನ್ನೊಳಗೆ ತಾನಿದ್ದನಲ್ಲ
ಸುಮ್ಮಸುಮ್ಮನೆ ತಿರುಗಿ ಸತ್ತೆನಲ್ಲ; ನನ್ನ ಒಡೆಯನ ನಾ ತಿಳಿಯ ಲಿಲ್ಲ

ಯವ್ವ ನನ್ನ ಗಂಡನ ನಾ ತಿಳಿಯಲಿಲ್ಲ
ಕಾಬಾ ಕಾಶಿಯೊಳಗೆ ಕಾಣಲಿಲ್ಲ; ವ್ಯರ್ಥ ಕಲ್ಲುಪೂಜೆ ಮಾಡಿ ಸತ್ತೆನಲ್ಲ

ಭೇದ ನಾ ಮಾಡಿ ಮೋಸ ಹೋದೆನಲ್ಲ; ನನ್ನ ಪ್ರಿಯಕರನ ನಾ ತಿಳಿಯಲಿಲ್ಲ
ದೇವರನ್ನು ಮಂದಿರ ಮಸೀದಿಗಳಲ್ಲಿ ಹುಡಕದೆ ನಮ್ಮೊಳಗೆ ಹುಡುಕಿದ್ದರೆ ಈ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ.

ಈ ಸೃಷ್ಟಿಗೆ ನೀನೊಡೆಯನಂತ ಸೃಷ್ಟಿಕರ್ತನ ಪ್ರತಿರೂಪವಂತ
ಕಲ್ಲುದೇವರು ಹೆಂಗ ಹುಟ್ಯಾರಂತ ಇವರಪ್ಪ ಅಮ್ಮ ಯಾರಂತ
ಈ ದೇವರಿಗೆ ನೀ ದೇವರಂತ ನಿನ್ನ ಬಿಟ್ಟು ದೇವರಿಲ್ಲಂತ ಭಗವಂತ

ಎಂಬ ತೀಕ್ಷ್ಣ ಮಾತುಗಳಿಂದ ಖಾದರಿಪೀರಾ ಅವರು ನಮ್ಮನ್ನು ಜಾಗೃತಗೊಳಿಸುತ್ತಾರೆ. ಕಣ್ಣಿಗೆ ಕಾಣುವ ಎಲ್ಲ ದೇವರು ಗಳನ್ನು ಮಾನವನೇ ಸೃಷ್ಟಿ ಮಾಡಿದ್ದಾನೆ. ಅವು ಕಾಲದ ತುಳಿತಕ್ಕೆ ಒಳಗಾಗುವ ದೇವರುಗಳು! ಆದರೆ ಆತ ತನ್ನೊಳಗಿನ ಅಗಮ್ಯ ಅಗೋಚರ ಮತ್ತು ಅಪ್ರತಿಮನಾದ ದೇವರನ್ನು ಕಾಣುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಹೀಗಾಗಿ ಜಾತಿ ಧರ್ಮಗಳ ಹೆಸರಿನಲ್ಲಿ ಭೇದಭಾವ ಮಾಡುವುದರಲ್ಲೇ ಮಾನವ ಆಯು ಷ್ಯವನ್ನು ಕಳೆದುಕೊಳ್ಳುತ್ತಾನೆ.

ಅಲ್ಲಾಕೇ ಬಂದೇ ತೊಗಲೆಲ್ಲ ಒಂದೆ; ಯೋಚಿಸು ನೀನ್ಯಾರು ಎಲ್ಲಿಂದ ಬಂದೆ. ನಿನ್ನ ನೀನು ತಿಳಿದುಕೊಂಡು ನಡಿಯಬೇಕು ಮುಂದೆ ಎಂದು ಅವರು ಮುಸ್ಲಿಮರಿಗೆ ಹೇಳಿದರೆ, ಹಿಂದು ಗಳಿಗೆ ಹೀಗೆ ಹೇಳುತ್ತಾರೆ:

ಬ್ರಾಹ್ಮಣ ವೈಶ್ಯ ಕ್ಷತ್ರಿಯ ಶೂದ್ರ ನಾಲ್ಕರಿಂದ ವೇದ ಭದ್ರ
ಶೂದ್ರ ಸಣ್ಣ ವಸ್ತು ಎಂದು ತಿಳಿಯಬ್ಯಾಡೊ ನೀ ದರಿದ್ರ
ತಿನ್ನುವ ಅನ್ನ ಶೂದ್ರ, ಕುಡಿಯುವ ನೀರು ಶೂದ್ರ

ತಿಳಿದು ಹೇಳಿದವನು ಇದ್ರ ಕೇಳಿದವನು ಬಲು ಭದ್ರ
ಹನಿಯಾಗಿ ಇರು ನೀ ಇದ್ರ ಸಾಲಗುಂದಿ ಬಲು ಭದ್ರ
ಪಿಂಡ ಅಂಡದೊಳಗೆ ಸೇರಿ ಒಳಗಿನಿಂದ ಬಂದ ಶೂದ್ರ

ಈ ಎಲ್ಲ ತಾರತಮ್ಯಗಳು ದೇಹದಲ್ಲಿ ಜೀವವಿರುವವರೆಗೆ ಮಾತ್ರ. ಆ ಜೀವವೇ ಪರಮಾತ್ಮ. ಆ ಪರಮಾತ್ಮ ನಮ್ಮಿಂದ ದೂರ ಹೋದ ಮೇಲೆ ನಾವು ಹೆಣವಾಗುವೆವು. ಅವ ನಿನ್ನಲ್ಲಿರುವತನಕ ಆನಂದ ಸಿಗುವುದು ನಿನಗ. ಅವ ಬಿಟ್ಟು ಹೋದ ಮ್ಯಾಗ ಹೆಣವೆಂದು ಕರಿವರು ನಿನಗ ಎಂದು ಖಾದರಿಪೀರಾ ಅವರು ಮಾನವದೇಹದ ನಶ್ವರತೆಯ ಬಗ್ಗೆ ಹೇಳುತ್ತಾರೆ. ನಮ್ಮ ಎಲ್ಲ ಮೇಲುಕೀಳುಗಳು ದೇಹಕ್ಕೆ ಅಂಟಿ ಕೊಂಡು ಮನಸ್ಸಿಗೆ ಕಿರಿಕಿರಿ ಮಾಡುತ್ತವೆ. ದೇಹವು ಐಹಿಕ ಸುಖವನ್ನು ಬಯಸುತ್ತದೆ. ಐಹಿಕ ಸುಖ ನೀಡುವ ವಸ್ತು ಮೋಹದಿಂದಾಗಿ ವರ್ಗಗಳು ಮತ್ತು ವರ್ಣಗಳು ಸೃಷ್ಟಿ ಯಾಗಿವೆ. ಮಾನವ ಐಹಿಕ ಸುಖವನ್ನು ಮೀರಿ ಒಳನೋಟದ ಅರಿವನ್ನು ಪಡೆದು ಜೀವಪರವಾದಾಗ ಸಹಜವಾಗಿಯೇ ಸರ್ವರಿಗೂ ಸಮಾನವಾದ ಬದುಕನ್ನು ಬಯಸುತ್ತಾನೆ. ಹೀಗೆ ಮಾನವರು ಸರ್ವಸಮತ್ವದಿಂದ ಬದುಕಬೇಕೆನ್ನುವುದೇ ಖಾದರಿಪೀರಾ ಅವರ ಆಶಯವಾಗಿದೆ.

ಇರಬೇಕವ್ವಾ ಇರಬೇಕು ಗುರು ಎಲ್ಲರಿಗಿರಬೇಕು. ಜಾತಿಧರ್ಮಗಳಿಗತೀತನಾದ ಸದ್ಗುರು ನಮಗೆ
ಇರಬೇಕು ಇರಬೇಕು ಗುರು ಇರಬೇಕು
ಎಂದು ಅವರು ಇಂಥ ಸದುದ್ದೇಶದಿಂದಲೇ ಹೇಳಿದ್ದಾರೆ.
ನಮ್ಮ ದೇಶಕ್ಕೆ ಮತ್ತು ನಮ್ಮ ಜನಗಳಿಗೆಲ್ಲ ಸೌಖ್ಯವಾಗಿರುವಂಥ ಸುಬುದ್ಧಿ ಕೊಡು ಅಲ್ಲಾ; ಈಶ್ವರನು ನೀನಾಗಿ ರಕ್ಷಿಸು ನಮಗೆಲ್ಲಾ ಎಂದು ಅವರು ಪ್ರಾತಿ೯ಸಿದ್ದಾರೆ. ಅವರ ದೇಶಪ್ರೇಮ ಅನುಕ ರಣೀಯವಾಗಿದೆ. ಅವರು ಬದುಕಿದ್ದ ಕಾಲದಲ್ಲಿ ಭಾರತ ಎಂಬುದು ಅನೇಕ ದೇಶಗಳ ದೇಶವಾಗಿತ್ತು. ಇಂದಿನ ಭಾರತ ದೇಶದ ಕಲ್ಪನೆ ಅಂದು ಇರಲಿಲ್ಲ. ಆದರೆ ಖಾದರಿಪೀರಾ ಅವರು ಭವ್ಯಭಾರತದ ಕನಸುಕಂಡಿದ್ದರು.

ನಮಿಸುವೆ ಭಾರತಿ ತಾಯಿಗೆ ಸಿರಬಾಗಿ ತಲೆಬಾಗಿ ಮಮತೆಯ ಮೂರುತಿ ನೀನೆಂದ
ಪುಣ್ಯ ಬೇಕು ಈ ಭೂಮಿಯಲು ಹುಟ್ಟಲು ಭಾಗ್ಯವಂತರು ನಾವೆಂದ

ಸೂಫಿಸಂತನ ಈ ದೇಶಪ್ರೇಮ ನಮಗೆಲ್ಲ ಮಾರ್ಗದಶಿ೯ಯಾಗಬೇಕಲ್ಲವೆ? ಅಷ್ಟೇ ಅಲ್ಲ ಮುಹಮ್ಮದ್ ಪೈಗಂಬರರು ಕೂಡ ಭಾರತದೇಶವನ್ನು ಪ್ರೀತಿಸಿದ್ದರು ಎಂಬುದನ್ನು ನಮ್ಮ ನೆನಪಿಗೆ ತರುತ್ತಾರೆ.

ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ
ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ
ಅಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛಂದ

ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್ನಲ್ಲಿ ಹಿಂದ್ (ಭಾರತ) ದೇಶದ ಬಗ್ಗೆ ಪ್ರಸ್ತಾಪವಿದೆ. ಹಿಂದ್ನಿಂದ ತಂಪುಗಾಳಿ ಬೀಸುತ್ತಿದೆ. ನಾನು ಹಿಂದ್ನಲ್ಲಿ ಇಲ್ಲ; ಹಿಂದ್ ನನ್ನೊಳಗೆ ಇದೆ ಎಂದು ಮುಂತಾಗಿ ಪೈಗಂಬರರು ಹೇಳಿದ ವಿಚಾರಗಳು ಹದೀಸ್ನಲ್ಲಿ ಇವೆ. ಈ ತಂಪುಗಾಳಿ ಶಾಂತಿ ತತ್ತ್ವದ ಪ್ರತೀಕವಾಗಿದೆ. ಉಪನಿಷತ್ತಿನ ಶಾಂತಿಮಂತ್ರಗಳು ಮತ್ತು ನಿಗು೯ಣ ನಿರಾಕಾರ ಬ್ರಹ್ಮತತ್ತ್ವ 1400 ವರ್ಷಗಳಷ್ಟು ಹಿಂದೆಯೆ, ಅಂದರೆ ಪೈಗಂಬರರ ಜೀವಿತಾವಧಿಯಲ್ಲೇ ಅರಬ್ ದೇಶವನ್ನು ತಲುಪಿದ ಸಾಧ್ಯತೆಗಳಿವೆ. ಇಂಥ ಮಹತ್ವದ ಚಿಂತನೆಗಳನ್ನು ಖಾದರಿಪೀರಾ ಅವರು ನಮ್ಮ ಮುಂದೆ ಇಟ್ಟು ವಿಶ್ವಬಂಧು ತ್ವದಲ್ಲಿ ಭಾರತದೇಶದ ಮಹತ್ವವನ್ನು 19ನೇ ಶತಮಾನದಲ್ಲೇ ಸಾರಿದ್ದಾರೆ.

ಸುಳ್ಳುದೇವರುಗಳೆಲ್ಲ ನಾಶವಾಗಿ ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವ ಕುಲ ಎಂದು ಮಾನವರು ನಂಬುವುದರ ಮೂಲಕ ಎಲ್ಲ ಅಡ್ಡಗೋಡೆಗಳನ್ನು ಕೆಡವುತ್ತ ಒಂದಾಗುವ ಕಾಲ ಬರುತ್ತದೆ ಎಂಬುದರಲ್ಲಿ ಅವರಿಗೆ ನಂಬಿಕೆ ಇದೆ. ಸಾಲಗುಂದಾದಂಥ ಹಳ್ಳಿಯ ಮೂಲೆಯೊಂದರಲ್ಲಿ ಕುಳಿತಿದ್ದ ಅವರು, ಕೈಗಾರಿಕೀಕರಣದಿಂದಾಗಿ ಜಗತ್ತಿನ ರೂಪು ಬದಲಾಗುತ್ತಿರುವುದನ್ನು ಮಾಧ್ಯಮದ ಸಹಾಯವಿಲ್ಲದೆ ಅತಿ೯ಸಿಕೊಂಡಿದ್ದಾರೆ. ಟಿ.ವಿ. ಜನಕ ಲೋಗಿ ಬಿಯಾಡ೯  ಹುಟ್ಟುವ ಮೊದಲೇ ಟಿ.ವಿ. ಬರುವ ಬಗ್ಗೆ ಅವರು ನಿಖರವಾಗಿ ತಿಳಿಸಿ ದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸೃಷ್ಟಿ ಯಾಗುತ್ತಿರುವ ಹೊಸ ಕಾಲದ ಬಗ್ಗೆ ಮುನ್ಸೂಚನೆ ನಿಡಿದ್ದಾರೆ. ದೇವರು ಧರ್ಮಗಳ ಕುರಿತ ಆಚಾರ ವಿಚಾರಗಳಲ್ಲಿ, ಜಾತಿ ಮತ್ತು ವರ್ಗಗಳಲ್ಲಿ, ಆಹಾರ ಧಾನ್ಯಗಳ ಉತ್ಪಾದನಾ ಮತ್ತು ಸಂಸ್ಕರಣಾ ವ್ಯವಸ್ಥೆಯಲ್ಲಿ, ಹೆಣ್ಣು ಗಂಡಿನ ಸಂಬಂಧಗಳಲ್ಲಿ ಅಗಾಧ ಬದಲಾವಣೆಗಳಾಗುವ ಬಗ್ಗೆ ಅವರು ತರ್ಕಬದ್ಧವಾದ ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲ ಬಲುಬೇಗ ಬರುತೈತೆ ಎಂದು ಬರೆದ ತತ್ತ್ವಪದವಿದು.

ಕಾಲ ಬಲುಬೇಗ ಬರತೈತೆ ಈ ದೇವರೆಲ್ಲ ನಾಶವಾಗುವ ಕಾಲ
ಬಲುಬೇಗ ಬರತೈತೆ

ಗೊತ್ತಿಲ್ಲದೆ ಗಳಿಸಿದ ಆಸ್ತಿ ಬಡವರ ಪಾಲಾಗುವ ಕಾಲ
ಜಾತಿಭೇದಗಳು ನಾಶವಾಗಲು ದ್ವೇಷವಿಲ್ಲದೆ ಬದುಕುವ ಕಾಲ

ಮಠದಲ್ಲಿಯ ಘಟದ ದೇವರಿಗೆ ಹಟದಿಂದ ಕಡಿಯುವ ಕಾಲ
ಹೊಗಳುತಿದ್ದ ನಾಯಿಗಳೆಲ್ಲ ಹಡಪತ್ತಿ ಅವು ಸಾಯುವ ಕಾಲ

ಹೆಚ್ಚಿನ ಬೆಳೆಯನು ತಂತ್ರಜ್ಞಾನದಿ ಯಂತ್ರದಿಂದ ಬೆಳೆಯುವ ಕಾಲ
ಧಾನ್ಯ ರಸವನು ಮಾನ್ಯ ಮಾಡಿಸಿ ಗುಳಿಗೆ ಮಾಡಿ ನುಂಗಿ ಬದುಕುವ ಕಾಲ

ಗಂಡು ಹೆಣ್ಣುಗಳ ಭೇದ ಅಳಿಯುವುದು; ಹೆಣ್ಣು ತನ್ನ ತಾ
ತಿಳಿದು ಬಾಳುವುದು; ಕೃತಕ ಗರ್ಭಧಾರಣದಿಂದ ಮಕ್ಕಳು ಜನ್ಮಪಡೆಯುವ ಕಾಲ

ದೇವರಿಂದ ಆಗದ ಕೆಲಸಕೆ ಮಾನವ ಸಾಧಿಸಿ ತೋರುವ ಕಾಲ
ಒಂದೆ ಕ್ಷಣದಿ ನಿಜಿ೯ವ ಲೋಹದಿ ಅಲ್ಲೆ ವಸ್ತು ಇಲ್ಲಿ ಕಾಣುವ ಕಾಲ

ಬಡವರು ಶ್ರೀಮಂತರಾಗುವರು, ಶ್ರೀಮಂತರು ಬಡವರಾಗುವರು
ಕಷ್ಟ ಪಟ್ಟವರು ಸುಖಭೋಗಿಸುವ ಸತ್ಯವೆಂಬ ನಿತ್ಯದ ಕಾಲ

ಉತ್ತರದಿಂ ನಾಶವಾಗುವರು ದಕ್ಷಿಣದಿಂ ರಾಜ್ಯವಾಳುವರು
ಚಪಲ ಮೋಸ ವಂಚನೆಯಲ್ಲ ಹಾಳಾಗಿ ಹಲ್ ಕಿಸಿಯುವ ಕಾಲ

ಸತ್ಯ ಮಿಥ್ಯಕೆ ಜಗಳಾಗುವುದು ಮಿಥ್ಯ ನಿತ್ಯ
ನಾಶ ಆಗುವುದು ಸತ್ಯಗುರು ಖಾದರಿ ಪೀರನು
ಹೇಳಿದ ಸತ್ಯ ನೋಡುವ ಕಾಲ

ಇಂಥ ಬದಲಾವಣೆಗಳೊಳಗಿನ ವೈರುಧ್ಯಗಳನ್ನೂ ಅವರು ಗುರುತಿಸಿದ್ದಾರೆ. 150 ವರ್ಷಗಳಿಗೂ ಹಿಂದೆಯೆ ಪ್ರಜಾಪ್ರಭು ತ್ವದಲ್ಲಿನ ಸಮಸ್ಯೆಗಳನ್ನು ಗುರುತಿಸಿದ್ದಾರೆ.

ಪ್ರಜೆಗಳೆಲ್ಲ ಪ್ರಭುಗಳು ಎಂದು ಹೇಳುವರು ಜನರಲ್ಲಿ
ಸುಳ್ಳು ಮೋಸ ವಂಚನೆ ಮಾಡಿ ಪ್ರಭುಗಳು ಆಗುವರು ಇಲ್ಲಿ

ಸತ್ಯವೆಂಬಾ ಬಡತನದಲ್ಲಿ ಸುಳ್ಳಿಗೆ ಶ್ರೀಮಂತಿಕೆಯಿಲ್ಲಿ
ನೂರಾರು ಮನೆಗಳು ಮುರಿದು ಧರ್ಮಛತ್ರ ಕಟ್ಟುವರಲ್ಲಿ

ಎಂದು ಅವರು ಹೇಳುವಲ್ಲಿ ಇಂದಿನ ಭ್ರಷ್ಟಸಮಾಜದ ಬೇರುಗಳಿವೆ. ಎಷ್ಟೊಂದು ತರ್ಕಬದ್ಧ ಮುಂದಾಲೋಚನೆಯ ವಿಶಿಷ್ಟ ಸೂಫಿ ಈ ಖಾದರಿಪೀರಾ ಎಂಬುದು ಅವರ ತತ್ತ್ವಪದಗಳ ಓದುಗರಿಗೆ ಅನಿಸದೆ ಇರದು.

ಉಳಿಯದೊ ಯಪ್ಪಾ ಈ ದೇಶ ಹಿಂಗಾದರೆ ದಿವಸಾ
ಜಾತಿಯ ಜಗಳವೆದ್ದು ಬಿದ್ದಾರೊ ತಾವೆ ಎದ್ದು ದಿವಸಾ
ನ್ಯಾಯಾದ ಮೂಲ ಈ ಖೋಡಿ ಜಗಳ

ಹೀಗೆ ಅವರು ಜನಸಮುದಾಯಗಳ ಮಧ್ಯದ ವೈರು ಧ್ಯಗಳು ದೇಶದ ಏಕತೆಗೆ ಹೇಗೆ ಕಂಟಕವಾಗುತ್ತವೆ ಎಂಬುದನ್ನು ತಿಳಿಸಿಹೇಳಿದ್ದಾರೆ. ಜಾತಿ ಧರ್ಮಗಳ ಮಧ್ಯದ ವೈರುಧ್ಯ ಹೆಚ್ಚಾದಂತೆಲ್ಲ ಪರಿಸ್ಥಿತಿ ಉಲ್ಬಣಗೊಂಡು ಇಂದು ದೇಶ ಭಯೋತ್ಪಾದಕರ ಮತ್ತು ಕೋಮುಗಲಭೆಕೋರರ ಸ್ಥಾನವಾಗಿದೆ. ಈ ದೇಶ ದುದಿ೯ನಗಳನ್ನು ಕಾಣಬಾರದು ಎಂಬುದು ಅವರ ಕಳಕಳಿಯಾಗಿತ್ತು. ಸೌಹಾರ್ದ ಬದುಕಿನಿಂದ ಮಾತ್ರ ಈ ದುರಂತವನ್ನು ತಪ್ಪಿಸಲು ಸಾಧ್ಯ ಎಂಬುದು ತಮ್ಮ ಬಹುಪಾಲು ತತ್ತ್ವಪದಗಳಲ್ಲಿ ಸೂಚಿಸಿದ್ದಾರೆ.

ಎಲ್ಲಾ ನೀನೇ ಮಾಡಿ ಅವನ ಹೆಸರು ಹೇಳಬೇಕು ಪುಣ್ಯವಂತನವನು
ಅವನೇ ನಾನೆಂದು ಹೇಳಿದ ಮನಸೂರಗೆ ಗಲ್ಲಿಗೇರಿಸಿಲ್ಲೇನು?
ಬ್ಯಾಡೆಂದು ಹೇಳಲಿಲ್ಲ ಕಾರಣೇನು?

ಸೂಫಿಸಂತ ಮನಸೂರ್ ನಾನೇ ಸತ್ಯ ಎಂದು ಹೇಳಿದ್ದಕ್ಕೆ ದೈವನಿಂದನೆಯ ಆರೋಪ ಹೊರಿಸಿ ಗಲ್ಲಿಗೇರಿಸಲಾಯಿತು. ಸಮಾಜ ಅದನ್ನು ವಿರೋಧಿಸಲಿಲ್ಲ. ಮನುಷ್ಯರು ತಮ್ಮೊಳಗಿನ ಶಕ್ತಿಸಾಮಥ್ರ್ಯದಿಂದ ಎಲ್ಲವನೂ ಸಾಧಿಸುತ್ತಾರೆ. ಆದರೆ ಅದೆಲ್ಲದಕ್ಕೆ ತಮ್ಮೊಳಗಿನ ದೇವರೇ ಕಾರಣ ಎಂದು ತಿಳಿಯದೆ ಇಲ್ಲದ ದೇವರ ಹೆಸರು ಹೇಳುತ್ತಾರೆ ಎಂದು ಖಾದರಿಪೀರಾ ಬೇಸರ ವ್ಯಕ್ತಪಡಿಸುತ್ತಾರೆ.

ದೇವರ ಹೆಸರೇಳಿ ನೀನು ಮಾಡಬ್ಯಾಡೊ ಕದನ
ಭೇದ ಅಳೆದು ಪ್ರೀತಿ ಮಾಡಿದರೆ ನಿನೆ ದೇವರು ಗೊತ್ತಿಲ್ಲೇನಾ
ಯೋಚಿಸಿ ನೋಡಪ್ಪಾ ನೀನಾ; ಬಿಡು ನಿನ್ನ ಕೆಟ್ಟ ಗುಣಾ

ನಮ್ಮ ದೇಶದ ದುರಂತವೆಂದರೆ ಮಾನವರು ತಮ್ಮ ದೇವರು ಮತ್ತು ಧರ್ಮದ ಹೆಸರಿನಲ್ಲೇ ಗಲಭೆಗಳನ್ನು ಸೃಷ್ಟಿ ಸುತ್ತಾರೆ. ಆದರೆ ಭೇದ ಅಳಿಸಿ ಪ್ರೀತಿ ಭಾವದ ಮೂಲಕ ತಾವೇ ದೇವ ರಾಗಬೇಕೆಂಬ ತೀವ್ರತೆಯನ್ನು ಅವರು ಹೊಂದಿರುವುದಿಲ್ಲ. ಅಂದರೆ ತಮ್ಮೊಳಗಿನ ಸದ್ಭಾವನೆಗಳ ಜೊತೆ ಬದುಕುವುದನ್ನು ಅವರು ಕಲಿಯಲು ಪ್ರಯತ್ನ ಮಾಡುವುದಿಲ್ಲ. ಇದೇ ಎಲ್ಲ ಭೇದಭಾವಗಳ ಮತ್ತು ಶೋಷಣೆಯ ಮೂಲವಾಗಿದೆ. ಈ ನೋವು ಖಾದರಿಪೀರಾ ಅವರಿಗೆ ಕಾಡುತ್ತಲೇ ಇದೆ. ಸತ್ಯ ಹೇಳಿದ ಹುತಾತ್ಮ ಸೂಫಿಸಂತ ಮನಸೂರರನ್ನು ಅವರು ಅನೇಕ ಕಡೆ ನೆನಪಿಸಿಕೊಳ್ಳುತ್ತಾರೆ. ಸತ್ಯ ಹೇಳಿದವರಿಲ್ಲಿ ಉಳೀ ಲಿಲ್ಲ ಮನಸೂರ್ಗ ಗಲ್ಲಿಗೇರಿ ಸ್ಯಾರಲ್ಲ ಎಂದು ದುಃಖ ಪಡುತ್ತಾರೆ.

ಯಾವುದೇ ಧರ್ಮ ತನ್ನತನವನ್ನು ಉಳಿಸಿಕೊಳ್ಳಬೇಕಾದರೆ ಅದು ಅಹಿಂಸೆ, ಸಮಾನತೆ ಮತ್ತು ಶಾಂತಿಯ ಮೇಲೆ ನಿಂತಿರಬೇಕಾಗಿರುತ್ತದೆ. ವಿಶ್ವಶಾಂತಿ ಮತ್ತು ಸತ್ಯದರ್ಶನಕ್ಕೆ ಇವೇ ಮೂಲವಾಗಿರುತ್ತವೆ. ಹಿಂಸೆಯನ್ನು ಮುಂದಿಟ್ಟುಕೊಟ್ಟು ಯಾವುದೇ ಧರ್ಮ ಸತ್ಯದರ್ಶನ ಮಾಡಿಸಲಾರದು. ಮಾನವ ಅಹಿಂಸೆಯನ್ನು ಪಾಲಿಸಬೇಕು. ಅಹಿಂಸೆಯು ಆತ್ಮಸಾಕ್ಷಾ ತ್ಕಾರದೆಡೆಗೆ ಒಯ್ಯುತ್ತದೆ. ಆತ್ಮಸಾಕ್ಷಾತ್ಕಾರದಿಂದ ಶಾಂತಿ ಲಭಿ ಸುತ್ತದೆ. ಈ ಒಳಗಿನ ಶಾಂತಿಯೇ ವಿಶ್ವಶಾಂತಿಗೆ ಮೂಲಾಧಾರ ವಾಗುತ್ತದೆ. ಆ ಮೂಲಕ ಸಮಾನತೆಯಿಂದ ಕೂಡಿದ ವಿಶ್ವ ಭ್ರಾತೃತ್ವ ಶಾಶ್ವತವಾಗುತ್ತದೆ. ಇಂಥ ವಾತಾವರಣದಲ್ಲಿ ಮಾನವ ರೇ ದೇವರಾಗುತ್ತಾರೆ. ಹೀಗೆ ಮಾನವರನ್ನು ಉದ್ಧರಿಸುವುದು ಧರ್ಮದ ಕಾರ್ಯವಾಗಿದೆ.

ಹಿಂಸೆ ಎಂಬುದು ಧರ್ಮಕ್ಕೆ ಅಂಟಿದ ಕಳಂಕ. ಅದು ಧರ್ಮ ನಿಂದನೆಯ ಆರೋಪದ ಮೇಲೆ ನಡೆಯಬಹುದು. ಧರ್ಮ ಯುದ್ಧದ ನೆಪದಲ್ಲಿ ನಡೆಯಬಹುದು. ಧರ್ಮರಕ್ಷಣೆಯ ನೆಪದಲ್ಲಿ ನಡೆಯಬಹುದು. ಈ ಹಿಂಸಾ ಪ್ರವೃತ್ತಿ ಕೊನೆಯಲ್ಲಿ ಕೋಮುಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ಕೊನೆಗೊ ಳ್ಳುವುದು. ಆದ್ದರಿಂದ ಧರ್ಮದ ಹೃದಯವನ್ನು ಅರಿಯುವುದು ಅವಶ್ಯವಾಗಿದೆ. ಆ ಹೃದಯವಂತಿಕೆಯ ಆಧಾರದ ಮೇಲೆ ಧರ್ಮದ ಬುದ್ಧಿಯ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಆದರೆ ಮೂಲಭೂತವಾದಿಗಳು ತಮ್ಮ ಧರ್ಮದ ಭುಜಭಲವನ್ನು ಮಾತ್ರ ನೋಡಲು ಬಯಸುತ್ತಾರೆ. ಹೀಗಾಗಿ ಅವರಿಗೆ ಅವರ ಧರ್ಮಗ್ರಂಥಗಳ ಅಂತರಾಳ ಗೊತ್ತೇ ಆಗುವುದಿಲ್ಲ. ಜಗತ್ತಿನ ದೇವರುಗಳಿಗೆ ಇಟ್ಟ ಹೆಸರುಗಳೆಲ್ಲ ಮನುಷ್ಯರು ಇಟ್ಟ ಹೆಸರುಗಳೇ ಆಗಿವೆ. ದೇವರು ಅಖಂಡ ಪ್ರೇಮಸ್ವರೂಪದಲ್ಲಿ ಮಾತ್ರ ಇರುತ್ತಾನೆ. ಅಲ್ಲಿ ಹಿಂಸೆ, ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ಗುಲಾಮಗಿರಿಗೆ ಅವಕಾಶವಿಲ್ಲ.

ಒಬ್ಬ ಗುರು ತನ್ನ ಕಿರಿಯ ಶಿಷ್ಯನಿಗೆ ಕುದುರೆಗೆ ನೀರು ತೋರಿಸಿಕೊಂಡು ಬಾ ಎಂದು ಹೇಳುತ್ತಾನೆ. ಆತ ಕುದುರೆ ಯನ್ನು ನದಿ ದಂಡೆಗೆ ಒಯ್ದು, ಕುದುರೆಗೆ ನೀರು ಕುಡಿಯಲು ಅವಕಾಶ ಕಲ್ಪಿಸದೆ ಬರಿ ತೋರಿಸಿಕೊಂಡು ಬರುತ್ತಾನೆ. ಇದನ್ನು ಅರಿತ ಗುರು ತನ್ನ ಹಿರಿಯ ಶಿಷ್ಯನನ್ನು ಕರೆದು ಕುದುರೆಗೆ ನೀರು ತೋರಿಸಿಕೊಂಡು ಬಾ ಎಂದು ಹೇಳುತ್ತಾನೆ. ಆ ಹಿರಿಯ ಶಿಷ್ಯ ಕುದುರೆಯನ್ನು ನದಿ ದಂಡೆಗೆ ಒಯ್ದು ಬಿಡು ತ್ತಾನೆ. ಆಗ ಕುದುರೆ ನೀರು ಕುಡಿಯುತ್ತದೆ. ಕುದುರೆಯು ಎಮ್ಮೆಯ ಹಾಗೆ ಅಲ್ಲ. ಅದು ನೀರು ಕಂಡಲ್ಲಿ ಮುಳುಗುವುದಿಲ್ಲ. ನೀರಡಿಕೆಯಾದಾಗ ಮಾತ್ರ ನೀರ ಬಳಿ ಹೋಗುತ್ತದೆ. ಕುದುರೆಗೆ ನೀರು ಕುಡಿಯಲು ಕೂಡ ಒತ್ತಾಯಿಸಬಾರದು. ನೀರು ತೋರಿಸಬೇಕು ಅಷ್ಟೆ. ಅಂದರೆ ಅದಕ್ಕೆ ನೀರಿನ ಬಳಿ ಬಿಡಬೇಕು. ಅದು ಕುಡಿಯಬಹುದು ಅಥವಾ ಬಿಡಬಹುದು, ಒತ್ತಾಯವಿಲ್ಲ.

ಕಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಮೂಲಭೂತವಾದಿಗಳು ಧರ್ಮಗ್ರಂಥಗಳನ್ನು ಅಥೈ೯ಸುತ್ತಾರೆ. ಆದರೆ ಸೂಫಿಗಳು, ಶರಣರು, ಸಂತರು, ದಾಸರು ಮತ್ತು ತತ್ತ್ವಪದಕಾರರು ಹಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥ ಮಾಡಿಕೊಂಡಂತೆ ಧರ್ಮದ ಮಾತನ್ನು ಅರ್ಥಮಾಡಿ ಕೊಳ್ಳು ತ್ತಾರೆ. ಹೀಗೆ ಎಲ್ಲ ಸೂಫಿಗಳ ಹಾಗೆ ಖಾದರಿಪೀರಾ ಅವರು ಪವಿತ್ರ ಖುರಾನ್ ಅನ್ನು ಅರ್ಥ ಮಾಡಿಕೊಂಡರು. ತುಳಿತಕ್ಕೊ ಳಗಾದವರು ಮತ್ತು ಅಪಮಾನಕ್ಕೆ ಒಳಗಾದವರು ಈ ಜಗತ್ತನ್ನು ಆಳಬೇಕೆಂದು ಖುರಾನ್ ಬಯಸುತ್ತದೆ. ಈ ಖುರಾನ್ ಆಶಯ ಗಳೊಂದಿಗೆ ಸಾಲಗುಂದಾದಲ್ಲಿ ಬದುಕಿದ ಖಾದರಿಪೀರಾ ಅವರು ಶರಣರ ಮಾರ್ಗದಲ್ಲಿ ನಡೆಯುತ್ತ ಜನರಿಗೆ ಹೊಸ ಬದುಕಿನ ಬೆಳಕನ್ನು ನೀಡಿದ್ದು ಒಂದು ಅಪೂರ್ವ ಸಾಧನೆ ಯಾಗಿದೆ. ಅಂತೆಯ ಅವ್ರು ಮೇಲೆ ತಿಳಿಸಿದ ಕಿರಿಯ ಶಿಷ್ಯನಂತಿ ರುವ ಮುಲ್ಲಾ ಮೌಲಾನರನ್ನು ಪ್ರಶ್ನಿಸುತ್ತಾರೆ.

ನಿನ್ನ ನೀನು ತಿಳಿಯೋ ಮುಲ್ಲಾ, ದಯವಿಲ್ಲದೆ ಧರ್ಮವಿಲ್ಲ
ನಲ್ಲನ ನೀ ಎಂದು ನೋಡಲಿಲ್ಲ, ಬರೆ ಕೂಗಿದೋ ಮುಲ್ಲಾ
ನೋಡಿ ನಿನಗೆ ನಗುತಾನ ಅಲ್ಲಾ, ನೀ ನೋಡಲಿಲ್ಲ

ಎಂದು ಹೇಳುವ ಮೂಲಕ ಅವರು ಮುಸ್ಲಿಂ ಮೂಲ ಭೂತವಾದಿಗಳನ್ನು ಎದುರು ಹಾಕಿಕೊಳ್ಳುತ್ತಾರೆ. ದೇವರಲ್ಲಿ ಅಚಲವಾದ ನಂಬಿಕೆ ಇರುವ ಅವರು ಆತನನ್ನು ಮನುಷ್ಯನ ಒಳಗೇ ಕಾಣಲು ಲೋಕಕ್ಕೆ ತಿಳಿಸುತ್ತಾರೆ. ಸೂಫಿಗಳಿಂದ ಆರಂಭ ವಾದ ಈ ಕ್ರಮ ಶರಣರಲ್ಲಿ ಅಂತಿಮ ಘಟ್ಟವನ್ನು ತಲುಪಿದೆ. ಇವೆರಡೂ ತತ್ತ್ವಗಳ ಸಂಗಮವಾಗಿರುವುದರಿಂದಲೇ ಖಾದರಿ ಪೀರಾ ಅವರಿಗೆ ಇಂಥ ಪ್ರಖರ ತಾತ್ತ್ವಿಕ ವೈಚಾರಿಕತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ.

ಅಲ್ಲಾ ನೀನೆಲ್ಲಾ ಸೃಷ್ಟಿ ಮಾಡಿದ್ಯೋ ನಮಗೆಲ್ಲಾ
ನಮ್ಮೊಳಗೆಲ್ಲಾ ನೀನೇ ಇರಲು ಹೇಗೆ ಹೇಳಲಿ ನೀನಿಲ್ಲಾ

ನಿನ್ನ ಹೆಸರಿಲೆ ಧರ್ಮವ ರಚಿಸಿ ಭೇದ ಮಾಡುವ ಜನರೆಲ್ಲಾ
ಭೇದ ಮಾಡುತಾ ಭವಿಗಳಾಗಿ ಅವು ತಿರುಗಿ ತಿರುಗಿ ಸಾಯುವರೆಲ್ಲಾ

ಎಂದು ಅವರು ಧರ್ಮಗಳ ಹೆಸರಲ್ಲಿ ಭೇದ ಸೃಷ್ಟಿಸುವ ಜನರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಶರಣರ ಹಾಗೆ ಸ್ವರ್ಗ ನರಕಗಳನ್ನು ತಿರಸ್ಕರಿಸುತ್ತ ಸ್ವರ್ಗ ನರ್ಕದ ಆಸೆಯ ಭಯದಲ್ಲಿ ಎಲ್ಲರೂ ಮುಳುಗ್ಯಾರ. ಸ್ವರ್ಗ ಎಲ್ಲೈತೆ ನರ್ಕ ಎಲ್ಲೈತೆ ಹೇಳದೆ ಸಾಯ್ತಾರ ಯಪ್ಪ ಎಂದು ಅವರು ಹೇಳುತ್ತಾರೆ.

ಮಸೀದಿ ಎಂಬುದು ಹಾಳಾದ ಜಾಗ ಅದರ ಗೊಡವಿ ನಿನಗ್ಯಾಕಂತೆ
ಮಾನವಗೆ ಮಾನವ ತಾ ತಿಳಿದರೆ ಎಲ್ಲ ನಿನ್ನೊಳಗಡಗೈತಂತೆ

ಎಂದು ಹೇಳಲು ಕೂಡ ಅವರು ಹಿಂಜರಿಯುವುದಿಲ್ಲ. ದೇವರು ಮಸೀದಿಯಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಅವರ ಆಶಯ ವಾಗಿದೆ. ಆದ್ದರಿಂದ ಅವರಿಗೆ ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ಎಂಬುದು ಸಿದ್ಧವಾಗುತ್ತದೆ.

ಯಾಕಬೇಕು ನಮಗೆ ಇಂಥ ಸ್ವಾರ್ಥದಿಂದ ಕೂಡಿದ ಧರ್ಮ
ಪಶು ನಾಯಿ ಹಂದಿಗಿಂತ ಕೀಳಾದ ಶೂದ್ರ ಧರ್ಮ
ನಾಲ್ಕು ವರ್ಣದ ವಿರುದ್ಧ ಹುಟ್ಟಿಬಂತು ಸತ್ಯ ಬಸವಧರ್ಮ

ಜನರು ಕೀಳಾಗಿರುವುದಿಲ್ಲ. ಆದರೆ ಜನರನ್ನು ಕೀಳು ಮಾಡು ವ ಧರ್ಮಗಳು ನಾಯಿ ಹಂದಿಗಳಿಗಿಂತಲೂ ಕೀಳಾಗಿರುತ್ತವೆ. ಇಂಥ ಕೀಳುವರ್ಣವ್ಯವಸ್ಥೆಯನ್ನು ಹೊಂದಿರುವ ಧರ್ಮದ ವಿರುದ್ಧ ಸತ್ಯ ಬಸವಧರ್ಮ ಹುಟ್ಟಿಬಂದಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಯಾವ ಪಂಚಮರನ್ನು ಮತ್ತು ಶೂದ್ರರನ್ನು ವರ್ಣವ್ಯವಸ್ಥೆಯ ಧರ್ಮ ಕೀಳಾಗಿ ಕಂಡಿತೋ ಅಂಥವರನ್ನು ಒಂದುಗೂಡಿಸಿದ ಬಸವಣ್ಣನವರು ಸತ್ಯಧರ್ಮ ವನ್ನು ಲೋಕಕ್ಕೆ ನೀಡಿದರು. ಪವಿತ್ರ ಖುರಾನ್ ಮತ್ತು ಪೈಗಂಬ ರರ ಹದೀಸ್ ಮೂಲಕ ಸೂಫಿಗಳು ಅಥರ್ೈಸಿದ ಇಸ್ಲಾಂ ಧರ್ಮಕ್ಕೂ ಬಸವಧರ್ಮಕ್ಕೂ ಅವರು ಭೇದವನ್ನೇ ಕಾಣುವುದಿಲ್ಲ. ಹೀಗಾಗಿ ಅವರು ತಮ್ಮ ತತ್ತ್ವಪದಗಳಲ್ಲಿ ಪೈಗಂಬ ರರನ್ನು ಮತ್ತು ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ.

ಸಾಲಗುಂದಿಪುರ ಸೇರಿ ಹೇಳು ಅವ ಇಲ್ಲ ನಾನೇ ನಾನು
ಗುರುಪೀರಾ ಖಾದರಿ ಬೆಳಕಾಗಿ ತಾ ಬಂದು ಕತ್ತಲೋಡುವುದು ಇನ್ನೇನು?
ತಿಳಿದು ಎಲ್ಲಾ ನೋಡು ನೀನು

ಸಾಲಗುಂದಿಪುರ ಎಂಬುದು ಅವರಿಗೆ ಒಂದು ದರ್ಶನವಾಗಿ ಕಾಣುತ್ತದೆ. ಅವರ ದೃಷ್ಟಿಯಲ್ಲಿ ಗುರುಪೀರಾ ಖಾದರಿ ಎಂದರೆ ಅವರ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರೇ ಆಗಿದ್ದಾರೆ. ಅವರ ತತ್ತ್ವಪದಗಳಲ್ಲಿ ಬರುವ ಗುರುಪೀರಾ ಖಾದರಿ ಅಂಕಿತ ನಾಮವು ಮಹಬೂಬೇ ಸುಬಹಾನಿ ಅವರಿಗೇ ಸಂಬಂಧಿಸಿದೆ.

ಅಲ್ಲನಿಗೊಂದು ಮನೆಯೆಂದು ಹೇಳಿ ನಿನೆ ಕಟ್ಟಿ ಕೊಟ್ಟಿಲ್ಲೇನು?
ಕಲ್ಲಿನ ಮನೆಯೊಳು ಅಲ್ಲನಿಲ್ಲೆಂದು ಗುರುಪೀರ ಅಂದೇ ಹೇಳಲಿಲ್ಲೇನು

ಸಾಲಗುಂದಿಯೊಳು ಹೋಗಿ ನೋಡುನೀ ಕಂಡನು ಅವ ನೋಡಿಲ್ಲೇನೊ
ನಿನ್ನೊಳು ಅವ ತಾ ನೆಲೆಸ್ಯಾನಲ್ಲಾ ಇನ್ನೊರಿಗೆ ನೋಡಿಲ್ಲೇನು?

ಎಂದು ಹೇಳುವ ಅವರು ದೇವರು ನಮ್ಮೊಳಗೇ ಇರುವ ಈ ರಹಸ್ಯವನ್ನು ಮಹಬೂಬೇ ಸುಹಬಾನಿ ಅವರಿಂದ ಕಂಡು ಕೊಂಡಿರುವುದಾಗಿ ಸೂಚಿಸಿದ್ದಾರೆ. ನಿಮ್ಮೊಳಗಿನ ಆ ದೇವರನ್ನು ಇಲ್ಲಿಯವರೆಗೆ ನೋಡಿಲ್ಲೇನು ಎಂದು ನಮ್ಮನ್ನು ಪ್ರಶ್ನಿಸುತ್ತಾರೆ.

ಇಸ್ಲಾಂ ಮೂಲಭೂತವಾದಿಗಳು ಸೂಫಿ ಸಂತರ ಸಮಾ ಧಿಗಳ ಬಗ್ಗೆ ವಿಮುಖ ಧೋರಣೆ ಹೊಂದಿದ್ದಾರೆ. ಈ ಧೋರಣೆ ಯನ್ನು ಖಾದರಿಪೀರಾ ವಿರೋಧಿಸುತ್ತಾರೆ.

ಗೋರಿಯೊಳಗೆ ಏನಿಲ್ಲವೆಂದು ನೀ ಹೇಳತಿಯೊ ಮೌಲಾನಾ
ಮಸೀದಿಯಲ್ಲಿ ಅಲ್ಲನೆ ಇಲ್ಲ; ಹೆಂಗ್ ಹೇಳ್ತಿನೀ ಐದಾನ, ನೀನಾಗು ಮೋಮಿನೀನಾ

ನನ್ನ ಶರಣರು ನಿತ್ಯ ಬದುಕ್ಯಾರ ಹೇಳುತೈತಿ ಖುರಾನಾ
ತಪ್ಪು ಹೇಳಿದರೆ ಕಿವಿ ಹಿಡಿಯೊ ನೀನು ನಿಮ್ಮಪ್ಪ ಈಗ ಒಪ್ತಾನ

ಎಂದು ಅವರು ಮೂಲಭೂತವಾದಿ ಧರ್ಮಪಂಡಿತರಿಗೆ ಸವಾಲು ಹಾಕುತ್ತಾರೆ. ಖಾದರಿಪೀರಾ ಅವರು ಹಿಂದು ಮೂಲ ಭೂತವಾದಿಗಳನ್ನೂ ಬಿಟ್ಟಿಲ್ಲ.

ಯಾಕಪ್ಪ ಈ ಔತಾರ ಬೆತ್ತಲಾಗಿ ಹುಟ್ಟಿದರೆಲ್ಲಾರ
ಹುಟ್ಟಿದಾಗ ಇರಲಿಲ್ಲಪ್ಪೊ ಹಾರವನಿಗೆ ಜನಿವಾರ

ಎಲ್ಲರಿಗೆ ಒಬ್ಬನೆ ದೇವರ, ತಿಳಿದು ತಿಳಿಯಲಿಲ್ಲೊ ಜನರ
ನಿನ್ನೊಳಗಿನ 6 ಕಳ್ಳರ ಜೊತೆಗೂಡಿ ನೀ ಆದಿಯೊ ಚೋರಾ

ಎಂದು ಅವರು ಟೀಕಿಸಿದ್ದಾರೆ. ಈ ಟೀಕೆಯ ಹಿಂದೆ ಅಖಂ ಡ ಮಾನವಪ್ರೇಮ ಇದೆ. ತಪ್ಪು ಮಾಡುವವರಿಗೆ ತಿಳಿಸಿಹೇಳುವ ಕ್ರಮವಿದೆ. ಹಾಳಾಗಬೇಡಿರಿ ಎಂಬ ಎಚ್ಚರಿಕೆಯ ಮಾತಿದೆ.

ಗುರು ಖಾದರಿಪೀರಾ ಅವರ ದೃಷ್ಟಿಕೋನ ವಿಶಿಷ್ಟವಾಗಿದೆ. ಅವರು ಧರ್ಮ, ಸಮಾಜವನ್ನು, ಸಮಾಜದೊಳಿಗಿನ ವೈರು ಧ್ಯಗಳನ್ನು, ಮತ್ತು ಧರ್ಮವನ್ನು ಕಡೆಗಣಿಸಿ ನಿಲ್ಲುವ ಮಾನ ಸಿಕ ತುಮುಲಗಳನ್ನು ಬಹಳ ತೀಕ್ಷ್ಣವಾಗಿ ಗಮನಿಸಿದ್ದಾರೆ. ಆ ಕುರಿತು ಬಹಳ ಆಳವಾಗಿ ಚಿಂತಿಸಿದ್ದಾರೆ. ಭೌತಿಕ ಸ್ಥಿತಿಗತಿ ಗಳು ಮಾನವನನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವ ಕುಲದಲ್ಲಿಯ ಗುಟ್ಟು ನಮ್ಮನ್ನು ವಾಸ್ತವದ ಕಡೆಗೆ ಸೆಳೆಯುತ್ತದೆ.

ಮನುಕುಲದಲ್ಲಿಯ ಗುಟ್ಟು ಹೇಳತೀನಿ ಮಾಡಬ್ಯಾಡ್ರಿ
ತಾಸ್ಚಾರ ಚತುರ್ ವರ್ಣದ ಚಕ್ರದಿಂದ ಇದು ಹುಟ್ಯಾದ ಔತಾರಾ ಹಾಂ ಹಾಂ

ಬಲಸ್ಯ ಪೃಥ್ವಿ ಎಂಬುದು ತಿಳಿದರೆ ರಾಜರಾಗುತಾರ; ಸುಳ್ಳಿನ ಗುಟ್ಟು
ತಿಳಿದರೆ ಚೂಟಿಯ ಶ್ರೀಮಂತರಾಗುತಾರ ತಮ್ಮಾ ಶ್ರೀಮಂತರಾಗುತಾರ

ಸುಳ್ಳು ಮೋಸ ವಂಚನೆ ಮಾಡಲು ದೇವರಾಗುತಾರ
ಸತ್ಯಧರ್ಮದಿಂದ ಇದ್ದವರೆಲ್ಲ ಶೂದ್ರರಾಗುತಾರ ತಮ್ಮ ಶೂದ್ರರಾಗುತಾರ

ಇಲ್ಲದ್ದು ಇದ್ದಾಂಗ ಹೇಳಿದವರೆಲ್ಲ ಆರ್ಯರಾಗುತಾರ
ನ್ಯಾಯನೀತಿಯಿಂದ ಇದ್ದವರೆಲ್ಲ ದರಿದ್ರರಾಗುತಾರ ತಮ್ಮಾ

ಗೊಡವೆ ಇಲ್ಲದ ಜನರಿಗೆ ಹೊಡೆದರೆ ಕ್ಷತ್ರಿಯರಾಗುತಾರ
ಕೆಲಸವಿಲ್ಲದೆ ಗಳಿಕೆ ಮಾಡಿದವರು ವೈಶ್ಯರಾಗುತಾರ ತಮ್ಮ

ಕಂಗೆಟ್ಟು ವಲಸೆ ಬಂದವರೆಲ್ಲ ಸೂತ್ರ ಹಿಡಿಯತಾರ
ಅನುಕೂಲ ನೋಡಿ ಜೈ ಎಂದವರೆಲ್ಲ ಬ್ರಾಹ್ಮಣರಾಗುತಾರ ತಮ್ಮಾ

ಭೇದವಿಲ್ಲದೆ ಬೋಧ ಮಾಡುವವರು ಉಪವಾಸ ಸಾಯ್ತಾರ ದುಡಿದು
ದುಡಿದು ಮುಪ್ಪಾದ ಎತ್ತಿಗೆ ಸಂತಿಗೆ ಹೊಡಿತಾರ ತಮ್ಮಾ

ಶಾಸ್ತ್ರದ ಪಟ್ಟಿನ ಗುಟ್ಟು ತಿಳಿದರೆ ಜ್ಞಾನಿಗಳಾಗುತಾರ; ಅನ್ಯಾಯ
ನೋಡಿ ಸುಮ್ಮನಾಗಬೇಕು ತಮ್ಮ ಯೋಗ್ಯರಾಗುತಾರ ತಮ್ಮಾ

ಸತ್ಯ ಇದ್ದರೆ ಹಾಗೆ ಹೇಳಬೇಡ ಖೋಡಿ ದಡ್ಡರಾಗತಾರ
ಅನ್ಯಾಯ ತಡಿಯಲು ಹೋದವರೆಲ್ಲಾ ಸತ್ತುಹೋಗತಾರ

ಧರ್ಮದ ಸತ್ಯ ಮುಚ್ಚಿ ಹೇಳಿದರೆ ಋಷಿ ಮುನಿಗಳಾಗುತಾರ
ನ್ಯಾಯನೀತಿಯಿಂದ ಇದ್ದವರೆಲ್ಲಾ ಅಸ್ಪೃಶ್ಯರಾಗುತಾರ ತಮ್ಮಾ

ಗುರು ಖಾದರಿಪೀರಾ ಅವರಿಗೆ ಆ ಕಾಲದ ಬಹುಸಂ ಖ್ಯಾತ ಬಡನಿರಕ್ಷರಿಕನ್ನಡಿಗರ ಬಗ್ಗೆ ತೀವ್ರ ಕಾಳಜಿ ಇತ್ತು. ಅಂತೆಯೆ ಅವರು ತಮ್ಮ ಭಾಗದ ಹಳ್ಳಿಗರು ಆಡುವ ಕನ್ನಡ ದಲ್ಲಿ ಜ್ಞಾನ ಸಮುದ್ರ ಸೃಷ್ಟಿಸಿದರು. ತಾವು ಕಂಡುಕೊಂಡ ತತ್ತ್ವಜ್ಞಾನವನ್ನು ಹಳ್ಳಿಗಾಡಿನ ಕನ್ನಡಿಗರಿಗೆ ತಲುಪಿಸು ವುದಕ್ಕಾಗಿ ತಮ್ಮ ತತ್ತ್ವಪದಗಳನ್ನು ಅವರ ಮುಂದೆ ಹಾಡಿ ತೋರಿಸಿದರು. ಆ ಮೂಲಕ ಕನ್ನಡವನ್ನು ಎತ್ತಿ ಹಿಡಿದರು. ಆ ನಿರಕ್ಷರಿಕನ್ನಡಿಗರು ತಮ್ಮ ಸ್ಮೃತಿಯಲ್ಲಿ ಗುರು ಖಾದರಿ ಪೀರಾ ಅವರ ತತ್ತ್ವಗಳನ್ನು ಸಂರಕ್ಷಿಸಿದರು. ಅಂಥ ಬಡ ಕನ್ನಡಿಗರು 19ನೇ ಶತಮಾನದಿಂದ ಉಳಿಸಿಕೊಂಡು ಬಂದ ತತ್ತ್ವಪದಗಳೇ ಇಂದು ಜ್ಞಾನಸಮುದ್ರವಾಗಿ ಮುದ್ರಣಗೊಂಡು ನಮ್ಮ ಅರಿವಿನ ವಿಸ್ತಾರಕ್ಕೆ ಕಾರಣವಾಗಿವೆ.

ಕನ್ನಡಾಂಬೆಗೆ ರವಿಯು ತಾನಾಗಿ ಬೆಳಕು ನೀಡುತಿತ್ತ; ಅಜ್ಞಾನದ ಕತ್ತಲು
ತಾ ಕಳಿದು ದಾರಿ ತೋರಿಸಿತ್ತ ಭಕ್ತರ ಮನದಲಿ ತಾ ಕುಂತ

ಕನ್ನಡಾಂಬೆಗೆ ದರ್ಶನಸೂರ್ಯನು ಬೆಳಕಿನ ಸೇವೆ ಮಾಡುತ್ತಿದ್ದಾನೆ. ಆ ಮೂಲಕ ಕನ್ನಡಾಂಬೆಯ ಕಂಡು ಜನರ ಅಜ್ಞಾನದ ಕತ್ತಲು ಕಳೆಯುತ್ತಿದೆ. ಆ ದರ್ಶನದ ಬೆಳಕೇ ನಿಜದ ನಿಲವಿನ ಭಕ್ತರ ಮನದಲ್ಲಿ ಕುಳಿತು ವಿಶ್ವಮಾನವ ಪಥವನ್ನು ತೋರಿಸುತ್ತಿದೆ. ಭಕ್ತರೇ ದೇವರಾಗುವ ರಹಸ್ಯವನ್ನು ಬಯಲು ಮಾಡುತ್ತಿದೆ!

ಗುರು ಖಾದರಿಪೀರಾರವರು ಕನ್ನಡ ಜನಪದ ಪರಂಪರೆ ಯೊಂದಿಗೆ ಸೂಫಿಗಳ ಹಾಗೂ ಶರಣರ ಮಾನವಧರ್ಮ ಪರಂಪರೆಯನ್ನು ಒಂದಾಗಿಸಿ ಪ್ರೇಮತತ್ತ್ವವನ್ನು ಸಾರುತ್ತ ವಿಶ್ವಮಾನವನ ಕನಸುಕಂಡಿದ್ದು ಸರ್ವರಿಗೂ ಮಾರ್ಗದಶರ್ಿ ಯಾಗಿದೆ.

ತಾವು ಸಾಕ್ಷಾತ್ಕರಿಸಿಕೊಂಡ ಮಾನವರಿಂದ ಮಾನವ ರನ್ನು ಉದ್ಧಾರ ಮಾಡುವ ಮಾನವಧರ್ಮದ ಪ್ರಚಾರಕ್ಕಾಗಿ, ವಾಹನ ಸೌಲಭ್ಯವಿಲ್ಲದ ಅಂದಿನ ದಿನಗಳಲ್ಲಿ ಕುದುರೆ ಮೇಲೆ ಕುಳಿತು ಕನಾ೯ಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅನೇಕ ಕಡೆಗಳಲ್ಲಿ ಸುತ್ತಾಡಿದರು. ಲೋಕಕಲ್ಯಾಣದ ತತ್ತ್ವ ವನ್ನು ಪ್ರಚಾರ ಮಾಡಿದರು. ಅಲ್ಪಸಂಖ್ಯಾತರು, ಹಿಂದುಳಿದ ವರು ಮತ್ತು ದಲಿತರಷ್ಟೇ ಅಲ್ಲದೆ ಮಾನವತಾವಾದಿ ಬ್ರಾಹ್ಮ ಣರಿಗೂ ಅವರು ಸರ್ವ ಸಮತ್ವದಿಂದ ಕೂಡಿದ ಸೂಫಿ ಶರಣರ ಮಾನವಧರ್ಮದ ದೀಕ್ಷೆ ಕೊಟ್ಟರು. ವಂಶಪಾಯಂಪರ್ಯವಾಗಿ ಬಂದ ಜಹಗೀರನ್ನು ನಿರಾಕರಿಸಿದ್ದ ಅವರು ಕೊನೆಯವರೆಗೂ ಸಾಮಾನ್ಯರ ಮಧ್ಯೆಯೆ ಬದುಕುತ್ತ 25.7.1896ರಂದು ಗುರುವಾರ ಸಾಲ್ಗುಂದಾ ಗ್ರಾಮದಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರ ದಗಾ೯ (ಸಮಾಧಿ) ಸಾಲಗುಂದಾ ಗ್ರಾಮದಲ್ಲಿದೆ.