Tuesday, February 22, 2011

ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು



ದಕ್ಷಿಣ ಕನ್ನಡದಲ್ಲಿ ಅರಾಜಕತೆ ನಿಮರ್ಾಣವಾಗಲು ಕಾಂಗೈ-ಬಿಜೆಪಿಗಳೇ ನೇರ ಕಾರಣ. ಇಲ್ಲಿಯವರೆಗೆ ಇವೆರಡು ಪಕ್ಷಗಳು ಕರಾವಳಿ ಭಾಗವನ್ನು ಹೊಡೆದಾಳಿವೆ. ಅದೆಲ್ಲದರ ಫಲವಾಗಿ ದಕ್ಷಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶ ಇಂದು ಸದಾ ಕೋಮುಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ ಎಂದು ವ್ಯಾಖ್ಯಾನಿಸುತ್ತಾರೆ ಪ್ರಜಾವಾಣಿಯ 'ಅನಾವರಣ' ದ ಹೆಸರಾಂತ ಅಂಕಣಕಾರ ದಿನೇಶ ಅಮೀನ್ಮಟ್ಟು.ಕೂಡಿ ಕಟ್ಟಿದ್ದನ್ನು ಒಡೆದು ಮುರಿದರುದೇಶ ನೊಡು, ಕೋಶ ಓದು ಎನ್ನುತ್ತಾರೆ ಹಿರಿಯರು, ವಿಶಾಲದೃಷ್ಟಿಕೋನ ಬೆಳೆಸಿಕೊಳ್ಳಲು. ಕನರ್ಾಟಕದಲ್ಲಿಯೇ ಯಾಕೆ, ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚು ದೇಶ ನೋಡಿದ ಮಂದಿಯ ಜಿಲ್ಲೆಯೊಂದಿದ್ದರೆ ಅದು ವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಸಾಕ್ಷರತಾ ಪ್ರಮಾಣದ ಲೆಕ್ಕದಲ್ಲಿ ಕೋಶ ಓದಿದವರ ಸಂಖ್ಯೆಯಲ್ಲಿಯೂ ಆ ಜಿಲ್ಲೆಯೇ ಪ್ರಥಮ ಎನ್ನಬಹುದು. ಬುದ್ದಿವಂತರು, ಸಾಹಸಿಗಳು, ಉದ್ಯಮಶೀಲ ಪ್ರವೃತ್ತಿಯವರು ಎಂಬಿತ್ಯಾದಿ ಖ್ಯಾತಿಗಳ ಜತೆ ದಕ್ಷಿಣ ಕನ್ನಡಿಗರಿಗೆ ಮೊದಲಿನಂದಲೂ ಅಂಟಿಕೊಂಡ ಒಂದಷ್ಟು ಕುಖ್ಯಾತಿಗಳೆಂದರೆ ಬಲು ಲೆಕ್ಕಾಚಾರದ ಮಂದಿ, ಶೋಮ್ಯಾನ್ಗಳು, ಸಾಮಾಜಿಕ ಸ್ಪಂದನ ಇಲ್ಲದ ಬೂಜ್ವರ್ಾಗಳು ಎನ್ನುವುದು ಮಾತ್ರ. ಆದರೆ ದ.ಕ ಮಂದಿಯನ್ನು ಎಂದೂ, ಯಾರೂ, ತಪ್ಪಿಯೂ ಕೂಪ ಮಂಡೂಕಗಳು ಎಂದೋ ಆಧುನಕತೆಯ ವಿರೋಧಿಗಲು ಎಂದೋ ಟೀಕಿಸಿದ್ದಿಲ್ಲ. ಆದರೆ ವಿಪಯರ್ಾಸ ಎಂಬಂತೆ ಇಂದು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುದ್ದಿಯಾಗಿರುವುದು ಆಧುನಕತೆಯನ್ನು ವಿರೋಧಿಸುತ್ತಿರುವ ತಾಲಿಬಾನ್ ಮನೋಸ್ಥಿತಿ ಯಿಂದಾಗಿ.ಅನ್ಯರು ಅಸೂಯೆಪಡುವಂತೆ ಬೆಳೆದು ನಂತ ಮನಯಾರ್ಡರ್ ಆಥರ್ಿಕತೆಯ ಆಧುನಕ ದಕ್ಷಿಣ ಕನ್ನಡವನ್ನು ಹಿಂದೂ, ಕ್ರೈಸ್ತರು ಮತ್ತು ಮುಸ್ಲಿಂರು ಕೂಡಿಯೇ ಕಟ್ಟಿದ್ದಾರೆ. ಅದರಲ್ಲಿ ಸಕರ್ಾರದ ಪಾತ್ರ ಗೌಣ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಕೊಡುಗೆ ಜನಜನತ. ಬ್ಯಾರಿಗಳೆಂದೇ ಕರೆಯಲಾಗುವ ಅಲ್ಲಿನ ಮುಸ್ಲೀಮರು ಹುಟ್ಟು ವ್ಯಾಪಾರಿಗಳು, ಉಳಿದೆಡೆಯ ಬಡಮುಸ್ಲಿಂ ಎನ್ನುವ ಹಣಿಪಟ್ಟಿ ಅವರಿಗಿಲ್ಲ. ಈ ಎರಡು ಧರ್ಮಗಳ ಯುವಕರು ಕೊಲ್ಲಿ ದೇಶಗಳಿಗೆ ಹೋಗಿ ದುಡ್ಡು ಸಂಪಾದಿಸಿ ದ.ಕ.ದ ಆಥರ್ಿಕ ಕ್ಷೇತ್ರವನ್ನು ಬೆಳೆಸಿದರೆ, ಹಿಂದೂಗಳಲ್ಲಿನ ಬ್ರಾಹ್ಮಣ, ಬಂಟ, ಬಿಲ್ಲವರು ಹೊರರಾಜ್ಯಗಳಿಗೆ ಹೋಗಿ ಹೋಟೆಲ್ ಉದ್ಯಮದ ಮೂಲಕ ದುಡ್ಡು ಗಳಿಸಿ ತಂದು ಊರಲ್ಲಿ ಸುರಿಯುತ್ತಿದ್ದಾರೆ. ಆಥರ್ಿಕವಾಗಿ ಈ ಮೂರು ಜಾತಿಗಳ ಕುಟುಂಬಗಳು ಒಬ್ಬರಿಗಿಂತ ಇನ್ನೊಬ್ಬರು ಕಡಿಮೆಯೇನಲ್ಲ.ವ್ಯಾಪಾರ-ದಕ್ಷಿಣ ಕನ್ನಡದ ಸಂಕೇತ. ಸಾಂಪ್ರಾದಾಯಿಕವಾದ ಪ್ರತಿಯೊಂದು ವೃತ್ತಿ ವ್ಯಾಪಾರದಲ್ಲಿಯೂ ಜಾತಿ-ಧರ್ಮಗಳು ಅಲ್ಲಿ ಹಾಸುಹೊಕ್ಕಾಗಿದೆ. ಕಡಲಿನಂದ ಮೀನು ಹಿಡಿದು ತರುವವರು ಮೊಗವೀರ ಗಂಡಸರು, ಅದರ ಸಗಟು ಖರೀದಿ ಮಾಡುವವರು ಬ್ಯಾರಿಗಳು, ಬ್ಯಾರಿಗಳಿಂದ ಅದನ್ನು ಖರೀದಿಸಿ ಮನೆ ಮನೆಗೆ ಮಾರುವವರು ಮೊಗವೀರ ಮಹಿಳೆಯರು (ಯಾಂತ್ರಿಕರಣದ ನಂತರ ಈ ವ್ಯವಸ್ಥೆ ಬದಲಾಗಿದೆ.) ಮಂಗಳೂರಿಗೆ ಕಂಪು ನಡುತ್ತಾ ಬಂದ ಮಲ್ಲಿಗೆಯನ್ನು ಬೆಳೆಯುವವರು ಕ್ರಿಶ್ಚಿಯನ್ನರು, ಮಾರುವವರು ಬ್ಯಾರಿಗಳು, ಬೀಡಿ ಕಟ್ಟುವವರು ಹಿಂದೂಗಳು, ಬೀಡಿ ಕಟ್ಟಿಸುವ ಗುತ್ತಿಗೆದಾರರು ಬ್ಯಾರಿಗಳು, ತೆಂಗಿನಕಾಯಿ-ಮಾವು-ಹುಣಸೆಹುಳಿಗಳನ್ನು ಬೆಳೆಯುವವರು ಹಿಂದೂಗಳು, ಅದರ ವ್ಯಾಪಾರ ನಡೆಸುವವರು ಬ್ಯಾರಿಗಳು, ತರಕಾರಿ ಬೆಳೆಯುತ್ತಿರುವವರು ಕ್ರಿಶ್ಚಿಯನರು (ಇದರ ಸಿರಿ ದೈವ ಅವರಿಗೆ ಕೊಟ್ಟ ಅಭಯ) ಬಳಕೆದಾರರು ಹಿಂದೂಗಳು.ವ್ಯಾಪಾರ ಎನ್ನುವುದು ಶಕ್ತಿ ಹೇಗೋ, ಅದು ದ.ಕ ಮಂದಿಯ ದೌರ್ಬಲ್ಯ ಕೂಡಾ ಹೌದು. ಈ ಸತ್ಯವನ್ನು ಮೊದಲು ಅರಿತುಕೊಂಡವರು ಸಂಘಪರಿವಾರದ ನಾಯಕರು. ಒಬ್ಬ ಮುಸ್ಲಿಂ ವ್ಯಾಪಾರಿಯ ದಮನವನ್ನು ಒಬ್ಬ ಹಿಂದೂ ವ್ಯಾಪಾರಿ ಕೇವಲ ಧರ್ಮರಕ್ಷಣಿಯ ದೃಷ್ಟಿಯಿಂದಲ್ಲ, ವ್ಯಾಪಾರದ ಲಾಭದ ದೃಷ್ಟಿಯಿಂದಲೂ ನೋಡುತ್ತಾನೆ ಎನ್ನುವುದು ಅವರಿಗೆ ತಿಳಿದಿತ್ತು. ಪ್ರಾರಂಭದಿಂದಲೂ ದಕ್ಷಿಣ ಕನ್ನಡ ಆರ್.ಎಸ್.ಎಸ್ನ ಚಿಂತಕರ ಚಾವಡಿ. ವ್ಯಾಪಾರದ ಮೂಲಕ ಸಮೃದ್ಧಿಯನ್ನು ಕಂಡ ಕೊಂಕಣಿಗಳು (ಗೌಡಸಾರಸ್ವತ ಬ್ರಾಹ್ಮಣರು) ನಡುತ್ತಿದ್ದ ದೇಣಿಗೆಯಿಂದಾಗಿ ರಾಜ್ಯ ಸಂಘಟನೆಯ ರಿಮೋಟ್ ಕಂಟ್ರೋಲ್ ಕೂಡಾ ದ.ಕ ದಲ್ಲಿಯೇ ಇತ್ತು. ಆದರೆ ಕೊಂಕಣಿ - ಬ್ರಾಹ್ಮಣರಿಂದಾಚೆ ಬೆಳೆಯಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ.ಆದರೆ, ಅಂತಹ ಕಾಲವೊಂದು 70ರ ದಶಕದ ಕೊನೆಯ ಭಾಗದಲ್ಲಿ ಕೂಡಿಬಂತು. ಅದು ದಕ್ಷಿಣ ಕನ್ನಡ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮಗ್ಗಲು ಬದಲಾಯಿಸುತ್ತಿದ್ದ ತುತರ್ುಪರಿಸ್ಥಿತಿಯ ನಂತರದ ಕಾಲ. ಭೂಸುಧಾರಣಿ ಕಾಯಿದೆಯಿಂದಾಗಿ ಅಲ್ಲಿನ ಸಾಮಾಜಿಕ ಸಂಬಂಧಗಳಲ್ಲಿ ಪಲ್ಲಟ ಪ್ರಾರಂಭವಾಗಿತ್ತು. ಅಲ್ಲಿ ಭೂಮಾಲೀಕರಾಗಿದ್ದವರು ಬಂಟರು. ಜೈನರು ಮತ್ತು ಬ್ರಾಹ್ಮಣರು. ಗೇಣಿದಾರರಾಗಿದ್ದವರು ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಯವರು. ಭೂ ಒಡೆತನದ ಜತೆಯಲ್ಲಿಯೇ ದೇವರಾಜ ಅರಸು ಅವರ ರಾಜಕೀಯ ಕ್ಷೇತ್ರದ ಸೋಷಿಯಲ್ ಎಂಜಿನಯರಿಂಗ್ನಂದಾಗಿ ಜಿಲ್ಲೆಯಲ್ಲಿ ಬಂಟರು ಮತ್ತು ಬ್ರಾಹ್ಮಣರ ಕೈಯಲ್ಲಿದ್ದ ರಾಜಕೀಯ ಅಧಿಕಾರ ಕುಡ ಹಿಂದುಳಿದ ಜಾತಿಯ ಬಿಲ್ಲವರು ಮತ್ತು ಅಲ್ಪಸಂಖ್ಯಾತ ಕೋಮುಗಳ ಕಡೆ ಸರಿದುಹೋಗತೊಡಗಿತು.ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡುವ ಪ್ರಯತ್ನಕ್ಕೆ ಅಡಿಗಲ್ಲು ಬಿದ್ದದ್ದು ಅದೇ ಕಾಲದಲ್ಲಿ. ಆ ಪ್ರಯೋಗಕ್ಕೆ ಹೊರಟವರಿಗೆ ಮೊದಲು ಕಂಡದ್ದು ಮೊಗವೀರ ಸಮಾಜ. ಮೀನು ಹಿಡಿಯುವವರು ಮೊಗವೀರರಾದರೂ ಅದರ ವ್ಯಾಪಾರದಲ್ಲಿ ನಣರ್ಾಯಕ ಪಾತ್ರ ವಹಿಸುತ್ತಿದ್ದವರು ಬ್ಯಾರಿಗಳು. ಆಗಾಗ ಹಣಕಾಸು, ಗಂಡು-ಹೆಣ್ಣಿನ ವಿಷಯದಲ್ಲಿ ಬ್ಯಾರಿಗಳು ಮತ್ತು ಮೊಗವೀರರ ನಡುವೆ ಘರ್ಷಣಿಗಳಾಗುತ್ತಲೇ ಇತ್ತು. ಆದ್ದರಿಂದ ಮುಸ್ಲಿಂರ ವಿರುದ್ಧ ಮೊಗವೀರ ಸಮುದಾಯವನ್ನು ಎತ್ತಿಕಟ್ಟುವುದು ಬಹಳ ಸುಲಭದ ಕೆಲಸವಾಗಿತ್ತು. ರಾಜಕೀಯವಾಗಿ ಮುಸ್ಲಿಂರು ಕಾಂಗ್ರೇಸ್ ಜತೆಯಿದ್ದ ಕಾರಣ ಮೊಗವೀರರು ಬಿಜೆಪಿ ಕಡೆ ವಾಲಿದ್ದು ಸಹಜವಾಗಿಯೇ ಇತ್ತು. ಇದರಿಂದ ಸಂಘ ಪರಿವಾರಕ್ಕೆ ಬಹುದೊಡ್ಡ ಯೋಧರ ಪಡೆ ಸಿಕ್ಕಿಬಿಟ್ಟಿತು.ಈ ರೀತಿ ಕಾಂಗ್ರೇಸ್ ಓಟ್ಬ್ಯಾಂಕ್ನಲ್ಲಿದ್ದ ಎರಡು ಸಂಘಟಿತ ಜಾತಿಗಳಾದ ಬಂಟರು ಮತ್ತು ಮೊಗವೀರರು ಬೇರೆಬೇರೆ ಕಾರಣಗಳಿಂದಾಗಿ ಹೊರ ಕಾಲಿಡತೊಡಗಿದ್ದರು. ಈ ವಲಸೆ ತಡೆಯುವ ಪ್ರಯತ್ನ ಕಾಂಗ್ರೇಸ್ನಲ್ಲಿ ನಡೆಯಲಿಲ್ಲ. ಅರಸು ಅವರ ಅವಸರದ ರಾಜಕೀಯ ಕ್ರಾಂತಿಯಿಂದಾಗಿ ಜಿಲ್ಲೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಜನಾರ್ಧನ ಪೂಜಾರಿ ಎಂಬ ಇಬ್ಬರು ನಾಯಕರು ಹುಟ್ಟಿಕೊಂಡರು. ಕೆಲಕಾಲದ ನಂತರ ಟಿ.ಎ.ಪೈ ಅವರನ್ನು ಸೋಲಿಸಿ ಆಸ್ಕರ್ ಪನರ್ಾಂಡಿಸ್ ಪ್ರವೇಶ ಮಾಡಿದರು. ಹೆಚ್ಚು ಕಡಿಮೆ ಕಳೆದ ಮೂವತ್ತು ವರ್ಷಗಳಿಂದ ಈ ಮೂವರು ನಾಯಕರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೇಸ್ ಪಕ್ಷವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡಿದ್ದರು. ಪಕ್ಷ ಸೋತು ನೆಲ ಹಿಡಿದರೂ ಈ ತ್ರಿಮೂತರ್ಿಗಳು ಮುಷ್ಟಿ ಸಡಿಲಿಸುತ್ತಿರಲಿಲ್ಲ.ಕಾಂಗ್ರೇಸ್ ಹೈಕಮಾಂಡ್ನ ಸಖ್ಯದಿಂದಾಗಿ ಮೂವರು ಎತ್ತರಕ್ಕೆ ಬೆಳೆದರೆ ಹೊರತು ಆಳ-ಅಗಲಕ್ಕೆ ಬೇರು ಬಿಟ್ಟು ಜನನಾಯಕರಾಗಲಿಲ್ಲ. ಬೆಳೆಸಿದ್ದು ಕೂಡ ಒಂದಷ್ಟು ಚೇಲಾಗಳನ್ನಷ್ಟೇ ಹೊರತು ನಾಯಕರನ್ನಲ್ಲ. ಇವರು ಪರಸ್ಪರ ಕಾದಾಟದಲ್ಲಿ ತಮ್ಮ ಶಕ್ತಿ ಪೋಲು ಮಾಡುತ್ತಿದ್ದರೆ ಅತ್ತಕಡೆ ಖಾಲಿ ಇದ್ದ ಜಾಗದಲ್ಲಿ ಬಿಜೆಪಿ ಸೊಂಪಾಗಿ ಬೇರು ಬಿಡತೊಡಗಿತ್ತು. ಪೂಜಾರಿ ಮತ್ತು ಮೊಯಿಲಿ ಮೂರು ಲೋಕಸಭಾ ಚುನಾವಣಿಗಳಲ್ಲಿ ಸೋತಿದ್ದಾರೆ. (ಸಧ್ಯ ದೊಡ್ಡಬಳ್ಳಾಪುರದಿಂದ ಗೆದ್ದಿರುವ ಮೊಯ್ಲಿ ಕೇಂದ್ರದ ಕಾನೂನು ಮಂತ್ರಿ) ನಾಲ್ಕು ಬಾರಿ ಗೆದ್ದ ಆಸ್ಕರ್ ಒಂದೇ ಒಂದು ಸೋಲಿನಂದ ಕಂಗೆಟ್ಟು ದೆಹಲಿಗೆ ಓಡಿಹೋದವರು ಮತ್ತೇ ನೇರ ಚುನಾವಣಿ ಎದುರಿಸುವ ಧೈರ್ಯ ಮಾಡಿಲ್ಲ. ದೊಡ್ಡ ಜಾತಿಯ ಹೊರೆ ಇಲ್ಲದ ಮೊಯ್ಲಿ ಅವರಿಗೆ ಅರಸು ಅವರಂತೆ ಕನಷ್ಟ ಜಿಲ್ಲೆಯಲ್ಲಾದರೂ ಎಲ್ಲ ಹಿಂದುಳಿದ ಜಾತಿಗಳಿಗೂ ಸಲ್ಲುವ ನಾಯಕನಾಗಿ ಬೆಳೆಯುವ ಅವಕಾಶ ಮತ್ತು ಅರ್ಹತೆಗಳೆರಡೂ ಇತ್ತು. ಪೂಜಾರಿಯ ಜತೆಯಲ್ಲಿನ ಕೋಳಿಜಗಳದಲ್ಲಿಯೇ ಅದನ್ನು ಅವರು ಕಳೆದುಕೊಂಡರು. ದೈತ್ಯ ಸಂಹಾರಿಯಾಗಿ ರಾಜಕೀಯ ಪ್ರವೇಶ ಮಾಡಿದ ಆಸ್ಕರ್ ಹೋರಾಟದ ಕೆಚ್ಚನ್ನೇ ಕಳೆದುಕೊಂಡು ಪಾದ್ರಿ ಆಗಿದ್ದಾರೆ.ಇಂದಿನ ಜಾತಿ ಆಧಾರಿತ ರಾಜಕೀಯದಲ್ಲಿ ಜನನಾಯಕನಾಗಿ ಬೆಳೆಯಲು ಬಿಲ್ಲವ ಜಾತಿಗೆ ಸೇರಿದ ಜನಾರ್ಧನ ಪೂಜಾರಿಗೆ ಉಳಿದವರಿಗಿಂತ ಹೆಚ್ಚು ಅವಕಾಶಗಳಿದ್ದವು. ಇದಕ್ಕೆ ಜಿಲ್ಲೆಯ ರಾಜಕೀಯದಲ್ಲಿ ನಣರ್ಾಯಕ ಪಾತ್ರ ವಹಿಸುವಷ್ಟು ಸಂಖ್ಯೆಯಲ್ಲಿ ಅವರ ಜಾತಿಜನರಿರುವುದೂ ಕಾರಣ. ವೈಯಕ್ತಿಕ ಮಟ್ಟದಲ್ಲಿ ಪ್ರಾಮಾಣಿಕ, ಸರಳಜೀವಿ ಮತ್ತು ಕಠಿಣ ದುಡಿಮೆಗಾರ. ಆದರೆ ಕೈ-ಮೈ ಶುದ್ಧ ಇಟ್ಟುಕೊಂಡಿರುವ ಪೂಜಾರಿಗೆ ಅವರ ನಾಲಿಗೆಯೇ ಮೊದಲ ಶತ್ರು. ಹಳೆ ತಲೆಮಾರಿನ ರಾಜಕಾರಣದಲ್ಲಿ ಪಳಗಿದ ಅವರಿಗೆ ಸಮಕಾಲಿನ ರಾಜಕೀಯ-ಸಾಮಾಜಿಕ ಬದಲಾವಣಿಯನ್ನು ಗ್ರಹಿಸಲಾಗಿಲ್ಲ, ಅದನ್ನು ಗ್ರಹಿಸವು ಶಕ್ತಿಯೂ ಇಲ್ಲ, ನವೃತ್ತಿಯಾಗುವ ಮನಸ್ಸೂ ಇಲ್ಲ.ರಾಮಮಂದಿರ ನಮರ್ಾಣದ ದೀಕ್ಷೆಯೊಂದಿಗೆ ಪಕ್ಷ ಬೆಳೆಸಲು ಹೊರಟ ಬಿಜೆಪಿಯನ್ನು ಮಂಗಳೂರಿನಲ್ಲಿ ಎದುರಿಸಲು ಪೂಜಾರಿ ಕೈಗೆತ್ತಿಕೊಂಡದ್ದು ಕುದ್ರೋಳಿ ದೇವಸ್ಥಾನದ ನವೀಕರಣವನ್ನು. ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇಲ್ಲದ ಬಿಲ್ಲವರ ಕೂಗಿಗೆ ಓಗೊಟ್ಟು ಬಂದು ಆ ದೇವಸ್ಥಾನವನ್ನು ಸ್ಥಾಪಿಸಿದವರು ನಾರಾಯಣ ಗುರು. ಲಿಂಗ, ಶಿಲಾಫಕ, ಕನ್ನಡಿ ಪ್ರತಿಷ್ಠಾಪನೆ ಮೂಲಕ ವೈದಿಕ ಪರಂಪರೆಗೆ ವಿರುದ್ಧವಾಗಿ ಕೇರಳದಲ್ಲಿ ಸರಳ ದೇವಸ್ಥಾನಗಳನ್ನು ಜನಪ್ರಿಯಗೊಳಿಸಿದವರು ನಾರಾಯಣ ಗುರುಗಳು. ದೇವಸ್ಥಾನ ಎನ್ನುವುದು ಅವರಿಗೆ ಸಾಮಾಜಿಕ ಚಳುವಳಿಯ ಸಾಧನವಾಗಿತ್ತು.ಆದರೆ, ವಣರ್ಾಶ್ರಮಯದ ವಿರುದ್ಧದ ಬಂಡಾಯದ ರೂಪದಲ್ಲಿ ನಾರಾಯಣ ಗುರು ಸ್ಥಾಪಿಸಿದ್ದ ಕುದ್ರೋಳಿಯ ಸರಳಗುಡಿಯನ್ನು ನವೀಕರಣದ ಹೆಸರಲ್ಲಿ ಪೂಜಾರಿ ಶಿಲ್ಪಕಲಾವೈಭವದ ದೇವಸ್ಥಾನವನ್ನಾಗಿ ಪರಿವತರ್ಿಸಿದರು. ಕೊನೆಗೆ ಅದನ್ನು ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸಿಯೇ ಬಿಟ್ಟರು. ಯಾವುದೇ ವೈದಿಕ ಸಂಪ್ರದಾಯದ ದೇವಸ್ಥಾನವನ್ನು ಮೀರಿಸುವ ಹಾಗೆ ಅಲ್ಲಿ ನರಂತರವಾಗಿ ವೈಭವದ ಪೂಜೆ-ಮೆರವಣಿಗೆ-ಉತ್ಸವಗಳನ್ನು ಪ್ರಾರಂಭಿಸಿದರು. ಸಾಮಾಜಿಕ ಜಾಗೃತಿಗೆ ಕಾರಣವಾಗಬೇಕಿದ್ದ ಧಾಮರ್ಿಕ ಕ್ಷೇತ್ರವೊಂದು ಧಾಮರ್ಿಕ ಉನ್ಮಾದ ಸೃಷ್ಟಿಸುವ ಕೇಂದ್ರವಾಗಿ ಬೆಳೆಯುತ್ತಿದೆ.ಆದರೆ, ಆ ಉನ್ಮಾದಕ್ಕೊಳಗಾದ ಬಿಲ್ಲವ ಯುವಕರಿಗೆ ಅದರ ರಾಜಕೀಯ ಅಭಿವ್ಯಕ್ತಿಗೆ ಕಾಂಗ್ರೇಸ್ ಪಕ್ಷದಲ್ಲಿ ಅವಕಾಶ ಇಲ್ಲ. ಇದನ್ನು ಕಂಡ ಸಂಘಪರಿವಾರ ತೆರೆದ ಬಾಹುಗಳಿಂದ ಅವರನ್ನು ಅಪ್ಪಿಕೊಂಡಿದೆ. ಆಗಲೇ ಅಲ್ಲಿದ್ದ ಬಂಟ, ಮೊಗವೀರ ಯುವಕರ ಜತೆ ಬಿಲ್ಲವ ಯುವಕರೂ ಸೇರಿಕೊಂಡಿದ್ದಾರೆ. ಅಲ್ಲಿಗೆ ಕಾಂಗ್ರೇಸ್ ಸಮಾಧಿ ಪೂರ್ಣಗೊಂಡಂತಾಯಿತು. ಕುದ್ರೋಳಿ ದೇವಸ್ಥಾನದ ನವೀಕರಣದ ನಂತರ ಜನಾರ್ಧನ ಪೂಜಾರಿ ಸತತ 3ಲೋಕಸಭಾ ಚುನಾವಣಿಗಳಲ್ಲಿ ಸೋತರು. ಇಲ್ಲಿಯವರೆಗೂ ಗೆದ್ದಿಲ್ಲ ಎನ್ನುವುದು ಗಮನಾರ್ಹ.ಇಂದು ರಾಜಕೀಯ ವ್ಯವಸ್ಥೆಯೇ ಕುಸಿದು ಬಿದ್ದಂತಹ ಅರಾಜಕತೆಯೊಂದು ಅವಿಭಜಿತ ದಕ್ಷಿಣದಲ್ಲಿ ನಮರ್ಾಣವಾಗಿದ್ದರೆ ಅದಕ್ಕೆ ಈ ತ್ರಿಮೂತರ್ಿಗಳು ಕೂಡಾ ಹೊಣಿಗಾರರು.ದಿನೇಶ ಅಮೀನ್ಮಟ್ಟು..



ಯಾವುದು ಹೇಗಿದ್ದರೇನು. ತಾವು ಮಾತ್ರ ಚನ್ನಾಗಿ ಬದುಕಬೇಕೆಂಬ ಸ್ವಾರ್ಥವನ್ನು ಪ್ರತಿಯೊಬ್ಬರು ಬಿಟ್ಟು, ತನ್ನೆದುರಿಗೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಾರಾಸಗಟಾಗಿ ವಿರೋಧಿಸಿ, ಸಮಾಜದ ಸ್ವಾಸ್ಥ್ಯಕ್ಕಾಗಿ ಪಕ್ಷ ಭೇದವನ್ನು ಮರೆತು ಐಕ್ಯತಾ ಹೋರಾಟಗಳಲ್ಲಿ ಭಾಗವಹಿಸಬೇಕು. ಇದು ಇಂದಿನ ವ್ಯವಸ್ಥೆಯ ಅನಿವಾರ್ಯ ಎಂದು ಅಭಿಪ್ರಾಯಪಡುತ್ತಾರೆ ಕಾ.ಅನಂತಸುಬ್ಬರಾವ್, ಎ.ಐ.ಟಿ.ಯು.ಸಿ ರಾಜ್ಯ ಪ್ರದಾನ ಕಾರ್ಯದಶರ್ಿಗಳು.ಭಾರತದ ರಾಜಕಾರಣ ಭ್ರಷ್ಟಾಚಾರದಲ್ಲಿ ದಿಲ್ಲಿಯಿಂದ ಹಳ್ಳಿಯವರೆಗೂ ಗಬ್ಬೆದ್ದು ನಾರುತ್ತಿದೆ. ಪಾಲರ್ಿಮೆಂಟ್ ವ್ಯವಸ್ಥೆ ಕುಸಿದು ಬೀಳುವ ಸ್ಥಿತಿ ತಲುಪಿದೆ. ಪಾಲರ್ಿಮೆಂಟ್ ಹಾಗೂ ವಿಧಾನಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಟ್ಯಾಧಿಪತಿಗಳು, ಕ್ರಿಮಿನಲ್ ದಾಖಲೆ ಇರುವವರು ಸೇರಿಕೊಂಡಿದ್ದಾರೆ. ಹಣದ ಪ್ರಭಾವದಿಂದ ಪಾಲರ್ಿಮೆಂಟರಿ ಪ್ರಜಾಪ್ರಭುತ್ವ ವಿರೂಪಗೊಂಡಿದೆ. ಜನತೆಯ ತೆರಿಗೆಯಿಂದ ಸಂಗ್ರಹಿಸಿರುವ ಕೋಟ್ಯಾಂತರ ರೂಪಾಯಿಗಳು ಈ ವ್ಯವಸ್ಥೆಯನ್ನು ಸದೃಡ ಮಾಡುವ ಬದಲು ವ್ಯರ್ಥವಾಗುತ್ತಿದೆ. ಜನಪರ ನತಿಗಳ ಬಗ್ಗೆ, ಅವಶ್ಯಕ ಪದಾರ್ಥಗಳ ಬೆಲೆ ಏರಿಕೆ, ನರುದ್ಯೋಗ, ನರುದ್ಯೋಗ, ವೇಗವಾಗಿ ಬೆಳೆಯುತ್ತಿರುವ ಕೋಮುವಾದ, ಸ್ವಾತಂತ್ರ್ಯ ಬಂದು 63ವರ್ಷಗಳು ಕಳೆದರೂ ಸಮರ್ಪಕವಾಗಿ ಪೂರೈಕೆಯಾಗದಿರುವ ಮೂಲಭೂತ ಅವಶ್ಯಕತೆಗಳು, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಆಗುತ್ತಿರುವ ಏರಿಳಿತ, ದಿನೇ ದಿನೇ ಬಡವ ಹಾಗೂ ಉಳ್ಳವರ ನಡುವೆ ಉಂಟಾಗುತ್ತಿರುವ ಹೆಚ್ಚಿನ ಅಂತರ, ರೈತರ ಆತ್ಮಹತ್ಯೆ ಇತ್ಯಾದಿಗಳು ಇಂದು ಚಚರ್ೆಯಾಗುತ್ತಿಲ್ಲ. ಕಳೆದ ಸಂಸತ್ ಅಧಿವೇಶನವು 2ಜಿ ತರಂಗಗುಚ್ಛ ಹಂಚಿಕೆ ಹಗರಣಕ್ಕೆ ಬಲಿಯಾಯಿತು. ಈ ಹಗರಣದಲ್ಲಿ ದೇಶವು 1.73ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ! ಈ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಿ ತನಖೆ ಮಾಡಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಅದನ್ನು ಒಪ್ಪದ ಕಾಂಗ್ರೇಸ್ ಇಡೀ ಅಧಿವೇಶನವನ್ನೇ ಮುಂದಕ್ಕೆ ಹಾಕಿತು. ಕೊನೆಗೆ 2ಜಿ ಹಗರಣ ಇಡಿ ಕಲಾಪವನ್ನೇ ಬಲಿ ಪಡೆಯಿತು.ಕಾಮನ್ವೆಲ್ತ್ ಕರ್ಮಕಾಂಡ, ಮುಂಬಯಿ ಆದರ್ಶ ಸೊಸೈಟಿ ಹಗರಣಗಳು ಯುಪಿಎನ ಭ್ರಷ್ಟಾಚಾರಕ್ಕೆ ನದರ್ಶನಗಳಾದವು. ಆದರೂ ಸಕರ್ಾರ ಮತ್ತದರ ಮಂತ್ರಿಗಳು ನರ್ಲಜ್ಜೆಯಿಂದಿದ್ದಾರೆ. 2ಜಿ ತರಂಗಗುಚ್ಛé ಹಗರಣ ಸಕರ್ಾರಕ್ಕೆ 1.73ಲಕ್ಷ ಕೋಟಿ ನಷ್ಟವಾಗಿದೆಂದು ಸಿಎಜಿ ವರದಿಯೂ ಹೇಳಿದೆ. ಹಗರಣದ ಕುರಿತು ದೇಶವ್ಯಾಪ್ತಿ ಪ್ರತಿರೋದ ಬಂದದ್ದರಿಂದ ಸಚಿವರಾಗಿದ್ದ ಎ.ರಾಜಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ರಾಜಾ ಖಾತೆಗೆ ಮಂತ್ರಿಯಾಗಿ ಬಂದ ಕಪಿಲ್ ಸಿಬಾಲ್ ಸಕರ್ಾರಕ್ಕೆ ಹಗರಣದಿಂದ ಯಾವುದೇ ನಷ್ಟವಾಗಿಲ್ಲವೆಂದು ತಿಳಿಸಿದರು. ಇದು ಸತ್ಯವಾಗಿದ್ದಲ್ಲಿ ರಾಜ ಅವರ ರಾಜೀನಾಮೆ ಏಕೆ ಕಾಂಗ್ರೇಸ್ ಅಂಗೀಕರಿಸಿತು? ಮತ್ತು ಸುಳ್ಳು ವರದಿ ಕೊಟ್ಟದ್ದಕ್ಕೆ ಸಿಎಜಿಯವರ ಬಗ್ಗೆ ಪಾಲರ್ಿಮೆಂಟ್ ಶಿಸ್ತಿನ ಕ್ರಮ ಕೈಗೊಳ್ಳಬಹುದಿತ್ತು. ಒಟ್ಟಾರೆ ಈ ಎರಡು ಅಂಶಗಳ ಬಗ್ಗೆ ಸಕರ್ಾರ ಮೌನಯಾಗಿದೆ! ಇತ್ತೀಚಿಗೆ ಬಂದ ವರದಿಯ ಪ್ರಕಾರ ಈ ಹಗರಣದ ಬಗ್ಗೆ ತನಖೆ ನಡೆಸಿದ ನ್ಯಾಯಮೂತರ್ಿ ಶಿವರಾಜಪಾಟೀಲ್ರು ಎ.ರಾಜಾ ದೋಷಿ ಎಂದು ತಿಳಿಸಿದ್ದಾರೆ! (ಸದ್ಯ ಎ.ರಾಜಾರನ್ನು ಸಿಬಿಐ ಬಂಧಿಸಿ ತನ್ನ ವಶದಲ್ಲಿಟ್ಟುಕೊಂಡಿದೆ) ಇನ್ನು ಆದರ್ಶ ಸೊಸೈಟಿ ಹಗರಣದಲ್ಲಿ ಅಲ್ಲಿನ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈಗ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ!ಇನ್ನು ಕನರ್ಾಟಕದಲ್ಲಿ ಹಗರಣ, ಭ್ರಷ್ಟಾಚಾರಗಳೇನು ಕಡಿಮೆ ಇಲ್ಲ.. ಇಡೀ ದೇಶದಲ್ಲಿಯೇ ಕನರ್ಾಟಕ ಭ್ರಷ್ಟಾಚಾರದಲ್ಲಿ ನಂ.1 ಪಟ್ಟವನ್ನು ಪಡೆದಿದೆ. ಬಿಜೆಪಿ ಸಕರ್ಾರದ 30ತಿಂಗಳುಗಳ ಅವಧಿಯಲ್ಲಿ 26ಹಗರಣಗಳು ಹೊರಬಂದಿವೆ. ಅಕ್ರಮ ಗಣಿಗಾರಿಕೆ, ಭೂಹಂಚಿಕೆಯಲ್ಲಿನ ಸ್ವಜನಪಕ್ಷಪಾತ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಈ ಎಲ್ಲಾ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದಾರೆ. ಸುಮಾರು 400ಕೋಟಿಗಳಷ್ಟು ಬೆಲೆ ಬಾಳುವ ಭೂಮಿಯನ್ನು ತನ್ನ ಮಗ, ಸೋದರಿ, ಅಳಿಯ ಮತ್ತಿತರರಿಗೆ ಅಕ್ರಮವಾಗಿ ಹಂಚಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳು ಕೂಡ ಸಾಕಷ್ಟು ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ. ಅದನ್ನೇ ನಾನು ಮಾಡಿದ್ದೇನೆ.. ತಪ್ಪೇನಾಯ್ತು? ಎಂದು ಉದ್ದಟತನದಿಂದ ಸವಾಲುಗಳನ್ನು ಹಾಕುತ್ತಿದ್ದಾರೆ. ಕೆಲವು ಕಡೆ ಡಿನೋಟಿಪೈ ಮಾಡಿಕೊಂಡ ಭೂಮಿಯನ್ನು ಬಿಡಿಎ ಗೆ ನಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ದರೋಡೆ ಮಾಡಿದ ವ್ಯಕ್ತಿ ಆ ವಸ್ತುವನ್ನು ಮರಳಿ ನಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ? ಸದಾ ಮಠ, ದೇವಸ್ಥಾನಗಳಲ್ಲಿ ಅರೆಬೆತ್ತಲಾಗಿ ತಿರುಗುವ ಮುಖ್ಯಮಂತ್ರಿಗೆ ದೇವರಾಗಲಿ ಅಥವಾ ಮಠಾಧೀಶರಾಗಲಿ ಜನಸಾಮಾನ್ಯರ ಆಸ್ತಿ ಕಬಳಿಸಬಾರದೆಂದು ಯಾಕೆ ಹೇಳಲಿಲ್ಲ? ಆಷಾಢಭೂತಿತನಕ್ಕೂ ಒಂದು ಮಿತಿಯೆಂಬುದಿದೆ. ಜನರ ಅಜ್ಞಾನ ಮತ್ತು ಮೌಡ್ಯದ ಮೇಲೆ ಮುಖ್ಯಮಂತ್ರಿ ಇಂದು ಸವಾರಿ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ದಾವೆ ಹೂಡಲು ಕಾನೂನು ರೀತ್ಯಾ ಅನುಮತಿ ನಡಬೇಕೆಂದು ವಕೀಲರಿಬ್ಬರು ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದರು. ರಾಜ್ಯಪಾಲರು ಕೂಡ ಕಾನೂನನಡಿಯಲ್ಲಿಯೇ ವಕೀಲರ ವೇದಿಕೆಗೆ 21-01-2011ರ ಸಂಜೆ ದಾವೆ ಹೂಡಲು ಅನುಮತಿ ಕೊಟ್ಟಿದ್ದಾರೆ. ಇದಾದ ನಂತರ ಹತ್ತಾರು ರಂಪಾಟಗಳನ್ನು ಮಾಡಿದ ಯಡಿಯೂರಪ್ಪ ತಾನು ನರಪರಾಧಿ ಎಂದು ಕೋಟರ್ಿನಲ್ಲಿ ಸಾಭೀತುಮಾಡುವ ಬದಲಿಗೆ ಇಲ್ಲ ಸಲ್ಲದ ವಾಕ್ಯಗಳಲ್ಲಿ ರಾಜ್ಯಪಾಲರನ್ನು ನಂದಿಸಿದ್ದಾರೆ. ಜೊತೆಯಲ್ಲಿ ಬಿಜೆಪಿಯ ಎಲ್ಲ ನಾಯಕರು ಯಡಿಯೂರಪ್ಪನ ಬೆಂಬಲಕ್ಕೆ ನಂತು ರಾಜ್ಯಪಾಲರ ವಿರುದ್ಧ ಬೀದಿಗಿಳಿದರು. ಲಿಂಗಾಯತ ಮಠ ಮಾನ್ಯಗಳು, ಪೇಜಾವರರು ಬಹಿರಂಗವಾಗಿಯೇ ಯಡಿಯೂರಪ್ಪನ ಭ್ರಷ್ಟಾಚಾರವನ್ನು ಬೆಂಬಲಿಸಿದ್ದಾರೆ. ಇದು ಸಾಲದೆಂಬಂತೆ 22-01-2011ರಂದು ಸಕರ್ಾರವೇ ಬಂದ್ ಆಚರಿಸಿದೆ. ಅಂದು ಸಾರಿಗೆ ವಾಹನಗಳ ರಸ್ತೆಗೆ ಇಳಿಯಲಿಲ್ಲ. ಸಾರಿಗೆ ಮಂತ್ರಿ ಆರ್.ಅಶೋಕ್ ಅವರೇ ಖುದ್ದಾಗಿ ನಗಮದ ಎಲ್ಲಾ ಬಸ್ಸುಗಳನ್ನು ನಲ್ಲಿಸಿದ್ದಾರೆ. ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳಿಗೆ ಬೆಂಕಿಯನ್ನು ಹಚ್ಚಿಸಿದ್ದಾರೆ. ಒಂದು ಕೋಟಿ ಬಸ್ ಪ್ರಯಾಣಿಕರು ಬಸ್ಗಳಿಲ್ಲದೇ ಅಂದು ಪರದಾಡಿದರು. ಅವರ ಮೇಲೆ ಸಾರಿಗೆ ಮಂತ್ರಿ ಸವಾರಿ ಮಾಡಿದ್ದಾರೆ.ತಾನೊಂದು ವಿಶೇಷ ಸಿದ್ದಾಂತಗಳನ್ನೊಳಗೊಂಡ ಪಕ್ಷವೆಂದು ಕರೆಯಿಸಿಕೊಳ್ಳುವ ಬಿಜೆಪಿ ಕನರ್ಾಟದಲ್ಲಿ ಮುಖ್ಯಮಂತ್ರಿಯ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಂತು ತಾನೇ ಬಂದ್ ನಡೆಸಿದೆ. ಆದರೆ, ಬಲವಂತವಾದ ಈ ಬಂದ್ನ್ನು ಸಕರ್ಾರ ಜನತೆಯ ಮೇಲ ಹೇರಿದೆ. ಈ ಬಂದ್ನಂದ ಒಂದು ಅಂದಾಜಿನ ಪ್ರಕಾರ ಅಂದು ರಾಜ್ಯಕ್ಕಾದ ನಷ್ಟ 2ಸಾವಿರ ಕೋಟಿ ರೂಪಾಯಿಗಳು! ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ತಪ್ಪು ಮಾಡಿಲ್ಲ, ಎಲ್ಲಿಯೂ ಭೂಮಿಯನ್ನು ಅತಿಕ್ರಮಿಸಿಕೊಂಡಿಲ್ಲ. ಕಾನೂನಾತ್ಮಕವಾಗಿಯೇ ಭೂಹಂಚಿಕೆ ಮಾಡಿದ್ದಾರೆಂದು ಬಿಜೆಪಿಯ ಹೈಕಮಾಂಡ್ ಒಂದೆಡೆ ಹೇಳುತ್ತಿದೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪನವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಾರದೆಂದು ಬೊಬ್ಬೆ ಇಡುತ್ತಿದೆ. ಇದು ಬಿಜೆಪಿಯ ಇಬ್ಬಗೆಯ ನತಿ.ಕೇಂದ್ರ ಸಕರ್ಾರದ ಮಂತ್ರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯ ಭ್ರಷ್ಟಾಚಾರ ಬಯಲಿಗೆ ಬಂದಾಗ ಭ್ರಷ್ಟಾಚಾರಿಗಳು ಸಂಪುಟದಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನಡಬೇಕೆಂದು ಬಿಜೆಪಿ ಹಟ ಹಿಡಿಯಿತು. ಆಗ ಇರ್ವರ ತಲೆದಂಡವು ನಡೆಯಿತು. ಆದರೆ, ತನ್ನ ಪಕ್ಷದ ಮುಖ್ಯಮಂತ್ರಿ ಒಬ್ಬರು ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಾಗ ಬಿಜೆಪಿ ತುಟಿಪಿಟಿಕೆನ್ನದೇ ಯಡಿಯೂರಪ್ಪನನ್ನು ಬೆಂಬಲಿಸಿತು. ಅದು ಸಾಲದೆಂಬಂತೆ ಯಡಿಯೂರಪ್ಪ ಕನರ್ಾಟಕದ ಅಭಿವೃದ್ಧಿಯ ಹರಿಕಾರ ಎಂದೇಳಿತು. ಬಿಜೆಪಿ ಅಧ್ಯಕ್ಷ ನತಿನ್ ಗಡ್ಕರಿಯವರು ಮುಖ್ಯಮಂತ್ರಿಯವರು ಕಾನೂನುರೀತ್ಯಾ ಯಾವ ಅಕ್ರಮವನ್ನು ಎಸಗಿಲ್ಲವೆಂದೂ ನೈತಿಕ ಸರಿ ಅಲ್ಲವೆಂದು ಹೇಳಿದ್ದಾರೆ. ಇದೊಂದು ವಿತಂಡವಾದ. ತನ್ನ ಪಕ್ಷದ ಮುಖ್ಯಮಂತ್ರಿಯೊಬ್ಬ ಅನೈತಿಕ ಅಕ್ರಮ ಕೆಲಸಗಳನ್ನು ಮಾಡಿದರೂ ಕೂಡ ಆತನನ್ನು ಅದೇ ಸ್ಥಾನದಲ್ಲಿ ಮುಂದುವರಿಸಕೊಂಡು ಹೋಗುವುದೆಂದರೆ ಏನರ್ಥ? ಒಂದಂತೂ ಸತ್ಯ.. ಈ ಸಕರ್ಾರ ಅಧಿಕಾರಕ್ಕೆ ಬಂದ 30ತಿಂಗಳಲ್ಲಿ ರಾಜ್ಯದ ಜನತೆಯ ಯಾವುದೇ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಯಡಿಯೂರಪ್ಪ ದಿನದಿಂದ ದಿನಕ್ಕೆ ಹೊಸಹೊಸ ಬಿಕ್ಕಟ್ಟಿಗೆ ಸಿಲುಕಿ ತನ್ನ ಕುಚರ್ಿ ಉಳಿಸಿಕೊಳ್ಳುವುದೇ ಆತನಗೆ ಬೃಹತ್ ಸಮಸ್ಯೆಯಾಗಿ ಉಳಿದಿದೆ.ಕಳೆದ ವಿಧಾನಸಭಾಧಿವೇಶನ ಕೂಡ ಅನರ್ಹ ಶಾಸಕರ ಚಚರ್ೆಗೆ ಸೀಮಿತವಾಗಿ ಯಾವುದೇ ಕಾರ್ಯಕಲಾಪ ನಡೆಯದೇ ಅಂತ್ಯಕಂಡಿತು. ಯಡಿಯೂರಪ್ಪ ಕನರ್ಾಟಕ ಕಂಡರಿಯದ ಅತ್ಯಂತ ಭ್ರಷ್ಟ ಮತ್ತು ಮೂಡನಂಬಿಕೆಗಳನ್ನುಳ್ಳ ಮುಖ್ಯಮಂತ್ರಿ. ಎರಡುವರೆ ವರ್ಷಗಳಲ್ಲಿ ಈತ ದರ್ಶನ ಮಾಡಿರುವ ಮಠಗಳು, ದೇವಸ್ಥಾನಗಳು ಹಾಗೂ ಯಜ್ಞ ಯಾಗಾದಿಗಳು ಗಿನ್ನಸ್ ದಾಖಲೆಯಾಗಿವೆ. ಆದರೆ, ಇದಿರಂದ ರಾಜ್ಯದ ಜನತೆಗೆ ಬಂದಿದ್ದೇನು? ಎಂಬುದು ನಮ್ಮ ಪ್ರಶ್ನೆ.ಈ ತಿಂಗಳಲ್ಲಿ ಆರಂಭವಾಗುವ ಬಜೆಟ್ ಅಧಿವೇಶನವು ಹಿಂದಿನಂತೆ ಗದ್ದಲಗಳಲ್ಲಿ ಕೊನೆಗಾಣುವ ಎಲ್ಲ ಸೂಚನೆಗಳು ಇವೆ. ಇಂತಹ ದುಸ್ಥಿತಿಗೆ ಕಾರಣ ಏನು?ಬಹುಶಃ ಅತೀ ಮುಖ್ಯವಾದ ಕಾರಣ ಸಾಮಾನ್ಯ ಜನರ ರಾಜಕೀಯ ಜಡತ್ವ ಸಕ್ರೀಯವಾದ ರಾಜಕಾರಣದಲ್ಲಿ ಭಾಗವಹಿಸಲಿರುವ ಹಿಂಜರಿಕೆ. ಯಾವುದು ಹೇಗಿದ್ದರೇನು. ತಾನು ಮಾತ್ರ ಚನ್ನಾಗಿ ಬದುಕಬೇಕೆಂಬ ಸ್ವಾರ್ಥ. ತನ್ನೆದುರಿಗೆ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತಾತ್ಸಾರ, ಅಗಾಧ ಪ್ರಮಾಣವಾಗಿ ಬೆಳೆದು ಸಮಾಜದ ಸ್ವಾಸ್ಥ್ಯಕ್ಕೆ ಮುಳುವಾಗಿದೆ ಎಂಬುದು ಅರಿವಿಲ್ಲದಿರುವುದು. ಹಣದ ಪ್ರಭಾವ ಪ್ರತಿಯೊಬ್ಬ ನಾಗರೀಕನನ್ನು ಮಾರಾಟದ ಸರಕನ್ನಾಗಿ ಮಾರ್ಪಡಿಸಿದೆ. ಪಂಚಾಯತಿಯಿಂದ ಪಾಲರ್ಿಮೆಂಟ್ನವರೆಗೆ ಚುನಾವಣಿ ಗೆಲ್ಲಬೇಕಾದರೆ ಅಪಾರ ಹಣ ಖಚರ್ಾಗುತ್ತಿದೆ. ಈ ಹಣದ ಹೆಚ್ಚು ಭಾಗ ಎಲ್ಲಿಂದ ಬರುತ್ತಿದೆ ಎಂಬ ಅನುಮಾನ ಶುರುವಾಗಿದೆ. ಐ.ಪಿ.ಎಲ್ ಕ್ರಿಕೆಟಿಗರಂತೆ ನಮ್ಮ ಚುನಾಯಿತ ಪ್ರತಿನಧಿಗಳು ಬಿಕರಿಗೆ ಸಿದ್ದವಾಗಿದ್ದಾರೆ. ಪಕ್ಷ, ಸಿದ್ದಾಂತಗಳು ಇಲ್ಲಿ ಗೌಣವಾಗುತ್ತಿವೆ. ಯಡಿಯೂರಪ್ಪನಗೂ ಕುಮಾರಸ್ವಾಮಿಗೂ ಯಾವುದೇ ವ್ಯತ್ಯಾಸಗಳು ಕಾಣಸಿಗುತ್ತಿಲ್ಲ.ಕಪ್ಪು ಹಣ ಇಡೀ ರಾಜಕೀಯ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಭಾರತದ ಹಲವಾರು ದೇಶಪ್ರೇಮಿಗಳು ವಿದೇಶಿ ಬ್ಯಾಂಕ್ ಅದರಲ್ಲೂ ಸ್ವಿಸ್ ಬ್ಯಾಂಕುಗಳಲ್ಲಿ ಹಣ ತೊಡಗಿಸಿದ್ದಾರೆ. ಈ ಹಣ ಅವರಿಗೆ ಎಲ್ಲಿಂದ ಬಂತೆಂಬ ಬಗ್ಗೆ ಸಂಶೋಧನೆಯ ಅವಶ್ಯಕತೆಯಿಲ್ಲ. ಅಂತಹ ದೇಶಪ್ರೇಮಿಗಳ ಹೆಸರುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲವೆಂದು ಸಕರ್ಾರ ಸುಪ್ರೀಂಕೋಟರ್ಿಗೆ ತಿಳಿಸಿದೆ! ಇದಕ್ಕಿಂತ ನಾಚಿಕೆಗೇಡಿನ ಸನ್ನವೇಶ ಬರಲಾರದು. ಆದಾಗ್ಯೂ ಡಾ.ಮನಮೋಹನ್ ಸಿಂಗ್ ಅವರು ಪ್ರಾಮಾಣಿಕರು! ಅವರ ಮಂತ್ರಿಯೊಬ್ಬನಂದ ಸಕರ್ಾರಕ್ಕೆ 1.73ಲಕ್ಷ ಕೋಟಿ ನಾಮ ಹಾಕಿಸಿದ್ದಾರೆ! ವಿತ್ತ ಸಚಿವ ಪ್ರಣಬ್ಮುಖಜರ್ಿಯವರು ವಿದೇಶಿ ಬ್ಯಾಂಕುಗಳಲ್ಲಿ ಹಣ ಇಟ್ಟಿರುವ ಪುಣ್ಯಾತ್ಮರ ಹೆಸರುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲವೆಂದು ಅಪ್ಪಣಿಯನ್ನು ಕೊಡಿಸಿದ್ದರು!ಕಾಲಕ್ರಮೇಣ ಅದರಲ್ಲಿ ಕೆಲವೊಂದು ಹೆಸರುಗಳು ಈಗಾಗಲೇ ಬಹಿರಂಗಗೊಂಡಿವೆ. ಅವುಗಳಿಗೆ ಬಾಕ್ಸ್ ನೋಡಿರಿ.ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ಐಕ್ಯತಾ ಹೋರಾಟಗಳು ಮಾತ್ರ ಜನವಿರೋಧಿ ಸಕರ್ಾರಗಳ ನತಿಗಳನ್ನು ಹಿಮ್ಮೆಟ್ಟಿಸಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರುವ ಯಡಿಯೂರಪ್ಪನವರು ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ತಮ್ಮ ವೈಯಕ್ತಿಕ ಆಸ್ತಿಯ ಬಗ್ಗೆ ವಿವರಣಿಯನ್ನು ಕೊಟ್ಟಿದ್ದಾರೆ. ಯಾವ ಮೂರ್ಖನೂ ಕೂಡ ಯಡಿಯೂರಪ್ಪನ ಈ ಸ್ವಯಂ ಆಸ್ತಿ ಘೋಷಣಿಯನ್ನು ಒಪ್ಪಲು ಸಾಧ್ಯವಿಲ್ಲ. ಅವರ ಮಕ್ಕಳು ಅವರ ಪಾಲನ್ನು ತೆಗೆದುಕೊಂಡಿದ್ದಾರೆಂದು ಅವರ ಪ್ರಮಾಣಿಕತೆಯನ್ನು ಬುದ್ದಿವಂತಿಕೆಯಿಂದ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ನಾನೊಬ್ಬ ರೈತನ ಮಗ, ಕನ್ನಡ ನಾಡು, ನುಡಿ, ಸಂಸ್ಕೃತಿ, ಖನಿಜ ಸಂಪತ್ತು, ರಾಜ್ಯದ ಅಭಿವೃದ್ಧಿಗಾಗಿ 5ವರ್ಷ ಹಗಲಿರುಳು ದುಡಿಯುತ್ತೇನೆಂದು ಬರೀ ವೇದಿಕೆಗಳಲ್ಲಿ ಮೊಸಳೆ ಕಣ್ಣೀರು ಸುರಿಸುವ ಯಡಿಯೂರಪ್ಪ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನಗಳಲ್ಲಿ ಮಾಡಿದ ಕೆಲಸ ಸೊನ್ನೆ.ಬರೀ ಮಾತು ಬದಲಿಸುವದನ್ನೇ ತನ್ನ ಕಾಯಕ ಮಾಡಿಕೊಂಡ ಯಡಿಯೂರಪ್ಪ ತನ್ನ ಮಗನನ್ನು ಪಾಲರ್ಿಮೆಂಟ್ಗೆ ಅಭ್ಯಥರ್ಿಯಾಗಿ ನಿಲ್ಲಿಸುವುದಿಲ್ಲವೆಂದು ಕಂಡಕಂಡ ದೇವರ ಮೇಲೆ ಪ್ರಮಾಣ ಮಾಡಿದ್ದ. ಆದರೆ, ಕೊನೆಗೆ ರಾಘವೇಂದ್ರನ ಚುನಾವಣಿಯನ್ನು ಪ್ರತಿಷ್ಟೆಯಾಗಿ ಸ್ವೀಕರಿಸಿ, ಮನಸೋ ಇಚ್ಛೆ ಅಪಾರ ಹಣವನ್ನು ಖಚರ್ು ಮಾಡಿ ಸಂಸದನನ್ನಾಗಿ ಮಾಡಿದ.ಇನ್ನೊರ್ವ ಸುಪುತ್ರ ವಿಜಯೇಂದ್ರ, ಯಾವಾಗಲೂ ವಿಧಾನಸೌಧ, ವಿಕಾಸಸೌಧದ ಕೊಠಡಿಗಳಲ್ಲಿಯೇ ಠಿಕಾಣಿ ಹೂಡಿರುತ್ತಾನೆ. ಎಲ್ಲ ಇಲಾಖೆಗಳ ಕಡತಗಳು ಸಂಬಂಧಪಟ್ಟ ಮುಖ್ಯಸ್ಥರಿಗೆ ತಲುಪುವ ಮೊದಲೇ ವಿಜಯೇಂದ್ರ ಪರಿಶೀಲಿಸುತ್ತಾನೆ. ಕೆಲವು ದಿನಗಳ ಹಿಂದೆ ವಿಜಯೇಂದ್ರನ ಕಾಟಕ್ಕೆ ಹತ್ತಾರು ಮಂತ್ರಿಗಳು ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದರು. (ಕೊನೆಗೆ ಕೇಶವಕೃಪ ಸಂದಾನಕ್ಕೆ ಬಂದಿತು.) ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವಿಜಯೇಂದ್ರ ರಾಜ್ಯಮಟ್ಟದಲ್ಲಿ ಸಕರ್ಾರದ ಎಲ್ಲ ಡೀಲ್ಗಳನ್ನು ಕುದುರಿಸುವಾತ.ಈವರೆಗೆ ಯಡಿಯೂರಪ್ಪ ರಾಜ್ಯವನ್ನು ಲೂಟಿ ಮಾಡುತ್ತಾ ಅನೈತಿಕ ಹಾದಿಗಳಲ್ಲಿಯೇ ಮುಂದುವರೆದಿದ್ದಾನೆ. ಮೊದಲಿಗೆ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ. ಇದೇ ಆಪರೇಷನ್ ಕಮಲ ತನಗೆ ಮುಳುವಾದಾಗ ರಾಷ್ಟ್ರೀಯ ನಾಯಕರನ್ನು ಕರೆತಂದು ರೆಡ್ಡಿಗಳ ಜೊತೆ ಸಂಧಾನ ಮಾಡಿಕೊಂಡ. ಕೊನೆಗೆ ಡಿನೋಟಿಪಿಕೇಷನ್ ಹಗರಣದಲ್ಲಿ ತನ್ನ ಖಚರ್ಿಗೆ ಸಂಚಕಾರ ಬಂದಾಗ ಗಡ್ಕರಿ ಮತ್ತು ಮಠಮಾನ್ಯಗಳ ಬೆಂಬಲ ಪಡೆದು ಖುಚರ್ಿ ಉಳಿಸಿಕೊಂಡ. ರಾಜ್ಯಪಾಲರು ತನ್ನ ವಿರುದ್ಧ ಮೊಕದ್ದಮೆ ದಾಖಲಿಸಲು ವಕೀಲರಿಬ್ಬರಿಗೆ ಅನುಮತಿ ನೀಡಿದಾಗ ತಾನೇ ಮುಂದೆ ನಿಂತು ಕನರ್ಾಟಕ ಬಂದ್ ಮಾಡಿಸಿದ. ಇಂತಹ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಯೇ ನೇರ ಕಾರಣ. ಮೊದಲಿಗೆ ಬಿಜೆಪಿಯ ಜೊತೆಗೂಡಿ ಸಕರ್ಾರ ಮಾಡಿ, ನಂತರದ ಅವಧಿಯಲ್ಲಿ ಯಡಿಯೂರಪ್ಪನಿಗೆ ಅಧಿಕಾರ ನೀಡದಿದ್ದರಿಂದ ಅದೇ ಸಿಂಪತಿಯನ್ನು ಬಳಸಿಕೊಂಡು ಮುಂದಿನ ಚುನಾವಣಿಯಲ್ಲಿ ಅಧಿಕಾರಕ್ಕೆ ಬಂದ. ಒಟ್ಟಾರೆ ಯಡಿಯೂರಪ್ಪ ಅನೈತಿಕ, ಅಕ್ರಮ, ಮಾಟಮಂತ್ರ, ಜಾತಿ ಮಾಡುತ್ತಲೇ ರಾಜಕಾರಣ ಮಾಡುವ ಮನುಷ್ಯ.ಹೆಚ್.ವಿ ಅನಂತಸುಬ್ಬರಾವ್.

ದೇವದುರ್ಗ ಮರಳು ಮಾಫಿಯಾ!



ದೇವದುರ್ಗ ಮರಳು ಮಾಫಿಯಾ!ಹಗಲಿರುಳು ನೈಸಗರ್ಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರ ಮೇಲೆ ಜಿಲ್ಲಾಡಳಿತ ನಿಗಾ ಇಡಬೇಕು. ಅಕ್ರಮ ಮರಳುಗಳ್ಳರಿಂದ ಬರಿದಾಗುತಿರುವ ಕೃಷ್ಣೆಯ ಒಡಲನ್ನು ರಕ್ಷಿಸಬೇಕು. ತಾಲೂಕಿನಲ್ಲಿನ ನೈಸಗರ್ಿಕ ಸಂಪನ್ಮೂಲದ ಬಳಕೆಗೆ ಅಗತ್ಯ ಕ್ರಮಗಳನ್ನು ಜಾರಿ ಮಾಡಿ ತಪ್ಪಿತಸ್ಥರನ್ನು ಈ ನೆಲದ ಕಾನೂನಿನಡಿ ಶಿಕ್ಷಿಸಬೇಕೆಂದು ನಮ್ಮ ಪ್ರತಿನಿಧಿ ಅಲಿಮೌಲಾನ ಒತ್ತಾಯಿಸುತ್ತಾರೆ.ದೇಶದ ಅಪಾರ ನೈಸಗರ್ಿಕ ಸಂಪತ್ತನ್ನು ರಾಷ್ಟ್ರಮಟ್ಟದಲ್ಲಿ ಅಂಬಾನಿಗಳು ಲೂಟಿ ಹೊಡೆಯುತ್ತಿದ್ದರೆ, ರಾಜ್ಯದಲ್ಲಿ ಕಳ್ಳರೆಡ್ಡಿಗಳು ಅಕ್ರಮವಾಗಿ ಇದ್ದಬಿದ್ದ ಖನಿಜ ಸಂಪತ್ತನ್ನೆಲ್ಲ ಖಾಲಿ ಮಾಡುತ್ತಿದ್ದಾರೆ. ದೇಶದ ನೈಸಗರ್ಿಕ ಸಂಪತ್ತು ಬೇನಾಮಿಯಾಗಿ ಲೂಟಿಯಾಗುತ್ತಿರುವಾಗ ನಾವೇಕೆ ಸುಮ್ಮನೆ ಕುಳಿತುಕೊಳ್ಳಬೇಕೆಂದು ತಿಳಿದು ದೇವದುರ್ಗ ತಾಲೂಕಿನ ಕೆಲವು ಅಡ್ಡಕಸಬಿಗಳು ಅಕ್ರಮವಾಗಿ ಮರಳನ್ನು ಸಾಗಿಸುವ ದಂಧೆಗೆ ಕಂಕಣಬದ್ದವಾಗಿ ನಿಂತಿದ್ದಾರೆ.ಜಿಲ್ಲೆಯಲ್ಲಿಯೇ ಅತಿಹೆಚ್ಚು ನೈಸಗರ್ಿಕ ಸಂಪನ್ಮೂಲಗಳನ್ನು ಹೊಂದಿರುವ ದೇವದುರ್ಗ ಕೃಷ್ಣಾ ನದಿ ದಂಡೆಯ ಮೇಲಿನ ಒಂದು ಶಾಪಗ್ರಸ್ಥ ತಾಲೂಕು. ಇಲ್ಲಿನ ಜನರು ಕೃಷಿಯನ್ನು ಅವಲಂಭಿಸಿದ್ದರೂ ರಾಜಕೀಯದಲ್ಲಿ ಮಾತ್ರ ಬಹುಚಾಣಾಕ್ಷರು. ಎಲ್ಲಿ ಚಾಣಾಕ್ಷತೆ, ಆಧುನಿಕತೆ ಬೆಳೆದಿರುತ್ತದೆಯೋ ಅಂತಲ್ಲಿ ಅಷ್ಟೇ ವೇಗವಾಗಿ ಅನೈತಿಕತೆ, ಅಕ್ರಮ, ಅನಕ್ಷರತೆ ಬೆಳೆದು ನಿಂತಿರುತ್ತದೆ. ದೇವದುರ್ಗ ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರವೆಂಬ ಭೂತಗಳು ಜನಸಾಮಾನ್ಯರಿಂದಿಡಿದು ಎಲ್ಲರನ್ನು ಆವರಿಸಿವೆ. ಅಂತೆಯೇ ಈ ಬಾರಿ ನಾವುಗಳು ದೇವದುರ್ಗ ತಾಲೂಕಿನ ನದಿದಂಡೆಯ ಬಳಿ ನಡೆಯುವ ಅಕ್ರಮ ಮರಳುಗಾರಿಕೆಯ ಅಕ್ರಮವನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದೇವೆ. ಕೃಷ್ಣಾನದಿಯ ದಂಡೆಯ ಗ್ರಾಮಗಳಲ್ಲಿ ಕೆಲವರು ಸಕರ್ಾರದಿಂದ ಅನುಮತಿಯನ್ನು ಪಡೆದು ಮರಳನ್ನು ಸಾಗಿಸುತ್ತಿದ್ದಾರೆ. (ಕಾನೂನಾತ್ಮಕವಾಗಿ ಮರಳು ಹರಾಜು ಪಡೆದವರ ಮೇಲೆ ನಮ್ಮದೇನು ತಕರಾರು ಇಲ್ಲ.) ಆದರೆ, ಅಧಿಕೃತವಾಗಿ ಪರವಾನಿಗೆಯನ್ನು ಪಡೆದುಕೊಂಡವರ ಹೆಸರುಗಳನ್ನು ಬಳಸಿಕೊಂಡು 1ಅನುಮತಿಗೆ 10ಜನರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರಲ್ಲ ಆ ಕುರಿತು ನಮ್ಮದೊಂದು ಆಕ್ಷೇಪಣಿ ಇದೆ.ನಾವು ಮೊನ್ನೆ ದೇವದುರ್ಗದ ಕೃಷ್ಣಾನದಿ ದಂಡೆಯ ಹೂವಿನಹೆಡಗಿ, ಜೋಳದಹೆಡಗಿ, ಕೊಪ್ಪರ, ಮೆದರ್ಗೋಳ, ಕೊಣಚಪ್ಪಳ, ಗೂಗಲ್ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೇವು.ನದಿ ದಂಡೆಯ ಸುತ್ತ ನಾವು ಎತ್ತ ದೃಷ್ಟಿ ಹಾಯಿಸಿದರೂ ಲಾರಿ, ಟ್ರಾಕ್ಟರ್, ಜೀಪ್ಗಳು. (ಅಲ್ಲೊಂದು ಸಣ್ಣಕೈಗಾರಿಕೆಯೇ ಆರಂಭವಾಗಿರಬೇಕು ಎಂಬಂಥೆ ಬಾಸವಾಗುತ್ತದೆ) ಇನ್ನೊಂದೆಜ್ಜೆ ಮುಂದೊದರೆ ಅಲ್ಲೆಲ್ಲ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮರಳು ಸಾಗಿಸುವವರ ಹತ್ತಾರು ಜಾಲಗಳು ಕಣ್ಣಿಗಳು ಬೀಳುತ್ತವೆ. ಅಲ್ಲಿ ಒಂದೊಂದು ಗುಂಪಿನಲ್ಲಿ ಹತ್ತಾರು ಕೆಲಸದಾಳುಗಳು, ಅವರನ್ನು ನೋಡಿಕೊಳ್ಳಲು ಇಬ್ಬರು ಬಾಡಿಗೆದಾರರು. ಬಾಡಿಗೆದಾರನ ಮೇಲೆ ಅಕ್ರಮವಾಗಿ ಮರಳು ಸಾಗಿಸುವ ಮಾಲೀಕನಿರುತ್ತಾನೆ. ಯಾರಾದರೂ ಹೋಗಿ ಏನ್..ಸಾರ್.. ನೀವೆನು ಮಾಡುತ್ತಿದ್ದೀರಿ.. ಇಲ್ಲಿ ಯಾಕೆ.. ಇಷ್ಟು ಆಳದಲ್ಲಿ ಮರಳನ್ನು ತೆಗೆಯುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ನೀವೇನು ಪ್ರೇಸ್ನವರಾ..? ಯಾರು ನಿಮ್ಮ ಸಂಪಾದಕ..? ಯಾವುದು ನಿಮ್ಮ ಪೇಪರ್ ಅಂತ ಕೇಳುತ್ತಾ ಡೀಲ್ಗೆ ಇಳಿಯುತ್ತಾರೆ.ದುರಂತ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಪ್ರಶ್ನೆ ಮಾಡಿದರೂ ಅಕ್ರಮವಾಗಿ ಮರಳು ಸಾಗಿಸುವವರು ನೀವು ಪ್ರೇಸ್ನವರಾ ಅಂತ ಕೇಳುತ್ತಿದ್ದಾರೆನದಿ ದಂಡೆಯ ಮರಳನ್ನು ಅಕ್ರಮವಾಗಿ ಬೇರೆಡೆ ಸಾಗಿಸಲು ಪೊಲೀಸ್ ಇಲಾಖೆ ಜೊತೆ ಸಂಬಂಧಪಟ್ಟ ಇಲಾಖೆಗಳು ಅಸ್ತು ಎಂದಿವೆ. ಮೊನ್ನೆ ಮಸರಕಲ್ ಜಿ.ಪಂನಿಂದ ಆಯ್ಕೆಯಾದ ದೊಂಡಂಬಳಿಯ ಶರಣಬಸವ ನಾಯಕ ಎಂಬಾತ ಒಂದು ಮಾಹಿತಿಯಂತೆ ನದಿ ದಂಡೆಯ ಎಲ್ಲ ಅಕ್ರಮ ಮರಳುಗಾರಿಕೆಯನ್ನು ನೋಡಿಕೊಳ್ಳುತ್ತಾನೆಂಬ ಗುಮಾನಿ ಇದೆ. (ಕಾರಣ ಈತ ಶಿವನಗೌಡನ ಸಂಬಂಧಿಯಂತೆ) ಈ ಮೊದಲು ಪಂಚಾಯತಿಯೊಂದರ ಅಧ್ಯಕ್ಷನಾಗಿದ್ದ ಶರಣಬಸವ ಹತ್ತಾರು ಅವ್ಯವಹಾರ, ಭ್ರಷ್ಟಾಚಾರಗಳನ್ನು ಮಾಡುತ್ತಲೇ ಬಂದಿದ್ದಾನೆ. ಆಗ ಶಿವನಗೌಡರು ಮಂತ್ರಿಯಿದ್ದಾಗ ಶರಣಬಸವ ತಾಲೂಕಿನಲ್ಲಿ 'ಮರಿಮಂತ್ರಿ'ಯಾಗಿ ದಬರ್ಾರ್ ನಡೆಸಿದ್ದಾನೆ.ಸಧ್ಯ ದೇವದುರ್ಗದಲ್ಲಿ ನಡೆಯುವ ಹತ್ತಾರು ಅಕ್ರಮ ದಂಧೆಗಳಲ್ಲಿ ಶರಣಬಸವನ ಹೆಸರು ಪ್ರಥಮ ಸ್ಥಾನದಲ್ಲಿದೆ. 30ಅರಿಯದ ಹುಡುಗನೊಬ್ಬ (ಶಿವನಗೌಡನ ಸಂಬಂಧಿಯೆಂದು) ತಾಲೂಕಿನಲ್ಲಿ ಮನಬಂದಂತೆ ಕುಣಿಯುತ್ತಾನೆಂದರೆ ಪೊಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತಿದೆ.ಇನ್ನೊರ್ವ ಸಿ.ಎಸ್ ಪಾಟೀಲ್ ಎಂಬ ಇಸ್ಪೀಟ ರಾಜ ಸಧ್ಯ ದೇವದುರ್ಗ ಕಮಲ ಪಕ್ಷದ ನಾಯಕ. ಶಿವನಗೌಡ ಹಿಂದೆ ಮಂತ್ರಿ ಇದ್ದಾಗ ಆತನ ಕೆಂಪುಗೂಟದ ಕಾರಿನಿಂದ ತಿರುಗಾಡುತ್ತಿದ್ದ. ಶಿವನಗೌಡನಿಗೆ ಮಂತ್ರಿಗಿರಿ ಕೊಡುವಾಗ ಸಿ.ಎಸ್ ಪಾಟೀಲ್ನೇ ಸ್ವತಃ 100ವಾಹನಗಳನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಆದರೆ, ಇಂದು ಸಿ.ಎಸ್ ಪಾಟೀಲ್ ಮತ್ತು ಶಿವನಗೌಡ ಪಕ್ಷದಿಂದ ತಾತ್ವಿಕವಾಗಿ ದೂರವಿದ್ದರೂ ವ್ಯವಹಾರಗಳಲ್ಲಿ ಮಾತ್ರ ಪಕ್ಕಾ ದೋಸ್ತಿಗಳೆ. ನದಿ ದಂಡೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಲ್ಲಿ ಸಿ.ಎಸ್ ಪಾಟೀಲ್ನ ಸಹೋದರರು ತೊಡಗಿಕೊಂಡಿದ್ದಾರೆ.ರಾಜ್ಯ ಸಕರ್ಾರ ಮತ್ತು ಹೈಕೋಟರ್್ಗಳ ಆದೇಶವನ್ನು ಉಲ್ಲಂಘಿಸಿ ಆಳದಲ್ಲಿ ಮರಳನ್ನು ತೆಗೆಯುತ್ತಿದ್ದಾರೆ. ಇಲ್ಲಿ ತೆಗೆದ ಮರಳನ್ನು ಅನುಮತಿಯಿಲ್ಲದೇ ಬರೀ ಲಂಚದಿಂದಲೇ ಪಕ್ಕದ ಆಂಧ್ರ, ಮಹಾರಾಷ್ಟ್ರಗಳಿಗೆ ರವಾನೆ ಮಾಡುತ್ತಿದ್ದಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದರೂ ತುಟಿಪಿಟಕೆನ್ನದೇ ಮೌನಕ್ಕೆ ಜಾರಿದ್ದಾರೆ. ಬಳ್ಳಾರಿಯಲ್ಲಿ ವಿಭಾಗೀಯ ಕಛೇರಿಯನ್ನು ಹೊಂದಿರುವ ಅಧಿಕಾರಿಗಳು ಒಮ್ಮೆಯಾದರೂ ನದಿ ದಂಡೆಯ ವೀಕ್ಷಣಿಗೆ ಬಂದಿಲ್ಲ! ಕಾರಣ ಇದ್ದಲ್ಲಿಗೆ ಇಲ್ಲಿನ ಅಕ್ರಮ ಮರಳುದಾರರು ಮಾಮೂಲನ್ನು ಕಳುಹಿಸುತ್ತಾರೆ. ಎಂಜಲು ಬಳ್ಳಾರಿಗೆ ಬಂದ ಮೇಲೆ ಅಧಿಕಾರಿಗಳಾದರೂ ಯಾಕೆ ಬರುತ್ತಾರೆ?ಪೊಲೀಸರು ಹಾಗೂ ಚೆಕ್ಪೋಸ್ಟ್ನವರಿಗೆ 10ಕೊಡುವಲ್ಲಿ 50ಕೊಟ್ಟರೆ ಸಾಕು ಲಾರಿಗೆ ದಾಖಲೆಗಳಿವೆಯೋ, ಡ್ರೈವರ್ಗೆ ಲೈಸನ್ಸ್ ಇದೆಯೋ, ಇಲ್ಲವೋ ಯಾವುದನ್ನು ಪರಿಶೀಲನೆ ಮಾಡುವುದಿಲ್ಲ.ಹೀಗಾಗಿ ದೇವದುರ್ಗದ ಬಲಿತ ಅಕ್ರಮ ಮರಳುದಾರರು ಹೊಡಿಮಗಾಹೊಡಿಮಗಾ ಅಂತ ಮರಳು ಸಾಗಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಸಾಗಿಸುವವರ ಕೈಗೆ ಸಿಕ್ಕು ನದಿ ದಂಡೆ ಬರಿದಾಗುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ಇದೊಂದು ಜಾಲ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ.ಪ್ರತಿಯೊಬ್ಬನಿಗೂ ಮರಳಿನ ಅವಶ್ಯಕತೆ ಇದೆ. ಕಾರಣ ವಾಸಿಸಲು ಮನೆಯಿಂದಿಡಿದು ಪ್ರತಿಯೊಂದನ್ನು ನಿಮರ್ಿಸಿಕೊಳ್ಳಲು ಮರಳಿನ ಮೊರೆ ಹೋಗಬೇಕಾಗಿದೆ.ಯಾರಿಗೆ ಯಾವುದು ಅನಿವಾರ್ಯವಿದೆಯೋ, ಅದನ್ನೇ ಬಂಡವಾಳ ಮತ್ತು ಅವಕಾಶವೆಂದು ತಿಳಿದು ಶರಣಬಸವನಾಯಕನಂತಹ ಅನೇಕ ಅಡ್ಡಕಸಬಿಗಳು ಮರಳು ಮಾಫಿಯಾಕ್ಕೆ ಕೈಹಾಕಿದ್ದಾರೆ.ಹಲವಾರು ಅಕ್ರಮ, ಅವ್ಯವಹಾರಗಳ ಸರದಾರನಾದ ಶರಣಬಸವನಾಯಕ ಸಧ್ಯ ಮಸರಕಲ್ ಜಿ.ಪಂನ ಜೆ.ಡಿ.ಎಸ್ ಸದಸ್ಯ. ಈತ ತನ್ನ ವ್ಯವಹಾರಗಳಿಗೆ ಅಡ್ಡಿಯಾಗಬಾರದೆಂದು ಪೊಲೀಸ್, ಪುಡಾರಿ ಪೊಲಿಟಿಷಿಯನ್, ಪ್ರೇಸ್, ಸಂಘಸಂಸ್ಥೆಯವರಿಗೆಲ್ಲ ಮಾಮೂಲಿ ನೀಡುತ್ತಾನಂತೆ.ಈತನ ಅಕ್ರಮ ದಂಧೆಗೆ ಪೊಲೀಸರು ಅಡ್ಡಗಾಲಾಗಬಾರದೆಂಬ ಕಾರಣಕ್ಕೆ ಸದಾ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕವನ್ನು ಬೆಳೆಸಿಕೊಂಡಿರುತ್ತಾನೆ.ಸಂದಭರ್ಾನುಸಾರವಾಗಿ ಈತನ ಪರವಾಗಿ ಜೈ..ಜೈ ಎನ್ನಬೇಕೆನ್ನುವ ಸಲುವಾಗಿ ಪುಡಾರಿ ಪೊಲಿಟಿಷಿಯನ್ಗಳಿಗೆ ಆಗಾಗ ಎಂಜಲು,ವ್ಯವಹಾರದಲ್ಲಿ ಏನಾದರೂ ಹೆಚ್ಚು ಕಡಿಮೆಯಾದಾಗ ಅದು ಪ್ರೇಸ್ನ ತನಕ ಹೋಗಬಾರದೆಂದು ಅಳಿದುಳಿದ ನಿರಾಶ್ರಿತ ಪತ್ರಕರ್ತರಿಗೂ ಆಗಾಗ ಪ್ರಸಾದವನ್ನು ನೀಡುತ್ತಾನೆ.ಕೆಲವು ದಿನಗಳ ಹಿಂದೆ ಮರಿಮಂತ್ರಿ ಎಂದು ಖ್ಯಾತಿಯಾಗಿದ್ದ ಶರಣಬಸವ ದೇವರಿಗೆ ಬಿಟ್ಟ ಗೂಳಿಯಂತೆ ಕಂಡಕಂಡವರಿಗೆ ಇರಿದುಕೊಂಡು ತಿರುಗುತ್ತಿದ್ದಾನೆ. ಬೆಳೆಯುವ ಸಿರಿಗೆ ಇದು ಸರಿಯಾದ ಬೆಳವಣಿಗೆ ಅಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೆಂದೆವನು ನಿಣರ್ಾಮ ಆಗಿದ್ದಾನೆ. ನಾವೆಂದವರು ಪ್ರತಿಮೆಯಾಗಿ ನಿಂತಿದ್ದಾರೆ. ಶಿವನಗೌಡನ ತನ್ನ ಸಂಬಂಧಿಯೆಂದು ತಿಳಿದು ಗೌಡನ ರೀತಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಗೌಡನಿಗಾದ ಗತಿ ಶರಣಬಸವ ನಿನಗೂ ಬರಬಹುದು. ಸಧ್ಯ ಜಿ.ಪಂನಲ್ಲಿ ನಿನೊಬ್ಬ ಸದಸ್ಯ. ಸ್ವಲ್ಪ ಎಚ್ಚರಿಕೆಯಿಂದ ನಿನ್ನ ಜಿ.ಪಂ ವ್ಯಾಪ್ತಿಯನ್ನು ಅಭಿವೃದ್ಧಿ ಮಾಡಿಕೊ, ಆ ಅಭಿವೃದ್ಧಿ ಕೆಲಸ ನಿನ್ನನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತವೆ. ಅದನ್ನು ಬಿಟ್ಟು ಗೂಳಿಯಂತೆ ಎಲ್ಲರಿಗೆ ಇರಿದುಕೊಂಡು ತಿರುಗಿದರೆ, ಸುಣ್ಣದ ನೀರು ಕುಡಿಸುವುದು ಖಚಿತ. ಅದರೊಳಗೆ ಎಚ್ಚರಗೊಂಡರೆ ಒಳಿತು.ಅಲಿಮೌಲಾನ ದೇವದುರ್ಗ

ಪಂಡಿತ ಭೀಮಸೇನ್ ಜೋಷಿ


ಪಂಡಿತ ಭೀಮಸೇನ್ ಜೋಷಿಯವರು ತಮ್ಮ ವಿಶಿಷ್ಟವಾದ ಗಾನಶೈಲಿಯಲ್ಲಿ ಗಾನದೇವತೆಯಾದಂತಹ ಶಾರದೆಯನ್ನೇ ಒಲಿಸಿಕೊಂಡಿದ್ದರು. ಸಂಗೀತಕ್ಕೆ ಯಾವುದೇ ಭೇದಬಾವವಿಲ್ಲವೆಂಬುದನ್ನು ತೋರಿಸಿದರಲ್ಲದೇ, ಮನುಕುಲದ ಒಗ್ಗೂಡುವಿಕೆಗಾಗಿ ಸಂಗೀತ ಲೋಕದಲ್ಲಿ ವಿರಮಿಸದೇ ಶ್ರಮಿಸಿದರು ಎಂದರೆ ತಪ್ಪಾಗಲಾರದು ಎನ್ನುತ್ತಾರೆ ನಮ್ಮ ಸ್ನೇಹಿತ ವಿಜಯ ಕುಮಾರ್ ಬಿ.ಹೆಚ್.ಭೀಮಸೇನ್ ಜೋಷಿ ಎಂಬ ಹೆಸರು ಕೇಳಿದರೆ ಸಾಕು ಸಂಗೀತಪ್ರಿಯರ ಮನಸ್ಸು ಪುಟಿದೇಳುತ್ತದೆ. ಅವರಲ್ಲಿ ಸಂಗೀತದ ಬಗ್ಗೆ ಇದ್ದ ಗೌರವ, ಭಕ್ತಿ, ಶೃದ್ಧೆ ಅವರನ್ನು ದೇಶದ ಅತ್ಯುನ್ನುತವಾದಂತಹ ಭಾರತರತ್ನ ಪ್ರಶಸ್ತಿಗೆ ಪಾತ್ರರನ್ನಾಗಿಸಿತು. ಗಾನಗಂಧರ್ವ ಕನ್ನಡದ ಕಣ್ಮಣಿಯಾದಂತಹ ಭೀಮಸೇನ್ ಜೋಷಿಯವರು ದೇಶ ವಿದೇಶಗಳ ಉದ್ದಗಲಕ್ಕೂ ಸಂಚರಿಸಿ ಕನರ್ಾಟಕದ ಕೀತರ್ಿ ಪತಾಕೆಯನ್ನು ಹಾರಿಸಿದ್ದಾರೆ. ಅವರ ಸುಮಧುರವಾದ ಕಂಚಿನ ಕಂಠದೊಂದಿಗೆ ಇಡೀ ಮನುಕುಲದ ಸಂಗೀತ ಪ್ರಿಯರನ್ನು ತಮ್ಮತ್ತ ಸೆಳೆದುಕೊಟ್ಟುವಳ್ಳಂತಹ ಒಂದು ಮಾಧುರ್ಯತೆ ಅವರ ಸಂಗೀತದ ಅವತರಣಿಕೆಲ್ಲಿತ್ತೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.ಹಿಂದೂಸ್ತಾನ ಸಂಗೀತ ಲೋಕದಲ್ಲಿ ಪ್ರಪ್ರಥಮವಾಗಿ ದೇಶದ ಅತ್ಯುನ್ನತ ಪ್ರಶಸ್ತಿಯಾದಂತಹ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡವರು ಎಂಬ ಹೆಮ್ಮ ಸಮಸ್ತ ಕನ್ನಡಿಗರಿಗಿದೆ. ಸಂಗೀತ ಲೋಕದ ಮಹಾನ್ ವ್ಯಕ್ತಿಗಳೊಂದಿಗೆ ಒಡನಾಟವನ್ನು ಹೊಂದಿದ್ದು ಎಲ್ಲರೊಂದಿಗೆ ಆತ್ಮೀಯ ಭಾವದೊಂದಿಗೆ, ಸಹೋದರತ್ವದೊಂದಿಗೆ ಇದ್ದರೆಂದು ಅವರ ನಕಟವತರ್ಿಗಳ ಸಂಗೀತ ಲೋಕದ ಮಹನಯರ ಮನದಂಗಳದ ಮಾತುಗಳಲ್ಲಿ ದೃಡಪಟ್ಟಿದೆ. ಹಿಂದೂಸ್ಥಾನ ಸಂಗೀತದ ಕಿರಾಣ-ಘರಾಣಾ ಶೈಲಿಯಲ್ಲಿ ತಮ್ಮ ಸಂಗೀತದ ಸಾಧನೆಯ ಛಾಪನ್ನು ಎಂದಿಗೂ ಮಾಸದಂತೆ ಮೂಡಿಸಿದ್ದಾರೆ. ಇಂತಹ ಒಬ್ಬ ಮೇರುವ್ಯಕ್ತಿತ್ವವುಳ್ಳ ಸಂಗೀತ ಸಾಮ್ರಾಟ್ ದಿನಾಂಕ 24/01/2011ರಂದು ಬೆಳಗಿನ ಜಾವ ಭಾರತದ ಸಮಸ್ಥ ಅಭಿಮಾನ ಬಳಗವನ್ನು ಬಿಟ್ಟು ವಿಧಿವಶರಾದರು. ಈ ಒಂದು ಘಟನೆಯಿಂದ ನಾಡಿನ ಸಮಸ್ಥ ಜನತೆಗೆ ತುಂಬಲಾರದ ನಷ್ಟವಾದಂತಾಗಿದೆ. ಅದರಲ್ಲೂ ಸಂಗೀತ ಪ್ರೀಯರಿಗೆ ಇಡೀ ಸ್ವರಲೋಕವನ್ನೇ ಅಲುಗಾಡಿಸಿದಂತಾಗಿದೆ. ಇಂತಹ ಸಂಗೀತ ದಿಗ್ಗಜರ ಬಗ್ಗೆ, ಅವರ ಜೀವನ ಶೈಲಿ, ಬೆಳೆದು ಬಂದಂತಹ ರೀತಿ, ನಡೆನುಡಿಗಳ ಬಗ್ಗೆ ಸ್ಮರಿಸಿಕೊಳ್ಳುವದರಿಂದ ಅವರಿಗೆ ಗೌರವ ಸೂಚಿಸಿದಂತಾಗುತ್ತದೆಂದು ನಾನು ಭಾವಿಸುತ್ತೇನೆ.04-02-1922ರಂದು ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಂಬಾಳದಲ್ಲಿ ಶ್ರೀ ಗುರುರಾಜ್ ಜೋಷಿ ಮತ್ತು ಶ್ರೀಮತಿ ರಮಾದೇವಿ ಎಂಬ ದಂಪತಿಗಳಿಗೆ ದೇಶದ ಮಾಣಿಕ್ಯದಂತಹ ಪಂಡಿತ ಭೀಮಸೇನ್ ಜೋಷಿಯವರಿಗೆ ಜನ್ಮವೆತ್ತರು. ಇವರ ಮನೆತನ ಧಾಮರ್ಿಕ ನಷ್ಠೆಯ ಮಾಧ್ವ ಬ್ರಾಹ್ಮಣರಾಗಿದ್ದರು. ಇವರು 1943ರಲ್ಲಿ ಶ್ರೀಮತಿ ಸುನಂಧಾ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಪಾದಾರ್ಪಣಿ ಮಾಡಿದರು. ಮತ್ತು ಕೆಲವು ವರ್ಷಗಳ ನಂತರ 1951ರಲ್ಲಿ ಶ್ರೀಮತಿ ವತ್ಸಲಾ ಎಂಬವವರ ಜೊತೆಯಲ್ಲಿ 2ನೇ ವಿವಾಹವಾಯಿತು.ಬಾಲ್ಯದಲ್ಲಿಯೇ ಸಂಗೀತಾಸಕ್ತಿಯಲ್ಲಿ ತೊಡಗಿಸಿಕೊಂಡಿದ್ದ ಭೀಮಸೇನ್ ಜೋಷಿ2ನೇ ವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಭೀಮಸೇನ್ರಿಗೆ ಆಸಕ್ತಿ. ಗದಗದ ಕಿಲ್ಲಾ ಓಣಿಯ ಹತ್ತಿರದಲ್ಲಿಯೇ ಒಂದು ಮಸೀದಿ ಇತ್ತು. ಪ್ರಾರ್ಥನೆ ಸದ್ದು ಕೇಳಿದೊಡನೆ ಜೋಷಿಯವರು ಸಹ ಕಿವಿಯಲ್ಲಿ ಬೆರಳಿಟ್ಟು ಗೊಣಗುತ್ತಿದ್ದರು. ಮತ್ತು ಊರಿನಲ್ಲಿ ಭಜಂತ್ರಿಯ ನಾದ ಕೇಳಿತೆಂದರೆ ಸಾಕು 2ದಂಟುಗಳನ್ನು ತೆಗೆದುಕೊಂಡು ಅವರಂತೆಯೇ ಅನುಕರಣಿ ಮಾಡುತ್ತಿದ್ದರು. 7ನೇ ವಯಸ್ಸಿನಲ್ಲಿ ಅವರ ಅಜ್ಜ ಭೀಮಾಚಾರ್ಯರರು ಮೂಲೆಯಲ್ಲಿಟ್ಟಿದ್ದ ತಂಬೂರಿಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ತಂತಿ ಮೀಟುತ್ತಿದ್ದರಂಥೆ. ಕೆಲವೊಮ್ಮೆ ಕುಪಿತಗೊಂಡು ಮನೆಬಿಟ್ಟಾಗಲೆಲ್ಲ ರೈಲು ಹತ್ತಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿಯೇ ತಮ್ಮ ಕಂಚಿನ ಕಂಠದಿಂದ ಸ್ವರವೆತ್ತಿ ಹಾಡುತ್ತ ಪ್ರಯಾಣಿಕರು ನಡುವ ಹಣದಿಂದಲೇ ತಮ್ಮ ಊಟೋಪಚಾರಗಳನ್ನು ಪೂರೈಸುತ್ತಿದ್ದರು. ಅವರ ಸಂಗೀತವನ್ನು ಆಲಿಸಿದಂತಹ ಆ ರೈಲಿನಲ್ಲಿದ್ದ ಪ್ರಯಾಣಿಕರು ಮುಂದೊಂದು ದಿನ ಈ ಬಾಲಕ ಭಾರತ ರತ್ನವೆಂಬ ಶ್ರೇಷ್ಟ ಪ್ರಶಸ್ತಿಗೆ ಭಾಜನರಾಗುತ್ತಾರೆಂದು ಯಾರು ಊಹಿಸಲು ಸಾಧ್ಯವಾಗಿರಲಿಕ್ಕಿಲ್ಲ.ಶಿಕ್ಷಣಕ್ಕಾಗಿ ಭಾರತದ ಹಲವೆಡೆ ಪಯಣ.ವಿಜಾಪುರ, ಮುಂಬಯಿ, ಇಂಧೊರ್, ಜಲಂಧರ್, ಗ್ವಾಲಿಯಾರ್ ಅಲೆದಾಡಿ ಕೊಲ್ಕತ್ತಾದ ಪಹಾಡಿ ಸನ್ಯಾಲ್ರವರ ಬಳಿ ಇದ್ದು ಜಲಂಧರ್ಗೆ ಬಂದರು. ಅಲ್ಲಿ ಮಂಗತರಾವ್ ಆರ್ಯ ಸಂಗೀತ ವಿದ್ಯಾಲಯಕ್ಕೆ ಸೇರ್ಪಡೆಯಾದರು. ಒಮ್ಮೆ ಹರಿವಲ್ಲಭ ಸಮ್ಮೇಳನದಲ್ಲಿ ವಿನಾಯಕ ಪಟುವರ್ಧರನ್ನು ಭೇಟಿಯಾದರು. ಇವರು ಕುಂದುಗೋಳದ ಸವಾಯಿ ಗಂಧರ್ವರಲ್ಲಿ ಶಿಕ್ಷಣ ಪಡೆಯುವಂತೆ ಜೋಷಿಯವರಿಗೆ ಸಲಹೆಯನ್ನು ನಡಿದರು. ಆಗ ಜೋಷಿಯವರು ಗದಗಿನತ್ತ ಪಯಣ ಬೆಳೆಸಿದರು.1938ರಲ್ಲಿ ಕನರ್ಾಟಕದ ನಮ್ಮವರೇ ಆದ ರಾಮಬಾಹು ಕುಂದುಗೋಳಕರ್ (ಸವಾಯಿ ಗಂಧರ್ವ) ಅವರಲ್ಲಿ ಶಿಷ್ಯತ್ವವನ್ನು ಪಡೆದರು. ಇವರೊಂದಿಗೆ ಗಾನವಿಧೂಷಿಯಾದಂತಹ ಗಂಗೂಭಾಯಿ ಹಾನಗಲ್ರವರು ಕೂಡ ಇದೇ ಶಿಷ್ಯರ ಪರಂಪರೆಯಲ್ಲಿ ಬೆಳೆದು ಬಂದವರಾಗಿದ್ದಾರೆ. ಜೋಷಿಯವರು ಇಲ್ಲಿಯೇ ಕಲಿತು ಖ್ಯಾಲ್ ಗಾಯನದಲ್ಲಿ ಕಿರಾಣ-ಘರಾಣದ ಶ್ರೇಷ್ಟ ಪ್ರತಿನಧಿ ಎಂಬ ಖ್ಯಾತಿ ಗಳಿಸಿದರು.ಭೀಮಸೇನ್ ಜೋಷಿಯವರು ಮೊಟ್ಟಮೊದಲ ಬಾರಿಗೆ ಸಂಗೀತ ಕಾರ್ಯಕ್ರಮವನ್ನು ನಡಿದಾಗ ಅವರಿಗೆ ಕೇವಲ 19ವರ್ಷ ವಯಸ್ಸು. ನಂತರ ಒಂದೇ ವರ್ಷದಲ್ಲಿ ಅದ್ಬುತವೆಂಬಂತೆ ಹಿಂದಿ, ಕನ್ನಡ ಭಕ್ತಿಗೀತೆಗಳನ್ನೊಳಗೊಂಡ ಅವರ ಅಲ್ಬಮ್ ಪ್ರಕಟಗೊಂಡಿತು. ನಂತರದ ದಿನಗಳಲ್ಲಿ ಗ್ವಾಲಿಯಾರ್ನಲ್ಲಿ ಉಸ್ತಾದ್ ಅಬ್ದುಲ್ ಕರೀಂಖಾನ್ರನ್ನು ಗುರುವಾಗಿ ಪಡೆದದ್ದು ಜೋಷಿಯವರ ಸಂಗೀತ ಸಾಧನೆಗೆ ಸಾಣಿಹಿಡಿದಂತಾಯಿತು. ಕಿರಾಣ-ಘರಾಣಕ್ಕೆ ಜೋಷಿಯವರು ಪಾದಾರ್ಪಣಿ ಮಾಡಿದ್ದು ಈ ರೀತಿಯಲ್ಲಿ. ಈ ಸಂಗೀತ ಪರಂಪರೆಯಲ್ಲಿ ಹೆಸರಾದರು ಅವರ ಗಾಯನ ಶೈಲಿಯಲ್ಲಿ ದೇಶದ ಸಂಗೀತ ವೈವಿಧ್ಯವಿತ್ತು. ನಂತರ ಪ್ರಸಿದ್ದ ಶಹನಾಯಿ ವಿಧ್ವಾಂಸ ಬಿಸ್ಮಿಲ್ಲಖಾನ್ ಜೊತೆಗೂಡಿ ಸಂಗೀತದ ರಾಗಗಳ ಹೊಸ ಹುಡುಕಾಟದಲ್ಲಿ ಈ ರತ್ನಗಳು ವಿಲೀನವಾಗುತ್ತಿದ್ದರು. ಜೋಷಿಯವರು 1954ರಲ್ಲಿ ಪ್ರಪ್ರಥಮವಾಗಿ ಆಕಾಶವಾಣಿ ಪ್ರಥಮ ರಾಷ್ಟ್ರೀಯ ಕಾರ್ಯಕ್ರಮ ನಡಿದರು. ಸಂಗೀತಕ್ಕೆ ಗಡಿ-ಭಾಷೆಗಳ ಭೇದವಿಲ್ಲವೆಂದು ಸಂಗೀತದ ಮೂಲಕ ಸ್ಪಷ್ಟಪಡಿಸಿದ್ದರು. ಗದಗ ಮೂಲದ ಜೋಷಿಯವರು ಪುಣಿಯಲ್ಲಿ ಕಲಾಶ್ರೀ ಎಂಬ ಬಂಗಲೆಯಲ್ಲಿ ನೆಲೆಸಿದ್ದರಿಂದ ಮಹಾರಾಷ್ಟ್ರದವರು (ನಮ್ಮವರು) ಕನರ್ಾಟಕದವರು (ನಮ್ಮವರು) ಎಂಬ ಹಗ್ಗಜಗ್ಗಾಟದ ತರ್ಕವಿದೆ. ಆದರೆ, ಸಂಗೀತ ಲೋಕದ ಈ ಸಾಮ್ರಾಟನಗೆ ಗಡಿ-ಭಾಷೆಗಳ ಭೇದವಿಲ್ಲದೇ ದೇಶವಿದೇಶಗಳಲ್ಲಿ ಸಂಚರಿಸಿ ಭಾರತದ ಕೀತರ್ಿ ಪತಾಕೆಯನ್ನು ಹಾರಿಸಿದ್ದಾರೆ. ಹಾಗಾಗಿ ಭಾರತ ರತ್ನವೆಂಬಂತೆ ನಮ್ಮೆಲ್ಲರ ಕಣ್ಮಣಿಯಾಗಿರುವುದು ನಮ್ಮೆಲ್ಲರ ದೈವ. ಇವರ ಸತತ ಪರಿಶ್ರಮ, ಅಚಲವಾದಂತಹ ಗುರುಭಕ್ತಿ ನತ್ಯ ಹಲವಾರು ಘಂಟೆಗಳವರೆಗೆ ಸಂಗೀತದೊಂದಿಗೆ ವಿಶಿಷ್ಟವಾದಂತಹ ರಾಗಸಂಯೋಜನೆಗಳನ್ನು ಹುಡುಕುತ್ತಾ ಕಲಿಯುತ್ತಾ ಒಟ್ಟಿನಲ್ಲಿ ಸಂಗೀತ ಲೋಕದಲ್ಲಿ ವಿರಮಿಸದ ಒಂದು ದೈವಶಕ್ತಿಯೆಂದು ಹೇಳಬಹುದು.ಕನರ್ಾಟಕದ ದಾಸರ ಪದಗಳಿಗೆ ಅಷ್ಟೊಂದು ಭಾವಪೂರ್ಣವಾಗಿ ಹಾಡುವವರಲ್ಲಿ ಅದರಲ್ಲೂ ಹಿಂದೂಸ್ಥಾನ ಸಂಗೀತದ ಶೈಲಿಯೊಂದಿಗೆ ಹಾಡುವುದು ಅಸಾಧ್ಯ. ಅಂತಹ ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು ನಮ್ಮ ಜೋಷಿಯವರು. ಇದರಿಂದ ಸಂಗೀತ ಪ್ರಿಯರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಹಾಗೆಯೇ ಜೋಷಿಯವರ ಕಾರ್ಯಕ್ಷೇತ್ರ ಪುಣಿಯಾಗಿದ್ದರಿಂದ ಮರಾಠಿಯ ಪ್ರಸಿದ್ದ ಸಂತರಾಗಿದ್ದ ಸಂತ ತುಕಾರಾಂ, ಸಂತ ಜ್ಞಾನದೇವ ಮತ್ತಿತರರ ಆಭಂಗಗಳನ್ನು ಹಾಡಿ ಜನಮಾನಸದಲ್ಲಿ ಆಳವಾಗಿ ಪ್ರಭಾವ ಬೀರಿದ್ದಾರೆ. ಭಕ್ತಿ ಮತ್ತು ಶಕ್ತಿ ಜೋಷಿಯವರ ಅವಿಭಾಜ್ಯ ಅಂಗಗಳೆಂಬಂತೆ ಗೋಚರಿಸುತ್ತದೆ. ಇವರ ಗಾಯನದ ಇನ್ನೊಂದು ವಿಶೇಷತೆಯೆಂದರೆ ಆಯಾ ಪ್ರಾದೇಶಿಕ ಭಾಷೆಗಳಿಗೆ ಅನುಗುಣವಾಗಿ ಹಾಡುವಂತಹ ಕೌಶಲ್ಯ ರೂಡಿಸಿಕೊಂಡವರು. ಹಿಂದೂಸ್ಥಾನ ಸಂಗೀತದಲ್ಲಿ ಇವರೇ ಮೊದಲಿಗರು. ಇವರೇ ಹಿಂದೂಸ್ಥಾನ ಸಂಗೀತದಲ್ಲಿ ಕೊನೆಯವರಿರಬಹುದು! ಸಂಗೀತ ಕಛೇರಿಯನ್ನು ನಡೆಸಿಕೊಡುವಾಗ ಬಹಳ ಭಾವಪೂರ್ಣವಾಗಿ ಹಾಡುತ್ತಿದ್ದರು. ಸಂಗೀತವನ್ನು ಆಲಿಸುತ್ತಿದ್ದ ಸಮಸ್ಥ ಜನಸ್ಥೋಮವನ್ನು ತಮ್ಮದೇ ಆದ ಸ್ವರಲೋಕಕ್ಕೆ ಕೊಂಡೊಯ್ಯುವಂತಹ ಶಕ್ತಿ ಪಂಡಿತ ಭೀಮಸೇನ್ ಜೋಷಯವರಲ್ಲಿ ಇತ್ತೇಂದು ಹೇಳಬಹುದು.ಸಪ್ತಸಾಗರದಾಚೆ ಮೂಡಿಬಂದ ಜೋಷಿಯವರ ಗಾನ ಸುಧೆ.ಪಂಡಿತ ಭೀಮಸೇನ್ ಜೋಷಿಯವರು ಮೊಟ್ಟಮೊದಲ ಬಾರಿಗೆ ವಿದೇಶದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡಿದ್ದು 1964ರಂದು ಅಪಘಾನಸ್ತಾನದಲ್ಲಿ ಈ ಪ್ರಥಮ ವಿದೇಶಿ ಕಾರ್ಯಕ್ರಮದ ಹಿಂದೆ ಒಂದು ರೋಚಕ ಹಿನ್ನೆಲೆಯಿದೆ. ಒಮ್ಮೆ ಅಪಘಾನಸ್ತಾನದ ದೊರೆ ಝಹೀರ್ಷಾಹನ ಮಗಳು ಇಂಗ್ಲೇಂಡಿನಲ್ಲಿ ವಿದ್ಯಾಬ್ಯಾಸವನ್ನು ಮಾಡುತ್ತಿದ್ದಾಗ ಕ್ಯಾಸೆಟ್ ಮಳಿಗೆಯೊಂದರಲ್ಲಿ ಜೋಷಿಯವರ ಶುದ್ದ ಕಲ್ಯಾಣ ಮತ್ತು ಲಲಿತ ರಾಗಗಳ ಕ್ಯಾಸೆಟ್ಗಳನ್ನು ಕೇಳಿ ಆನಂದಿಸಿ ಪುಳಕಿತರಾಗಿದ್ದರಂತೆ. ಪಂಡಿತ ಜೋಷಿಯವರ ರಾಗಗಳ ಶೈಲಿಯಲ್ಲಿ ಏನೋ ಆಹ್ಲಾದಕರ ಭಾವನೆಯನ್ನು ದೊರೆಯ ಮಗಳ ಮನದಲ್ಲಿ ಮೂಡಿತ್ತು. ಇದಾದ ಕೆಲವು ತಿಂಗಳುಗಳ ತರುವಾಯ ಸಂಸ್ಕೃತಿಕ ವಿನಮಯದ ಕಾರ್ಯಕ್ರಮದ ಅಂಗವಾಗಿ 15ದಿನಗಳ ಮಟ್ಟಿಗೆ ಕಾಬೂಲ್ಗೆ ಕಳುಹಿಸಲ್ಪಟ್ಟ ಭಾರತದ ನಯೋಗದಲ್ಲಿ ಪಂಡಿತ ಜೋಷಿಯವರ ಹೆಸರನ್ನು ಸೂಚಿಸಿಲಾಗಿತ್ತು. ವಿಪಯರ್ಾಸವೆಂದರೆ ಅಪಘಾನಸ್ಥಾನದ ದೊರೆ ಝಹೀರ್ಷಾಹನ ಮಗಳ ಒತ್ತಾಯದ ಮೇರೆಗೆ ಪಂಡಿತ ಜೋಷಿಯವರ ಹೆಸರನ್ನು ಸೇರಿಸಲಾಗಿತ್ತು. ಇಷ್ಟೊಂದು ಉತ್ಸುಕವಾಗಿ ದೊರೆಯ ಮಗಳು ಜೋಷಿಯವರ ಸಂಗೀತವನ್ನು ಕೇಳಲು ಕಾರಣವೆಂದರೆ ಅವರು ಇಂಗ್ಲೇಂಡಿನಲ್ಲಿಯೇ ಅವರ ಅಭಿಮಾನಯಾಗಿದ್ದರು. ಅದಾದ ನಂತರ ಯುರೋಪ ಖಂಡದ ಹಲವು ರಾಷ್ಟ್ರಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.ಈ ಒಂದು ರೋಚಕ ಹಿನ್ನಲೆಯನ್ನು ಅವಲೋಕಿಸಿದಾಗ ಜೋಷಿಯವರ ಗಾಯನದಲ್ಲಿ ಎಂತಹ ಶಕ್ತಿ ಇತ್ತೆಂದು ತಿಳಿದುಬರುತ್ತದೆ. ಹೀಗೆ ದೇಶವಿದೇಶಗಳಲ್ಲಿ ಭಾರತದ ಹೆಸರು ಉತ್ತುಂಗಕ್ಕೆ ಕೊಂಡೊಯ್ಯದ ಕೀತರ್ಿ ಜೋಷಿಯವರಿಗೆ ಸಲ್ಲುತ್ತದೆ.ಸಂಗೀತ ಲೋಕದಲ್ಲಿ ಸಾಧನೆಗೈದಂತಹ ಜೋಷಿಯವರ ನಧನ ಭರಿಸಲಾಗದ ನಷ್ಟ. ಈ ಘಟನೆ ಕೇವಲ ಸಂಗೀತ ಪ್ರಿಯರಿಗೆ ಮಾತ್ರವಲ್ಲದೇ ಭಾರತದ ಸಮಸ್ಥ ನಾಗರೀಕರಿಗೆ ಅರಗಿಸಿಕೊಳ್ಳಲಾಗದ ಶೋಕವಾಗಿದೆ.ಭೀಮಸೇನ್ ಜೋಷಿಯವರು ಮತ್ತೊಮ್ಮೆ ಹುಟ್ಟಿ ಬರಲೆಂದು ನಾವೆಲ್ಲರೂ ಹಾರೈಸೋಣ....ವಿಜಯ ಹಟ್ಟಿ.