Wednesday, January 5, 2011

ಟಿವಿ9 ವರದಿ ಎಷ್ಟರ ಮಟ್ಟಿಗೆ ಸರಿ?





ಟಿವಿ9 ವರದಿ ಎಷ್ಟರ ಮಟ್ಟಿಗೆ ಸರಿ?ಉತ್ತಮ ಸಮಾಜಕ್ಕಾಗಿ ಎಂಬ ಶಿಷರ್ಿಕೆಯಡಿ ಹೊರಬರುತ್ತಿರುವ ರಾಷ್ಟ್ರದ ನಂ.1 ನ್ಯೂಸ್ ಚಾನೆಲ್ ಎಂಬ ಕೀತರ್ಿಗೆ ಹೆಸರಾಗಿರುವ ಟಿವಿ9 ಕನರ್ಾಟಕ ಮೊನ್ನೆ ಹಟ್ಟಿ ಚಿನ್ನದ ಗಣಿ ಕುರಿತ ವಿಶೇಷ ವರದಿಯೊಂದನ್ನು ಮಾಡುವ ಸಂದರ್ಭದಲ್ಲಿ ಪ್ರತಿನಿಧಿಯ ಅಚಾತುರ್ಯದಿಂದ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದೆ.ಅದು ತನ್ನ ಜಿಲ್ಲಾ ಪ್ರತಿನಿಧಿ ಸಿದ್ದು ಬಿರಾದಾರ ನೀಡಿದ ವರದಿಗೆ ಉಪ್ಪುಕಾರ ಹಚ್ಚಿ ಅದಕ್ಕೊಂದು ಬಂಗಾರದ ಪಂಜರ- ಹಟ್ಟಿ ಚಿನ್ನದ ಗಣಿಯ ಕಂಪ್ಲೀಟ್ ಸ್ಟೋರಿ ಎಂಬ ತಲೆಬರಹವನ್ನು ಕೊಟ್ಟು ಚಿನ್ನ ತೆಗೆಯುವ ಕೈಯಲ್ಲಿ ಬಿಕ್ಷಾಪಾತ್ರೆ ಎಂಬ ವಿಶೇಷ ವರದಿ ಮಾಡಿ ಹಟ್ಟಿಯ ಮಾನ ಮಯರ್ಾದೆಯನ್ನು ಮೂರು ಕಾಸಿಗೆ ಹರಾಜ್ ಹಾಕಿದೆ.ಇಂತಹ ಕುಚೋಧ್ಯ, ಅಸಂಬಂದ್ದ ವರದಿಗಳು ಟಿವಿ9ನಲ್ಲಿ ಹೊಸವೇನಲ್ಲ. ಆಗಾಗ ಕೆಲವೊಂದು ಕಾರ್ಯಕ್ರಮಗಳಲ್ಲಿ ಇಂತಹ ವರದಿಗಳು ಬಿತ್ತರಗೊಳ್ಳುತ್ತಿರುತ್ತವೆ! ಈ ಹಿಂದೆ ಲಾಡುಮಂತ್ರಿ ಕೃಷ್ಣಯ್ಯಶೆಟ್ಟಿಯ ಅವ್ಯವಹಾರ ವಿಷಯದಲ್ಲಿ ಆತ ಅಪರಾಧಿಯೇ ಅಲ್ಲ, ಕೃಷ್ಣಯ್ಯಶೆಟ್ಟಿ ಸಾಚಾ ಎಂಬಂತೆ ವರದಿ ಮಾಡಿತ್ತು. ಆ ವರದಿಯ ತಪ್ಪಿನ ಅರಿವಾಗುತ್ತಿದ್ದಂತೆ ವಾರೆಂಟ್ನಲ್ಲಿದ್ದ ಒಬ್ಬ ಅವಿವೇಕಿ ರಾಘವೇಂದ್ರನನ್ನು ಮಿಶ್ರಾರವರು ಒದ್ದೋಡಿಸಿದ್ದರು. ಅದಾದ ಕೆಲವು ದಿನಗಳ ನಂತರ ಪುರುಷನ ಪರ ಮಾತನಾಡುವ ಇನ್ನೊಬ್ಬ ತಿರುಬೋಕಿಯನ್ನು ತಮ್ಮ ಸ್ಟುಡಿಯೋದ ಪ್ಯಾನಲ್ ಡಿಸ್ಕಶನ್ಗೆ ಕರೆತಂದು ರಾಜ್ಯದ ಎಲ್ಲರ ಕಡೆಯಿಂದಲೂ ಛೀ.. ಥೂ.. ಅಂತ ಕ್ಯಾಕರಿಸಿ ಉಗಿಸಿಕೊಂಡಿತ್ತು. ಅದೆಲ್ಲದರ ಮುಂದುವರೆದ ಭಾಗವಾಗಿ ಈಗ ನಮ್ಮ ಹಟ್ಟಿ ಚಿನ್ನದ ಗಣಿಯ ಸ್ಟೋರಿ ಮಾಡಿದೆ. ಇದು ಅಸಲಿ ಟಿವಿ9 ನಿಲುವಿನ ಸ್ಯಾಂಪಲ್ ಅಷ್ಟೇ..! ಈ ವರದಿಯನ್ನು ನೋಡಿದ ಹಟ್ಟಿಯ ಕೆಲವರು ಕೆಂಡಾಮಂಡಲರಾಗಿದ್ದಾರೆ. ಇನ್ನು ಕಂಪನಿಯವರಂತೂ ಆನೆ ಹೊರಟಾಗ ಶ್ವಾನ ಬೊಗಳಿದರೆ, ಏನು ಲಾಭ ಎಂತೆಲ್ಲ ಟಿವಿ9ನ್ನು ಗೇಲಿ ಮಾಡುತ್ತಿದ್ದಾರೆ.(ವಿಶೇಷವಾಗಿ ಸಡಗೋಪಾನ್ ಕುಟುಂಬವೇ ಈ ವರದಿಯನ್ನು ನೋಡಿ ಬೇಸತ್ತಿದೆ) ಆದರೆ, ಇಂತೆಲ್ಲ ಎಡವಟ್ಟುಗಳನ್ನು ಪ್ರತಿನಿಧಿಗಳು ಮಾಡುವದರಿಂದ ಪರೋಕ್ಷವಾಗಿ ಟಿವಿ9ನ ಮುಖ್ಯಸ್ಥರಿಗೆ ಕೊಂಚಮಟ್ಟಿನ ಮುಜುಗರವೆನಿಸುವದರಲ್ಲಿ ಎರಡು ಮಾತಿಲ್ಲ. ಆ ವಿಷಯ ಒಂದೆಡೆ ಬಿಡಿ.ಈಗ ಬೆಟ್ಟ ಅಗೆದು ಇಲಿ ಹಿಡಿದ ಸಿದ್ದು ಮಾಡಿರುವ ವರದಿಯ ಸ್ಯಾಂಫಲ್ನತ್ತ ದೃಷ್ಟಿ ಹಾಯಿಸೋಣ.ಮೈಸೂರು ವಿಭಾಗದ ವಿದ್ಯಾಥರ್ಿಗಳು ತಮ್ಮ ಪ್ರಾಯೋಗಿಕ ಕೈಗಾರಿಕಾ ತರಬೇತಿಗಾಗಿ 2005ರಲ್ಲಿ ಹಟ್ಟಿ ಚಿನ್ನದ ಗಣಿಯ ಮಾಹಿತಿ ಕುರಿತು ಸಿಡಿಯೊಂದನ್ನು ತಯಾರಿಸಿಕೊಂಡಿದ್ದರು. ಪ್ರಾಯೋಗಿಕ ತರಬೇತಿಗೆ ಅನುಕೂಲವಾಗಿ ಆ ಸಿಡಿಯನ್ನು ವಿಡಿಯೋ ಮಾಡಲಾಗಿತ್ತು. ಮತ್ತು ಅದು ಆಂಗ್ಲಭಾಷೆಯಲ್ಲಿತ್ತು. ಆ ಸಿಡಿ ಇಂದು ಹಟ್ಟಿಯಲ್ಲಿ ಎಲ್ಲರಲ್ಲಿಯೂ ಸಿಗುತ್ತದೆ. ಅಂತಹ ಸಿಡಿಯ ಪ್ರತಿಯನ್ನು ಕಲೆಹಾಕಿಕೊಂಡ ಟಿವಿ9 ಸಿದ್ದು ಕನ್ನಡಕ್ಕೆ ತಜರ್ುಮೆ ಮಾಡಿಕೊಂಡು 20 ನಿಮಿಷಗಳ ಅವಧಿಯ ಹಟ್ಟಿ ವಿವರಣಿಯನ್ನು ನೀಡಿದ್ದಾನೆ.ಅದಾದ ನಂತರ ಸಿಲಿಕೋಸಸ್ ಕುರಿತು ಮತ್ತಿಬ್ಬ ಕಾಮರ್ಿಕರ ಕುಟುಂಬವನ್ನು ಭೇಟಿಮಾಡಿ ಅವರ ಅಳಲನ್ನು ತೋರಿಸಿದ್ದಾನೆ. (ಅದು ಮಾನವೀಯತೆ ಬಿಡಿ) ವರದಿಯ ನಡುವೆ ಅಲ್ಲಲ್ಲಿ ಅವರಿವರು ಹೇಳಿದ ಮಾತುಗಳನ್ನು ಸಿದ್ದು ನಕಲಿ ಮಾಡಿದ್ದು ಮತ್ತು ಕಾಮರ್ಿಕ ಸಂಘದ ಮುಖಂಡರಿರ್ವರು ತಮ್ಮ ಅಭಿಪ್ರಾಯ ಹೇಳಿದ್ದು ಬಿಟ್ಟರೆ, ಅಸಲಿಗೆ ಆ ವರದಿಯಲ್ಲಿ ಎಂತಹದ್ದು ಇಲ್ಲ. ಸಿದ್ದು ಮಾಡಿದ ವರದಿ ವ್ಯವಸ್ಥಿತವಾಗಿ ಹಟ್ಟಿಯ ಮಾನ ಮಯರ್ಾದೆ ಕಳೆಯಲು ಮಾಡಿದ್ದೇ ಆಗಿದೆ.ಹಟ್ಟಿಯ ಕುರಿತು ವರದಿ ಮಾಡಲು ಸಾಕಷ್ಟು ಸಮಸ್ಯೆಗಳಿವೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರಿಗೆ ಸರಿಯಾಗಿ ಇನ್ನು ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ, ಹಟ್ಟಿ ಗ್ರಾಮಕ್ಕೆ ಕಾಲಿಟ್ಟರೆ ನರಕವೇ ಕಣ್ಣಿಗೆ ಕಾಣುತ್ತದೆ. ಹಟ್ಟಿಗೆ ಹತ್ತಿರವಿರುವ ಒಂದು ಕುಗ್ರಾಮ ಕಡ್ಡೋಣಿ ಇಂದಿಗೂ ರಸ್ತೆ ಮತ್ತು ಸಕರ್ಾರಿ ಬಸ್ನ್ನೇ ಕಂಡಿಲ್ಲ. ಅಂತಹ ಹತ್ತಾರು ಸಮಸ್ಯೆಗಳು ಹಟ್ಟಿಯ ಸುತ್ತಮುತ್ತ ಟಿವಿ9 ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದವು. ಇನ್ನು ಭ್ರಷ್ಟಾಚಾರ, ಅವ್ಯವಹಾರ, ಅಕ್ರಮಗಳಂತೂ ಇಲ್ಲಿ ವ್ಯವಸ್ಥಿತವಾಗಿಯೇ ನಡೆಯುತ್ತಿರುತ್ತವೆ. ಅದೆಲ್ಲವನ್ನು ನೈಜವಾಗಿ ವರದಿ ಮಾಡುವದನ್ನು ಬಿಟ್ಟು ಟಿವಿ9 ಸಿದ್ದು ನೇರವಾಗಿ ಹಟ್ಟಿಗೆ ಬಂದು ಇಲ್ಲ-ಸಲ್ಲದ ಮಾಹಿತಿಯನ್ನು ಎಲ್ಲಿಂದಲೋ ಕಲೆಹಾಕಿ ಹಟ್ಟಿಯ ಮಾನ ಹರಾಜಾಕಿದ್ದಾನೆ. ನಾನಂತೂ ಇದನ್ನು ಟಿವಿ9ಸಿದ್ದು ವ್ಯವಸ್ಥಿತವಾಗಿ ಮಾಡಿದ ಸಂಚೆಂದು ಭಾವಿಸುತ್ತೇನೆ.ಗುಡ್ಡವನ್ನು ಅಗೆದ ಮೇಲೆ ಅಮೂಲ್ಯವಾದದನ್ನು ಪಡೆದರೆ ಮಾತ್ರ ಆ ಕಾಯಕ ಸಾರ್ಥಕ. ಅದನ್ನು ಬಿಟ್ಟು ದೊಡ್ಡ ಗುಡ್ಡವನ್ನು ಅಗೆದು ಸಣ್ಣದೊಂದು ಗಣೇಶನ ಇಲಿ ಹಿಡಿದರೆ, ಏನರ್ಥ? ಬರೀ ಸಮಯ ವ್ಯರ್ಥ. ಸಿದ್ದು ಮಾಡಿದ್ದು ಇದನ್ನೇ.ಪ್ರಮುಖವಾಗಿ ವರದಿಯಲ್ಲಿ ಸಡಗೋಪಾನ್ ಎಂಬಾತನಿಗೆ ಗಣಿಯಲ್ಲಿ ಕೆಲಸ ಮಾಡುವಾಗ ಬ್ಲಾಸ್ಟ್ ಆಗಿ ಕಣ್ಣುಹೋಗಿದೆ ಎಂದು ಹೇಳಲಾಗಿದೆ. ಅದಕ್ಕಾಗಿ ಆತ ಎಷ್ಟೇ ಪರಿಹಾರಕ್ಕಾಗಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಆತನ ಕೈಗೆ ಬಿಕ್ಷೆಪಾತ್ರೆ ಬಂದಿದೆ ಎಂದು ಒತ್ತಿ ಹೇಳಲಾಗಿದೆ.ಆದರೆ, ವಾಸ್ತವಾಗಿ ಸಡಗೋಪಾನ್ ಎಂಬಾತ 821 ಬಿಲ್ಲೆಸಂಖ್ಯೆಯೊಂದಿಗೆ 1960 ಜೂನ್28ರಂದು ಕಂಪನಿಯ ಮ್ಯಾಕ್ಜೀನ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.

ಆತನಿಗೆ ಸಧ್ಯ ಇರ್ವರು ಹೆಣ್ಣುಮಕ್ಕಳಿದ್ದಾರೆ. ಅಂದು ಕಂಪನಿಯಲ್ಲಿ ಆತನ ದಿನನಿತ್ಯ ಕಾಯಕ ಕಂಪನಿಯ 3ಶಾಪ್ಟ್ಗಳಿಗೆ ಮದ್ದುಗಳನ್ನು ವಿತರಿಸುವುದೇ ವಿನಃ ಮದ್ದುಗಳನ್ನು ಸಿಡಿಸುವದಲ್ಲ. ಮತ್ತೊಂದೆನೆಂದರೆ, ಅಂಡರ್ಗ್ರೌಂಡ್ನಲ್ಲಿ ಹೆಚ್ಚುಕಡಿಮೆ ಸಡಗೋಪಾನ್ ಕೆಲಸವೇ ಮಾಡಿಲ್ಲ. ಕಾರಣ ಆತ ಕಂಪನಿಯಲ್ಲಿರುವ ಮೇನ್ಮ್ಯಾಕ್ಜೀನ್ (ಮದ್ದಿನಮನೆ) ಯಲ್ಲಿ ಕ್ರಿಂಪರ್ ಆಗಿರುವಾತ.ಮೇಲ್ಮೈ ವಿಭಾಗದಲ್ಲಿ ಕೆಲಸ ಮಾಡುವವನಿಗೆ ಒಮ್ಮಿಂದೊಮ್ಮೆಲೆ ಕಣ್ಣುಗಳು ಹೋಗುವುದಾದರೂ ಹೇಗೆ? ಅಸಲಿಗೆ ಸಡಗೋಪಾನ್ರವರಿಗೆ ಇತ್ತೀಚಿಗೆ ಆಟೋ ಅಪಘಾತ ಸಂಭವಿಸಿ ಕಣ್ಣಿಗೆ ಮುಳ್ಳು ಬಡಿದು ಕಣ್ಣಿನ ತೊಂದರೆಯಾಗಿದೆ. ನಂತರ ಸಡಗೋಪಾನ್ ಅಳಿಯಂದಿರೆ ಕಂಪನಿಯಲ್ಲಿ ಆಯೋಜಿಸಿದ್ದ ಉಚಿತ ನೇತ್ರತಪಾಸಣಿ ಕಾರ್ಯಗಾರದಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದು ಸಾಲದೆಂಬಂತೆ ಹುಬ್ಬಳ್ಳಿಗೆ ಹೋಗಿ ತೋರಿಸಿದ್ದಾರೆೆ. (ಇದು ನಾನು ಹೇಳುವ ಮಾತಲ್ಲ.. ಇತ್ತೀಚಿಗೆ ನಾವುಗಳು ಸಡಗೋಪಾನ್ ಕುಟುಂಬವನ್ನು ಭೇಟಿ ಮಾಡಿದಾಗ ಅವರೇ ಹೇಳಿದ ವಾಕ್ಯಗಳಿವು)ಇನ್ನೊಂದು ಸಡಗೋಪಾನ್ ಮೊದಲಿನಿಂದಲೂ ಸಂಗೀತದಲ್ಲಿ ಆಸಕ್ತಿಯುಳ್ಳವರು. ಹಿಂದೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕೆಲವೊಂದು ಸುರಕ್ಷತಾ ಕಾರ್ಯಕ್ರಮಗಳಲ್ಲಿ ಅವರೇ ಹಾಮರ್ೋನಿಯಂ ಬಾರಿಸುತ್ತಿದ್ದರು. ಹಾಮರ್ೋನಿಯಂ ಬಾರಿಸುವುದು ಅವರ ವೈಯಕ್ತಿಕ ಕಲೆ.ಇಲ್ಲಿ ಟಿವಿ9 ಸಿದ್ದು ಸಡಗೋಪಾನ್ ಎಂಬ ಹಿರಿಯಜ್ಜನ ಹಾಮರ್ೋನಿಯಂ ಕಲೆ ಮತ್ತು ಅವರಿಗಿರುವ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಸಡಗೋಪಾನ್ ಎಂಬ ಕಾಮರ್ಿಕ ನಿತ್ಯ ಜೀವನ ದೂಡುವುದಕ್ಕಾಗಿ ಕೈಯಲ್ಲಿ ಬಿಕ್ಷೆಪಾತ್ರೆಯನ್ನಿಡಿದು ಗಲ್ಲಿ ಗಲ್ಲಿ ತಿರುಗುತ್ತಿದ್ದಾನೆ. ಪ್ರತಿದಿನ ಬಿಕ್ಷೆ ಬಿದ್ದರೆ ಮಾತ್ರ ಅಂದಿನ ಜೀವನ. ಇಲ್ಲವಾದರೆ ಅಂದೆಲ್ಲ ಗೋಪಾನ್ ಹೊಟ್ಟೆಗೆ ತಣ್ಣೀರಬಟ್ಟೆ ಎಂದೆಲ್ಲ ಅಸಹ್ಯವಾಗಿ ಹೇಳಿದ್ದಾನೆ. (ಮಿಸ್ಟರ್ ಸಿದ್ದು ಮಾನವೀಯ ದೃಷ್ಟಿಯಿಂದ ನೀ ಮಾಡಿದ ವರದಿ ಎಷ್ಟರ ಮಟ್ಟಿಗೆ ಸರಿ? ನೀನೆ ಆತ್ಮವಿಮಷರ್ೆ ಮಾಡಿಕೋ..)ಮತ್ತೊಂದು ಸಿದ್ದು ಮಾಡಿದ ಮಹಾಕಾರ್ಯವೆಂದರೆ, ಸಡಗೋಪಾನ್ರಿಗೆ ಈ ರೀತಿ ಹೇಳುವಂತೆ ಹೇಳಿದ್ದಾನೆ. ನೀವು ಬಿಕ್ಷೆ ಕೇಳುವ ನೆಪದಲ್ಲಿ ಕೂಡಿರಿ.. ನಾವು ಅದನ್ನು ಪೋಟೋ ತೆಗೆದುಕೊಳ್ಳುತ್ತೇವೆ.. ಆ ಮೇಲೆ ಕಂಪನಿಯವರೇ ನಿಮ್ಮ ಮನೆಗೆ ಬಂದು ಪರಿಹಾರ ಕೊಡುತ್ತಾರೆ ಮತ್ತು ನಿಮ್ಮ ಕಣ್ಣಿನ ಧೂಳನ್ನು ತೆಗೆಸಿ ಆಪರೇಷನ್ ಮಾಡಿಸುತ್ತಾರೆಂದು ಹೇಳಿದ್ದಾನೆಅಂದರೆ ಏನರ್ಥ. ತಮ್ಮ ವರದಿಗಾಗಿ ಸೂಳೆಯನ್ನು ಗರತಿ ಮಾಡುವುದು.. ಗರತಿಯನ್ನು ಸೂಳೆ ಮಾಡುವುದಾ? ಇತ್ತೀಚಿನ ದಿನಗಳಲ್ಲಿ ಸಿದ್ದುವಿನ ಹಾಗೆ ಕೆಲವೊಂದು ಮಾಧ್ಯಮ ಸ್ನೇಹಿತರು ಎಕ್ಸ್ಕ್ಲೂಸಿವ್, ಬ್ರೇಕಿಂಗ್ ನ್ಯೂಸ್ಗಳಿಗಾಗಿ ಚಿಲ್ಲರೆ ಕೆಲಸಕ್ಕೆ ಕೈಹಾಕಿದ್ದಾರೆ. ಇದು ಮಾಧ್ಯಮ ಲೋಕದ ದುರಂತ.ದೇಶದ ಶ್ರೀಮಂತಿಕೆ ಸಂಕೇತವಾದ ಚಿನ್ನವನ್ನು ಉತ್ಪಾದಿಸುವ ಹಟ್ಟಿಯಲ್ಲಿ ಅವ್ಯವಹಾರ, ಅಕ್ರಮ, ಅವ್ಯವಸ್ಥೆ, ಭ್ರಷ್ಟಾಚಾರ ನಡೆದಿಲ್ಲ ಎಂಬ ನಿಲುವು ನಮ್ಮದಲ್ಲ. ಭ್ರಷ್ಟಾಚಾರ, ಅವ್ಯವಹಾರ, ಅಕ್ರಮಗಳೆಂಬ ಭೂತಗಳು ಇಡಿ ವ್ಯವಸ್ಥೆಯನ್ನು ಆವರಿಸಿವೆ. ಖ್ಯಾತ ಬರಹಗಾರರಾದ ದಿನೇಶ ಅಮೀನ್ಮಟ್ಟುರವರು ಹೇಳುವಂತೆ ಸಾಮೂಹಿಕ ಬಹಿಷ್ಕಾರದಿಂದ ಮಾತ್ರ ಭ್ರಷ್ಟಾಚಾರದಂತಹ ಕೂಪಗಳನ್ನು ತೊಲಗಿಸಲು ಸಾಧ್ಯ.ಅದನ್ನು ಬಿಟ್ಟು ಯಾರದ್ದೋ ಅಸಹಾಯಕತೆಯನ್ನು ಬಳಸಿಕೊಂಡು ಸುದ್ದಿ ಮಾಡಿದರೆ, ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆದಂತಾಗುತ್ತದೆ.ಟಿವಿ9ನ ವರದಿಯ ಕುರಿತು ನಮ್ಮ ಸ್ಪಷ್ಟವಾದ ನಿಲುವೇನೆಂದರೆ, ಯಾವುದೇ ವರದಿಯನ್ನು ಮಾಡುವಾಗ ಪ್ರತಿನಿಧಿಯಾದಾತ ವ್ಯವಸ್ಥೆ ಅಥವಾ ವರದಿಯ ವಿಷಯವಸ್ತುವಿನ ಎರಡು ಮಗ್ಗಲುಗಳನ್ನು ಮೊದಲಿಗೆ ವ್ಯವಸ್ಥಿತವಾಗಿ ಗ್ರಹಿಸಿಕೊಳ್ಳಬೇಕು. ಗ್ರಹಿಸಿಕೊಂಡ ವಾಸ್ತವಾಂಶವನ್ನು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ, ಪತ್ರಿಕಾಧರ್ಮವನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರಿಗೆ ಮುಟ್ಟಿಸಬೇಕು.ನಮ್ಮ ದೇಶದ ಪ್ರತಿಷ್ಠಿತ ಮಾಧ್ಯಮಗಳು ವಾಸ್ತವಾಂಶವನ್ನು ಮರೆಮಾಚಿ ತಮ್ಮ ಟಿ.ಆರ್.ಪಿ, ಲಾಭಕ್ಕಾಗಿ ಇಲ್ಲಸಲ್ಲದವುಗಳನ್ನು ತೋರಿಸುತ್ತವೆ. ಅದರಲ್ಲೂ ಇಂದು ಪ್ರತಿಯೊಬ್ಬರು ಸಮರ್ಥನೆಯನ್ನು ರೂಡಿಗತ ಮಾಡಿಕೊಂಡಿದ್ದಾರೆ. ಆಳುವ ವರ್ಗದ ಪರ ಅಧಿಕಾರಶಾಹಿ ಆಲೋಚನೆಗಳನ್ನು ಹೊಂದಿರುವ ಇಂದಿನ ಮಾಧ್ಯಮಗಳು ನಾಮಕಾವಾಸ್ಥೆ ದುಡಿಯುವ ವರ್ಗದ ಪರ ಸಾಮಾನ್ಯ ವರದಿಗಳನ್ನು ಮಾಡುತ್ತ ಸಾಮ್ರಾಜ್ಯಶಾಹಿಯ ಬೂಟಿನಡಿ ಹಗಲಿರುಳು ಕಾರ್ಯನಿರ್ವಹಿಸುತ್ತಿವೆ.ಒಂದು ಕಡೆ ನಮ್ಮ ದೇಶದ ಮಾಧ್ಯಮಕ್ಕೆ ಅವಸಾನ ಎಂಬುದು ಆರಂಭವಾಗಿದೆ. ಭ್ರಷ್ಟ ಬಿಜೆಪಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಆಪರೇಷನ್ ಕಮಲವನ್ನು ಆರಂಬಿಸಿದವೋ ಅದರಂತೆ ಮಾಧ್ಯಮದಲ್ಲಿಯೂ ಕೆಲವೊಂದು ಹಣದಾಹಿ ರಾಜಕಾರಣಿಗಳು, ಉದ್ದಿಮೆದಾರರು ದಿನನಿತ್ಯ ಹೊಸ ಹೊಸ ಚಾನೆಲ್ಗಳನ್ನು ತೆಗೆದು ಆಪರೇಷನ್ ಮೀಡಿಯಾ ಮಾಡುತ್ತಿದ್ದಾರೆ.ಬೆಳಿಗ್ಗೆ ಒಂದು ಚಾನೆಲ್ನಲ್ಲಿ ಸುದ್ದಿ ಓದಿದಾತ ಮಧ್ಯಾಹ್ಮದ ವಾತರ್ೆಯನ್ನು ಬೇರೊಂದು ಸುದ್ದಿವಾಹಿನಿಯಲ್ಲಿ ಓದುತ್ತಿರುತ್ತಾನೆ. ಮತ್ತೇ ರಾತ್ರಿ ಮಗದೊಂದು ಚಾನೆಲ್ಗೆ ಹೋಗಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುತ್ತಾನೆ. ಅಂದರೆ ಏನರ್ಥ..?ಮೊದಲಿಗೆ ಹೇಳಿದಂತೆ ಮಾಧ್ಯಮದ ಅವಸಾನಕ್ಕೆ ನೀರಾಳ ರಾಡಿಯೇ ಅಡಿಗಲ್ಲಾಗಿದೆ... ಇನ್ಯಾರ್ಯಾರು ಕಾಮಗಾರಿ ಪೂರ್ಣಗೊಳಿಸುತ್ತಾರೆಯೋ ಸಮಯವೇ ನಿರ್ಧರಿಸಬೇಕು.ಎಂ.ಎಲ್

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಡಾ. ಬಾಬು ಜಗಜೀವನರಾಮ್ರವರು ಸ್ಥಾಪಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ತನ್ನ 26ನೇ ರಾಷ್ಟ್ರೀಯ ದಲಿತ ಬರಹಗಾರರ ಸಮ್ಮೇಳನವನ್ನು ಡಿಸೆಂಬರ್ 11-12ರಂದು ನವದೆಹಲಿಯ ಜೋರ್ಡಾ ಪಂಚಶೀಲಾ ಆಶ್ರಮದಲ್ಲಿ ನಡೆಸಿತು.ಶ್ರೀ ಮಹಾರಾಜ್ ಶಿರೋಹಿ ರಘುವೀರ್ಸಿಂಗ್ ದೇವುಡಾರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಅಂಬೇಡ್ಕ್ರವರು ಹಿಂದುಕೋಡ್ ಬಿಲ್ ಪ್ರಕರಣದಲ್ಲಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ರಘುವೀರ್ಸಿಂಗ್ರವರ ತಂದೆಯವರಾದ ಶ್ರೀ ಮಹಾರಾಜ್ ಶಿರೋಹಿಯವರು ತಮ್ಮ ಬಂಗಲೆಯನ್ನು ಅಂಬೇಡ್ಕರವರಿಗೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದರು. ಆ ಬಂಗಲೆಯೇ ಇಂದು ನವದೆಹಲಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ರವರ ರಾಷ್ಟ್ರೀಯ ಸ್ಮಾರಕ ಭವನವಾಗಿ ಉಳಿದುಕೊಂಡಿದೆ. ಸಮ್ಮೇಳನದಲ್ಲಿ ಜಾರ್ಖಂಡ್ನ ಉಪಮುಖ್ಯಮಂತ್ರಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರನೇಕರು ಭಾಗವಹಿಸಿದ್ದರು.ಸಮ್ಮೇಳನದ ಮೊದಲ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಅಂಬೇಡ್ಕರ್ ಅಂತರಾಷ್ಟ್ರೀಯ ಪ್ರಶಸ್ತಿ ಅಂಬೇಡ್ಕರ ರಾಷ್ಟೀಯ ಪ್ರಶಸ್ತಿ ಅಂಬೇಡ್ಕರ್ ವಿಶಿಷ್ಟಸೇವಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅಂಬೇಡ್ಕರ್ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಮಾರೀಷ್ನ ಡಾ.ಶ್ರೀಮತಿ ಸರಿತಾ ಬುದ್ರಾ ಮತ್ತು ನೇಪಾಳ ರಾಜ್ಯದ ಟೆಕ್ಬಹದ್ದೂರ್ ರಾಯಿಕಾ ಅವರಿಗೆ ನೀಡಲಾಯಿತು. ಜೊತೆಯಲ್ಲಿ ಕನರ್ಾಟಕ ರಾಜ್ಯದಿಂದ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಸಿಲ್ಕ್ಬೋಡರ್್ನ ಅಧ್ಯಕ್ಷ ಮತ್ತು ಅಖಿಲಭಾರತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷರಾದ ಹೆಚ್ ಹನುಮಂತಪ್ಪನವರಿಗೆ ನೀಡಲಾಯಿತು (ಅವರ ಅನುಪಸ್ಥಿತಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಾದ ರಾಮಣ್ಣ ಆರ್.ಜೆರವರು ಸ್ವೀಕರಿಸಿದರು).ಸಮ್ಮೇಳನದಲ್ಲಿ ದೇಶದ ಎಲ್ಲಾ ರಾಜ್ಯಗಳ ಗಣ್ಯವ್ಯಕ್ತಿಗಳಿಗೆ ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತ್ತಿ, ಮಹಾತ್ಮ ಜೋತಿಬಾ ಫುಲೆ ಪ್ರಶಸ್ತಿ, ಮಹಿಳೆಯರಿಗೆ ಸಾವಿತ್ರಿಬಾಯಿ ಫೆಲೋಶಿಪ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ದಕ್ಷಿಣ ಭಾರತದಿಂದ ಸುಮಾರು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.ಸಮ್ಮೇಳನದ 2ನೇ ದಿನ ದೇಶದ ಎಲ್ಲ ರಾಜ್ಯ ಘಟಕಗಳ ರಾಜ್ಯಧ್ಯಕ್ಷರು ಮತ್ತು ಪಧಾಧಿಕಾರಿಗಳು ದೇಶದಲ್ಲಿ ದಲಿತರ ಮೇಲೆ ಜರುಗುವ ದೌರ್ಜನ್ಯ ಮತ್ತು ದಲಿತರಿಗಿರುವ ಜ್ವಲಂತ ಸಮಸ್ಯೆಗಳು, ಮೀಸಲಾತಿ, ಅಸ್ಪೃಶ್ಯತೆ, ಕುರಿತೆಲ್ಲ ಸುಧೀರ್ಘವಾಗಿ ಚಚರ್ಿಸಿ ಇವುಗಳನ್ನು ತಡೆಯಲು ದಲಿತ ಸಾಹಿತ್ಯ ಅಕಾಡೆಮಿ ಯಾವ ರೀತಿಯ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತೀಮರ್ಾನಿಸಲಾಯಿತು.ಕೊನೆಗೆ ಚಚರ್ೆಯಲ್ಲಿ ಮುಂಬರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು 2011ರ ಎಪ್ರೀಲ್ ತಿಂಗಳಿನಲ್ಲಿ ಕನರ್ಾಟಕದಲ್ಲಿ ನಡೆಸಲು ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಸೋಹನ್ಪಾಲ್ ಸುಮಾನಕ್ಷರವರು ಒಪ್ಪಿಗೆ ಸೂಚಿಸಿದರು. 2ದಿನಗಳ ವರೆಗೆ ಈ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಈಗಿನಿಂದಲೇ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂದು ನಿರ್ಣಯಿಸಲಾಯಿತು.ರಾಮಣ್ಣ ಆರ್.ಹೆಚ್.ಜೆ ರಾಜ್ಯಾಧ್ಯಕ್ಷರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕನರ್ಾಟಕ ಘಟಕ.

ಪ್ರಜಾ ತಂತ್ರಕ್ಕೆ ಮರಣದಂಡನೆಬಿನಾಯಕ ಸೇನ್ ಜೀವಾವಧಿ!


ಪ್ರಜಾ ತಂತ್ರಕ್ಕೆ ಮರಣದಂಡನೆಬಿನಾಯಕ ಸೇನ್ ಜೀವಾವಧಿ!ಈ ದೇಶದಲ್ಲಿರುವ ಪ್ರಜಾಸತ್ತೆ ಪ್ರಜಾತಂತ್ರದ ಮುಸುಕು ಹೊದ್ದಿರುವ ನಿರಂಕುಶತ್ವವೇ ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ಡಾ. ಬಿನಾಯಕ್ ಸೇನ್ರಂತಹ ಅತ್ಯಂತ ಜನಪರ ಮತ್ತು ಜನಪ್ರಿಯ ಡಾಕ್ಟರಿಗೂ ಈ ದೇಶದ ನ್ಯಾಯಾಲಯವೊಂದು ಅವರು ಮಾಡದ ತಪ್ಪಿಗೆ ಜೀವಾವಧಿಯಂತಹ ಘೋರ ಶಿಕ್ಷೆಯನ್ನು ವಿಧಿಸುತ್ತದೆ ಎಂದರೆ ಈ ದೇಶದ ಪ್ರಜಾತಂತ್ರ ಮತ್ತು ನ್ಯಾಯಾಂಗ ಯಾವ ಪಾತಾಳವನ್ನು ಮುಟ್ಟಿದೆ ಎಂಬುದು ಅರ್ಥವಾಗುತ್ತದೆ. ಡಾ. ಬಿನಾಯಕ್ ಸೇನ್ ಮಾಡಿದ ಯಾವ ಕೆಲಸ ಈ ಪ್ರಜಾತಂತ್ರದಲ್ಲಿ ಜೀವಾವಧಿ ಶಿಕ್ಷೆಯನ್ನು ಆಹ್ವಾನಿಸುವಂತ ಅಪರಾಧವಾಯಿತು ಎಂಬುದನ್ನು ನೋಡಿದರೆ ಈ ದೇಶದ ಕಾನೂನುಗಳ ನಿಜವಾದ ಹೂರಣ ಬಯಲಿಗೆ ಬೀಳುತ್ತದೆ.ಡಾ. ಬಿನಾಯಕ್ ಸೇನರು ವೆಲ್ಲೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿಯನ್ನು ಪಡೆಯುವ ಮುನ್ನವೇ ಶಂಕರ್ ಗುಹಾ ನಿಯೋಗಿಯವರ ಹೋರಾಟದ ಮತ್ತು ಸೇವೆಯ ಬದುಕಿನಿಂದ ಪ್ರಭಾವಿತರಾಗಿದ್ದರು. ಆದ್ದರಿಂದಲೇ ವೈದ್ಯ ಪದವಿಯಲ್ಲಿ ಅತ್ಯಂತ ಉನ್ನತ ಶ್ರೇಣಿಯಲ್ಲಿ ಪಾಸಾದರೂ ತಮ್ಮ ಜ್ಞಾನವನ್ನು ಆಸ್ತಿ ಮಾಡಲು ಬಳಸದೇ ಅತ್ಯಂತ ಶೊಷಿತ ಮತ್ತು ನಿರ್ಲಕ್ಷಿತ ಜನಸಮುದಾಯಗಳಿಗೆ ಬಳಸಲು ತೀಮರ್ಾನಿಸಿದರು. ಜ್ಞಾನವಂತರೆಲ್ಲಾ ಆಸ್ತಿವಂತರಾಗಲು ಇಲ್ಲಸಲ್ಲದ ಮಾರ್ಗವನ್ನು ಹಿಡಿಯುತ್ತಿರುವಾಗ ಈ ಪ್ರತಿಭಾನ್ವಿತ ವೈದ್ಯ ಈ ಸಮಾಜದ ಉಳ್ಳವರ ಬದುಕಿನ ಈ ಸ್ವಾರ್ಥಸಂಹಿತೆಯನ್ನು ಉಲ್ಲಂಘಿಸಿದ್ದೇ ಅವರು ಮಾಡಿದ ಘನಘೋರ ಅಪರಾಧ. ಎಷ್ಟೆಂದರೆ ಬಿನಾಯಕ ಸೇನರ ಈ ಸರಳ ಬದುಕೇ ಅವರು ಮಾವೋವಾದಿಗಳ ಸ್ನೇಹಿತನೇ ಇರಬೇಕೆಂದು ಅನುಮಾನ ಪಡಲು ಸಕರ್ಾರದ ಸಿಕ್ಕ ಬಲು ದೊಡ್ಡ ಪುರಾವೆಯಾಯಿತು! ನಿಸ್ವಾರ್ಥವನ್ನು ಮತ್ತು ಪ್ರಾಮಾಣಿಕತೆಗಳು ಶಿಕ್ಷಾರ್ಹ ಅಪರಾಧವಾಗುವ ವ್ಯವಸ್ಥೆಯನ್ನು ಪ್ರಜಾತಂತ್ರ ಎಂದು ಕರೆಯಬಹುದೇ?ಡಾ.ಬಿನಾಯಕ್ ಸೇನರು ಛತ್ತೀಸ್ಘಡದ ಆದಿವಾಸಿಗಳ ಮಧ್ಯೆ ತಮ್ಮ ಶುಶ್ರೂಷಾ ಕೇಂದ್ರವನ್ನು ತೆರದು ಆರೋಗ್ಯ ಸೇವೆ ಪ್ರಾರಂಭಿಸಿದ ಅಲ್ಪಾವಧಿಯಲ್ಲಿ ಆದಿವಾಸಿಗಳ ಅನಾರೋಗ್ಯಕ್ಕಿರುವ ಸಾಮಾಜಿಕ ಕಾರಣಗಳನ್ನು ಅರಿತುಕೊಂಡರು. ಅಪೌಷ್ಟಿಕತೆ, ರಕ್ತಹೀನತೆ, ಕೇವಲ ಆರೋಗ್ಯದ ಸಮಸ್ಯೆಯಲ್ಲ. ಬಡತನವೆಂಬ ಸಾಮಾಜಿಕ ಮತ್ತು ಆಥರ್ಿಕ ಮೂಲದ ಕಾರಣವೇ ಅವರ ಖಾಯಿಲೆಗೆ ಕಾರಣವಾಗುತ್ತಿರುವ ಮೂಲ ಸಮಸ್ಯೆಗಳು ಎಂದು ಅರ್ಥಮಾಡಿಕೊಳ್ಳಲು ಈ ಹೃದಯವಂತ ವೈದ್ಯನಿಗೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಹಾಗೂ ಚತ್ತೀಸ್ಘಡದಲ್ಲಿ ಆದಿವಾಸಿಗಳ ಬಡತನಕ್ಕೆ ಪ್ರಮುಖ ಕಾರಣ ಸಕರ್ಾರದ ಅರಣ್ಯನೀತಿಗಳು ಎಂಬುದನ್ನು ಅರ್ಥಮಾಡಿಕೊಂಡ ಬಿನಾಯಕ್ ಸೇನರು ಆದಿವಾಸಿಗಳ ನಾಗರಿಕ ಹಕ್ಕನ್ನು ಕಾಪಾಡಲು ಪಿಯುಸಿಎಲ್ ಸಂಸ್ಥೆಯನ್ನು ಸೇರಿಕೊಂಡರು. ಅಪಾರ ಖನಿಜ ಸಂಪನ್ಮೂಲವನ್ನು ಹೊಂದಿರುವ ಆ ಪ್ರದೇಶವನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳ ವಶಮಾಡಲು ಸಕರ್ಾರವು ಆದಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲು ಪ್ರಯತ್ನಿಸಿದಾಗ ಬಿನಾಯಕ್ ಸೇನರೂ ಹಲವಾರು ಸಂಘಸಂಸ್ಥೆಗಳೊಡನೆ ಸೇರಿ ಹೋರಾಟ ರೂಪಿಸಿದರು. ಅದರಲ್ಲೂ ಸಾಲ್ವಾ ಜುಡುಂ ಹೆಸರಿನಲ್ಲಿ ಆದಿವಾಸಿಗಳನ್ನು ಕೊಂದು ಹಾಕಲು ಮತ್ತು ಬಲವಂತವಾಗಿ ಹೊರಹಾಕಲು ಸಕರ್ಾರ ಒಂದು ಕಾನೂನು ಬಾಹಿರ ಸೇನೆಯನ್ನೇ ರಚಿಸಿ ತನ್ನ ಜನರ ಮೇಲೆ ಯುದ್ಧ ಶುರು ಮಾಡಿದಾಗ ಸಕರ್ಾರದ ಸಾಲ್ವಾಜುಡುಂ ಸಂಚನ್ನು ಬಯಲುಗೊಳಿಸಿದವರಲ್ಲಿ ಬಿನಾಯಕ್ ಸೇನರೇ ಮೊದಲಿಗರು. ಬಡವರ ಅನಾರೋಗ್ಯಕ್ಕೆ ಬಡತನವೇ ಪ್ರಧಾನ ಶತ್ರು. ಆದ್ದರಿಂದ ವೈದ್ಯನೊಬ್ಬನ ಹೋರಾಟ ಕೇವಲ ಬಡವರ ಖಾಯಿಲೆಯ ವಿರುದ್ಧ ಮಾತ್ರವಿದ್ದರೆ ಸಾಲದು ಆ ಕಾಯಿಲೆಗಳ ಮೂಲಕಾರಣದ ವಿರುದ್ಧವೂ ಇರಬೇಕೆಂದೇ ಪ್ರಪಂಚದ ಇತಿಹಾಸದಲ್ಲೆ ಚೆಗುವಾರ, ಡಾ. ನಾರ್ಮನ್ ಬೆಥ್ಯೂನ್, ಡಾ.ಕೊಟ್ನೀಸ್ ಇತರರು ದುಡಿದು, ಹೋರಾಡಿ, ಮಡಿದಿದ್ದಾರೆ. ಡಾ. ಬಿನಾಯಕ್ ಸೇನರು ಸಹ ಅದೇ ಸಾಲಿನಲ್ಲಿ ಸೇರುವ ಜನರ ಹಾಗೂ ಸಮಾಜದ ವೈದ್ಯರು. ಬಿನಾಯಕ್ ಸೇನರು ಹೀಗೆ ತಾವು ವೈಧ್ಯವೃತ್ತಿಯಲ್ಲಿ ತೆಗೆದುಕೊಂಡ ಪ್ರಮಾಣವನ್ನು ಅಕ್ಷರಶಃ ಅನುಸರಿಸಲು ಯತ್ನಿಸುವ ಪ್ರಕ್ರಿಯೆಯಲ್ಲೇ ನಾಗರಿಕ ಹಕ್ಕುಗಳ ಹೋರಾಟಗಾರರೂ ಆದರು. ತಾವು ಮಾಡುತ್ತಿದ್ದ ವೈದ್ಯ ವೃತ್ತಿಗೆ ಆದಿವಾಸಿಗಳ ಸಾಮಾಜಿಕ ಮತ್ತು ಆಥರ್ಿಕ ಹಕ್ಕಿಗಾಗಿ ನಡೆಸುತ್ತಿದ್ದ ಹೋರಾಟಗಳು ಪೂರಕ ಮತ್ತು ಅದರ ಅವಿಭಾಜ್ಯ ಅಂಗವೆಂದೇ ಅವರು ಭಾವಿಸಿದ್ದರು. ಇದು ಪ್ರಾಯಶಃ ಪ್ರಭುತ್ವದ ಕಣ್ಣಲ್ಲಿ ಅವರು ಮಾಡಿದ ಎರಡನೇ ಅಪರಾಧವಾಗಿತ್ತು!ನಿಸ್ವಾರ್ಥವಾಗಿ ಜೀವಿಸಿದ್ದು ಮತ್ತು ಆದಿವಾಸಿಗಳ ಪರವಾಗಿ ಮತ್ತು ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತಿದ್ದ ಡಾ. ಬಿನಾಯಕ್ ಸೇನರನ್ನು ಈ ಕಾಪರ್ೊರೇಟ್ ಪ್ರಭುತ್ವ ಸಹಿಸಲು ಸಾಧ್ಯವೇ ಇರಲಿಲ್ಲ. ಆದಿವಾಸಿಗಳ ಪರವಾಗಿ ಶಸ್ತ್ರ ಧರಿಸಿ ಹೋರಾಡುತ್ತಿರುವ ನಕ್ಸಲರ ಮೇಲೆ ಸುಲಭವಾಗಿ ಪ್ರಭುತ್ವದ ವಿರುದ್ಧ ಯುದ್ಧ ಹೂಡಿರುವ ಅಪರಾಧ ಹೊರಿಸಿ ಕೊಲ್ಲುವುದು ಅಥವಾ ಸೆರೆಗೆ ದೂಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಸಕರ್ಾರ ಈ ನಿರಾಯುಧ ಯೋಧನನ್ನು ಬಲಿ ಹಾಕುವುದು ಹೇಗೆ ಎಂಬುದು ತಲೆನೋವಾಗಿತ್ತು. ಆ ಸಂದರ್ಭದಲ್ಲಿಯೇ ಜೈಲಿನಲ್ಲಿದ್ದ ಮಾವೋವಾದಿ ನಾಯಕನನ್ನು ಅವರ ಕುಟುಂಬದ ಮನವಿಯ ಮೇರೆಗೆ ಆರೋಗ್ಯ ಸಂಬಂಧಿ ವಿಚಾರಗಳಲ್ಲಿ ಪದೇಪದೇ ಭೇಟಿಯಾಗಿರುವುದು ಸಕರ್ಾರದ ಗಮನಕ್ಕೆ ಬಂದಿತು. ಅದನ್ನೇ ಬಳಸಿಕೊಂಡು 2007ರ ಮೇ ತಿಂಗಳಲ್ಲಿ ಬಿನಾಯಕ್ ಸೇನರು ಇಲ್ಲದಿರುವಾಗ ಅವರ ಮನೆಯನ್ನು ಪೊಲೀಸರು ರೇಡ್ ಮಾಡಿದರು. ಅವರ ಮನೆಯಲ್ಲಿದ್ದ ಕಂಪ್ಯೂಟರ್, ಅವರ ಸಾಹಿತ್ಯ ಮೆಡಿಕಲ್ ಪುಸ್ತಕಗಳು ಎಲ್ಲವನ್ನು ವಶಪಡಿಸಿಕೊಂಡು ಡಾ. ಬಿನಾಯಕ್ ಸೇನರ ಬಳಿ ಜೈಲಿನಲ್ಲಿದ್ದ ಮಾವೋವಾದಿ ನಾಯಕ ನಾರಾಯಣ ಸನ್ಯಾಲ್ ತನ್ನ ಪಕ್ಷದ ಇತರ ಸದಸ್ಯರಿಗೆ ತಲುಪಿಸಲು ನೀಡಲಾಗಿದ್ದ ಪತ್ರವೊಂದು ಸಿಕ್ಕಿತೆಂದೂ, ಡಾ. ಸೇನರು ಈ ರೀತಿ ಬಹಿಷ್ಕೃತ ಮಾವೋವಾದಿ ಸಂಘಟನೆಯ ಕುರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆಂದೂ, ಇದು ಚತ್ತೀಸ್ಘಡ್ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ ಮತ್ತು ಅನ್ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್ ಅಡಿ ಶಿಕ್ಷಾರ್ಹ ಅಪರಾಧವೆಂದು ಆರೋಪ ಹೊರಿಸಿ 2007ರ ಮೇ 14ರಂದು ಬಂಧಿಸಿದರು.ಡಾ. ಸೇನರ ಬಂಧನದ ಸುದ್ದಿ ಇಡೀ ದೇಶವನ್ನೇ ಮಾತ್ರವಲ್ಲದೆ ಜಗತ್ತಿನಾದ್ಯಂತ ಹರಡಿಕೊಂಡಿರುವ ಅವರ ಅಭಿಮಾನಿಗಳನ್ನು, ಪ್ರಜಾತಂತ್ರವಾದಿಗಳನ್ನು ಬೆಚ್ಚಿಬೀಳಿಸಿತು. ಛತ್ತೀಸ್ಘಡ್ ಕೋಟರ್ುಗಳು ಅವರಿಗೆ ಜಾಮೀನು ಕೊಡಲೂ ಸಹ ನಿರಾಕರಿಸಿದವು. ಸುಪ್ರೀಂಕೋಟರ್ು ಸಹ ಪ್ರಾರಂಭದಲ್ಲಿ ಅವರಿಗೆ ಬೇಲ್ ನಿರಾಕರಿಸಿತು. ಆದರೆ ಸೇನರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಗತ್ತಿನ ಇಪ್ಪತ್ತಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ವಿಜೇತರೂ, ಖ್ಯಾತ ಬುದ್ಧಿಜೀವಿಗಳು, ಸಹಸ್ರಾರು ಸಂಘಸಂಸ್ಥೆಗಳು ಪ್ರಚಾರಾಂದೋಲನ ಮತ್ತು ಹೋರಾಟದ ಅಭಿಯಾನವನ್ನೇ ಪ್ರಾರಂಭಿಸಿದರು. ಈ ಎಲ್ಲಾ ಕಾರಣದಿಂದ ಕೊನೆಗೂ 2009ರ ಮೇನಲ್ಲಿ ಅಂದರೆ ವಿನಾಕಾರಣ ಭತರ್ಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರವೇ ಅವರನ್ನು ಸುಪ್ರಿಂ ಕೋಟರ್ು ಜೈಲಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಆದರೆ ಹೇಗಾದರೂ ಸರಿ ಬಿನಾಯಕ್ ಸೇನರಿಗೆ ಶಿಕ್ಷೆ ವಿಧಿಸುವುದು ಪ್ರಭುತ್ವಕ್ಕೆ ಅತ್ಯಗತ್ಯವಾಗಿತ್ತು. ಏಕೆಂದರೆ ನ್ಯಾಯದ ಪರವಾಗಿ ಬಿನಾಯಕ ಸೇನರಂಥ ಖ್ಯಾತ ನಾಮರೇ ಶಿಕ್ಷೆ ಒಳಗಾಗದರೆ ಉಳಿದವರೂ ತಾವಾಗಿಯೇ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಾಗುತ್ತಾರೆ ಎಂಬುದು ಸಕರ್ಾರದ ಪ್ರಭುತ್ವದ ಹುನ್ನಾರವಾಗಿತ್ತು.ಆದರೆ ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಪ್ರಜಾಸತ್ತೆಯ ಪ್ರಮುಖ ಅಂಗವಾಗಿರಬೇಕಿದ್ದ ಸ್ವತಂತ್ರ ನ್ಯಾಯಾಲಯವೂ ಈ ಪ್ರಕರಣದಲ್ಲಿ ತನ್ನ ನ್ಯಾಯವಿಚಕ್ಷತೆಯನ್ನು ಮತ್ತು ನಿಷ್ಪಕಪಾತಿತನವನ್ನು ಬದಿಗಿಟ್ಟು ಕಣ್ಣಿಗೆ ಖಾಕಿಪಟ್ಟಿಯನ್ನು ಕಟ್ಟಿಕೊಂಡು ಹೆಚ್ಚು ಕಡಿಮೆ ಪೊಲೀಸರು ದಾವೆಯಲ್ಲಿ ನೀಡಿದ್ದ ಅಜರ್ಿಯನ್ನೇ ತೀಪರ್ೆಂದು ಓದಿರುವುದು! ಮೇಲ್ನೋಟಕ್ಕೆ ನೋಡಿದರೆ ನ್ಯಾಯಾಲಯ ಈ ಪ್ರಕರಣದಲ್ಲಿ ಸಂಪೂರ್ಣ ಏಕಪಕ್ಷೀಯವಾಗಿ ಪೊಲೀಸರು ಮತ್ತು ಪ್ರಬಲರು ಸೃಷ್ಟಿಸಿದ ಪೂರ್ವಗ್ರಹಗಳಿಗೆ ಹಾಗೂ ನಾಗರಿಕ ಹೋರಾಟಗಳ ಬಗ್ಗೆ ವ್ಯಕ್ತಿಗತವಾಗಿ ತಾವು ನಂಬುವ ಸೈದ್ಧಾಂತಿಕ ಪೂರ್ವಗ್ರಹಗಳಿಗೆ ಬಲಿಯಾಗಿಯೇ ತೀಪರ್ು ಕೊಟ್ಟಿರುವುದು ಎದ್ದು ಕಾಣುತ್ತದೆ.ಪ್ರಾಸಿಕ್ಯುಷನ್ ವಾದದ ಪ್ರಕಾರ ಡಾ. ಬಿನಾಯಕ್ ಸೇನರು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಕರ್ತರು. ಮತ್ತು ಆ ಸಂಘಟನೆಯ ಕಾರ್ಯಚಟುವಟಿಕೆಯನ್ನು ಪಸರಿಸಲು ಅವರು ಜೈಲಿನಲ್ಲಿದ್ದ ಮಾವೋವಾದಿ ಪಕ್ಷದ ನಾಯಕ ನಾರಾಯಣ ಸನ್ಯಾಲ್ ಅವರಿಂದ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಸೂಚನೆ ಇರುವ ಪತ್ರಗಳನ್ನು ತೆಗೆದುಕೊಂಡು ಪಕ್ಷದ ಇತರ ಕಾರ್ಯಕರ್ತರಿಗೆ ತಲುಪಿಸಲು ಮತ್ತೊಬ್ಬ ಮಾವೋವಾದಿ ಪಕ್ಷದ ಕಾರ್ಯಕರ್ತರಾದ ಪೀಯೂಷ್ ಗುಹಾ ಎಂಬುವರಿಗೆ ತಲುಪಿಸುತ್ತಿದ್ದರು. ಹೀಗಾಗಿ ಈ ಮೂವರು (ನಾರಾಯಣ್ ಸನ್ಯಾಲ್, ಡಾ. ಬಿನಾಯಕ್ ಸೇನ್, ಪೀಯೂಷ್ ಗುಹಾ) ಬಹಿಷ್ಕೃತ ಸಂಘಟನೆಯ ಸದಸ್ಯರಾಗಿರುವುದು ಒಂದು ಅಪರಾಧ. ಎರಡನೆಯದು ಸಕರ್ಾರದ ವಿರುದ್ಧ ಸಂಚುಕೂಟ ರೂಪಿಸಿದ್ದು 2ನೇಯ ಅಪರಾಧ. ಸಕರ್ಾರದ ವಿರುದ್ಧ ಯುದ್ಧ ಹೂಡಲು ಸನ್ನಾಹ ಹೂಡಿದ್ದು 3ನೇ ಅಪರಾಧ. ಈ ಎಲ್ಲಾ ಆರೋಪಗಳನ್ನು ಹೊರಿಸಿ ಐಪಿಸ್ ಸೆಕ್ಷನ್ 124-ಎ,120-ಬಿ, ಛತ್ತೀಸ್ಘಡ್ ವಿಶೇಷ್ ಜನ ಸುರಕ್ಷಾ ಅಧಿನಿಯಮ್ನ 8(1), 8(2), 8(3), ಮತ್ತು 8(5), ಮತ್ತು ಗಟಿಟಚಿತಿಜಿಣಟ ಂಛಿಣತಣಜ ಕಡಿಜತಜಟಿಣಠಟಿ ಂಛಿಣ, 1967 ನ ಸೆಕ್ಷನ್ 39(2)ರಡಿ ಆರೋಪಗಳನ್ನು ಹೊರಿಸಲಾಗಿತ್ತು.ಆದರೆ ಇವೆಲ್ಲಾ ಆರೋಪಗಳಷ್ಟೆ! ಇದನ್ನು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತು ಮಾಡುವ ಜವಾಬ್ದಾರಿ ತನಿಖಾಧಿಕಾರಿ ಪೊಲೀಸರದ್ದು ಮತ್ತು ಅವರ ಪರವಾಗಿ ವಾದ ಮಾಡುವ ಪ್ರಾಸಿಕ್ಯುಷನ್ ವಕೀಲರದ್ದು. ಅವರು ಮಾಡುವ ವಾದ ಮತ್ತು ನೀಡುವ ಸಾಕ್ಷಿ ಪುರಾವೆಗಳು ಹಾಗೂ ಆರೋಪಿಯು ತನ್ನ ಸಮರ್ಥನೆಗೆ ನೀಡುವ ಸಾಕ್ಷಿ ಪುರಾವೆಗಳನ್ನೆಲ್ಲಾ ತುಲನೆ ಮಾಡಿ ನ್ಯಾಯಾಧೀಶ ತನ್ನ ತೀಪರ್ು ನೀಡಬೇಕು. ಹಾಗೂ ಆ ತೀಪರ್ು ನಿರಪರಾಧಿಗೆ ವಿನಾಕಾರಣ ಶಿಕ್ಷೆಯಾಗದಂಥ ನ್ಯಾಯ ಸಂಹಿತೆಯನ್ನೂ ಮತ್ತು ಅನುಮಾನಕ್ಕೆಡೆ ಕೊಡದಂತೆ ಅಪರಾಧ ಸಾಬೀತಾಗಬೇಕಾದ ನ್ಯಾಯಪ್ರಕ್ರಿಯೆಯನ್ನು ಅನುಸರಿಸಬೇಕು. ಅದರಲ್ಲೂ ದೇಶದ್ರೋಹದ ಆಪಾದನೆಯನ್ನು ಒಪ್ಪಿಕೊಳ್ಳಬೇಕಾದರೆ ಹಾಗೂ ಜೀವಾವಧಿಯಂತ ಗೋರ ಶಿಕ್ಷೆ ವಿಧಿಸಬೇಕಾದರೆ ಅಂಥ ಆರೋಪ ಕಿಂಚಿತ್ತೂ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಗಿರಬೇಕು. ಇಂಥಾ ಪ್ರಕರಣಗಳಲ್ಲಿ ಕೆಳನ್ಯಾಯಾಲಯಗಳಲ್ಲಿ ನ್ಯಾಯ ಪ್ರಕ್ರಿಯೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸುಪ್ರೀಂ ಕೋಟರ್ು ಕೆಲವು ಸ್ಪಷ್ಟ ನಿದರ್ೆಶನಗಳನ್ನು & ಲ್ಯಾಂಡ್ಮಾಕರ್್ ತೀಪರ್ುಗಳನ್ನು ನೀಡಿದೆ. ಉದಾಹರಣೆಗೆ ದೇಶದ್ರೋಹದ ಆಪಾದನೆ ಸ್ವೀಕೃತವಾಗಬೇಕಾದರೆ ಅಂತಹ ಅಪರಾಧ ನೇರ ಹಿಂಸಾಚರಣೆಗೂ ಕಾರಣವಾಗಿರಬೇಕು ಎಂಬುದು ಒಂದು ಮಾರ್ಗದರ್ಶನ.ಆದರೆ ಪ್ರಾಸಿಕ್ಯುಷನ್ ಪರ ವಾದವಾಗಲೀ, ರಾಯಪುರದ ಎರಡನೇ ಸೆಷನ್ಸ್ ಜಡ್ಜ್ ಬಿ.ಪಿ. ವಮರ್ಾ ಆಗಲೀ ಈ ಯಾವುದೇ ಪ್ರಕ್ರಿಯೆ ಮತ್ತು ಸಂಹಿತೆಯನ್ನು ಅನುಸರಿಸಿಲ್ಲ. ಉದಾಹರಣೆಗೆ ಡಾ. ಬಿನಾಯಕ್ ಸೇನರು ಮಾವೋವಾದಿ ಎಂದು ಆರೋಪಿಸಲು ಪೊಲೀಸರು ಹೊರಿಸಿರುವ ಆರೋಪಗಳು ಇವು:1.ಡಾ. ಸೇನರು 33 ಕ್ಕೂ ಹೆಚ್ಚು ಸಾರಿ ಮಾವೋವಾದಿ ನಾಯಕ ನಾರಾಯಣ ಸನ್ಯಾಲ್ ಅವರನ್ನು ಭೇಟಿ ಮಾಡಿದ್ದಾರೆ.2.ಡಾ. ಸೇನರ ಶಿಫಾರಸ್ಸಿನ ಮೇರೆಗೆ ಸನ್ಯಾಲರಿಗೆ ಮನೆ ಬಾಡಿಗೆಗೆ ನಡಲಾಗಿದೆ. ಇದು ಅವರಿಬ್ಬರ ಸಂಬಂಧವನ್ನು ಸಾಬೀತು ಮಾಡುತ್ತದೆ.3.ಡಾ. ಸೇನರು ನಾರಾಯಣ ಸನ್ಯಾಲ್ ಅವರಿಂದ ಪತ್ರವನ್ನು ತೆಗೆದುಕೊಂಡು ಪೀಯೂಷ್ ಗುಹಾ ಅವರಿಗೆ ತಲುಪಿಸಿದ್ದಾರೆ. 4.ಡಾ. ಸೇನರು ಮತ್ತು ಅವರ ಪತ್ನಿ ಇಳಿನಾ ಸೇನರು ಶಂಕರ್ ಸಿಂಗ್ ಮತ್ತು ಅಮಿತಾ ಶ್ರೀವಾಸ್ತವ ಎಂಬ ಇಬ್ಬರು ಮಾವೋವಾದಿಗಳಿಗೆ ತಮ್ಮ ರೂಪಾಂತರ್ ಎಂಬ ಸಂಸ್ಥೆಯಲ್ಲಿ ಕೆಲಸ ಕೊಟ್ಟಿದ್ದರು. ಮತ್ತು ಡಾ. ಸೇನ್ ದಂಪತಿಗಳು ಕಾಡಿನಲ್ಲಿ ಹಲವಾರು ಬಾರಿ ಮಾವೋವಾದಿಗಳ ಸಭೆಯಲ್ಲಿ ಭಾಗವಹಿಸಿದ್ದರು.5.ಡಾ. ಸೇನರು ಚತ್ತೀಸ್ಘಡ್ದಲ್ಲಿ ತಮ್ಮ ಪಕ್ಷಕ್ಕೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿ ಮಾವೋವಾದಿ ಪಕ್ಷದ ಕೇಂದ್ರ ಸಮಿತಿ ಸೇನರಿಗೆ ಬರೆದ ಪತ್ರ ದೊರೆತಿದೆ. ಮೊದಲನೆಯದಾಗಿ ಡಾ. ಸೇನರು ಮಾವೋವಾದಿ ನಾಯಕ ಸನ್ಯಾಲರನ್ನು 33 ಬಾರಿ ಭೇಟಿಯಾದ ಆರೋಪ. ಡಾ. ಸೇನರಿಗೆ ನಾರಾಯಣ್ ಸನ್ಯಾಲರ ಮನೆಯವರು ಜೈಲಿನಲ್ಲಿರುವ ತಮ್ಮ ಸಂಬಂಧಿಯ ಆರೋಗ್ಯವನ್ನು ಜೈಲಿನಾಧಿಕಾರಿಗಳು ಕಡೆಗಣಿಸುತ್ತಿದ್ದರಾದ್ದರಿಂದ ನಾಗರಿಕ ಹಕ್ಕು ಸಂಘಟನೆಯ ಕಾರ್ಯಕರ್ತರಾಗಿ ತಾವು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿರುವ ಪತ್ರವನ್ನು ಸೇನರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮತ್ತು ಪ್ರತಿಬಾರಿ ಯಾವುದೇ ಗುಟ್ಟು-ಗುಮಾನಿಗೆ ಅವಕಾಶ ಕೊಡದಂತೆ ಪಿಯುಸಿಲ್ ಲೆಟರ್ ಹೆಡ್ಡಿನಲ್ಲೇ ಭೇಟಿಗೆ ಅವಕಾಶ ಕೋರಿದ್ದಾರೆ ಮತ್ತು ಜೈಲು ಅಧಿಕಾರಿಗಳ ಸಮಕ್ಷಮದಲ್ಲಿಯೇ ಅವರಿಬ್ಬರ ಭೇಟಿ ನಡೆದಿದೆ. ಪಾಟಿ ಸವಾಲಿನಲ್ಲಿ ಜೈಲಿನ ಅಧಿಕಾರಿಗಳು ಇವೆಲ್ಲವನ್ನೂ ಧೃಢೀಕರಿಸಿದ್ದು ಮಾತ್ರವಲ್ಲದೆ ತಮ್ಮ ಕಣ್ಣು ತಪ್ಪಿಸಿ ಸನ್ಯಾಲರು ಯಾವುದೇ ಪತ್ರವನ್ನು ಸೇನರಿಗೆ ಕೊಟ್ಟಿರುವ ಸಾಧ್ಯತೆಯೆ ಇಲ್ಲವೆಂದು ಧೃಢವಾಗಿ ಹೇಳಿದ್ದಾರೆ. ಅಲ್ಲದೆ ಅವರಿಬ್ಬರೂ ಆರೋಗ್ಯದ ವಿಷಯವನ್ನು ಹೊರತುಪಡಿಸಿ ಬೇರೆ ಯಾವುದೇ ಮಾತುಗಳನ್ನು ಆಡಿಲ್ಲವೆಂದೂ ಹೇಳಿಕೆ ನೀಡಿದ್ದಾರೆ. ಆದರೂ ನ್ಯಾಯಾಲಯ ಈ ಹೇಳಿಕೆಯನ್ನೇ ಗಮನಕ್ಕೆ ತೆಗೆದುಕೊಳ್ಳಲಿಲ್ಲವೇಕೆ?ಎರಡನೆಯದಾಗಿ ಡಾ. ಸೇನ್ ದಂಪತಿಗಳು ಮಾವೋವಾದಿಗಳು ಎಂಬುದಕ್ಕೆ ಪೋಲಿಸರು ಮುಂದಿಟ್ಟಿರುವ ಸಾಕ್ಷ್ಯಗಳಾದರೂ ಏನು? ಅವರು ಶಂಕರ್ ಮತ್ತು ಅಮಿತ್ ಎಂಬ ಇಬ್ಬರು ಮಾವೋವಾದಿಗಳಿಗೆ ಕೆಲಸ ಕೊಟ್ಟಿದ್ದರು ಎಂಬುದು. ಅಮಿತ್ ಮತ್ತು ಶಂಕರ್ ಎಂಬ ಹೆಸರುಳ್ಳ ಇಬ್ಬರು ಮಾವೋವಾದಿಗಳು ಇರುವುದು ನಿಜ. ಆದರೆ ಆ ಇಬ್ಬರು ಸೇನ್ ದಂಪತಿಗಳು ಕೆಲಸ ಕೊಟ್ಟಿದ್ದ ವ್ಯಕ್ತಿಗಳಲ್ಲ ಎಂಬುದನ್ನು ಪೊಲೀಸರೇ ಪಾಟಿ ಸವಾಲಿನ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಸೇನ್ ದಂಪತಿಗಳು ಕಾಡಿನಲ್ಲಿ ಮಾವೋವಾದಿಗಳ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದಕ್ಕೆ ಪೊಲೀಸರು ತೋರಿದ ಒಂದು ಡಾಕ್ಯುಮೆಂಟರಿ ಚಿತ್ರ ವಾಸ್ತವವಾಗಿ ಆದಿವಾಸಿಗಳ ಜೊತೆ ಅವರ ಆರೋಗ್ಯದ ಬಗ್ಗೆ ನಡೆಸುತ್ತಿದ ಸಂಭಾಷಣೆಯ ತುಣಕೆಂದು ಆ ಸಾಕ್ಷ್ಯ ಚಿತ್ರ ತೆಗೆದವರೇ ಕೋಟರ್ಿನಲ್ಲಿ ಸಾಕ್ಷ್ಯ ಹೇಳಿದ್ದಾರೆ. ಅಲ್ಲದೆ ಇಳಿನಾ ಸೇನ್ರವರು ಐಎಸ್ಐ ಎಂಬ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಡನೆ ಸಂಪರ್ಕ ಹೊಂದಿದ್ದಾರೆ ಎಂದೂ ಆಪಾದನೆ ಮಾಡಿದ್ದರು. ಅದಕ್ಕೆ ಅವರು ತೋರಿದ ಪುರಾವೆ ದೆಹಲಿ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿರುವ ಇಂಡಿಯನ್ ಸೋಷಿಯಲ್ ಇನ್ಸಿಟ್ಯೂಟ್ (ಐಎಸ್ಐ!)ಗೆ ಬರೆದ ಪತ್ರ. ಅದಲ್ಲದೆ ಕಾಮ್ರೇಡ್ ಎಂದು ಅದರ ಅಧ್ಯಕ್ಷರನ್ನು ಸಂಬೋಧಿಸಿದ್ದನ್ನು ಸಹ ಪೊಲಿಸರು ಸೇನ್ ದಂಪತಿಗಳು ಮಾವೋವಾದಿಗಳು ಎಂದು ಸಾಬೀತು ಮಾಡಲು ಸಾಕ್ಷ್ಯವನ್ನಾಗಿ ಮುಂದಿಟ್ಟಿದ್ದರು. ಮೇಲ್ನೋಟಕ್ಕೆ ಹಾಸ್ಯಾಸ್ಪದವಾಗಿರುವ ಪೊಲೀಸರ ಈ ಪ್ರಯತ್ನಗಳನ್ನು ಮಾತ್ರ ನ್ಯಾಯಾಲಯ ಕಿಂಚಿತ್ತೂ ಶಂಕಿಸಿಲ್ಲ. ಇದಲ್ಲದೆ ಸನ್ಯಾಲ್ ಎಂಬ ಮಾವೋವಾದಿ ನಾಯಕರನ್ನು ರಾಯಪುರದ ಬಾಡಿಗೆ ಮನೆಯೊಂದರಿಂದ ಬಂಧಿಸಲಾಗಿದೆಯೆಂದೂ ಅದನ್ನು ಅವರಿಗೆ ಬಾಡಿಗೆ ಕೊಡಿಸಿದ್ದು ಸೇನರೆಂಬುದು ಪೊಲೀಸರ ವಾದ. ಆದರೆ ಕೋಟರ್ಿಗೆ ಪೊಲೀಸರೇ ನೀಡಿರುವ ಮತ್ತೊಂದು ದಾಖಲೆಯಲ್ಲಿ ಸನ್ಯಾಲರನ್ನು ಆಂಧ್ರದ ಭದ್ರಾಚಲಂನಲ್ಲಿ ಬಂಧಿಸಲಾಗಿದೆಯೆಂದು ಹೇಳಿದ್ದಾರೆ. ಆ ಬಾಡಿಗೆ ಮನೆಯ ಮಾಲೀಕರ ಪ್ರಾಥಮಿಕ ಹೇಳಿಕೆಯಲ್ಲಿ ಸೇನರ ಪ್ರಸ್ತಾಪ ಇಲ್ಲ. ಅದನ್ನು ನಂತರದಲ್ಲಿ ಸೇರಿಸಲಾಗಿದೆ. ಹಾಗೆಯೇ ಮಾವೋವಾದಿ ಕೇಂದ್ರಸಮಿತಿಯೆ ಪ್ರಶಂಸಾ ಪತ್ರಕ್ಕೆ ಯಾರದ್ದು ಸಹಿಯೇ ಇಲ್ಲ. ಅದು ಯಾರು ಬೇಕಾದರೂ ಯಾವುದೇ ಕಂಪ್ಯೂಟರಿಂದ ತೆಗೆಯಬಹುದಾದ ಪ್ರಿಂಟ್. ಯಾವುದಾದರೂ ದಾಖಲೆಯನ್ನು ಪೊಲೀಸರು ವಶಪಡಿಸ್ಕೊಂಡರೆ ಅದನ್ನು ಮಹಜರು ಮಾಡಿ ಪೊಲೀಸ್ ಅಧಿಕಾರಿಯ, ಆರೋಪಿಯ ಮತ್ತು ಸಾಕ್ಷಿಗಳ ಸಹಿಯನ್ನು ಪಡೆದುಕೊಂಡಿರಬೇಕು. ಆದರೆ ಈ ಪತ್ರಕ್ಕೆ ಅವ್ಯಾವುದೂ ಇಲ್ಲ. ಅದಕ್ಕೆ ಕಾರಣವನ್ನು ಕೇಳಿದರೆ ಅದು ಕೈತಪ್ಪಿನಿಂದ ಆದದ್ದೆಂದು ಪೊಲೀಸರು ಸಮಜಾಯಿಷೀ ನೀಡಿದ್ದಾರೆ! ಮತ್ತು ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ.ಹೀಗೆ ಡಾ. ಬಿನಾಯಕ್ ಸೇನರನ್ನು ಮಾವೋವಾದಿ ಎನ್ನಲು, ಅಥವಾ ಮಾವೋವಾದಿಗಳ ಕುರಿಯರ್ ಎನ್ನಲು ಅಥವಾ ಸಕರ್ಾರದ ವಿರುದ್ಧ ಯುದ್ಧ ಹೂಡಿದ್ದರು ಎನ್ನಲು ಯಾವುದೇ ಸಾಕ್ಷ್ಯ ಪುರಾವೆಗಳಿಲ್ಲ. ಅಥವಾ ಯಾವುದೇ ಬಲವಾದ ಅಥವಾ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತು ಮಾಡುವ ಸಾಕ್ಷಾಧಾರಗಳಿಲ್ಲ. ಆದರೂ ಡಾ. ಬಿನಾಯಕ್ ಸೇನ್ರನ್ನು ನ್ಯಾಯಾಲಯ ತಪ್ಪಿತಸ್ಥನೆಂದು ಪರಿಗಣಿಸಿ ಜೀವಾವಧಿಯಂಥ ಘನಘೋರ ಶಿಕ್ಷೆ ವಿಧಿಸಲು ಕಾರಣವೇನು? ನ್ಯಾಯಾಧೀಶ ವಮರ್ಾ ರವರು ತಮ್ಮ 90 ಪುಟಗಳ ತೀಪರ್ಿನಲ್ಲಿ ಒಂದು ಕಡೆ ಪೊಲೀಸರು ತಮ್ಮ ಸಾಕ್ಷ್ಯಗಳನ್ನು ಒದಗಿಡುವಾಗ ಅಲ್ಪಸ್ವಲ್ಪ ತಪ್ಪು ಮಾಡಿರುವುದು ನಿಜ. ಆದರೆ ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎನ್ನುತ್ತಾರೆ. ಸೇನರ ಪರವಾಗಿ ಬಂದ ಯಾವುದೇ ಸಾಕ್ಷಿಗಳನ್ನು ಮತ್ತು ಅವರ ವಾದಗಳನ್ನು ಎಲ್ಲಿಯೂ ಪರಿಗಣಿಸಿಲ್ಲ. ಪೊಲೀಸರ ಯಾವುದೇ ಹೇಳಿಕೆಗಳನ್ನು ಆರೋಪಿ ಪರ ವಕೀಲರ ಪಾಟಿ ಸವಾಲಿನ ಬೆಳಕಿನಲ್ಲಿ ಯಾವುದೇ ಪರಾಮಶರ್ೆ ಮಾಡದೆ ಯಥಾವತ್ ಒಪ್ಪಿಕೊಂಡಿದ್ದಾರೆ. ಹೀಗೆ ಉದ್ದಕ್ಕೂ ನ್ಯಾಯಾಲಯ ಪೊಲೀಸರ ಪರವಾದ ಮತ್ತು ಡಾ. ಸೇನರ ವಿರುದ್ಧವಾದ ಮನೋಧೋರಣೆಯನ್ನೇ ವ್ಯಕ್ತಪಡಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಲ್ವಾಜುಡುಂ ಎಂಬುದು ನಾಗರಿಕತೆಗೇ ಅಪಮಾನ ಮಾಡುವಂತ ಪೊಲೀಸರು ಸೃಷ್ಟಿಸಿರುವ ಖಾಸಗಿ ಸೇನೆಯೆಂದು ಸಾಕ್ಷಾತ್ ಸುಪ್ರೀಂ ಕೋಟರ್ೆ ತೀಪರ್ು ನೀಡಿದೆ. ಆದರೂ ಈ ಪ್ರಕರಣದಲ್ಲಿ ನ್ಯಾಯಾಧೀಶ ವಮರ್ಾರವರು ಸಾಲ್ವಾಜುಡುಂ ಎಂಬುದು ಆದಿವಾಸಿಗಳ ಪರವಾದ ಶಾಂತಿ ಸಂಘಟನೆ. ಅದರ ವಿರುದ್ಧ ಡಾ. ಸೇನರು ಹೋರಾಟ ಮಾಡಿರುವುದು ತಪ್ಪು ಮತ್ತು ಇದರ ಹಿಂದೆ ಸೇನರ ನಕ್ಸಲ್ ಪರ ನಿಲುವು ಸ್ಪಷ್ಟಗೊಳ್ಳುತ್ತದೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೂ ಕೊನೆಯಲ್ಲಿ ಸೇನರು ಮಾಡಿದ ತಪ್ಪಿಗೆ ಜೀವಾವಧಿ ಶಿಕ್ಷೆ ಹೆಚ್ಚಾದರೂ ಛತ್ತೀಸ್ಘಡ್ನಲ್ಲಿ ಮಾವೋವಾದಿಗಳು ನಡೆಸುತ್ತಿರುವ ಕ್ರೌರ್ಯವನ್ನು ನೋಡಿದರೆ ಹೆಚ್ಚೇನಲ್ಲ ಎಂದು ಸಮಥರ್ಿಸಿಕೊಳ್ಳುತ್ತಾರೆ!! ನ್ಯಾಯಾಧೀಶರ ಈ ಹೇಳಿಕೆಯೇ ಇಡೀ ತೀಪರ್ಿನ ಹಿಂದೆ ಎಂಥ ಸೈದಾಂತಿಕ ಪೂರ್ವಗ್ರಹ ಕೆಲಸ ಮಾಡಿದೆ ಎಂಬುದನ್ನು ತೋರಿಸುತ್ತದೆ. ಸಾಕ್ಷ್ಯ, ಪುರಾವೆ, ನ್ಯಾಯ ಸಂಹಿತೆ ಎಲ್ಲವನ್ನೂ ಈ ನ್ಯಾಯಾಧೀಶರು ಕಟ್ಟಿಕೊಂಡ ಖಾಕಿ ಪಟ್ಟಿ ನಿರರ್ಥಕಗೊಳಿಸಿದೆ. ಇತ್ತೀಚೆಗೆ ಹೊರಬಿದ್ದ ಅಯೋಧ್ಯೆ-ಬಾಬ್ರಿ ಮಸೀದಿ ತೀಪರ್ಿನಲ್ಲೂ ಸಾಕ್ಷಿ-ಪುರಾವೆಗಳಿಗಿಂತ ಬಲಿಷ್ಟರು ಸೃಷ್ಟಿಸಿದ ಪೂವರ್ಾಗ್ರಹಗಳಿಗೆ ನ್ಯಾಯ ಬಲಿಯಾಗಿತ್ತು. ಅದಕ್ಕೂ ಹಿಂದೆ ಅಫ್ಜಲ್ ಗುರುವಿಗೆ ಸಂಸತ್ ದಾಳಿ ಪ್ರಕರಣದಲ್ಲಿ ಮರಣದಂಡನೆ ವಿಧಿಸುವಾಗಲೂ ಸುಪ್ರೀಂ ಕೋಟರ್ು ಹೇಳಿದ್ದು ಪ್ರಕರಣದಲ್ಲಿ ಆರೋಪಿಯ ಪಾಲು ಮರಣದಂಡನೆ ವಿಧಿಸುವಷ್ಟು ಗುರುತರವಲ್ಲವಾದರೂ ಸಾರ್ವಜನಿಕರ ಸಾಮೂಹಿಕ ಆಕ್ರೊಶವನ್ನು ಸಾಬೀತು ಗೊಳಿಸಬೇಕಿದ್ದರೆ ಈ ಮರಣದಂಡನೆ ಅನಿವಾರ್ಯ!! ಇದು ಪ್ರಜಾಸತ್ತೆಯನ್ನು ಕಾಪಾಡಿಕೊಳ್ಳುವಲ್ಲಿ ಅಂತಿಮ ಆಸರೆಯೆಂದು ಪರಿಗಣಿಸಲಾಗಿದ್ದ ನ್ಯಾಯಾಂಗವು ನಡೆದುಕೊಳ್ಳುತ್ತಿರುವ ರೀತಿ! ಈ ಎಲ್ಲಾ ಪ್ರಕರಣದಲ್ಲೂ ಹಿಂದೂತ್ವವಾದಿಗಳು ಮತ್ತು ಕಾಪರ್ೊರೇಟ್ ಬಂಡವಾಳಶಾಹಿಗಳೂ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ದೇಶದ ಬಹುಸಂಖ್ಯಾತರ ವಿರುದ್ಧ ಬಡವರ ವಿರುದ್ಧ ಅವರ ಹೋರಾಟಗಳ ವಿರುದ್ಧ ಸಾರಾಂಶದಲ್ಲಿ ನಿಜವಾದ ಪ್ರಜಾಸತ್ತೆ ಮತ್ತು ನ್ಯಾಯದ ವಿರುದ್ಧ ಹುಟ್ಟುಹಾಕಿದ ಪ್ರಚಾರಗಳಿಗೆ ಪೂರ್ವಗ್ರಹಗಳಿಗೆ ಬಲಿಯಾಗಿದೆ. ಇದಕ್ಕೆ ಅವರ ವರ್ಗ ಹಾಗೂ ಇತರ ಸಾಮಾಜಿಕ ಹಿನ್ನೆಲೆಗಳೂ ಪೂರಕವಾಗಿ ಕೆಲಸ ಮಾಡಿದೆ.ಡಾ. ಬಿನಾಯಕ ಸೇನರಿಗೆ ನೀಡಿದ ಜೀವಾವಧಿ ಶಿಕ್ಷೆ ಸಾರಾಂಶದಲ್ಲಿ ಪ್ರಜಾತಂತ್ರಕ್ಕೆ ನೀಡಿರುವ ಮರಣದಂಡನೆಯೂ ಆಗಿದೆ. ಆದ್ದರಿಂದಲೇ ಪ್ರಜಾತಂತ್ರದ ಉಳಿವಿಗಾಗಿ ಹೋರಾಡ ಬೇಕೆಂದಿರುವ ಪ್ರತಿಯೊಬ್ಬರೂ ಡಾ. ಬಿನಾಯಕ್ ಸೇನರಿಗೆ ನಿಡಿರುವ ಶಿಕ್ಷೆಯ ವಿರುದ್ದ ರಾಜಿಯಿಲ್ಲದ ಹೋರಾಟಕ್ಕೆ-ಸೇನರನ್ನು ಆರೋಪ ಮುಕ್ತ ಮಾಡುವವರೆಗೆ ಸನ್ನದ್ಧರಾಗುವ ಅಗತ್ಯವಿದೆ.
ಶಿವಸುಂದರ್ - ಲಂಕೇಶ ಬಳಗದ 'ಚಾವರ್ಾಕ್ ಅಂಕಣಕಾರರು'


ಯೋಗವೆಂಬುದು ಶ್ರೀಕೃಷ್ಣನು ಅಜರ್ುನನಿಗೆ ಗೀತೋಪದೇಶದಲ್ಲಿ ಭೋದನೆ ಮಾಡಿದರು. ನಂತರ ಅದೇ ಯೋಗದ ಮೇಲೆ ಪತಂಜಲಿ ಮಹಷರ್ಿಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಜಗತ್ತಿಗೆ ಪರಿಚಯಿಸಿದರು.ಆದರೆ, ಇಂದು ಅದೇ ಯೋಗವನ್ನು ಬಾಬಾ ರಾಮದೇವರವರು ಪ್ರತಿಯೊಬ್ಬರಿಗೂ ಆಸ್ಥಾ ಎಂಬ ಖಾಸಗಿ ವಾಹಿನಿಯ ಮುಖಾಂತರ ಪ್ರತಿಯೊಬ್ಬರ ಮನೆಮನೆಗೆ ಮುಟ್ಟಿಸುತ್ತಿದ್ದಾರೆ.ನಮ್ಮ ದೇಹದಲ್ಲಿ ಅಷ್ಟ ಚಕ್ರಗಳಿರುತ್ತವೆ1)ಮೂಲಧಾರ 2) ಸ್ವಾದಿಷ್ಟಾನ 3) ಮಣಿಪುರ 4) ಅನಾಹಟ್ 5) ಹೃದಯ 6) ವಿಶುದ್ಧಿ 7) ಆಜ್ಞಾ 8) ಸಹಸ್ರಾರ)ಮನುಷ್ಯ ಪ್ರತಿನಿತ್ಯ ಯೋಗವನ್ನು ಮಾಡುವದರಿಂದ ಈ ಅಷ್ಟಚಕ್ರಗಳು ಪ್ರಚೋದನೆಗೊಂಡು ದೇಹದ ಅಂಗಾಂಗಳ ವ್ಯೂಹಗಳು ಸರಿಯಾಗಿ ಕಾರ್ಯನಿರ್ವಹಿಸಿ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಮಾನವನಿಗೆ ಯಾವುದೇ ರೀತಿಯ ದೈಹಿಕ, ಮಾನಸಿಕ ತೊಂದರೆಗಳು ಬರುವುದಿಲ್ಲ. ಆತನ ಆರೋಗ್ಯ ದಿನೇ ದಿನೇ ವೃದ್ಧಿಸತೊಡಗುತ್ತದೆ. ಇದಕ್ಕಾಗಿ ಪ್ರಪಂಚದ ನಾನಾ ಕಡೆ ಸಂಶೋಧನೆ ನಡೆದು ಪುರಾವೆಗಳು ಒದಗಿವೆ.ನಮ್ಮ ದೇಶದಲ್ಲಿ ಹೆಚ್ಚು ಜನರು ಹೃದ್ರೋಗ, ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ಈ ಮೇಲಿನ 3ರೋಗಗಳನ್ನು ಸುಲಭವಾಗಿ ನಿಯಂತ್ರಿಸಬಹುದೆಂದು ಹೇಳಿದೆ. ಅಂದರೆ, ಈ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿಯೇ ನಾವೆಲ್ಲ ಹಿಂದೆ ಬಿದ್ದಿವೆ. ಇನ್ನು ಭಯಾನಕ ಕಾಯಿಲೆಗಳನ್ನು ತಡೆಯಲು ನಾವೇಷ್ಟು ಸಮರ್ಥರಿದ್ದೀವಿ.?ದೇಶದಲ್ಲಿ ಬಾಬಾ ರಾಮದೇವರವರ ಭಾರತ ಸ್ವಾಭಿಮಾನ ಟ್ರಸ್ಟ್ನ್ನು ಹೊರತುಪಡಿಸಿದರೆ, ಇನ್ನುಳಿದ ಯಾವುದೇ ರಾಜಕೀಯ ಪಕ್ಷ, ಸಂಘಟನೆಗಳು ಮಧುಮೇಹ, ರಕ್ತದೊತ್ತಡ, ಹೃದ್ರೋಗದಂತಹ ಸಾಮಾನ್ಯ ರೋಗದಿಂದ ಭಾರತವನ್ನು ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಜೊತೆಯಲ್ಲಿ ಈ 3ರೋಗಗಳನ್ನು ತೊಲಗಿಸಲು ಇಲ್ಲಿಯವರೆಗೆ ಯಾವೊಂದು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಘೋಷಿಸಿಲ್ಲ! (ಈ ದೇಶದ ಪ್ರದಾನಿಯವರಾದ ಡಾ.ಮನಮೋಹನ್ಸಿಂಗ್ರೇ ಖುದ್ದಾಗಿ ಮಧುಮೇಹ ಮತ್ತು ಹೃದ್ರೋಗದಿಂದ ಬಳಲುತ್ತಿದ್ದಾರೆಂದರೆ ಏನರ್ಥ? ಈಗಾಗಲೇ ಅವರೇ 2ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದಾರೆ.)2005ರ ಫೆಬ್ರುವರಿ 11,12,13ರಂದು ಚನೈನಲ್ಲಿ ವಿಶ್ವಮಧುಮೇಹ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅಂದಿನ ಆರೋಗ್ಯ ಮಂತ್ರಿಗಳಾದ ಅನ್ಬುಮಣಿ ರಾಮದಾಸ್ರವರು ಆ ಸಮ್ಮೇಳನದಲ್ಲಿ ಈ ರೀತಿ ಘೋಷಣಿಯನ್ನು ಮಾಡಿದ್ದರು : ಇನ್ನು ಕೇವಲ 3ತಿಂಗಳಲ್ಲಿ ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮವನ್ನು ದೇಶದೆಲ್ಲೆಡೆ ಆಯೋಜಿಸಿ ಸಂಪೂರ್ಣವಾಗಿ ಮಧುಮೇಹವನ್ನು ನಿಯಂತ್ರಿಸುತ್ತೇವೆಂದು ಘೋಷಿಸಿದ್ದರು.ಆ ಘೋಷಣಿ ಇಂದಿಗೂ ಜಾರಿಗೆ ಬರದೇ ಘೋಷಣಿಯಾಗಿಯೇ ಉಳಿದಿದೆ. ದಿನೇ ದಿನೇ ಮಧುಮೇಹಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆಯೇ ವಿನಃ ಇಳಿಕೆಯಂತೂ ಕಾಣುತ್ತಿಲ್ಲ.ಆದರೆ, ಇಂದು ಬಾಬಾ ರಾಮದೇವನಂತವರು ಭಾರತವನ್ನು ರೋಗಮುಕ್ತ, ಪೂರ್ಣ ಸ್ವಾತಂತ್ರ್ಯ ಹಾಗೂ ಭ್ರಷ್ಟಾಚಾರದಿಂದ ಮುಕ್ತಮಾಡಲು ಯೋಗವೆಂದೇ ಸುಲಭ ದಾರಿ ಎಂದು ಘೋಷಿಸಿದ್ದಾರೆ.ಭಾರತ ದೇಶದಲ್ಲಿ ಎಲ್ಲರೂ ಟಿವಿಯನ್ನು ನೋಡುತ್ತಾರೆ. ಮನೋರಂಜನೆಗಾಗಿ ಹಾಡು, ಸಿನಿಮಾಗಳನ್ನೇ ನೋಡುವ ಜನರು ಯೋಗದಂತಹ ಕಾರ್ಯಕ್ರಮಗಳನ್ನು ವೀಕ್ಷಿಸಿರಿ. ಅದರಲ್ಲಿ ಹೇಳುವಂತೆ ಎಲ್ಲರೂ ಯೋಗವನ್ನು ಕಲಿತರೆ ಇಡೀ ಸಮಾಜಕ್ಕೆ ಒಳಿತಾಗುತ್ತದೆ. ಅಮೇರಿಕಾದಂತಹ ದೇಶಗಳಲ್ಲಿ ಯೋಗವು ಒಣಟಣ ಟಟಟಠಟಿ ಆಠಟಟಠಡಿ ಃಣಟಿಜ ಆಗಿದೆ. ಮತ್ತು ತಿಠ ಠತಿಟಿ ಥಿಠರಚಿ ಅನ್ನುವ ಚಚರ್ೆ ನಡೆದಿದೆ. ಎಲ್ಲದರಲ್ಲಿಯೂ ಭಾರತವನ್ನು ಹಿಯ್ಯಾಳಿಸುವ ಅಮೇರಿಕಾವೇ ಭಾರತದ ಯೋಗವನ್ನು ಒಪ್ಪಿಕೊಂಡಿದೆ. ಯೋಗವನ್ನು ಶಾಲಾಮಕ್ಕಳ ಶಿಕ್ಷಣದಲ್ಲಿ ಅಳವಡಿಸಿದರೆ ಒಳ್ಳೆಯದು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳು ಯೋಗವನ್ನು ಕಲಿತಂತಾಗುತ್ತದೆ.ಕಾರಣ ಎಲ್ಲರೂ ದಿನನಿತ್ಯ ಯೋಗವನ್ನು ಮಾಡುವದರೊಂದಿಗೆ ಉತ್ತಮ ದೈನಂದಿನ ಜೀವನವನ್ನು ಸಾಗಿಸಿ ಎಂಬುದೇ ನಮ್ಮಯ ಅಭಿಲಾಷೆ.
ಯೋಗವನ್ನು ದಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಆಗುವ ಅನೇಕ ಲಾಭಗಳು.1) ಮನಸ್ಸಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬಹುದು.2) ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.3) ಮನುಷ್ಯ ದುಶ್ಚಟಗಳಿಂದ ದೂರವಾಗಬಹುದು. ಪ್ರಮುಖವಾಗಿ ಯೋಗ ಮಾಡುವ ಮನುಷ್ಯ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ.4) ರಕ್ತದೊತ್ತಡ, ಮಧುಮೇಹ, ಹೃದ್ರೋಗ ನಿಮರ್ೂಲನೆ ಸಾಧ್ಯ.5) ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳಿದ್ದರೆ ಅವುಗಳು ನಿವಾರಣಿಯಾಗಿ, ಮೂಳೆ, ಮಾಂಸಖಂಡಗಳು ಶಕ್ತಿಯುತವಾಗುತ್ತವೆ.6) ಶ್ವಾಸಕೋಶ, ನಾಳ ಮತ್ತು ನಿನರ್ಾಳ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುವವು.7) ದೃಷ್ಟಿಯು ತೀಕ್ಷ್ಣವಾಗುವುದು ಮತ್ತು ನಿದ್ರಾಹೀನೆತೆಯೂ ದೂರವಾಗುವುದು.8) ವಿಶೇಷವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಡಾ.ರವೀಂದ್ರನಾಥ ಈರಪ್ಪ ಮಾವಿನಕಟ್ಟಿ.

ಸ್ವಾತಂತ್ರ್ಯ ಪೂರ್ವದ ಹೋರಾಟಗಾರ, ಕವಿ ಮುಖ್ದೂಂ ಮೊಹಿನುದ್ದೀನ್.

ಸ್ವಾತಂತ್ರ್ಯ ಪೂರ್ವದ ಹೋರಾಟಗಾರ, ಕವಿ ಮುಖ್ದೂಂ ಮೊಹಿನುದ್ದೀನ್. ಅಂದು 1908ರ ವರ್ಷ ಭಾರತ ಕಾಮರ್ಿಕ ವರ್ಗದ ಒಂದು ಐತಿಹಾಸಿಕ ಚಳವಳಿಯ ಫ್ರಧಾನ ಘಟ್ಟ. ಇದೇ ವರ್ಷದಲ್ಲಿ ಬ್ರಿಟಿಷರು ಶ್ರೀ ಲೋಕಮಾನ ತಿಲಕರ ನಿರ್ಭಂದಿಸಿದ ಪರಿಣಾಮವಾಗಿ ಬಾಂಬೆ ಕಾಮರ್ಿಕರು ಬೀದಿಗಿಳಿದು, ತಮ್ಮ ವರ್ಗ ಶಕ್ತಿ ಪ್ರದಶರ್ಿಸಿ,ಚರಿತ್ರೆಯನ್ನು ನಿಮರ್ಿಸಿದರು. ರಷ್ಯಾದ ವಿ.ಐ ಲೆನಿನ್ ಅವರು ಭಾರತದ ಕಾಮರ್ಿಕ ವರ್ಗಕ್ಕೆ ತಮ್ಮ ಕ್ರಾಂತಿಕಾರಿ ಸಂದೇಶಗಳನ್ನು ಕಳುಹಿಸಲಾಗಿತ್ತು. ಅದೇ ವರ್ಷ ಪೆಬ್ರುವರಿ 04 ರಂದು ತೆಲಂಗಾಣ ಪ್ರಾಂತ್ಯದ ಮೆದಕ್ ಜಿಲ್ಲೆಯ ಒಂದು ಕುಗ್ರಾಮದಲ್ಲಿ ಮಖ್ದೂಂ ಜನಿಸಿದರು.ಮಖ್ದೂಂ ಇಂದು ಇಲ್ಲಾ, ಆದರೆ ಅವರ ಕ್ರಾಂತಿಕಾರಿ ಕಾರ್ಯಕಲಾಪಗಳು, ಸಾಹಿತ್ಯ ಕೃಷಿ ಸಾದನೆ,ಅವರ ಮಧುರ ಸ್ಮೃತಿಗಳೂ ಮಾತ್ರ ಇಂದಿಗೂ ನಿತ್ಯ ವಸಂತನೀಯವಾಗಿ ನಿಂತಿವೆ.ಜಾತಸೃಹಿ ಧೈವೋಮೃತ್ಯು ಅನ್ನೋ ಸೂತ್ರ ಇಂತಹ ವ್ಯಕ್ತಿಗಳಿಗೆ ಸೂಕ್ತವಲ್ಲದ್ದು. ಬದಲಿಗೆ ಇಂತಹ ವ್ಯಕ್ತಿಗಳಿಗೆ ಜನನವೇ ಹೊರತು ಮರಣವಿಲ್ಲ ತಮ್ಮ ಕೃತಿಗಳ ದ್ವಾರ ಇಂದಿಗೂ ಸಮಾಜದಲ್ಲಿ ಇವರು ಚೀರಂಜೀವಿ.ಒಬ್ಬ ಪ್ರಮುಖ ನಾಯಕ ಶಾಶ್ವತವಾಗಿ ನಮ್ಮನ್ನಗಲಿ ಹೋದ ಒಬ್ಬ ಪ್ರೇಮಿಸುವ ತಂದೆ ಆದರ್ಶನೀಯ ಆಚಾರ್ಯ ತನ್ನ ಅಭಿಮಾನಿಗಳೆಲ್ಲರನ್ನು ದುಃಖ ಸಾಗರದಲ್ಲಿ ಮುಳುಗಿಸಿದ. ಇದು 1969 ಆಗಸ್ಟ್ 25 ರಂದು ಮಖ್ದೂಂ ರ ಮರಣದ ವಿಷಾದ ಸುದ್ದಿ ಕೇಳಿದ ಪ್ರಜೆಗಳು ವ್ಯಕ್ತಪಡಿಸಿದ ಮನೋಬಾವನೆಗಳು. ಇಷ್ಟಕ್ಕೂ ಈ ಮಖ್ದೂಂ ಯಾರು...?ಖ್ಯಾತ ಫಿರ್ಮೋದ್ಯಮಿ ಹಾಗೂ ಉದರ್ು ಲೇಖಕ ಖ್ವಾಜ ಅಹಮದ್ ಅಬ್ಬಾಸರು ಮಖ್ದೂಂ ಮೋಹಿಯುದ್ದೀನ್ರ ಬಗ್ಗೆ ಈ ಸಾಲುಗಳು......
ಒಚಿಞಜಠಠಟ ತಿಚಿ ಚಿ ರಟಠತಿಟಿರ ಜಿಟಚಿಟಜ ಚಿ ತಿಠ ಣಜ ಛಿಠಠಟ ಜಡಿಠಠಿ ಠಜಿ ಜಜತಿ. ಊಜ ತಿಚಿ ಣಜ ಛಿಚಿಟಟ ಠಜಿ ಡಿಜತಠಟಣಣಠಟಿ ಚಿ ತಿಠ ಣಜ ಣಟಿಞಟಟಿರ ಟಣಛಿ ಠಜಿ ಣಜ ಠಿಚಿಥಿಚಿಟ. ಊಜ ತಿಚಿ ಞಟಿಠತಿಟಜಜರಜ, ಜ ತಿಚಿ ತಿಜಠಟ, ಜ ತಿಚಿ ಚಿಛಿಣಠಟಿ, ಜ ತಿಚಿ ಣಜ ರಣಟಿ ಠಜಿ ಡಿಜತಠಟಣಣಠಟಿಚಿಡಿಥಿ ರಣಜಡಿಟಟಚಿ ಚಿಟಿಜ ಣಜ ಣಚಿಡಿ ಠಜಿ ಟಣಛಿಚಿಟಿ.ಊಜ ತಿಚಿ ಠಜಠಣಡಿ ಠಜಿ ಣಜ ರಣಟಿ ಠಿಠತಿಜಜಡಿ ಚಿಟಿಜ ತಿಠ ಣಜ ಜಿಡಿಚಿರಚಿಟಿಛಿಜ ಠಜಿ ರಿಚಿಟಟಿಜ.
ಮಖ್ದೂಂ ಉರಿಯುವ ಕೊಳ್ಳಿಯಾಗಿದ್ದರು, ಮಂಜಿನ ಹನಿಯಾಗಿದ್ದರು, ಕ್ರಾಂತಿಯ ಕರೆಯೂ ಆಗಿದ್ದರು, ಒಂದೆಡೆ ಕ್ರಾಂತಿಕಾರಿಗಳ ಕೋವಿಯಾದರೆ ಇನ್ನೊಂದೆಡೆ ಸಂಗೀತಗಾರನ ಕೈಯ ವಾದ್ಯವಾಗಿದ್ದರು ; ಮದ್ದು ಗುಂಡುಗಳ ವಾಸನೆಯಾಗಿದ್ದರೆ ಇನ್ನೊಂದೆಡೆ ಮಲ್ಲಿಗೆಯ ಪರಿಮಳವಾಗಿದ್ದರು ; ಮಖ್ದೂಂರು ಅವರೊಬ್ಬ ಬಹುರೂಪಿ ಪರಿಪಕ್ವ ಮಾನವ, ಮನುಷ್ಯ..... ತಮ್ಮ ಜೀವಂತವೆಲ್ಲಾ ನಿಶ್ವಾರ್ಥ ಪ್ರಜಾ ಸೇವೆಯನ್ನೆ ಕಲಿತ ಮನು ಕುಲದ ಮಹಾಕವಿ, ವಿಶ್ವ ಮಾನವ ಮಖ್ದೂಂ ಮೋಹಿಯೂದ್ದೀನ್... ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮಖ್ದೂಂರ ಪೂರ್ಣ ಹೆಸರು ಅಬು ಸಯ್ಯದ್ ಮಖ್ದೂಂ ಮೋಹಿಯುದ್ದೀನ್ ಖ್ವಾದಿ ಖ್ವಾದಿ ಅವರ ಮನೆತನದ ಹೆಸರು [ಪ್ರವಾದಿ ಮಹ್ಮದರ ನಿಕಟ ಸಂಗಾತಿ ಆಗಿದ್ದ ಅಬು ಸಯ್ಯದ್ ಖ್ವಾದಿ ಅವರ ವಂಶಸ್ಥರು] ಮಖ್ದೂಂರ ತಂದೆ ಗೌಸ್ ಮೋಹಿಯುದ್ದೀನ್ ಮೆದಕ್ ಜಿಲ್ಲೆಯ ತಹಸೀಲ್ ಕಛೇರಿಯ ಶಿರಸ್ಥೇದಾರರಾಗಿದ್ದರು. ನನ್ನ ಚಿಕ್ಕಂದಿನಲ್ಲಿ ಚಕ್ಕಂದು ಎಂಬುವುದೇ ಇರಲಿಲ್ಲ ಎಂದು ಜಗತ್ತು ಪ್ರಸಿದ್ದಿ ರಷ್ಯಾದ ಕಥೆಗಾರ ಆಂಟಿನ್ ಚಕೋವರರ ಈ ಸಾಲುಗಳು ಮಖ್ದೂಂರ ಬಾಲ್ಯದ ಸಂತೋಷ ಸಂವೃದ್ದ, ಚಿನ್ನಾಟ, ಚೆಲ್ಲಾಟ ಹಾಗೂ ಸ್ವಚ್ಛಂದ ನಿಶ್ಚಿಂತೆ ಯಾವುದು ಅವರ ಪಾಲಿಗೆ ಇರಲಿಲ್ಲ. ಮಖ್ದೂಂರಿಗೆ ನಾಲ್ಕು ವರ್ಷಗಳು ತುಂಬಿರಲಿಲ್ಲ ತಂದೆ ತೀರಿ ಹೋದರು. ಅವರ ನಿದನ ನಂತರ ತಾಯಿ ಪುನರ್ ಮದುವೆಯಾದರು. ದುರಂತವೆಂದರೆ ತನ್ನ ತಾಯಿ ಬದುಕಿರುವುದು ಎಷ್ಟೋ ವರ್ಷಗಳೂ ಗತಿಸಿದರೂ ತಿಳಿದಿರಲಿಲ್ಲ. ಇವರನ್ನು ಚಿಕ್ಕಪ್ಪ ಬಷೀರುದ್ದೀನ್ ಧಾಮರ್ಿಕ ಪರಿಸರದೊಂದಿಗೆ ಬೆಳೆಸಿದರು. ಮಖ್ದೂಂರು ಸಂಗಾರೆಡ್ಡಿ ಜಿಲ್ಲೆಯಿಂದ ಮೆಟ್ರಿಕ್ಯುಲೇಷನ್ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೈದ್ರಾಬಾದ್ಗೆ ಬಂದಾಗ ಅವರ ವಯಸ್ಸು 30 ವರ್ಷಗಳು. ಹೈದ್ರಾಬಾದ್ನ ನಿಜಾಮನಿಗೆ ಎಲ್ಲಾ ವಿಧ್ಯಾಗಳ ಚರ್ಕವತರ್ಿ ಎಂದು ಬಿರುದುಗಳು ಹೊಂದಿದ್ದರೋ ಶಿಕ್ಷಣದ ಅನುಕೂಲತೆಗಳ ಅಭಾವ ತಾಂಡವಾಡುತ್ತಿತ್ತು. ಸಾಮಾನ್ಯವಾಗಿ ಜಿಲ್ಲೆಗೆ ಒಂದರಂತೆ ಹೈಸ್ಕೂಲುಗಳು ಮಾತ್ರ ಕಾಣುತ್ತಿದ್ದವು. ದೇಶವು ಆಗ ಬ್ರಿಟಿಷ್ರ ದಬ್ಬಾಳಿಕೆಯಲ್ಲಿ ನರಳುತ್ತಿತ್ತು.ಯುವ ಉತ್ಸಾಹಿಗಳಿಂದ ರವಿ ನಾರಾಯಣರೆಡ್ಡಿ ಮತ್ತು ಬದ್ದಾಂ ಯಲ್ಲಾರೆಡ್ಡಿ ಬ್ರಿಟಿಷ್ ಭಾರತದಲ್ಲಿ ಸತ್ಯಾಗ್ರಹ ಕೈಗೊಂಡಿದ್ದರು. ಆಲಿಘಡ್ ವಿಶ್ವವಿದ್ಯಾನಿಲಯದ ಅಕ್ಬರ್ ಅಲಿಖಾನ್, ಪ್ರೋ ಇರಪಾನ್ ಹಬೀಬ್ ಮುಂತಾದ ಮುಖಂಡರು ವಿದ್ಯಾಥರ್ಿ ಚಳುವಳಿಯಲ್ಲಿ ಭಾಗವಹಿಸಿದ್ದರು. ಇವೆಲ್ಲವೂ ಹೈದ್ರಾಬಾದ್ನ ಯುವಕರ ಮೇಲೆ ಪ್ರಭಾವ ಉಂಟು ಮಾಡಿದ್ದವು. ಅಂದಿನ ದಿನಗಳಲ್ಲಿ ನಿಗಾರ್ ಮಾಸ ಪತ್ರಿಕೆ [ಉದರ್ು] ನಿಯಾಜ್ ಪತ್ತೇಪುರಿ ಮುಸ್ಲಿಂ ಯುವಕರನ್ನು ಬಡಿದೆಬ್ಬಿಸುವಂತಹ ಲೇಖನಗಳನ್ನು ಬರೆಯುತ್ತಿದ್ದರು. 1933-34 ರ ಸುಮಾರಿಗೆ ಮಖ್ದೂಂರು ಈ ಎಲ್ಲಾ ಪ್ರಭಾವಗಳಿಗೆ ಒಳಗಾಗಿ ಕಾವ್ಯ ಜಗತ್ತಿಗೆ ಕಾಲಿರಿಸಿದ್ದು ಅವರ ಕಾವ್ಯ ಪ್ರತಿಭೆ ನಯವಾದ ನವರಾಗ, ಭಾವಗೀತೆಗಳಿಂದ ಸಾಮ್ರಾಜ್ಯವಾದ, ಫ್ಯಾಸಿಸಂ, ಬಡತನ, ಬರ್ಬರತೆ, ವೇಶ್ಯವೃತ್ತಿ ಹಾಗೂ ಅಧಃ ಪತನಗಳ ವಿರುದ್ದದ ಪ್ರಕ್ಷುಬ್ದ ಸುಳಿಯಲ್ಲಿ ಸಿಕ್ಕಿತು. ಈ ಅವದಿಯಲ್ಲಿ ಉದಯೋನ್ಮುಖ ಬುದ್ದಿಜೀವಿಗಳಿಗೆ ತಾವು ಅನುಸರಿಸಲಿರುವ ಹೊಸ ಹಾದಿಯನ್ನು ಸೂಚಿಸುವ ಉದ್ದೇಶ ಹೊಂದಿರುವ ಪುರೋಗಾಮಿ ಲೇಖಕರ ಸಂಘಟನೆ ಜನ್ಮ ತಾಳಿತು. ಅವರಲ್ಲಿ ಹೊಸ ಆಶಯಗಳ ಅಲೆಯನ್ನೇಬ್ಬಿಸಿತು. ಮಖ್ದೂಂರು ಆಗಲೇ ತಮ್ಮ ಅಶಿಷ್ಟದಾ ತೆಲಂಗಾಣ ಇಂತಜಾರ್ ಕವನ ಸಂಕಲನಗಳಿಂದ ಖ್ಯಾತಿ ಹೊಂದಿದ್ದರು. ಅವರ ಕಾವ್ಯ ಈಗ ಹೊಸ ತಿರುವು ಪಡೆಯುವದರೊಂದಿಗೆ ಸಾಮ್ರಾಜ್ಯವಾದದ ವಿರುದ್ದ ಉರಿಯುವ ಪಂಜಿನಂತೆ ಕವನಗಳನ್ನು ಬರೆದರು. ಶೂನ ಫಾಗ್ ಫೂರ್ ಆಜಾದಿ-ಏ-ವತನ್ ಕವನಗಳು ಭಾರತದ ಭವಿಷ್ಯವನ್ನೇ ಬದಲಿಸುವ ಯುವ ಜನರಿಗೆ ಕರೆ ನೀಡಿದವು. ಹವೇಲಿ ಎಂಬ ಕವನದಲ್ಲಿ ಅವರು ಊಳಿಗಮಾನ್ಯ ಶಾಹಿಪದ್ದತಿಯ ಹಾಗು ಅದರಮೌಲ್ಯಗಳವಿರುದ್ದ ಸಾವಿನ ಸೆಳೆತದಲ್ಲಿ ವಿಕೃತ ಸಮಾಜವು ಸತ್ತವರಿಂದೆಲ್ಲ ಕಪ್ಪು ಪಡೆಯುತ್ತಿದೆ.ಸುತ್ತ ಎಲ್ಲಾ ಕಡೆಗೂ ಕತ್ತಲು,ಸಂಕಟ,ವಿನಾಶ ಇವೆ.ಗೋಡೆಯ ಈ ಬಿರುಕಿನಲ್ಲಿ ಎಂಥ ಕತ್ತಲೇ!ಭಯಾನಕ!ಅಲ್ಲಿ ಹಾವುಗಳು, ಚೇಳುಗಳು ಸೇರಿ ಮನೆ ಮಾಡಿವೆ.ಬಡ್ಡಿಕೋರ ಸಾಹುಕಾರ ಮಹಾಜನರಿಗೆ,ಮತಾಂಧ ಬ್ರಾಹ್ಮಣನಿಗೆಡಾಂಭಿಕ ಮುಲ್ಲಾನಿಗೂ ಆಶ್ರಯ ನೀಡಿದೆ.ಎಂದು ತಮ್ಮ ಕತ್ತಿ ಝಳಿಸುತ್ತಾರೆ. ಮೌತ್ ಕಾ ಗೀತ [ಸಾವಿನ ಹಾಡು] ದಲ್ಲಿ ಉಳಿಗಮಾನ್ಯ ಪದ್ದತಿ ಹಾಗು ಸಾಮ್ರಾಜ್ಯವಾದದ ಅಧಃ ಪತನಗಳ ವಿರುದ್ದ ತುಂಬ ಹರಿತವಾದ ವಿಡಂಬನೆ ಬಳಸಿದ್ದಾರೆ. ಆ ಕವನದಲ್ಲಿ ಭೂಕಂಪಗಳಿಗೆ, ಮಿಂಚಿಗೆ, ವಿನಾಶದ ದಾಳಿಗಳಿಗೆ, ಭಯಂಕರ ಸಿಡಿಲುಗಳಿಗೆ, ಜ್ವಾಲಾಮುಖಿಗಳ ಲಾವಾರಸಕ್ಕೆ ಎಲ್ಲದಕ್ಕೂ ಔತಣ ನೀಡಿ, ವರ್ತಮಾನದ ಈ ವಿದ್ರೂಪವನ್ನು ಅಳಿಸಿ ಹಾಕಿ, ರೋಗಗ್ರಸ್ತ ಸಮಾಜದ ಅವಶೇಷಗಳ ಮೇಲೆ ಸುಂದರ ಭವಿಷ್ಯ ಕಟ್ಟಲು ಕರೆಕೊಟ್ಟಿದ್ದಾರೆ. ಮಖ್ದೂಂ ಮೋಹಿಯುದ್ದೀನ್ರ ಪ್ರೇರಣೆಯಿಂದ 1936-38ರಲ್ಲಿ ಯುವ ಉತ್ಸಾಹಿಗಳು ಸಂಗಾತಿಗಳ ಕೂಟ ಎಂಬ ಸಂಘಟನೆಯನ್ನು ಕಟ್ಟಿದರು. 1939ರಲ್ಲಿ ಸಾಮ್ರಾಜ್ಯವಾದಿ ಯುದ್ದ, ಬಂಡವಾಳವಾದದ ವಿರುದ್ದ ತಮ್ಮ ಹರಿತವಾದ ಲೇಖನಿಯನ್ನು ಎತ್ತಿದರು. ಈ ಅವಧಿಯಲ್ಲಿ ಜಲ್ವೇ ಜಲಾವ್ ಮತ್ತು ಸಿಫಾಯಿ ಖ್ಯಾತ ರಚನೆಯಾಗಿದ್ದವು.1941ರಲ್ಲಿ ಹಿಟ್ಲರ್ ರಷ್ಯಾದ ಮೇಲೆ ದಾಳಿ ನಡೆಸಿದಾಗ ಯುದ್ದವು ಹೊಸ ತಿರುವನ್ನು ಪಡೆಯಿತು. ಆಗ ಮಖ್ದೂಂರು ರಚಿಸಿದ ಪ್ರಸಿದ್ದ ಕವನ ಅಂಧೇರಾ ಇದರಲ್ಲಿ ಮಖ್ದೂಂರು ತಮ್ಮ ರೋಷವನ್ನೆಲ್ಲಾ ಹರಿಬಿಟ್ಟರು.ನಾಗರೀಕತೆಯ ಸೀಳಿ ಬಾಯ್ದೆರೆದ ಗಾಯಗಳುಕಂದಕಗಳು, ಮುಳ್ಳು ಬೇಲಿಅವುಗಳಲ್ಲಿ ಸಿಗಿಬಿದ್ದ ಮನುಷ್ಯ ದೇಹಗಳು ಮನುಷ್ಯರ ಶವಗಳ ಮೇಲೆ ಕುಳಿತ ರಣಹದ್ದುಗಳು ಛಿದ್ರ, ವಿಚ್ಛಿದ್ರಗೊಂಡ ಮೃತ ದೇಹಗಳು ಅತ್ತಿತ್ತ ಬಿದ್ದ ಅಂಗಾಂಗಗಳು ಒಂದು ಶವದಿಂದ ಇನ್ನೊಂದರವರೆಗೂ ತಣ್ಣಗಿನ ಗಾಳಿ ಬೀಸುತ್ತದೆ.ದುಃಖಿಸುತ್ತಎಂದು ಫ್ಯಾಸಿಸಂನ ವಣರ್ಿಸುತ್ತ....ರಾತ್ರಿಗೆ ಕತ್ತಲೆಯನ್ನುಳಿದು,ಕೊಡಲು ಇನ್ನೇನಿಲ್ಲಇರುಳಿನ ಹಣೆಯ ಮೇಲೆ ಸೇರಿದ ಈ ವಾಕ್ಚುಲನಕ್ಷತ್ರಗಳು,ಶುಭ್ರ ಸೂರ್ಯನ ಬರುವಿನೊಂದಿಗೆಕಣ್ಮರೆಯಾಗುತ್ತವೆ.ಎಂದು ಕ್ರಾಂತಿಕಾರಿ ವಿಚಾರಗಳೊಂದಿಗೆ ಕವನ ಮುಗಿಸುತ್ತಾರೆ. ಆ ತರುವಾಯ ಬಂದದ್ದು ಪ್ರಖ್ಯಾತ ಕವನ ಸ್ಟಾಲಿನ್-ಇ-ಆವಾಜ್ ಖ್ಯಾತ ತಾಜುರ್ ಕವಿ ಜಂಬೂಲ್ ಜುಬೇರ್ರ ಕವನದ ಮುಕ್ತ ಅನುವಾದ. ಅದೊಂದು ಶಕ್ತಿಶಾಲಿ ಕವನವಾಗಿದೆ. ಅದರಲ್ಲಿಯ ಶಬ್ದಗಳು ಸತ್ವ ಪೂರ್ಣವಾಗಿದ್ದು ಕೇಳುಗರ ಹೃದಯವನ್ನು ಹಿಡಿದು ಅಲುಗಾಡಿಸುವಂತಿದೆ. ಸಾಮ್ರಾಜ್ಯವಾದಿ ಶೋಷಣೆ ಮತ್ತು ಭಾರತದ ಸಾಮಾಜಿಕ ನೇಯ್ಗೆಯನ್ನು ನಾಶ ಮಾಡಿದ ದುರ್ಜನರ ಬಗೆಗಿನ ಅವರ ರೋಷವನ್ನು ಬಂಗಾಲದ ಬರಗಾಲ ಕುರಿತು ಬರೆದ ಕವನ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಅದು ದೇವರದೇ ಜಾತಿಯಾಗಿರಲಿ,ಮುಸ್ಲಿಂರೇ ಅಥವಾ ಪವಿತ್ರವಾದ ಬ್ರಾಹ್ಮಣರೇ ಇರಲಿ,ಅವರು ಹಸಿವನ್ನು ಅಳೆಯಲಾಗದುಅವರ ಶವಗಳನ್ನು ಎಣೆಸಲಾಗದು.ಈ ಘಟ್ಟದಲ್ಲಿ ಮಖ್ದೂಂರು ತಮ್ಮ ಸಕರ್ಾರಿ ಸಿಟಿ ಕಾಲೇಜಿನ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ, ಪೂಣರ್ಾವಧಿ ಕಮ್ಯೂನಿಷ್ಟ್ ಕ್ರಾಂತಿಕಾರಿಗಳ ಗುಂಪಿಗೆ ಸೇರಿದರು.ಆ ಸಮಯದಲ್ಲಿ ರಾಷ್ಟ್ರೀಯ ಮುಖಂಡರನ್ನು ಸೆರೆ ಹಿಡಿಯುವದನ್ನು ವಿರೋದಿಸಲು ಏರ್ಪಟ್ಟ ಒಂದು ಸಾರ್ವಜನಿಕ ಸಭೆಯೊಂದರಲ್ಲಿ ಮಖ್ದೂಂರು ಲಿನ್ ಲಿಥಗೋ ತನ್ನ ಬಾಲ ಅಲ್ಲಾಡಿಸುತ್ತಾ ಯುದ್ದವನ್ನು ಯಶಸ್ವಿ ನಡೆಸುವಂತೆ, ಭಾರತವನ್ನು ಮುನ್ನಡೆಸಲಾರ ಎಂದು ಗುಡುಗಿದ್ದರ ನಿಮಿತ್ಯ ಬ್ರಿಟಿಷ್ರ ಗುಲಾಮಿ ನಿಜಾಂನು ಅವಿವೇಕನೆಂದು ವಿಚಾರಣೆಗೆ ಒಳಪಡಿಸಿ ಜೈಲುವಾಸ ಹಾಗೂ ದಂಡ ವಿದಿಸಿದ್ದನು. ಜೈಲ್ನಲ್ಲಿ ಕಾಂಗ್ರೇಸ್ ಮುಖಂಡರುಗಳಾದ ಆರ್.ಎನ್.ದಿವಾನ್, ಬಿ.ಸಿ.ಚೌದ್ರಿ, ಅಚ್ಚುತ್ರಾವ್ ದೇಶಪಾಂಡೆ, ಸ್ವಾಮಿ ರಮಾನಂದ ತೀರ್ಥರ ಪರಿಚಯ ಮಖ್ದೂಂರಿಗೆ ಆಯಿತು. 40 ರ ದಶಕದ ಪೂರ್ವದಲ್ಲೇ ಯುವ ಟ್ರೇಡ್ ಯೂನಿಯನ್ ಕಾರ್ಯಕರ್ತರ ನೇತೃತ್ವ ವಹಿಸುತ್ತಾ ಅನೇಕ ಕಾಮರ್ಿಕ ಹೋರಾಟಗಳ ಅಲೆಯನ್ನೇ ಎಬ್ಬಿಸಿದರು.1941ರಲ್ಲಿ ಹೈದ್ರಾಬಾದಿನ ಚಾರ್ಮಿನಾರ ಸಿಗರೇಟಿನ ವಜೀರ್ ಸುಲ್ತಾನ ಪ್ಯಾಕ್ಟರಿ ವ್ಯಾಜ್ಯದಲ್ಲಿ ಕಾಮರ್ಿಕರ ಪ್ರತಿನಿದಿಯಾಗಿ ಸಂದಾನದ ಮಾತುಕತೆಗಳಲ್ಲಿ ಭಾಗವಹಿಸಿದರು. ಆಗಲೇ ಮಖ್ದೂಂರು ಆಲ್ ವಿನ್ ಮೆಟಲ್ ಕಾಮರ್ಿಕರ ಮುಷ್ಕರದ ನೇತೃತ್ವ ವಹಿಸಿದ್ದರು. ಕಾಮರ್ಿಕರ ಹಿತೈಷಿಯಾಗಿ ಸಿಂಗರೇಣೆ ಗಣಿ ಕಾಮರ್ಿಕರ ಸಂಘ, ಹೈದ್ರಾಬಾದ್ ಕನರ್ಾಟಕದ ಗುಲ್ಬಗರ್ಾ ಜಿಲ್ಲೆಯ ಶಹಬಾದ್ ಸಿಮೆಂಟ್ ಕಾಮರ್ಿಕರ ಸಂಘ, ಹಾಗೂ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣೆ ಕಾಮರ್ಿಕರ ಸಂಘಗಳ ಸಂಸ್ಥಾಪಕರಾಗಿದ್ದರು.ಹೈದ್ರಾಬಾದ್ ನಗರದಲ್ಲಿ ಮುನ್ಸಿಪಲ್ ಕಾಮರ್ಿಕ ಸಂಘದ ಅಧ್ಯಕ್ಷರಾಗಿದ್ದರು. ಮತ್ತು ಹಿರಿಯ ಕಾಮರ್ಿಕ ಮುಖಂಡ ಎಸ್.ಎಂ.ಜೋಷಿಯವರು 16-08-1946ರಂದು ಉದ್ಘಾಟಿಸಿದ ಅಖಿಲ ಹೈದ್ರಾಬಾದ್ ಟ್ರೇಡ್ ಯೂನಿಯನ್ ಕಾಂಗ್ರೇಸ್ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 40ರ ದಶಕದಲ್ಲಿ ಹೀಗೆ ಟ್ರೇಡ್ ಯೂನಿಯನ್ಗಳನ್ನು ಕಟ್ಟುತ್ತಾ, ಬೆಳೆಸುತ್ತಾ, ತೆಲಂಗಾಣದ ಸಶಸ್ತ್ರ ಹೋರಾಟಗಳನ್ನು ಬೆಂಬಲಿಸುತ್ತಾ ತಮ್ಮ ರಾಜಕೀಯ ಮುನ್ನುಗ್ಗುವ ಸಮಯದಲ್ಲಿ ನಿಜಾಂನ ದಬ್ಬಾಳಿಕೆ ಹಾಗೂ ಹಿಂಸಾಚಾರಗಳ ವಿರುದ್ದ ಹೋರಾಟಗಳನ್ನು ಭೂಗತವಾಗಿ ನಡೆಸಿದರು. ತಮ್ಮ ಭೂಗತವನ್ನು ಗುಲ್ಬಗರ್ಾದ ಶಹಬಾದ್ ಸಿಮೆಂಟ್ ಕಾಮರ್ಿಕರ ಮದ್ಯೆ ಕಳೆದರು. ಸೊಲ್ಲಾಪೂರ, ಮುಂಬೈಗೆ ತೆರಳಿ ತಮ್ಮ ಕಾಮರ್ಿಕ ಚಳುವಳಿಗಳನ್ನು ಕಟ್ಟುತ್ತಾ ಮುಂಬೈಯಿಂದಲೇ ತಮ್ಮ ಇನ್ನೊಂದು ಕವನ ತೆಲಂಗಾಣ ರಚಿಸಿದರು.ಕಾಡುಗಳಲ್ಲಿ ಹುಟ್ಟಿದ ಮಕ್ಕಳೇಬೆಟ್ಟಗಳೂ, ಹೊಲಗಳೂ ಎಚ್ಚರಗೊಂಡಿವೆತಮ್ಮೆಲ್ಲರ ಖಡ್ಗಗಳುಹೊಳೆದಿವೆ ಕುಡುಗೋಲುಗಳುನೇಗಿಲ ಎತ್ತರಕ್ಕೆ ಎದ್ದಿವೆಊಳಿಗರ ಅಡಿಪಾಯಗಳು ಅಲುಗಿವೆದೊರೆ ಮಕ್ಕಳ ಅರಮನೆಗಳು ನಡುಗುತ್ತಿವೆಹಲಕಾಗಳ,ನಿಜಾಂರ ಆಳ್ವಿಕೆ ಕುಸಿಯುತ್ತಿದೆ.ಹಾಗೂ ಇಡೀ ನಿಜಾಂನ ನಿರಂಕುಶವಾದದ ವಿರುದ್ದ ಚಾರ ಮೀನಾರ್ ಎನ್ನುವ ಕೃತಿ ರಚಿಸಿದ್ದನ್ನು ನಿಜಾಂ ಪ್ರಭುತ್ವ ಮೇ 1947ರಲ್ಲಿ ಕೃತಿ ನಿಷೇದಿಸಿ ಆದೇಶ ಹೊರಡಿಸಿತು. ಪುನಃ ಹೈದ್ರಾಬಾದಗೆ ಮರಳಿ ನಿಜಾಂನ ವಿರುದ್ದ ಭೂಗತ ಹೋರಾಟಗಳನ್ನು ಕಟ್ಟಿದರು. 1948ರಲ್ಲಿ ಪರಿಸ್ಥಿತಿ ಭಾರತ ಸೈನ್ಯದ ಸಹಾಯದಿಂದ ಜನರ ಚಳುವಳಿಯನ್ನು ದಮನ ಮಾಡಿ ನಿಜಾಂ ಸಕರ್ಾರ ಭಾರತದಲ್ಲಿ ವೀಲಿನವಾಗಿ ಉರುಳಿತು. 1951ರಲ್ಲಿ ಆಂತರಿಕ ರಾಜಕೀಯ ಭಿನ್ನತೆ ಹಾಗು ದಸ್ತಗಿರಿ ಅನುಭವಿಸಿದರು. ಅಂದು ಜೈಲಿನಲ್ಲಿ ಕೈದ್ [ಕೈಸೆರೆ] ಎಂಬ ಕವಿತೆಯನ್ನು ರಚಿಸಿದರು.ಕೈಸೆರೆಯಾದ ತರುಣನ ಕನಸುಗಳು ಮಲುಗುತ್ತವೆ.ಸರಪಳಿಯ ತೋಳಗಳಲ್ಲಿಬೇಡಿಗಳ ಗಲಗಲ ಶಬ್ದ ಖೈದಿಗಳನ್ನು ಬದಲಿಸುತ್ತದೆ ನಿದ್ದೆಯಲ್ಲೂ ಉಕ್ಕುವ ಬಾಳಿನತ್ತ ಕೈ ಮಾಡುತ್ತದೆನನ್ನ ಒಂದೇ ದುಃಖವೆಂದರೇ, ನನ್ನ ಜೀವನದ ಬೆಲೆಯುಳ್ಳ ವರ್ಷಗಳ ಅಪಾರ ನಿಧಿಯೂ ಸೆರೆ ಮನೆಗಳ ಗೋಡೆಗಳ ಹಿಂದೆ ಕಳೆದು ಹೋಯಿತ್ತಲ್ಲಾ...ಎಂದು ಇದು ಇನ್ನೊಂದು ಸೆರೆಮನೆಯಾಗಿದ್ದ ನನ್ನ ದೇಶದ ಬಂಧನದ ಶೋಷಣೆಗಳನ್ನೊಡೆದು ಹುಡಿಗೊಡಿಸಲುಸಮಪರ್ಿಸಲಿಲ್ಲವಲ್ಲಾ ಎಂದು.ಹೋರಾಡುವ ತನ್ನ ಜನರೊಂದಿಗೇ ತಾವು ಇರಬೇಕೆಂಬ ಅವರ ಹಂಬಲ ಈ ಕವನದ ಉದ್ದಕ್ಕೂ ಕಾಣುತ್ತದೆ. ನಿರಂಕುಶ ಪ್ರಭುಗಳ ವಿರುದ್ದ ಹೋರಾಡುತ್ತಿರುವ ಮಿಲಿಯಾಂತರ ಜನರ ಆಶಯಗಳಿಗೆ ಮಖ್ದೂಂರ ಹೃದಯ ಸ್ಪಂದಿಸುತ್ತಿತ್ತು.1952ರಲ್ಲಿ ಜೈಲಿನಿಂದ ಬಿಡುಗಡೆ ಹೊಂದಿ ಹೈದ್ರಾಬಾದ್ ನಗರದ ಪ್ರಥಮ ಚುನಾವಣೆಯಲ್ಲಿ ಸೋತರು. ಹುಜೂರ್ ನಗರದಿಂದ ಅಸೆಂಬ್ಲಿಗೆ ಗೆದ್ದರು. 1953ರಲ್ಲಿ ವಿಯಟ್ನಾಂದಲ್ಲಿ ವಿಶ್ವ ಟ್ರೇಡ್ ಯೂನಿಯನ್ ಕೇಂದ್ರದಲ್ಲಿ ಕೆಲಸ ಮಾಡಲು ಎ.ಐ.ಟಿ.ಯು.ಸಿ ಆಯ್ಕೆ ಮಾಡಿತು. ಅವರು 1954ರಲ್ಲಿ ಭಾರತಕ್ಕೆ ಮರಳಿ ಎ.ಐ.ಟಿ.ಯು.ಸಿ ಯ ಸಹ ಕಾರ್ಯದಶರ್ಿಯಾಗಿ ಕೆಲಸ ಮಾಡಲು ನಿಯುಕ್ತರಾದರು. 1952-55ರ ಅವದಿಯಲ್ಲಿ ಪ್ರಪಂಚ ಯುದ್ದದ ನಂತರ ನೂತನ ಮಾನವನು ಉದಯವಾಗುತ್ತಾನೆ ಎಂದು ಒತ್ತಿ ಹೇಳುತ್ತ, ಕವಿ ಏಕಕಾಲದಲ್ಲಿ ಜನತೆಯ ಬದುಕಿನೊಂದಿಗೆ ಸ್ಪಂದಿಸುತ್ತ ತನ್ನ ಸೃಜನಶೀಲ ಒಂಟಿತನದಲ್ಲಿ ತೊಡಗಿರುತ್ತಾನೆ. ಎನ್ನುವ ವೇಳೆ 1957 ರ ವೇಳೆಗೆ ಮಖ್ದೂಂರ ಕಾವ್ಯಗಳು ಹೊಸ ಆಯಾಮವನ್ನು ಪಡೆದಿದ್ದವು. ಆಗವರು ಗಝಲ್ಗಳನ್ನು ಬರೆಯಲು ಆರಂಬಿಸಿದರು. ಅವರ ಖ್ಯಾತ ಚಾಂದ ತಾರೋ ಕಾ ಬನ್ ಇರುಳಿನ ಅವಶೇಷಗಳು ಇನ್ನೂ ಇವೆ.ಕತ್ತಲಿನ ತುಂಡುಗಳುಹೊಸ ಬೆಳಕಿನ ಬೆಳ್ಳಗಿನ ಬೆಳಕು ಹಾಸಿಗೆಸಂಗಾತಿಗಳೇಕೈಯಲ್ಲಿ ಕೈಹಿಡಿದು ಮುಂದೆ ಬನ್ನಿರಿನಮ್ಮ ಗುರಿಯತ್ತ ಸಾಗೋಣಪ್ರೀತಿಯ ಮತ್ತು ನೇಣುಗಂಬದ ಗುರಿಗೆನಿಮ್ಮ ನಿಮ್ಮ ಕೋಟನ್ನು ಹೆಗಲೇರಿಸಿಮುನ್ನಡೆಯಿರಿ[ಚಂದ್ರ ತಾರೆಗಳ ವನ] 1957-58ರ ವೇಳೆಗೆ ರಚಿತವಾದ ಕೃತಿ. ಇಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಮಜಲುಗಳನ್ನು ವಣರ್ಿಸಿದ್ದಾರೆ. ರಕ್ತಪಾತಗಳು, ಭವಿಷ್ಯಗಳು ವಣರ್ೆಸಿದ್ದಾರೆ. ಮಖ್ದೂಂರ ಇಡೀ ಜೀವನ ಹೋರಾಟಗಳು ಹಾಗು ಕಾವ್ಯಗಳ ರಚನೆಯಾಗಿತ್ತು.ಮಖ್ದೂಂರು ತಮ್ಮ 61 ನೇ ವಯಸ್ಸಿನಲ್ಲಿ ನಿಧನರಾದ ಸಂಧರ್ಭದಲ್ಲಿ ಂ ಡಿಜತಠಟಣಣಠಟಿಜಡಿಥಿ ಠಿಠಜಣ ಟಿಠ ಟಠಡಿಜ, ಂ ಡಿಠಟಚಿಟಿಣಛಿ ಠಿಠಜಣ,ಚಿ ಟಥಿಡಿಛಿಣ ಟಿಚಿಣಛಿಜಜ ಚಿತಿಚಿಥಿ ಜಿಡಿಠಟ ಣ, ಂ ರಡಿಜಚಿಣ ಛಿಠಟಟಣಟಿಣ ಟಜಚಿಜಜಡಿ ಚಿಟಿಜ ಠಡಿರಚಿಟಿಜಡಿ ರಠಟಿಜ..... ಜನರ ವೇದನೆಗಳಿಗೆ ಪೂರಕವಾಗಿ ಮಖ್ದೂಂರ ಕವನದ ಈ ಸಾಲುಗಳು ಹಯಾತ್ ಲೇಕೆ ಚಲೋ, ಕಾಯನಾಥ್ ಲೇಕೆ ಚಲೋಚಲೇತೋ ಸಾರೆ ಜಮಾನಕೋ, ಸಾಥ್ ಲೇಕೆ ಚಲೋ....ಜನರ ಮಧ್ಯೆ, ಜನರಿಗಾಗಿ, ಜನರಲ್ಲಿ ಮಖ್ದೂಂ ಮೋಹಿಯುದ್ದೀನ್ರು ಅಮರರಾಗಿ ಚಿರಂಜೀವಿಯಾಗಿ ಉಳಿದಿದ್ದಾರೆ.
ದಿಶಿವಪುತ್ರಪ್ಪ ಭೇರಿ.

2010ರ ಘಟನಾವಳಿಗಳ ಮೇಲೆ ಒಂದು ನೋಟ

2010ರ ಘಟನಾವಳಿಗಳ ಮೇಲೆ ಒಂದು ನೋಟ ಹೊಸ ಶತಮಾನದ ಪ್ರಾರಂಭ ದಶಕದ ಕೊನೆ ವರ್ಷ ನೆರೆಹಾವಳಿ ಸಂತ್ರಸ್ತರ ನೋವಿನಂದ ಆರಂಭಗೊಂಡಿತು. ಮನೆ, ಫಸಲು, ಜಾನುವಾರು, ಸಂಪತ್ತನ್ನೇಲ್ಲ ಕಳೆದುಕೊಂಡ ರೈತರ ಬಾಳಿಗೆ ಇಡೀ ವರ್ಷ ನಡೆದ ರಾಜಕೀಯ ದೊಂಬರಾಟ ನಾಚಿಕೆಗೇಡಿನ ಸಂಗತಿ.ಮತದಾರ ಪ್ರಭುಗಳು ನರಾಶ್ರಿತರಾಗಿ ಅಕ್ಷರಶಃ ಬೀದಿಗೆ ಬಿದ್ದಾಗ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಪ್ರಜಾಪ್ರತಿನಧಿಗಳು ರೆಸಾಟರ್್ ರಾಜಕೀಯದಲ್ಲಿ ವೈಮರೆತಿರುವುದು 2010ನೇ ವರ್ಷದ ಕಪ್ಪುಚುಕ್ಕೆ.ರಾಜಕೀಯವಾಗಿ ಅಧಿಕಾರವನ್ನು ಉಳಿಸಿಕೊಳ್ಳುವದಕ್ಕಾಗಿ ಪ್ರಜಾಪ್ರತಿನಧಿಗಳು ಹಗಲಿರುಳು ಶ್ರಮಿಸಿದರು. ಇಲ್ಲಿ ರಾಯಚೂರು ನಗರಾಸಭಾಧ್ಯಕ್ಷ ಎ.ಮಾರೆಪ್ಪ ರಾಜೀನಾಮೆ, ಅಲ್ಲಿ ಬಿಜೆಪಿ ಅಧ್ಯಕ್ಷರಾಗಿ ಮಂತ್ರಿಯಾಗಿದ್ದ ಈಶ್ವರಪ್ಪ ನೇಮಕ ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾ ಪಂಚಾಯತಿಯನ್ನು ಮೊಟ್ಟಮೊದಲ ಬಾರಿಗೆ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಅದರ ಮೊದಲ ಅಧ್ಯಕ್ಷೆ ಪದ್ಮಾವತಿ ಎಂ. ಈರಣ್ಣ. ರಾಯಚೂರು, ಸಿಂಧನೂರು, ಮಾನ್ವ ಕಡೆಗಳಲ್ಲಿ ಪುರಸಭೆಗಳಿಗೆ ಮಹಿಳೆಯರೇ ಅಧ್ಯಕ್ಷರಾಗುವದರ ಮೂಲಕ ಮಹಿಳಾ ಪ್ರಾತಿನಧ್ಯಕ್ಕೆ ಅವಕಾಶ ಸಿಕ್ಕಂತಾಗಿತ್ತು. ಕಾಂಗ್ರೇಸ್ ಪಕ್ಷದಲ್ಲಿಯೂ ಜಿ.ಪರಮೇಶ್ವರ ರಾಜ್ಯಧ್ಯಕ್ಷರಾಗುತ್ತಿದ್ದಂತೆ ರಾಯಚೂರಲ್ಲಿ ವಸಂತಕುಮಾರ ಜಿಲ್ಲಾಧ್ಯಕ್ಷರಾಗಿ ಮರುಆಯ್ಕೆಗೊಂಡರು.23ನೇ ಸೆಪ್ಟೆಂಬರ್ದಂದು ಸಚಿವ ಸಂಪುಟದಿಂದ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ ಹಾಗೂ ನಮ್ಮ ಜಿಲ್ಲೆಯ ಮಂತ್ರಿ ಶಿವನಗೌಡರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ವಿಧಾನಸಭೆಯಲ್ಲಿ 2ಬಾರಿ ಬಹುಮತ ಸಾಭೀತುಪಡಿಸಿದ್ದು, ಸಂವಿಧಾನಾತ್ಮಕವಾಗಿ ಹೊಸ ದಾಖಲೆಯಾಗಿ ಉಳಿಯಿತು. ರಾಜಕೀಯ ಹಿನ್ನೆಲೆ ರಾಜ್ಯಪಾಲರದ್ದು ಕೂಡ ಅಷ್ಟೇ ಮಹತ್ವದ ಪಾತ್ರವಾಗಿತ್ತು.ನಮ್ಮ ಶಾಸಕರ ಸಮಾಜಸೇವೆ, ಭಕ್ತಿ, ಅನುಕರಣಿ ಎಂತಹದ್ದೇಂಬುದು ಬಹುಮತ ಸಾಭೀತುಪಡಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ಜನಸಾಮಾನ್ಯನಗೆ ತಿಳಿಯಿತು. ಸಚಿವ ಸ್ಥಾನದಿಂದ ನಮ್ಮನ್ನು ತೆಗೆದರೆ ವಿಷ ಕುಡಿಯುತ್ತೇವೆ ಎಂದು ಕೆಲವೊಬ್ಬರು ಶಾಸಕರು ವಿಧಾನಸಭೆಯಲ್ಲಿ ಅಂಗಿಗಳನ್ನು ಅರಿದುಕೊಂಡು ಪ್ರತಿಭಟಿಸುತ್ತಿದ್ದು ಕೆಲವೊಂದು ನಾಟಕಗಳ ದೃಶ್ಯಗಳಂತಿದ್ದವು.ನೆರೆ ಹಾವಳಿಯ ನರಾಶ್ರಿತರಿಗೆ ಸೂಕ್ತರೀತಿಯ ಪರಿಹಾರ ಕಲ್ಪಿಸಿಲ್ಲ ಎಂದು ಆರೋಪಿಸಿದ ವಿರೋಧ ಪಕ್ಷಗಳು, ಸಂಘಸಂಸ್ಥೆಗಳು ಕೊನೆಕೊನೆಗೆ ಎಲ್ಲವೂ ಮೊಸಳೆ ಕಣ್ಣೀರನ್ನು ಸುರಿಸದವೇ ವಿನಃ ನರಾಶ್ರಿತರ ಗೋಳನ್ನು ಯಾರು ಕೇಳಲಿಲ್ಲ. ನಾಟಕೀಯ ಬೆಳವಣಿಗೆಯಂತೆ ಬಿ.ಎಸ್ ಯಡಿಯೂರಪ್ಪನವರು ದೀಪಾವಳಿಯ ಹಬ್ಬದಂದು ನರಾಶ್ರಿತರ ಜೊತೆ ಕಂಡರು.ಸಾಂಸ್ಕೃತಿಕವಾಗಿ ರಾಯಚೂರು ಜಿಲ್ಲೆ ಹಲವಾರು ರೀತಿಯ ವಿಭಿನ್ನಶೈಲಿಯ ಕಾರ್ಯಕ್ರಮಗಳ ಮುಖಾಂತರ ಜನಮನ್ನಣಿಗೆ ಪಾತ್ರವಾಯಿತು. ವರ್ಷದ ಆರಂಭದಲ್ಲಿ ಹಂಪಿಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಕಾರ್ಯಕ್ರಮದ ಪೂರಕವಾಗಿ ರಾಯಚೂರಲ್ಲಿ 2ದಿನಗಳ ಕಾಲ ಸುಂದರ ಕಾರ್ಯಕ್ರಮವನ್ನು ಹತ್ತು ಹಲವು ವಿಚಾರಗೋಷ್ಟಿಗಳೊಂದಿಗೆ ಆಚರಿಸಲಾಯಿತು. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಅಂತರ್ರಾಜ್ಯಗಳ ಬುದ್ದೀಜೀವಿಗಳು, ಪ್ರಗತಿಪರರು ಪಾಲ್ಗೊಂಡು ಯಶಸ್ವಿಗೊಳಿಸಿದರು.ಜನೆವರಿ 10ಹಾಗೂ 11ರಂದು ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಿರಿಯ ಕವಿ ಪ್ರಾದ್ಯಾಪಕ ಪಂಚಾಕ್ಷರಿ ಹೀರೆಮಠರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು ಅದರಂತೆ ಕುಷ್ಟಗಿಯಲ್ಲಿ ಕಸಾಪ 4ನೇ ಸಮ್ಮೇಳನ ಮಕ್ಕಳ ಕವಿ ಶೇಖರಪ್ಪ ಹುಲಿಗೇರಿಯವರ ಅಧ್ಯಕ್ಷತೆಯಲ್ಲಿ ಜರುಗಿದ್ದು ವಿಶೇಷವಾಗಿತ್ತು.ಬಹುನರಿಕ್ಷಿತ ಪದ್ಮವಿಭೂಷಣ ಪ್ರಶಸ್ತಿಯನ್ನು 94ರ ಹಿರಿಯಜ್ಜ ಸಂಗೀತ ನಧಿ ಪುಟ್ಟರಾಜ್ ಗವಾಯಿಗಳಿಗೆ ನಡಲಾಯಿತು. ಜೊತೆಯಲ್ಲಿ ಗದಗಿನಲ್ಲಿ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಗೀತಾ ನಾಗಭೂಷಣರವರ ಅಧ್ಯಕ್ಷತೆಯಲ್ಲಿ ಜರುಗಿತು. ಮಾಚರ್್ ತಿಂಗಳ ಮೊದಲ ವಾರದಲ್ಲಿ ಸವರ್ೋಚ್ಛ ನ್ಯಾಯಾಲಯದ ನವೃತ್ತ ನ್ಯಾಯಮೂತರ್ಿ ಜಸ್ಟಿಸ್ ಎಂ.ಶಿವರಾಜ ಪಾಟೀಲ್ರವರ ಅಧ್ಯಕ್ಷತೆಯಲ್ಲಿ ದೇವದುರ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಯಿತು. ಜಿಲ್ಲೆಯ ಖ್ಯಾತ ಅನುವಾದಕ ರಾಮಣ್ಣ ಆರ್.ಹೆಚ್.ಜೆರವರನ್ನು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಕನರ್ಾಟಕ ಘಟಕದ ರಾಜ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಲಲಿತಕಲಾ ಅಕಾಡೆಮಿ, ರಾಜ್ಯ ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿಗಳು ರಾಯಚೂರಲ್ಲಿ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸಿಕೊಟ್ಟವು. ಅದರಲ್ಲಿ ಮುನ್ನೂರು ಕಾಪು ಸಮಾಜವು ಈ ಬಾರಿ ತನ್ನ ದಶಮಾನೋತ್ಸವದ ಸವಿನೆನಪಿಗಾಗಿ ಮುನ್ನುರು ಮುಂಗಾರು ಪುಸ್ತಕವನ್ನು ಬಿಡುಗಡೆಗೊಳಿಸಿ ಮುನ್ನೂರು ಸಮಾಜದ ಸಾಂಸ್ಕೃತಿಕ ಅಂಶಗಳನ್ನು ಪರಿಚಯಿಸಿತು.ಮೊಟ್ಟಮೊದಲ ಬಾರಿಗೆ ರಾಯಚೂರಿನಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಸಾರ್ವಜನಕ ಶಿಕ್ಷಣ ಇಲಾಖೆಯೂ ರಾಜ್ಯಮಟ್ಟದ ಉತ್ತಮ ಶಿಕ್ಷಕರಿಗೆ ನಡುವ ಪ್ರಶಸ್ತಿಯನ್ನು ಇಲ್ಲಿಯೇ ಪ್ರದಾನ ಮಾಡಿದವು. ಅಂತದೊಂದು ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಯುವಜನತೆಯ ಸಾಧನೆಯ ದೃಷ್ಟಿಯಿಂದ 2010 ಹೆಚ್ಚಿನ ಭರವಸೆ ನಡಿತು. ಬಿ.ಆರ್.ಬಿ ವಾಣಿಜ್ಯ ಮಹಾವಿದ್ಯಾಲಯದ ವಿಧ್ಯಾಥರ್ಿ ಜೈಭೀಮ ನವದೆಹಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದರು.ರಾಜ್ಯದಲ್ಲಿ ಅಕ್ಟೋಬರ್ 6ರಂದು ಭಿನ್ನಮತೀಯರ ಹೊಸ ಇನ್ನಂಗ್ಸ್ ಆರಂಭಗೊಂಡ ರಾಜಕೀಯ ಅಸ್ಥಿರತೆ ವರ್ಷದ ಕೊನೆಯವರೆಗೂ ಮುಂದುವರೆಯಿತು. (ಈಗಲೂ ಚಾಲ್ತಿಯಲ್ಲಿದೆ) ಇಡೀ ವರ್ಷ ಭಿನ್ನಮತೀಯರ ಕಾಟ ಎದುರಿಸಿದ ಮುಖ್ಯಮಂತ್ರಿ ಅಭಿವೃದ್ಧಿಯ ಕಡೆ ಗಮನವೇ ಹರಿಸಲಿಲ್ಲ. ಶಿಸ್ತು, ಸಂಯಮ, ಉತ್ತಮ ನಡತೆ ಹಾಗೂ ಸಂಸ್ಕೃತಿಗೆ ಹೆಸರಾದ ರಾಜ್ಯದ ವಿಧಾನಸಭೆ ಕುಸ್ತಿಕಣವಾಗಿ ಪರಿವರ್ತನೆಗೊಂಡದ್ದು ದುರಂತವೇ ಸರಿ. ಪಕ್ಷ ರಾಜಕೀಯ ಜೂಜಾಟದಲ್ಲಿ ಅಭಿವೃದ್ಧಿ ಎಂಬುವದನ್ನು ಸಕಲ ಪಕ್ಷಗಳು ಮರೆತು ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಿ ಇಡೀ ವರ್ಷವನ್ನೇ ಅನಾಯಾಸವಾಗಿ ಕಳೆದರು.ಇದೇ ಮೊದಲ ಬಾರಿಗೆ ವಾಲ್ಮೀಕಿ ಜಯಂತಿ, ಕನಕ ಜಯಂತಿಗಳಿಗೆ ಸಕರ್ಾರಿ ರಜೆ ಹಾಗೂ ಜಯಂತಿಗಳನ್ನು ಜಿಲ್ಲಾಡಳಿತಗಳು ಬಲು ವಿಜೃಂಭಣಿಯಿಂದ ಆಚರಿಸಿದ್ದು ಸಂತಸ ತಂದರೆ, ಅಲಹಬಾದ್ ಕೋಟರ್್ ನಡಿದ ತೀಪರ್ು ಜಿಲ್ಲೆಯ ಜನತೆಗೆ ಬೇವು-ಬೆಲ್ಲವನ್ನು ಉಣಿಸಿದಂತಾಯಿತು.10ನೇ ಎಪ್ರೀಲ್ರಂದು ರಾಯಚೂರು ಲೋಕಸಭಾ ಕ್ಷೇತ್ರದಿಂದ ಮುಕ್ತಿಗೊಂಡು ಯಾದಗಿರಿ ನೂತನ ಜಿಲ್ಲೆಯಾಗಿ ರೂಪಗೊಂಡಿತು. ಸಿಂಧನೂರಿನ ಹಿರಿಯ ರಂಗಕಲಾವಿದ ಹುಸೇನಪ್ಪನವರಿಗೆ ಕನರ್ಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತು. ಕ್ರಮೇಣ 30ನೇ ಎಪ್ರೀಲ್ 2010ರಂದು ಲಿಂಗಸ್ಗೂರಿನ ಆಮದಿಹಾಳ ಗ್ರಾಮದ ಡಾ.ಬಿ.ವಿ ಪಾಟೀಲ್ ರಾಯಚೂರು ಕೃಷಿ ವಿಶ್ವವಿಧ್ಯಾಲಯ ಪ್ರಪ್ರಥಮ ಉಪಕುಲಪತಿಯಾಗಿ ನೇಮಕಗೊಂಡರು. ಲಿಂಗಸ್ಗೂರು ವಿ.ಸಿ.ಬಿ ಕಾಲೇಜಿನ ಪ್ರಾಚಾರ್ಯ ಸಿ.ಶರಣಪ್ಪ ಹಾಗೂ ರಾಯಚೂರು ನಂದಿನ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ.ಡಿ.ಹೆಚ್ ಜಗದೀಶ ಕಲ್ಬುಗರ್ಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡರು. ಮಾನವಿ ತಾಲೂಕಿನ ನವಲಕಲ್ನ ಖ್ಯಾತ ಕಥೆಗಾರ ಮಹಾಂತೇಶ ನವಲಕಲ್ರವರಿಗೆ ಕಥಾಕ್ಷೇತ್ರದ ಸಾಧನೆಗಾಗಿ ಸೇಡಂನ ಅಮ್ಮ ಪ್ರಶಸ್ತಿಯನ್ನು ನಡಿ ಗೌರವಿಸಲಾಯಿತು.21 ಎಪ್ರೀಲ್ದಂದು ನಧನರಾದ ಪ್ರಾದ್ಯಾಪಕ ರಾಮಲಿಂಗಪ್ಪ ಕಲ್ಲೂರು ತಮ್ಮ ದೇಹವನ್ನು ರಾಯಚೂರಿನ ರಿಮ್ಸ್ ಕಾಲೇಜಿಗೆ ದೇಹದಾನ ಮಾಡಿದ್ದು ಪರೋಪಕಾರ ಮನೋಭಾವನೆಗೆ ಸಂದ ಗೌರವವಾಗಿದೆ. 22ನೇ ಜೂನ್ದಂದು ವಿವಿಧ ಸಂಘಟನೆಗಳ ಆಶ್ರಯದಲ್ಲಿ ದಲಿತ ಕವಿ ಸಿದ್ದಲಿಂಗಯ್ಯನವರ ಊರು ಕೇರಿ ನಾಟಕ ಪ್ರದರ್ಶನಗೊಂಡಿತು.ಪ್ರಸ್ತುತ ರಾಜ್ಯ ಸಕರ್ಾರ ರಾಯಚೂರು ಜಿಲ್ಲೆಯ ಸವರ್ಾಂಗೀಣ ಅಭಿವೃದ್ಧಿಗಾಗಿ ಮೂವರು ಉ(ಸುಮ್ಮನೆ)ಸ್ತುವಾರಿ ಸಚಿವರನ್ನು ದಯಪಾಲಿಸಿತು. ಲೋಕೋಪಯೋಗಿ ಸಚಿವ ಸಿ.ಎಂ ಉದಾಸಿ ಆರಂಭಿಕ ಬ್ಯಾಟ್ಸ್ಮನ್ ಆದರೆ, 2ನೇ ಆಟಗಾರ ಆನಂದ ಅಸ್ನೋಟಿಕರ್ 2ನೇ ಆಟಗಾರರಾಗಿ ವಿಕೆಟ್ ಕೈಚೆಲ್ಲಿ ಕುಳಿತರು.3ನೇ ಆಟಗಾರರಾದ ಶ್ರೀರಾಮುಲು ನೇರವಾಗಿ ಪಂಚಾಯತ್ ಚುನಾವಣಿಗಳಿಗೆ ಎಂಟ್ರಿಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಹೇಗಿರುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಕಾತುರದಿಂದ ಎದುರು ನೋಡುತ್ತಿದ್ದಾರೆ.ಯಾರು ಏನೇ ಹೇಳಿದರೂ ರಾಯಚೂರು ಜಿಲ್ಲೆಯ ಪಾಲಿಗೆ 2010 ನಿರಾಶದಾಯಕ. ರೈಲ್ವೇ ಸಚಿವ ಮುನಯಪ್ಪನವರು 13ನೇ ಜನೆವರಿಯಂದು ಮುನರಾಬಾದ್, ಮಹಿಬೂಬನಗರ ರೈಲ್ವೆ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ ಎಂದಿದ್ದರು. ಇದು ಇಂದಿಗೂ ಪೂರ್ಣಗೊಂಡಿಲ್ಲ. ಇದನ್ನು ಕಳೆದ 50ವರ್ಷಗಳಿಂದ ನಾವೆಲ್ಲರೂ ಕೇಳುತ್ತಿದ್ದೇವೆ.ಹೈದರಬಾದ್ ಕನರ್ಾಟಕದ ಸವರ್ಾಂಗೀಣ ಅಭಿವೃದ್ಧಿಗೆ ಸಂವಿಧಾನದ 371ನೇ ತಿದ್ದುಪಡಿಯನ್ನು ತರಲು ಹೋರಾಟ ಮಾಡಬೇಕಾಗಿದೆ. ಅದಕ್ಕಾಗಿ ಕೇಂದ್ರಕ್ಕೆ ನಯೋಗವೊಂದನ್ನು ಕೊಂಡೊಯ್ಯಬೇಕೆಂದು ಹಲವಾರು ರಾಜಕಾರಣಿಗಳು ಪದೇಪದೇ ಹೇಳುತ್ತಿದ್ದಾರೆ. ಇದೊಂದು ಗಾಯದ ಬರೆ ಎಳೆಯುವ ತಂತ್ರವಾಗಿ ಹೋಗಿದೆ.ಕೇಂದ್ರಸಕರ್ಾರದ ರೈಲ್ವೆ ಸಚಿವೆ ಮಮತಾ ಬ್ಯಾನಜರ್ಿಯವರು ಪೆಬ್ರುವರಿ 28ರಂದು ಮಂಡಿಸಿದ ರೈಲ್ವೆ ಬಜೆಟಿನಲ್ಲಿ ರಾಯಚೂರಿಗೆ ಬಂದ ಪಾಲು ಲೆಕ್ಕಕ್ಕಿಲ್ಲ. ಈ ಬಜೆಟ್ಂತೂ ರಾಯಚೂರು ಜಿಲ್ಲೆಯ ಪಾಲಿಗೆ ನರಾಶಕದಾಯವಾಗಿದೆ. ರಾಯಚೂರು ಜಿಲ್ಲೆಯಾಧ್ಯಂತ ಸುದ್ದಿ ಮಾಡಿದ್ದ ಅತಿಕ್ರಮಣ ಆಪರೇಷನ್ ಯೋಜನೆಯ ಆರಂಭಿಕ ಆವೇಶ ಕ್ರಮೇಣ ಕಡಿಮೆಯಾಗತೊಡಗಿತು. ಅದರಂತೆ ರಾಜ್ಯಸಕರ್ಾರವು ರಾಯಚೂರು ಜಿಲ್ಲೆಗೆ ತನ್ನ ಬಜೆಟ್ನಲ್ಲಿ ನೀರಿಕ್ಷಿತ ಪ್ರಮಾಣವನ್ನು ಹಂಚದಿರುವುದು ಎಲ್ಲರಲ್ಲಿ ನರಾಶೆಯನ್ನು ಮೂಡಿಸಿತು.ಸಂತಸ, ನೋವು, ನಲಿವು, ನರಾಶೆಗಳ ಮಧ್ಯೆ ರಾಯಚೂರು ಜಿಲ್ಲೆಯ ಮಸ್ಕಿಯ ಹಿರಿಯ ಶಿಕ್ಷಕ 86ರ ಅಮರಯ್ಯ ಸಾಲಿಮಠ ಜನೆವರಿ 5ರಂದು ನಧನಹೊಂದಿದರು. 17ನೇ ಜನೆವರಿ 2010ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಸಾವು ಎಂಡಪಂಥೀಯ ಸಂಘಟನೆ, ದೇಶದ ದುಡಿಯುವ ವರ್ಗಕ್ಕೆ ಅತೀವ ನೋವನ್ನು ತಂದೊಡ್ಡಿತು. ಮೊನ್ನೆ ಇನ್ನೋರ್ವ ಕೇರಳದ ಮಾಜಿ ಮುಖ್ಯಮಂತ್ರಿ ಕರುಣಕಾರನ್ ಸಾವು ಕೂಡ ಎಲ್ಲರನ್ನು ಮತ್ತಷ್ಟು ನೋವಿಗೆ ದೂಡಿದೆ.ಅಂತರಾಷ್ಟ್ರೀಯ ಕ್ರೀಡಾಪಟು, ಹಿರಿಯ ರಾಜಕೀಯ ನಾಯಕ ಗುಲ್ದಾಸ್ ತಿಮ್ಮಾರೆಡ್ಡಿ15 ಮೇದಂದು ನಧನ ಹೊಂದಿದರೆ, ಹಟ್ಟಿಯಲ್ಲಿ ವಿಧಿಯ ಆಟಕ್ಕೆ ಎಳೆಕಂದಮ್ಮಗಳಾದ ಪ್ರಜ್ವಲ್ ಹಾಗೂ ಗೌತಮ್ ಈ ಲೋಕವನ್ನೇ ತ್ಯಜಿಸಿದವು.ಇನ್ನು ರಾಯಚೂರಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ, ಜಿಲ್ಲೆಯ ಪ್ರಗತಿಪರ ಹೋರಾಟಗಾರೆನಸಿಕೊಂಡಿದ್ದ ಶಿವಪುತ್ರ ಭೇರಿಯವರು ಕೂಡ ತಮ್ಮ ಅಪಾರ ಬಳಗವನ್ನು ಬಿಟ್ಟು ಜೂನ್8ರಂದು ಇಹಲೋಕ ತ್ಯಜಿಸಿದರು. ಅದರಂತೆ ಮಾಜಿಸಚಿವ ಎಂ.ಎಸ್ ಪಾಟೀಲ್ರ ಪತ್ನಿ ಗುರುದೇವಿ ಎಂ.ಎಸ್ ಪಾಟೀಲ್ ಜೂನ್8ರಂದು ನಧನ ಹೊಂದಿದರೆ, ಇನ್ನೋರ್ವ ರಾಯಚೂರಿನ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ರಾಜಕೀಯ ದುರೀಣ ಎಂ.ಈರಣ್ಣನವರು 24ನೇ ನವೆಂಬರ್ದಂದು ವಿಧಿವಶರಾದರು.2011ರ ಆಗಮನ ಪಂಚಾಯತಿ ಚುನಾವಣಿಗಳ ಫಲಿತಾಂಶದೊಂದಿಗೆ ಆರಂಭವಾಗಲಿದೆ. 2010ರ ರಾಜಕೀಯ ದೊಂಬರಾಟ 2011ರಲ್ಲಿ ಮುಂದುವರೆಯದಿರಲಿ ಎಂಬುದೇ ನಮ್ಮಯ ಆಶಯ.ಅಯ್ಯಪ್ಪ ತುಕ್ಕಾಯಿ

ದೇವದುರ್ಗ : ಅಜರ್ುನದಗರ್ೆಯನ್ನು ಮೀರಿಸುತ್ತಿರುವ ಹನುಮಂತಪ್ಪ!



ದೇವದುರ್ಗ : ಅಜರ್ುನದಗರ್ೆಯನ್ನು ಮೀರಿಸುತ್ತಿರುವ ಹನುಮಂತಪ್ಪ!ದೇವದುರ್ಗ ತಾಲೂಕಿನ ಅರಣ್ಯ ಇಲಾಖೆಯ ಹಗಲುಲೂಟಿಯ ಕುರಿತು ಈ ಹಿಂದೆ ನಮ್ಮ ಪತ್ರಿಕೆ ಸವಿಸ್ತಾರವಾದ ವರದಿಯೊಂದನ್ನು ಮಾಡಿತ್ತು. ಅಂದಿನ ಅರಣ್ಯಧಿಕಾರಿ ಅಜರ್ುನದಗರ್ೆಯ ಹಲವು ದಂಧೆಗಳ ವಿವರಣಿಯನ್ನು ನೀಡಲಾಗಿತ್ತು. ಪತ್ರಿಕೆಯ ವರದಿ ನಂತರ ಎಚ್ಚೆತ್ತ ಇಲಾಖೆ ಆತನನ್ನು ಅಲ್ಲಿಂದ ವರ್ಗ ಮಾಡಿತ್ತು.ನಂತರದ ದಿನಗಳಲ್ಲಿ ಅದೇ ಇಲಾಖೆಗೆ ದಕ್ಷ, ಪ್ರಾಮಾಣಿಕ ಅಧಿಕಾರಿಯೊಬ್ಬರು ಅಲ್ಲಿಗೆ ಬಂದಿದ್ದರೆ, ನಾವಿಂದು 500ಶಬ್ದಗಳ ಸುದ್ದಿಯನ್ನು ಬರೆಯುವ ಅವಶ್ಯಕತೆ ಇದ್ದಿಲ್ಲ. ಆದರೆ, ಅಜರ್ುನ ದಗರ್ೆಯ ಜಾಗಕ್ಕೆ ಆತನಿಗಿಂತ ಖದೀಮನೊಬ್ಬ ಹನುಮಂತಪ್ಪನೆಂಬ ಅಧಿಕಾರಿ ಬಂದು ಕುಳಿತಿದ್ದಾನೆ.ಎಲ್ಲದರಲ್ಲಿಯೂ ದಗರ್ೆಯವರನ್ನು ಮೀರಿಸುತ್ತಿರುವ ಹನುಮಂತಪ್ಪ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಕಂಕಣಬದ್ದವಾಗಿ ಶೆಟೆದು ನಿಂತಿದ್ದಾನೆ. ಅರಣ್ಯ ಇಲಾಖೆಯ ಕಾರ್ಯವೈಖರಿ, ಆಡಳಿತ, ಮತ್ಯಾವದನ್ನು ಸರಿಯಾಗಿ ಗ್ರಹಿಸಿಕೊಂಡಿರದ ಹನುಮಂತಪ್ಪ ಅರಣ್ಯ ಇಲಾಖೆಯನ್ನು ವ್ಯವಸ್ಥಿತವಾಗಿ ವಿನಾಶದಂಚಿಗೆ ದೂಡುತ್ತಿದ್ದಾನೆ.ದೇವದುರ್ಗ ತಾಲೂಕಿನ ಫಲವತ್ತಾದ ಅರಣ್ಯಭೂಮಿಯನ್ನು ರಕ್ಷಣಿ ಮಾಡುವುದು ನನ್ನ ಕರ್ತವ್ಯ ಎಂದು ಮೊದಲಿಗೆ ಬಂದಾಗ ಇದೇ ಹನುಮಂತಪ್ಪನವರು ಹೇಳಿದ್ದರು. ಆದರೆ, ಇಂದು ಅದೆಲ್ಲವನ್ನು ಮರೆತಿರುವ ಹನುಮಂತಪ್ಪ ಅರಣ್ಯ ಹಾಳುಮಾಡುವುದು ಕೂಡ ನನ್ನ ಆಧ್ಯ ಕರ್ತವ್ಯ ಎನ್ನುತ್ತಿದ್ದಾನೆ.!ಕಲ್ಲು, ಮಣ್ಣು, ಮರದ ತುಂಡುಗಳಿಗೆ ಸರಿಯಾಗಿ ರೇಟ್ನ್ನು ಫೀಕ್ಸ್ಮಾಡಿಕೊಂಡು ದಲ್ಲಾಳಿಗಳ ಮುಖಾಂತರ ಸ್ಥಳೀಯ ಸಾಮಿಲ್ಗಳಿಗೆ ಮಾರಾಟ ಮಾಡುತ್ತಿದ್ದಾನೆ. 1000ಕ್ಕೆ 1ಟ್ರಿಪ್ ಕಲ್ಲುಗಳು ಹೊರಗಡೆ ಸಿಗುತ್ತಿದ್ದರೆ, ಹನುಮಂತಪ್ಪನವರು ಕೇವಲ 500ಗಳಿಗೆ ಟ್ರಿಪ್ಗಳಿಗೆ ಮಾರುತ್ತಿದ್ದಾನೆ. ಈತನನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ತಮಗೆ ಗೊತ್ತಿದ್ದರೂ ಮೂಕಪ್ರೇಕ್ಷಕರಾಗಿ ಕುಳಿತಿದ್ದಾರೆ.ಹನುಮಂತಪ್ಪನವರು ಪ್ರತಿನಿತ್ಯ ಪ್ರಾಮಾಣಿಕವಾಗಿ ಗಸ್ತು ತಿರುಗುವದನ್ನು ನೋಡಿದರೆ, ಕೆಲವರಿಗೆ ಆಶ್ಚರ್ಯವಾಗುತ್ತದೆ. ಆದರೆ ಸಾಹೇಬರು ತಿರುಗುವುದು ರಕ್ಷಣಿಗಲ್ಲ. ಯಾವ್ಯಾವ ಮರ, ಕಲ್ಲು, ಮಣ್ಣನ್ನು ಎಷ್ಟೆಷ್ಟಕ್ಕೆ ಮಾರಬೇಕೆಂಬುದಕ್ಕೆ. ಕಾನೂನು ಬದ್ದವಾಗಿ ಕೆಲಸ ಮಾಡಿದಂತೆ ಕಾನೂನು ಬಾಹಿರವಾಗಿ ದೇವದುರ್ಗದಲ್ಲಿ ಕೆಲವೊಬ್ಬರು ಮರ, ಗಿಡಗಳನ್ನು ಕಡಿದುಳಿಸುತ್ತಾರೆ. ಹನುಮಂತಪ್ಪನವರು ಪುಡಿ ಕಾಸಿಗಾಗಿ ಇತಿಹಾಸ ಹೇಳುವ ಕಲ್ಲುಬಂಡೆಗಳನ್ನು ಮಾರುತ್ತಿದ್ದಾರೆ. ಪರಿಸರ, ಅರಣ್ಯದ ಉಳಿವಿಗಾಗಿ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಸಕರ್ಾರ ಅರಣ್ಯವನ್ನು ಬೆಳೆಸಲು, ಉಳಿಸಲು ಕೋಟಿಗಟ್ಟಲೇ ಹಣವನ್ನು ಖಚರ್ುಮಾಡುತ್ತಿದೆ. ಆದರೆ, ಹಗಲುಲೂಟಿಗೆ ನಿಂತಿರುವ ಹನುಮಂತಪ್ಪನಂತವರು ಯಾವುದನ್ನು ಲೆಕ್ಕಿಸದೇ ಬರೀ ದುಡ್ಡು ಮಾಡುವಲ್ಲಿಯೇ ಬ್ಯುಸಿಯಾಗಿದ್ದಾರೆ. ಇಂತವರಿಂದ ನಮ್ಮ ಅರಣ್ಯ ಸಂಪತ್ತು ನಾಶವಾಗುತ್ತಿದೆ,ಹೋಗೆ ಪಿಶಾಚಿ ಎಂದರೆ ಬಂದೆ ಗವಾಕ್ಷಿ ಎಂಬಂತೆ ಹನುಮಂತಪ್ಪ ಅಜರ್ುನದಗರ್ೆಯ ಇನ್ನೊಂದು ಮುಖವಾಗಿ ಬಂದಿದ್ದಾನೆ. ಈತನ ಕಛೇರಿಯ ಸಿಬ್ಬಂದಿಗಳು ಹೇಳುವ ಪ್ರಕಾರ ಸಾಹೇಬರು ಸಕ್ರಮಕ್ಕಿಂತ ಅಕ್ರಮ ಕೆಲಸಗಳನ್ನೇ ಜಾಸ್ತಿ ಮಾಡಿಕೊಡುತ್ತಾರಂತೆ. ಒಂದರ್ಥದಲ್ಲಿ ಹನುಮಂತಪ್ಪನ ಕೆಲಸ ಸರಿ ಎನಿಸುತ್ತದೆ. ಯಾಕೆಂದರೆ, ಸಕ್ರಮ ಕೆಲಸಗಳನ್ನು ಮಾಡಿದರೆ, ಮಾಮೂಲಿ ಬರುವುದಿಲ್ಲ. ಆದಾಯ ಸಿಗುವುದಿಲ್ಲ. ಬರೀ ಸಂಬಳ ಮಾತ್ರ ಸಿಗುತ್ತದೆ. ಆದರೆ, ಅಕ್ರಮ ಕೆಲಸಗಳನ್ನು ಮಾಡುತ್ತಾ ಹೋದರೆ, ಸಂಬಳ, ಗಿಂಬಳ, ಎರಡು ಸಿಗುತ್ತದೆ. ಆ ಕಾರಣಕ್ಕಾಗಿ ಸಾಹೇಬರು ಅಕ್ರಮಗಳಿಗೆ ಹೆಚ್ಚು ಒತ್ತು ಕೊಡುತ್ತಿರಬೇಕು.ಹನುಮಂತಪ್ಪ ಅರಣ್ಯಕ್ಕೆ ಹಾಜರ್, ಕಛೇರಿಗೆ ಚಕ್ಕರ್!ಸಾಹೇಬರು ಯಾವಾಗ ನೋಡಿದರೂ ರಜೆ, ಕರ್ತವ್ಯದ ಮೇಲೆ ತೆರಳಿರುತ್ತಾರೆ. ಇಲಾಖೆಯ ಕುರಿತು ನಾವೇನಾದರೂ ಮಾಹಿತಿ ಕೇಳಲು ಹೋದರೆ ಯೊರೊಬ್ಬರು ಕಛೇರಿಯಲ್ಲಿಯೇ ಇರುವುದಿಲ್ಲ. ಸಿಬ್ಬಂದಿಗಳನ್ನು ಕೇಳಿದರೆ ಸಾಹೇಬರು ಅರಣ್ಯದಲ್ಲಿರುತ್ತಾರೆ. ಕಛೇರಿಗೆ 5ರನಂತರ ಬರುತ್ತಾರೆ ಹೇಳುತ್ತಾರೆ. ಒಂದೊಮ್ಮೆ ಹನುಮಂತಪ್ಪ ಕಛೇರಿಯಲ್ಲಿ ಸಿಕ್ಕರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಕಾರಣ ತಮ್ಮ ಬಂಡವಾಳ ಎಲ್ಲಿಗೆ ಬಯಲಿಗೆ ಬರುತ್ತಿದೆಂದು ಜಾಸ್ತಿ ಏನನ್ನಾದರೂ ಕೇಳಲು ಹೋದರೆ, ನಿಮ್ಮನ್ನು ಇಲ್ಲಿಗೆ ಬರಲು ಯಾರು ಹೇಳಿದ್ದರು? ಅರಣ್ಯ ರಕ್ಷಣಿಯ ಕುರಿತು ಮಾತನಾಡಲು ನಿಮಗ್ಯಾವ ನೈತಿಕತೆ ಇದೆ? ಅರಣ್ಯ ಕಾಯಲು ಸಕರ್ಾರ ನನ್ನನ್ನು ಬಿಟ್ಟಿದೆ. ನನಗೆ ಇಲಾಖೆಯನ್ನು ಹೇಗೆ ಮೆಂಟೆನ್ ಮಾಡಬೇಕೆಂದು ಗೊತ್ತಿದೆ. ನನ್ನ ಮೇಲೆ ನಮ್ಮ ಮೇಲಾಧಿಕಾರಿಗಳಿಗೆ ನಂಬಿಕೆ ಇದೆ. ನೀವ್ಯಾರು ಉಪದೇಶ ಮಾಡುವುದಕ್ಕೆ ಬರಬೇಡಿ...ಹೋಗಿ ಎಂದು ಅವಾಜ್ ಹಾಕುತ್ತಾನೆ.ಇಂತಹ ಹನುಮಂತಪ್ಪನೆಂಬ ಅರಣ್ಯಾಧಿಕಾರಿ ಇನ್ನು ಸ್ವಲ್ಪ ದಿನ ದೇವದುರ್ಗದಲ್ಲಿದ್ದರೆ, ತಾಲೂಕಿನ ಯಾವೊಂದು ಬೆಟ್ಟ, ಅರಣ್ಯಪ್ರದೇಶಗಳು ಉಳಿಯುವುದಿಲ್ಲ.ತಾಲೂಕಿನ ಪರಿಸರ ಪ್ರೇಮಿಗಳು, ಪ್ರಗತಿಪರ ಸಂಘಟನೆಗಳು ಈತನ ಲೂಟಿಕೋರತನದ ವಿರುದ್ದ ಹೋರಾಡಬೇಕಾದದ್ದು ಅನಿವಾರ್ಯ. ಇಲ್ಲವೆಂದರೆ, ಅರಣ್ಯ ಸಂಪತ್ತಿಗೆ ಆಪತ್ತು ಕಾದಿದೆ ಎಂದೇ ಅರ್ಥ

ಓ..ನನ್ನ ಚೇತನ... ಆಗು ನೀ.. ಅನಿಕೇತನ....



ಕನ್ನಡದ ನವೋದಯ ಕಾಲದ ಹರಿಕಾರರಲ್ಲಿ ಕುಪ್ಪಳ್ಳಿ ವೆಂಕಟಪ್ಪನವರ ಮಗನಾದ ಪುಟ್ಟಪ್ಪನವರು ಒಬ್ಬರು. ಇವರ ಕಾವ್ಯನಾಮ ಕುವೆಂಪು. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಪೂರ್ವ ಸಾಧನೆ ಮಾಡಿದ ಇವರು ಹೊಸಗನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿ ಹೊಸ ಮೌಲ್ಯಗಳನ್ನು ರೂಪಿಸಿಕೊಟ್ಟಂತವರು.ಅವರು 29/12/1904ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಜನಿಸಿದರು. ಕುವೆಂಪುರವರು ವಿಧ್ಯಾಬ್ಯಾಸವನ್ನು ಮೈಸೂರಿನಲ್ಲಿ ಮಾಡಿ, 1927ರಲ್ಲಿ ಬಿ.ಎ, 1929ರಲ್ಲಿ ಎಂ.ಎ ಪದವಿ ಪಡೆದರು. ತಾವು ಓದಿದ ಮೈಸೂರು ಮಹಾರಾಜ್ ಕಾಲೇಜಿನಲ್ಲಿ 1929ರಿಂದ ಕನ್ನಡ ಅಧ್ಯಾಪಕ ವೃತ್ತಿ ಆರಂಭಿಸಿದರು. 1955ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. 1955ರಲ್ಲಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. 1957ರಲ್ಲಿ ಧಾರವಾಡದಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕುವೆಂಪುರವರು ವಹಿಸಿಕೊಂಡಿದ್ದರು. 1958ರಲ್ಲಿ ಭಾರತ ಸಕರ್ಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.1964ರಲ್ಲಿ ಕನರ್ಾಟಕ ಸಕರ್ಾರ ರಾಷ್ಟ್ರಕವಿ ಬಿರುದನ್ನು ನೀಡಿತು. 1968ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಕನ್ನಡಿಗರಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಧೀಮಂತಿಕೆ ಕುವೆಂಪುರವರಿಗೆ ಸಲ್ಲುತ್ತದೆ.ಕುವೆಂಪುರವರು ಕಾದಂಬರಿ, ಕಥೆ, ಭಾವಗೀತೆ, ಪ್ರಬಂಧ, ನಾಟಕ, ಆತ್ಮಚರಿತ್ರೆ ಮುಂತಾದವುಗಳು ಬರೆದಿದ್ದಾರೆ.ಅವರ ಆತ್ಮಚರಿತ್ರೆಯಾದ ನೆನಪಿನ ದೋಣಿಯಲ್ಲಿ, ನಾಟಕಗಳಾದ ಶೂದ್ರತಪಸ್ವಿ, ಜಲಗಾರ, ಯಮನಸೋಲು, ಬೆರಳಿಗೆ ಕೊರಳ್, ರಕ್ತಾಕ್ಷಿ ಪ್ರಮುಖವು.ಇನ್ನು ಕಾದಂಬರಿಗಳಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಪ್ರಮುಖವಾದವುಗಳು.ವೈಚಾರಿಕ ಪ್ರಜ್ಞೆ, ಸಾಮೂಹಿಕ ಕಳಕಳಿ, ನಿಸರ್ಗ ಪ್ರೇಮ ಕುವೆಂಪು ಸಾಹಿತ್ಯದಲ್ಲಿ ಕಂಡು ಬರುವ ಜೀವಂತ ನಿಲುವುಗಳು. ಭಾವಗೀತೆ, ಪ್ರಬಂದ, ವಿಮಷರ್ೆ, ನಾಟಕ, ಆತ್ಮಚರಿತ್ರೆ, ಜೀವನ ಚರಿತ್ರೆ ಕ್ಷೇತ್ರಗಳಲ್ಲಿ ಕುವೆಂಪು ಸಾಧನೆ ಅಪೂರ್ವವಾದದ್ದು.ಹೊಸ ಕಾಲವು ಹಳೆಯ ಶ್ರದ್ದೆ, ನಂಬಿಕೆ, ಮೌಡ್ಯತನ ಎಲ್ಲವನ್ನು ಹುಸಿ ಮಾಡಿ ಇಡೀ ಮಾನವ ಕುಲ ಒಂದೆಂಬ ಆದರ್ಶವನ್ನು ನೀಡಿ ಹೊಸ ಕಾಲದ ಮೌಲ್ಯದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇವರ ಕಾವ್ಯ ಸಾಹಿತ್ಯ ನಮ್ಮೆಲ್ಲರಿಗೂ ಅವಕಾಶವನ್ನು ನೀಡಿದೆ ಎಂಬುದು ನಿಜಕಂಡ ಸಾಹಿತ್ಯವಾಗಿದೆ.ವಿಶ್ವ ಮಾನವ ಸಂದೇಶದ ಬಗ್ಗೆ ಇವರಿಗಿರುವ ಮನೋಭಾವನೆಯೂ ಇವರಿಂದ ರಚಿತವಾದ ಹಲವಾರು ಕವಿತೆಯ ಸಾಲುಗಳಲ್ಲಿ ನಾವು ಕಾಣಬಹುದು.ಓ ನನ್ನ ಚೇತನಆಗು ನೀ ಅನಿಕೇತನನೂರು ಮತದ ಹೊಟ್ಟು ತೂರಿಎಲ್ಲ ಮತದ ಎಲ್ಲೇ ಮೀರಿಓ ನನ್ನ ಚೇತನಆಗು ನೀ ಅನಿಕೇತನ1987 ಮಾಚರ್್ 22ರಂದು ನಡೆದ ವಿಶ್ವಕನ್ನಡ ಸಮ್ಮೇಳನ ನಡೆದ ಸಂದರ್ಭದಲ್ಲಿ ಕುವೆಂಪುರವರು ಈ ರೀತಿ ಹೇಳಿರುತ್ತಾರೆ.ಜಾತಿಯತೇ, ಮತೀಯತೆಯ ಹಿತದೃಷ್ಟಿಯಿಂದ ಮಾನವನ ಸಂಕುಚಿತ ಮನೋಭಾವನೆಯನ್ನೇ ಇಂದಿನಂತೆ, ಹೀಗಿನಂತೆ ಮುಂದುವರೆಸಿಕೊಂಡು ಹೋದರೆ, ವಿಶ್ವಕ್ಕೆ ವಿನಾಶ ತಪ್ಪಿದ್ದಲ್ಲ. ಇದನ್ನು ತಡೆಗಟ್ಟಲು ವಿಶ್ವಮಾನವರೆಲ್ಲರೂ ಮುಂದಾಗಬೇಕು. ಜಗತ್ತಿನ ಜನರೆಲ್ಲರೂ ವಿಶ್ವಮಾನವರೆನಿಸಬೇಕುಮತ ಮನುಜ ಮತವಾಗಬೇಕುಪಥ ವಿಶ್ವಪಥವಾಗಬೇಕುಒಮ್ಮೆ ಬಿ.ಎಂ.ಶ್ರೀರವರು ತಮ್ಮ ಪ್ರೀತಿಯ ಶಿಷ್ಯ ಕುವೆಂಪುರವರ ಕುರಿತು ಈ ರೀತಿ ಹೇಳುತ್ತಾರೆ. ಪ್ರತಿಯೊಂದು ಹೃದಯಾಂತರಂಗದಿಂದಲೇ ಹೊರಬರುವದರಿಂದ ಕೇಳುವವರಿಗೆ ಹಿತವೆನಿಸಿ ಸರಾಗವಾಗಿ ಶ್ರೋತೃಗಳ ಹೃದಯದ ಬಾಗಿಲುಗಳನ್ನು ಸ್ಪಷರ್ಿಇಸಿ ತಟ್ಟುತ್ತವೆ.ಕುವೆಂಪುರವರ ಒಂದೆರಡು ಆಯ್ದ ಕವನಗಳು.
ನಡೆ ಮುಂದೆ ಮುಂದೆನುಗ್ಗಿ ನಡೆ ಮುಂದೆಜಗ್ಗದಯೆ ಕುಗ್ಗದಯೆಹಿಗ್ಗಿ ನಡೆ ಮುಂದೆ.
ಭರತ ಖಂಡದ ಹಿಂದೆನನ್ನ ಮತವೆಂದುಭಾರತಾಂಬೆಯ ಸುಖಕ್ಕೆಸೋದರರು ಎಂದುಭಾರತಾಂಬೆಯ ಮುಕ್ತಿಮುಕ್ತಿ ನನಗೆಂದುನಡೆಮುಂದೆ ನಡೆಮುಂದೆ
ನುಗ್ಗಿ ನಡೆಮುಂದೆಜಗ್ಗದೆ, ಕುಗ್ಗದೆ,ಹಿಗ್ಗಿ ನಡೆಮುಂದೆ
ಕೆಳಮತದ ಕಲೆ ಎಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ. ಬರಲಿ ಜ್ಞಾನ ಬುದ್ದಿ ಗುಡಿ ಚಚರ್ು ಮಸೀಧಿಗಳ ಬಿಟ್ಟು ದೂರಬನ್ನಿ. ಬಡತನ ಬುಡಮಟ್ಟ ಕೀಳ ಬನ್ನಿಸಾಕಿನ್ನು ಸೇರಿರೈ ಮನುಜ ಮತಕ್ಕೆಕುವೆಂಪುರವರ ಇಂತಹ ಸಾಕಷ್ಟು ಕವನಗಳು ಸಾಮಾಜಿಕ ಕ್ರಾಂತಿಯನ್ನೇ ಮಾಡಿವೆ ಎಂದರೆ ತಪ್ಪಾಗಲಾರದು.
ನರಸಪ್ಪ ಯಾದವ, ಮುಖ್ಯಸ್ಥರು ವಿನಾಯಕ ಶಿಕ್ಷಣ ಸಂಸ್ಥೆ ಹ.ಚಿ.ಗ