Tuesday, October 26, 2010

ಒಳ್ಳೆಯ ಆಹಾರದಿಂದ ಒಳ್ಳೆಯ ಆರೋಗ್ಯ. - Dr Prasanna Navdagi


ಒಳ್ಳೆಯ ಆಹಾರದಿಂದ ಒಳ್ಳೆಯ ಆರೋಗ್ಯ.
ಮಾನವನು ದಿನನಿತ್ಯ ಆರೋಗ್ಯಕರ ಆಹಾರವನ್ನು ತಿನ್ನುವದರಿಂದ ಸದೃಡನಾಗಿರುತ್ತಾನೆ. ಪೌಷ್ಠಿಕವಾದ ಆಹಾರ ಸ್ವೀಕರಿಸುವದರಿಂದ ಮನುಷ್ಯನಿಗೆ ಬರುವ ರೋಗ-ರುಜಿನುಗಳಿಗೆ ನಾವು ಕಡಿವಾಣ ಹಾಕಬಹುದು.
ಸಸ್ಯಹಾರದಿಂದ ಆರೋಗ್ಯ.
ಸಸ್ಯಹಾರಿ ಊಟದಿಂದ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು. ಮಾಂಸಹಾರಿ ಊಟದಿಂದ ಬೊಜ್ಜು, ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ತರಹದ ಹಲವು ರೋಗಗಳು ಬರುವ ಸಾಧ್ಯತೆಯಿರುತ್ತದೆ. ಆದರೆ, ಸಸ್ಯಹಾರಿ ಊಟದಿಂದ ಕ್ಯಾನ್ಸರ್ (ಅಚಿಟಿಛಿಜಡಿ) ನ್ನು ತಡೆಗಟ್ಟಬಹುದು.
ನಿಮಗೆ ಗೊತ್ತೇ.. ಸೇಬು ಹಣ್ಣು ತಿನ್ನುವದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತದಲ್ಲಿನ ಗ್ಲುಕೋಸ್ನ್ನು ಸಹಜ ಸ್ಥಿತಿಗೆ ತರುತ್ತದೆ.
ಸೇಬು ಮಧುಮೇಹದ (ಆಚಿಛಜಣಜ) ರೋಗಿಗಳಿಗೆ ಒಳ್ಳೆಯ ಔಷಧಿ ಇದ್ದಹಾಗೆ.
ಅದರಂತೆ ಈರುಳ್ಳಿಯೂ ಹೃದಯಕ್ಕೆ ಒಳ್ಳೆಯ ಔಷಧಿ. ಅದು ಮಾನವನ ರಕ್ತವನ್ನು ಶುದ್ಧೀಕರಿಸುವದರೊಂದಿಗೆ ಅದು ಕೊಲೆಸ್ಟ್ರಾಲ್ (ಅಠಟಜಣಡಿಠಟ) ಕಡಿಮೆ ಮಾಡುತ್ತದೆ. ಇದೇ ಗುಣವನ್ನು ಬೆಳ್ಳುಳ್ಳಿಯೂ ಹೊಂದಿರುತ್ತದೆ.
ಇನ್ನು ಮಜ್ಜಿಗೆಯನ್ನು ನಾವು ಕುಡಿಯುವದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕರುಳಿನಲ್ಲಿರುವ ಕ್ರಿಮಿಗಳು ನಾಶಗೊಳ್ಳುತ್ತವೆ. ಆಗ ಮಾನವನ ಕರಳುಗಳು ಒಳ್ಳೆಯ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತವೆ. ಅಲ್ಸರ್ ಬರದಂತೆಯೂ ತಡೆಗಟ್ಟಬಹುದು. ಹೀಗಾಗಿ ದಿನಾಲು ಊಟವಾದ ಮೇಲೆ ಒಂದು ಲೋಟ ಮಜ್ಜಿಗೆಯನ್ನು ಕುಡಿಯುವದನ್ನು ರೂಡಿ ಮಾಡಿಕೊಳ್ಳಬೇಕು.
ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ತಾಜಾ ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕು. ಉದಾಹರಣಿಗೆ ಮೂಲಂಗಿ, ಗೆಜ್ಜರಿ, ಸವತೆಕಾಯಿ ಮುಂತಾದವುಗಳನ್ನು ಊಟದ ಜೊತೆಯಲ್ಲಿ ತಿನ್ನುವದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಆಹಾರ ರುಚಿಯಾಗಿದೆ ಎಂದು ಹೆಚ್ಚಿಗೆ ತಿಂದರೆ ಅದು ನುಚ್ಚಾಗುತ್ತದೆ. ಹಾಗೇ ತಿನ್ನುವುದು ಸರಿಯಾದ ಕ್ರಮವಲ್ಲ. ಹೊಟ್ಟೆಗೆ ಆಗುವಷ್ಟು ಊಟ ಮಾಡುವದರಿಂದ ಅದು ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ. ಊಟದಲ್ಲಿನ ಸತ್ವಗಳು ಮಾನವನ ದೇಹಕ್ಕೆ ಲಾಭಕಾರಿಯಾಗುತ್ತವೆ.
ಒಂದು ಬಾರಿ ಊಟಕ್ಕೆ ಕುಳಿತ ಮೇಲೆ ಸಂಪೂರ್ಣವಾಗಿ ಮುಗಿದ ನಂತರವೇ ಮೇಲೆಳಬೇಕು. ಊಟದ ಮಧ್ಯದಲ್ಲಿ ಅತಿಯಾಗಿ ನೀರನ್ನು ಕುಡಿಯಬಾರದು. ಅದರಿಂದ ದುಷ್ಟರಿಣಾಮಗಳು ಬರುವ ಸಾಧ್ಯತೆ ಇರುತ್ತದೆ.
ಅತೀ ಅವಸರದಲ್ಲಿ ಊಟವನ್ನು ಮಾಡಿದರೆ, ಯಾವುದೇ ಪ್ರಯೋಜನವಾಗುವುದಿಲ್ಲ. ಯಾಕೆಂದರೆ, ಊಟವು ಸರಿಯಾಗಿ ಜೀರ್ಣಗೊಂಡಿರುವುದಿಲ್ಲ.
ಮಸಾಲೆ ಪದಾರ್ಥಗಳನ್ನು ತಿನ್ನುವದರಿಂದ ನಾಲಿಗೆಗೆ ಮಾತ್ರ ರುಚಿ ಸಿಗುತ್ತದೆ. ಇದನ್ನು ಹೆಚ್ಚು ವರ್ಷ ಸೇವಿಸುವದರಿಂದ ಗಂಭೀರ ಕಾಯಿಲೆಗಳು ಎದುರಾಗುತ್ತವೆ.
ಬೆಳಿಗ್ಗೆಯಾದರೆ ಬಂತು, ಸಂಜೆಯಾದರೂ ಸಾಕು
ಮೊದಲು ನಾವೆಲ್ಲ ಕೇಳುವುದೇ ಕಾಫಿ, ಟೀ. ಅದನ್ನು ಕುಡಿದ ನಂತರವೇ ಮುಂದಿನ ಕಾರ್ಯಕ್ಕೆ ಹೋಗುತ್ತೇವೆ. ಆ ರೀತಿಯಲ್ಲಿ ನಾವೆಲ್ಲ ಇಂದಿನ ಸಮಾಜದಲ್ಲಿ ಚಹಾ ಕಾಫಿಗಳಿಗೆ ಂಜಜಛಿಣ ಆಗಿದ್ದೇವೆ.
ದಿನಾಲು ಮೇಲಿಂದ ಮೇಲೆ ಚಹಾ, ಕಾಫಿಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಪಚನ ಶಕ್ತಿ ಕುಂಠಿತಗೊಂಡು, ಹಸಿವು ಕುಂದುತ್ತದೆ. ದಿನಕ್ಕೊಂದು ಬಾರಿ ಚಹಾ ಕುಡಿಯುವುದು ಸೂಕ್ತ ಆದರೆ, ಅದನ್ನೇ ಪದ್ದತಿ ಮಾಡಿಕೊಡುವುದು ಸರಿಯಲ್ಲ. ಅದನ್ನು ಬಿಟ್ಟುಬಿಡುವದಂಥೂ ಅತ್ಯುತ್ತಮ.
ಇನ್ನು ನಾವು ಬಳಸುವ ತಂಪು ಪಾನೀಯಗಳು ಹಲವಾರು ರಸಾಯನಿಕ ದ್ರವ್ಯಗಳಿಂದ ಕೂಡಿರುತ್ತವೆ. ಅವುಗಳ ಸೇವನೆಯಿಂದ ಕ್ರಮೇಣವಾಗಿ ಆರೋಗ್ಯ ಕೆಡುತ್ತದೆ. ಬೇಸಿಗೆಯ ಕಾಲದಲ್ಲಿ ದಣಿವಾರಿಸಿಕೊಳ್ಳಲು ಅನಿವಾರ್ಯವಾಗಿ ತಂಪು ಪಾನೀಯಗಳಿಗೆ ನಮ್ಮವರು ಮಾರುಹೋಗುತ್ತಾರೆ. ಅದನ್ನು ಇನ್ನು ಮುಂದೆ ಎಲ್ಲರೂ ತಂಪು ಪಾನೀಯಗಳನ್ನು ಬಿಟ್ಟು. ಮಜ್ಜಿಗೆ, ಎಳೆನೀರು, ಹಣ್ಣಿನ ರಸವನ್ನು ಸೇವಿಸಬೇಕು. ಇದರಿಂದ ಆರೋಗ್ಯವನ್ನು ಚನ್ನಾಗಿಡಬಹುದು.
ಈ ಹಿಂದಿನ ಸಂಚಿಕೆಗಳಲ್ಲಿ ವ್ಯಾಯಾಮ, ಸ್ವಚ್ಛತೆ, ಒಳ್ಳೆಯ ಜೀವನ ಶೈಲಿಯ ಕುರಿತು ಹೇಳಲಾಗಿದೆ. ಇದರಿಂದ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು. ಆದಾಗ್ಯೂ ಈ ಮಾಲಿಕೆಗೆ ಸಂಬಂಧಿಸಿ ಊಟವನ್ನು ಮುಗಿಸಿದ ನಂತರ ಕನಿಷ್ಟ ಅರ್ಧಗಂಟೆಯವರೆಗೆ ಮಲಗಬಾರದು. ಊಟ ಮಾಡಿದ ತಕ್ಷಣ ವಾಕ್ ಮಾಡಬೇಕು. ಅದರಿಂದ ದೇಹಕ್ಕೆ ಅನುಕೂಲವಾಗುತ್ತದೆ. ರಾತ್ರಿಯೂ ಸುಖನಿದ್ರೆ ಬರುತ್ತದೆ.
ಕಾರಣ ಎಲ್ಲರೂ ಸಸ್ಯಹಾರವನ್ನು ಸೇವಿಸುತ್ತಾ ಉತ್ತಮ ಆರೋಗ್ಯವನ್ನು ಪಡೆಯಬೇಕು. ಉತ್ತಮ ಆಹಾರದಿಂದ ಹಲವಾರು ರೋಗಗಳನ್ನು ದೂರವಿಡಬಹುದು.

ತನ್ನ ಘೋರಿ ತಾನೇ ತೋಡಿಕೊಂಡ ಮಾಜಿ ಸಚಿವ.


ತನ್ನ ಘೋರಿ ತಾನೇ ತೋಡಿಕೊಂಡ ಮಾಜಿ ಸಚಿವ.
ಅಂತ್ಯ ಆರಂಭ ಎಂಬ ಸುದ್ದಿಯನ್ನು ಬರೆದ ನಾಲ್ಕೇ ದಿನದಲ್ಲಿ ವಜಾಗೊಂಡ ಶಿವನಗೌಡ, ಮಾರನೇ ದಿನ ಶಾಸಕ ಸ್ಥಾನಕ್ಕೆ ರಾಜೀನಾಮೆ, ಇನ್ನೊಂದು ದಿನ ಶ್ರೀರಾಮುಲುನಿಂದಲೇ ನಾನು ಮಂತ್ರಿಯಾಗಿದ್ದೇ. ಮಗದೊಂದು ದಿನ ಜೆ.ಡಿ.ಎಸ್ನಿಂದು ಚುನಾವಣೆಗೆ ನಿಲ್ಲುತ್ತೇನೆ. ಇನ್ನು ಸ್ವಲ್ಪ ಹೊತ್ತು ಬಿಟ್ಟು ಕಾಂಗ್ರೇಸ್ನ ಟಿಕೇಟ್ ತರುತ್ತೇನೆಂಬ ಹೇಳಿಕೆಗಳನ್ನು ಮಾನಸಿಕ ಅಸ್ವಸ್ಥನಂತೆ ಘಂಟೆಗಳಿಗೊಮ್ಮೆ ನೀಡುತ್ತಿದ್ದಾನೆ. ಈ ಕುರಿತು ಒಂದು ವಿಶ್ಲೇಷಣಿ.
ವಜಾಗೊಂಡ ಮಾಜಿ ಸಚಿವ ಶಿವನಗೌಡನ ಕುರಿತು ಕಳೆದ ಸಂಚಿಕೆಯಲ್ಲಿ ಶಿವನಗೌಡನ ಅಂತ್ಯ ಆರಂಭ, ಹೊತ್ತಿ ಉರಿದ ದೀಪ ಆರುತ್ತಿದೆ ಎಂಬ ತಲೆಬರಹದಡಿ ಲೇಖನವೊಂದನ್ನು ಬರೆಯಲಾಗಿತ್ತು. ಅದು ಪ್ರಕಟಗೊಂಡು ನಾಲ್ಕೇ ದಿನಗಳಲ್ಲಿ ಗೌಡನ ಮಂತ್ರಿಗಿರಿ ವಜಾಗೊಂಡು ಹೊತ್ತಿ ಉರಿದಿದ್ದ ದೀಪ ಆರಿ ಹೋಯಿತು!
ಕೆಲವೇ ತಿಂಗಳಲ್ಲಿ ಎರಡು ಬಾರಿ ಶಾಸಕನಾಗಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೌಡನ ಪೌರುಷವೇ ಬೇರೆಇತ್ತು. ಸಕರ್ಾರದ ಅಧಿಕಾರಿಗಳನ್ನೇಂದರೆ, ತನ್ನ ಮನೆಯ ಜೀತದಾಳುವಿನಂತೆ ನೋಡುತ್ತಿದ್ದ. ಸಣ್ಣಪುಟ್ಟ ಸಕರ್ಾರಿ ನೌಕರಸ್ಥರ ಕಥೆಯಂತೂ ಹೇಳತೀರದು. ಸಗಣಿಯಲ್ಲಿ 1 ಸಾವಿರದ ನೋಟು ಬಿದ್ದಿದೆಯೆಂದರೆ, ತನ್ನ ಪಿಎನ ಕೈಯಿಂದ ನೋಟಿಗೆ ಅತ್ತಿದ್ದ ಸಗಣೆಯನ್ನು ತೊಳಿಸಿ ಕಿಸೆಯಲ್ಲಿ ಇಟ್ಟುಕೊಳ್ಳುತ್ತಿದ್ದ, ಆ ಮಟ್ಟಿಗೆ ಹಣಕ್ಕಾಗಿ ಹಪಹಪಿಸುತ್ತಾ, ದುರಂಹಕಾರದಿಂದ ಮಾಧ್ಯಮದವರೊಂದಿಗೆ ವತರ್ಿಸುತ್ತಿದ್ದ ಗೌಡ ತನ್ನ ಅಹಂಕಾರ, ಗರ್ವದಿಂದ ತಾನೇ ಸರ್ವಪತನ ಕಂಡ. ಈಗಂತೂ ತಾಲೂಕಿನಲ್ಲಿ ಈತನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆ.ಡಿ.ಎಸ್ನಿಂದ ಗುರುತಿಸಿಕೊಂಡು ಮತ್ತೊಮ್ಮೆ ಮಂತ್ರಿಯಾಗಬೇಕೆಂಬ ಹಗಲುಗನಿಸಿಗೆ ಈಗ ತಣ್ಣೀರೆರಚಿದಂತಾಗಿದೆ!
ಒಂದು ಗೂಟದ ಕಾರು, ಇಬ್ಬರು ಪಿ.ಎ, ನಾಲ್ವರು ಪೊಲೀಸ್ ಅಧಿಕಾರಿಗಳು, ಮೂರು ಕಛೇರಿಗಳು, ಹೋದಲೆಲ್ಲ-ಬಂದಲ್ಲೆಲ್ಲ ಎಸ್ಕಾಟರ್್, ಗೂಟದಕಾರಿನಿಂದ ಬೆಂಬಲಿಗರು, ಡಿಸಿ ಕಛೇರಿಗೆ ಹೋದರೆ, ವಿಶೇಷ ಗೌರವ ಸೇರಿದಂತೆ ಸಕರ್ಾರದ ಹತ್ತಾರು ಸವಲತ್ತುಗಳನ್ನು ಹೊಂದಿದ್ದ ಶಿವನಗೌಡನಿಂದ ಎಲ್ಲವನ್ನು ಏಕಾಏಕಿ ಕಸಿದು ಕೊಂಡಾಗ ನೀರಿನಿಂದ ಹೊರಬಿದ್ದ ಮೀನಿನ ಪರಿಸ್ಥಿತಿ ಈತನದ್ದಾಗಿತ್ತು.
ಮೊದಲಿಗೆ ಹೇಳಿದಂಥೆ ಬದಲಾದ ರಾಜಕೀಯದಲ್ಲಿ ತನ್ನ ಅಂತ್ಯವನ್ನು ಅರಿತಿರುವ ಶಿವನಗೌಡ ಕುಮಾರಸ್ವಾಮಿಯ ಕಾಲಿಗೆ ಬಿದ್ದು ಜೆ.ಡಿ.ಎಸ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾನೆ. ವಜಾಗೊಂಡು ನಾಲ್ಕು ದಿನಗಳವರೆಗೆ ಗೌಡನ ಮನೆಯ ಹತ್ತಿರ ಸತ್ತ ಹೆಣದ ಮುಂದೆ ಹೇಗೆ ಜನ ಕುಳಿತಿರುತ್ತಾರೋ ಅದರಂತೆ ಎಲ್ಲರೂ ತುಟಿಪಿಟಕೆನ್ನದೇ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
ವಿದೇಶಕ್ಕೆ ಹೋಗಿ ಬರುವಷ್ಟರಲ್ಲಿಯೇ ಸಚಿವ ಸ್ಥಾನ ವಜಾಗೊಳ್ಳುವ ಎಲ್ಲ ಲಕ್ಷಣಗಳು ಗೌಡನಿಗೆ ಗೊತ್ತಾಗಿದ್ದವು. ಅಂದು ಯಡಿಯೂರಪ್ಪ ವಜಾಗೊಂಡ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ರವಾನೆ ಮಾಡುತ್ತಿದ್ದಂತೆ ರಾಯಚೂರು, ದೇವದುರ್ಗದ ಕೆಲವು ಅಧಿಕಾರಿ ವರ್ಗದವರು, ಜನಸಾಮಾನ್ಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸಕರ್ಾರದಿಂದ ಯಡಿಯೂರಪ್ಪ ಮೂವರು ಸಚಿವರನ್ನು ವಜಾಗೊಳಿಸಿದಾಗ ಅರವಿಂದ, ಗೂಳಿಹಟ್ಟಿ ಶೇಖರನ ಬೆಂಬಲಿಗರು ಅಲ್ಲಲ್ಲಿ ಕಿತಾಪತಿಗಳನ್ನು ಮಾಡುತ್ತಾ, ತಮ್ಮ ನಾಯಕರನ್ನು ಸಚಿವ ಸಂಪುಟದಿಂದ ಕೈಬಿಡಬಾರದು, ಅವರನ್ನು ಸಚಿವರಾಗಿ ಮುಂದುವರೆಸಬೇಕೆಂದು ಓರಾಟಗಳನ್ನು ಮಾಡಿದ್ದರು. ಅದನ್ನು ಮಾಧ್ಯಮಗಳು ಎಡಬಿಡದೇ ಪ್ರಸಾರ ಮಾಡಿದವು.
ಆದರೆ,
ಒಬ್ಬನೇ ಒಬ್ಬ ವ್ಯಕ್ತಿ ಶಿವನಗೌಡನನ್ನು ಸಚಿವಸಂಪುಟದಿಂದ ಕೈ ಬಿಡಬಾರದು ಎಂದು ರಾಯಚೂರು ಜಿಲ್ಲೆ, ಸ್ವತಃ ತವರು ದೇವದುರ್ಗ ತಾಲೂಕಿನಲ್ಲಿಯೇ ಒತ್ತಾಯಿಸಲಿಲ್ಲ. ಕೊನೆಯ ಪಕ್ಷ ಜಿಲ್ಲೆಯ ಬಿಜೆಪಿಯ ಯಾವೊಬ್ಬನು ಈತನ ಪರವಾಗಿ ಹೇಳಿಕೆಯನ್ನು ನೀಡಲಿಲ್ಲ. (ಆದರೆ, ಶಿವನಗೌಡ ಮಾತ್ರ ನನ್ನಿಂದ ರಾಮುಲು, ರೆಡ್ಡಿಗಳು ಇದ್ದಾರೆ. ಅವರೇ ನನ್ನನ್ನು ಉಳಿಸಿಕೊಳ್ಳುತ್ತಾರೆಂದು ಆಗಾಗ ಟಿವಿಗಳಲ್ಲಿ ಹೇಳಿಕೊಳ್ಳುತ್ತಿದ್ದ) ಅಂದರೆ, ಶಿವನಗೌಡನ ಕೆಲವು ದಿನಗಳ ಅಧಿಕಾರದಿಂದ ಎಷ್ಟು ಅಧಿಕಾರಿಗಳು, ಸಾಮಾನ್ಯ ಜನರು ಬೇಸತ್ತಿರಬೇಕು.
ಯಾರೊಬ್ಬರು ಈತನ ಪರವಾಗಿ ಪ್ರತಿಭಟನೆ, ಮನವಿಗಳನ್ನು ಕೊಡದಿದ್ದಾಗ, ಕೊನೆಗೆ ನಿವರ್ಿಲ್ಲ ಎಂಬಂತೆ ತಾನೇ ಸ್ವತಃ ಅರಕೇರಾಕ್ಕೆ ಪೋನ್ ಮಾಡಿ ತನ್ನ ಹಿಂಬಾಲಕರಿಂದ ಬಸ್ಗೆ ಬೆಂಕಿ ಹಚ್ಚಿಸಿ, ಇದು ವಿರೋಧ ಪಕ್ಷಗಳ ಕಿತಾಪತಿ ಎಂದು ಸುದ್ದಿ ಮಾಡಿಸಿದ್ದ. ಈತನ ಹಿಂಬಾಲಕರು ಬಸ್ಗೆ ಬೆಂಕಿ ಹಚ್ಚುತ್ತಿದ್ದರೂ ಅಲ್ಲಿಯೇ ಮುಕ್ಕಾಂ ಹೂಡಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳು ಮಾತ್ರ ಮೂಕಪ್ರೇಕ್ಷಕರಾಗಿ ಶಿವನಗೌಡನ ಹಿಂಬಾಲಕರನ್ನು ಬೆಂಬಲಿಸುತ್ತಿದ್ದರು. ಕೊನೆಗೆ ಅಮಾಯಕರನ್ನೇಲ್ಲ ಬಸ್ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎಳೆ ತಂದು ಜೈಲಿಗೆ ಹಾಕಲಾಗಿದೆ. ನಂತರ ಮೊಸಳೆ ಕಣ್ಣೀರು ಸುರಿಸಲು ಶಿವನಗೌಡನೇ ಅವರೆಲ್ಲರನ್ನು ಜಾಮೀನಿನ ಮೇಲೆ ಬಿಡಿಸಿರಬೇಕು!
ಅರಕೇರಾದಲ್ಲಿನ ರಾಜಕೀಯವನ್ನು ಬೆಂಗಳೂರಲ್ಲಿ ಮಾಡಲು ಹೋಗಿ ಯಡಿಯೂರಪ್ಪಗೆ ಅಧಿಕಾರ ಚಲಾಯಿಸಲು ಬರುವುದಿಲ್ಲ ಎಂದು ರೆಡ್ಡಿಗಳ ಜೊತೆ ಗುರುತಿಸಿಕೊಂಡು ಹೇಳಿಕೆ ನೀಡಿ ಯಡ್ಡಿಯ ಕೆಂಗಣ್ಣಿಗೆ ಗುರಿಯಾದ. ಸಮಯಕ್ಕಾಗಿ ಕಾಯುತ್ತಿದ್ದ ಯಡ್ಡಿ ಮೊದಲಿಗೆ ಶಿವನಗೌಡನನ್ನೇ ಸಂಪುಟದಿಂದ ಕೈಬಿಡಲು ತೀಮರ್ಾನಿಸಿದ. ಆ ಕುರಿತು ಹಿಂದೆ ರಾಯಚೂರಿಗೆ ಬಂದಾಗ ಯಡಿಯೂರಪ್ಪ ಪತ್ರಿಕಾ ಹೇಳಿಕೆಯನ್ನು ನೀಡಿದ್ದ. ನಂತರ ರೆಡ್ಡಿಗಳೆಲ್ಲ ಶಿವನಗೌಡನ ಪರ ಹೋಗಿ ಸಿ.ಎಂ ಸಾಹೇಬರೇ, ಶಿವನಗೌಡ ನಮ್ಮನ್ನು ನಂಬಿ ಜೆ.ಡಿ.ಎಸ್ನಿಂದ ಬಂದಿದ್ದ. ಅವನಿಗೆ ಮಂತ್ರಿ ಇಲ್ಲವೆಂದರೂ ಪರವಾಗಿಲ್ಲ. ಕೊನೆ ಪಕ್ಷ ನಿಗಮ ಮಂಡಳಿಯಲ್ಲಾದರೂ ಸ್ಥಾನ ಕೊಡಿ ಎಂದು ಅಂಗಲಾಚಿದರೂ ಯಡ್ಡಿ ಮಾತ್ರ ಕ್ಯಾರೇ ಎನ್ನಲಿಲ್ಲ.
ಅಷ್ಟರಲ್ಲಿಯೇ ಶಿವನಗೌಡ ಇನ್ನುಮುಂದೆ ಬಿಜೆಪಿಯಲ್ಲಿದ್ದರೆ, ನನಗೆ ಭವಿಷ್ಯವಿಲ್ಲ. ಯಡಿಯೂರಪ್ಪನಿಗೆ ನನ್ನ ಮೇಲೆ ಸಿಟ್ಟಿದೆ. ಮುಂದೊಂದು ದಿನ ಪಕ್ಷದಲ್ಲಿ ಟಿಕೇಟ್ನ್ನು ಸಹ ಕೊಡಲಿಕ್ಕಿಲ್ಲ. ಅದಕ್ಕಾಗಿ ಪಕ್ಷ ಬದಲಿಸುವುದೇ ಲೇಸು ಎಂದು ತಿಳಿದು ಭಿನ್ನಮತೀಯರಾಗಿದ್ದ ಜಾರಕಿಹೊಳಿ, ಅಸ್ನೋಟಿಕರ್, ಬೇಳೂರು ಜೊತೆಯಲ್ಲಿ ಸೇರಿಕೊಂಡು ಕುಮಾರಸ್ವಾಮಿಯ ಹಿಂದಿದೆ ಹೋಗಲು ತೀಮರ್ಾನಿಸಿದ.
ಆ ಮೇಲೆ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಜೆ.ಡಿ.ಎಸ್ಗೆ ಮರಳಿ ಬರುತ್ತೇನೆ. ನನ್ನಿಂದ ತಪ್ಪಾಗಿದೆ. ಅಣ್ಣಾವ್ರುಗಳಾದ ನೀವುಗಳು ಕ್ಷಮಿಸಬೇಕೆಂದು ಕಾಲಿಗೆ ಬಿದ್ದಿದ್ದಾನೆ! ಅಷ್ಟೋತ್ತಿಗೆ ಕುಮಾರಸ್ವಾಮಿ ಸಕರ್ಾರ ಕೆಡವಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದ. ಕಾಗೆ ಕೂಡುವದಕ್ಕೆ ಕೊಲ್ಲೆ ಮುರಿಯುವದಕ್ಕೆ ಎಂಬ ಗಾದೆಯಂತೆ ಶಿವನಗೌಡನಂತಹ ಹಲವಾರು ಶಾಸಕರು ಸಕರ್ಾರದ ವಿರುದ್ಧ ಬಂಡಾಯವೆದ್ದು ಓಡೋಡಿ ಬರಲು ಪ್ರಾರಂಭಿಸಿದರು.
ಕುಮಾರಸ್ವಾಮಿ ಗ್ರೀನ್ಸಿಗ್ನಲ್ ನೀಡುತ್ತಿದ್ದಂತೆ ಹೊರಬಿದ್ದ ಮೀನು ಮರಳಿ ನೀರಿಗೆ ಬಿದ್ದಂತೆ ಶಿವನಗೌಡನ ಗೆಟಪ್, ಹೇಳಿಕೆಗಳೇ ಚೇಂಜ್ ಆದವು. ಕೂಡಲೇ ಜೆ.ಡಿ.ಎಸ್ನ್ನು ಸೇರಲು ತನ್ನ ಬೆಂಬಲಿಗರು, ಸ್ವಾಮಿಗಳನ್ನು ಭೇಟಿ ಮಾಡಲು ಪ್ರಾರಂಭಿಸಿದನು..
ಈತನ ಎಲ್ಲಾ ಕಾರ್ಯಕ್ಕೂ ಸೊಪ್ಪು ಹಾಕುತ್ತಿದ್ದ ಕಾರ್ಯಕರ್ತರು ಮತ್ತು ಸ್ವಾಮೀಜಿಗಳು ಈಬಾರಿ ಪಕ್ಷ ಬದಲಿಸಬೇಡಿ ಎಂದು ಸೂಚಿಸಿದರಂತೆೆ!
ಮೊನ್ನೆ ತಾನೇ ಚುನಾವಣೆ ಮುಗಿದಿದೆ. ಮತ್ತೇ ಜನರನ್ನು ಮತ ಕೇಳಲು ಹೋದರೆ, ಕ್ಯಾಕರಿಸಿ ಉಗಿಯುತ್ತಾರೆ. ಯಾವ ಮುಖವನ್ನು ಇಟ್ಟುಕೊಂಡು ಜನರತ್ತ ಮತಕೇಳುವುದು. ಅದಕ್ಕಾಗಿ ಸುಮ್ಮನೇ ಬಿಜೆಪಿಯಲ್ಲಿಯೇ ಇರ್ರೀ ಎಂದು ತಾಕೀತು ಮಾಡಿದ್ದಾರಂಥೆ!
ಇದ್ಯಾವದಕ್ಕೂ ತಲೆಕೆಡಿಸಿಕೊಳ್ಳದ ಗೌಡ ಜೆ.ಡಿ.ಎಸ್ ಸೇರಿದರೆ ಮುಂದೆ ಅವಕಾಶಗಳು ಸಿಗಬಹದು. ಒಂದು ವೇಳೆ ಕಾಂಗ್ರೇಸ್ ಜನತಾದಳದ ಸಮ್ಮಿಶ್ರಸಕರ್ಾರ ಅಸ್ತಿತ್ವಕ್ಕೆ ಬಂದರೆ, ಮಂತ್ರಿಯೂ ಆಗಬಹುದು ಎಂದು ಪೂವರ್ಾಗ್ರಹ ಪೀಡಿತನಾಗಿ ತಾಸಿಗೊಂದು ತೀಮರ್ಾನಗಳನ್ನು ತೆಗೆದುಕೊಳ್ಳುತ್ತಿದ್ದಾನೆ.

ಉರಿ ಬಿಸಿಲಲ್ಲಿ ಬಾಲಕಾಮರ್ಿಕರ ಪರದಾಟ
ವಜಾಗೊಂಡ ಮಂತ್ರಿಯ ತವರಲ್ಲಿ ಬಾಲ ಕಾಮರ್ಿಕರ ಕಾನೂನುಗಳೇ ಇಲ್ಲ, ಬಾಲಕಾಮರ್ಿಕ ಪದ್ದತಿಯನ್ನು ತೊಲಗಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೆಸರಿಗೆ ಮಾತ್ರ ಇಲಾಖೆಯಿದ್ದು, ಅದರ ಕಾರ್ಯವೈಖರಿ ಮಾತ್ರ ಶೂನ್ಯವಾಗಿದೆ.
ಆಂದ್ರ ಮೂಲದ ಭೂ ಮಾಲೀಕರೆಲ್ಲ ಇಲ್ಲಿ ಹೆಚ್ಚು ಕಡಿಮೆ ಬಾಲಕಾಮರ್ಿಕರನ್ನೇ ತಮ್ಮ ಹೊಲಗಳಲ್ಲಿ ದುಡಿಸಿಕೊಳ್ಳುತ್ತಾರೆ. ಇವರನ್ನು ಯಾರು ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಇಲ್ಲಿನ ಕೆಲವೊಂದು ಭಾಗಗಳಿಗೆ ನಾರಾಯಣಪುರ ಬಲದಂಡೆ ಕಾಲುವೆ ನೀರು ಸಮರ್ಪಕವಾಗಿ ತಲುಪುವುದಿಲ್ಲವಾದರೂ, ಆಂದ್ರ ಮೂಲದ ಭೂ ಮಾಲೀಕರು ಇರುವ ಕಡೆ ಮಾತ್ರ ಸರಿಯಾದ ನೀರಿನ ಸೌಲಭ್ಯವಿದೆ. ಇದರಿಂದ ತಾವುಗಳು ಲೀಜ್ಗೆ ಪಡೆದಿರುವ ಭೂಮಿಗಳಲ್ಲಿ ಅತಿಹೆಚ್ಚಿನ ಲಾಭವನ್ನು ಗಳಿಸಲು ಕಡಿಮೆ ಕೂಲಿಗೆ ಶಾಲೆಗೆ ಹೋಗಬೇಕಾದ ಚಿಕ್ಕಚಿಕ್ಕ ಮಕ್ಕಳನ್ನು ಕರೆತಂದು ದುಡಿಸಿಕೊಳ್ಳುತ್ತಾರೆ.
ಮೂಲತಃ ಚಿಕ್ಕಮಕ್ಕಳ ತಂದೆ ತಾಯಿಗಳು ಅವಿಧ್ಯಾವಂತರಾಗಿದ್ದರಿಂದ ತಮ್ಮ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸುವುದರಲ್ಲಿ ವಿಫಲರಾಗಿರುತ್ತಾರೆ.
ಇವರಿಗಿರುವ ಅನಿವಾರ್ಯತೆಯನ್ನು ಆಂದ್ರ ಭೂಮಾಲೀಕರು ಬಳಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಬಾಲಕಾಮರ್ಿಕರ ತಂದೆತಾಯಿಗಳನ್ನು ಅಧಿಕಾರಿಗಳು, ಮಾಧ್ಯಮದವರು ವಿಚಾರಿಸಲು ಹೋದರೆ, ಅವರುಗಳು ಹೇಳುವ ಮಾತು ಹೀಗಿವೆ ; ನಮಗೆ ಕೆಲಸವಿಲ್ಲ, ಮನೆಯಲ್ಲಿ ನಾಲ್ಕೈದು ಮಕ್ಕಳು, ದಿನದ ಒಂದೊತ್ತಿನ ಊಟಕ್ಕಾದರೂ ದುಡಿಯಬೇಕಲ್ಲವೇ, ನಮಗಂತೂ ನಾವೇ ಬೆಳೆದುಕೊಳ್ಳಲು ಭೂಮಿಯಿಲ್ಲ. ಹಾಗಾಗಿ ಬೇರೆಯವರ ಹೊಲ-ಗದ್ದೆಗಳಿಗೆ ಕೂಲಿ ಹೋಗುತ್ತೇವೆ. ನಮ್ಮ ಕೂಲಿ ಹಣದಲ್ಲಿ ಜೀವನ ಸಾಗಿಸುವುದೇ ದೊಡ್ಡ ಮಾತು. ಅಂತಹದರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ನಮಗೇನು ಲಾಭ? ಮಕ್ಕಳು ಕೆಲಸ ಮಾಡಿದರೆ ಒಂದಿಷ್ಟು ಹಣವಾದರೂ ಸಿಗುತ್ತದೆ. ಅದಕ್ಕಾಗಿ ನಾವೇ ನಮ್ಮ ಮಕ್ಕಳನ್ನು ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗುತ್ತೇವೆ. ಇದು ನಮ್ಮ ಬದುಕೆಂದು ಅಳಲನ್ನು ತೋಡಿಕೊಳ್ಳುತ್ತಾರೆ.
ಉರಿಬಿಸಿಲಿನಲ್ಲಿ ಆಟೋ, ಟಾಟಾ ಎ.ಸಿ ಯಂತಹ ಸಣ್ಣಪುಟ್ಟಗಾಡಿಗಳ ಮೇಲೆ ಕುಳಿತುಕೊಂಡು ವಿದ್ಯಾಥರ್ಿ ಜೀವನದ ಹಂಗನ್ನು ತೊರೆದು ಮಕ್ಕಳು ದಿನಾಲು ಕೆಲಸಕ್ಕೆ ಹೋಗುತ್ತವೆ. ಗಾಡಿಗಳ ಚಾಲಕರು ನಾಲ್ಕು ದುಡ್ಡಿನ ಆಸೆಗಾಗಿ ಮೇಲೆ ಕೆಳೆಗೆ ತುಂಬಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಒಂದು ವೇಳೆ ದುರದೃಷ್ಟಕ್ಕೆ ಅಪಘಾತಗಳು ಸಂಭವಿಸಿದರೆ, ಮೊದಲಿಗೆ ದುರ್ಮರಣಕ್ಕೀಡಾಗುವುದು ಮುದ್ದು ಮಕ್ಕಳೇ. ಇಲ್ಲಿ ಪ್ರಮುಖವಾಗಿ ವಾಹನಗಳ ಮೇಲೆ ನಿಯಂತ್ರಣ ಇಡಬೇಕಾಗಿರುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಅಂತಹದೊಂದು ಇಲಾಖೆ ಲಂಚದ ಹಾವಳಿಯಲ್ಲಿ ಸಿಕ್ಕಿಹಾಕಿಕೊಂಡು ವಿಫಲವಾಗಿರುವದರ ಪರಿಣಾಮ ಇಂತಹ ದುರ್ಘಟನೆಗಳು ನಡೆಯುತ್ತಿರುತ್ತವೆ.
ಆದರೆ, ಸಕರ್ಾರಗಳು ಮಾತ್ರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು, ಮಕ್ಕಳನ್ನು ಶಾಲೆಗೆ ಕರೆತರಲು ಹತ್ತಾರು ಯೋಜನೆಗಳ ಮುಖಾಂತರ ಕೋಟಿಗಟ್ಟಲೇ ಹಣವನ್ನು ವ್ಯಯಿಸುತ್ತಿದೆ. ಆ ಹಣ ಸರಿಯಾಗಿ ಖಚರ್ಾಗಿದ್ದರೆ, ಇಂತಹ ಪರಿಸ್ಥಿತಿ ಎಲ್ಲಿಯೂ ಉದ್ಭವಿಸುತ್ತಿದ್ದಿಲ್ಲ.
ಇನ್ನು ಗ್ಯಾರೇಜ್, ಮಧ್ಯದಂಗಡಿ, ಹೋಟೆಲ್ಗಳಲ್ಲಿಯಂತೂ ಬಾಲಕಾಮರ್ಿಕರೇ, ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ. ಎಲ್ಲ ಅಂಗಡಿಗಳ ಮುಂದೆ ಬಾಲಕಾಮರ್ಿಕರ ನಿಷೇದ.. ಅದನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ, ಜೊತೆಯಲ್ಲಿ ದಂಡ ಎಂದು ನಾಮಫಲಕವನ್ನು ಹಾಕಿರುತ್ತಾರೆ. ಆದರೆ, ದಿನಾಲು ಅದೇ ನಾಮಫಲಕವನ್ನು ಬಾಲಕಾಮರ್ಿಕನೇ ವರಸುತ್ತಾನೆ.
ಅಧಿಕಾರಿಗಳು ಮಾತ್ರ ಈ ಶೋಚನೀಯ ಸ್ಥಿತಿ ದೇಶದೆಲ್ಲೆಡೆ ಇದೆ. ನಮ್ಮ ದೇವದುರ್ಗದಲ್ಲಿ ಹೊಸದೇನಲ್ಲ ಎಂದು ಬೇಜವಾಬ್ದಾರಿಯ ಮಾತನಾಡುತ್ತಾರೆ.

ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ಆಯ್ಕೆಯಾಗಿರುವ ದಲಿತ ವಿರೋಧಿ ಶಾಸಕ ಮಾನಪ್ಪ ವಜ್ಜಲ್


ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ಆಯ್ಕೆಯಾಗಿರುವ ದಲಿತ ವಿರೋಧಿ ಶಾಸಕ ಮಾನಪ್ಪ ವಜ್ಜಲ್ 2ವರೆ ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವೊಂದು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿಲ್ಲ. ತಾಲೂಕಿನ ಬಿಜೆಪಿಯ ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ದಿನನಿತ್ಯ ಬರೀ ಜಾತಿಯ ರಾಜಕಾರಣ ಮಾಡುತ್ತಾ ಯಥಾ ಕಾಲಹರಣ ಮಾಡಿದ್ದಾನೆ ಎಂದು ತಾಲೂಕಿನ ಪ್ರತಿಯೊಬ್ಬ ಪ್ರಜೆಯೂ ಆರೋಪಿಸುತ್ತಿದ್ದಾನೆ.
ಈ ಕುರಿತು ನಮ್ಮ ಪ್ರತಿನಿಧಿ ಸಂಪಲ್ಲೇರ್ ಅವರಿಂದ ಒಂದು ವಿಶ್ಲೇಷಣೆ.
ಲಿಂಗಸ್ಗೂರು ಮೀಸಲು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ತಾನೊಬ್ಬ ಶಾಸಕನೆಂಬುದನ್ನೇ ಭವಿಷ್ಯ ಮರೆತಂತಿದೆ.
ಪುಡಾರಿ ವ್ಯಕ್ತಿಗಳಂತೆ, ತನ್ನ ವಿರುದ್ಧ ದಲಿತರು ಮಾಡಿರುವ ಹೋರಾಟಕ್ಕೆ ರಿವೇಂಜ್ ಆಗಿ ತಮ್ಮ ಸ್ವಜಾತಿಯ ಕೆಲವು ಬಾಡಿಗೆದಾರರನ್ನು ಜಮಾಯಿಸಿ ಲಿಂಗಸ್ಗೂರಿನಲ್ಲಿ 15ರಂದು ತನ್ನ ತಮ್ಮನ ನೇತೃತ್ವದಲ್ಲಿ ಹೋರಾಟ ಮಾಡಿಸಿದ್ದ.
ಅದಕ್ಕಿಂತ ಮುಂಚೆ 1ರಂದು ದಲಿತ ಸಂಘಟನೆಗಳು ತಾಲೂಕಿನಲ್ಲಿ ನಡೆದಿರುವ ಕೊಲೆ ಪ್ರಕರಣಗಳು, ಮಾನಪ್ಪನ ಸ್ವಜಾತಿ ರಾಜಕಾರಣ ಹಾಗೂ ತಾಲೂಕಿನ ಭ್ರಷ್ಟ ಆಡಳಿತವನ್ನು ವಿರೋಧಿಸಿ ಲಿಂಗಸ್ಗೂರಿನಲ್ಲಿ ಬೃಹತ್ ಪ್ರತಿಭಟನೆಯೊಂದನ್ನು ಮಾಡಿದ್ದವು. ಅಂದಿನ ಆ ಪ್ರತಿಭಟನೆ ಬರೀ ದಲಿತರ ಪ್ರತಿಭಟನೆಯಾಗದೇ, ಜನಸಾಮಾನ್ಯರ ಹೋರಾಟವಾಗಿ ರೂಪುಗೊಂಡಿತ್ತು. ಅದು ಎಲ್ಲರಿಗೆ ಗೊತ್ತಿರುವ ವಿಷಯ.
ಅಲ್ಲಿ ಪ್ರಮುಖವಾಗಿ ತಾಲೂಕಿನಲ್ಲಿ ಈಗಾಗಲೇ ಸಕರ್ಾರದ ವರದಿಯಂತೆ 8ಕೊಲೆಗಳು ನಡೆದಿವೆ! ಅವುಗಳನ್ನು ಭೇದಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ. ಪೊಲೀಸ್ ಅಧಿಕಾರಿಗಳು ಮಾನಪ್ಪನ ಸ್ವಜಾತಿಯವರಾಗಿದ್ದರಿಂದ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ತಾಲೂಕಾ ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ದಲಿತರು ದಲಿತರಾಗಿ ಬದುಕುವ ಸ್ಥಿತಿ ಹಳ್ಳಿಗಳಲ್ಲಿಲ್ಲ, ಇನ್ನು ಶಿಕ್ಷಣ ಇಲಾಖೆ, ತಾ.ಪಂನಲ್ಲಿಯೂ ಮಾನಪ್ಪನ ಸ್ವಜಾತಿಯವರೇ ಇರುವದರಿಂದ ತಾಲೂಕಿನಲ್ಲಿ ಅಭಿವೃದ್ಧಿಯೂ ಮರಿಚೀಕೆಯಾಗಿದೆ ಎನ್ನುವ ಎಂಬಿತ್ಯಾದಿ ಆರೋಪಗಳು ದಲಿತ ಸಂಘಟನೆಗಳದ್ದಾಗಿದ್ದವು.
ಆದರೆ,
ಶಾಸಕನಾಗಿರುವ ಮಾನಪ್ಪ ದಲಿತ ಸಂಘಟನೆಗಳು ಮಾಡುತ್ತಿರುವ ಆರೋಪಗಳನ್ನೆಲ್ಲ ಸಕರಾತ್ಮಕವಾಗಿ ಗಣನಗೆ ತೆಗೆದುಕೊಳ್ಳದೇ, ಬರೀ ದಲಿತ ಸಂಘಟನೆಗಳು ನಮ್ಮ ಭೋವಿ ಸಮಾಜವನ್ನು ಅವಹೇಳನ ಮಾಡುತ್ತಿವೆ. ನಾನು ಮಾಡುತ್ತಿರುವ ಅಭಿವೃದ್ಧಿ ದಲಿತ ಮುಖಂಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ನಾನು ಅಧಿಕಾರಕ್ಕೆ ಬಂದ ಮೇಲೆ ಅಟ್ರಾಸಿಟಿ ಪ್ರಕರಣಗಳಿಗೆ ಕಡಿವಾಣ ಹಾಕಿದ್ದೇನೆ. ಅದ್ಕಕಾಗಿ ದಲಿತ ಮುಖಂಡರು ನನ್ನ ಮೇಲೆ ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ದಲಿತ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕೆಂದು ಎಂದು ಆರೋಪಿಸುತ್ತಾ, ತನ್ನ ಅಣ್ಣ-ತಮ್ಮಂದಿರ ಮುಖಾಂತರ ತಮ್ಮ ಭೋವಿ ಜನಾಂಗದವರನ್ನು ಸೇರಿಸಿ ಪ್ರತಿಭಟನೆ ಮಾಡಿಸಿದ. ಇಲ್ಲಿ ಅಸಲಿಗೆ ಮಾನಪ್ಪ, ದಲಿತರ ಹೋರಾಟದಿಂದ ಮಣ್ಣುಪಾಲಾದ ತನ್ನ ಇಮೇಜ್ನ್ನು ಮತ್ತೇ ಕಟ್ಟಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ.
ಇಂತಹ ಚಿಲ್ಲರೆ ಕೆಲಸವನ್ನು ಮಾನಪ್ಪ ಮುಂದೆ ಮಾಡುತ್ತಾನೆಂದು ದಲಿತ ಸಂಘಟನೆಗಳಿಗೆ ಮೊದಲಿಗೆ ಗೊತ್ತಿದ್ದರಿಂದ ದಲಿತರು ಅಂದಿನ ತಮ್ಮ ಪ್ರತಿಭಟನೆಯಲ್ಲಿ ಈ ರೀತಿ ಹೇಳಿದ್ದರು.
ಮಾನಪ್ಪ.. ನೀನೇನಾದರೂ ನಮ್ಮ ಹೋರಾಟಕ್ಕೆ ಪ್ರತಿಯಾಗಿ ವಿನಾಕಾರಣ ದುಡ್ಡಿನ ದರ್ಪದಿಂದ ಹೋರಾಟವನ್ನು ಮಾಡಿದರೆ, ಮತ್ತೇ ತಾಲೂಕಿನಲ್ಲಿ 25000 ದಲಿತರನ್ನು ಸೇರಿಸಿ ಉಗ್ರಹೋರಾಟ ಮಾಡಬೇಕಾಗುತ್ತದೆ. ಎಂದು ಎಚ್ಚರಿಸಿದ್ದಾರೆ.
ಆದಾಗ್ಯೂ ದಲಿತ ಸಂಘಟನೆಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೇ, ಅಮಾಯಕ ಜನರನ್ನು ದುಡ್ಡಿಗೆ ಸೇರಿಸಿ ಹೋರಾಟವನ್ನು ಮಾಡಿಸಿದ್ದಾನೆ.
ಮುಂದೆ ದಲಿತರು ಕೂಡ ಪ್ರತಿಭಟನೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ಮಾನಪ್ಪನ ವಿರುದ್ಧದ ಹೋರಾಟ.
ಅಂತೆಯೇ ದಲಿತ ಸಂಘಟನೆಗಳು ತಾಲೂಕಿಗೆ ಬಂದಂತಹ ಎಲ್ಲಾ ಯೋಜನೆಗಳಲ್ಲಿ ಮಾನಪ್ಪ ನುಂಗಿದ್ದೆಷ್ಟು? ಮತ್ತು ಹಿಂಬಾಲಕರಿಗೆ ಕೊಟ್ಟಿದ್ದೇಷ್ಟು? ಜೊತೆಯಲ್ಲಿ ತನ್ನ ಅಣ್ಣತಮ್ಮಂದಿರ ಹೆಸರಲ್ಲಿ ಅಸಲಿಗೆ ಎತ್ತಿದ ನಕಲಿ ಬಿಲ್ಗಳೆಷ್ಟು? ಎಂಬೆಲ್ಲಾ ದಾಖಲೆಗಳನ್ನು ಕ್ರೋಡಿಕರಿಸುತ್ತಿದ್ದಾರೆ. ಈ ವಿಷಯವು ಕೂಡ ಮಾನಪ್ಪನಿಗೆ ಈಗಾಗಲೇ ಗೊತ್ತಾಗಿದೆ. ಅದಕ್ಕಾಗಿ ದಲಿತರು ಮುಂದೊಂದು ದಿನ ಹೋರಾಟ ಮಾಡದಂತೆ ತನ್ನ ಚೇಲಾಗಳಿಂದ ಕೆಲವೊಂದು ತಂತ್ರಗಾರಿಕೆಯನ್ನು ಮಾಡುತ್ತಿದ್ದಾನೆ.
ಅನಕ್ಷರಸ್ಥ ಶಾಸಕನ ಅವಾಂತರ!
ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ವಕ್ಕರಿಸಿರುವ ಮಾನಪ್ಪ ಮೂಲತಃ ಅನಕ್ಷರಸ್ಥ. (ಓದಿದ 4ನೇ ಕ್ಲಾಸು ಲೆಕ್ಕಕ್ಕೆ ಬರುವುದಿಲ್ಲ).
ಬಿಜೆಪಿಯೆಂದರೆ, ರಾಷ್ಟ್ರದಲ್ಲಿ ಅದೊಂದು ಹಿಂದುತ್ವವಾದಿಗಳ ಪಕ್ಷ. ಅಲ್ಲಿ ಬ್ರಾಹ್ಮಣರು, ಲಿಂಗವಂತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷವನ್ನು ಸಂಘಟಿಸುತ್ತಿರುತ್ತಾರೆ. ಅದು ರಾಜ್ಯಮಟ್ಟದಲ್ಲಿಯೂ ಹಾಗೇ ಇರುತ್ತದೆ.
ಆದರೆ,
ಮಾನಪ್ಪನ ಕ್ಷೇತ್ರದಲ್ಲಿ ಅದು ಉಲ್ಟಾ ಹೊಡೆದಿದೆ.
ಮೂಲ ಬಿಜೆಪಿಗಳಾಗಿ ಹತ್ತನ್ನೆರಡು ವರ್ಷ ಕಮಲದ ಝಂಡವನ್ನು ಹಿಡಿದಿದ್ದ ಲಿಂಗವಂತರನ್ನೇಲ್ಲ ಮಾನಪ್ಪ ಮೂಲೆಗುಂಪು ಮಾಡುತ್ತಾ, ತಮ್ಮ ಜನಾಂಗದವರನ್ನೇ ವಿವಿಧ ಮೋಚರ್ಾಗಳಡಿ ಸೇರಿಸಿ ಮನಸ್ಸಿಗೆ ಬಂದಂತೆ ಅಧಿಕಾರವನ್ನು ಚಲಾಯಿಸುತ್ತಿದ್ದಾನೆ.
ಲಿಂಗಾಯತರು ಹೇಗೆ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ತಮ್ಮ ಜಾತಿಯವರನ್ನು ಬೆಳೆಸುತ್ತಾರೆ. ಅದರಂತೆ ಲಿಂಗವಂತರ ಹಾದಿ ಹಿಡಿದು ಮಾನಪ್ಪನು ಕೂಡ ತನ್ನ ಸ್ವಜಾತಿಯವರನ್ನು ಬೆಳೆಸಲು ಹೋಗಿ ಹಳ್ಳಕ್ಕೆ ಬಿದ್ದಿದ್ದಾನೆ.
ಸುಶಿಕ್ಷಿತ ಲಿಂಗವಂತ ಅಮರೇಗೌಡ ಬಯ್ಯಾಪೂರ 15ವರ್ಷಗಳ ಕಾಲ ತನ್ನ ಜಾತಿಯ ನಾಯಕರನ್ನು ಬೆಳೆಸಿದ್ದರೂ ಮಾನಪ್ಪನ ಆಡಳಿತದಲ್ಲಿ ಇರುವಂತೆ ಎಂದೆಂದೂ ಕಾನೂನು ಸುವ್ಯವಸ್ಥೆ ತಾಲೂಕಿನಲ್ಲಿ ಹದಗೆಟ್ಟಿದ್ದಿಲ್ಲ.
2ಮೇಟಿಗಳನ್ನು ಎಡಬಲಕ್ಕೆ ಅಮರೇಗೌಡ ತಗೊಂಡು ತಿರುಗಿದರೂ, ಎಲ್ಲ ಇಲಾಖೆಯಲ್ಲಿ ಲಿಂಗಾಯತರು ಮಾಡಿದ್ದನ್ನೇ ಸರಿ ಎನ್ನುತ್ತಿದ್ದಿಲ್ಲ.
ನಮಗೆ ಗೊತ್ತಿದ್ದಂತೆ ಇಲ್ಲಿ ಒಂದು ಘಟನೆಯನ್ನು ನೆನಪಿಸೋಣ. ಯಾವುದೋ ಒಂದು ಜಮೀನಿನ ವಿಷಯದಲ್ಲಿ ಹಟ್ಟಿಯ ದಿ.ಶಾಲಂಸಾಬಗೆ ಕಂದಾಯ ಇಲಾಖೆಯ ಲಿಂಗವಂತ ನೌಕರನೌಬ್ಬ ಕೆಲಸವನ್ನು ಮಾಡಿಕೊಡದಿದ್ದಾಗ ಖುದ್ದಾಗಿ ಅಮರೇಗೌಡನೇ ಕಂದಾಯ ಇಲಾಖೆಗೆ ಬಂದು ಆ ನೌಕರನನ್ನು ಹಿಗ್ಗಾಮಗ್ಗಾ ಜಾಡಿಸುತ್ತಾ, ಬರೀ ಲಿಂಗವಂತರು ಹಾಕಿದ ಓಟಿನಿಂದ ನಾನು ಗೆದ್ದಿಲ್ಲ. ನನ್ನನ್ನು ಎಲ್ಲರು ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಎಲ್ಲರ ಕೆಲಸವನ್ನು ಮಾಡಿಸಿಕೊಡಬೇಕು. ನಾನು ಬರೀ ಲಿಂಗವಂತರಿಗೆ ಮಾತ್ರ ಎಂ.ಎಲ್.ಎ ಅಲ್ಲ, ಎಂದು ಹೇಳಿ ಕೊನೆಗೆ ಆ ನೌಕರನನ್ನೇ ವಗರ್ಾವಣಿ ಮಾಡಿಸಿದ. (ಇಂತಹ ಸಾಕಷ್ಟು ಉದಾಹರಣಿಗಳಿವೆ.)
ಆದರೆ,
ಇಂದು ಮಾನಪ್ಪನ ಸ್ವಜಾತಿ ಸಮಾಜದ ಅಧಿಕಾರಿಗಳು ಜನಸಾಮಾನ್ಯರಿಗೆ ಏನೆಲ್ಲ ತೊಂದರೆಗಳನ್ನು ಕೊಡುತ್ತಿದ್ದರೂ ಈತ ಮಾತ್ರ ತುಟಿಪಿಟಕೆನ್ನುವುದಿಲ್ಲ. ಅಂದರೆ, ಇತನಿಗೆ ಎಂತಹದಿರಬಹುದು ತನ್ನ ಸ್ವಜಾತಿಯ ದುರಾಭಿಮಾನ. ದಲಿತರ ಸಿಟ್ಟು ರಟ್ಟೆಗೆ ಬಂದರೆ ಅಧಿಕಾರಿಗಳೆಲ್ಲ ಚೂರುಚೂರು ಎಂಬ ದಲಿತರ ಘೋಷಣೆಯ ಸಾರಾಂಶವನ್ನು ನಿನ್ನ ಅಧಿಕಾರಿಗಳಿಗೆ ಹೇಳು. ನಿಷ್ಪಪಕ್ಷಪಾತವಾಗಿ ಯಾರೇ ತಪ್ಪು ಮಾಡಿರಲಿ, ಅವರಿಗೆ ಶಿಕ್ಷೆಯನ್ನು ನೀಡಿರಿ ಎಂದು ತಾಲೂಕಾ ಆಡಳಿತಕ್ಕೆ ಸೂಚಿಸು.
ಅದನ್ನೆಲ್ಲ ಬಿಟ್ಟು ನನಗೆ ಬರೀ ಭೋವಿ ಜನಾಂಗದವರು ಮಾತ್ರ ಮತ ಹಾಕಿ ಗೆಲ್ಲಿಸಿದ್ದಾರೆಂದು ತಿಳಿದರೆ, ನೀನೊಬ್ಬ ಶತಮೂರ್ಖನಾಗುತ್ತಿಯಾ! ತಾಲೂಕಿನಲ್ಲಿ ಎಲ್ಲರೂ ಮತಹಾಕಿದ್ದಕ್ಕೆ ಅತಿಹೆಚ್ಚು ಮತಗಳಿಂದ ಗೆದ್ದಿದ್ದೀ.
ದಲಿತ ಸಂಘಟನೆಗಳ ಹತ್ತಾರು ತುಕ್ಕಡಿಗಳಿಗೆ ಒಂದಿಷ್ಟು ಹಣವನ್ನು ಕೊಟ್ಟು ಡಿವೈಡ್ ಮಾಡಿದರಾಯ್ತೂ ಅಂತ ಕನಸಿನಲ್ಲಿಯೂ ಯೋಚಿಸಬೇಡ. ಆ ಕಾಲ ಮುಗಿದು ಹೋಗಿದೆ. ಅದರಂತೆ ನಿನ್ನ ಅಂತ್ಯ ಕೂಡ ಇದೀಗ ಆರಂಭವಾಗುತ್ತಿದೆ. ಇದು ದಲಿತರ ಪ್ರಥಮ ಎಚ್ಚರಿಕೆಯೆಂದು ತಿಳಿದುಕೋ..

ಮಾನಪ್ಪನ ಹಟ್ಟಿ ರಾಜಕೀಯ
ಮಾನಪ್ಪ ಅಧಿಕಾರಕ್ಕೆ ಬರಲು ಪ್ರಮುಖವಾಗಿ ಮೂರು ಕಾರಣ.
*. ಪರಿಶಿಷ್ಟೇತರರು ಒಗ್ಗಟ್ಟಿನಿಂದ ಮತಚಲಾಯಿಸಿರುವುದು,
*. ಮಾನಪ್ಪನಿಗೆ ಹಣದಲ್ಲೂ, ಹೆಂಡದಲ್ಲೂ ಮೀರಿಸುವ ಅಭ್ಯಥರ್ಿಗಳನ್ನು ಪ್ರಬಲ ಪಕ್ಷಗಳು ಹಾಕದೇ ಇರವುದು.
*. ಕೊನೆಯದಾಗಿ ಬಿಜೆಪಿಯ ವೈರಿಗಳೆಂದು ಬಿಂಬಿತವಾಗಿರುವ ತಾಲೂಕಿನ ಅಲ್ಪಸಂಖ್ಯಾತರು (ಹಟ್ಟಿಯನ್ನು ಹೊರತುಪಡಿಸಿ) ಉಳಿದ ಭಾಗದಲ್ಲಿ ದುಡ್ಡಿಗೆ ತಮ್ಮ ಮತಗಳನ್ನು ಮಾರಿಕೊಂಡದ್ದು.
ಯಾಕೆ ಕಾರಣಗಳನ್ನು ಮೊದಲಿಗೆ ತಿಳಿಸಿದೆಯೆಂದರೆ, ಮಾನಪ್ಪ ತಾನು ತನ್ನ ಜಾತಿಯವರ ಓಟಿನಿಂದಲೇ ಗೆದ್ದಿದ್ದೇನೆಂಬ ಪಿತ್ತವನ್ನು ನೆತ್ತಿಗೇರಿಸಿಕೊಂಡಿದ್ದಾನೆ. ಆದ್ದರಿಂದ ವಾಸ್ತವ ಮಾನಣ್ಣ ಈಗಲಾದರೂ ತಾನು ಗೆಲ್ಲಲು ಯಾರು ಕಾರಣ ಎಂಬುದನ್ನು ಅರಿಯಲಿ ಎಂಬುದಕ್ಕಾಗಿ.
ಈ ಮೂರು ಕಾರಣಗಳಿಂದ ಗೆದ್ದುಬಂದ ಮಾನಪ್ಪ ಮೊದಲಿಗೆ ಟಾಗರ್ೇಟ್ ಮಾಡಿದ್ದು ಹಟ್ಟಿಯನ್ನೇ!
ಶಾಸಕನಾಗುತ್ತಿದ್ದಂತೆ ಹಟ್ಟಿಯ ಮೊದಲಿನ ಬಿಜೆಪಿಯ ಲಿಂಗವಂತರನ್ನೆಲ್ಲ ಪಕ್ಷದಲ್ಲಿ ತುಳಿಯುತ್ತ, ತನ್ನ ಸ್ವಜಾತಿ ಬಂಧುಭಾಂದವರನ್ನು ಬೆಳೆಸಲು ತೀಮರ್ಾನಿಸಿದ. 12ನೇ ಕ್ಲಾಸ್ ಹುಡುಗರಿಗಿರುವ ಕನಿಷ್ಟ ಅರ್ಹತೆ ಇಲ್ಲದ ಕಳ್ಳ-ಸುಳ್ಳರನ್ನೆಲ್ಲ ಕಾಲೇಜು ಸಮಿತಿಯ ಸುಧಾರಣಾ ಸಮಿತಿಗಳಿಗೆ ಸದಸ್ಯರನ್ನಾಗಿ ಮಾಡಿದ. (ಕೆಲವೊಂದು ಸಂಧರ್ಭಗಳಲ್ಲಿ ಹಟ್ಟಿ ಕಾಲೇಜಿನ ಕಾರ್ಯಕ್ರಮಗಳಿಗೆ ನಾವು ಹೋದಾಗ ಸುಧಾರಣಾ ಸಮಿತಿಯ ಮಾನಣ್ಣನ ಸದಸ್ಯರ ವೇದಿಕೆ ನೋಡಿ ನಗುಬರುತ್ತದೆ.) ಊರೂರು ತಿರುಗಿಕೊಂಡು ಸಂಘಸಂಸ್ಥೆಗಳನ್ನು ಮಾಡುತ್ತಿರುವವರಿಗೆ ಪಕ್ಷದಲ್ಲಿ ಕೆಲವೊಂದು ಮೋಚರ್ಾಗಳ ಉಸ್ತುವಾರಿ ಕೊಟ್ಟ.
ಅದಾದ ಕೆಲವೇ ದಿನಗಳಲ್ಲಿ ಲಿಂಗವಂತರ ಪಕ್ಷವಾಗಿದ್ದ ಬಿಜೆಪಿಯನ್ನು ಶಿವಪುತ್ರ, ಸಜ್ಜನ & ಗ್ಯಾಂಗ್ನಿಂದ ಕಸಿದುಕೊಂಡು ತನಗೆ ಬೇಕಾದ ವ್ಯಕ್ತಿಗಳನ್ನು ಪದಾಧಿಕಾರಿಗಳನ್ನಾಗಿ ಮಾಡುತ್ತಾ, ತನ್ನೇಲ್ಲ ಇಂಟರನಲ್ ಸೆಟಪ್ಗಳನ್ನು ಸರಿಯಾಗಿ ನೋಡಿಕೊಂಡ. ಇನ್ನು ಹೊರಗಡೆ ಹಟ್ಟಿಯಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್ಗಳನ್ನು ಬೆಂಬಲಿಸಿದ್ದ ಕೆಲವರನ್ನು ತನ್ನ ಹಣ ಅಧಿಕಾರದ ಬಲದಿಂದ ಖರೀಧಿ ಮಾಡಿದ. ಇದರಿಂದ ಅಲ್ಪಸಂಖ್ಯಾತರು ಹೊರತಾಗಿಲ್ಲ.
ಕಾಯ್ದೆ ಕಾನೂನುಗಳ ಅರಿವಿಲ್ಲದ ಮಾನಪ್ಪ ಶಾಸಕನಾಗುತ್ತಿದ್ದಂತೆ, ಬಹಳ ಸಲೀಸಾಗಿ ಬಿಜೆಪಿಯನ್ನು ಹೊಡೆದು ಹಾಕಿದ. ಇದೇ ಪದ್ದತಿಯನ್ನು ಮುದಗಲ್, ಲಿಂಗಸ್ಗೂರಿನಲ್ಲಿ ಮಾಡಿದ್ದಾನೆ!
ಆರಂಭದಲ್ಲಿ ಲಿಂಗವಂತರನ್ನು ಪಕ್ಷದಲ್ಲಿ ದೂರಿಡುತ್ತಾ ಹಿಂದುಳಿದ ವರ್ಗದವರನ್ನು ತನ್ನಿತ್ತರದಲ್ಲಿಟ್ಟುಕೊಂಡಿದ್ದ. ಯಾಕೋ.. ಏನೋ ಅದು ಸರಿಗೆ ಕಾಣಲಿಲ್ಲವೆಂಬಂತೆ ಕೊನೆಗೆ ಪರಿಶಿಷ್ಟರನ್ನು ದೂರಿಡಲು ಪ್ರಾರಂಭಿಸಿದ. (ತನ್ನ ಸ್ವಜಾತಿಯವರನ್ನು ಹೊರತುಪಡಿಸಿ) ಚುನಾವಣೆಯಲ್ಲಿ ನಾನು ನನ್ನ ಸ್ವಜಾತಿ ಮತ್ತು ಹಣದ ಬಲದಿಂದ ಶಾಸಕನಾಗಿದ್ದೇನೆ. ಹಟ್ಟಿಯಲ್ಲಿ ನನಗೆ ಲೀಡ್ ಬಂದಿಲ್ಲ. ಇಲ್ಲಿ ಎಲ್ಲರೂ ಕಾಂಗ್ರೇಸ್ನ ಪರವಾಗಿದ್ದಾರೆಂದು ತಿಳಿದು ಕೆಲವು ದಿನ ಹಟ್ಟಿಗೆ ಬರುವದನ್ನೇ ಬಿಟ್ಟಿದ್ದ. ನಂತರದ ಬೆಳವಣಿಗೆಯಲ್ಲಿ ಅವರ ಪಕ್ಷದ ನಾಯಕರೇ, ಛೀ..ಥೂ.. ಅಂತ ಕ್ಯಾಕರಿಸಿ ಉಗಿಯುತ್ತಿದ್ದಂತೆ ಹಟ್ಟಿಗೆ ಬಂದು ನಾನು ನಿಮ್ಮ ಶಾಸಕ, ನಿಮ್ಮ ಮನೆಯವನು ಸ್ವಾಮಿ, ನನಗೆ ನಿಮ್ಮ ಮೇಲೆ ಯಾವುದೇ ಮುನಿಸು ಇಲ್ಲ ಸ್ವಾಮಿ, ಎಂದು ನಾಟಕವಾಡಲು ಪ್ರಾರಂಭಿಸಿದ. ಆದರೆ, ಹಟ್ಟಿಯ ಜನರು ಬಹಳ ಬುದ್ದಿವಂತರೆಂದು ಭಾವಿಸಿದ ಮಾನಪ್ಪ ತನ್ನಿಂದಿರುವ ಯಾರೊಬ್ಬರಿಗೆ ಯಾವುದೇ ಕೆಲಸಗಳನ್ನು ನೀಡಲಿಲ್ಲ. ಹೆಸರಿಗೆ ಸುಮ್ಮನೆ ಬೆನ್ನು ಚಪ್ಪರಿಸುತ್ತಾ, ಇವರಿಂದಲೇ ನಾನು ಶಾಸಕನಾಗಿದ್ದೇನೆ ಎಂದು ಬಣ್ಣದ ಮಾತುಗಳನ್ನು ಆಡಲು ಪ್ರಾರಂಭಿಸಿದ.
ಈಗ ಮಾನಪ್ಪಣ್ಣ ಹಟ್ಟಿಯ ಮುಖಂಡರಿಗೆ ನೀಡುತ್ತಿರುವ ಗೌರವ ಎಂತಹದ್ದೇಂದರೆ,
ಉದಾಹರಣೆಗೆ ನಮ್ಮ ನಾಗರೆಡ್ಡೆಪ್ಪಣ್ಣ, ಸ್ವಾಮಿಅಣ್ಣ, ನಮ್ಮ ಬಾಲಪ್ಪಣ್ಣ, ನಮ್ಮ ಅಮರಗುಂಡಪ್ಪಣ್ಣ, ಅಮ್ಜದಣ್ಣ ಎಂದು ತನ್ನ ವೇದಿಕೆಗಳಿಗೆ ಕರೆದು ಹರಕೆಯ ಕುರಿಗೆ ಬಲಿಯ ಮೊದಲು ತಪ್ಪಲು ತಿನಿಸಿದಂತೆ ಜೋರ್ಜೋರಾಗಿ ಹಾರವನ್ನು ಹಾಕುತ್ತಿರುತ್ತಾನೆ.
ಇನ್ನು ಕ್ಯಾಂಪಿನಲ್ಲಿ ಅಧಿಸೂಚಿತ ಪ್ರದೇಶ ಸಮಿತಿಗೆ ಬರುವ ಎಲ್ಲ ಕಾಮಗಾರಿಗಳನ್ನು ನಾನೇ ಮಾಡಿಸುತ್ತಿದ್ದೇನೆ. ನನ್ನಿಂದಲೇ ಈ ಎಲ್ಲಾ ಕೆಲಸಗಳಿಗೆ ಸಾಗುತ್ತಿವೆ ಎಂದು ಕ್ಯಾಂಪಿನ ಜನರಿಗೆ ಹೇಳುವಂತೆ ಅಮರೇಶ ಚಿತ್ತರಗಿ ಎಂಬ ಮುಖ್ಯಾಧಿಕಾರಿಗೆ ಮೌಖಿಕವಾಗಿ ಗದರಿಸಿದ್ದಾನೆ! ಮಾನಪ್ಪನ ಮಾತು ಕಿವಿಗೆ ಬಿದ್ದರೂ ಬೀಳಲಾರದಂತಿರುವ ಚಿತ್ತರಗಿ, ಕ್ಯಾಂಪಿನ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ಕ್ಯಾಂಪಿನ ಅಭಿವೃದ್ಧಿಯಲ್ಲಿ ಶಾಸಕರ ಪಾತ್ರ ಬಹಳ ದೊಡ್ಡದು ಎಂದು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. (ಕ್ಯಾಂಪಿನ ಅಭಿವೃದ್ಧಿಗೆ ದೊಡ್ಡಮನಿ ತಂಡ ಹಾಗೂ ನಮ್ಮ ತೋಟಿ ಅಣ್ಣತಮ್ಮಂದಿರು ದಿನನಿತ್ಯ ಎಷ್ಟು ಕೆಲಸ ಮಾಡುತ್ತಾರೆಂಬುದು ಚಿತ್ತರಗಿಗೂ ಹಾಗೂ ಮಾನಪ್ಪನಿಗೂ ಗೊತ್ತಿಲ್ಲ)
ಆದರೆ, ಪ್ರಮುಖವಾಗಿ ಮಾನಪ್ಪ ಎಂ.ಎಲ್.ಎ ಆಗಿ ಇಷ್ಟು ದಿನದಲ್ಲಿ ಒಂದು ದಿನವಾಗಲಿ ಹಟ್ಟಿ ಕಾಮರ್ಿಕರ ಗೋಳನ್ನು ಕೇಳಲಿಲ್ಲ. ಕಾಮರ್ಿಕರ ಬದುಕಿನ ಅನಿವಾರ್ಯತೆಯನ್ನು ಅರಿಯಲಿಲ್ಲ. ದಿನಗೂಲಿ ನೌಕರರ ಪಾಡು ಏನಾಗಿದೆ ಎಂದು ಯೋಚಿಸಲಿಲ್ಲ. ಅವೆಲ್ಲದರ ಬದಲಿಗೆ ಕಂಪನಿಯ ಅಧಿಕಾರಿಗಳಿಗೆ ಪೋನ್ ಮಾಡಿ ನಮ್ಮವರನ್ನು ಟ್ರಾನ್ಸಪರ್ ಮಾಡಿ, ನಮ್ಮವರು ಬಂದಾರೆ ಅವರಿಗೆ ಚಂದಾ ಕೊಡ್ರಿ, ಹನುಮಂತಪ್ಪ ಆಲ್ಕೋಡ್ಗೆ ಗೆಸ್ಟ್ಹೌಸ್ನಲ್ಲಿ ರೂಂ ಕೊಡಬೇಡ್ರೀ. ನಮ್ಮ ಬೆಂಬಲಿಗರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡಿ ಎಂದು ಕೇಳುತ್ತಾ, ಹಟ್ಟಿಯಲ್ಲಿ ಬಿಟ್ಟಿ ರಾಜಕೀಯ ಮಾಡಹತ್ತಿದ್ದಾನೆ. ಇಂತಹ ಮಾನಣ್ಣನನ್ನು ಏನೆಂದು ಕರೆದರೆ ಸೂಕ್ತ ಓದುಗರೇ.. ನೀವೇ ಸೂಚಿಸಿ.
ಕಳೆದ ಪಂಚಾಯತಿ ಚುನಾವಣೆಯಲ್ಲಿ ಮಾನಪ್ಪನಿಗೆ ಮುಖಭಂಗ.
ಅಧಿಕಾರಕ್ಕೆ ಬರುತ್ತಿದ್ದಂಥೆ ಹಟ್ಟಿಯಲ್ಲಿ ಲಿಂಗವಂತರನ್ನೆಲ್ಲ ತುಳಿದಿದ್ದ ಮಾನಪ್ಪನಿಗೆ ಕಳೆದ ಗ್ರಾಮಪಂಚಾಯತ್ ಚುನಾವಣೆಯಲ್ಲಿ ಲಿಂಗವಂತರೆಲ್ಲ ಒಗ್ಗಟ್ಟಾಗಿ ಪಾಠ ಕಲಿಸಿ ಭಾರಿ ಮುಖಭಂಗವನ್ನು ಮಾಡಿದ್ದಾರೆ.
ತಾಲೂಕಿನಲ್ಲಿ ಬಿಜೆಪಿ ಆಡಳಿತ ಇರಲಾರದ ಸಂದರ್ಭದಲ್ಲಿಯೇ ಕನಿಷ್ಟ ಐದು ಸದಸ್ಯರನ್ನು ಗೆಲ್ಲುತ್ತಿದ್ದ ಪಕ್ಷ ಒಬ್ಬ ಶಾಸಕ, ಹತ್ತಾರು ಮುಖಂಡರು, ಕೋಟಿಗಟ್ಟಲೇ ಹಡಬೆ ಹಣವನ್ನು ಇಟ್ಟುಕೊಂಡು ಈ ಬಾರಿ ಚುನಾವಣಿಯಲ್ಲಿ ಒಂದೇ ಒಂದು ಸ್ಥಾನದಲ್ಲಿ ಗೆಲ್ಲಲು ಹರಸಾಹಸ ಪಡಬೇಕಾಯಿತು. (ಗೆದ್ದ ಒಂದೇ ವ್ಯಕ್ತಿ ಮಾನಪ್ಪನ ಸ್ವಜಾತಿಬಂಧು.)
ಊರಿನ ಶ್ರೀಮಂತ ವ್ಯಕ್ತಿ ನಜೀರಸಾಬ, ಗ್ರಾ.ಪಂನ ಮಾಜಿ ಉಪಾಧ್ಯಕ್ಷ ಬಾಲಪ್ಪ ನಾಯಕ, ಶಾಸಕನಿಗೆ ಆಪ್ತರೆನಿಸಿರುವ ಎನ್.ಸ್ವಾಮಿ, ಗುರುಗಳಿಗೆಲ್ಲ ಗುರು ಎನಿಸಿರುವ ಶ.ಶಿ ಹೀರೆಮಠ ಸೇರಿದಂತೆ ಹಲವಾರು ತನ್ನ ಹುರಿಯಾಳುಗಳು ಗ್ರಾ.ಪಂ ಚುನಾವಣೆಯಲ್ಲಿ ಜಯಸಾಧಿಸಲು ಆಗಲಿಲ್ಲ. ಅಲ್ಪ ಬುದ್ದಿವಂತಿಕೆಯಿಂದ ಹನುಮಂತರೆಡ್ಡಿ ಮಾತ್ರ ಚುನಾವಣೆಯಿಂದ ಹಿಂದೆ ಸರಿದ. ಇಲ್ಲವೆಂದರೆ ಈತನಿಗೂ ಇದೇ ಗತಿ ಬರುತ್ತಿತ್ತೇನೋ?
ಚುನಾವಣಿಯಲ್ಲಿ ಇಷ್ಟೇಲ್ಲ ಗತಿಸಿದರೂ, ಮಾನಪ್ಪ ಪಂಚಾಯತಿಯನ್ನು ನಾನೇ ನಡೆಸುತ್ತೇನೆ. ಗೆದ್ದ ಎಲ್ಲರೂ ನನ್ನ ಪಕ್ಷಕ್ಕೆ ಬರುತ್ತಾರೆ, ಅವರೆಲ್ಲ ನನ್ನತ್ತಿರ ಇದ್ದಾರೆಂದು ಹುಚ್ಚನ ಹಾಗೆ ಅಂದಿನ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿದ್ದ. ತನ್ನ ಒಂದೇ ಅಭ್ಯಥರ್ಿಯನ್ನು ಇಟ್ಟುಕೊಂಡು ಏನು ಮಾಡಲಿಕ್ಕೆ ಆಗದೇ ಕೊನೆಗೆ ಅನಿವಾರ್ಯವಾಗಿ ಶಂಕರಗೌಡನ ಗುಂಪಿಗೆ ಬೆಂಬಲಿಸುವಂತೆ ಪರೋಕ್ಷವಾಗಿ ತಿಳಿಸಿದ. ಅಂದಿನ ಚುನಾವಣೆಯಲ್ಲಿ ಮಾನಪ್ಪನ ಅಭ್ಯಥರ್ಿಗಳು ಒಬ್ಬೊಬ್ಬರಾಗಿ ಸೋಲಿನ ಸಿಹಿಯನ್ನು ಅನುಭವಿಸುತ್ತಿದ್ದಂತೆ, ಹಟ್ಟಿಯ ಲಿಂಗವಂತರಿಗೆಲ್ಲ ಹಾಲಿನಲ್ಲಿ ಅಮೃತವನ್ನೇ ಬೆರೆಸಿ ಕುಡಿದಂಗಾಗುತ್ತಿತ್ತು.
ಹೀಗಾಗಿ ಮಾನಪ್ಪನಿಗೆ ಹಟ್ಟಿಯ ಗ್ರಾ.ಪಂ ಚುನಾವಣಿಯಲ್ಲಿ ಭಾರಿ ಮುಖಭಂಗವಾಯಿತು.
ಒಬ್ಬ ಶಾಸಕನಾಗಿ ಗ್ರಾಮಪಂಚಾಯತಿಯನ್ನು ಗೆಲ್ಲಿಸಲು ಆಗಿಲ್ಲವೆಂದರೆ, 32ರಲ್ಲಿ ಕನಿಷ್ಟ 15 ಸ್ಥಾನಗಳಲ್ಲಾದರೂ ಜಯ ಸಾಧಿಸಲು ವಿಫಲವಾದರೆ, ಎಲೆಕ್ಷನ್ಗೆ ನಿಲ್ಲಲಾರದ ಊರಿನ ಒಬ್ಬ ಶ್ರೀಮಂತನನ್ನು ವಾಡರ್ಿಗೆ ನಿಲ್ಲಿಸಿ ಒಂದು ಕೇರಿಯ ಮತವನ್ನು ಪಡೆಯಲು ಆಗಿಲ್ಲವೆಂದರೆ, ನೀನು ಎಂ.ಎಲ್.ಎ ಆದರೂ ಕೂಡ ಏನು ಲಾಭ.. ಈ ಬಾರಿ ಪಂಚಾಯತಿ ಚುನಾವಣೆಯನ್ನೇ ಗೆಲ್ಲಿಸಲು ನಿನ್ನ ಕೈಯಲ್ಲಿ ಗೆಲ್ಲಿಸಲು ಆಗಿಲ್ಲವೆಂದರೆ, ತಾ.ಪಂ, ಜಿ.ಪಂ ದೇವರೇ ಗತಿ.
ಅಲ್ಲಿ ನೋಡು, ಹಟ್ಟಿ ಕಂಪನಿಯಲ್ಲಿ ಮೂರೊತ್ತು ದುಡಿದುಕೊಂಡು ತಿನ್ನುವ ಅಮರಗುಂಡಪ್ಪ ಎಂಬ ಕಾಮರ್ಿಕ ಪಂಚಾಯತಿ 32ರಲ್ಲಿ 19ಸ್ಥಾನಗಳನ್ನು ತನ್ನ ಗುಂಪಿನ ಮುಖಾಂತರ ಗೆಲ್ಲಿಸಿಕೊಂಡಿದ್ದಾನೆ. ಅಂದರೆ ಈ ವಿಚಾರದಲ್ಲಿ ನೀನು ಅಮರಗುಂಡಪ್ಪನೆಂಬ ಕಾಮರ್ಿಕನಿಗಿಂತಲೂ ಕಡೆ ಎಂದರ್ಥ.
ನಿನ್ನ ಹತ್ತಿರ ಕೋಟಿಕೋಟಿ ದುಡ್ಡಿದ್ದರೂ, ನೀನೊಬ್ಬ ಎಂ.ಎಲ್.ಎ ಆಗಿದ್ದರೂ, ನಿನ್ನ ಸ್ವಜಾತಿಯವರ ಪ್ರೇಮವನ್ನು ಒಂದೆಡೆಯಿಟ್ಟುಕೊಂಡು, ಎಲ್ಲಿಯವರೆಗೆ ಜನಸಾಮಾನ್ಯರ ಸಮಸ್ಯೆಗಳು, ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಿಲ್ಲವೋ, ಅಲ್ಲಿಯವರೆಗೆ ನೀನೇ ಖುದ್ದಾಗಿ ಗ್ರಾಮಪಂಚಾಯತಿ ಚುನಾವಣೆಗೆ ನಿಂತರೂ ಗೆಲ್ಲವುದು ಅನುಮಾನ.
ನಿರ್ಲಕ್ಷ ಮಾಡಿದರೆ, ಅಂತ್ಯದ ಆರಂಭ ಶುರುವಾಗಿದೆ ಎಂದೇ ಅರ್ಥ.
ಲಿಂಗಸ್ಗೂರು ವಿಧಾನಸಭಾ ಕ್ಷೇತ್ರ ಅಮರೇಗೌಡ, ಆನ್ವರಿ, ಗುರುಗುಂಟಿ ದೊರೆಗಳ ಆಡಳಿತವನ್ನು ಕಂಡಿದೆ. ಆದರೆ ಮಾನಪ್ಪನ ಆಡಳಿತವನ್ನು ಕನಸಿನಲ್ಲಿಯೂ ಕಂಡಿರಲಿಲ್ಲ. ಅಷ್ಟರ ಮಟ್ಟಿಗೆ ಮಾನಪ್ಪನ ಆಡಳಿತದಿಂದ ಕ್ಷೇತ್ರ ಬೇಸರಗೊಂಡಿದೆ. ಲಿಂಗಸ್ಗೂರಿಗೆ ಉಜ್ವಲಕುಮಾರ ಘೋಷ್ ಎಂಬ ಸಹಾಯಕ ಆಯುಕ್ತ ಬಂದಾಗಿನಿಂದ ಮಾನಪ್ಪನಿಗೆ ಸ್ವಲ್ಪ ಟೈಟ್ ಆಗಿದೆ. ಆದರೂ, ಕಿತಾಪತಿ ಆಗ ಮಾಡುತ್ತಲೇ ಇರುತ್ತಾನೆ ಈ ಮಾನಪ್ಪ. ರಾಜ್ಯ ರಾಜಕೀಯದಲ್ಲಾದ ಹೈಡ್ರಾಮದಲ್ಲಿ ತನ್ನ ಗುರು ಆನ್ವರಿ ಬಸವರಾಜಪ್ಪನ ಹಿಂದೆ ಓಡಿ ಹೋಗಿದ್ದಾನೆ.
ಮಾನಪ್ಪನ ಮಾಸ್ಟರ್ ಪ್ಲಾನ್!
ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾನಪ್ಪ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಕಛೇರಿಗಳಿಗೆ ಒಂದು ಕಡೆ ದೂರನ್ನು ನೀಡುತ್ತಿದ್ದಾರೆ. ಆದರೆ, ಮಾನಪ್ಪ ನನ್ನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆ ಪಡೆಯುತ್ತಿದ್ದೆ. ಈಗ ನನ್ನ ಆರೋಗ್ಯ ಸುಧಾರಿಸಿದೆ. ಅದಕ್ಕಾಗಿ ನನ್ನ ಬಳಿ ವೈಧ್ಯಕೀಯ ಪ್ರಮಾಣ ಇರುವುದಾಗಿ ಹಸಿ ಸುಳ್ಳನ್ನು ಹೇಳುತ್ತಿದ್ದಾನೆ. ಅಸಲಿಗೆ ಮಾನಪ್ಪನ ಮಾಸ್ಟರ್ ಫ್ಯಾನ್ ಹೀಗಿದೆ ; ದಲಿತರ ಹೋರಾಟದಿಂದ ಮಣ್ಣುಮುಕ್ಕಿರುವ ತನ್ನ ಇಮೇಜ್ನ್ನು ಕಟ್ಟಿಕೊಳ್ಳಲು ಮತ್ತು ತನ್ನ ಮೇಲಿರುವ ಜಾತಿ ರಾಜಕಾರಣದ ಆರೋಪವನ್ನು ಬದಿಗೊತ್ತಲು, ನಿಣರ್ಾಯಕ ಮತದಾರರಾದ ಲಿಂಗವಂತರನ್ನು ಒಲೈಸಿಕೊಂಡು ಮುಂದಿನ ದಿನದಲ್ಲಿ ಆರೋಪ ಮುಕ್ತನಾಗಿ ಓಟ್ ಬ್ಯಾಂಕ್ ಮಾಡಿಕೊಳ್ಳಲು ಈ ತಂತ್ರವನ್ನು ಅನುಸರಿಸುತ್ತಿದ್ದಾನೆ.
ಅದರ ಒಂದು ಭಾಗವಾಗಿ ಮೊನ್ನೆ ಬಸವರಾಜ ಪಾಟೀಲ್ ಆನ್ವರಿ ಜೊತೆ ಹೋಗಿ ವಿಶ್ವಾಸ ಮತದ ಸಂದರ್ಭದಲ್ಲಿ ಗೈರು ಹಾಜರಿಯಾಗಿದ್ದ.
ಒಂದಂತೂ ಸತ್ಯ ಮಾನಪ್ಪ ಏನೇ ಪಲ್ಟಿ ಹೊಡೆದರು ಮುಂದಿನ ಬಾರಿ ಜಿಲ್ಲಾ ಪಂಚಾಯತ್ಗೆ ಗೆಲ್ಲುವುದು ತುಸು ಕಷ್ಟನೇ..?

ಮಾನಣ್ಣನ ಮಂಗಾಟ!
ನಾನು ಅಧಿಕಾರಕ್ಕೆ ಬಂದ ಮೇಲೆ ಅಟ್ರಾಸಿಟಿ ಪ್ರಕರಣಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಬೊಬ್ಬೆ ಇಡುವ ಮಾನಪ್ಪಣ್ಣ ಹಿಂದೊಮ್ಮೆ ತಾನೇ ತನ್ನದ್ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಗೆ ಅಟ್ರಾಸಿಟಿ ಕೇಸ್ ಬುಕ್ ಮಾಡುವಂತೆ ಸೂಚಿಸಿದ್ದ.
ತಾನೊಬ್ಬ ಶಾಸಕನಾಗಿ ಈ ರೀತಿಯ ಹೀನಕೃತ್ಯಕ್ಕೆ ಇಳಿದಿರುವಾಗ ಅಲ್ಪತಿಳುವಳಿಕೆ ಇರುವ ಮುಖಂಡರು ಮಾಡುತ್ತಿರುವುದು ಯಾವ ಲೆಕ್ಕ?
ಈಗಾಗಲೇ ತಾಲೂಕಿನ ಸಾಕಷ್ಟು ಕೊಲೆ ಪ್ರಕರಣಗಳು ಅಂತ್ಯವನ್ನು ಕಂಡಿಲ್ಲ. ಪ್ರತಿಯೊಂದು ಕೊಲೆಗಳಲ್ಲಿ ಆರೋಪಿಗಳು ಯಾರೆಂದು ಇಲಾಖೆಗೆ ಗೊತ್ತಿದ್ದರೂ ಅದು ಕಣ್ಮುಚ್ಚಿ ಕುಳಿತಂತಿದೆ.
ತವಗದ ಅಮರೇಶ ಎಂಬ ಕಾಮರ್ಿಕನ ಕಗ್ಗೊಲೆ ನಡೆದು ವರ್ಷಗಳೇ ಸಾಗುತ್ತಿವೆ. ಈ ಕೊಲೆಯಲ್ಲಿ ಆರೋಪಿಗಳು ಯಾರೆಂಬುದು ಪೊಲೀಸರಿಗೆ ಗೊತ್ತಿದೆ. ಕೊಲೆಗೈದ ಆರೋಪಿಗಳೆಲ್ಲ ರಾಜಾರೋಷವಾಗಿ ಪೊಲೀಸರೆದುರಿಗೆ ತಿರುಗುತ್ತಿದ್ದಾರೆ.
ಆದರೆ,
ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಪೊಲೀಸರಿಂದ ಆಗುತ್ತಿಲ್ಲ. ಇಲ್ಲಿಯೂ ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಅದರಂತೆ ಸಾಕಷ್ಟು ಪ್ರಕರಣಗಳು ತಾಲೂಕಿನಲ್ಲಿ ಅಂತ್ಯ ಕಾಣದೇ ಪೊಲೀಸ್ ಇಲಾಖೆಯ ರೆಕಾಡರ್್ರೂಮಿನಲ್ಲಿ ಕೊಳೆಯುತ್ತಿವೆ. ಅದರಂತೆ ಕೊಲೆಯಾದ ಕುಟುಂಬದವರು ನ್ಯಾಯಕ್ಕಾಗಿ ಪೊಲೀಸ್ ಇಲಾಖೆಗೆ ದಿನನಿತ್ಯ ಅಲೆಯುವುದು ತಪ್ಪುತ್ತಿಲ್ಲ.
ತಾಲೂಕಿನಲ್ಲಿ ನಡೆದ ಎಲ್ಲ ಕೊಲೆಗಳ ಸಚಿತ್ರ ವರದಿಯನ್ನು ಒಂದೊಂದಾಗಿ ಮುಂದಿನ ಸಂಚಿಕೆಗಳಲ್ಲಿ ಸವಿಸ್ತಾರವಾಗಿ ಪ್ರಕಟಿಸಲಾಗುವುದು.

Broker and Joker


ತನ್ನ ಸ್ವಾರ್ಥಕ್ಕಾಗಿ ವಾಲೇಬಾಬು ಕಾಮರ್ಿಕರನ್ನು ಒಡೆದಾಳುತ್ತಾನೆ. ಆದರೆ, ಶಫೀ ಅದಕ್ಕಿಂತ ಭಿನ್ನವಾಗಿ ತನ್ನ ತಕ್ಕಡಿಯ ಮುಖಂಡರನ್ನೇ ತುಕ್ಕಡಿ ಮಾಡಿ ತನ್ನ ಜಿದ್ದು & ಸಿಟ್ಟಿನಿಂದ ಅಧಿಕಾರ ಚಲಾಯಿಸುತ್ತಾನೆ. ಎಂದು ನಮ್ಮ ಪ್ರತಿನಿಧಿ ಸಂಪೇಲ್ಲೇರ್ ವಿಶ್ಲೇಷಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಕಂಪನಿಯ ಇತಿಹಾಸದಲ್ಲಿ ಕಾಮರ್ಿಕರನ್ನು ಪ್ರತಿನಿಧಿಸುವ ಸಂಘಕ್ಕೆ ತನ್ನದೇ ಪ್ರಾತಿನಿಧ್ಯತೆಯಿದೆ. ಇಲ್ಲಿದ್ದಂತೆ ಕಾಮರ್ಿಕರಿಗೊಂದು ವಿಶಾಲವಾದ ಕಾಮರ್ಿಕ ಸಂಘ (ಕಛೇರಿ) ನಮ್ಮ ರಾಜ್ಯದಲ್ಲಿಯೇ ಎಲ್ಲಿ ಇಲ್ಲ. ಕಾಮ್ರೇಡ್ ಮಖ್ದೂಂ, ನಾರಾಯಣ್, ಫೈ ನಂತಹ ನಾಯಕರು ಅಂದು ಸಂಘವನ್ನು ಬೇರುಮಟ್ಟದಿಂದ ಪ್ರಾಮಾಣಿಕವಾಗಿ ಕಟ್ಟಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವಾಗಿ ಅಂತಹದ್ದೊಂದು ಕಾಮರ್ಿಕ ಸಂಘ ನಮ್ಮ ಮುಂದೆ ಇಂದು ಎದ್ದು ಕಾಣುತ್ತಿದೆ. ಇಷ್ಟೇಲ್ಲ ಹಿನ್ನಲೆಯನ್ನು ಹೊಂದಿರುವ ಕಾಮರ್ಿಕ ಸಂಘದಲ್ಲಿ ವಿಶೇಷವಾಗಿ ಎಲ್ಲ ಸದಸ್ಯರಿಗಿಂತ ಪ್ರಧಾನಕಾರ್ಯದಶರ್ಿಗೆ ಹೆಚ್ಚಿನ ಅಧಿಕಾರ ಮತ್ತು ಸ್ಥಾನಮಾನವಿರುತ್ತದೆ. ಆತನೇ ಎಲ್ಲ ಕಾಮರ್ಿಕರ ಸಾರಥಿಯಾಗಿರುತ್ತಾನೆ. ಆತನಿಗೆ ಜಾತಿ, ಬಣ್ಣ, ಭೇದಭಾವ, ತಾರತಮ್ಯ ಎಂತಹವುಗಳು ಇರುವುದಿಲ್ಲ. ಕಾಮರ್ಿಕರ ವೇತನ ಒಪ್ಪಂದ ಸೇರಿದಂತೆ ಹಲವಾರು ಚಚರ್ೆಗಳಲ್ಲಿ ಈತನ ಪಾತ್ರವು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
ಅಂತಹ ಜವಾಬ್ದಾರಿಯುತ, ಘನತೆ ಗೌರವವಿರುವ ಜಿ.ಎಸ್ ಹುದ್ದೆಗೆ ಯಾವತ್ತು ಬ್ರೋಕರ್ ವಾಲೇಬಾಬು, ಜೋಕರ್ ಶಫಿಯಂತವರು ಆಯ್ಕೆಯಾಗಿ ವಕ್ಕರಿಸಿಕೊಂಡರೋ ಅಂದೇ ಆ ಸ್ಥಾನ ತನ್ನ ಗೌರವ, ಘನತೆಯನ್ನು ಕ್ರಮೇಣವಾಗಿ ಕಳೆದುಕೊಳ್ಳಲಾರಂಭಿಸಿತು.
ತನ್ನ ಸ್ವಾರ್ಥ, ಪ್ರತಿಷ್ಠೆಗಾಗಿ ಜಿ.ಎಸ್ ಸ್ಥಾನವನ್ನು ವಾಲೇಬಾಬು ದುರುಪಯೋಗ ಪಡಿಸಿಕೊಂಡರೆ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಶಫೀ, ಸ್ವಾರ್ಥತೆ, ಪ್ರತಿಷ್ಠೆಗೆ ಪರದೆಯನ್ನು ಕಟ್ಟಿ ಹಿಂಬಾಗಿಲಿನಿಂದ ತನಗೆ ಬೇಕಾದ ಸವಲತ್ತುಗಳನ್ನು ಪಡೆಯತೊಡಗಿದ.
ಶಫೀ ತಾನು ನಡೆಸುತ್ತಿರುವ ಶಾಲೆಯ ಹೆಸರಿನ ಮೇಲೆ ಮಮ್ತಾಜ್ಅಲಿಖಾನ್ನನ್ನು ಕರೆತಂದು ಆತನ ಜೊತೆ ವೇದಿಕೆ ಹಂಚಿಕೊಂಡ. ತಾರಾ ತಿಗಡಿ ಬಾರಾಣಿ ಕೆಲಸ ಮಾಡುವ ಮಾನಗೇಡಿ ದತ್ತು ಪುತ್ರರನ್ನು ಜೊತೆಗಿಟ್ಟುಕೊಂಡು ಸೋಮವಾರ ಮಂಗಳವಾರ ಕಛೇರಿ ಕೆಲಸ, ಬುಧವಾರ ಗುರುವಾರ ದವಾಖಾನೆ ಕೆಲಸ, ಶುಕ್ರವಾರ ಮಸೀಧಿ, ಶಾಲೆ ಕೆಲಸ, ಶನಿವಾರ ಭಾನುವಾರ ಊರುರು ತಿರುಗುತ್ತಾ ಚಕ್ಕ್ರ್ ಹೊಡೆಯುತ್ತಿದ್ದಾನೆ. ಈ ರೀತಿ ಮೂವತ್ತು ತಿಂಗಳು ಕಳೆದ ಶಫಿಗೆ ಕಾಮರ್ಿಕರ ಕುರಿತಾಗಲಿ ಕಂಪನಿಯವರ ಜೊತೆಯಲ್ಲಿ ಚಚರ್ಿಸಲು ಸಮಯವೇ ಇದ್ದಿಲ್ಲ.
ಎಲ್ಲ ಸಂದರ್ಭದಲ್ಲಿಯೂ ಬ್ಯೂಸಿ ಷೆಡ್ಯೂಲ್ನಲ್ಲಿದ್ದ ಶಫೀಯನ್ನು ಕಾಮರ್ಿಕರು ಕಾಣುವುದೇ ಅಪರೂಪವಾಗಿತ್ತು. ಒಂದು ತಮಾಷೆಯೆಂದರೆ, ಎಲ್ಲ ಕಾಮರ್ಿಕರು ಅಮರೇಶ ಎಂಬ ಗುಮಾಸ್ತನಿಗೆ ಏನಪ್ಪ ಆ್ಯಕ್ಟಿಂಗ್ ಜಿ.ಎಸ್ ಎಲ್ಲಿ ನಿಮ್ಮ ಅಸಲಿ ಜಿ.ಎಸ್ ಎಂದು ಕೇಳುತ್ತಿದ್ದರು! ಅಂದರೆ, ಶಫಿ ಇಲ್ಲದಕ್ಕೆ ಗುಮಾಸ್ಥನನ್ನೇ ಎಲ್ಲರೂ ಆ್ಯಕ್ಟಿಂಗ್ ಜಿ.ಎಸ್ ಎನ್ನುತ್ತಿದ್ದರು! (ನಾವುಗಳು ಕೂಡ ಕೆಲವೊಮ್ಮೆ ಕರೆದಿರಬೇಕು.)
ಈ ಮೊದಲಿಗೆ ನಾವು ಬರೆದಂತೆ ತಕ್ಕಡಿ 3ತುಕ್ಕಡಿಯಾಗಿದ್ದರಿಂದ ಅದರ ಲಾಭವನ್ನು ಶಫಿಯೂ ಪಡೆಯಿತ್ತಿದ್ದ. ಮುಖ್ಯವಾಗಿ ಅಮೀರಅಲಿಗೆ ಎದುರಾಳಿಯಿರುವ ಆಲಂಸಾಬ ಸೇರಿದಂತೆ ಹಲವರನ್ನು ತನ್ನ ದತ್ತುಪುತ್ರರಂತೆ ನೋಡಿಕೊಳ್ಳುತ್ತಿದ್ದ. ಇನ್ನು ಇತ್ತ ಶಾಂತಪ್ಪನಿಗೆ ಆಗಾಗ ಬೇರೆಬೇರೆ ಕಾರಣಗಳಿಗೆ ಹಣಕೊಟ್ಟು ಎದುರಾಳಿಯಾಗುತ್ತಿದ್ದ ಕೆಲವರನ್ನು ಶಫಿ ಬಳಸಿಕೊಳ್ಳುತ್ತಿದ್ದ. ಹೀಗೆ ಮೂವತ್ತು ತಿಂಗಳು ನೂಕಿದ ಶಫೀ ಈಗ ಎಲ್ಲಿ ತನ್ನ ಬಂಡವಾಳ ಬಯಲಾಗುತ್ತದೆಂದು ತಿಳಿದು ಹೊಸ ನಾಟಕವನ್ನಾಡಲು ಪ್ರಾರಂಭಿಸಿದ್ದಾನೆ.
ಅದುವೆ, ಪ್ರಜಾಸಮರದಲ್ಲಿ ಬರುವ ಎಲ್ಲಾ ಲೇಖನಗಳನ್ನು ಅಮೀರಅಲಿ ಮತ್ತು ಅವರ ತಮ್ಮನವರು ತಕ್ಕಡಿಯನ್ನು ತುಕ್ಕಡಿ ಮಾಡಲು ವರದಿಯನ್ನು ಮಾಡಿಕೊಡುತ್ತಾರೆಂಬ ಹೊಸ ಬಾಂಬ್.
ಈ ವಿಷಯವಾಗಿ ಮೊನ್ನೆ ಬೆಂಗಳೂರಿನಲ್ಲಿ ಸುಧೀರ್ಘವಾದ ಚಚರ್ೆ ನಡೆದಿದೆ ಎಂಬ ಕುರಿತು ನಮಗೆ ಈಗಾಗಲೇ ಮಾಹಿತಿ ಬಂದೊದಗಿದೆ! ಶಫೀ ಈ ಮೇಲಿನಂತೆ ಹೇಳುತ್ತಿದ್ದಂಥೆ ಅಮೀರಅಲಿ ಪ್ರಜಾಸಮರದಲ್ಲಿ ಬರುವ ವರದಿ ನನ್ನದೆಂದು ಸಾಭೀತು ಮಾಡಿದರೆ, ಪಕ್ಷ ನನಗೆ ಎಂತಹ ಶಿಕ್ಷೆಯನ್ನಾದರೂ ಕೊಡಲಿ ಅದನ್ನು ಅನುಭವಿಸಲು ಸಿದ್ದ ಎಂದು ಹಾಕಿಕೊಂಡಿದ್ದ ಬೂಟ್ನ್ನು ಬಿಚ್ಚಿ ಟೇಬಲ್ ಮೇಲೆ ಇಟ್ಟು, ಶಫೀ ಹೇಳಿದ ಮಾತು ಸಾಭೀತುಪಡಿಬೇಕು. ಇಲ್ಲವಾದರೆ, ಇಂದಿನಿಂದಲೇ ಕಾಮರ್ಿಕ ಸಂಘಕ್ಕೆ ನಾನು ರಾಜೀನಾಮೆ ನೀಡುತ್ತೇನೆಂದು ಹೇಳಿದ ಸುದ್ದಿ ಈಗ ಎಲ್ಲೆಡೆ ಹರಡಿದೆ. (ಬೆಂಗಳೂರಿನಿಂದ ಬಂದಾಗಿನಿಂದಲೂ ಅಮೀರಅಲಿ ಎಸ್.ಯು.ಪಿ1 ಹತ್ತಿರಕ್ಕೆ ಸುಳಿಯುತ್ತಿಲ್ಲ ಎಂಬ ಗುಮಾನಿಯೂ ಕೇಳಿಬರುತ್ತಿದೆ) ಅದು ಎಷ್ಟರ ಮಟ್ಟಿಗೆ ಸುಳ್ಳು, ಸತ್ಯ ಎಂಬುದು ನೇರವಾಗಿ ಅವರನ್ನು ವಿಚಾರಿಸಿದರೇ ಗೊತ್ತಾಗುತ್ತದೆ. ಆದರೆ,
ಬೂಟುಗಳು ಟೇಬಲ್ ಮೇಲೆ ಹೋಗುತ್ತಿರುವುದು, ಪತ್ರಿಕೆಗೆ ವರದಿಗಳನ್ನು ನೀವೆ ಕೊಡುತ್ತಿದ್ದೀರಿ ಎನ್ನುವುದು, ಸಂಘವನ್ನು ಒಡೆಯಲು ಪ್ರಯತ್ನಿಸಿದ್ದೀರಿ ಎಂಬ ಆರೋಪಗಳೆಲ್ಲವೂ ಈಗೇಕೆ ನಡೆಯುತ್ತಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ!

ಬ್ರೋಕರ್ ವಾಲೇಬಾಬು.
ಆರಂಭದಲ್ಲಿ ಹಟ್ಟಿ ಕಾಮರ್ಿಕ ಸಂಘವನ್ನು ಕಟ್ಟಿದ ಕಾಮ್ರೇಡ್ಗಳ ಪಾಪದ ಕೂಸೇ ಈ ಜೋಕರ್ ವಾಲೇಬಾಬು. ಕಾಮ್ರೇಡ್ಗಳ ಗರಡಿಯಲ್ಲಿ ಪಳಗಿ, ಅಲ್ಲಿ ಎಲ್ಲವನ್ನು ತಿಳಿದುಕೊಂಡು ಕೊನೆಕೊನೆಗೆ ಸಂಘಟನೆಯನ್ನು ಬಿಟ್ಟು, ಐ.ಎನ್.ಟಿ.ಯು.ಸಿ ಸೇರಿದಾತ. ಅದಾದ ನಂತರ ತನ್ನದೇ ತಂದೆತಾಯಿ ಇಲ್ಲದ ಆಕಳು ಪಕ್ಷವೊಂದನ್ನು ಕಟ್ಟಿಕೊಂಡು ಕಾಮರ್ಿಕರನ್ನು ಶೋಷಣೆ ಮಾಡಿಕೊಂಡು ಬರುವಾತ. ಕೊನೆಯ ಸಂದರ್ಭದಲ್ಲಿ ಎಲ್ಲವನ್ನು ಕಳೆದುಕೊಂಡು ಊರುಬಿಡುವ ಸಂದರ್ಭದಲ್ಲಿ ವಿದ್ರೋಹಿ, ಜೋಕರ್ ಶಫೀಯೇ ವಾಲೇಬಾಬುಗೆ ಮರುಜೀವ ಕೊಟ್ಟನು. ಇನ್ನು ಕೆಲವರ ಅಭಿಪ್ರಾಯದಂತೆ ಆಡಳಿತ ಮಂಡಳಿಗೂ ವಾಲೇಬಾಬು ಅಂದರೆ ಬಲುಇಷ್ಟವಂತೆ. ಯಾಕೆಂದರೆ, ಈತನ ಮುಂದೆ ದುಡ್ಡೊಂದು ಇಟ್ಟರೇ ಸಾಕು ವಿಲೇಜ್ಶಾಫ್ಟ್ನ್ನು ಕೋಠಾದವರಿಗೆ, ಮಲ್ಲಪ್ಪಶಾಪ್ಟ್ನ್ನು ಯರಡೋಣಾದವರಿಗೆ, ಸೆಂಟ್ರಲ್ಶಾಫ್ಟ್ನ್ನು ಗುಡದನಾಳದವರಿಗೆ ಮಾರಲು ಸಹಿ ಹಾಕಿ ಬಿಡುತ್ತಾನೆ.
ಇಂತಹ ಕುಯುಕ್ತಿ ಹೊಂದಿರುವ ವಾಲೇಬಾಬು ಹಟ್ಟಿಯ ಕಾಮರ್ಿಕರ ಪಾಲಿಗೆ ಒಬ್ಬ ಬ್ರೋಕರ್ನೆಂದೆ ಅರ್ಥ. ತಕ್ಕಡಿಯವರ ಅವಧಿ ಮುಗಿಯಲು 3ತಿಂಗಳು ಗಡುವು ಇದ್ದಾಗಲೇ ತನ್ನದೊಂದು ಕರಪತ್ರವನ್ನು ಹೊರತಂದ. ಅದರಲ್ಲಿ ಪ್ರಮುಖವಾಗಿ ಕಾಮರ್ಿಕರಿಗೆ ಸಂಬಂಧಿಸಿದ ವಿಷಯಗಳಾವವು ಇದ್ದಿಲ್ಲವೆಂದರೂ ತಕ್ಕಡಿಯವರಿಗಿಂಥ ನಾನೇ ಶ್ರೇಷ್ಠ ಎಂಬುದನ್ನು ಮಾತ್ರ ಸಾಭೀತು ಮಾಡಿಕೊಳ್ಳುವ ಹಲವಾರು ಅಂಶಗಳಿದ್ದಂತೂ ಸತ್ಯ.
ಪ್ರತಿಬಾರಿ ವಾಲೇಬಾಬು ಯಾವುದಾದರೂ ಒಂದು ಕರಪತ್ರವನ್ನು ಹಂಚುತ್ತಾನೆಂದರೆ, ಅದಕ್ಕೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳು ಬರುತ್ತಿದ್ದವು. ಆದರೆ, ಮೊನ್ನೆಯ ಕರಪತ್ರಕ್ಕೆ ಸಂಬಂಧಿಸಿ ನಾವುಗಳು ಕೆಲವು ಕಾಮರ್ಿಕರನ್ನು ಭೇಟಿ ಮಾಡಿದಾಗ ಅದೇನ್ ಸಾರ್.. ತಾನು ಹೊಸದನ್ನೇನು ಹೇಳಿಲ್ಲ. ನಿಮ್ಮ ಪೇಪರ್ದಲ್ಲಿರುವದನ್ನೇ ಸ್ವಲ್ಪ ಕಾಪೀ ಮಾಡಿ ಅದಕ್ಕೆ ಬಣ್ಣ ಹಚ್ಚಿ ಬರೆದಿದ್ದಾನೆ.
ಆತ ಈಗ ಏನು ಲಗಾಟಿ ಹೊಡೆದರೂ ಕಾಮರ್ಿಕರಿಗೆ ಅಸಲಿ ಬಣ್ಣ ಗೊತ್ತಿದೆ ಎಂದು ಹಿರಿಯ ಕಾಮರ್ಿಕನೊಬ್ಬ ಹೇಳಿ ತನ್ನ ಕೆಲಸದಲ್ಲಿ ಮಗ್ನನಾದ.
ಎಲ್ಲದರಲ್ಲಿಯೂ ಅಡ್ಡಗಾಲು ಹಾಕುತ್ತಾ, ತನ್ನದೇ ಆದ ಕಾನೂನುಗಳನ್ನು ಅಧಿಕಾರಿಗಳ ಮೇಲೆ ಹೇರಲು ಹೋಗುತ್ತಾನೆ. ಪ್ರತಿಯೊಂದಕ್ಕೂ ಕೋಟರ್್, ಆರ್.ಎಲ್.ಸಿ, ಎ.ಎಲ್.ಸಿ ಅಂತನೇ ತಿರುಗುತ್ತಿರುತ್ತಾನೆ.
ಕಂಪನಿಯ ಆಯ್ದ ಭಾಗಗಳಲ್ಲಿ ತನಗೆ ಬೇಕಾದವರನ್ನು ಇಟ್ಟುಕೊಂಡು ಕಂಪನಿಯ ಕುರಿತು ಸಮಗ್ರ ಮಾಹಿತಿಯನ್ನು ಕಲೆಹಾಕುತ್ತಾನೆ.
ಕಂಪೆನಿಯ ಮೇನ್ಸ್ಟೋರಿನಿಂದ 1ವಸ್ತು ಡಿಪಾಟರ್್ಮೆಂಟ್ಗೆ ಇನ್ನು ಹೋಗಿರುವುದಿಲ್ಲ. ಅಷ್ಟರಲ್ಲಿಯೇ ವಾಲೇಬಾಬು ಮನೆಗೆ ಅದರ ಬಿಲ್ಲ್ ಮತ್ತು ಸ್ಯಾಂಪಲ್ ಹೋಗಿರುತ್ತದೆ. ಅಂದರೆ ಭಾವಿಸಿ ಕಂಪನಿಯಲ್ಲಿ ಈತ ಯಾವ ರೀತಿ ತನ್ನ ಅನುಯಾಯಿಗಳನ್ನು ಕೆಲಸ ಮಾಡಲು ಬಿಟ್ಟಿರಬೇಕು.
ಈತನು ವೈಯಕ್ತಿಕವಾಗಿ ಶಫೀಗಿಂತ ಮಹಾದ್ರೋಹಿಯಾದರೂ ಅದು ತೆರೆಮರೆಯಲ್ಲಿ ಮಾತ್ರ. ತನ್ನ ಸ್ವಂತ ಆಕಳು ಪಕ್ಷವನ್ನು ಕಟ್ಟಲು ಒಂದು ಕಡೆ ಶಾಂತಪ್ಪ, ಪಾಮಣ್ಣನನ್ನು ಮುಂದಿಟ್ಟು, ಇನ್ನೊಂದೆಡೆ ತನ್ನ ಸ್ವಜಾತಿಯವರನ್ನು ಸೇರಿಸಿ ಕಮ್ಯೂನಲ್ ಬೇಸ್ ಮೇಲೆ ಕಾಮರ್ಿಕರನ್ನು ಒಡೆದಾಳುತ್ತಾನೆ. ಮತ್ತೊಂದು ಈತನಿಗೆ ಬಲವಾಗಿ ಎದುರಾಳಿಗಳು ಯಾರು ಇಲ್ಲದಿದ್ದರಿಂದ ತನ್ನ ಮನಸ್ಸಿಗೆ ಬಂದಂತೆ ತನ್ನ ಅವಧಿಯಲ್ಲಿ ಅಧಿಕಾರ ಚಲಾಯಿಸುತ್ತಾನೆ. ತಾನು ಕಟ್ಟಿಕೊಂಡ ಸ್ವಂತ ಆಕಳು ಪಕ್ಷದಲ್ಲಿಯೇ ಯಾರೊಬ್ಬರು ಈತನ ವಿರುದ್ಧ ಚಕಾರವೆತ್ತುವುದಿಲ್ಲ. (ಯಾವಗಲಾದರೂ ಒಮ್ಮೆ ಶಾಂತಪ್ಪ, ಪಾಮಣ್ಣ ರಗಳೆ ತೆಗೆಯುತ್ತಾರೆಂದು ತಿಳಿದು ಮೊದಲಿಗೆ ಅವರನ್ನು ಸಮಜಾಯಿಸಿರುತ್ತಾನೆ.)
ಕಂಪನಿಯ ಕಾಮರ್ಿಕರಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಕಾಮರ್ಿಕರನ್ನು ಹೊರತುಪಡಿಸಿದರೆ, ಇನ್ನುಳಿದ ಎಲ್ಲ ಸಮುದಾಯದವರು ವಾಲೇಬಾಬು ಬೇಕು ಎನ್ನುತ್ತಾರೆ. ಆ ರೀತಿ ಜಾತಿವಾರು ಕಾಮರ್ಿಕರನ್ನು ಈತ ಒಡೆದಾಳುತ್ತಾನೆ. ಆತನಿಗೆ ಕಂಪನಿಯಲ್ಲಿ ಸರಿ ಸುಮಾರು 800ಮತಗಳು ರಿಸವರ್್ ಇವೆ. ಅವನು ಗುದ್ದಾಡುವುದು ಕೇವಲ 300ರಿಂದ 500 ಮತಗಳಿಗಾಗಿ ಮಾತ್ರ. ಕಂಪನಿಯಲ್ಲಿ ಎಂದಾದರೂ ವಾಲೇಬಾಬು ಸೋತಿದ್ದರೆ, ಅದು 400ರಿಂದ 500 ಮತಗಳ ಅಂತರದಲ್ಲಿಯೇ ಇರುತ್ತದೆ. ಇನ್ನು ಕೆಲವರಿಗಂತೂ ವಾಲೇಬಾಬು ಅಂದರೆ ಪಂಚಪ್ರಾಣ.
ಇಷ್ಟೇಲ್ಲ ಹಿನ್ನಲೆಯಿರುವ ವಾಲೇಬಾಬುಗೆ ಕಂಪನಿಯ ಕೆಲವೊಂದು ವಿಭಾಗ, ವಿಶೇಷವಾಗಿ ಗಣಿಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿಟ್ಟುಕೊಂಡಿದ್ದಾನೆ.
ಕಂಪನಿಯ ವೀಕ್ನೆಸ್ನ್ನು ಹಿಡಿದುಕೊಂಡು ರೊಕ್ಕ ತಿನ್ನುವುದೇ ಈತನಿಗೆ ಗೊತ್ತಿರುವ ಬಹುದೊಡ್ಡ ವಿಧ್ಯೆ.
ಹೊರಗಡೆಯೂ ಕೂಡ ಯಾವನಾದರೂ ತನ್ನ ವಿರುದ್ಧ ಮಾತನಾಡಿದರೆ, ಅವನ ವೀಕ್ನೆಸ್ನ್ನು ಹಿಡಿದುಕೊಂಡು ಆಟವಾಡಿಸುತ್ತಾನೆ. ಹೀಗಾಗಿ ಯಾರೊಬ್ಬರು ಇವನೇನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ ಎಂದು ಕಣ್ಣಿಗೆ ಕಂಡರೂ ಕಾಣದಂತಿರುತ್ತಾರೆ.

ಜೋಕರ್ ಶಫೀ.
ಸಿಟ್ಟಿಗೆ ಕುಖ್ಯಾತಿಯನ್ನು ಪಡೆದ ಶಫೀಯದ್ದು ಕೆದಕಿದರೆ ಬಹುದೊಡ್ಡ ಇತಿಹಾಸ. ಮೊದಲಿನಿಂದಲೂ ನೆಲ ನೋಡುತ್ತಾ ತಿರುಗುವ ಈತ ಎಲ್ಲರಿಗೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಹಟ್ಟಿ ಕಂಪನಿಯ ಕಾಮರ್ಿಕರು, ದಿನಗೂಲಿ ನೌಕರರು, ಇಂದಿನ ಪರಿಸ್ಥಿತಿಗೆ ಬರಲು ನೇರವಾಗಿ ಶಫೀಯೇ ಕಾರಣ.
ಹತ್ತಾರು ವ್ಯವಹಾರಗಳನ್ನು ಮಾಡಿಕೊಂಡು ಬಂದಿರುವ ಬಿಸಿನೆಸ್ ಮೈಂಡೆಡ್ ಶಫಿ ಅಸಲಿಗೆ ಎಡಪಂಥೀಯ ಸಂಘಟನೆಗಳ ಸದಸ್ಯನೂ ಅಲ್ಲ. ಬರೀ ಎಲ್.ಐ.ಸಿ, ಸಹರಾ, ಶಾಲೆ ಅಂತಲೇ ತಿರುಗುವ ಈತ ಎಂದಿಗೂ ತನ್ನ ವಿಭಾಗವಾದ ಗ್ಯಾರೇಜ್ನಲ್ಲಿ ಒಂದು ದಿನವೂ ಪಾನರ್ ಹಿಡಿದು ಕೆಲಸ ಮಾಡಿಲ್ಲ. (ವಾಲೇಬಾಬನ ಅವಧಿಯನ್ನು ಒಳಗೊಂಡು)
ಈ ಹಿಂದೆ ತಕ್ಕಡಿಯನ್ನು ತುಕ್ಕಡಿ ಮಾಡಲು ಪಕ್ಷೇತರನಾಗಿ ಅಮೀರಅಲಿಯ ವಿರುದ್ಧ ನಿಂತು 350ಮತಗಳನ್ನು ಪಡೆದು ಊರುಬಿಟ್ಟು ಓಡಿ ಹೋಗಲು ಸಿದ್ದತೆ ನಡೆಸಿದ್ದ ವಾಲೇಬಾಬುಗೆ ಮರುಜೀವ ನೀಡಿ, ಸಂಘಟನೆಗೆ ದ್ರೋಹ ಬಗೆದಿರುವಾತ. ಅಂದಿನ ಚುನಾವಣೆಯಲ್ಲಿ ವಾಲೇಬಾಬುಗೆ ಗೆಲ್ಲಲು ಅನುಕೂಲ ಮಾಡಿಕೊಟ್ಟು ತಾನು ಮಾತ್ರ ಸ್ವತಃ 3ವರೆ ವರ್ಷ ಮಸ್ತ್ಮಜಾ ಮಾಡಿದ. ಇದು ಅಲ್ಲಿಗೆ ಅಂದೇ ಮುಗಿದುಹೋಗಿದ್ದರೆ ಈತನ ಬಗ್ಗೆ ನಾವೆರಡು ಕಾಲಂ ಸುದ್ದಿಬರೆಯುವ ಅವಶ್ಯಕತೆ ಬೀಳುತ್ತಿದ್ದಿಲ್ಲ.
ಆದರೆ,
ಸಂಘ ತೊರೆದು ಇನ್ನೊಬ್ಬನಿಗೆ ಲಾಭ ಮಾಡಿ, ಕಾಮರ್ಿಕರ ಆಶೋತ್ತರಗಳನ್ನು ಗಾಳಿಗೆ ತೂರಿ, ತಕ್ಕಡಿ ದ್ರೋಹಿಯಾಗಿದ್ದ ಈತನನ್ನು ಕಳೆದ ಚುನಾವಣೆಯಲ್ಲಿ ಕೆಲವೊಂದು ಜಾತಿವಾದಿಗಳು ಶಫೀ ಸಾಬ ನೀವು ಮರಳಿ ತಕ್ಕಡಿ ಪಕ್ಷಕ್ಕೆ ಬರ್ರೀ.. ನೀವು ಬಂದಿಲ್ಲ ಅಂದರೆ, ಮಾದಿಗರೆಲ್ಲ ಸೇರಿಕೊಂಡು ಮಳ್ಳಿಯನ್ನು ಜಿ.ಎಸ್ ಮಾಡಲು ಎಲ್ಲಿ ಬೇಕಲ್ಲಿ ಸಭೆ ಮಾಡುತ್ತಿದ್ದಾರೆ. ನಮ್ಮ ಜನಾಂಗದವರೇ ಅಮೀರಅಲಿಗೆ ಜಿ.ಎಸ್ ಕೊಡಬಾರದೆಂದು ಹಿರಿಯ ಮುಖಂಡರಿಗೆ ಕಂಪ್ಲೇಟ್ ಕೊಟ್ಟಿದ್ದಾರೆ. ಕಾರಣ ಅನಾಯಾಸವಾಗಿ ಪಕ್ಷ ಮಳ್ಳಿಗೆ ಜಿ.ಎಸ್ ನೀಡಲು ತಯಾರಿ ನಡೆಸಿದೆ.
ಅದಕ್ಕಾಗಿ ಹಮಾರ ಹಮಾರ ಲೋಗ್ ಜಿ.ಎಸ್ ರೆಹನಾ ಸಾಬ್ ನಾವು ಬೇಕಿದ್ರೆ ನಿನ್ನ ಪರವಾಗಿ ಅಮೀರಅಲಿಗೆ ಹೇಳುತ್ತೇವೆಂದು ಓಲೈಸಿ ಶಫೀಯನ್ನು ಮರಳಿ ತಕ್ಕಡಿಗೆ ತಂದಿದ್ದರು.
ಆಗ ಅದಕ್ಕೆ ಅಮೀರಅಲಿ ಬೇರೆ ಕಾರಣಗಳಿಂದ ಒಪ್ಪಿ ಶಫೀಗೆ ಜಿ.ಎಸ್ ಸಿಗುವಂತೆ ಮಾಡಿದ! ಅಂದು ಹುಮ್ಮಸ್ಸಿನ ಯುವಕರ ಪಕ್ಷವು ಕೊನೆಗಳಿಗೆಯಲ್ಲಿ ಮಳ್ಳಿಗೆ ಜಿ.ಎಸ್ ನೀಡದೇ ಸಮಜಾಯಿಷಿ ನೀಡಿ, ಪಕ್ಷ ಬಿಟ್ಟು ಹೋಗಿದ್ದ ದ್ರೋಹಿಗೆ ಮತ್ತೊಮ್ಮೆ ಅವಕಾಶ ಕೊಟ್ಟಿತು.
ಅಷ್ಟೊತ್ತಿಗೆ ವಾಲೇಬಾಬನ ಆಡಳಿತದಿಂದ ಬೇಸತ್ತಿದ್ದವರು ಪಯರ್ಾಯವಾಗಿ ತಕ್ಕಡಿಯನ್ನು 18ಸ್ಥಾನಗಳಲ್ಲಿ ಗೆಲ್ಲಿಸಿದರು. ಅಲ್ಲಿಂದ ಶಫೀಯ ಆಟ ನಡೆದದ್ದೇ ಬೇರೆ. ಅದೆಲ್ಲವನ್ನು ನಮ್ಮ ಕಳೆದ 2ಸಂಚಿಕೆಯಲ್ಲಿ ಬರೆಯಲಾಗಿದೆ. ಈಗ ಶಫೀ ಮತ್ತು ಆತನ ಹಿನ್ನಲೆಯ ಕುರಿತು ಸ್ವಲ್ಪ ತಿಳಿಯೋಣ!
ವಾಲೇಬಾಬು ಸೋಲುತ್ತಿದ್ದಂತೆ ಶಫೀಯ ಟಸ್ಪುಸ್ ಇಂಗ್ಲೀಷ್, ಬಿಪಿ, ಸಿಟ್ಟು ಕೆಲವು ದಿನ ಎಂ.ಎಲ್ ಪಾಟೀಲ್, ಕಿಶೋರಕುಮಾರರ ರೂಂನಲ್ಲಿ ಕಾಣಿಸತೊಡಗಿದವು. ಕೊನೆಕೊನೆಗೆ ಅವೆಲ್ಲ ಮಾಯವಾಗಿ ಹಣ ಜಮಾವಣೆಯತ್ತ ಸಾಗಿದವು!
ಮೊದಲಿನಿಂದಲೂ ಈತನಿಗೆ ಎಲ್.ಐ.ಸಿಯಿಂದ ಅಂದಾಜು ಏನಿಲ್ಲವೆಂದರೂ ತಿಂಗಳಿಗೆ 10.ಸಾವಿರ ಕಮೀಷನ್, ಸಹರಾದಿಂದ ಒಂದೈದು ಸಾವಿರ, ಕಂಪನಿಯಿಂದ ಪುಕ್ಕಟೆ ಬರುವ ತನ್ನ ವೇತನವೊಂದು 15ಸಾವಿರ, ಇನ್ನು ಶಾಲೆಯಲ್ಲಂತೂ ಈತನೇ ಬಾಸ್ ಇರುವದರಿಂದ ಅದರದೊಂದು ಸ್ವಲ್ಪ ಚೂರು ಪಾರು. ಒಟ್ಟಾರೆ ಇವೆಲ್ಲ ಮೂಲಗಳಿಂದ ಬರುತ್ತಿದ್ದ ಅಂದಾಜು ಮೊತ್ತ ಜಿ.ಎಸ್ ಆಗುತ್ತಿದ್ದಂತೆ ಕ್ರಮೇಣ ಹೆಚ್ಚಾಗತೊಡಗಿತು. ಅಲ್ಲಿ ಹಣ ಹೆಚ್ಚಾಗುತ್ತಿದ್ದಂತೆ ಕಂಪನಿಯಲ್ಲಿ ಇಂಗ್ಲೀಷ್, ಅಮಾಯಕ ಬಾಗಿಲುಗಳಿಗೆ ಒದೆಯುವುದು, ಸುಮ್ಸುಮನೇ ಸಿಟ್ಟಿಗೆ ಬರುವುದು, ಎಲ್ಲವೂ ಕಡಿಮೆಯಾಗತೊಡಗಿದವು.
ಆದಾಗ್ಯೂ ಪ್ರತಿ ತಿಂಗಳು ಅಂದಾಜು 40ಸಾವಿರ ಗಳಿಸುವ ಈತ ಬೆಳಿಗ್ಗೆ ಗ್ಯಾರೇಜ್ನಲ್ಲಿ ತಿಂಡಿ, ಮಧ್ಯಾಹ್ನ ಮಸೀಧಿಯಲ್ಲಿ ಊಟ, ರಾತ್ರಿ........ ಮನೆಯಲ್ಲಿ ಊಟ ಮಾಡುತ್ತಿದ್ದಾನೆ. (ರಾತ್ರಿ ಊಟ ಗೊತ್ತಿದ್ದವರು ಮಾತ್ರ ಬಿಟ್ಟ ಸ್ಥಳವನ್ನು ತುಂಬಿಕೊಳ್ಳಬೇಕು.) ಯಾಕೆಂದರೆ ಈತನ ಹೆಂಡತಿ ಮಕ್ಕಳು ಮತ್ತು ಕುಟುಂಬವೆಲ್ಲ ರಾಯಚೂರಿನಲ್ಲಿದೆ.
ಕಾರಣ ಇಲ್ಲಿ ಈತನೇ ಪ್ರಧಾನಿ, ಈತನೇ ಗುಮಾಸ್ಥ, ಈತನೇ ಏಕೋಪಾಧ್ಯಯ. ಇದೆಲ್ಲ ದೈನಂದಿನ ಲಹರಿಯಾದರೆ, ಸಂಘಟನೆಯಲ್ಲಿಯೂ ಅಂತಹ ಹೊಸದನ್ನೇನು ಮಾಡಿಲ್ಲ.
ಆಲಂಸಾಬನ ಕೈಯಲ್ಲಿ ಸಿಗ್ನೇಚರ್ ಇರುವ ಬ್ಲಾಂಕ್ಚೆಕ್, ಗುಮಾಸ್ಥ ಅಮರೇಶನಿಗೆ ಆಫೀಸ್ ಜವಾಬ್ದಾರಿ, ಮಿಯ್ಯಸಾಬಗೆ ಸಿಕ್ಲೋನ್ ಮತ್ತು ಬಳ್ಳಾರಿ ಯುವಕನ ಚಾಕರಿ, ದತ್ತುಪುತ್ರರ ಕೈಯಲ್ಲಿ ಕೆಲವೊಂದು ಬಾಡಿಗೆ ಮನೆಗಳ ಕೀಲಿಗಳು, ಅವಶ್ಯಕತೆ ಬಿದ್ದರೆ, ಅಮೀರಅಲಿ ಮಳ್ಳೀಗೆ ಒಂದು ಮೊಬೈಲ್ ಕಾಲ್, ಮಾಡಿಕೊಂಡು ಹಳೆದೊಂದು ಡಬ್ಬಾ ಸೈಕಲ್ನ್ನು ಎಡಗೈಲಿ ಹಿಡಿದು ಬಲಗೈ ಕೊಂಕಳದಲ್ಲಿ ಚೀಲ ಸಿಗಿಸಿಕೊಂಡು ದವಖಾನೆ, ಜಫರುಲ್ಲಾ, ಶಾಲೆ, ಮಸೀದಿ, ಇನ್ನೊಬ್ಬರ ಮನೆ ಅಂತಾನೆ ತಿರುಗುತ್ತಾ ಸಂಘಟನೆಯನ್ನೂ ಬಲಹೀನಗೊಳಿಸಿ, ತಾನೇ ತುಕ್ಕಡಿಯನ್ನು ಮಾಡಿ, ತುಘಲಕ್ ಆಡಳಿತ ನಡೆಸಿದ್ದಾನೆ.
ಹೀಗಾಗಿ ಕಾಮರ್ಿಕ ಸಂಘಗಳಲ್ಲಿ ವಾಲೇಬಾಬು ಬ್ರೋಕರ್ ಆಗಿದ್ದರೆ, ಶಫೀ ಜೋಕರ್ ಆಗಿದ್ದಾನೆ ಎಂದು ಪ್ರಜ್ಞಾವಂತ ಕಾಮರ್ಿಕರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ತಕ್ಕಡಿಯ ಅಸಲಿ ಕಥೆ.
ಹಿಂದೊಮ್ಮೆ ನಾವು ವಾಲೇಬಾಬನ ವಿರುದ್ಧ ಹೋರಾಟವನ್ನು ಮಾಡಿ ಜೈಲಿಗೆ ಹೋದಾಗ ನಮ್ಮಿಂದೆ ಅಮೀರಅಲಿ, ಶಾಂತಪ್ಪ ಮಳ್ಳಿ, ಸಿದ್ದಪ್ಪ, ಗೋರ್ಕಲ್ ವೆಂಕಟೇಶನನ್ನು ಬಿಟ್ಟರೇ ಯಾರೊಬ್ಬರು ಬರಲಿಲ್ಲ. ಕೊನೆಪಕ್ಷ ನಮಗೇನಾಗಿದೆ ಎಂದು ಅತ್ತ ಇಣುಕಿಯೂ ನೋಡಲಿಲ್ಲ. ಅದಕ್ಕಿಂತ ಹಿಂದೆಯೂ ತಕ್ಕಡಿ ಸೋತಾಗ ವಾಲೇಬಾಬು ನನ್ನ ಗೆಳೆಯ ಪತ್ರಕರ್ತ ಖಾಸೀಂಅಲಿಯ ಅಂಗಡಿಯ ಕರೆಂಟ್ನ್ನು 6ತಿಂಗಳು ತೆಗೆಸಿದ್ದ. ಆಗಲೂ ಯಾರೊಬ್ಬ ಪುರುಷರು ಅತ್ತ ಸುಳಿಯಲಿಲ್ಲ. ಕೆಲವೊಬ್ಬರಂತೂ ನೋಡಿದರೂ ನೋಡದಂಗೆ ಅಂಗಡಿ ಹಿಂದಲಿಂದಲೇ ತಲೆ ಬಗ್ಗಿಸಿಕೊಂಡು ಹೋಗುತ್ತಿದ್ದರು.
ಆದರೆ, ತಕ್ಕಡಿ ಗೆದ್ದ ಮೇಲೆ ನಾನು ಲೀಡರ್, ನೀನು ಕಾಮ್ರೇಡ್, ನಾವು ನಾಮಿನೇಟ್ ಎಂದು ಷೋ ಕೊಡುವವರ ಸಂಖ್ಯೆಯೇ ಜಾಸ್ತಿಯಾಗುತ್ತದೆ. ಮತ್ತೇ ಒಂದು ವೇಳೆ ತಕ್ಕಡಿ ಸೋತಿತೆಂದರೆ, ಬಳ್ಳಾರಿ ಯುವಕರಿಲ್ಲ, ಕಾಮ್ರೇಡ್ ಇಲ್ಲ, ನಾಮಿನೆಟೂ ಇಲ್ಲ. ಶಫೀಯಂತೂ ಮೊದಲೇ ಬರಲ್ಲ. (ಯಾಕೆಂದರೆ ಆತನದು ನಿವೃತ್ತಿ ಸಮೀಪಿಸುತ್ತಿದೆ. ಇಷ್ಟರಲ್ಲಿಯೇ ಬೇರೊಂದು ಊರಿಗೆ ಶಿಫ್ಟ್ ಆಗಲು ತಯಾರಿ ನಡೆಸಿದ್ದಾನೆ.!) ಮತ್ತದೇ ಅಮೀರಅಲಿ, ಶಾಂತಪ್ಪ, ಸಿದ್ದಪ್ಪನೇ ತಕ್ಕಡಿ ಝಂಡವನ್ನು ಹಿಡಿದುಕೊಂಡು ಎ.ಐ.ಟಿ.ಯು.ಸಿ ಜಿಂದಾಬಾದ್ ಅಂತ ತಿರುಗಬೇಕು. ಒಟ್ಟಿನಲ್ಲಿ ನಾಲಾಯಕ-ನಾಮರ್ಧರ ಮಧ್ಯೆ ಅಂದು ಮಹಾನ್ ನಾಯಕರು ಕಟ್ಟಿಬೆಳೆಸಿದ ಸಂಘಟನೆಯ ತಕ್ಕಡಿಯೊಂದೇ ಸಿಕ್ಕು ಒದ್ದಾಡುತ್ತಿದೆ. ಇದು ಮೂಲ ತಕ್ಕಡಿಯ ಅಸಲಿ ಚಿತ್ರಣ.


ಪ್ರಜಾ ಸಮರ ಫಲಶ್ರುತಿ
ಕಾಮರ್ಿಕರ ಹಣವನ್ನುಕಾಮರ್ಿಕರಿಗೆ ಕೊಡಿಸುವ ಇ.ಪಿ.ಎಫ್ ತದಿತರೇ ಸಾಲದಲ್ಲಿ ತಕ್ಕಡಿ ಕಾಮ್ರೇಡ್ಗಳು ದುಡ್ಡನ್ನು ತಿಂದಿದ್ದಾರೆ ಎಂಬುದರ ಕುರಿತು ಕಳೆದ ಸಂಚಿಕೆಯಲ್ಲಿ ಕಾಮ್ರೇಡ್ಸ್ ನಿಮ್ಮವರೇನು ಸಾಚಾನ..? ಎಂಬ ತಲೆಬರಹದಡಿ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಆ ವರದಿಗೆ ಗಲಿಬಿಲಿಗೊಂಡ ಕಾಮರ್ಿಕ ಸಂಘ ಈಗ ತನ್ನೆಲ್ಲ ನಾಮನಿದರ್ೇಶಿತ ಸಮಿತಿಗಳನ್ನು ಬದಲಾವಣೆ ಮಾಡಿದೆ. ಅಸಲಿಗೆ ಗಾಡನಿದ್ರೆಗೆ ಜಾರಿದ್ದ ಕಾಮ್ರೇಡ್ಗಳು ಈಗ ಎಚ್ಚೆತ್ತಿದ್ದಾರಷ್ಟೇ. ಆದರೆ,
ನಿರ್ಗಮಿತ ನಾಮನಿದರ್ೇಶಿತನೊಬ್ಬನು ತನ್ನನ್ನು ತೆಗೆದುಹಾಕಿದ ಮೇಲೆ ಈ ರೀತಿ ಹೇಳಿದ್ದಾನೆ.
ದೊಡ್ಡ ದೊಡ್ಡ ಕಾಮ್ರೇಡ್ಗಳು ಈ ಹಿಂದೆ ನಮ್ಮಿಂದ ಬಾಟಲಿಗಳನ್ನು ತರಿಸಿಕೊಂಡು ಕುಡಿಯುತ್ತಿರುವಾಗ ಯಾರೊಬ್ಬರು ಏನರ್ರೀ.. ದಿನಾಲು ನಮಗೆ ಕುಡಿಸಲು ನಿಮಗೆ ರೊಕ್ಕ ಎಲ್ಲಿಂದ ಬರುತ್ತಿದೆ ಅಂತ ಯಾರು ಪ್ರಶ್ನಿಸಲಿಲ್ಲ. ಯಾಕೆಂದರೆ, ಅವರಿಗೂ ಅಸಲಿ ಹಕೀಕತ್ತು ಗೊತ್ತಿತ್ತು. ನಾವೆಲ್ಲ ಕಾಮರ್ಿಕರಿಂದಲೇ ಲಂಚ ಪಡೆದು ಕುಡಿಸುತ್ತೇವೆಂಬುದು.
ಹಾಗಾಗಿ ಅವತ್ತೆಲ್ಲ ನಾವು ಕಾಮರ್ಿಕರ ಲಂಚದ ಹಣದಿಂದ ತಂದದ್ದನ್ನೇ ಕುಡಿದು ಇವತ್ತು ಮಾತ್ರ ನಮ್ಮನ್ನೇ ಅಪರಾಧಿ ಮಾಡಿ ನಾಮ ನಿದರ್ೇಶಿತ ಸ್ಥಾನದಿಂದ ತೆಗೆದುಹಾಕಿದ್ದಾರೆ. ಈ ರೀತಿ ಮಾಡುವುದು ದೊಡ್ಡ ಕಾಮ್ರೇಡ್ಗಳಿಗೆ ಶೋಭೆ ತರುವುದಿಲ್ಲ ಎಂದಿದ್ದಾನಂತೆ.
ಅದಕ್ಕಾಗಿಯೇ ನಾವುಗಳು ಕಳೆದ ಸಂಚಿಕೆಯಲ್ಲಿ ನಿಮ್ಮ ಕಾಮ್ರೇಡ್ಗಳು ದುಡ್ಡನ್ನು ಹಗಲಿರುಳು ವಾಲೇಬಾಬುಗಿಂತ ಒಂದು ಹೆಜ್ಜೆ ಮುಂದೆ ಹೋಗಿ ತಿನ್ನುತ್ತಿದ್ದಾರೆ. ಅದು ನಿಮಗೆ ಗೊತ್ತಿದ್ದರೂ ನೀವೇಕೆ ಮೂಕಪ್ರೇಕ್ಷಕರಾಗಿದ್ದೀರಿ..? ಎಂದು ಪ್ರಶ್ನಿಸಿದ್ದೇವು.
ಏನೇ ಇರಲಿ ಇನ್ನುಮುಂದಾದರೂ ಹಗಲು ಕಂಡ ಬಾವಿಗೆ ರಾತ್ರಿ ಬೀಳಬೇಡಿ.

"HISTORICAL RECORD OF HUTTI CRICKET CLUB"




ಡಿ.ವೈ ವೆಂಕಟೇಶ, ಕಾರ್ಯನಿವರ್ಾಹಕ ನಿದರ್ೇಶಕರು,
ತಂಡದ ಒಟ್ಟಾರೆ ಪ್ರದರ್ಶನದ ಬಗ್ಗೆ ಅತೀವ ಸಂತಸವಿದೆ. ಪ್ರತಿವರ್ಷ ಕಂಪನಿಯ ವತಿಯಿಂದ ಕ್ರೀಡೆಗಳನ್ನು ಆಯೋಜಿಸಲು ಎಲ್ಲ ರೀತಿಯಿಂದ ಸಹಕಾರ ನೀಡಲಾಗುತ್ತಿದೆ. ಅದರ ಒಂದು ಭಾಗವಾಗಿ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ (ಣ ಆತಠಟಿ) ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದರೊಂದಿಗೆ ಹಟ್ಟಿಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಟ್ಟಿ ಕಂಪನಿಯ ಕಾರ್ಯನಿವರ್ಾಹಕ ನಿದರ್ೇಶಕ ಡಿ.ವೈ ವೆಂಕಟೇಶ ನಮ್ಮ ಪತ್ರಿಕೆ ಪ್ರತಿನಿಧಿಯ ಮುಂದೆ ಹರ್ಷ ವ್ಯಕ್ತಪಡಿಸಿದರು.
ಮೊದಲಿನಿಂದಲೂ ಹಟ್ಟಿ ಚಿನ್ನದ ಗಣಿ ಪ್ರತಿಯೊಂದು ಕ್ಷೇತ್ರಗಳಲ್ಲಿ ತನ್ನದಾದ ಛಾಪನ್ನು ಮೂಡಿಸುತ್ತಾ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ.
ಕ್ರಿಕೆಟ್ನಂತೆ ಪುಟ್ಬಾಲ್, ವಾಲಿಬಾಲ್, ಹಾಕಿಯಂತಹ ಆಟಗಳನ್ನು ಆಡಲು ನಮ್ಮ ಕಾಮರ್ಿಕರು ಮತ್ತು ಅವರು ಮಕ್ಕಳು ಮುಂದೆ ಬರಬೇಕು. ಅವರಿಗೆ ಎಲ್ಲ ರೀತಿಯ ತರಬೇತಿಗಳನ್ನು ನೀಡುವದರೊಂದಿಗೆ ನಾವುಗಳು ಕಂಪನಿಯ ವತಿಯಿಂದ ಸಾಧ್ಯವಾದ ಸೌಲಭ್ಯಗಳನ್ನು ಕೊಡುತ್ತೇವೆ. ಕಾರಣ ರಾಷ್ಟ್ರೀಯ ಕ್ರೀಡೆಗಳಲ್ಲಿ ಉತ್ಸುಕತೆಯಿಂದ ಯುವಕರು ಪಾಲ್ಗೊಳ್ಳಬೇಕೆಂದರು.
ಮುಂದಿನ ವರ್ಷ ಪ್ರಥಮ ಡಿವಿಜನ್ನಲ್ಲಿ ನಮ್ಮ ತಂಡವು ದಿಟ್ಟ ಆಟವನ್ನು ಪ್ರದಶರ್ಿಸಿ ಜಯಿಸುತ್ತದೆ ಎಂಬ ಭರವಸೆ ನಮಗಿದೆ. ಅದೇ ನಿಟ್ಟಿನಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿ ಹಟ್ಟಿಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಬೇಕಾದ ಮಹತ್ತರ ಜವಾಬ್ದಾರಿ ತಂಡದ ಮೇಲಿದೆ. ಎಂದು ಹೇಳಿದರು..

ಸಫೀವುಲ್ಲಖಾನ್, ಗೌರವ ಕಾರ್ಯದಶರ್ಿಗಳು.
ಹಟ್ಟಿ ಚಿನ್ನದ ಗಣಿ ಕಂಪನಿಯೂ ನಮ್ಮ ಮಂಡಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದರಿಂದ ನಾವುಗಳು ಇಂದು ಪ್ರಥಮ ಡಿವಿಜನ್ನ ಹಂತಕ್ಕೆ ಹೋಗಲು ಸಾಧ್ಯವಾಗಿದೆ. ಎಲ್ಲ ಹಂತಗಳಲ್ಲಿ ಕಂಪನಿಯ ಆಡಳಿತ ಮಂಡಳಿಯು ನಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಿದ್ದಲ್ಲದೇ, ನಮಗೆ ಬೆನ್ನೆಲುಬಾಗಿ ನಿಂತಿದೆ.
ಇದರ ಜೊತೆಯಲ್ಲಿ ನಮ್ಮ ಆಯ್ಕೆ ಸಮಿತಿಯೂ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದರಿಂದ ನಾವುಗಳು ಎಲ್ಲ ಪ್ರತಿಷ್ಟಿತ ತಂಡಗಳನ್ನು ಸೋಲಿಸಿ ಪ್ರಥಮ ಡಿವಿಜನ್ಗೆ ಹೋಗಲು ಸಾಧ್ಯವಾಗಿದೆ.
ತಂಡದ ಯಶಸ್ಸು ಮತ್ತು ಬೆಳವಣಿಗೆಗೆ ಕಂಪನಿಯೇ ಮೂಲ ಕಾರಣಿಭೂತವಾಗಿದೆ.
ಕಂಪನಿಯ ಈ ಬಾರಿಯೂ ಅವಕಾಶವೊಂದನ್ನು ಮಾಡಿಕೊಟ್ಟರೆ, ಕಳೆದ ವರ್ಷದಂತೆ ಈ ಬಾರಿಯೂ ಮುಂದಿನ ತಿಂಗಳು ಹಟ್ಟಿ ಗೋಲ್ಡ್ ಕಪ್ ಅಂತರರಾಜ್ಯ ಟೂನರ್ಿಮೆಂಟ್ನ್ನು ನಡೆಸುವ ಉದ್ದೇಶ ನಮ್ಮದಾಗಿದೆ ಎಂದು ಪತ್ರಿಕೆಯ ಪ್ರತಿನಿಧಿ ಜೊತೆ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ನ ಗೌರವ ಕಾರ್ಯದಶರ್ಿ ಸಫೀವುಲ್ಲಖಾನ್ ಅನಿಸಿಕೆ ಹಂಚಿಕೊಂಡರು.

ಕನರ್ಾಟಕದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆ ಯಾವುದೆಂದು ಯಾರನ್ನಾದರೂ ಪ್ರಶ್ನಿಸಿದರೆ, ತಕ್ಷಣವೆ ಬರುವ ಉತ್ತರ ರಾಯಚೂರು ಜಿಲ್ಲೆ... ಇಂತಹ ಜಿಲ್ಲೆಯಲ್ಲಿರುವ ಹಟ್ಟಿ ಚಿನ್ನದ ಗಣಿ ಬಂಗಾರವನ್ನು ಉತ್ಪಾದಿಸುವದರ ಜೊತೆಗೆ ಬಂಗಾರದಂತಹ ಹಲವಾರು ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದೆ.
ಹಟ್ಟಿ ಚಿನ್ನದ ಗಣಿಯು ಹಲವಾರು ಪ್ರತಿಭಾನ್ವಿತ ಶಿಕ್ಷಣ ಪ್ರೇಮಿಗಳು, ಸಾಹಸಿಗಳು, ಹಿರಿಯ ಅಧಿಕಾರಿಗಳು, ಕ್ರೀಡಾಪ್ರೇಮಿಗಳನ್ನು ಪೋಷಿಸಿ ಬೆಳೆಸುತ್ತಿದೆ. ಹೀಗಾಗಿ ನಿಜಕ್ಕೂ ಒಂದಿಲ್ಲೊಂದು ಕ್ಷೇತ್ರದಲ್ಲಿ ತನ್ನದಾದ ಛಾಪನ್ನು ರಾಜ್ಯಮತ್ತು ರಾಷ್ಟ್ರಮಟ್ಟದಲ್ಲಿ ಮೂಡಿಸುತ್ತಾ ಬಂದಿದೆ ಎಂದರೆ ತಪ್ಪಾಗಲಾರದು. ಇವೆಲ್ಲವುಗಳು ಒಂದು ಭಾಗವಾಗಿ ಇತ್ತೀಚಿಗೆ ಹಟ್ಟಿ ಕ್ರಿಕೆಟ್ ತಂಡವು 3ದಶಕಗಳ ನಂತರ ಣ ಆತಠಟಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವದರೊಂದಿಗೆ ಹೊಸ ದಾಖಲೆಯನ್ನು ರಾಜ್ಯಮಟ್ಟದಲ್ಲಿ ನಿಮರ್ಿಸಿದೆ.
ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ ನಡೆದು ಬಂದ ದಾರಿ.
ಪ್ರಪ್ರಥಮ ಬಾರಿಗೆ 1948ರಲ್ಲಿ ಕ್ರೀಡಾಮನೋಭಾವವನ್ನು ಬೆಳೆಸುವ ಸದುದ್ದೇಶದಿಂದ ಬ್ರೀಟಿಷ್ ಅಧಿಕಾರಿಗಳು ಇಲ್ಲಿ ಕ್ರಿಕೆಟ್ನ್ನು ಪರಿಚಯಿಸಿದರು. ತದನಂತರ 1952ರಲ್ಲಿ ಈ ನಮ್ಮ ಕ್ರಿಕೆಟ್ ಕ್ಲಬ್ ಕೆ.ಎಸ್.ಸಿ.ಎ ನ ಸದಸ್ಯತ್ವವನ್ನು ಪಡೆಯುವದರೊಂದಿಗೆ ತನ್ನ ಕ್ರೀಡೆಯ ಅಚಲವಾದ ಧ್ಯೇಯವನ್ನು ಮುಂದುವರೆಸುತ್ತಾ ಸಾಗಿತು.
ಫೆಬ್ರುವರಿ 2007ರಂದು ಸಫೀವುಲ್ಲಖಾನ್ರ ಕಾರ್ಯದಶರ್ಿತ್ವದಲ್ಲಿ ಕ್ರಿಕೆಟ್ ತಂಡದ ಹೊಸ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಅಜಿತ್ಪಾಶ, ಬಿ.ಕೆ ವಾಸುಕಿ, ಆಂಜಿನೇಯ ಮತ್ತು ಕಂಪನಿಯ ವಿಭಾಗದ 10ಸದಸ್ಯರನ್ನು ಪ್ರತಿವಿಭಾಗದಂತೆ ಆಯ್ಕೆ ಮಾಡಲಾಯಿತು.
2007ರಲ್ಲಿ 2ನೇ ವಿಭಾಗದ ಹಾಗೂ 8ನೇ ಶ್ರೇಣಿಯಲ್ಲಿದ್ದ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ತಂಡವು 2008ರಲ್ಲಿ 6ನೇ ಕ್ರಮಾಂಕ ಹಾಗೂ 2009ರಲ್ಲಿ 4ನೇ ಕ್ರಮಾಂಕಕ್ಕೇರಿತು. ಇಷ್ಟಕ್ಕೆ ತೃಪ್ತಿಪಡದೇ ಪ್ರಗತಿಯ ಪಥದಲ್ಲಿ ಮುಂದುವರಿದ ತಂಡವು 2ನೇ ವಿಭಾಗದ ಫೈನಲ್ನ್ನು ತಲುಪಿತ್ತು. ಈ 2ನೇ ವಿಭಾಗದಲ್ಲಿ 32ಪ್ರತಿಭಾನ್ವಿತ ತಂಡಗಳಿದ್ದವು. ಈ 2ನೇ ವಿಭಾಗದಲ್ಲಿರುವ ಅತ್ಯುತ್ತಮ 2 ತಂಡಗಳನ್ನು (ಣ ಆತಠಟಿ)ಗೆ ಬಡ್ತಿ ನೀಡಲಾಗುತ್ತದೆ.
ಇಲ್ಲಿ ಹಟ್ಟಿ ಚಿನ್ನದ ಗಣಿ ಕ್ರಿಕೆಟ್ ಕ್ಲಬ್ ಫೈನಲ್ ಪ್ರವೇಶಿಸುವದರೊಂದಿಗೆ ಣ ಆತಠಟಿ ನ ಅರ್ಹತೆಯನ್ನು ಪಡೆದು ಉತ್ತರಕನರ್ಾಟಕದಲ್ಲಿಯೇ 3ದಶಕಗಳ ನಂತರ ಮೊದಲ ಬಾರಿಗೆ ವೇಲು ನಾಯಕತ್ವದೊಂದಿಗೆ ಬ್ಯಾಟ್ಸ್ಮನ್ ಕರಿಯಪ್ಪ, ಅಪ್ಸರಪಾಶ, ನವೀನ ಬೌಲರ್ಗಳಾದ ಮೆಹಬೂಬಪಾಶ, ಚಂದ್ರಶೇಖರರವರ ಅತ್ಯುತ್ತಮ ಆಟ ಹಾಗೂ ಒಟ್ಟು ತಂಡದ ಸದಸ್ಯರ ಪ್ರದರ್ಶನದೊಂದಿಗೆ ಸಾಧನೆಗೈದ ಏಕೈಕ ತಂಡವಾಗಿ ಹೊರಹೊಮ್ಮಿತು.
ಣ ಆತಠಟಿ ನಲ್ಲಿರುವ 8ತಂಡಗಳಲ್ಲಿ ಮುಂಬರುವ ವರ್ಷ ತಾನು 7ತಂಡಗಳ ಜೊತೆ ಸೆಣಸಲಿದೆ. ಊಉಒಅಅ ಯು ಉತ್ತಮ ಪ್ರದರ್ಶನ ನೀಡುವದರ ಮೂಲಕ ಮೊದಲನೇ ವಿಭಾಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಪ್ರಸ್ತುತ ತಂಡದ ಈ ಸಾಧನೆಯ ಹಿಂದೆ ಕಂಪೆನಿಯ ಕಾರ್ಯನಿವರ್ಾಹಕ ನಿದರ್ೇಶಕ ಡಿ.ವೈ ವೆಂಕಟೇಶರವರ ನಿರಂತರ ಪ್ರೋತ್ಸಾಹ ಮತ್ತು ಕ್ರೀಡೆಯ ಬಗ್ಗೆ ಅವರಿಗಿರುವ ಆಸಕ್ತಿಯೇ ಮುಖ್ಯ ಕಾರಣವೆಂದು ಸಫೀವುಲ್ಲಾಖಾನ್ ಹೇಳುತ್ತಾರೆ.
ಇದರಲ್ಲಿ ಪ್ರತಿಯೊಂದು ಇಲಾಖೆಗಳ ಮುಖ್ಯಸ್ಥರ ನಿರಂತರ ಪ್ರೋತ್ಸಾಹವು ಕಾರಣವಾಗಿದೆ. ಅದೇ ರೀತಿ ತಂಡದ ಉತ್ತಮ ಪ್ರದರ್ಶನಕ್ಕೆ ಬಹುಮುಖ್ಯವಾಗಿರುವುದು ಆಟಗಾರರ ಆಯ್ಕೆ. ಉತ್ತಮ ತಂಡವನ್ನು ರಚಿಸಲು ಆಯ್ಕೆ ಸಮಿತಿಯನ್ನು ರಚಿಸಲಾಗಿರುತ್ತದೆ. ಅದು ಮುಕ್ತ ಹಾಗೂ ಪಾರದರ್ಶಕವಾಗಿ ತಂಡವನ್ನು ರಚಿಸಿದ್ದರಿಂದ ಈ ಒಂದು ಸಾಧನೆ ಮಾಡಲು ಸಾಧ್ಯವಾಗಿದೆ.
ಆಯ್ಕೆ ಸಮಿತಿಯು ನಾಕೌಟ್ ಪಂದ್ಯಗಳನ್ನು ಪ್ರತಿ ರವಿವಾರದಂತೆ ವರ್ಷಪೂತರ್ಿ ಆಡಿಸುವ ತೀಮರ್ಾನವನ್ನು ಕೈಗೊಂಡಿದ್ದು, ಇದರಿಂದ ಉತ್ತಮ ಆಟಗಾರರನ್ನು ಗುರುತಿಸಲು ಸಹಕಾರಿಯಾಗಿದೆ.
ಡಿಸೆಂಬರ್ 2009ರಲ್ಲಿ ಹಟ್ಟಿ ಗೋಲ್ಡ್ಕಪ್ ಕ್ರಿಕೆಟ್ ಟೂನರ್ಿಮೆಂಟ್ನ್ನು ನಡೆಸಲಾಯಿತು. ಈ ಟೂನರ್ಿಮೆಂಟ್ನಲ್ಲಿ ದಕ್ಷಿಣ ಭಾರತದ 20ಪ್ರತಿಷ್ಟಿತ ತಂಡಗಳು ಭಾಗವಹಿಸಿದ್ದವು. ಇದು ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ನಡೆಯಿತು. ಟೂನರ್ಿಯ ಕುರಿತು ಎಲ್ಲ ತಂಡಗಳು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದವು.
60 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಹಿರಿಯ ಆಟಗಾರರಾದ ಜಯಾನ್ಜೀವಿ, ಎಂ.ಡಿ ಪಾಶ, ತಂಗವೇಲು, ಸೈಯದ್ ಜಿಲಾನಿ, ರಾಮಜೀ ಹಾಗೂ ಪೀಲಿಫ್ಸ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ರಿಕೆಟ್ ಕ್ಲಬ್ ರವಿವಾರದ ಆಟಗಳನ್ನು ಏರ್ಪಡಿಸುವದಲ್ಲದೆ ಚಿಣ್ಣರಿಗಾಗಿ 1ತಿಂಗಳ ಬೇಸಿಗೆಯ ಕ್ರಿಕೆಟ್ ತರಬೇತಿಯನ್ನು ನೀಡುವುದು ಸಮಿತಿಯ ಮುಖ್ಯಧ್ಯೇಯವಾಗಿದೆ.
ಕಳೆದ 3ವರ್ಷಗಳಲ್ಲಿ 15, 17, 19 ಹಾಗೂ 22ರೊಳಗಿನ ಪ್ರತಿಭಾನ್ವಿತ ಯುವ ಆಟಗಾರರನ್ನು ಪ್ರೋತ್ಸಾಹಿಸಿ ಜಿಲ್ಲಾ ಹಾಗೂ ವಿಭಾಗಮಟ್ಟಕ್ಕೆ ಕಳುಹಿಸಲಾಗಿದೆ. ಪ್ರತಿವರ್ಷ ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಟೂನರ್ಿಮೆಂಟ್ನ್ನು ಹಟ್ಟಿಯ ಸಮಸ್ತ ಶಾಲೆಗಳನ್ನು ಒಳಗೊಂಡು ನಡೆಸಲಾಗುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಮಕ್ಕಳಲ್ಲಿ ಕ್ರೀಡೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.
ಊಉಒಅಅ ಯು ಕೈಗೊಂಡಂತಹ ಕಾರ್ಯಗಳು ಆಟಗಾರರು ಮಾತ್ರವಲ್ಲದೇ ಸಾರ್ವಜನಿಕರು ಹಾಗೂ ಕೆ.ಎಸ್.ಸಿ.ಎ ಬೆಂಗಳೂರು ಇವರಿಂದಲೂ ಪ್ರಶಂಸೆಗೆ ಪಾತ್ರವಾಗಿವೆ.
ವಿಜಯ

ಪ್ರಜಾಪ್ರಭುತ್ವದ ಕಗ್ಗೊಲೆ


ಪ್ರಜಾಪ್ರಭುತ್ವದ ಕಗ್ಗೊಲೆ
ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸಕರ್ಾರ ಕನರ್ಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದೆ. ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಒಂದಿಲ್ಲೊಂದು ರೀತಿಯಲ್ಲಿ ತನ್ನ ತತ್ವ ಸಿದ್ದಾಂತಗಳನ್ನು ಸಾಮಾನ್ಯ ಜನರ ಮೇಲೆ ಹೇರಲು ಹವಣಿಸುತ್ತಿದೆ. ಅದ್ಯಾವುದು ಯಶಸ್ಸು ಕಾಣಲಿಲ್ಲವೆಂದರೆ, ವಾಮಮಾರ್ಗಗಳನ್ನು ಅನುಸರಿಸಿ ವ್ಯವಸ್ಥೆಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ.
ಮಾತೆತ್ತಿದರೆ ಕೇಶವ ಕೃಪ ಎಂದೇಳುವ ನಾಯಕರು, ಅಧಿಕಾರ, ಹಣದ ಲಾಲಸೆಗೆ ಏನು ಮಾಡಲು ಹೇಸುತ್ತಿಲ್ಲ. ಇಂತಹ ಸಕರ್ಾರವನ್ನು ಕನರ್ಾಟಕ ಹಿಂದೆಂದೂ ಕಂಡಿರಲಿಲ್ಲ. ಇಂದು ಕನರ್ಾಟಕವು ಕೋಮು, ದಳ್ಳುರಿಗಳಿಂದ ತತ್ತರಿಸಿ ಹೋಗಿದೆ. ಇತ್ತ ಉತ್ತರಕನರ್ಾಟಕದ ಜನತೆ ನೆರೆಹಾವಳಿಯಿಂದ ಸಹಜಸ್ಥಿತಿಗೆ ಬಂದಿಲ್ಲ. ಅತ್ತ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಆಶೋತ್ತರಗಳನ್ನು ಗಾಳಿಗೆ ತೂರಿ, ಹಣ ಅಧಿಕಾರಕ್ಕಾಗಿ ಕಂಡಕಂಡವರ ಹಿಂದೆ ಬೀದಿಬಸವಿಯರಂತೆ ಅಲೆದಾಡುತ್ತಿದ್ದಾರೆ.
ಅಂದು ರೈತರ ಹೆಸರಿನ ಮೇಲೆ ಪ್ರಮಾಣವಚನವನ್ನು ಸ್ವೀಕರಿಸಿದ ಯಡಿಯೂರಪ್ಪ ಕ್ರಮೇಣವಾಗಿ ರೈತರ ಬದುಕಿನ ಮೇಲೆಯೇ ಪಗಡೆಯಾಟ ಆಡತೊಡಗಿದ. ಹಳ್ಳಿಹಳ್ಳಿಗಳಲ್ಲಿ ಅಲೆಯುತ್ತಾ ಕೊನೆಗೆ ಅಧಿಕಾರವನ್ನು ಹಿಡಿದ ಯಡಿಯೂರಪ್ಪ ಹಿಂದಿನದೆಲ್ಲವನ್ನು ಮರೆತು ತನ್ನ ಜಾತಿ, ಮಠಮಾನ್ಯಗಳನ್ನೇ ಬೆಳೆಸಲು ಪ್ರಾರಂಭಿಸಿದ. ಮಾತೆತ್ತಿದರೆ ವಿರೋಧಪಕ್ಷಗಳನ್ನು ತೆಗಳುತ್ತಾ ತಾನು ಮಾತ್ರ ಸಕರ್ಾರದ ಮುಖ್ಯಮಂತ್ರಿ ಎನ್ನುವದನ್ನೇ ಮರೆತುಬಿಟ್ಟ.
ತನ್ನ ಸವರ್ಾಧಿಕಾರಿ ಧೋರಣಿಯೇ ಪಕ್ಷದಲ್ಲಿ ಭಿನ್ನಮತ ತಲೆದೋರಲು ಕಾರಣವಾಯಿತು. ಪಕ್ಷೇತರರು ಸಕರ್ಾರಕ್ಕೆ ಬೆಂಬಲ ನೀಡಿದಾಗ್ಯೂ ಪಕ್ಷೇತರರನ್ನು ಕೈಬಿಟ್ಟು ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಯಡಿಯೂರಪ್ಪ ಅನ್ಯಮಾರ್ಗವನ್ನು ಹಿಡಿಯಲು ಯೋಚಿಸದ.
ಅದೆಲ್ಲದಕ್ಕೆ ಯಡಿಯೂರಪ್ಪ ರೆಡ್ಡಿಗಳನ್ನು ಸರಿಯಾಗಿ ಬಳಸಿಕೊಂಡು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿ ಆಪರೇಷನ್ ಕಮಲ ಎಂಬ ಕೆಟ್ಟ ಸಂಸ್ಕೃತಿಯ ಹಾದಿಯನ್ನಿಡಿದರು.
ಹಣ, ಅಧಿಕಾರಕ್ಕಾಗಿ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ನ ಶಾಸಕರು ತಮ್ಮ ಪಕ್ಷಗಳಿಗೆ ಶಾಸಕರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿ ಮತ್ತೊಂದು ಚುನಾವಣೆ ಎದುರಿಸಲು ಸನ್ನದ್ದರಾದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣವೇ ಯಡಿಯೂರಪ್ಪ ಇವರೆಲ್ಲರನ್ನು ಮಂತ್ರಿಯನ್ನಾಗಿ ಮಾಡಿದ. ನಂತರದ ಬೆಳವಣಿಗೆಯಲ್ಲಿ ಅವರೆಲ್ಲರೂ ಉಪಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಇಷ್ಟಾದ ಮೇಲೆ ಬಿಜೆಪಿ 5ವರ್ಷ ಸಂಪೂರ್ಣ ಆಡಳಿತ ನಡೆಸಬೇಕಿತ್ತು. ಆದರೆ, ಅದಾಗಲಿಲ್ಲ.
ತಾನೇ ತೋಡಿಕೊಂಡ ಘೋರಿಯಲ್ಲಿ ಬಿದ್ದ ಯಡಿಯೂರಪ್ಪ
ಅಧಿಕಾರ ಚಲಾಯಿಸಲು ಜನತೆ ಕೊಟ್ಟ ಜನಾದೇಶವನ್ನು ಒಂದೆಡೆ ಇಟ್ಟು, ಅನ್ಯಮಾರ್ಗಗಳಿಂದ ಬೇರೆಬೇರೆ ಪಕ್ಷಗಳ ಶಾಸಕರನ್ನು ತನ್ನ ಪಕ್ಷದಿಂಧ ಗೆಲ್ಲಿಸಿಕೊಂಡಾಗಲೇ ಯಡಿಯೂರಪ್ಪ ತನ್ನ ಘೋರಿಯನ್ನು ಬಹಳ ಆಳವಾಗಿ ತೋಡಿಕೊಂಡಂತಾಗಿತ್ತು.
ಹಣ, ಅಧಿಕಾರಕ್ಕೆ ಬಂದಂಥವರು ಇಂದಿಲ್ಲ, ನಾಳೆ ನಮ್ಮನ್ನು ಬಿಡಬಹುದು ಎಂಬ ಕನಿಷ್ಟ ತಿಳುವಳಿಕೆಯೂ ಯಡಿಯೂರಪ್ಪನಿಗೆ ಇದ್ದಿಲ್ಲ. ಅದೆಲ್ಲವನ್ನು ಮೈಮರೆತು ತನ್ನದೇ ಆದ ಆಡಳಿತವನ್ನು ಆರಂಭಿಸಲು ಹೋದ. ಹಿಂದೆ ಭಿನ್ನಮತ ಎದ್ದಾಗ ಅದನ್ನು ನಿವಾರಿಸಲು ಶೆಟ್ಟರ್ನನ್ನು ಮಂತ್ರಿಯನ್ನಾಗಿ ಮಾಡಿದ್ದ. ನಂತರದ ಭಿನ್ನಮತದಲ್ಲಿ ಘಾತುಕಾಚಾರ್ಯನನ್ನು ಸಚಿವನನ್ನಾಗಿ ಮಾಡಿದ. ಅಲ್ಲಿಗೆ ಪಕ್ಷದಲ್ಲಿ ಭಿನ್ನಮತವೆಲ್ಲ ಶಮನಗೊಂಡಿತು ಎಂದು ತಿಳಿದು ಹಠಕ್ಕೆ ಬಿದ್ದು, ಶೋಭಾ, ಸೋಮಣ್ಣನನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ. ಆಗಲೇ ಮತ್ತೊಂದು ಗುಂಪು ಬಂಡಾಯವೆದ್ದಿತು.
ಆದರೆ, ಇದೇ ಬಂಡಾಯ ಸಕರ್ಾರವೊಂದನ್ನು ಉರುಳಿಸಬಹುದೆಂದು ಯಡಿಯೂರಪ್ಪ ತನ್ನ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ. ಭಿನ್ನಮತ ಎದ್ದೇಳುತ್ತಿದಂತೆ ಯಾರನ್ನು ಸಮಾಜಾಯಿಷಬೇಕೆಂದೇ ಗೊತ್ತಾಗಲಿಲ್ಲ. ಯಾಕೆಂದರೆ, 16ಶಾಸಕರು ಬಿಗಿಪಟ್ಟು ಹಿಡಿದು ಮೊದಲಿನಿಂದಲೂ ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದರು. ಅವರಿಗೆಲ್ಲ ಸಮಯ ಸಮಯಕ್ಕೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಗೈಡ್ ಮಾಡುತ್ತಿದ್ದರು. ಹೀಗಾಗಿ ಯಡಿಯೂರಪ್ಪನಿಗೆ ಸಕರ್ಾರ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದವು. ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನನ್ನನ್ನು ಆ ದೇವರೇ ಉಳಿಸಬೇಕೆಂದು ತಿಳಿದು ಕಂಡ ಕಂಡ ದೇವಸ್ಥಾನಗಳನ್ನು ಸುತ್ತುತ್ತಾ, ಜ್ಯೋತಿಷಿಗಳನ್ನು ಕೇಳುತ್ತಾ, 6ವರೆ ಕೋಟಿ ಜನರ ಆಸ್ತಿಯಾದ ವಿಧಾನಸೌಧಕ್ಕೆ ಸಕರ್ಾರವನ್ನು ಉಳಿಸಿಕೊಳ್ಳಲು ಬೀಗಹಾಕಿದ. ಅದು ಸಾಲದೆಂಬಂತೆ ವಾಮಮಾರ್ಗವನ್ನು ಅನುಸರಿಸಿ ಮಾಠಮಂತ್ರಗಳನ್ನು ಮಾಡಿಸಿದ.
ಅಷ್ಟೊತ್ತಿಗೆ ಭಿನ್ನಮತೀಯರೆಲ್ಲರೂ ರೆಸಾಟರ್್ಗಳಿಂದಲೇ ತಮ್ಮ ಬೆಂಬಲವನ್ನು ಹಿಂಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ರವಾನಿಸಿದರು. ಆ ಕ್ಷಣಕ್ಕೆ ರಾಜ್ಯಪಾಲರು ಯಡಿಯೂರಪ್ಪನಿಗೆ ಬಹುಮತ ಸಾಭೀತು ಮಾಡಲು 12ನೇ ತಾರೀಖನ್ನು ನಿಗದಿ ಮಾಡಿದರು. ಅಂದಿನಿಂದಲೇ ಯಡಿಯೂರಪ್ಪನಿಗೆ ತಳಮಳ ಶುರುವಾಯಿತು. ಬಿಜೆಪಿಯ ಹೈಕಮಾಂಡಂತೂ ಕಂಗೆಟ್ಟು ಹೋಯಿತು. ಇನ್ನು ಸಂಘಪರಿವಾರದ ಚೆಡ್ಡಿಗಳಿಗೆ ದಿಕ್ಕುತೋಚದಂತಾಯಿತು. ಅನಿವಾರ್ಯವಾಗಿ ಯಡಿಯೂರಪ್ಪ 11ಕ್ಕೆ ಬಹುಮತ ಸಾಭೀತು ಮಾಡೇ ತೀರುತ್ತೇನೆಂದು ಅಡ್ಡಾದಿಡ್ಡಿಯಾಗಿ ಹೇಳಿದ.
ಅದಕ್ಕೆ ಸ್ಪೀಕರ್ಗೆ ಕೆಲವೊಂದು ಅಸಂವಿಧಾನಿಕ ಮಾರ್ಗಗಳನ್ನು ಹೇಳಿ ಅತೃಪ್ತರ ಶಾಸಕರನ್ನು ಅನರ್ಹಗೊಳಿಸುವಂತೆ ಸೂಚಿಸಿದ. ಇನ್ನುಳಿದ ತನ್ನ 106 ಶಾಸಕರನ್ನು ಮಾತ್ರ ವಿಧಾನಸೌಧದೊಳಗೆ ಪ್ರವೇಶಿಸುವಂಥೆ ನೋಡಿಕೊಂಡು, ಪಕ್ಷೇತರರು, ಮಾಧ್ಯಮದವರು ಒಳಗಡೆ ಬಾರದಂತೆ ತಡೆಯಲು ಪೊಲೀಸರನ್ನು ಪೂರ್ವಯೋಜನೆಯಂತೆ ಆಯೋಜಿಸಿದ. ಅಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದೊಳಗೆ ಹೋಗಲು ಹರಸಾಹಸವನ್ನೇ ಪಟ್ಟರು. ಪಕ್ಷೇತರರು ಮಾಷರ್ೇಲ್ಗಳನ್ನು ಹೊಡೆಬಡೆದು ಗೂಂಡಾಗಳಂತೆ ಸದನ ಪ್ರವೇಶಿಸಿದರು.
ವಿಧಾನಸೌಧಧ ಸುತ್ತಮುತ್ತ ಪೊಲೀಸರನ್ನು ಆಯೋಜಿಸಿ, ಮಾಧ್ಯಮದವರನ್ನು ಹೊರಗಿಟ್ಟು, ಸಂವಿಧಾನದ ನಿಯಮಾವಳಿಗಳನ್ನೇ ಗಾಳಿಗೆ ತೂರಿ ಧ್ವನಿಮತದ ಮೂಲಕ ನಾನೇ ಮುಖ್ಯಮಂತ್ರಿ ಎಂದು ಸಾಭೀತು ಮಾಡಿದ.
ಅಂದಿನ ಸ್ಥಿತಿಗತಿಯನ್ನು ಯಾರಾದರೂ ನೋಡಿದರೆ, ಕನರ್ಾಟಕದಲ್ಲಿ ಪ್ರಜಾಪ್ರಭುತ್ವ ಸಕರ್ಾರವಿದೆಯೇ ಎಂಬ ಪ್ರಶ್ನೇ ಕಾಡುತ್ತದೆ.
ಅದೇ ಸಂದರ್ಭಕ್ಕೆ ಸಕರ್ಾರವನ್ನು ವಜಾಗೊಳಿಸುವ ಹಿನ್ನಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಅದಾದ ಮಾರನೇ ದಿನಕ್ಕೆ ರಾಜ್ಯಪಾಲರು ಮತ್ತೊಮ್ಮೆ 14ಕ್ಕೆ ಬಹುಮತ ಸಾಭೀತುಪಡಿಸುವಂತೆ ಯಡಿಯೂರಪ್ಪನಿಗೆ ಸೂಚಿಸಿದರು.
ಬಿಜೆಪಿಯ ಹೈಕಮಾಂಡ್ ಕೂಡ ಯಡಿಯೂರಪ್ಪನಿಗೆ 14ಕ್ಕೆ ಬಹುಮತ ಸಾಭೀತು ಮಾಡುವಂತೆ ಆದೇಶಿಸಿದರು.
ಸ್ಪೀಕರ್ ಪಕ್ಷೇತರರು ಸೇರಿದಂತೆ ಬಂಡಾಯವೆದ್ದಿದ್ದ ಶಾಸಕರನ್ನು ಅನರ್ಹಗೊಳಿಸಿದ್ದರಿಂದ ಅವರೆಲ್ಲರ ಪ್ರಕರಣವು ಹೈಕೋಟರ್್ನಲ್ಲಿ ವಿಚಾರಣೆಯಲ್ಲಿತ್ತು.
ಹೈಕೋಟರ್್ ತೀರ್ಪನ್ನು ಕಾಯ್ದಿರಿಸಿ 14ರ ಬಹುಮತ ಅಂತಿಮವಲ್ಲ. ಅದು ಯಾರ ಗೆಲುವು ಅಲ್ಲ, ಸೋಲು ಅಲ್ಲ. ಎಂದು ತಿಳಿಸಿತ್ತು.
ಇದೇ ನಿಟ್ಟಿನಲ್ಲಿ ಯಡಿಯೂರಪ್ಪ ಸರಾಳವಾಗಿ 106ಶಾಸಕರ ಬೆಂಬಲವನ್ನು ಪಡೆದು 2ನೇ ಬಾರಿಗೆ ವಿಶ್ವಾಸ ಮತವನ್ನು ಸಾಭೀತುಪಡಿಸುವಲ್ಲಿ ಯಶಸ್ವಿಯಾದರು.
ಹೈಕೋಟರ್್ನ ತೀಪರ್ು 18ರಂದು ಅನರ್ಹಗೊಳಿಸಿರುವ ಶಾಸಕರ ಪರವಾಗಿ ಬಂದರೆ, ಮತ್ತೇ ಯಡಿಯೂರಪ್ಪನಿಗೆ ಕಂಟಕ ಕಟ್ಟಿಟ್ಟ ಬುತ್ತಿ. ಒಂದು ವೇಳೆ ಸ್ಪೀಕರ್ ಕ್ರಮ ಸರಿ ಎಂದು ತೀಪರ್ು ಬಂದರೆ, ಉಪ ಚುನಾವಣೆಯನ್ನು ಎದುರಿಸಬೇಕಾಗುತ್ತದೆ.
ಇತ್ತ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಪಕ್ಷದವರು ಯಡ್ಡಿಯನ್ನು ಕೆಳಗಿಳಿಸಲು ಹತ್ತಾರು ತಂತ್ರಗಳನ್ನು ಮಾಡುತ್ತಾ, ಕಾನೂನು ಹೋರಾಟವನ್ನು ಮಾಡಲು ಚಿಂತಿಸುತ್ತಿದ್ದಾರೆ.
ಆದರೆ, ಬುದ್ದಿಗೇಡಿ ಅಧ್ಯಕ್ಷ ಈಶ್ವರಪ್ಪ ಮಾತ್ರ ಮತ್ತೋಮ್ಮೆ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿಕೆ ಕೊಡುತ್ತಿದ್ದಾನೆ. ಅದರ ಭಾಗವಾಗಿ ಚನ್ನಪಟ್ಟಣದ ಜೆ.ಡಿ.ಎಸ್ನ ಶಾಸಕ ಅಶ್ವಥ್ 14ರಂದು ಶಾಸಕ ಸ್ಥಾನಕ್ಕೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಕೊಟ್ಟಿದ್ದಾನೆ.
ಒಟ್ಟಾರೆ ಕನರ್ಾಟಕದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ರವರು ಬರೆದಿರುವ ಸಂವಿದಾನಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಇತ್ತೀಚಿಗೆ ಹತ್ತಾರು ದಿನಗಳಿಂದ ನಡೆದಿರುವ ವಿಧ್ಯಮಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣುಕಿಸಿ ನೋಡುವಂತೆ ಮಾಡಿವೆ. ಕೆಲವೊಂದು ಮಾಧ್ಯಮಗಳಂತೂ ಇವುಗಳನ್ನು ಎಡಬಿಡದೇ ಪ್ರಸಾರ ಮಾಡಿದವು. ಕನರ್ಾಟಕದಲ್ಲಿ ಪ್ರ್ರಜಾಪ್ರಭುತ್ವವೆಂಬುದು ಬರೀ ಕಾಗದದ ಹಾಳೆಯಲ್ಲಿ ಮಾತ್ರ ಉಳಿದಿದೆ. ಸಕರ್ಾರದ ಕೆಲಸ ದೇವರ ಕೆಲಸ ಎನ್ನುವ ವಾಕ್ಯಕ್ಕೆ ಬೇರೆ ಅರ್ಥ ಬರತೊಡಗಿದೆ.
ಒಟ್ಟಾರೆ.. ಯಡಿಯೂರಪ್ಪನ ಹುಂಬತನದಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿರುವುದು ದುರಂತವೇ ಸರಿ.
ಎಂ.ಎಲ್

Court Demolishes The Mosque


ಸುಪ್ರಿಂ ಕೋಟರ್ಿನ ಆದೇಶದ ಮೇರೆಗೆ ಒಂದು ವಾರದ ಕಾಲ ಮುಂದೂಡಲಾಗಿದ್ದ ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದದ ತೀರ್ಪನ್ನು ಕೊನೆಗೂ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋಟರ್ಿನ ಲಖನೌ ವಿಭಾಗದ ತ್ರಿಸದಸ್ಯ ಪೀಠ ನೀಡಿದೆ. ತೀಪರ್ು ಯಾರ ಪರವಾಗಿದ್ದರೂ ಪರವಾಗಿಲ್ಲ, ನ್ಯಾಯದ ಪರವಾಗಿದ್ದರೆ ಸಾಕು ಎನ್ನುವರು ಕೆಲವರಿದ್ದರೂ ನಡುವೆ ತೀಪರ್ು ಹೇಗೇ ಬಂದರೂ ದೇಶದ ಶಾಂತಿ ಕದಡಿ ಮತ್ತೆ ರಕ್ತಪಾತ ಆಗದಿದ್ದರೆ ಸಾಕು ಎಂಬ ಆತಂಕವೇ ದೇಶದ ಪ್ರಧಾನವಾದ ಮೂಡ್ ಆಗಿತ್ತು. ಅದಕ್ಕೆ ತಕ್ಕಂತೆ ತೀಪರ್ು ಬರುವ ಕೆಲದಿನಗಳ ಮುಂಚೆಯಿಂದ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ತಮ್ಮ ಹಲವಾರು ಕ್ರಮಗಳಿಂದ ಹುಟ್ಟಿಸಿದ ಭೀತಿಯೂ ಸಹ ಸೆಪ್ಟೆಂಬರ್ 30ರಂದು ಏನಾಗಬಹುದು ಎಂಬ ಆತಂಕವನ್ನು ಹೆಚ್ಚಿಸಿತ್ತು. 30ರ ಮಧ್ಯಾಹ್ನದ 3.30ರ ವೇಳೆಗೆ ಇಡೀ ದೇಶವೇ ಕಫರ್ೂ್ಯ ವಿಧಿಸಿದಂತೆ ಸ್ಥಭ್ದಗೊಂಡಿತು.
ತೀಪರ್ು ಏನೇ ಬಂದರೂ ವಿಜಯೋತ್ಸವವಾಗಲೀ, ಪ್ರತಿಭಟನೆಯಾಗಲೀ ಮಾಡಬಾರದೆಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದರೂ ಮೊದಲೇ ಯೋಜನೆ ಮಾಡಲಾಗಿತ್ತೋ ಎಂಬಂತೆ ತೀಪರ್ು ಬಂದ ಒಂದೇ ಗಂಟೆಯೊಳಗೇ ದೇಶದ ಹಲವು ಕಡೆ ಸಂಘಪರಿವಾರದ ಸಂಸ್ಥೆಗಳು ವಿಜಯೋತ್ಸವ ನಡೆಸಿದರು. ಕನರ್ಾಟಕದಲ್ಲೂ ಮಂಗಳೂರು, ಕೊಡಗು ಇನ್ನಿತರ ಕಡೆಗಳಲ್ಲಿ ಸಂಘಪರಿವಾರ ಬಹಿರಂಗವಾಗಿ ಗುಂಪುಗೂಡು ಪಟಾಕಿ ಸಿಡಿಸಿ ವಿಜಯ ಆಚರಿಸಿತು. ಮುಖ್ಯಮಂತ್ರಿಗಳ ಜಿಲ್ಲೆಯಾದ ಶಿವಮೊಗ್ಗದಲ್ಲಂತೂ ಸಂಘಪರಿವಾರ ನಿಷೇಧಾಜ್ನೆಯನ್ನೂ ಉಲ್ಲಂಘಿಸಿ ವಿಜಯೋತ್ಸವದ ಮೆರವಣಿಗೆ ನಡೆಸಿದರು! ಹೀಗೆ ಪೊಲೀಸರ ನಿಷೇದಾಜ್ನೆಯೂ ಸಹ ತೀಪರ್ಿನಂತೆ ಪಕ್ಷಪಾತಿಯಾಗಿತ್ತು. ಸಾರಾಂಶದಲ್ಲಿ ಅದು ಮುಸ್ಲಿಮರ ಕಣ್ಣೀರನ್ನೂ ಸಹ ನಿಷೇಧಗೊಳಿಸಿತು.
ಈಗ ತೀಪರ್ು ಬಂದು ವಾರ ಕಳೆದಿದೆ. ತೀಪರ್ಿನ ಎಲ್ಲಾ ವಿವರಗಳೂ ಲಭ್ಯವಾಗಿದೆ. ನ್ಯಾಯಮೂತರ್ಿಗಳಾದ ಅಗರ್ವಾಲ್, ಶಮರ್ಾ ಮತ್ತು ಎಸ್.ಯು. ಖಾನ್ ಗಳನ್ನೊಳಗೊಂಡ ತ್ರಿಸದಸ್ಯ ಪೀಠ ನೀಡಿದ ತೀಪರ್ಿನ ಒಟ್ಟಾರೆ ಗಾತ್ರ ಹೆಚ್ಚೂ ಕಡಿಮೆ 10,000 ಪುಟಗಳಷ್ಟಿದೆ. ಇದರ ಅಷ್ಟು ವಿವರಗಳು ಈಗ ಇಂಟರೆನೆಟ್ನಲ್ಲಿ ಲಭ್ಯವಿದೆ. ಅದಕ್ಕೆ ಪೂರಕವಾಗಿ ಅವರು ಪರಾಂಬರಿಸಿರುವ ಸಾಕ್ಷಿಗಳು ಮತ್ತು ಪುರಾವೆಗಳು ಒಟ್ಟು ರಾಶಿ ಒಂದು ಲಕ್ಷ ಪುಟಗಳಷ್ಟಿದೆ. ಹೀಗಾಗಿ ತೀಪರ್ಿನ ಬಗ್ಗೆ ಯಾವುದೇ ವ್ಯಕ್ತಿನಿಷ್ಟ ಅಭಿಪ್ರಾಯಗಳಿಗೆ ಬರಲು ಅವಕಾಶವೇ ಇಲ್ಲದಂತೆ ತೀಪರ್ಿನ ತಾತ್ಪರ್ಯ ಮತ್ತು ಆ ಬಗೆಯ ತೀಪರ್ು ನೀಡಲು ಕೋಟರ್ು ಪರಿಗಣಿಸಿದ ಅಂಶಗಳು ಈಗ ಬಹಿರಂಗವಾಗಿ ಲಭ್ಯವಾಗಿದೆ.
ಮೇಲ್ನೋಟಕ್ಕೆ ಈ ತೀಪರ್ಿನ ಬಗ್ಗೆ ಕೆಲವು ಅಂಶಗಳು ಸ್ಪಷ್ಟಗೊಳ್ಳುತ್ತದೆ. ಮೊದಲನೆಯದಾಗಿ ಈ ತೀಪರ್ು ಮಸೀದಿಯ ಮೇಲೆ ಮುಸ್ಲಿಮರಿಗಿದ್ದ ಎಲ್ಲಾ ಹಕ್ಕುಗಳನ್ನೂ ನಿರಾಕರಿಸುತ್ತದೆ. ಎರಡನೆಯದಾಗಿ ಯಾವುದೇ ಸಾಕ್ಷಿ ಪುರಾವೆಗಳಿಲ್ಲದಿದ್ದರೂ ಕೇವಲ ಹಿಂದೂಗಳ ನಂಬಿಕೆ ಮತ್ತು ಶ್ರದ್ಧೆಯನ್ನು ಮಾತ್ರ ಪರಿಗಣಿಸಿ ಜಾಗದ ಒಡೆತನ ಹಾಗೂ ಇತರ ಎಲ್ಲಾ ವಾದಗಳ ಬಗ್ಗೆ ಹಿಂದೂಗಳ ವಾದವನ್ನು ಪುರಸ್ಕರಿಸಿದೆ. ಆದರೂ ಕೊನೆಗೆ ಔದಾರ್ಯದಿಂದ ಮೂರನೇ ಒಂದು ಭಾಗದಷ್ಟು ಜಾಗವನ್ನು ಮಾತ್ರ ಮುಸ್ಲಿಮರಿಗೆ ಕೊಟ್ಟು ರಾಜಿ-ಕಬೂಲಿಗೆ ಯತ್ನಿಸಿದೆ. ಅಂದರೆ ನ್ಯಾಯಾಲಯವು ಕಾನೂನು ಮತ್ತು ನ್ಯಾಯಸೂತ್ರಗಳಿಗಿಂತ ಹೆಚ್ಚಾಗಿ ನಂಬಿಕೆ ಮತ್ತು ಶ್ರದ್ಧೆಯ ವಿಷಯವನ್ನೇ ಪರಿಗಣಿಸಿ ವಸ್ತುನಿಷ್ಟ ನ್ಯಾಯ ಪ್ರಕ್ರಿಯೆ ಜೊತೆ ರಾಜಿ ಮಾಡಿಕೊಂಡಿದೆ.
ಈ ದೇಶದ ಸಾಮಾನ್ಯ ಜನ ತೀಪರ್ಿನ ಬಗ್ಗೆ ನಿರಾಳದ ನಿಟ್ಟುಸಿರನ್ನು ಎಳೆದಿರುವುದರಲ್ಲಿ ಆಶ್ಚರ್ಯವಿಲ್ಲ. ಈ ದೇಶದ ಜನರಿಗೆ ಬಾಬ್ರಿ ಮಸೀದಿ-ರಾಮಜನ್ಮಭೂಮಿ ಎಂದರೆ ಜ್ನಾಪಕಕ್ಕೆ ಬರುವುದು ರಾಮನೂ ಅಲ್ಲ. ಅಲ್ಲಾಹೂನೂ ಅಲ್ಲ. ಬದಲಿಗೆ ಜ್ನಾಪಕಕ್ಕೆ ಬರುವುದು ಆ ರಕ್ತಸಿಕ್ತ 90 ರ ದಶಕಗಳು. ಸಂಘಪರಿವಾರ ದೇಶಾದ್ಯಂತ ಹುಟ್ಟುಹಾಕಿದ ಕೋಮುಗಲಭೆಗಳ ಬೀಭತ್ಸಗಳು. ಹೀಗಾಗಿ ಹೇಗೋ ತೀಪರ್ು ಅಂಥಾ ಒಂದು ಬಂದು ಈ ವಿವಾದ ಕೊನೆಗೊಂಡರೆ ಸಾಕು. ಮತ್ತೆ ಗಲಭೆಗಳಾಗಿ ರಕ್ತಪಾತವಾಗದಿದ್ದರೆ ಸಾಕು ಎಂಬುದೇ ಈ ದೇಶದ ಜನಸಾಮಾನ್ಯರೆಲ್ಲರ ಆಶಂವಾಗಿತ್ತು. ಆದರೆ ಶಾಂತಿಯುತ ಸಹಬಾಳ್ವೆಯ ದೃಷ್ಟಿಯಿಂದ ಜನಸಾಮಾನ್ಯರು ಮಾಡಿಕೊಳ್ಳುವ ಹತಾಷ ಮತ್ತು ನಿಸ್ಸಹಾಯಕ ತರ್ಕಗಳೇ ನ್ಯಾಯಾಲಯದ ಮತ್ತು ಕಾನೂನು ಪಂಡಿತರ ದೃಷ್ಟಿಯೂ ಆಗಿಬಿಡುವುದು ಒಂದು ದುರಂತ!
ಈ ತೀಪರ್ು ಹೊರಬಂದ ನಂತರ ಈ ದೇಶದ ಖ್ಯಾತ ನ್ಯಾಯಾಂಗ ತಜ್ನರಾದ ರಾಜೀವ್ ಧವನ್, ನ್ಯಾಯಮೂತರ್ಿ ರಾಜೇಂದ್ರ ಸಚ್ಚಾರ್, ಕೃಷ್ಣ ಅಯ್ಯರ್ ರಂಥ ಈ ದೇಶದ ಘನತೆವೆತ್ತ ನ್ಯಾಯಾಧೀಶರುಗಳು ತೀರ್ಪನ್ನೂ ಮತ್ತು ನ್ಯಾಯಾಲಯ ಅನುಸರಿಸಿರುವ ನ್ಯಾಯಿಕ ಮಾನದಂಡಗಳನ್ನು ಸಾರಾಸಗಟು ಟೀಕೆ ಮಾಡಿದ್ದಾರೆ. ಅತ್ಯಂತ ದುರಾದೃಷ್ಟಕರವೆಂದು ಬಣ್ಣಿಸಿದ್ದಾರೆ. ಆದರೂ ಕೆಲವು ಮಧ್ಯಸ್ಥ ಉದಾರವಾದಿಗಳು ಹಾಗೂ ಕೆಲವು ಪ್ರಮುಖ ಎಡ ಮತ್ತು ನಡುಪಂಥೀಯರು ಈ ತೀರ್ಪನ್ನು ಐತಿಹಾಸಿಕ ಮತ್ತು ಅತ್ಯಂತ ಸ್ವಾಗತಾರ್ಹವೆಂದೆಲ್ಲಾ ಹಾಡಿಹೊಗಳಿದ್ದಾರೆ. ಇದಕ್ಕೂ ಕಾರಣ ಕೋಮುವಾದಿಗಳು ತಮ್ಮ ಸತತ ಆಕ್ರಮಣಗಳಿಂದ ಪ್ರಗತಿಪರರಲ್ಲಿ ಸೃಷ್ಟಿಸಿರುವ ದಣಿವು ಮತ್ತು ಹತಾಷೆ. ನ್ಯಾಯವೋ ಅನ್ಯಾಯವೋ ಒಟ್ಟಿನಲ್ಲಿ ಶಾಂತಿ ಸ್ಥಾಪನೆಯಾದರೆ ಸಾಕೆಂಬ ಸಿನಿಕತನದ ತರ್ಕಗಳು. ಅಂಥವರೇ ಈಗ ಅಲ್ಲಿ ರಾಮಮಂದಿರ-ಮಸೀದಿ ಎರಡು ತಲೆ ಎತ್ತಲಿ. ಶಾಂತಿ ಮುಖ್ಯ..ಇತ್ಯಾದಿ ಎಂದೆಲ್ಲಾ ಬಡಬಡಿಸಿದ್ದಾರೆ. ಆದರೆ ಅಂಥಾ ಸಾಧ್ಯತೆಗೆ ಬೇಕಾದ ಕಾನೂನು ಬುನಾದಿಯನ್ನೇ ಈ ತೀಪರ್ು ಹೊಡೆದುಹಾಕಿದೆ. ಎಲ್ಲ ಸೆಕ್ಯುಲಾರ್ ಜನರ ಉದ್ದೇಶ ಶಾಂತಿಯೇ ಆದರೂ ಅದು ನ್ಯಾಯವನ್ನು ಕೊಂದು ಪಡೆಯುವ ಶಾಂತಿಯಾಗಿದ್ದರೆ ಸದ್ಯಕ್ಕೂ ಮತ್ತು ಶಾಶ್ವತಕ್ಕೂ ಅಶಾಂತಿಯ ಮತ್ತು ಕೋಮುಗಲಭೆಗಳನ್ನೇ ಹೇರುತ್ತದೆ ಎಂಬುದನ್ನು ಈ ತೀಪರ್ು ಸಾಬೀತು ಮಾಡುತ್ತದೆ.
ಆದ್ದರಿಂದ ಬೋಳೆಬೋಳೆಯಾದ ವಿಶ್ಲೇಷಣೆ ಮತ್ತು ಮೇಲ್ಸ್ಥರದ ತರ್ಕಗಳಿಂದ ಯಾವ ಇಹಕ್ಕಾಗಲೀ, ಪರಕ್ಕಾಗಲೀ ಏನೂ ಪ್ರಯೋಜನವಿಲ್ಲ. ಬದಲಿಗೆ ನ್ಯಾಯ, ಸಂವಿಧಾನ, ಸಾಕ್ಷಿ, ಪುರಾವೆ, ಸೆಕ್ಯುಲಾರಿಸಂನ ಮಾನದಂಡಗಳನ್ನು ಅನುಸರಿಸಿ ಈ ತೀಪರ್ಿನ ಸರಿಯಾದ ವಿಶ್ಲೇಷಣೆ ಮಾಡಿ ಸಕರ್ಾರ, ಸಮಾಜ ಮತ್ತು ನ್ಯಾಯಾಲಯಗಳು ಸರಿಯಾದ ನಿಲುವಿಗೆ ಬರುವ ಅಗತ್ಯವಿದೆ.
ಸದರಿ ಲಖನೌ ಕೋಟರ್ಿನ ತೀಪರ್ಿನ ವಿಶ್ಲೇಷಣೆ ಮಾಡುವ ಮುನ್ನ ಈ ವಿವಾದದ ಇತಿಹಾಸದ ಬಗ್ಗೆ ಮತ್ತು ಕೋಟರ್ಿನ ಮುಂದಿದ್ದ ದಾವೆಗಳ ಸ್ವರೂಪದ ಬಗ್ಗೆ ಒಂದು ಸಣ್ಣ ಪರಿಚಯ.
ಬಾಬ್ರಿ ಮಸೀದಿ ರಾಮಜನ್ಮಭೂಮಿಯಾದದ್ದು!
ಕ್ರಿ.ಶ. 1528ರಲ್ಲಿ ಬಾಬರ್ ಅಥವಾ ಬಾಬರ್ನ ಸಲಹೆಯ ಮೇರೆಗೆ ಅವನ ದಂಡನಾಯಕ ಮೀರ್ ಬಾಕಿ ಅಯೋಧ್ಯೆಯಲ್ಲಿ ಬಾಬರ್ನ ಹೆಸರಲ್ಲಿ ಒಂದು ಮಸೀದಿಯನ್ನು ನಿಮರ್ಿಸಿದ. 1528ರ ನಂತರದ ಅವದಿಯಲ್ಲಿ ಯಾವುದೋ ಒಂದು ಹಂತದಲ್ಲಿ ಅಲ್ಲಿ ಹಿಂದೂಗಳೂ ಸಹ ಅದೇ ಆವರಣದಲ್ಲಿ ರಾಮನಿಗೆ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದರು. 1855ರಲ್ಲಿ ನಡೆದ ಕೋಮು ಗಲಭೆಯೊಂದರಲ್ಲಿ ಬಾಬ್ರಿ ಮಸೀದಿಯ ಮೇಲೂ ದಾಳಿಯಾಗುತ್ತದೆ. 1857ರಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಒಟ್ಟಾಗಿ ಬ್ರಿಟಿಷರನ್ನು ಎದುರಿಸುತ್ತಾರೆ. 1858ರಲ್ಲಿ ಬಾಬ್ರಿ ಮಸೀದಿಯ ಒಳ ಆವರಣದ ಸುತ್ತಾ ಬೇಲಿಯನ್ನು ಕಟ್ಟಿ ಒಳ ಆವರಣದಲ್ಲಿ ಮುಸ್ಲಿಮರ ಪ್ರಾರ್ಥನೆಗೂ, ಹೊರ ಆವರಣದಲ್ಲಿ ಹಿಂದೂಗಳ ಪೂಜೆಗೂ ಅವಕಾಶ ಕಲ್ಪಿಸಿಕೊಡಲಾಗುತ್ತದೆ. 1860ರಲ್ಲಿ ಫೈಜಾಬಾದಿನ ಬ್ರಿಟಿಷ್ ತಹಶೀಲ್ದಾರ ಪ್ರಪ್ರಥಮ ಬಾರಿಗೆ ಬಾಬ್ರಿ ಮಸೀದಿ ಕಟ್ಟಿದ ಜಾಗದಲ್ಲಿ ರಾಮಮಂದಿರವಿತ್ತೆಂಬ ಪ್ರಸ್ತಾಪ ಮಾಡುತ್ತಾನೆ. 1870ರಲ್ಲಿ ಕಾನರ್ೆಜಿಯೆಂಬ ಮತ್ತೊಬ್ಬ ಬ್ರಿಟಿಷ್ ಲೇಖಕಿ ಬಾಬ್ರಿ ಮಸೀದಿಯ ಕೆಳಗೆ ರಾಮಮಂದಿರವಿರವಹುದೆಂಬ ಚರಿತ್ರೆ ಬರೆಯುತ್ತಾಳೆ. 1885ರಲ್ಲಿ ಪ್ರಥಮ ಬಾರಿಗೆ ಹಿಂದೂ ಸಂತರು ಬಾಬ್ರಿ ಮಸೀದಿಯ ಹೊರ ಆವರಣದಲ್ಲಿ (ಚಬೂತರ್) ರಾಮಮಂದಿರ ನಿಮರ್ಾಣ ಮಾಡಿಕೊಳ್ಳಲು ಫೈಜಾಬಾದ್ ಸಬ್ ಜಡ್ಜ್ ಎದುರು ಮತ್ತು ನಂತರದಲ್ಲಿ ಜಿಲ್ಲಾ ನ್ಯಾಯಾಲಯದ ಎದಿರು ದಾವೆ ಹೂಡುತ್ತಾರೆ. ಆದರೆ ಅಲ್ಲಿ ರಾಮಮಂದಿರವಿತ್ತೆಂಬುದು ನಿಜವೇ ಆದರೂ ಈಗ 350 ವರ್ಷಗಳ ಕೆಳಗೆ ನಡೆದು ಹೋದ ಅನ್ಯಾಯವನ್ನು ಸರಿಪಡಿಸಲು ಈಗ ಇರುವ ಪರಿಸ್ಥಿತಿಯನ್ನು ಬದಲು ಮಾಡಲು ಬರುವುದಿಲ್ಲವೆಂದು ಕೋಟರ್ು ನಿರಾಕರಿಸುತ್ತದೆ. (ಅಂದರೆ ದಾವೆಯನ್ನು ರದ್ದು ಪಡಿಸಿದರೂ ಬಾಬ್ರಿ ಮಸೀದಿಯ ಕೆಳಗೆ ಮಂದಿರವಿರಬಹುದೆಂಬ ಊಹಾಪೋಹಕ್ಕೆ ಬ್ರಿಟಿಷ್ ಕೋಟರ್ೂ ಪರೋಕ್ಷ ಮಾನ್ಯತೆಯನ್ನು ನೀಡುತ್ತದೆ). ನಂತರ 1934ರಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಕೆಲವು ಹಿಂದೂ ಮತೋನ್ಮಾದಿ ಶಕ್ತಿಗಳು ಬಾಬ್ರಿ ಮಸೀದಿಯ ಗೋಡೆಗಳನ್ನು ಕೆಡವಿ ಮಸೀದಿಗೆ ಹಾನಿ ಮಾಡುತ್ತಾರೆ. ಆಗ ಬ್ರಿಟಿಷ್ ಸಕರ್ಾರ ಅದನ್ನು ರಿಪೇರಿ ಮಾಡಿಸಿಕೊಟ್ಟು ಯಥಾಸ್ಥಿತಿ ಕಾಯುತ್ತದೆ. 1949ರ ಡಿಸೆಂಬರ್ 22ರ ಮಧ್ಯರಾತ್ರಿ ಹಿಂದೂಗಳ ಗುಂಪೊಂದು ಬಾಬ್ರಿ ಮಸೀದಿಯ ಒಳಾವರಣಕ್ಕೆ ಗುಟ್ಟಾಗಿ ಪ್ರವೇಶಿಸಿ ಅಲ್ಲಿ ಬಾಲರಾಮನ ಮೂತರ್ಿಯನ್ನು ಪ್ರತಿಸ್ಟಾಪಿಸುತ್ತವೆ. ಆಗ ನೆಹ್ರೂ, ಸದರ್ಾರ್ ಪಟೇಲ್ ಸಕರ್ಾರ ಮೂತರ್ಿಗಳನ್ನು ಕೂಡಲೇ ತೆಗಿಸಿ ಯಥಾಸ್ಥಿತಿ ಕಾಯ್ದುಕೊಂಡು ಬರಬೇಕೆಂದು ಅಂದಿನ ಮುಖ್ಯಮಂತ್ರಿ ಗೋಪಿವಲ್ಲಭ ಪಂತ್ಗೆ ಆದೇಶ ನೀಡುತ್ತಾರೆ. ಆದರೆ ಆಗಿನ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕೆ.ಕೆ. ನಯ್ಯರ್, ಮೂತರ್ಿಗಳನ್ನು ತೆಗೆದುಹಾಕಿದರೆ ಕೋಮು ಗಲಭೆಗಳಾಗುವ ಸಾಧ್ಯತೆಯ ನೆಪವೊಡ್ಡಿ ಮೂತರ್ಿಗಳನ್ನು ತೆಗೆಯುವುದಿಲ್ಲ. ಬದಲಿಗೆ ಬಾಬ್ರಿ ಮಸೀದಿಯ ಪ್ರವೇಶವನ್ನು ಮುಸ್ಲಿಮ್ ಮತ್ತು ಹಿಂದೂಗಳಿಬ್ಬರಿಗೂ ನಿರ್ಭಂದಿಸುತ್ತಾರೆ. (ನಂತರ ಈತ ಭಾರತೀಯ ಜನತಾ ಪಕ್ಷದ ಅಂದಿನ ರೂಪವಾಗಿದ್ದ ಭಾರತೀಯ ಜನಸಂಘದ ಹೆಸರಲ್ಲಿ ಚುನಾವಣೆಗೆ ಸ್ಪಧರ್ಿಸುತ್ತಾರೆ!). ನಂತರ 1950ರ ಜನವರಿಯಲ್ಲಿ ಆಸ್ಥಾನ್ ಜನ್ಮ ಸ್ಥಾನ ಸಮಿತಿಯ ಗೋಪಾಲ್ ವಿಶಾರದ್ ಎಂಬುವರು ಪ್ರತಿಮೆಗಳ ಪೂಜೆಗೆ ಅವಕಾಶ ಕೊಡಬೇಕೆಂದು ದಾವೆ ಹೂಡುತ್ತಾರೆ. 1950ರ ಡಿಸೆಂಬರ್ನಲ್ಲಿ ಮತ್ತೊಬ್ಬ ಹಿಂದೂ ಮಹಂತರೂ ಬಾಬ್ರಿ ಮಸೀದಿಯ ಒಳಾವರಣದಲ್ಲಿ ಪೂಜೆಗೆ ಅವಕಾಶ ಕೊಡಬೇಕೆಂದೂ ದಾವೆ ಹೂಡುತ್ತಾರೆ. 1955ರಲ್ಲಿ ಫೈಜಾಬಾದ್ ಹೈಕೋಟರ್ು ಪ್ರತಿಮೆಯನ್ನು ತೆಗೆಯುವ ಅಗತ್ಯವಿಲ್ಲವೆಂದು ಆದೇಶ ನೀಡುತ್ತದೆ. ನಂತರ ಅದನ್ನು ಉತ್ತರ ಪ್ರದೇಶ ಹೈಕೋಟರ್ು ಸಹ ಎತ್ತಿ ಹಿಡಿಯುತ್ತದೆ. ಈ ಮಧ್ಯೆ ಬಾಬ್ರಿ ಮಸೀದಿಯ ಹೊರಾವರಣದಲ್ಲಿ ಚಬೂತರ್ ಮತ್ತು ಸೀತಾ ರಸೋಯಿ ಎಂಬಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸುವುದು ಮುಂದುವರೆದಿರುತ್ತದೆ. ಆದರೆ ಒಳಾವರಣದಲ್ಲಿ ಹಿಂದೂ ಸಂಘಟನೆಗಳು ರಾಮ ಪ್ರತಿಮೆಗಳನ್ನು ಸ್ಥಾಪಿಸಿದ್ದರಿಂದ ಹಾಗೂ ಒಳಾವರಣಕ್ಕೆ ಬೀಗ ಹಾಕಿದ್ದರಿಂದ ಮುಸ್ಲಿಮರು ಬಾಬ್ರಿ ಮಸೀದಿಯಲ್ಲಿ ನಮಾಜ್ ಮಾಡುವುದು ನಿಲ್ಲುತ್ತದೆ. 1959ರಲ್ಲಿ ನಿಮರ್ೋಹಿ ಅಖಾಡಾ ಎಂಬ ವೈಷ್ಣವ ಪಂಥಕ್ಕೆ ಸೇರಿದ ಸಂಘಟನೆಯೊಂದು ಬಾಬ್ರಿ ಮಸೀದಿಯ ಹೊರಾವರಣದಲ್ಲಿರುವ ಸೀತಾ ರಸೋಯಿ ಮತ್ತು ಚಬೂತರ್ ಪ್ರದೇಶದ ಒಡೆತನ ತಮಗೇ ಸೇರಿದ್ದೆದೆಂದೂ ಅದನ್ನು ತಮ್ಮ ವಶಕ್ಕೆ ಕೊಡಬೇಕೆಂದೂ ಒಡೆತನ ದಾವೆ (ಟೈಟಲ್ ಸೂಟ್)ಸಲ್ಲಿಸುತ್ತಾರೆ. 1961ರ ಡಿಸೆಂಬರ್ 18ರಂದು ಸುನ್ನಿ ವಕ್ಫ್ ಬೋಡರ್್ ಸಮಿತಿಯವರು ಬಾಬ್ರಿ ಮಸೀದಿ ಪ್ರದೇಶದ ಇಡೀ ಒಡೆತನ ತಮಗೆ ಸೇರಬೇಕೆಂದು ಒಡೆತನದ ದಾವೆ ಸಲ್ಲಿಸುತ್ತಾರೆ.
1984ರಲ್ಲಿ ಹಿಂದೂಪರ ಸಂಘಟನೆಯೊಂದು ರಾಮ ವಿಗ್ರಹಗಳಿರುವ ಸ್ಥಳಕ್ಕೆ ಹಾಕಿರುವ ಬೀಗವನ್ನು ತೆಗೆದು ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ದಾವೆ ಸಲ್ಲಿಸುತ್ತಾರೆ. ಅದನ್ನು ಪುರಸ್ಕರಿಸಿದ ಫೈಜಾಬಾದ್ ಜಿಲ್ಲಾ ಕೋಟರ್ು ಬೀಗವನ್ನು ತೆಗೆಯಬೇಕೆಂದು ಆದೇಶಿಸುತ್ತದೆ. ಅದನ್ನು ಉನ್ನತ ಕೋಟರ್ಿನಲ್ಲಿ ಪ್ರಶ್ನಿಸಿದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಬೀಗವನ್ನು ತೆಗೆದು ಹಿಂದೂಗಳ ಪೂಜೆಗೆ ಏಕಪಕ್ಷೀಯವಾಗಿ ಅವಕಾಶ ಮಾಡಿಕೊಡುತ್ತದೆ. ಆದರೆ ಇದರಿಂದ ಉತ್ತೇಜಿತಗೊಂಡ ಸಂಘಪರಿವಾರ ಮತ್ತು ಬಿಜೆಪಿ ಪಕ್ಷ ದೇಶಾದ್ಯಂತ ರಾಮಜನ್ಮಭೂಮಿ ವಿಮೋಚನಾ ಚಳವಳಿಯನ್ನು ಪ್ರಾರಂಭಿಸುತ್ತದೆ. ಹಿಂದೂಗಳು ಬಾಬ್ರಿ ಮಸೀದಿ ಇರುವ ಜಾಗದಲ್ಲಿ ರಾಮ ಜನ್ಮ ತಾಳಿದ್ದಾನೆಂದು ನಂಬುತ್ತಾರಾದ್ದರಿಂದ ಮುಸ್ಲಿಮರು ಅದನ್ನು ಬಿಟ್ಟುಕೊಡಬೇಕೆಂದೂ ಆ ಮೂಲಕ ಬಾಬರ್ ಮಂದಿರ ಕೆಡವಿ ಮಸೀದಿ ಕಟ್ಟಿದ್ದಕೆ ಪ್ರಾಯಶ್ವಿತ್ತ ಮಾಡಿಕೊಳಬೇಕೆಂದೂ ಅಸತ್ಯ-ಅರ್ಧಸತ್ಯಗಳ ಪ್ರಚಾರ ಪ್ರಾರಂಭಿಸಿ ಇಡೀ ದೇಶದಲ್ಲಿ ಕೋಮುಗಲಭೆಗಳ ದಾವಾನಲವನ್ನು ಹಬ್ಬಿಸುತ್ತಾರೆ. ಮುಸ್ಲಿಮರ ಸಾಲುಸಾಲು ಕಗ್ಗೊಲೆಗಳನ್ನು ನಡೆಸುತ್ತಾರೆ.
ಸರ್ವಶಕ್ತ ಭಗವಂತನಿಗೆ ಮಾನವನೇ ಗಾಡರ್ಿಯನ್
ಇದೇ ಸಮಯದಲ್ಲಿ 1989ರಲ್ಲಿ ಸಂಘಪರಿವಾರದ ರಾಮ ಶಿಲಾನ್ಯಾಸ್ ಸಮಿತಿಯು ಸಾಕ್ಷಾತ್ ಭಗವಾನ್ ಶ್ರೀರಾಮಚಂದ್ರನ ಹೆಸರಲ್ಲಿ ಮತ್ತೊಂದು ಅಜರ್ಿಯನ್ನು ಕೋಟರ್ಿನಲ್ಲಿ ದಾಖಲಿಸುತ್ತದೆ.. ಈ ಕೇಸಿನಲ್ಲಿ ಅಜರ್ಿದಾರರು ಯಾರು ಗೊತ್ತೆ? ಅಜರ್ಿದಾರ ನಂಬರ್ 1, ಸಾಕ್ಷಾರ್ ಭಗವಾನ್ ಶ್ರೀರಾಮಚಂದ್ರ ವಿರಾಜ್ಮಾನ್. ಅಜರ್ಿದಾರ ನಂಬರ್ 2. ರಾಮಜನ್ಮಭೂಮಿ ಎಂಬ ಜಾಗ! ಬಾಲ ರಾಮ ದೇವರಾಗಿದ್ದು, ಎಷ್ಟೇ ವರ್ಷಗಳಾದರೂ ಅವನು ಬಾಲಕನೇ ಆಗಿರುವುದರಿಂದ ಆತನ ಆತ್ಮ ಸಖನಾದ 63 ವರ್ಷದ ತ್ರಿಪಾಠಿ ಎಂಬುವರು ತಾನು ಬಾಲರಾಮನ ಗಾಡರ್ಿಯನ್ ಎಂದೂ ಬಾಲರಾಮನ ಪರವಾಗಿ ವಾದಿಸುವುದಾಗಿಯೂ ಅಜರ್ಿ ಸಲ್ಲಿಸಿದರು. ಭಗವಂತಗೆ ಮಾನವ ಗಾಡರ್ಿಯನ್! ಈ ಅಜರ್ಿಯಲ್ಲಿ ್ಲ ಭಗವಾನ್ ಬಾಲರಾಮರು ಇಡೀ ಪ್ರದೇಶ ತನಗೆ ಸೇರಬೇಕಾದ್ದರಿಂದ ನಿಮರ್ೀಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋಡರ್್ಗಳಿಬ್ಬರನ್ನೂ ಪ್ರತಿದಾವೆಗಳನ್ನಾಗಿಸಿ ಇಡೀ ಪ್ರದೇಶವನ್ನು ಕೇವಲ ತನಗೇ ಬಿಟ್ಟುಕೊಡಬೇಕೆಂದು ವಾದಿಸಿದ್ದಾರೆ! ಇಂಥಾ ಹಾಸ್ಯಾಸ್ಪದ ಅಜರ್ಿಯನ್ನೂ ಕೋಟರ್ು ಪರಿಗಣಿಸಿದ್ದು ಮಾತ್ರವಲ್ಲ. ಸೆಪ್ಟೆಂಬರ್ 30ರ ತೀಪರ್ಿನಲ್ಲಿ ಬಾಲರಾಮನ ಹಕ್ಕನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ!!
ನಾಲ್ಕು ಕೇಸುಗಳು ಇಪ್ಪತ್ತು ವರ್ಷಗಳು
1989ರಲ್ಲಿ ಸಕರ್ಾರದ ವಿಶೇಷ ಮನವಿಯ ಪ್ರಕಾರ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೈಜಾಬಾದ್ ಕೋಟರ್ಿನಲ್ಲಿ ಇದ್ದ ಎಲ್ಲಾ ಪ್ರಕರಣಗಳನ್ನು ಅಲಹಾಬಾದ್ ಹೈಕೋಟರ್ಿಗೆ ವಗರ್ಾಯಿಸಲಾಯಿತು. ಹೀಗಾಗಿ 1950ರಲ್ಲಿ ಬಾಬ್ರಿ ಮಸೀದಿಯ ಒಳಾವರಣದಲ್ಲಿರುವ ಪ್ರತಿಮೆಗಳ ಪೂಜೆಗೆ ಸಕರ್ಾರ ಅಂದು ವಿಧಿಸಿದ್ದ ನಿರ್ಭಂಧವನ್ನು ಪ್ರಶ್ನಿಸಿ ವಿಶಾರದ್ ಎಂಬುವರು ಹಾಕಿದ್ದ ದಾವೆಯು ಅಲಹಾಬಾದ್ ಹೈಕೋಟರ್ಿನಲ್ಲಿ- ಮೂಲದಾವೆ (ಔಡಿರಟಿಚಿಟ ಖಣಣ- ಔಖ-1) 1 ಎಂದು ದಾಖಲಾಯಿತು. ಸಂತ ಮಹಂತರು ಇದೇ ವಿಷಯದಲ್ಲಿ 1951ರಲ್ಲಿ ಹಾಕಿದ್ದ ದಾವೆ ಮೂಲದಾವೆ 2, ಔಖ-2, ಎಂದು ದಾಖಲಾಯಿತು. 1959ರಲ್ಲಿ ಬಾಬ್ರಿ ಮಸೀದಿಯ ಹೊರಾವರಣದಲ್ಲಿರುವ ಸೀತಾ ರಸೋಯಿ ಮತ್ತು ಚಬೂತರ್ ಪ್ರದೇಶದ ಒಡೆತನವನ್ನು ತಮಗೇ ನಡಬೇಕೆಂದು ನಿಮರ್ೋಹಿ ಅಖಾಡಾದವರು ಸಲ್ಲಿಸಿದ್ದ ದಾವೆಯನ್ನು ಮೂಲದಾವೆಯನ್ನು ಔಖ-3 ಎಂದೂ ದಾಖಲಿಸಿಕೊಳ್ಳಲಾಯಿತು. 1961ರಲ್ಲಿ ಸುನ್ನಿ ವಕ್ಫ್ ಬೋಡರ್ಿನವರು ಇಡೀ ಬಾಬ್ರಿ ಮಸೀದಿ ಪ್ರದೇಶದ ಒಡೆತನವನ್ನು ಕೇಳಿ ಸಲ್ಲಿಸಿದ್ದ ದಾವೆಯನ್ನು ಔಖ-4 ಎಂದೂ ಪರಿಗಣಿಸಿ, 1909ರಲ್ಲಿ ಇಡೀ ಪ್ರದೇಶ ತನ್ನದು ಎಂದು ಭಗವಾನ್ ರಾಮ ಹಾಕಿದ್ದ ಅಜರ್ಿಯನ್ನು ಔಖ-5 ಎಂದೂ ಪರಿಗಣಿಸಲಾಯಿತು. 1990ರಲ್ಲಿ ಔಖ-2ರ ಅಜರ್ಿದಾರ ಭಗವಂತನ ಹೆಸರಲ್ಲಿ ಬಿಜೆಪಿ ನಡೆಸುತ್ತಿದ್ದ ರಾಜಕಾರಣವನ್ನು ಕಂಡು ಬೇಸತ್ತು ತಮ್ಮ ಅಜರ್ಿಯನ್ನು ಹಿಂತೆಗೆದುಕೊಂಡರು. ಹೀಗಾಗಿ ಅಲಹಾಬಾದ್ ಹೈಕೋಟರ್ಿನ ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲಕ್ಕು ದಾವೆಗಳು ಉಳಿದುಕೊಂಡವು.
ಈ ಮಧ್ಯೆ ರಾಮಜನ್ಮಭೂಮಿ ವಿವಾದವನ್ನು ರಾಷ್ಟ್ರಮಟ್ಟದ ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಂಡ ಸಂಘಪರಿವಾರ ಮತ್ತು ಬಿಜೆಪಿ ರಾಷ್ಟ್ರಾದ್ಯಂತ ರಾಮನ ಹೆಸರಲ್ಲಿ ಉನ್ಮಾದ ಸೃಷ್ಟಿಸಿ ಕೋಮು ಕಗ್ಗೊಲೆಗಳನ್ನು ನಡೆಸಿದ್ದಲ್ಲದೆ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀಯನ್ನು ಕೆಡವಿ ಹಾಕಿತು. ಅಂದೇ ಅಲ್ಲಿ ಒಂದು ತಾತ್ಕಾಲಿಕ ರಾಮಮಂದಿರವನ್ನು ಕಟ್ಟಿಬಿಟ್ಟಿತು. 1993ರಲ್ಲಿ ಕೇಂದ್ರ ಸಕರ್ಾರ ಬಾಬ್ರಿ ಮಸೀಯಿದ್ದ ಇಡೀ 2.7 ಎಕರೆಯನ್ನು ಒಳಗೊಂಡಂತೆ 64 ಎಕರೆ ಪ್ರದೇಶವನ್ನು ತನ್ನ ಸುಫದರ್ಿಗೆ ತೆಗೆದುಕೊಂಡಿತು. ವಿವಾದಿತ ಸ್ಥಳದಲ್ಲಿ ರಾಮಮಂದಿರವಿತ್ತೋ ಇಲ್ಲವೋ ಎಂಬ ವಿಷಯದ ಬಗ್ಗೆ ಕೇಂದ್ರ ಸಕರ್ಾರದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಸುಪ್ರಿಂಕೋಟರ್ಿನ ಅಭಿಪ್ರಾಯ ಕೇಳಿದರು. ಆದರೆ ಸುಪ್ರಿಂ ಕೋಟರ್ಿನ ಐದು ನ್ಯಾಯಾಧೀಶರ ಪೀಠ ಇಂಥಾ ಇತಿಹಾಸ, ನಂಬಿಕೆ ಮತ್ತು ಶ್ರದ್ಧೆಗಳ ವಿಷಯದ ಬಗ್ಗೆ ಕೋಟರ್ುಗಳ ತಮ್ಮ ಅಭಿಪ್ರಾಯ ಕೊಡಲು ಅಶಕ್ತ ಮತ್ತು ಸಲ್ಲದು ಎಂದು ತಿಳಿಸಿತು. 1994ರ ಇಸ್ಮಾಯಿಲ್ ಫರೂಖಿ ಪ್ರಕರಣದಲ್ಲಿ ಸುಪ್ರಿಂ ಕೋಟರ್ು ಇಡೀ ಪ್ರಕರಣವನ್ನು ಅಲಹಾಬಾದ್ ಹೈಕೋಟರ್ು ಒಂದೇ ಪ್ರಕರಣವೆಂದು ಭಾವಿಸಿ ತೀಪರ್ು ನೀಡಲು ಆದೇಶಿಸಿತು.
ಅಲಹಾಬಾದ್ನ ಲಖನೌ ವಿಭಾಗದ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತು. 2000ರಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸಕರ್ಾರ ಅಧಿಕಾರದಲ್ಲಿದ್ದಾಗ ಕೇಂದ್ರ ಸಕರ್ಾರದ ಸುಫದರ್ಿಯಲ್ಲಿದ್ದ ಬಾಬ್ರಿ ಮಸೀದಿಯಿದ್ದ 2.7 ಎಕರೆ ಜಾಗದಲ್ಲಿ ಬಾಬ್ರಿ ಮಸೀದಿ ನಿಮರ್ಾಣಕ್ಕೂ ಮುಂಚೆ ಮಂದಿರವಿತ್ತೇ ಎಂದು ಅಧ್ಯಯನ ಮಾಡಲು ಆಕರ್ಿಯಾಲಾಜಿಕಲ್ ಸವರ್ೇ ಆಫ್ ಇಂಡಿಯಾಗೆ ಆದೇಶಿಸಲಾಯಿತು. 2002ರಲ್ಲಿ ಅವರು ಆ ಜಾಗದಲ್ಲಿ ಉತ್ಖನನ ಪ್ರಾರಂಭಿಸಿ 2003ರಲ್ಲಿ ವರದಿ ಕೊಟ್ಟರು. ಆದರೆ ಉತ್ಖನನಕೆ ಮತ್ತು ಅಧ್ಯಯನಕ್ಕೆ ಅವರು ಅನುಸರಿಸಿದ ಪದ್ಧತಿ ಮತ್ತು ತಲುಪಿದ ತೀಮರ್ಾನಗಳ ಬಗ್ಗೆ ದೇಶದ ಎಲ್ಲಾ ಪ್ರಮುಖ ಇತಿಹಾಸಕಾರರು ಮತ್ತು ಪರಿಣಿತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ಕೋಟರ್ು ಆ ವರದಿಯನ್ನು ತನ್ನ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಿತು. ಇದು ಇಲ್ಲಿಯವರೆಗಿನ ಅಯೋಧ್ಯಾ ಪ್ರಕರಣದ ಇತಿಹಾಸ. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ತ್ರಿಸದಸ್ಯ ಪೀಠದ ನ್ಯಾಯಾಧೀಶರೆಂದರೆ ನ್ಯಾಯಮೂತರ್ಿ ಶಮರ್ಾ, ನ್ಯಾಯಮೂತರ್ಿ ಅಗರ್ವಾಲ್ ಮತ್ತು ನ್ಯಾಯಮೂತರ್ಿ ಎಸ್.ಯು. ಖಾನ್. ಈ ನ್ಯಾಯ ಪೀಠವು ಮೊದಲು ಪ್ರತಿ ಪ್ರಕರಣದಲ್ಲಿ ಯಾವ್ಯಾವ ವಿಷಯಗಳ ಬಗ್ಗೆ ತೀಮರ್ಾನ ಕೊಡಬೇಕಿದೆ ಎಂಬುದನ್ನು ಪಟ್ಟಿ ಮಾಡಿತು. ಅದರಂತೆ ವಿಶಾರದರ ಔಖ-1ಪ್ರಕರಣದಲ್ಲಿ 17 ವಿಷಯಗಳನ್ನೂ, ನಿಮರ್ೋಹಿ ಅಖಾಡಾದ ಔಖ-3 ವಿಷಯದಲ್ಲಿ 17 ವಿಷಯಗಳನ್ನೂ, ಸುನ್ನಿ ವಕ್ಫ್ ಬೋಡರ್ಿನ ಔಖ-4 ಪ್ರಕರಣದಲ್ಲಿ 28 ಹಾಗೂ ಕೆಲವು ಉಪವಿಷಯಗಳನ್ನೂ, ಮತ್ತು ಭಗವಾನ್ ಶ್ರೀರಾಮ ವಿರಾಜಮಾನ್ರ ಔಖ-5 ಪ್ರಕರಣದಲ್ಲಿ 30 ವಿಷಯಗಳನ್ನು ಇತ್ಯರ್ಥ ಮಾಡಬೇಕಾಗಿದೆಯೆಂದೂ ನ್ಯಾಯಾಲಯ ಪಟ್ಟಿ ಮಾಡಿತು.
ಪಂಚ ಪಶ್ನೆಗಳು ಮತ್ತು ಪ್ರಶ್ನಾರ್ಹ ತೀಪರ್ುಗಳು
ಆದರೂ ಈ ಎಲ್ಲಾ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಐದಾರು ವಿಷಯಗಳು ಮಾತ್ರ ಪ್ರಮುಖವಾದದ್ದು. ಆದ್ದರಿಂದಲೇ ಕೋಟರ್ೂ ಸಹ ತನ್ನ ಬೃಹತ್ ತೀರ್ಪನ್ನು ಮಾಧ್ಯಮಗಳಿಗೆ ಹೇಳುವಾಗ ಈ ಐದಾರು ಪ್ರಮುಖ ವಿಷಯಗಳ ಬಗೆಗೇ ಒತ್ತುಕೊಟ್ಟಿದೆ. ಮಿಕ್ಕ ಎಲ್ಲಾ ತೀಮರ್ಾನಗಳನ್ನು ಈ ನೆಲೆಯಿಂದಲೇ ಮಾಡಲಾಗಿದೆ. ಹೀಗಾಗಿ ನ್ಯಾಯಾಲಯ ಇತ್ಯರ್ಥ ಮಾಡಿದ ಆ ಪ್ರಮುಖ ವಿಷಯಗಳು ಮತ್ತು ಆ ತೀಮರ್ಾನಕ್ಕೆ ಬರಲು ಅದು ಅನುಸರಿಸಿದ ನ್ಯಾಯಿಕ ಮಾನದಂಡಗಳನ್ನು ಗಮನಿಸುವುದು ಅತ್ಯಂತ ಮುಖ್ಯ. ಬೇರೆ ಬೇರೆ ವಿಷಯಗಳಿಗೆ ಸಂಬಂಧಪಟ್ಟಂತೆ ಮೂರೂ ಜನ ಬೇರೇಬೇರೇ ತೀಪರ್ು ಕೊಟ್ಟಿದ್ದರೂ ಸಾರಾಂಶದಲ್ಲಿ ಅವರು ನಡುವೆ ಸಾಮ್ಯತೆಗಳೂ ಇವೆ.
1. ವಿವಾದಿತ ಪ್ರದೇಶದ ಒಡೆತನ ಯಾರಿಗೆ ಸೇರಬೇಕು?
ತೀಪರ್ು: ಯಾವುದೇ ಸ್ಥಳದ ಒಡೆತನವು ವಿವಾದದಲ್ಲಿದ್ದು ಅಲ್ಲಿ ಮತ್ತೊಬ್ಬರು ಹಕ್ಕು ಸ್ಥಾಪಿಸಲು ಬಯಸಿದಲ್ಲಿ ಪ್ರಕರಣ ಬಯಲುಗೊಂಡ 12 ವರ್ಷಗಳ ಒಳಗೆ ದಾವೆಯನ್ನು ಹೂಡಬೇಕು. ಇಲ್ಲಿ ನಿಮರ್ೋಹಿ ಅಖಾಡಾ ಹತ್ತಾರು ವರ್ಷದ ಕೆಳಗೇ ಪ್ರಾರಂಭವಾದರೂ ಪ್ರಕರಣ ದಾಖಲಿಸಿದ್ದು 1959ರಲ್ಲಿ. ಅದೇ ರೀತಿ ಪ್ರತಿಮೆಗಳನ್ನು 1949ರಲ್ಲೇ ಸ್ಥಾಪಿಸಿ ಮುಸ್ಲಿಮರ ನಮಾಜಿಗೆ ಪ್ರತಿಭಂಧ ಹೂಡಿದ್ದರೂ ಅವರು ಒಡತನ ದಾವೆ ಸಲ್ಲಿಸಿದ್ದು 1961ರಲ್ಲಿ. ಹೀಗಾಗಿ ಇಬ್ಬರ ದಾವೆಗಳು ಸಮಯ ಬಾಹಿರವಾದ್ದರಿಂದ ನಿಮರ್ೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋಡರ್ಿನ ದಾವೆಯನ್ನು ವಜಾ ಮಾಡಲಾಗಿದೆಯೆಂದು ಮೂರೂ ಜನ ನ್ಯಾಯಾಧೀಶರೂ ಆದೇಶ ನೀಡಿದ್ದಾರೆ.
ಆದರೆ ಸುನ್ನಿ ವಕ್ಫ್ ಬೋಡರ್್ ತನ್ನ ದಾವೆ ಸಲ್ಲಿಸಿದ್ದು 1961ರ ಡಿಸೆಂಬರ್ 18ರಂದು. ಪ್ರತಿಮೆಗಳು ಸ್ಥಾಪನೆಯಾಗಿದ್ದು 1949ರ ಡಿಸೆಂಬರ್ 22ರಂದು. ಹೀಗೆ ಕೇವಲ ದಿನಗಳ ಲೆಕ್ಕಾಚಾರ ತೆಗೆದುಕೊಂಡರೂ ಸುನ್ನಿ ವಕ್ಫ್ ಬೋಡರ್್ ದಾವೆ ಕಾಲಬಾಹಿರವಾಗುವುದಿಲ್ಲ!!
ಆದರೂ ನ್ಯಾಯಾಧೀಶರಾದ ಖಾನ್ ಮತ್ತು ಅಗರ್ವಾಲ್ರವರು ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ರಾಮಲಲ್ಲಾ, ನಿಮರ್ೋಹಿ ಅಖಾಡಾ ಮತ್ತು ಸುನ್ನಿ ಬೋಡರ್ಿಗೆ ತಲಾ ಮೂರನೇ ಒಂದು ಭಾಗವನ್ನು ಹಂಚಬೇಕೆಂದು ಆದೇಶಿಸಿದ್ದಾರೆ. ಆದರೆ ನ್ಯಾ.ಶಮರ್್ ಇಡೀ ಪ್ರದೇಶ ರಾಮಲಲ್ಲಾಗೆ ಸೇರಬೇಕಿದ್ದರಿಂದ ಉಳಿದೆರಡು ಫಿಯರ್ಾದುದಾರರಿಗೆ ಜಾಗವನ್ನು ಹಂಚಲು ನಿರಾಕರಿಸುತ್ತಾರೆ.
ಆದರೆ ಮೂರು ಸದಸ್ಯರ ಪೀಠದಲ್ಲಿ ಇಬ್ಬರ ಅಭಿಪ್ರಾಯವೇ ಬಹುಮತದ ಅಭಿಪ್ರಾಯವಾಗುತ್ತಾದ್ದರಿಂದ ಅನುಷ್ಠಾನಕ್ಕೆ ತರಬೇಕಿರುವುದು ಬಹುಮತದ ತೀಮರ್ಾನವನ್ನೇ. ಆದರೆ ಈ ಬಹುಮತದ ತೀಪರ್ು ನಿಜವಾದ ಹಕ್ಕುದಾವೆ ಹೂಡಿದ್ದ ಇಬ್ಬರೂ ಫಿಯರ್ಾದಿಗಳಿಗೂ ಯಾವುದೇ ಸರಿಯಾದ ತರ್ಕವಿಲ್ಲದೆ ಒಡೆತನದ ಹಕ್ಕು ನಿರಾಕರಿಸುತ್ತದೆ. ಹಾಗೂ ಯಾವ ಸಾಕ್ಷ್ಯ ಪುರಾವೆಗಳಿಲ್ಲದಿದ್ದರೂ ಮೂರನೇ ವಾದಿಯಾದ ಭಗವಾನ್ ರಾಮಲಲ್ಲಾನಿಗೆ ಒಂದು ಪಾಲು ಒಡೆತನವನ್ನು ನೀಡುತ್ತದೆ. ಆದರೆ ಹಕ್ಕನ್ನು ನಿರಾಕರಿಸಿದ ನ್ಯಾಯಾಲಯವೇ ಅಂತಿಮವಾಗಿ ಔದಾರ್ಯ ತೋರಿಸಿ ಎರಡೂ ಫಿಯರ್ಾದಿಗಳಿಗೆ ಒಂದೊಂದು ಪಾಲು ನೀಡುತ್ತದೆ. ಇದು ಈಗಾಗಲೇ ಸತತವಾಗಿ ಹಕ್ಕುಗಳ ವಂಚನೆಗೆ ಗುರಿಯಾಗುತ್ತಿರುವ ಮುಸ್ಲಿಂ ಸಮುದಾಯದ ಗಾಯಕ್ಕೆ ಔದಾರ್ಯದ ಬರೆಯನ್ನೇ ಎಳೆದಂತಾಗಿದೆ.
2. ವಿವಾದಿತ ಜಾಗದಲ್ಲಿ 1528ರಲ್ಲಿ ಮಸೀದಿ ಕಟ್ಟುವ ಮುನ್ನ ರಾಮಮಂದಿರವಿತ್ತೇ?
ತೀಪರ್ು: ಈ ವಿಷಯದ ಬಗ್ಗೆ ಮೇಲ್ನೋಟಕ್ಕೆ ಒಬ್ಬೊಬ್ಬ ನ್ಯಾಯಾಧೀಶರು ಒಂದೊಂದು ಬಗೆಯ ತೀಮರ್ಾನ ಕೊಟ್ಟಿದ್ದಾರೆ ಎಂದು ಅನಿಸಿದರೂ ಸಾರಾಂಶ ಒಂದೇ ರೀತಿ ಇದೆ.
ನ್ಯಾ. ಖನ್ನಾರವರು ಇಲ್ಲಿ ಮಸೀದಿ ಕಟ್ಟುವ ಮುನ್ನ ರಾಮಮಂದಿರವಿತ್ತು ಎಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಅಕರ್ಿಯಾಲಾಜಿಕಲ್ ಸವರ್ೇ ಆಫ್ ಇಂಡಿಯಾ (ಂಖ) ಕೊಟ್ಟ ವಿವಾದಾತ್ಮಕ ವರದಿ ಮತ್ತು ತೀಮರ್ಾನಗಳನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವ ನ್ಯಾ, ಖಾನ್ರವರು ಮಸೀದಿಯ ಕೆಳಗೆ ಒಂದು ಬೃಹತ್ ಹಿಂದೂ ಧಾಮರ್ಿಕ ಸ್ವರೂಪದ ಕಟ್ಟಡವಿತ್ತೆಂದು ಸರಿಯಾದ ಪುರಾವೆಯಿಲ್ಲದೇ ಒಪ್ಪಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಅದು ರಾಮಮಂದಿರವೇ ಆಗಿತ್ತೆಂದೋ ಅಥವಾ ಅದನ್ನು ಕೆಡವಿಯೇ ಕಟ್ಟಲಾಗಿದೆಯೆಂದೂ ತೀಮರ್ಾನಕ್ಕೆ ಬರಲು ಆಗುವುದಿಲ್ಲವೆಂದು ಹೇಳುತ್ತಾರಾದರೂ ಅದು ಅಂತಿಮವಾಗಿ ಅವರ ತೀಪರ್ಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ನ್ಯಾ. ಅಗರ್ವಾಲ್ರವರೂ ಸಹ ಂಖ ವರದಿಯನ್ನು ಯಥಾವತ್ ಒಪ್ಪಿಕೊಳ್ಳುತ್ತಾರೆ. ಹಾಗೂ ಮಸೀದಿಯನ್ನು ಅಸ್ತಿತ್ವದಲ್ಲಿದ್ದ ಬೃಹತ್ ಹಿಂದೂ ಧಾಮರ್ಿಕ ರಚನೆಯ ಮೇಲೆಯೇ ಕಟ್ಟಲಾಗಿದೆಯೆಂದು ಅಭಿಪ್ರಾಯ ಪಡುತ್ತಾರೆ.
ನ್ಯಾ.ಶಮರ್ಾರಂತೂ ಬಿಡಿ! ವಿಶ್ವಹಿಂದೂ ಪರಿಷತ್ತಿನ ಲಾಯರ್ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಮುಂದಿಟ್ಟ ವಾದವನ್ನು ಯಾವುದೇ ತಿದ್ದುಪಡಿಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಅವರ ಪ್ರಕಾರ ಅಲ್ಲಿ ಮಸೀದಿ ಕಟ್ಟುವ ಮುಂಚೆ ಸಾಕ್ಷಾತ್ ಶ್ರೀರಾಮ ಮಂದಿರವೇ ಅಸ್ತಿತ್ವದಲ್ಲಿತ್ತು. ಮತ್ತು ಅದನ್ನು ಕೆಡವಿಯೇ ಬಾಬ್ರಿ ಮಸೀದಿಯನ್ನು ಕೆಡವಲಾಗಿದೆ.
ಹೀಗೆ ನ್ಯಾ. ಶಮರ್ಾರ ಅತಿರೇಕದ ಅಭಿಪ್ರಾಯಗಳನ್ನು ಹೊರತುಪಡಿಸಿದರೂ ಉಳಿದಿಬ್ಬರ ತೀಮರ್ಾನವೂ ಸಹ ಯಾವುದೇ ಸರಿಯಾದ ಪುರಾವೆಗಳ ಮೇಲೆ ನಿಂತಿಲ್ಲ.
ಮೊದಲನೆಯದಾಗಿ 1994ರಲ್ಲಿ ರಾಷ್ಟ್ರಪತಿಯವರು ಮಸೀದಿಯ ಕೆಳಗೆ ರಾಮಮಂದಿರವಿತ್ತೇ ಎಂದು ಅಭಿಪ್ರಾಯ ತಿಳಿಸಲು ಕೋರಿದಾಗ ಸುಪ್ರಿಂಕೋಟರ್ಿನ ಐದು ಜನರ ಪೀಠ ಕೋಟರ್ುಗಳು ಇಂಥಾ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡಬಾರದೆಂದು ಅಷ್ಟು ಖಚಿತವಾಗಿ ಹೇಳಿದ್ದರೂ ನ್ಯಾಯಾಂಗದ ಶ್ರೇಣೀಕರಣದಲ್ಲಿ ಸುಪ್ರೀಂ ಕೋಟರ್ಿಗಿಂತ ಕೆಳಗಿರುವ ಮೂರು ಸದಸ್ಯರ ಹೈಕೋಟರ್ು ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದೇ ತಪ್ಪು. ಅದರ ಬಗ್ಗೆ ತಮಗೆ ಯಾವುದೇ ಪರಿಣಿತಿ ಇಲ್ಲದಿದ್ದರೂ ಅದರ ಬಗ್ಗೆ ವ್ಯಾಖ್ಯಾನ ನೀಡಿ ತೀಪರ್ು ನೀಡಿದ್ದು ಎರಡನೇ ಮಹಾಪರಾಧ!
ಮೂರನೆಯದಾಗಿ ಕೋಟರ್ೂ ಬಲವಾಗಿ ಆಧರಿಸಿದ್ದ ಂಖ ನೀಡಿದ ವರದಿ ಮತ್ತು ಉತ್ಖನನ ಮತ್ತು ಸಂಶೋಧನೆಗೆ ಅದು ಅನುಸರಿಸಿದ ಮಾರ್ಗ. ಇದರ ಬಗ್ಗೆ ಇತಿಹಾಸಕಾರರು ಮತ್ತು ಸಂಶೋಧಕರು ಹಲವಾರು ಆಕ್ಷೇಪಣೆಗಳನ್ಮು ಸಲ್ಲಿಸಿದ್ದರು. ಅದರಲ್ಲು ಆ ತಂಡ ಉತ್ಖನನ ಮಾಡುವಾಗ ಹೊರ ಆವರಣದಲ್ಲಿ ಪಾಳು ಬಿದ್ದಿದ್ದ ಇಟ್ಟಿಗೆಗಳನ್ನೆಲ್ಲಾ ಒಟ್ಟು ಸೇರಿಸಿ ಪಿಲ್ಲರ್ ಸ್ವರೂಪದ ರಚನೆ ಇತ್ತೆಂದು ಸಾಬೀತು ಮಾಡಲು ನಡೆಸಿದ ಪ್ರಯತ್ನ ಮತ್ತು ಅದರ ಹಿಂದಿನ ಉದ್ದೇಶಗಳ ಬಗ್ಗೆ ಕೆಲವು ಇತಿಹಾಸಕಾರರು ಸುಪ್ರಿಂ ಕೋಟರ್ಿಗೂ ದೂರು ಸಲ್ಲಿಸಿದ್ದರು. ಅಲ್ಲದೆ ಉತ್ಖನನದಲ್ಲಿ ಕಂಡ ಅವಶೇಷಗಳ ಕಾಲಾವಧಿಯನ್ನು ನಿಧರ್ಾರ ಮಾಡಲು ಂಖ ಅನುಸರಿಸಿದ ಮಾದರಿ ಅತ್ಯಂತ ಕಳಪೆಯಾಗಿದೆಯೆಂದು ನ್ಯಾಯಾಲಯಗಳ ಗಮನಕ್ಕೂ ತರಲಾಗಿತ್ತು. ಈ ಉತ್ಖನನವನ್ನು ಆಧರಿಸಿ ಅವರು ನೀಡಿದ ವರದಿ ಇನ್ನೂ ಹಾಸ್ಯಾಸ್ಪದವಾಗಿತ್ತು.
ವಾಸ್ತವವಾಗಿ ಇದನ್ನು ಕಂಡು ರೋಸಿಹೋಗಿದ್ದ ಈ ದೇಶದ ಗಣ್ಯಾತಿಗಣ್ಯಇತಿಹಾಸಕಾರರಾದ ಸೂರಜ್ ಭಾನ್, ಡಿ.ಎನ್ .ಝಾ, ಆರ್.ಎಸ್. ಶಮರ್ಾ ಮತ್ತು ಅಲಿ ಯವರು ಆ ಉತ್ಖನನದ ವರದಿಯ ಬಗ್ಗೆ ತಮ್ಮ ಅಭಿಪ್ರಾಯವನ್ನೂ ನೀಡಲೂ ಸಹ ಅವಕಾಶ ಕೊಡಬೇಕೆಂದು ಕೋರಿದ್ದರು. ಅದಕ್ಕೆ ಪ್ರತಿವಾದಿಗಳಾಗಿದ್ದ ಮುಸ್ಲಿಂ ಸಂಘಟನೆಗಳೂ ಒಪ್ಪಿಕೊಂಡಿದ್ದವು. ಆದರೆ ಸಕರ್ಾರ ಅದರ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ತೋರಿತು. ಆದರೂ ಈ ಇತಿಹಾಸಕಾರರು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದೇಶಕ್ಕೊಂದು ಇತಿಹಾಸಕಾರರ ವರದಿಯನ್ನು ನೀಡಿದರು. ಅದರಲ್ಲಿ ಅವರು ಆ ಆವರಣದಲ್ಲಿ ದೊರೆತ ಅವಶೇಷಗಳಲ್ಲಿ ಬಳಸಿರುವ ಸುಕರ್ಿ ಹಾಗೂ ಸುಣ್ಣದ ಬಳಕೆಗಳು ಅವಶೇಷವಾಗಿರುವ ಕಟ್ಟಡ ಒಂದು ಇಸ್ಲಾಮಿಕ್ ಕಟ್ಟಡವೇ ವಿನಃ ಹಿಂದೂ ಧಾಮರ್ಿಕ ಕಟ್ಟಡವಲ್ಲ ಎಂಬ ಅಭಿಪ್ರಾಯ ಪಟ್ಟಿದ್ದರು. ಮುಸ್ಲಿಂ, ಪಿಲ್ಲತ್ರಹ ಕಾಣುವ ರಚನೆಗಳು ವಾಸ್ತವವಾಗಿ ಭಾರವನ್ನು ಹೊರುವ ಪಿಲ್ಲರ್ಗಳಲ್ಲ ಬದಲಿಗೆ ಅದು ಅಲಂಕಾರಿಕ ರಚನೆ ಎಂಬುದನ್ನೂ ಸಾಬೀತುಪಡಿಸಿದ್ದರು. ಇದಲ್ಲದೆ ಇನ್ನೂ ಹಲವಾರು ಪುರಾವೆಗಳನ್ನು ತೋರಿಸಿ ಅದು ಇಸ್ಲಾಮಿಕ್ ಕಟ್ಟಡವೇ ವಿನಃ ಮಂದಿರವಾಗಿರಲಾರದು ಎಂದು ಸಾಬೀತು ಪಡಿಸುತ್ತಾರೆ. ಮತ್ತು ಅದನ್ನು ಕೋಟರ್ಿಗೂ ಸಲ್ಲಿಸುತ್ತಾರೆ.
ದೇಶದ ಪ್ರಖ್ಯಾತ ಇತಿಹಾಸ ತಜ್ನರ ಪ್ರಕಾರ ಅಯೋಧ್ಯೆ ಪ್ರಸಿದ್ಧ ಬೌದ್ಧ ಮತ್ತು ಜೈನ ಯಾತ್ರಾಸ್ಥಳವೂ ಆಗಿತ್ತು. ವಾಸ್ತವವಾಗಿ 17ನೇ ಶತಮಾನದ ತನಕ ರಾಮನು ಉತ್ತರ ಭಾರತದಲ್ಲಿ ಅಂಥಾ ಜನಪ್ರಿಯ ದೇವರೇ ಆಗಿರಲಿಲ್ಲ. ಹೀಗಾಗಿ ಉತ್ಖನನದಲ್ಲಿ 15ನೇ ಶತಮಾನಕ್ಕೂ ಹಿಂದೆ ರಾಮಮಂದಿರದ ಅವಶೇಷಗಳು ಕಂಡುಬಂದಿರಲು ಸಾಧ್ಯವೇ ಇಲ್ಲ.
ಮಧ್ಯಕಾಲೀನ ಭಾರತದ ಬಗ್ಗೆ ಅಧಿಕೃತ ಆಕರವೆಂದೇ ಪ್ರಸಿದ್ಧರಾಗಿರುವ ಖ್ಯಾತ ಇತಿಹಾಸ ತಜ್ನ ಇಫéರ್ಾನ್ ಹಬೀಬರ ಪ್ರಕಾರವಂತೂ ಬಾಬ್ರಿ ಮಸೀದಿಯನ್ನು ಈಗಾಗಲೇ ಪತನಗೊಂಡಿದ್ದ ದಗರ್ಾ ಅಥವಾ ಮಸೀದಿಯ ಅವಶೇಷಗಳ ಮೇಲೆ ಕಟ್ಟಲಾಗಿದೆ.
ಹೀಗೆ ಮಸೀದಿಯ ಕೆಳಗೆ ಸಿಕ್ಕಿರುವ ಅವಶೆಷಗಳೊ ಮಂದಿರದ್ದೋ, ಮಸೀದಿಯದ್ದೋ, ದಗರ್ಾದೋ, ಜೈನ ಬಸದಿಯದ್ದೋ, ಅಥವಾ ಬೌದ್ಧ ವಿಹಾರದ್ದೋ ಎಂಬ ತೀಮರ್ಾನವನ್ನು ಂಖ ವರದಿಯನ್ನು ಆಧರಿಸಿ ಖಚಿತವಾಗಿ ಮಾಡಲು ಸಾಧ್ಯವೇ ಇಲ್ಲ. ಅಥವಾ ಮಂದಿರವಾದಿಗಳು ಈ ವರದಿಯನ್ನು ಆಧರಿಸಿ ಅಲ್ಲಿ ಇದ್ದದ್ದು ಇವ್ಯಾವುದೂ ಅಲ್ಲವೆಂದೂ, ಕೇವಲ ರಾಮಮಂದಿರ ಮಾತ್ರವೆಂದೂ ಖಚಿತವಾಗಿ ಸಾಬೀತು ಸಹ ಮಾಡಿಲ್ಲ. ಅಬ್ಬಬ್ಬಾ ಎಂದರೆ ಂಖ ವರದಿ ಹೇಳುವುದು ಅಲ್ಲಿ ಧಾಮರ್ಿಕ ಅವಶೇಷ ಇದೆ ಎಂದು ಮಾತ್ರ.
ಹೀಗಿರುವಾಗ ಕೋಟರ್ು ವಿವಾದಾಸ್ಪದವಾದ ಂಖ ವರದಿಯನ್ನು ಹೇಗೆ ಯಥಾವತ್ ಒಪ್ಪಿಕೊಂಡಿತು? ಅದರ ಆಧಾರದಲ್ಲಿ ಹೇಗೆ ಮಸೀದಿಯ ಕೆಳಗೆ ಹಿಂದೂ ಧಾಮರ್ಿಕ ರಚನೆಯೋ ಅಥವಾ ನ್ಯಾ.ಶಮರ್ಾ ಹೇಳುವಂತೆ ರಾಮಮಂದಿರವೋ ಇತ್ತು ಎಂಬ ತೀಮರ್ಾನಕ್ಕೆ ಬರಲು ಸಾಧ್ಯವಾಯಿತು? ಮೊದಲಿಂದಲೂ ಈ ನ್ಯಾಯಾಧೀಶರುಗಳು ಹಿಂದೂ ಜನರ ನಂಬಿಕೆ ಮತ್ತು ಶ್ರದ್ಧೆಗಳಿಗೆೆ ಸಾಕ್ಷಿ ಪುರಾವೆಗಳಿಗಿಂತ ಹೆಚ್ಚಿನ ಮಹತ್ವವನ್ನು ಕೊಡುತ್ತಾ ಬಂದಿದ್ದೇ ನ್ಯಾಯಕ್ಕೆ ಈ ರೀತಿ ಘೋರ ಅಪಚಾರವಾಗಲು ಕಾರಣವಾಯಿತು.
3. ವಿವಾದಿತ ಸ್ಥಳದಲ್ಲಿ ಮುಸ್ಲಿಮರು ಬಹಳ ಹಿಂದಿನಿಂದಲೂ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆಯೆ? ಅಲ್ಲಿದ್ದ ಕಟ್ಟಡವನ್ನು ಮಸೀದಿಯೆಂದು ಪರಿಗಣಿಸಬಹುದೇ?
ತೀಪರ್ು: ಇದರ ಬಗ್ಗೆ ನ್ಯಾ.ಶಮರ್ಾರಂತೂ ಒಂದೇ ಉಸಿರಿನಲ್ಲಿ ಬಿಲ್ಕುಲ್ ಅದು ಮಸೀದಿಯಾಗಿರಲಿಲ್ಲವೆಂದೂ ತೀಪರ್ಿತ್ತಿದ್ದಾರೆ. ಅವರ ಪ್ರಕಾರ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಗಿದೆಯಾದ್ದರಿಂದ ಅದು ಇಸ್ಲಾಮಿಕ್ ಪದ್ಧತಿಯ ಪ್ರಕಾರ ಮಸೀದಿ ಎನಿಸಿಕೊಳ್ಳುವುದಿಲ್ಲ. ಆದರೆ ನ್ಯಾ.ಖಾನ್ ಮತ್ತು ನ್ಯಾ. ಅಗರ್ವಾಲ್ ಅವರು ಅದು ಮಸೀದಿಯೇ ಎಂದೂ, ಅಲ್ಲಿ 1949ರ ತನಕ ಮುಸ್ಲಿಮರು ನಮಾಜು ಮಾಡುತ್ತಿದ್ದರೆಂದು ಒಪ್ಪಿಕೊಳ್ಳುತ್ತಾರೆ. ಆದರೆ 1949ರಿಂದ ಮುಸ್ಲಿಮರನ್ನು ನಮಾಜು ಮಾಡದಂತೆ ತಡೆದದ್ದು ಸಕರ್ಾರ ಮತ್ತು ನ್ಯಾಯಾಲಯವೇ ಎನ್ನುವುದನ್ನು ನ್ಯಾಯಾಲಯ ಪರಿಗಣನೆಗೇ ತೆಗೆದುಕೊಂಡಿಲ್ಲ. ಹೀಗಾಗಿ ಹೇಗಿದ್ದರೂ ಈಗ ಅಲ್ಲಿ ಮುಸ್ಲಿಮರು ಹಲವು ದಶಕಗಳಿಂದ ನಮಾಜು ಸಲ್ಲಿಸುತ್ತಿಲ್ಲವಾದ್ದರಿಂದ ಅದನ್ನು ಈಗ ಮಸೀದಿಯೆಂದು ಪರಿಗಣಿಸದಿದ್ದರೂ ಮುಸ್ಲಿಮರು ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
4. 1949ರ ಡಿಸೆಂಬರ್ 22-23ರ ಮಧ್ಯರಾತ್ರಿ ರಾಮ ಪ್ರತಿಮೆಗಳನ್ನು ವಿವಾದಿತ ಸ್ಥಳದಲ್ಲಿ ಸ್ಥಾಪಿಸಲಾಯಿತೋ? ಅಥವಾ ಅದು ಅನೂಚಾನ ಕಾಲದಿಂದಲೂ ಅದು ಅಲ್ಲೇ ಇದೆಯೋ?
ತೀಪರ್ು: ಈ ಪ್ರಶ್ನೆಗೆ ಮಾತ್ರ ಮೂರೂ ಜನ ನ್ಯಾಯಾಧೀಶರು ಡಿಸೆಂಬರ್ 22 ರಾತ್ರಿಯೇ ಅಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆಯೆಂದೂ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೆ ಅಲ್ಲಿ ಪ್ರತ್ರಿಮೆಗಳನ್ನು ತಂದಿಟ್ಟವರು ಯಾರು? ಅವರ ಮೇಲೆ ಕ್ರಮಗಳೆನು? ಪ್ರತಿಮೆ ತಂದಿಟ್ಟಿದ್ದ ಕಾರಣಕ್ಕಾಗಿ ಅಲ್ಲಿ ನಮಾಜು ಮಾಡುವ ಹಕ್ಕನ್ನು ಕಳೆದುಕೊಂಡ ಮುಸ್ಲಿಮರಿಗೆ ಪರಿಹಾರವೇನು? ಈಗಲಾದರೂ ಆ ಮೂತರ್ಿಯನ್ನು ಅಲ್ಲಿಯೇ ಇರಗೊಡಬೇಕೆ? ತೆಗೆಯಬೇಕೆ? ಈ ಯಾವ ಪ್ರಶ್ನೆಗಳಿಗೂ ನ್ಯಾಯಾಲಯ ನ್ಯಾಯಬದ್ಧ ತೀಮರ್ಾನ ನೀಡುವುದಿಲ್ಲ. ಬದಲಿಗೆ ಈ ಪ್ರಕರಣವನ್ನು ಸಹ ಈ ಜಾಗವು ರಾಮಜನ್ಮಸ್ಥಾನವೇ ಎಂಬ ವಾದವನ್ನು ಒಪ್ಪಿಕೊಳ್ಳಲು ಕಾರಣವೆಂಬಂತೆ ಬಳಸಿಕೊಳ್ಳುತ್ತವೆ.
5. ಈ ಪ್ರದೇಶವು ರಾಮನ ಜನ್ಮಸ್ಥಾನವೇ? ಈ ಜಾಗವನ್ನು ಹಿಂದೂಗಳು ರಾಮ ಜನ್ಮ ಭೂಮಿ ಎಂದು ಪರಿಭಾವಿಸಿ ಅನೂಚಾನ ಕಾಲದಿಂದಲೂ ಪ್ರಾರ್ಥನೆ ಮಾಡುತ್ತಾ ಬಂದಿದ್ದಾರೆಯೇ?
ತೀಪರ್ು: ಪ್ರಾಯಶಃ ಈ ಪ್ರಶ್ನೆಗೆ ಕೋಟರ್ು ನೀಡಿರುವ ತೀಪರ್ು ಮತ್ತು ಆ ತೀಮರ್ಾನಕ್ಕೆ ಬರಲು ಅದು ಅನುಸರಿಸಿರುವ ಮಾನದಂಡಗಳು ಈ ದೇಶದ ಜನತೆ ನ್ಯಾಯಾಂಗದ ಬಗ್ಗೆ ಇಟ್ಟಿರುವ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಪ್ರಪ್ರಥಮ ಬಾರಿಗೆ ಒಂದು ನಿದರ್ಿಷ್ಟ ಜಾಗದ ಧಾಮರ್ಿಕತೆಯನ್ನು ನಿರ್ಧರಿಸಲು ನ್ಯಾಯಾಲಯ ಸಾಕ್ಷಿ ಪುರಾವೆಗಳನ್ನು ಬಿಟ್ಟು ಪುರಾಣಗಳನ್ನು ಸಾಕ್ಷ್ಯವಾಗಿಯೇ ಪರಿಗಣಿಸಿದೆ.
ನ್ಯಾ. ಶಮರ್ಾರವರ ಪ್ರಕಾರ ಅಲ್ಲಿ ರಾಮ ಜನ್ಮ ತಾಳಿದ್ದು ನೂರಕ್ಕೆ ನೂರು ನಿಜ. ಏಕೆಂದರೆ ಹಲವಾರು ಪುರಾಣಗಳಲ್ಲಿ ಅಯೋಧ್ಯೆಯಲ್ಲಿ ರಾಮ ಜನ್ಮ ತಳೆದ ಎಂಬ ಉಲ್ಲೇಖವಿದೆ. ಅಷ್ಟು ಮಾತ್ರವಲ್ಲ. ನ್ಯಾ. ಶಮರ್ಾರವರ ಪ್ರಕಾರ ಹಿಂದೂ ಧರ್ಮದ ಪ್ರಕಾರ ದೇವನು ಒಂದು ಸ್ಥಳದಲ್ಲಿದ್ದಾನೆ ಎಂದು ಭಾವಿಸಿದರೆ ಸಾಕು ದೇವರು ಅಲ್ಲಿರುತ್ತಾನೆ. ಹೀಗಾಗಿ ರಾಮನು ಬಾಬ್ರಿ ಮಸೀದಿಯಿದ್ದ ಜಾಗದಲ್ಲೇ ಜನ್ಮ ತಳೆದದ್ದು ಎಂಬ ತೀಮರ್ಾನಕ್ಕೆ ಬರಲು ಯಾವ ಪುರಾವೆಯೂ ಬೇಕಿಲ್ಲ. ಆದರೆ 1949ರ ಡಿಸೆಂಬರ್ ಮಧ್ಯರಾತ್ರಿಯವರೆಗೆ ಅಲ್ಲಿ ರಾಮನ ಪ್ರತಿಮೆ ಇರಲಿಲ್ಲ ಎಂಬುದು ಸಾಬೀತಾಗಿರುವಾಗ ಅದು ಹಿಂದಿನಿಂದಲೂ ರಾಮಮಂದಿರವಾಗಿತ್ತು ಎಂಬ ತೀಮರ್ಾನಕ್ಕೆ ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಗೆ ನ್ಯಾ. ಶಮರ್ಾರವರು ಹಿಂದೂ ಧರ್ಮದ ಪ್ರಕಾರ ದೇವನನ್ನು ಹೇಗೆ ಬೇಕಾದರೂ ಉಪಾಸನೆ ಮಾಡಬಹುದು. ಪ್ರತಿಮೆಯ ಅಗತ್ಯವೇ ಇಲ್ಲ ಎಂಬ ಉತ್ತರ ಕೊಡುತ್ತಾರೆ. ಮಿಕ್ಕಂತೆ ಒಂದು ವಿತಂಡ ವಾದದಂತೆ ಕಾಣುವ ಈ ತೀರ್ಪನ್ನು ನೀಡಿರುವುದು ನಿವೃತ್ತಿಯ ಅಂಚಿನಲ್ಲಿದ್ದ ಹೈಕೋಟರ್ೊಂದರ ಹಿರಿಯ ನ್ಯಾಯಾಧೀಶರೇ!
ನ್ಯಾ.ಖಾನ್ ಅವರಿಗೆ ಅಲ್ಲಿ ರಾಮಮಂದಿರವಿತ್ತೇ ಎಂಬ ಬಗ್ಗೆ ಅನುಮಾನವಿದ್ದರೂ ಹಿಂದೂ ಜನರ ನಂಬಿಕೆಯ ಪ್ರಕಾರ ಅದು ರಾಮಜನ್ಮಭೂಮಿಯೆಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ನಿಲುವಿಗೆ ಬರುತ್ತಾರೆ.
ನ್ಯಾ.ಅಗರವಾಲ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಇಲ್ಲಿ ರಾಮ ಹುಟ್ಟಿದ್ದನೋ ಇಲ್ಲವೋ, ಹಿಂದೂಗಳು ಅಯೋಧ್ಯೆಯನನ್ನು ರಾಮ ಜನ್ಮಭೂಮಿ ಎಂದು ಭಾವಿಸುತ್ತಾರೋ ಇಲ್ಲವೊ ಎಂಬ ಬಗ್ಗೆ ಅವರು 700ಕ್ಕೂ ಹೆಚ್ಚು ವೇದ ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರಂತೆ. ಅದಕ್ಕಾಗಿ ತಮ್ಮ ತೀಪರ್ಿನಲ್ಲಿ 5000ಕ್ಕೂ ಹೆಚ್ಚು ಪುಟಗಳನ್ನೂ ಖಚರ್ು ಮಾಡಿದ್ದಾರೆ. ಇಷ್ಟೆಲ್ಲ ಮಾಡಿ ಅವರು ಬಂದು ತಲುಪುವ ತೀಮರ್ಾನವೇನು?
ಹಿಂದೂ ಧಾಮರ್ಿಕ ಪದ್ಧತಿಯ ಪ್ರಕಾರ ಒಂದು ಜಾಗದಲ್ಲಿ ರಾಮನಿದ್ದಾನೋ ಇಲ್ಲವೋ ಎಂಬ ನಿರ್ಣಯಕ್ಕೆ ಬರಲು ಪ್ರಧಾನವಾಗಿ ಪರಿಗಣಿಸಬೇಕಾದ್ದು ಅವರ ನಂಬಿಕೆಯನ್ನಂತೆ. ಆ ನಂಬಿಕೆಯೇ ಅವರ ಧರ್ಮದ ಅಂತರ್ಗತ ಭಾಗವೂ ಆಗಿಬಿಡುತ್ತದಂತೆ. ಆಗ ಅದು ಸಂವಿಧಾನದ ಆರ್ಟಿಕಲ್ 25 ಕೊಡುವ ಧಾಮರ್ಿಕ ಆಚರಣೆಯ ಹಕ್ಕಿನ ಪ್ರಶ್ನೆಯೂ ಆಗಿಬಿಡುತ್ತದಂತೆ. ಅಂದರೆ ರಾಮನು ಬಾಬ್ರಿ ಮಸೀದಿಯಲ್ಲಿ ಇರುವ ಜಾಗದಲ್ಲಿ ಜನ್ಮ ತಳೆದಿದ್ದ ಎಂಬ ನಂಬಿಕೆ ಹಿಂದೂ ಧರ್ಮದ ಅಂತಭರ್ಾಗವಾಗಿ ಬಿಡುತ್ತದೆ. ಆಗ ಬಾಬ್ರಿ ಮಸೀದಿಯಲ್ಲಿ ರಾಮಪೂಜೆ ಮಾಡುವುದು ಹಿಂದೂಗಳ ಧಾಮರ್ಿಕ ಹಕ್ಕಿನ ಭಾಗವೇ ಆಗಿಬಿಡುತ್ತದೆ ಎಂಬುದು ಅಗರ್ವಾಲ್ರವರ ವಾದ. ಹಾಗೂ ಇಂಥಾ ನಂಬಿಕೆಯನ್ನು ಪ್ರಶ್ನಿಸಲಾಗುವುದಿಲ್ಲ. ಅಂಥಾ ಪ್ರಶ್ನೆ ಕೇಳುವುದರ ಬಗ್ಗೆಯೇ ನ್ಯಾ. ಅಗರ್ವಾಲರು ಕಿಡಿಕಾರುತ್ತಾರೆ. ಅದೇ ಪ್ರಶ್ನೆಯನ್ನು ಪೈಗಂಬರರ ಬಗ್ಗೆ, ಮತ್ತು ಕ್ರಿಸ್ತನ ಬಗ್ಗೆ ಏಕೆ ಕೇಳುವುದಿಲ್ಲ ಎಂದು ವಕೀಲರಂತೆ ಪಾಟಿ ಸವಾಲು ಹಾಕಿ ಪ್ರಶ್ನಿಸುತ್ತಾರೆ.
ಹೀಗಾಗಿ ವಿವಾದಾಸ್ಪದವಾದ ಜಾಗವೊಂದು ಹಿಂದೂಗಳಿಗೆ ಸೇರಬೇಕೋ ಅಥವಾ ಮುಸ್ಲಿಮರಿಗೆ ಸೇರಬೇಕೋ ಎಂಬ ಬಗ್ಗೆ ನ್ಯಾಯಾಲಯ ಈ ತರ್ಕದ ಪ್ರಕಾರ ಸಾಕ್ಷಿ ಪುರಾವೆಗಳಿಗಿಂತ ಪ್ರಮುಖವಾಗುವುದು ಬಹುಸಂಖ್ಯಾತರ ಶ್ರದ್ಧೆ ಮತ್ತು ನಂಬಿಕೆ. ಇದರ ಪರಿಣಾಮವೇನೆಂದು ನಂತರ ಚಚರ್ಿಸೋಣ. ಈಗ ಈ ತರ್ಕವಾದರೂ ಸರಿಯಿದೆಯೇ ಎಂದು ಪರಿಶೀಲಿಸೋಣ.
ನ್ಯಾ. ಅಗರ್ವಾಲರು ಉದ್ಧರಿಸಿರುವ ಗ್ರಂಥಗಳೆಲ್ಲಾ ಹಿಂದೂ ಜನರ ನಂಬಿಕೆಯನ್ನು ಪ್ರತಿಪಾದಿಸುವ ಹೇಳಿಕೆಗಳೇ ಹೊರತು ಅವು ಐತಿಹಾಸಿಕ ಸಾಕ್ಶ್ಯಾಧಾರಗಳಲ್ಲ. ಅವು ಒಂದು ರೂಲ್ ಆಫ್ ಲಾ- ಎಲ್ಲರಿಗೂ ಒಂದೇ ಕಾನೂನು- ಎಂಬ ನಿಯಮಾನುಸಾರ ನಡೆಯುವ ಆಧುನಿಕ ಪ್ರಜಾಪ್ರಭುತ್ವದಲ್ಲಿ ಸಾಕ್ಷ್ಯಗಳಾಗುವುದಿಲ್ಲ. ಎರಡನೆಯದಾಗಿ ರಾಮನು ಹಿಂದೂ ಧರ್ಮದ ಅಂತರ್ಗತ ಭಾಗವೆಂಬುದಕ್ಕೆ ಯಾವ ಧಾಮರ್ಿಕ ಪುರಾವೆಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ? ಅದೂ ಸಹ ಒಂದು ನಂಬಿಕೆಯಷ್ಟೆ. ಏಕೆಂದರೆ ಹಿಂದೂ ಧರ್ಮದವರೆಂದು ಪರಿಗಣಿಸಲಾಗುವ ಬಹುಸಂಖ್ಯಾತ ಜನರಿಗೆ ರಾಮ ದೇವರಲ್ಲ. ದಲಿತರಂತೂ ತಮ್ಮನ್ನು ಹಿಂದುಗಳೇ ಅಲ್ಲವೆಂದು ಪರಿಗಣಿಸಿಕೊಳ್ಳುತ್ತಾರೆ. ಹಾಗಿದ್ದ ಮೇಲೆ ರಾಮನ ಕಲ್ಪನೆ ಬಹುಸಂಖ್ಯಾತ ಹಿಂದೂಗಳ ಧಾಮರ್ಿಕ ನಂಬಿಕೆಯ ಅಂತರ್ಗತ ಭಾಗ ಎಂಬ ತೀಮರ್ಾನಕ್ಕೆ ಬರಲು ಹೇಗೆ ಸಾಧ್ಯ? ಅದು ಒಂದು ಸ್ಥಳದ ಧಾಮರ್ಿಕ ಸ್ವರೂಪದ ಬಗ್ಗೆ ವಿವಾದವಿದ್ದಾಗ ಯಾವ ತಳಹದಿಯೂ ಇಲ್ಲದೆ ಇಂಥ ವಿವಾದಾತ್ಮಕ ತೀಮರ್ಾನಕ್ಕೆ ಹೇಗೆ ಬರಲು ಸಾಧ್ಯ? ಅತಿ ಮುಖ್ಯವಾಗಿ ಉಲ್ಲೇಖಗೊಂಡಿರುವ ಪುರಾಣಗಳು ರಾಮನ ಜನ್ಮಸ್ಥಾನ ಅಯೋಧ್ಯೆಯೇ ಎಂದು ಹೇಳುತ್ತವೆಯೇ ವಿನಃ, ರಾಮ ಬಾಬ್ರಿ ಮಸೀದಿ ಇದ್ದ 115*95 ಅಡಿ ವಿಸ್ತೀರ್ಣದಲ್ಲಿ ಜನ್ಮ ತಳೆದ ಎಂದೇನೂ ಹೇಳುವುದಿಲ್ಲ. ಇತಿಹಾಸಕಾರರು ಹೇಳುವಂತೆ ಬಾಬ್ರಿ ಮಸೀದಿಯೇ ರಾಮಜನ್ಮಭೂಮಿ ಎಂಬ ನಂಬಿಕೆ ಬ್ರಿಟಿಷರ ನಂತರದ್ದು.
ಹೀಗಿರುವಾಗ ಯಾವ ಕಾನೂನು, ಸಾಕ್ಷ್ಯ, ಪುರಾವೆ, ಸಂವಿಧಾನಿಕ ಮೌಲ್ಯಗಳ ಆಧಾರದಲ್ಲಿ ಬಾಬ್ರಿ ಮಸೀದಿಯಲ್ಲೇ ರಾಮಜನ್ಮಭೂಮಿ ಇದೆಯೆಂಬ ನಿರ್ಣಯಕ್ಕೆ ಬರಲು ಸಾಧ?
ಪ್ರಾಯಶಃ ಸ್ವತಂತ್ರ ಭಾರತದಲ್ಲಿರಲಿ ಬ್ರಿಟಿಷ್ ಭಾರತವೂ ಸಹ ಈ ರೀತಿ ಒಂದು ಸಿವಿಲ್ ವಿವಾದವನ್ನು ಬಗೆಹರಿಸಲು ಬಹುಸಂಖ್ಯಾತರ ನಂಬಿಕೆ ಮತ್ತು ಶ್ರದ್ಧೆಯನ್ನು ಏಕೈಕ ಮಾನದಂಡವಾಗಿ ಪರಿಗಣಿಸಿರಲಿಲ್ಲ. ಉದಾಹರಣೆಗೆ 1886ರಲ್ಲಿ ಇದೇ ವಿವಾದವನ್ನು ಬಗೆಹರಿಸುತ್ತಾ ಬ್ರಿಟಿಷ್ ನ್ಯಾಯಾಧೀಶ ಯಂಗ್ ಹೇಳಿದ್ದು ಹಿಂದೂಗಳ ನಂಬಿಕೆಯ ಪ್ರಕಾರ ಇಲ್ಲಿ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿರುವುದು ನಿಜವೇ ಎಂದಿಟ್ಟುಕೊಂಡರೂ 350 ವರ್ಷಗಳ ಕೆಳಗೆ ಆಗಿಹೋಗಿರುವ ವಿಷಯಕ್ಕೆ ಈಗ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದೇ ರೀತಿ ಲಾಹೋರಿನಲ್ಲ್ಲಿ 18 ನೇ ಶತಮಾನದಲ್ಲಿ ಇದ್ದ ಮಸೀದಿಯನ್ನು ಸಿಖ್ ಆಡಳಿತದಲ್ಲಿ ಗುರುದ್ವಾರವಾಗಿ ಪರಿವರ್ತನೆಗೊಳ್ಳುತ್ತದೆ. ಅದನ್ನು ತಮಗೆ ಮರಳಿಸಬೇಕೆಂಬ ದೂರನ್ನು ಮುಸ್ಲಿಮರು ಪ್ರಿವೀ ಕೌನ್ಸಿಲ್ಗೆ ಒಯ್ದಾಗಲೂ ಇತಿಹಾಸದಲ್ಲಿ ಆದ ಸಂಗತಿಗಳಿಗೆ ಈಗ ಪರಿಹಾರ ಒದಗಿಸಲು ಸಾಧ್ಯವಿಲ್ಲೆವೆಂದು ತೀಮರ್ಾನವಾಗುತ್ತದೆ. ಆ ಗುರುದ್ವಾರ ಈಗಲೂ ಪಾಕಿಸ್ತಾನದಲ್ಲಿ ನಾಶಗೊಳ್ಳದೆ ಅಸ್ಥಿತ್ವದಲ್ಲಿದೆ.
ಆದರೆ ಒಂದು ಆಧುನಿಕ ಪ್ರಜಾಪ್ರಭುತ್ವದ ಸೆಕ್ಯುಲಾರ್ ಸಂವಿಧಾನದ ಆಧಾರದಲ್ಲಿ ನಡೆಯುವ ದೇಶವೊಂದರ ನ್ಯಾಯಾಲಯ 60 ವರ್ಷಗಳ ನಂತರ ನೀಡುವ ತೀಪರ್ಿಗೆ ಪ್ರಧಾನವಾಗಿ ಆಧರಿಸುವುದು ಬಹುಸಂಖ್ಯಾತರೆಂದು ಹೇಳಿಕೊಳ್ಳುವ ಕೂಗುಮಾರಿಗಳ ನಂಬಿಕೆ ಮತ್ತು ಶ್ರದ್ಧೆಗಳನ್ನು!
ಹೀಗೆ ಸಾಕ್ಷಿ, ಪುರಾವೆ ಮತ್ತು ಕಾನೂನುಗಳನ್ನೆಲ್ಲಾ ಪರಿಗಣಿಸದೆ ಕೇವಲ ಬಹುಸಂಖ್ಯಾತರೆಂದು ಹೇಳಿಕೊಳ್ಳುವವರ ಶ್ರದ್ಧೆ ಮತ್ತು ನಂಬಿಕೆಗಳೇ ನ್ಯಾಯ ತೀಮರ್ಾನದ ಮಾನದಂಡವಾಗಿಬಿಟ್ಟರೆ ಬಹುಸಂಸ್ಕ್ರತಿ ಮತ್ತು ಬಹು ಧಮರ್ಿಯರ ದೇಶವಾದ ಈ ಭಾರತ ಒಂದು ದೇಶವಾಗಿ ಉಳಿಯಲು ಸಾಧ್ಯವೇ?

ಕಾಯುವವರೇ ಕೊಲ್ಲುವವರಾದರೆ, ನ್ಯಾಯಾಧೀಶರೇ ವಕೀಲರಾದರೆ?
ಸಾರಾಂಶದಲ್ಲಿ ಈ ತೀಪರ್ು 1949ರಲ್ಲಿ ಗೂಂಡಾಗಿರಿ ಮಾಡಿ ಪ್ರತಿಮೆಗಳನ್ನು ತಂದಿಟ್ಟವರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವಿದವರನ್ನು ಶಿಕ್ಷಿಸುವ ಬದಲು ಸನ್ಮಾನಸಿದೆ. ಏಕೆಂದರೆ ಬಾಬ್ರಿ ಮಸಿದಿಯನ್ನು ತಾವು ನಾಶ ಮಾಡಲು ಕಾರಣ ಅಲ್ಲಿ ರಾಮ ಜನ್ಮ ತಳೆದಿದ್ದ ಎಂಬ ಮತ್ತು ರಾಮಮಂದಿರವನ್ನು ಕೆಡವಿಯೇ ಅಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ ಎಂಬ ತಮ್ಮ ನಂಬಿಕೆಯಿಂದಲೇ ಎಂದು ಸಂಘಪರಿವಾರ ಹೇಳಿಕೊಂಡು ಬಂದಿದೆ. ಬಾಬ್ರಿ ಮಸೀದಿಯ ಮಧ್ಯ ಗುಮ್ಮಟವಿದ್ದ ಜಾಗದಲ್ಲೇ ರಾಮನು ಜನ್ಮ ತಳೆದಿದ್ದಾನೆಂಬುದು ನಮ್ಮ ನಂಬಿಕೆಯಾದ್ದರಿಂದಲೇ ಗುಮ್ಮಟವನ್ನು ಒಡೆದುಹಾಕಿದವೆಂದು ಮಸೀದಿ ನಾಶ ಮಾಡಿದ ಆರೆಸ್ಸೆಸ್ಸಿಗರು ಸಮಥರ್ಿಸಿಕೊಂಡಿದ್ದರು. ಈಗ ಮೂರೂ ನ್ಯಾಯಾಧೀಶರು ಜಾಗವನ್ನು ಹಂಚಿಕೊಡುವಾಗ ಗುಮ್ಮಟದ ಮಧ್ಯಭಾಗದಲ್ಲಿ ರಾಮ ಜನ್ಮ ತಳೆದಿದ್ದ ಎಂದು ಹಿಂದೂಗಳು ಭಾವಿಸುತ್ತಾರಾದ್ದರಿಂದ ಅದನ್ನು ಅವರಿಗೇ ಕೊಡಬೇಕೆಂದು ಆದೇಶಿಸಿದ್ದಾರ. ಆ ಮೂಲಕ ಬುನಾದಿಯಿಲ್ಲದ ನಂಬಿಕೆಯ ಆಧಾರದಲ್ಲಿ ಸಂಘಪರಿವಾರ ಮಾಡಿದ ಗುಮ್ಮಟ ನಾಶವನ್ನು ನ್ಯಾಯಾಲಯ ಪರೋಕ್ಷವಾಗಿ ನ್ಯಾಯವೆಂದು ಸಮಥರ್ಿಸಿ ನ್ಯಾಯಬದ್ಧಗೊಳಿಸಿದೆ. ಸತ್ಯವೋ, ಸುಳ್ಳೋ ಬಹುಸಂಖ್ಯಾತರ ನಂಬಿಕೆಯನ್ನು ಗೌರವಿಸಿ ಬಾಬ್ರಿ ಮಸೀದಿ ಇರುವ ಜಾಗದಲ್ಲಿ ಭವ್ಯ ರಾಮಮಂದಿರ ಕಟ್ಟಿಕೊಳ್ಳಲು ಮುಸ್ಲಿಮರು ಸಹಕರಿಸಬೇಕೆಂದು ಸಂಘಪರಿವಾರ ಬಹಿರಂಗವಾಗಿ ಅಲ್ಪಸಂಖ್ಯಾತರನ್ನು ಬ್ಲಾಕ್ಮೇಲ್ ಮಾಡುತ್ತಿದೆ. ಈ ತೀಪರ್ು ಅದಕ್ಕೆ ಬೇಕಾದ ಕಾನೂನನ ದಾರಿಯನ್ನು ಸುಗಮಗೊಳಿಸಿದಂತಾಗಿದೆ, ಮೂರನೇ ಒಂದು ಭಾಗದಷ್ಟು ಜಾಗವನ್ನು ನ್ಯಾಯಾಲಯ ಮುಸ್ಲಿಮರಿಗೆ ಕೊಟ್ಟಿದೆ. ಆದರೆ ಅಲ್ಲಿ ಮುಸ್ಲಿಮರು ಮಂದಿರದ ಪಕ್ಕದಲ್ಲಿ ಮಸೀದಿಯನ್ನು ನಮರ್ಿಸಿಕೊಳ್ಳಲು ಸಾಧ್ಯವೇ? ಈಗಾಗಲೆ ವಿಶ್ವಹಿಂದೂ ಪರಿಷತ್ತಿನ ತೊಗಾಡಿಯಾ ಅವರು ಮಂದಿರದ ಕನಷ್ಟ 10 ಕಿಮೀ ಫಾಸಲೆಯಲ್ಲಿ ಮಸೀದಿ ನಮರ್ಾಣಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದು ಘೋಷಿಸಿದ್ದಾರೆ.. ಹಾಗೂ ಮುಸ್ಲಿಮರು ಪ್ರಾಕ್ಟಿಕಲ್ ಆಗಿ ಯೋಚಿಸಿ ಸುಪ್ರಿಂ ಕೋಟರ್ಿಗೆ ಮೇಲ್ಮನವಿ ಮಾಡಿಕೊಳ್ಳದೆ ರಾಜಿಗೆ ಬರಬೇಕೆಂದು ಸಂಘಪರಿವಾರ ಆಗ್ರಹಿಸಿದೆ. ಇಲ್ಲಿ ರಾಜಿ ಎಂದರೆ ಅರ್ಥ ತಮ್ಮ ಮೂರನೇ ಒಂದು ಜಾಗವನ್ನು ಬಿಟ್ಟುಕೊಡಿ ಎಂದು. ಪ್ರಾಕ್ಟಿಕಲ್ ಎಂದರೆ ಇತಿಹಾದದಲ್ಲಿ ಆದ ರಕ್ತಪಾತ ನೆನಪಿರಲಿ ಎಂಬುದೇ ಅಲ್ಲವೇ? ಹೀಗೆ ಈ ತೀಪರ್ು ಸಂಘಪರಿವಾರದ ಫ್ಯಾಸಿಸ್ಟ್ ಶಕ್ತಿಗಳಿಗೆ ಇನ್ನಲ್ಲದ ಬಲವನ್ನು ತಂದುಕೊಟ್ಟು ಭಾರತದ ಪ್ರಜಾಸತ್ತೆಯನ್ನು ಸೆಕ್ಕ್ಯುಲಾರ್ ಬದುಕನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ಅಷ್ಟು ಮಾತ್ರವಲ್ಲ. ಈಗಾಗಲೇ ಸಂಘಪರಿವಾರವು ಇಂಥಾ 2000 ಮಸೀದಿ ಮತ್ತು ಚಚರ್ುಗಳಲ್ಲಿ ತಮ್ಮ ದೇವರು ಹುಟ್ಟಿದ್ದಾರೆ ಅಥವಾ ಬೆಳೆದಿದ್ದಾರೆ ಎಂಬ ತಮ್ಮ ನಂಬಿಕೆಯ ವಾದವನ್ನು ಮುಂದಿಟ್ಟಿದ್ದಾರೆ. ಅದರಲ್ಲಿ 72 ಸ್ಥಳಗಳು ಕನರ್ಾಟಕದಲ್ಲಿವೆ. ಈ ತೀಪರ್ಿನಲ್ಲಿ ನ್ಯಾಯಾಧೀಶರು ಅನುಸರಿಸಿದ ಮಾರ್ಗವೇ ಮೇಲ್ಪಂಕ್ತಿಯಾದರೆ ಇದು ದೇಶಾದ್ಯಂತ ಎಂಥಾ ಅರಾಜಕತೆಯನ್ನೂ, ಕೋಮು ಸಂಘರ್ಷವನ್ನೂ ಹುಟ್ಟುಹಾಕಬಹುದು?
ಈಗ ಎರಡೂ ಪಕ್ಷಗಳು ಸುಪ್ರೀಂ ಕೋಟರ್ಿಗೆ ಮೇಲ್ಮನವಿ ಹೋಗಲು ಮುಂದಾಗಿವೆ. ದೇಶದ ವರಿಷ್ಟ ನ್ಯಾಯಾಲಯವಾದರೂ ದೇಶದಲ್ಲಿ ಸಂವಿಧಾನವನ್ಣೂ ಕಾನೂನು ಬದ್ಧ ಅಡಳಿತವನ್ನೂ ಎತ್ತಿ ಹಿಡಿಯಬಹುದೇ? ಹಾಗಿಲ್ಲದೆ ಬಹುಸಂಖ್ಯಾತರ ನಂಬಿಕೆ ಮತ್ತು ಶ್ರದ್ಧೆಗಳೇ ನ್ಯಾಯಸಂಹಿತೆಯಾಗಿಬಿಟ್ಟರೆ ಈ ದೇಶ ಛಿದ್ರ ಛಿದ್ರವಾಗುವುದಿಲ್ಲವೇ? ಹಾಗಾಗದಿರಲಿ. ನ್ಯಾಯಾಲಯವೇ ಮಸೀದಿ ಕೆಡವಿ ಮಂದಿರ ಕಟ್ಟುವಂತೆ ಆಗದಿರಲಿ.

ಇತಿಹಾಸದ ಭೂತ ಭವಿಷ್ಯದ ಬೆನ್ನು ಬಿಡದ ಹೊರತು..!
1947ಕ್ಕೂ ಹಿಂದೆ ಈ ದೇಶದಲ್ಲಿ ಧರ್ಮಗಳ ನಡುವೆ, ಶ್ರದ್ಧೆಗಳ ನಡುವೆ ಸಾಕಷ್ಟು ಕಲಹಗಳು ನಡೆದು ಹೋಗಿವೆ. 47ರ ಆಗಸ್ಟ್ 15ರ ನಂತರ ಈ ದೇಶದ ನಾಗರಿಕರಿಂದಲೂ ಸಮಾನತೆ ಮತ್ತು ಭ್ರಾತೃತ್ವದಿಂದ ಬಾಳಲು ಸಂಕಲ್ಪ ತೊಟ್ಟಿದ್ದೇವೆ. ಆದುದರಿಂದ ಇತಿಹಾಸಗಳ ಸಂಗತಿಗಳನ್ನು ಇತಿಹಾಸಕ್ಕೆ ಬಿಟ್ಟು ಹೊಸದಾಗಿ ಬದುಕು ಕಟ್ಟುವ ಭವಿಷ್ಯ ಮುಖಿ ರಾಜಕೀಯ ಮತ್ತು ನ್ಯಾಯಸಂಹಿತೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 1991ರ ಸಂಸತ್ತಿನಲ್ಲಿ ಠಿಟಚಿಛಿಜ ಠಜಿ ತಿಠಡಿಠಿ (ಠಿಜಛಿಚಿಟ ಠಿಡಿಠತಠಟಿ) ಚಿಛಿಣ-1991 ಎಂಬ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಶ್ರದ್ಧಾ ಕೇಂದ್ರಗಳ ಬಗ್ಗೆ ವಿವಾದವಿದ್ದರೂ ್ನಶೃದ್ಧಾ ಕೇಂದ್ರಗಳನ್ನು 1947ರ ಆಗಸ್ಟ್ 15ರಂದು ಯಾವ ಸ್ಥಿತಿಯಲ್ಲಿತ್ತೋ, ಯಾವ ಧಾಮರ್ಿಕ ಸ್ವರೂಪದಲ್ಲಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಬೇಕೆಂದು ನಿದರ್ೇಶಿಸಲಾಗಿದೆ. ದುರದೃಷ್ಟವಶಾತ್ ಬಾಬರಿ ಮಸೀದಿ ವಿವಾದವೊಂದನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
1947ರ ಹಿಂದಿನ ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಆಯಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡ ಬರಬೇಕು ಎಂಬ ಈ ಕಾಯಿದೆಯ ತರ್ಕ, ಅತ್ಯಂತ ನ್ಯಾಯೋಚಿತವಾದುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಬಾಬರಿ ಮಸೀದಿ ವಿವಾದಕ್ಕೂ ಇದೇ ಮಾನದಂಡ ಅನ್ವಯವಾದರೆ ಮಾತ್ರ ಈ ವಿವಾದ ನ್ಯಾಯೋಚಿತವಾಗಿ ಬಗೆಹರಿಯುತ್ತದೆ.
ಶಾಂತಿ ಅತ್ಯಂತ ಮುಖ್ಯವಾದುದು. ಆದರೆ ಅದು ಅನ್ಯಾಯದ ನೆಲೆಗಟ್ಟಿನಿಂದ ಮೂಡಿದ ಶಾಂತಿಯಾದರೆ ಅದರ ಬಾಳು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ನ್ಯಾಯದ ನೆಲೆಗಟ್ಟಿನಿಂದ ಆರಳುವ ಶಾಂತಿಯೇ ಶಾಶ್ವತವಾದದು ಮತ್ತು ಸೌಹಾರ್ದಯುತವಾದುದು.

ಶಿವಸುಂದರ್,
ಲೇಖಕರು, ಗೌರಿ ಲಂಕೇಶ ಬಳಗ.