Tuesday, November 30, 2010

ನೂರಾರು ಜೀವ ಉಳಿಸಿರುವ ಡಾ.ಮಾವಿನಕಟ್ಟಿ.


ಉತ್ತಮ ಸಮಾಜಕ್ಕಾಗಿ ಅವಿರತ ಶ್ರಮ ಹಾಕುವವರು ನಮ್ಮ ಹಿಂದೆಮುಂದಿರುತ್ತಾರೆ. ಅದರಲ್ಲಿ ಕೆಲವರು ಬೆಳಕಿಗೆ ಬಂದರೆ, ಇನ್ನೂ ಕೆಲವರು ಸಮಾಜದ ಮೇಲ್ಮುಖಕ್ಕೆ ಬರದೇ, ಪರದೆಯ ಹಿಂದೆಯೇ ತಮ್ಮ ಸೇವೆಯನ್ನು ಸಲ್ಲಿಸುತ್ತಿರುತ್ತಾರೆ. ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಈ ಎಲೆಮರೆಯಕಾಯಿ ಅಂಕಣ ಹೊರಲಿದೆ ಎಂದು ಭಾವಿಸಿ ನೂತನವಾಗಿ ಆರಂಭಿಸುತ್ತಿದ್ದೇವೆ. (ಸಂ)

ನೂರಾರು ಜೀವ ಉಳಿಸಿರುವ ಡಾ.ಮಾವಿನಕಟ್ಟಿ.

ಸಾಮಾನ್ಯರ ಜೊತೆ ಸಾಮಾನ್ಯರಾಗಿ, ಪ್ರಾಮಾಣಿಕ ಕರ್ತವ್ಯದಿಂದ, ನೂರಾರು ಜೀವಗಳನ್ನು ಉಳಿಸಿದ ಡಾ ರವೀಂದ್ರನಾಥ ಮಾವಿನಕಟ್ಟಿಯವರು ಹಟ್ಟಿಯ ಸುತ್ತಮುತ್ತಲಿನ ಹಳ್ಳಿಗಳ ಕೆಲವೊಂದು ಕುಟುಂಬಗಳ ಪಾಲಿಗೆ ಕಣ್ಣಿಗೆ ಕಾಣುವ ದೇವರೇ ಸರಿ. ಯಾಕೆಂದರೆ, ಇವರು ಹಾವುಗಳು ಕಚ್ಚಿದಾಗ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುವ ವ್ಯಕ್ತಿ ಮತ್ತು ಕುಟುಂಬಕ್ಕೆ ಆಪದ್ಭಾಂಭವರಾಗಿ, ಹಗಲಿರುಳು ಶ್ರಮಿಸಿ ಜೀವಗಳನ್ನು ಉಳಿಸುತ್ತಾರೆ.ಅಂತಹ ವ್ಯಕ್ತಿಯ ವಿವರಣೆ ನೀಡಲು ಈ ಸಂಚಿಕೆಯಲ್ಲಿ ನಾವು ಪ್ರಯತ್ನಿಸಿದ್ಧಿವಷ್ಟೇ.. ಹೈದರಬಾದ್ ಕನರ್ಾಟಕ ಭಾಗದಲ್ಲಿ ಹೆಸರಾದ ಅರವಳಿಕೆ ತಜ್ಞರಾದ ರವೀಂದ್ರನಾಥ ಈರಪ್ಪ ಮಾವಿನಕಟ್ಟಿಯವರು 20-07-1964 ರಂದು ಶ್ರಿಮತಿ ಬಸವಲಿಂಗಮ್ಮ ಹಾಗೂ ಈರಪ್ಪ ದಂಪತಿಗಳ ಮಗನಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆಯಾದ ಈರಪ್ಪನವರು ಸಕರ್ಾರಿ ಶಾಲೆಯ ಶಿಕ್ಷಕರು ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ತಂದೆಗೆ ಐವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿ ಒಟ್ಟು 7ಜನ ಮಕ್ಕಳು. ಅದರಲ್ಲಿ ಮಾವಿನಕಟ್ಟಿಯವರು 6ನೇಯವರು. ತಾಯಿ ಬಸಲಿಂಗಮ್ಮನವರು ಕೂಡ ಅದೇ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ, ಕೊನೆಗೆ ಶಾಲೆಯ ಮುಖ್ಯಗುರುಗಳಾಗಿ ಕೆಲಸ ಮಾಡಿದವರು.ಗುರುಗಳ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದ ರವೀಂದ್ರನಾಥ ಮಾವಿನಕಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಸ್ವಗ್ರಾಮದಲ್ಲಿ ಪೂರೈಸಿ, ಪ್ರೌಢಶಿಕ್ಷಣವನ್ನು ಬಿಜಾಪೂರದ ಸೈನಿಕ ಶಾಲೆ, 1984-89 ರಲ್ಲಿ ಬಳ್ಳಾರಿಯ ಸಕರ್ಾರಿ ವೈದ್ಯಕೀಯ ಕಾಲೇಜಿನಲ್ಲಿ ವೈಧ್ಯಕೀಯ ಶಿಕ್ಷಣವನ್ನು ಮುಗಿಸಿದರು.ನಂತರ ಡಿಪ್ಲೋಮಾ ಇನ್ ಅನೇಸ್ತೇಷಿಯಾ ಎಂಬ ಕೋಸರ್್ನ್ನು ಜೆ.ಎನ್.ಎಂ.ಸಿ ಮೆಡಿಕಲ್ ಕಾಲೇಜು ಬೆಳಗಾವಿಯಲ್ಲಿ 1991ರಿಂದ 1993ರವೆಗೆ ಯಶಸ್ವಿಯಾಗಿ ಮುಗಿಸಿ, ಬಿಜಾಪೂರದ ಅಲ್ಅಮೀನ್ ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗದಲ್ಲಿ ಉಪನ್ಯಾಸಕರಾಗಿ ಸೆಪ್ಟೆಂಬರ್ 1993ರಿಂದ ಎಪ್ರೀಲ್ 1998ರವರೆಗೆ 5ವರ್ಷಗಳ ಕಾಲ ಸೇವೆ ಸಲ್ಲಿಸಿದರು.ತದನಂತರ 1998ರಲ್ಲಿ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ಬಂದು ಸತತ 12 ವರ್ಷಗಳಿಂದ ತಮ್ಮ ಅಮೋಘ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಹಟ್ಟಿ ಆಸ್ಪತ್ರೆಯ ಆರಂಭದಿಂದ ಇಲ್ಲಿಯವರೆಗೆ ಮಹತ್ತರ ಸಾಧನೆ ಮಾಡಿರುವ ಕೆಲವೇ ಕೆಲವು ಪ್ರತಿಭಾನ್ವಿತ ವೈಧ್ಯರ ಪಟ್ಟಿಯಲ್ಲಿ ಮಾವಿನಕಟ್ಟಿಯವರು ಸೇರುತ್ತಾರೆ. ಪ್ರಸ್ತುತ ಇವರು ಹಟ್ಟಿಯ ಆಸ್ಪತೆಯಲ್ಲಿ ಅನೇಸ್ತೇಷಿಯನ್ ಹುದ್ದೆಯ ಜೊತೆ ಹೆಚ್ಚುವರಿಯಾಗಿ ರಕ್ತನಿಧಿ ಬಂಡಾರವನ್ನು ನೋಡಿಕೊಳ್ಳುತ್ತಿದ್ದಾರೆ.ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾರಿಗಾದರೂ ಹಾವುಗಳು ಕಚ್ಚಿದಾಗ ಮೊದಲಿಗೆ ಡಾ. ಮಾವಿನಕಟ್ಟಿಯವರ ಹತ್ತಿರಕ್ಕೆ ಓಡಿ ಬರುತ್ತಾರೆ. ಯಾಕೆಂದರೆ ಇವರು ತಮ್ಮ ವಿಧ್ಯಾನುಭವದಿಂದ ಎಷ್ಟೋ ಬಡಜೀವಗಳನ್ನು ಉಳಿಸಿ ಈ ಭಾಗದಲ್ಲಿ ಹೆಸರು ಮಾಡಿದ್ದಾರೆ.ಯಾವುದೇ ವ್ಯಕ್ತಿಗೆ ಮೊದಲಿಗೆ ಹಾವು ಕಡಿದ ತಕ್ಷಣ ಆತನ ಸ್ನಾಯುಗಳು ಹಾಗೂ ನರಗಳ ಎಳೆಯುವಿಕೆಯಿಂದ ಉಸಿರಾಟಕ್ಕೆ ತೊಂದರೆಯಾಗಿ ವ್ಯಕ್ತಿ ಮರಣವನ್ನಪ್ಪುವ ಸಾಧ್ಯತೆಗಳಿರುತ್ತವೆ. ಹಾವು ಕಡಿದಾಗ ಮೊದಲಿಗೆ ಕಚ್ಚಿದ ಭಾಗದಿಂದ 6ಇಂಚು ಮೇಲ್ಬಾಗದಲ್ಲಿ ರಕ್ತ ಮುಂದೆ ಹೋಗದಂತೆ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಬೇಕು. ಇದರಿಂದ ಹಾವಿನ ವಿಷ ಮೇಲಕ್ಕೇರದಂತೆ ತಡೆಹಿಡಿಯಬಹುದು. ಮತ್ತು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ ಆಲೋಚನೆ ಪ್ರತಿಯೊಬ್ಬರಿಗೆ ಆ ಕ್ಷಣದಲ್ಲಿ ಬರುವುದಿಲ್ಲ. ಆದರೆ, ಈ ರೀತಿಯ ಪ್ರಥಮ ಚಿಕಿತ್ಸೆಯಿಂದ ಜೀವಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳಬಹುದು ಎಂದು ಡಾ.ಮಾವಿನಕಟ್ಟಿಯವರು ಹಾವು ಕಡಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕೆಂದು ಯಾರಾದರೂ ಪ್ರಶ್ನಿಸಿದಾಗ ಅವರಿಗೆ ಮೇಲಿನಂತೆ ವಿವರಣಿ ನೀಡುತ್ತಾರೆ.ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ಬಂದ ನಂತರ ಇವರು 400ಕ್ಕೂ ಹೆಚ್ಚು ಹಾವು ಕಡಿತದ ರೋಗಿಗಳನ್ನು ಗುಣಪಡಿಸಿದ್ದಾರೆ. ಇದಲ್ಲದೇ ವಿಷ ಕುಡಿದು ಬಂದಂತಹ ರೋಗಿಗಳ ಜೀವಗಳನ್ನು ಉಳಿಸಿದ್ದಾರೆ. ಇವರ ಅಮೋಘ ಸೇವೆಯನ್ನು ಕಂಡು ಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಸದಾ ನೆನಪಿಸಿ ಕೊಳ್ಳುತ್ತಾ ಕೊಂಡಾಡುತ್ತಾರೆ. ಇಂತಹ ವೈಧ್ಯರ ಅವಶ್ಯಕತೆ ನಮ್ಮ ಭಾಗಕ್ಕೆ ಅತ್ಯವಶ್ಯಕ. ಜೊತೆಗೆ ವಕೀಲರಾದ ಮಾವಿನ ಕಟ್ಟಿಯವರ ಶ್ರೀಮತಿ ಮಂಜುಳ ಮಾವಿನಕಟ್ಟಿಯವರು ತಮ್ಮ ವೃತ್ತಿಗೆ ನ್ಯಾಯ ಸಲ್ಲಿಸುವದರೊಂದಿಗೆ ತಮ್ಮ ಪತಿಯವರಿಗೂ ಸಮಾಜ ಸೇವೆಯಲ್ಲಿ ಸಹಕಾರಿಯಾಗಿದ್ದಾರೆ. ದಂಪತಿಗಳಿಗೆ ಇರ್ವರು ಪುತ್ರರಿದ್ದು ಮೊದಲನೇಯದವನಾದ ಅಕ್ಷಯ ಎಂಬಾತ ಬೆಳಗಾವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯಲ್ಲಿದ್ದು, ಇನ್ನೊರ್ವ ಪುತ್ರ ಶಿವಂ ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾನೆ.ವಿಶಾಲ ಸಮಾಜಕ್ಕೆ ಮಾವಿನಕಟ್ಟಿ ಕುಟುಂಬ ಸಲ್ಲಿಸುತ್ತಿರುವ ಅಪಾರ ಸೇವೆ ನಿಜಕ್ಕೂ ಶ್ಲಾಘನಾರ್ಹವಾದದ್ದು. ಡಾ. ಮಾವಿನಕಟ್ಟಿಯವರು ಮುಂದೆಯೂ ಉತ್ತಮ ಸೇವೆಯನ್ನು ಸಮಾಜದ ಸ್ವಾಸ್ಥ್ಯಕ್ಕಾಗಿ ಸಲ್ಲಿಸಲಿ ಎಂದು ಪತ್ರಿಕೆ ಹಾರೈಸುತ್ತದೆ

ಮಾಧ್ಯಮಗಳು, ಸಕರ್ಾರಗಳು, ಪ್ರಶಸ್ತಿಗಳು.

ಮಾಧ್ಯಮಗಳು, ಸಕರ್ಾರಗಳು, ಪ್ರಶಸ್ತಿಗಳು.

ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸಕರ್ಾರ ಕನರ್ಾಟಕದಲ್ಲಿ ಎಲ್ಲ ಕ್ಷೇತ್ರಗಳನ್ನು ಹೊಲಸೆಬ್ಬಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಆಪರೇಷನ್ ಕಮಲ ಮಾಡಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂಬುದು ಮಾತ್ರ ಎಲ್ಲರಿಗೆ ತಿಳಿದಿರುವ ವಿಷಯ. ಆದರೆ, ಸ್ವಲ್ಪ ಆಳವಾಗಿ ಬಿಜೆಪಿಯ ಒಳಹೊಕ್ಕು ನೋಡಿದರೆ, ಕೇಸರಿ ಪಕ್ಷ ಎಲ್ಲ ಕ್ಷೇತ್ರಗಳಲ್ಲಿಯೂ ಆಪರೇಷನ್ ಮಾಡಿರುವುದು ನಮಗೆ ಗೋಚರಿಸುತ್ತದೆ.ರೆಡ್ಡಿಗಳ ಹಣ, ಅಧಿಕಾರ ಬಲ, ಯಡಿಯೂರಪ್ಪನ ಮಕ್ಕಳ ಸವರ್ಾಧಿಕಾರ, ಚೆಡ್ಡಿಗಳ ಹಸ್ತಕ್ಷೇಪ, ಬಿಜೆಪಿ ಹೈಕಮಾಂಡನ ಅರೆಬರೆ ನಿಲುವುಗಳು ಇವೆಲ್ಲವುಗಳಿಂದ ತಮ್ಮ ಮನಸೋ ಇಚ್ಚೇ ಅಧಿಕಾರ ದುರುಪಯೋಗಿ ಎಲ್ಲ ಕ್ಷೇತ್ರವನ್ನು ಆಪರೇಷನ್ ಪ್ರಕ್ರಿಯೆ ಆವರಿಸಿಕೊಂಡಿದೆ. ಇತ್ತೀಚಿಗೆ ಬಿಜೆಪಿ ಸಕರ್ಾರ ರಾಜ್ಯೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸುವ ನೆಪದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಗಳನ್ನು ಇಂತಿಷ್ಟು ಹಣಕ್ಕೆ ಹರಾಜಿಗೆ ಕೂಗಿದೆ!ಹಿಂದೆಂದೂ ಯಾವ ಸಕರ್ಾರಗಳು ಮೊನ್ನೇಯಷ್ಟು ಮಹನೀಯರನ್ನು ಪುರಸ್ಕರಿಸಿದ ಉದಾಹರಣಿಗಳಿಲ್ಲ. ಆದರೆ, ಬಿಜೆಪಿ ಸಕರ್ಾರ ಎಲ್ಲರಿಂದ ಬೇಷ್ ಎನ್ನಿಸಿಕೊಳ್ಳಲು, ಎಲ್ಲ ಮಂತ್ರಿ, ಚೆಡ್ಡಿ, ಮಾಧ್ಯಮಗಳಿಂದ ಸಹಿ ಎನ್ನಿಸಿಕೊಳ್ಳಲು ಕಂಡ ಕಂಡವರಿಗೆ ಪ್ರಶಸ್ತಿಯನ್ನು ಘೋಷಿಸಿದೆ. ತಾನು ಮೊದಲಿಗೆ ಬಿಡುಗಡೆ ಮಾಡಿದ ಪಟ್ಟಿಯಿಂದ ಕೆಲವರಿಗೆ ಅಸಮಾಧಾನ ಆಗಿದೆ ಎಂದು ತಿಳಿಯುತ್ತಿದ್ದಂಥೆ ಧೀಡಿರನೇ ರವಿಚಂದ್ರನ್ ಸೇರಿದಂಥೆ ಮುಂತಾದವರ ಹೆಸರನ್ನು ಸೇರಿಸಿ ಮತ್ತೊಂದು ಪಟ್ಟಿಯನ್ನು ತಯಾರಿಸಿತು. ಅತಿಹೆಚ್ಚು ಹಣ ನೀಡುವ, ಹಗಲಿರುಳು ಸಕರ್ಾರದ ಚಾಕರಿಯನ್ನು ಮಾಡಿಕೊಂಡು ಬಿದ್ದಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿತು!ರಾಜ್ಯ ಸಕರ್ಾರ ನೀಡುವ ಪ್ರಶಸ್ತಿಯ ಹಿಂದಿನ ಹೂರಣವನ್ನು ಯಾವೊಂದು ಮಾಧ್ಯಮಗಳು ನೈತಿಕವಾಗಿ ಪ್ರಶ್ನಿಸಿಬಾರದೆಂದು ಪ್ರತಿಯೊಂದು ಮಾಧ್ಯಮಗಳ ಮುಖ್ಯಸ್ಥರುಗಳು, ಕೆಲವೊಂದು ಬ್ಯೂರೋದ ಸಂಪಾದಕರುಗಳಿಗೆ ಮೊದಲಿಗೆ ಪ್ರಶಸ್ತಿಯನ್ನು ಘೋಷಿಸಿತ್ತು. ದುರಂತಕ್ಕೆ ಕನ್ನಡಪ್ರಭದ ಸಂಪಾದಕ ಸುಬ್ರಮಣ್ಯರೊಬ್ಬರನ್ನು ಬಿಟ್ಟರೆ, ಉಳಿದವರ್ಯಾರು ನಿರಾಕರಿಸಲಿಲ್ಲ.ಪ್ರಶಸ್ತಿ ತಮ್ಮ ಪಾಲಿನ ಸೌಭಾಗ್ಯಕ್ಕೆ ಬಂದಿದೆ ಎಂದು ತಿಳಿದು ಯಾರೊಬ್ಬರು ಪ್ರಶಸ್ತಿಯ ಅರ್ಹತೆ ಕುರಿತು ಚಕಾರವೆತ್ತದೆ, ಕೆಲವೊಂದು ಮಂತ್ರಿಗಳು ಹಾಗೂ ಶಾಸಕರಿಗೆ ಸಮಾಧಾನಪಡಿಸಲು ಹೇಗೆ ನಿಗಮಮಂಡಳಿಗೆ ಸ್ಥಾನವನ್ನು ನೀಡುತ್ತಾರೆ ಅದರಂತೆ ನಮ್ಮ ಮಾಧ್ಯಮದ ಮಂದಿ ನಮಗೂ ಅವಕಾಶ ಸಿಕ್ಕಿದೆ ನಾವೇಕೆ ಬಿಡಬೇಕೆಂದು ಎಲ್ಲರೂ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಪಡೆದರು.ನಂತರದ ಪ್ರತಿಕ್ರಿಯೆಯಲ್ಲಿ ಎಲ್ಲರೂ ವಾಡಿಕೆಯಂತೆ ಈ ಪ್ರಶಸ್ತಿ ಮಾಧ್ಯಮಗಳನ್ನು ನಂಬಿದ ಜನರಿಗೆ ಸಲ್ಲಬೇಕೆಂದು ಹೇಳಿಕೆ ಕೊಟ್ಟು ತಮಗೆ ಸಕರ್ಾರ ನೀಡಿದ ಪ್ರಶಸ್ತಿಯನ್ನು ಸಮಥರ್ಿಸಿಕೊಂಡರು.ಇಲ್ಲಿ ವಿಶೇಷವಾಗಿ ಮಾಧ್ಯಮಗಳು ಸಕರ್ಾರದಿಂದ ಪಡೆದಿರುವ ಪ್ರಶಸ್ತಿಯ ಬಗ್ಗೆ ಹೇಳಬೇಕಾಗಿದೆಯೆಂದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಪ್ರಜಾಪ್ರಭುತ್ವದ ಸ್ಥಂಭಗಳು ಕುಸಿದಾಗ ವ್ಯವಸ್ಥೆಯ ಪರ ನಿಲುವು ತಾಳಬೇಕಾದ ಮಾಧ್ಯಮಗಳು ಸಮಾಜವನ್ನೇ ಕಲುಷಿತಗೊಳಿಸಿ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿಯಾಗಿರುವ ಸಕರ್ಾರಗಳು ಅಧಿಕಾರ ನಡೆಸುತ್ತಿರುವಾಗ ಅವುಗಳು ವಾಸ್ತವಿಕೆತೆಯನ್ನು ಜನಸಾಮಾನ್ಯರಿಗೆ ತಿಳಿಸುವ ಬದಲಿಗೆ ಅವುಗಳು ನೀಡುವ ಪ್ರಶಸ್ತಿಯನ್ನು ತಮ್ಮ ಸ್ವಾರ್ಥಕ್ಕೆ ಸ್ವೀಕರಿಸಿದರೆ, ನೈತಿಕವಾಗಿ ಇವರುಗಳು ಸಕರ್ಾರದ ವಿರುದ್ಧ ಹೇಗೆ ಸುದ್ಧಿ ಮಾಡಲು ಸಾಧ್ಯ?ದಿನವೊಂದು ಕಾರ್ಯಕ್ರಮಗಳನ್ನು ಮಾಡುತ್ತ, ಒಬ್ಬೊಬ್ಬ ಮಂತ್ರಿ, ಶಾಸಕ, ಅಧಿಕಾರಿಯ ತಪ್ಪುಗಳನ್ನು ಹಿಡಿದು ಅರ್ಧ, ಅರ್ಧ ಗಂಟೆ ಕಾರ್ಯಕ್ರಮವನ್ನು ಜನರಿಗೆ ಮನರಂಜನೆಯಾಗಿ ತೋರಿಸುವ ಮಾಧ್ಯಮ ಮಂದಿ, ತಾವೇ ಏಕಾಏಕಿ ಕಳ್ಳರಿಂದಲೇ ಗೌರವವನ್ನು ಪಡೆಯುವುದೆಂದರೆ ಏನರ್ಥ?ಯಡಿಯೂರಪ್ಪ, ಅಶೋಕ, ಗೋವಿಂದ ಕಾರಜೋಳ, ಕಟ್ಟಾಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವಾರು ಮಂತ್ರಿಗಳ ಮಾನಮಯರ್ಾದೆಯನ್ನು ರಾಜ್ಯದ ಮಾಧ್ಯಮಗಳು ಸುಮಾರು ಸಂದರ್ಭಗಳಲ್ಲಿ ಹರಾಜಾಕಿವೆ. ಅವರು ಮಾಡಿರುವ ಹಗರಣಗಳನ್ನು ಬಯಲಿಗಿಟ್ಟಿವೆ. ಅದರ ಕುರಿತು ಹಲವಾರು ಚಚರ್ಾಗೋಷ್ಟಿಗಳನ್ನು ಮಾಡಿವೆ. ಆದರೆ, ಅದೇ ಕಟ್ಟಾ, ಗೋವಿಂದ, ಯಡ್ಡಿಯ ಕೈಯಿಂದ ಪ್ರಶಸ್ತಿಯನ್ನು ಪಡೆದು ನಮ್ಮನ್ನು ಸಕರ್ಾರ ಗುರುತಿಸಿದ್ದಕ್ಕೆ ಅಭಿನಂದನೆಗಳೆಂದು ಹೇಳುತ್ತಿರೆಂದರೆ, ಮಾಧ್ಯಮದ ಮಂದಿಯೇ ನಿಮಗೆಂತ ನೈತಿಕೆತೆ ಇದೆ?ಸಕರ್ಾರ ತನ್ನ ಹಗರಣ, ಭ್ರಷ್ಟಾಚಾರ, ಹೂರಣಗಳು ಜನಸಾಮಾನ್ಯರಿಗೆ ತಿಳಿಯಬಾರದು. ಅದನ್ನು ಹೊರ ಜಗತ್ತಿಗೆ ಬಿತ್ತರಿಸುವ ಎಲ್ಲಾ ಮಾಧ್ಯಮಗಳನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ಅವುಗಳನ್ನು ಸಮಾಜಾಯಿಸಲು ಆಗಾಗ ಜಾಹೀರಾತು, ತದಿತರೆಗಳ ಮುಖಾಂತರ ಸಮಜಾಯಿಸುತ್ತಿರಬೇಕೆಂದು ಸಾಮಾನ್ಯವಾಗಿ ಆಲೋಚಿಸುತ್ತವೆ. ಅದಕ್ಕೆ ಪೂರಕವಾಗಿ ಮಾಧ್ಯಮಗಳು, ತಮ್ಮ ನೈತಿಕತೆಯನ್ನು ಬೀದಿಗೊತ್ತಿ ಸಕರ್ಾರ ಮಾಡುವ ಎಲ್ಲ ಕೆಲಸಕ್ಕೆ ಸಮ್ಮತಿ ಸೂಚಿಸಿದರೆ, ಮಾಧ್ಯಮ ಮಂದಿ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ. ಪರಿಸ್ಥಿ ಹೀಗೆ ಹೋದರೆ, ಯಾರೊಬ್ಬರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಉಳಿಯುವುದಿಲ್ಲ. ಈಗ ಕನರ್ಾಟಕದಲ್ಲಿ ಅದೇ ಪರಿಸ್ಥಿತಿ ನಿಮರ್ಾಣವಾಗಿದೆ.ಮೊನ್ನೆಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಕೊಡಮಾಡುವ ಪ್ರಶಸ್ತಿಯನ್ನು ಬಿಜೆಪಿ ಸಕರ್ಾರ ರಾಜ್ಯದ ಎಲ್ಲಾ ಚಾನೆಲ್, ಪತ್ರಿಕೆಗಳ ಪ್ರತಿನಧಿಗಳಿಗೆ ನೀಡಿ, ಸಕರ್ಾರದ ವಿರುದ್ಧ ಯಾವೊಬ್ಬ ಮಾಧ್ಯಮದವರು ಚಕಾರವೆತ್ತದಂತೆ ಮಾಡಿದೆ.ಪ್ರಸ್ತುತ ಸಮಾಜದಲ್ಲಿ ಅಸಲಿಗೆ ಸಾಕಷ್ಟು ಪ್ರತಿಭೆಗಳು ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿವೆ. ಕೆಲವೊಂದು ಐ.ಎ.ಎಸ್ ಅಧಿಕಾರಿಗಳು ಪ್ರಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನರ್ವಹಿಸಿಕೊಂಡು, ದುಡಿಯುವ ವರ್ಗದ ಅಳಲು ಮತ್ತು ಆಲೋಚನೆಗಳನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರ ಪರ ಯೋಜನೆಗಳನ್ನು ರೂಪಿಸುತ್ತಾ, ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅಲ್ಲಿಲ್ಲುಳಿದ ಅಂತಹ ಕೆಲವೇ ಕೆಲವು ಅಧಿಕಾರಿಗಳಿಂದ ದೇಶದಲ್ಲಿ ಪ್ರಜಾಪ್ರಭುತ್ವವೆಂಬುದು ಜೀವಂತವಾಗಿ ಉಳಿದಿದೆ. (ಉದಹಾರಣಿಗೆ ರಾಖೇಶಸಿಂಗ್, ರಜನೀಶ್ ಗೋಯೆಲ್, ವಿ.ಮಂಜುಳ, ಮುನಿಷ್ ಮೌದ್ಗೀಲ್, ಪಂಕಜಕುಮಾರ ಪಾಂಡೆ, ಶಾಲಿನಿ ರಜನೀಶ್ ರಂತಹ ಸುಮಾರು ಅಧಿಕಾರಿಗಳು ವ್ಯವಸ್ಥೆಯ ಬದಲಾವಣಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರುಗಳ ಸೇವೆ ಅವಿಸ್ಮರಣೀಯ.)ಅದರಂತೆ ಸಮಾಜದ ಸ್ತರದಲ್ಲಿ ಕೆಲವೊಬ್ಬರು ಮೊದಲಿಗೆ ಹೇಳಿದಂತೆ ತಾವುಗಳು ಎಲೆಮರೆಕಾಯಿಯಾದರೂ, ತಮ್ಮನ್ನು ಯಾರೊಬ್ಬರು ಗುರುತಿಸದಿದ್ದರೂ, ತಾವು ಮಾತ್ರ ವ್ಯವಸ್ಥೆಗೆ ತಮ್ಮದೇ ಕಾಣಿಕೆ ಸಲ್ಲಿಸುತ್ತಿದ್ದಾರೆ.ಇನ್ನು ನಾವಿರುವ ಪ್ರದೇಶವನ್ನು ಬಿಟ್ಟುಹೋಗಿ ಕಣಿವೆ, ಗುಡ್ಡಗಾಡು, ಅಂತರ್ರಾಜ್ಯ ಪ್ರದೇಶಗಳಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಹೋಗಿ ಕೆಲವು ಮಾಧ್ಯಮ ಸ್ನೇಹಿತರು, ಪ್ರಸ್ತುತ ಸಮಾಜಕ್ಕೆ ವಾಸ್ತವ ವರದಿಯನ್ನು ತೋರಿಸಲು ಅವಿರತ ಶ್ರಮ ಹಾಕುತ್ತಿದ್ದಾರೆ. (ಉದಾಹರಣಿಗೆ ನಕ್ಸಲೀಯರ ಮೂಲ ಅಸಲೀ ಹಕೀಕತ್ತು, ನಿಲುವನ್ನು ಪ್ರಜಾಪ್ರಭುತ್ವದ ವ್ಯವಸ್ಥೆಗೆ ತಿಳಿಸಲು ಅರುಂಧತಿರಾಯ್ರಂತಹ ಖ್ಯಾತ ಪತ್ರಕರ್ತರು ತಮ್ಮ ಜೀವವನ್ನು ತೊರೆದು ಕಾಡಿಗೆ ಹೋಗಿ ನಾಡಿಗೆ ಸವಿಸ್ತಾರ ವರದಿಯನ್ನು ಮಾಡಿದ್ದಾರೆ. ನಕ್ಸಲೀಯರ ಅಸಲಿಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇನ್ನು ಕನರ್ಾಟಕದಲ್ಲಿ ಕುಮಾರ ಬುರಡಿಕಟ್ಟಿಯಂತಹ ಪ್ರಗತಿಪರ ಯುವ ಬರಹಗಾರರು ಎಲ್.ಟಿ.ಟಿ.ಇ ಪ್ರಭಾಕರನ್ ಮತ್ತು ಶ್ರೀಲಂಕಾ ಸಕರ್ಾರದ ನಿಲುವು ಎಂತಹದು. ಪ್ರಭಾಕರನ್ ಮತ್ತು ಶ್ರೀಲಂಕಾ ಸೇನೆಗಳ ಸಮರದಲ್ಲಿ ಅಲ್ಲಿನ ಸಾಮಾನ್ಯ ಜನರ ಸ್ಥಿತಿ ಎಂತಹದ್ದಿರಬಹುದು ಎಂಬುದರ ಕುರಿತು ಆಳವಾಗಿ ಅಧ್ಯಯನ ಮಾಡಿ ವ್ಯವಸ್ಥೆಗೆ ಅಸಲಿ ವರದಿಯನ್ನು ಮಾಡಿ ಓಈಳಂ ಎಂಬ ಪುಸ್ತಕದ ಮುಖಾಂತರ ಸಮಗ್ರ ಮಾಹಿತಿಯನ್ನು ಒದಗಿಸಿದ್ದಾರೆ.)ವಾಸ್ತವವಾಗಿ ಸಕರ್ಾರಗಳು ಅಂತಹ ಎಲೆಮರೆಕಾಯಿಯಂತಿರುವ ಮಹನೀಯರನ್ನು ಗುರುತಿಸಿ, ಪ್ರೋತ್ಸಾಹಿಸಿ ಪ್ರಶಸ್ತಿ ನೀಡಬೇಕು. ಅದು ಮಾನವೀಯತೆ ಮತ್ತು ಆ ಪ್ರಶಸ್ತಿಗೆ ಒಂದು ಗೌರವ, ಶೋಭೆ ಬರುತ್ತದೆ. ಅದನ್ನು ಬಿಟ್ಟು ಸಕರ್ಾರದ ಚಾಕರಿ ಮಾಡುತ್ತಾ, ಎಲ್ಲೋ ಎ.ಸಿ ರೂಮಿನಲ್ಲಿ ಕುಳಿತು, ಬೇರೊಂದು ಇಂಗ್ಲೀಷ್ ಚಾನೆಲ್ಗಳ ವರದಿಯನ್ನೇ ಕನ್ನಡಕ್ಕೆ ತಜರ್ುಮೆ ಮಾಡಿ ವರದಿ ಮಾಡುವ ಮಂದಿಯನ್ನು ಸನ್ಮಾನಿಸದರೆ, ಏನು ಲಾಭ..? ಅದಕ್ಯಾವ ಅರ್ಥವೂ ಇಲ್ಲ. ಆ ರೀತಿ ನೀಡುವ ಪ್ರಶಸ್ತಿ ಇದೀಗ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಇದರಲ್ಲಿ ಎರಡು ಮಾತಿಲ್ಲ.



ಎಂ.ಎಲ್

ಉಜಿರೆಯಲ್ಲಿ ಹೀಗೊಂದು ವಿಚಾರಸಂಕಿರಣ






ಉಜಿರೆಯಲ್ಲಿ ಹೀಗೊಂದು ವಿಚಾರಸಂಕಿರಣ



ಮಾಧ್ಯಮ ಕ್ಷೇತ್ರವು ಇಂದು ಉದ್ದಿಮೆಯಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಅದನ್ನು ಪೋಷಿಸುವವರಿಗಿಂತ ದೂಷಿಸುವವರ ಸಂಖ್ಯೆಯೇ ವ್ಯವಸ್ಥೆಯಲ್ಲಿ ಅಧಿಕವಿದೆ. ಅಂತಹ ಈ ಸಂದರ್ಭದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜಿನ ಆಡಳಿತ ಮಂಡಳಿ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಆಯೋಜಿಸುವದರೊಂದಿಗೆ ಪತ್ರಿಕೋದ್ಯಮಕ್ಕೆ ಕಾಲಿಡುವ ನವವಿಧ್ಯಾಥರ್ಿಗಳಿಗೆ ಹೊಸದೊಂದು ಚೈತನ್ಯವನ್ನು ತುಂಬಿತು.
ಇಲ್ಲಿಯ ಕಾಲೇಜಿನಲ್ಲಿ ಪತ್ರಿಕೋದ್ಯಮ ಮುಗಿಸಿದ ಪ್ರತಾಪಸಿಂಹ ಇಂದು ವಿ.ಕ ಪತ್ರಿಕೆಯಲ್ಲಿ ಅಂಕಣಕಾರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸುವರ್ಣನ್ಯೂಸ್ ಎಂಬ ಚಾನೆಲ್ನಲ್ಲಿ ನಿರೂಪಕರಾಗಿರುವ ದಿವ್ಯಶ್ರೀ ಕೂಡ ಇದೇ ಉಜಿರೆಯ ಕಾಲೇಜಿನಲ್ಲಿ ಕಲಿತವರು. ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವು ಪ್ರತಿಭೆಗಳನ್ನು ನೀಡಿದ ಉಜಿರೆಯ ಶಿಕ್ಷಣ ಸಂಸ್ಥೆ ಮೊನ್ನೆಯೊಂದು ಮೇಲೆ ಹೇಳಿದಂಥೆ ಜಾಗತಿಕ ಮಟ್ಟದ ರಾಜಕಾರಣದಲ್ಲಿ ಮಾದ್ಯಮದ ಪ್ರಭಾವ ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ನೂರಾರು ಪ್ರಾದ್ಯಾಪಕರು, ಬುದ್ಧಿಜೀವಿಗಳು, ಸಾಹಿತಿಗಳು ಬಂದಿದ್ದರು. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯಗಳಾದರೆ, ಕೊನೆಗೆ ಎಲ್ಲರದೂ ಒಂದೇ ನಿಲುವು ಆಗಿತ್ತು.ಮಾಧ್ಯಮಗಳು ಕೇವಲ ಸುಧ್ಧಿ, ಮಾಹಿತಿ, ಮನರಂಜನೆಗೆ ಸೀಮಿತವಾಗಿರದೆ ಸಾರ್ವಜನಿಕರ ಮಧ್ಯೆ ವಾಸ್ತವಿಕ ನೆಲೆಗಟ್ಟಿನ ಅಭಿಪ್ರಾಯಗಳನ್ನು ಸಂಗ್ರಹಿಸುವಂತಾಗಬೇಕು ಮತ್ತು ಸಮಾಜದ ಸ್ವಾಸ್ಥ್ಯವನ್ನು ಎತ್ತಿಹಿಡಿಯುವ ಸಾರ್ವಜನಿಕರ ಸಲಹೆ ಅಭಿಪ್ರಾಯಗಳಿಗೆ ಆಧ್ಯತೆ ನೀಡಬೇಕೆಂದು ಶಿವಮೊಗ್ಗದ ಸಾಂಸ್ಕ್ರತಿಕ ಮತ್ತು ಮಾಧ್ಯಮ ಪ್ರತಿಷ್ಠಾನದ ಅಧ್ಯಕ್ಷ ಪ್ರೊ; ವಿಘ್ನೇಶ್ ಎನ್ .ಭಟ್ .ಹೇಳಿದರು.ಇತ್ತೀಚಿಗೆ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಮಂಗಳೂರಿನ ಪ್ರೆಸ್ಕ್ಲಬ್ ಹಾಗೂ ಯುಜಿಸಿ ಪ್ರಾಯೋಜಿತ ನಡೆದ ವಿಚಾರಸಂಕಿರಣದಲ್ಲಿ ಜಾಗತಿಕ ಮಟ್ಟದ ರಾಜಕೀಯದಲ್ಲಿ ಮಾಧ್ಯಮಗಳ ಪಾತ್ರ ವಿಷಯದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸಕರ್ಾರ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯಾಗಿ ವಿಚಾರ ವಿನಿಮಯದೊಂದಿಗೆ ಮಾಧ್ಯಮಗಳು ಪ್ರಬಲ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಬೇಕು. ಸಮೂಹ ಮಾಧ್ಯಮಗಳು ರಾಜಕೀಯ ಅರಿವು ಮತ್ತು ಜಾಗೃತಿ ಮೂಡಿಸಿದಾಗ ಮಾತ್ರ ಪಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಮಾಮರ್ಿಕವಾಗಿ ನುಡಿದರು.ಅಧ್ಯಕ್ಷತೆ ವಹಿಸಿದ್ದ ಅಸ್ಸಾಂ ವಿ.ವಿ. ಯ. ಸಮೂಹ ಮಾಧ್ಯಮ ಕೇಂದ್ರದ ಮುಖ್ಯಸ್ಥ ,ಡಾ. ಕೆ.ವಿ. ನಾಗರಾಜ್ರವರು, ಪತ್ರಕರ್ತರಾದವರು ಅವಕಾಶವಾದಿಗಳಾಗದೆ ಆದರ್ಶವಾದಿ ಗಳಾಗಬೇಕೆಂದು ವಿಧ್ಯಾಥರ್ಿಗಳಿಗೆ ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಮಾತನಾಡಿ ಸಮೂಹ ಮಾಧ್ಯಮಗಳು ಓದುಗರನ್ನು ಚಿಂತನಶೀಲರನ್ನಾಗಿ ಮಾಡಬೇಕು. ಆಥರ್ಿಕ ಹಾಗೂ ಸಾಮಾಜಿಕ ಏಳಿಗೆಗೆ ಪ್ರೋತ್ಸಾಹ ನೀಡಬೇಕು ಆ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.ಡಾ ಬಿಕೆ.ರವಿ, ಶೈಲೇಶ್ರಾಜ್ ಅರಸ್ ಸೇರಿದಂತೆ ಹಲವು ಯುನಿವಸರ್ಿಟಿಗಳ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರುಗಳು ಭಾಗವಹಿಸಿ ತಮ್ಮ ವಿಷಯಗಳನ್ನು ಮಂಡಿಸಿದರು.ಇಂತಹದೊಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ವಿವಿಧ ಭಾಗಗಳಿಂದ 40ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಹಾಗೂ ನೂರಾರು ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಪ್ರತಿನಿಧಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಸಂಬದ್ಧ ಉತ್ತರಗಳನ್ನು ವಿಚಾರ ಸಂಕಿರಣದ ಅತಿಥಿಗಳು ನೀಡುತ್ತಿದ್ದರು.ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಅವರ ಅಪೂರ್ವ ಸಂಗ್ರಹದ ಛಾಯಾಚಿತ್ರ ಪ್ರದರ್ಶನ ವಿಶೇಷ ಜನಾಕರ್ಷಣೆಯ ಕೇಂದ್ರವಾಗಿತ್ತು. ಹಾಗೂ ಸಂಜೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವಂತಹ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಕಾಲೇಜಿನ ಸಾಂಸ್ಕ್ರತಿಕ ತಂಡದ ವಿಧ್ಯಾಥರ್ಿಗಳು ನಡೆಸಿಕೊಟ್ಟರು.ಮಾರನೇಯ ದಿನ ಮಾಧ್ಯಮದವರು ಹಾಗೂ ಅಕಾಡೆಮಿಯನ್ಸ್ ನಡುವೆ ನಡೆದ ಚಚರ್ಾಗೋಷ್ಟಿಯಲ್ಲಿ ಟೈಮ್ಸ್ ಆಫ್ ಇಂಡಿಯಾದ ನಂದಗೋಪಾಲ್, ಡೆಕ್ಕನ್ ಹೆರಾಲ್ಡ್ನ ಬ್ಯೂರೋ ಚೀಫ್ ರೋನಾಲ್ಡ್, ಎಸ್.ಡಿ.ಎಂ ಕಾಲೇಜು ಉಜಿರೆಯ ರೆಜಿಸ್ಟ್ರಾರ್ ಉದಯಚಂದ್ರ, ಧಾರವಾಡ ಕನರ್ಾಟಕ ಯುನಿವಸರ್ಿಟಿಯ ಪ್ರೋ.ಬಾಲಸುಬ್ರಹ್ಮಣ್ಯ, ಮಂಗಳೂರು ಯುನಿವಸರ್ಿಟಿಯ ಪ್ರೋ. ಶಿವರಾಮ್, ಮೈಸೂರು ಯುನಿವಸರ್ಿಟಿಯ ಡಾ. ನಿರಂಜನ ವಾನಳ್ಳಿ ಪಾಲ್ಗೊಂಡರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧಾ.ಕ.ವಿ.ವಿ.ಯ ಪ್ರೋ. ಎ ಎಸ್ ಬಾಲಸುಬ್ರಹ್ಮಣ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂ.ವಿ ವಿ.ಯ ಜಿ.ಪಿ ಶಿವರಾಮ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೋ.ಭಾಸ್ಕರ ಹೆಗ್ಡೆ ಸ್ವಾಗತಿಸಿ, ಉಪನ್ಯಾಸಕ ಪರಶುರಾಮ ಕಾಮತ್ ವಂದಿಸಿದರು. ವಿಧ್ಯಾಥರ್ಿಗಳಾದ ಸುದರ್ಶನ್, ಜಯಲಕ್ಮಿ ಕಾರ್ಯಕ್ರಮ ನಿರೂಪಿಸಿದರು.ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ : ಶಿವಮೊಗ್ಗ ನಂದನರವರ ಅತ್ಯುತ್ತಮ ಛಾಯಾಚಿತ್ರ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಅವರುಗಳು ಬಾಲ್ಯದಿಂದ ಇಲ್ಲಿಯವರೆಗೆ ಸ್ವತಃ ತಾವೇ ತೆಗೆದಿದ್ದ ಹಲವಾರು ನೈಸಗರ್ಿಕ ತೃಪ್ತಿಯನ್ನಿಡುವಂತಹ ಛಾಯಾಚಿತ್ರಗಳು ಎಲ್ಲರನ್ನು ತಮ್ಮತ್ತಿರಕ್ಕೆ ಆಹ್ವಾನಿಸಿಕೊಳ್ಳುತ್ತಿದ್ದವು.ನೈಸಿರ್ಗಕ ವಿಕೋಪ, ಹತ್ತು ಹಲವು ಜಾತಿಯ ಹಾವುಗಳು, ಹಕ್ಕಿಗಳ ಪ್ರಬೇದಗಳು, ಮಾನವ ಸಂಕುಲವನ್ನು ಬೆಚ್ಚಿಬೀಳಿಸುವಂತಹ ಘಟನೆಗಳ ಚಿತ್ರಗಳು ಎಲ್ಲರನ್ನು ಬೆರಗಾಗಿ ನೋಡುವಂತೆ ಮಾಡಿದ್ದವು.



ಹಂಪೇಶ್, ಮಮತಾ, ಶಶಾಂಕ್

ಕೊಟ್ಟ ಕೋಡಗಗಳು ಇಸ್ಕೋಂಡ ಕಮಂಗಿಗಳು





ಕೊಟ್ಟ ಕೋಡಗಗಳು ಇಸ್ಕೋಂಡ ಕಮಂಗಿಗಳು ಅಮೆರಿಕದ ಅಧ್ಯಕ್ಷರ ಐತಿಹಾಸಿಕ ಭೇಟಿ ಮುಗಿದಿದೆ, ಇದರಿಂದ ಭಾರತಕ್ಕೇನು ದಕ್ಕಿದೆ? ಅಮೆರಿಕ ಏನು ಪಡೆದಿದೆ? ಅಮೆರಿಕದ ಅಧ್ಯಕ್ಷನೊಬ್ಬ ತನ್ನ ಅಧಕ್ಷಗಿರಿಯ ಮೊದಲ ಅವಧಿಯ ಪ್ರಾರಂಭದ ವರ್ಷಗಳಲ್ಲೇ, ಯಾವುದಾದರೂ ಒಂದು ದೇಶಕ್ಕೆ ನಡಿದ ಅತಿ ದೀರ್ಘ ಭೇಟಿ ಭೇಟಿಯಿದು ಎಂದು ಭಾರತ ಸಕರ್ಾರ, ಮಾಧ್ಯಮಗಳು ಮತ್ತು ಭಾರತೀಯರು ಹೆಮ್ಮೆಯ ಅಮಲಿನಲ್ಲಿ ತೇಲುತ್ತಿರುವಾಗಲೇ ಅಮೆರಿಕದ ಸಕರ್ಾರ, ಪಕ್ಷಗಳು ಮತ್ತು ಮಾಧ್ಯಮಗಳು ಈ ಭೇಟಿಯ ಹಿಂದೆ ಅಮೆರಿಕದ ಉದ್ದೇಶಗಳು ಈಡೇರಿದೆಯೋ ಇಲ್ಲವೋ ಎಂದು ವಿಶ್ಲೇಷಣೆ ಪ್ರಾರಂಭಿಸಿದ್ದಾರೆ. ಭಾರತ ಮತ್ತು ಅಮೆರಿಕ ಸಹಜ ಮಿತ್ರರು, ವಿಶ್ವದ ಹಳೆಯ ಮತ್ತು ಅತಿ ದೊಡ್ಡ ಪ್ರಜಾತಂತ್ರಗಳ ಒಟ್ಟಿಗೆ ಇಡುವ ಐತಿಹಾಸಿಕ ಹೆಜ್ಜೆ, ವಿಶ್ವದ ದೊಡ್ಡಣ್ಣ ಅಮೆರಿಕದ ಸ್ನೇಹದಿಂದ ಭಾರತದ ಚಹರೆಯೇ ಬದಲಾಗುತ್ತಿದೆ ಎಂಬಿತ್ಯಾದಿ ಭೋಳೆಭೋಳೆ ವಿಶ್ಲೇಷಣೆಗಳಾಚೆಗೆ ಸಕರ್ಾರವಾಗಲೀ, ಮಾಧ್ಯಮಗಳಾಗಲೀ ಏನೊಂದನ್ನು ಚಚರ್ಿಸುತ್ತಿಲ್ಲ. ಇನ್ನು ವಿರೋಧ ಪಕ್ಷಗಳು ಒಬಾಮಾ ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ನದರ್ಿಷ್ಟವಾಗಿ ಹೆಸರಿಸಿ ಟೀಕಿಸಲಿಲ್ಲ ಎಂದು ಗೊಣಗುವುದನ್ನು ಬಿಟ್ಟರೆ ಸಕರ್ಾರಕ್ಕಿಂತ ಭಿನ್ನವಾದದ್ದೇನನ್ನೂ ಹೇಳುತ್ತಿಲ್ಲ. ಇನ್ನು ಬುದ್ಧಿಜೀವಿ, ಅಕ್ಷರಸ್ಥ ಸಮುದಾಯ ಈ ಭೇಟಿಯ ಫಲಶೃತಿಯನ್ನು ಹೇಗೆ ನೋಡುತ್ತಿದೆ?ಒಬಾಮಾ ಭೇಟಿಯ ದಿನ ಕನ್ನಡದ ಖ್ಯಾತ ಕವಿ ಚಂದ್ರಶೇಖರ ಕಂಬಾರರು ಪ್ರಜಾವಾಣಿಯ ಮುಖಪುಟದಲ್ಲಿ ಒಬಾಮ ಭೇಟಿ ಮತ್ತು ಭಾರತೀಯರ ದೈನೇಸಿ ಮನೋಭಾವಗಳನ್ನು ವಿಡಂಬನೆ ಮಾಡುತ್ತಾ ಒಂದು ಕವನ ಬರೆದಿದ್ದರು. ಕಾವ್ಯವಾಗಿಯಾಗಲೀ, ರಾಜಕೀಯ ಕಾಣ್ಕೆಯ ದೃಷ್ಟಿಯಿಂದಾಗಲೀ ಆ ಕವನ ಅಂಥಾ ಮಹತ್ವದ್ದೇನಾಗಿರಲಿಲ್ಲವಾದರೂ ಯಾರೋ ಬಂದು ಏನೋ ಕೊಡುತ್ತಾರೆ ಎಂಬ ನರೀಕ್ಷೆಯಲ್ಲಿರುವ ಭಾರತದ ಒಂದು ಸ್ಥಿತಿಯ ಬಗ್ಗೆ ಲೇವಡಿ ಮಾಡಿದ್ದರು. ಭಾರತ ಸಕರ್ಾರ ಮತ್ತು ಮಾಧ್ಯಮಗಳು ಸಾಕ್ಷಾತ್ ಭಗವಂತನೇ ಪ್ರತ್ಯಕ್ಷನಾಗುತ್ತಿದ್ದಾನೆ ಎಂಬ ಹವಾ ಸೃಷ್ಟಿ ಮಾಡಿದ್ದು ನಜವೇ ಆಗಿದ್ದರಿಂದ ಕಂಬಾರರ ಆ ಲೇವಡಿಯಲ್ಲಿ ಸ್ಚಲ್ಪ ಸತ್ಯಾಂಶವಿದ್ದೇ ಇತ್ತು. ಆದರೆ ಕಂಬಾರರ ಕವನದ ಭಾವವನ್ನು ವಿರೋಧಿಸುತ್ತಾ ವಾಚಕರ ವಾಣಿಯಲ್ಲಿ ಪ್ರಕಟವಾಗುತ್ತಲೇ ಇರುವ ಪತ್ರಗಳು ಭಾರತೀಯ ಮಧ್ಯಮವರ್ಗದ ಇಬ್ಬಂದಿ ಮನಸ್ಥಿತಿಯನ್ನು ಚೆನ್ನಾಗಿ ಪ್ರತಿನಧಿಸುತ್ತದೆ. ಬಹುಪಾಲು ಪತ್ರಗಳು ಭಾರತವು ಸೂಪರ್ ಪವರ್ ಆಗುತ್ತಿರುವುದರಿಂದಲೇ ಒಬಾಮಾ ಇಲ್ಲಿಗೆ ಬರುತ್ತಿದ್ದಾರೆ..ಹೀಗಾಗಿ ಭಾರತವನ್ನು ಕೀಳಾಗಿ ಚಿತ್ರಿಸಿರುವುದು ಅಕ್ಷಮ್ಯ ಎಂಬುದೇ ಆಗಿದೆ. ಭಾರತೀಯ ಮಧ್ಯಮವರ್ಗದ ಈ ಹುಂಬ ಪ್ರತಿಷ್ಠಯೆ ಮನಸ್ಥಿತಿಯನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದ ಒಬಾಮಾ ಮಂಡಳಿ ಭಾರತವು ಉದ್ಭವಗೊಳ್ಳುತಿರುವ ಶಕ್ತಿಯಲ್ಲ..ಈಗಾಗಲೇ ಸ್ಥಾಪಿತಗೊಂಡಿರುವ ಶಕ್ತಿ (ಓಠಣ ಜಟಜಡಿರಟಿರ ಟಿಚಿಣಠಟಿ..ಣ ಚಿ ಚಿಟಡಿಜಚಿಜಥಿ ಜಟಜಡಿರಜಜ!) ಎಂದು ಚೆನ್ನಾಗಿಯೇ ಪೊಳ್ಳು ಪ್ರತಿಷ್ಠೆಯ ಬಲೂನಗೆ ಗಾಳಿ ತುಂಬಿದರು. !ಹಾಗಿದ್ದರೆ ಒಬಾಮಾ ಭೇಟಿಯಿಂದ ಭಾರತಕ್ಕೆ ದಕ್ಕಿದ್ದೇನು? ಅಸಲು ಒಬಾಮಾ ಬಂದಿದ್ದಾದರೂ ಯಾತಕ್ಕೆ?ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಒಬಾಮಾನ ಸಕರ್ಾರವೇ ಕೊಟ್ಟಿದೆ. ಅವರ ಭಾರತ ಭೇಟಿ ಪ್ರಾರಂಭವಾಗುವ ಹಿಂದಿನ ದಿನ ಅಮೆರಿಕನ್ ಸಕರ್ಾರದ ಅಂತರರಾಷ್ಟ್ರಿಯ ಆಥರ್ಿಕ ವ್ಯವಹಾರಗಳ ಡೆಪ್ಯೂಟಿ ಕಾರ್ಯದಶರ್ಿಯಾಗಿರುವ ಮೈಕೇಲ್ ಫ್ರೊಮಾನ್ರವರು ಅಮೆರಿಕನ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಒಬಾಮಾರವರ ಈ ಭೇಟಿಯ ಉದ್ದೆಶ ಮೂಲಭೂತವಾಗಿ ಆಥರ್ಿಕವಾದದ್ದು. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಅನುಕೂಲವಾಗುವಂತೆ ನಮ್ಮ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಳಸಿಕೊಳ್ಳುವುದೇ ಈ ಭೇಟಿಯ ಉದ್ದೇಶ ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಘೋಷಿಸಿದ್ದರು. ಅಮೆರಿಕದಲ್ಲಿ ಇಂದು ನರುದ್ಯೋಗದ ಗತಿ ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ. ಒಬಾಮಾ ಅಧ್ಯಕ್ಷರಾದ ಮೇಲೆ ಸಾಕಷ್ಟು ಬಡ ಬಿಳಿಯರು ಮತ್ತು ಕರಿಯರು ಬೀದಿಪಾಲಾಗುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೆರಿಕದ ಆಥರ್ಿಕತೆ 1930ರ ದಶಕದಲ್ಲಿ ಎದುರಿಸುತ್ತಿದ್ದಂಥ ಬಿಕ್ಕಟ್ಟನ್ನೇ ಈಗಲೂ ಎದುರಿಸುತ್ತಿದೆ. ಕಳೆದ 70 ವರ್ಷಗಳಲ್ಲೇ ಪ್ರಥಮ ಬಾರಿಗೆ ಪ್ರಪಂಚದ ವಾಣಿಜ್ಯವು ಶೇ.14ರಷ್ಟು ಕುಸಿದಿದೆ. ಈ ಎಲ್ಲದರ ಪರಿಣಾಮವಾಗಿ ಒಬಾಮಾರ ಜನಪ್ರಿಯತೆ ಕುಸಿಯುತ್ತಿರುವುದು ಮಾತ್ರವಲ್ಲದೆ ಅಮೆರಿಕದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕಳೆದ 75 ವರ್ಷಗಳಲ್ಲೇ ಅತ್ಯಂತ ಹೀನಾಯವಾಗಿ ಅವರ ಡೆಮಾಕ್ರಾಟಿಕ್ ಪಕ್ಷ ಸೋತಿದೆ. ಇನ್ನಾದರೂ ಅಮೆರಿಕದಲ್ಲಿ ಹೆಚ್ಚೆಚ್ಚು ಉದ್ಯೋಗಗಳನ್ನು ಸೃಷ್ಟಿಸದಿದ್ದರೆ 2012ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ ಪಕ್ಷ ಬೋಡರ್ಿಗೆ ಬರುವ ಸಾಧ್ಯತೆಗಳೇ ಕ್ಷೀಣಿಸುತ್ತಿದೆ.ಆದರೆ ಅಮೆರಿಕದ ಆಥರ್ಿಕತೆಗೆ ಚೈತನ್ಯ ಕೊಡುವ ಶಕ್ತಿ ಅದರ ಅಂತರಿಕ ಆಥರ್ಿಕತೆಗಿಲ್ಲ. ಹೀಗಾಗಿ ಅಮೆರಿಕ ತನ್ನ ಆಥರ್ಿಕತೆಯನ್ನು ಪುನಶ್ಚೇತನಗೊಳಿಸಲು ಏಕಕಾಲದಲ್ಲಿ ಎರಡು ಕ್ರಮಗಳನ್ನು ಅನುಸರಿಸುತ್ತಿದೆ. ಒಂದು ತಾನು ಉತ್ಪಾದಿಸುವ ಸರಕುಗಳ ಮಾರುಕಟ್ಟೆಗೆ ಪ್ರತಿಸ್ಪಧರ್ಿಯಾಗಿ ವಿದೇಶದ ಸರಕುಗಳು ತನ್ನ ಮಾರುಕಟ್ಟೆಗೆ ನುಗ್ಗದಂತೆ ರಕ್ಷಿಸಿಕೊಳ್ಳುವ ಪ್ರೊಟೆಕ್ಷನಸ್ಟ್ ಕ್ರಮಗಳು. ಎರಡನೆಯದು ಇದೇ ರೀತಿ ಅಮೆರಿಕದ ಸರಕುಗಲಿಂದ ತನ್ನ ಗೃಹ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ನೀತಿಯನ್ನು ಅನುಸರಿಸುತ್ತಿರುವ ದೇಶಗಳ ಮೇಲೆ ಸಾಮ-ದಾನ-ಬೇಧ-ದಂಡೋಪಾಯಗಳನ್ನು ಬಳಸಿ ಆ ದೇಶಗಳ ಪ್ರೊಟೆಕ್ಷನಸ್ಟ್ ನತಿಗಳನ್ನು ಬದಲಿಸಿ ತನ್ನ ಬಂಡವಾಳಕ್ಕೆ, ಸರಕುಗಳಿಗೆ ಇನ್ನೂ ಹೆಚ್ಚಿನ ಮಾರುಕಟ್ಟೆಯನ್ನು ಪಡೆದುಕೊಳ್ಳುವುದು. ಆದ್ದರಿಂದಲೇ ಅಮೆರಿಕವು ತನ್ನ ವಿದೇಶಾಂಗ ನತಿಯನ್ನೇ ಆಕ್ರಮಣಕಾರಿಯಾಗಿ ಬಳಸುತ್ತಾ ಮಾರುಕಟ್ಟೆ ಅಶ್ವಮೇಧವನ್ನು ಶುರುಮಾಡಿ ಅದರ ಕಾವಲಿಗೆ ಸವ್ಯಸಾಚಿ ಒಬಾಮಾನನ್ನು ಕಳಿಸಿದೆ. ಇದಕ್ಕೆ ಖಿಜ ಓಚಿಣಠಟಿಚಿಟ ಇಥಠಿಠಡಿಣ ಟಿಣಚಿಣತಜ ಎಂಬ ಹೆಸರಿಡಲಾಗಿದೆ, ಭಾರತ ಭೇಟಿಗೆ ಹೊರಡುವ ಸ್ವಲ್ಪ ಮುನ್ನ ಅಮೆರಿಕನ್ ಉದ್ಯಮಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ ಒಬಾಮಾ ಭಾರತದ ಆಥರ್ಿಕತೆ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಲಿದೆ. ಮತ್ತು ಭಾರತದಲ್ಲಿರುವ ಮತ್ತು ಬೆಳೆಯುತ್ತಲಿರುವ ಮಧ್ಯಮವರ್ಗ ಅಮೆರಿಕದ ರಫ್ತಿಗೆ ಒಳ್ಳೆಯ ಮಾರುಕಟ್ಟೆ ಒದಗಿಸುತ್ತಾರೆ ಎಂದು ಸ್ಪಷ್ಟವಾಗಿಯೇ ಹೇಳಿದ್ದರು. ಮತ್ತು ತನ್ನ ಭಾರತ ಭೇಟಿಯ ಪ್ರಧಾನ ಉದ್ದೇಶ ಅಮೆರಿಕದ ಸರಕುಗಳಿಗೆ ಭಾರತದಲ್ಲಿ 10 ಬಿಲಿಯನ್ ಡಾಲರ್ನಷ್ಟು ಹೊಸ ಮಾರುಕಟ್ಟೆಯನ್ನು ಪಡೆದುಕೊಂಡು ಆ ಮೂಲಕ ಅಮೆರಿಕದಲ್ಲಿ 53,000 ದಷ್ಟು ಉದ್ಯೋಗಗಳನ್ನು ಸೃಷ್ಟಿಸುವುದಾಗಿದೆ ಎಂದೂ ಘೋಷಿಸಿದ್ದರು.ಅಮೆರಿಕದ ಸರಕುಗಳು ಈಗಾಗಲೇ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ ಒಳನುಗ್ಗಿದೆ. ಭಾರತವು 1998ರಲ್ಲಿ ಅಣುಶಕ್ತಿ ಸ್ಫೋಟ ನಡೆಸಿದ ಮೇಲೆ ಅಮೆರಿಕವು ಭದ್ರತಾ ದೃಷ್ಟಿಯಿಂದಲೇ ಭಾರತದೊಡನೆ ಅಣುವಾಣಿಜ್ಯ ಮತ್ತು ಹೈಟೆಕ್ ಟ್ರೇಡುಗಳ ಮೇಲೆ ನಷೇಧ ವಿಧಿಸಿತ್ತು. ಈಗ ಭಾರತವು ಅಮೆರಿಕಕ್ಕೆ ತನ್ನ ನಷ್ಟೆಯನ್ನು ಸಂಶಯಾತೀತವಾಗಿ ಸಾಬೀತು ಮಾಡಿರುವುದರಿಂದ ಮತ್ತು ಈ ನರ್ಭಂಧ ತೆಗೆಯದೆ ಹೊರತು ಅಣು ವಾಣಿಜ್ಯದಲ್ಲಿರುವ ಅಮೆರಿಕನ್ ಕಂಪನಗಳಿಗೆ ಭಾರತದ ಮಾರುಕಟ್ಟೆಯಾಗಲೀ, ಅಮೆರಿಕನ್ನರಿಗೆ ಹೊಸ ಕೆಲಸವಾಗಲೀ ಸಿಗುವುದು ಸಾಧ್ಯವಿಲ್ಲವೆಂದೂ ಅಮೆರಿಕ ಪರಿಗಣಿಸಿದ್ದರಿಂದಲೇ ಆ ನರ್ಭಂಧಗಳನ್ನು ತೆಗೆದುಹಾಕಲು ಮುಂದಾಯಿತು. ಈ ರಾಜಕೀಯ ಅಥರ್ಿಕತೆ ಅರ್ಥ ಮಾಡಿಕೊಳ್ಳದ ಭ್ರಾಂತಿವೀರರು ಭಾರತ ಸೂಪರ್ಪವರ್ ಆಗಿದ್ದನ್ನು ಪರಿಗಣಿಸಿಯೇ ಅಮೆರಿಕ ಎಲ್ಲಾ ನರ್ಭಂಧಗಳನ್ನು ಸಡಿಲಿಸುತ್ತಿದೆ ಎಂದು ನಂಬಲೂ ಮತ್ತು ನಂಬಿಸಲೂ ಮುಂದಾಗಿದ್ದಾರೆ. ಈ ಮಹಾಶಯರುಗಳಿಗೆ ಭಾರತ ತನ್ನ ಮಾರುಕಟ್ಟೆಯ ರಕ್ಷಣೆಗೆ ಮಾಡಿಕೊಳ್ಳುತ್ತಿರುವ ಪ್ರೊಟೆಕ್ಷನಸ್ಟ್ ನತಿಯನ್ನು ಒತ್ತಡ ಹೇರಿ ಬದಲಿಸುತ್ತಿರುವ ಅಮೆರಿಕ ತನ್ನ ಮಾರುಕಟ್ಟೆಯನ್ನು ಮಾತ್ರ ಭಾರತಕ್ಕೆ ತೆರವು ಮಾಡುತ್ತಿಲ್ಲ. ಈಗಾಗಲೇ ಇದ್ದ ಔಟ್ಸೋಸರ್ಿಂಗ್(ಹೊರಗುತ್ತಿಗೆ) ಮಾರುಕಟ್ಟೆಯ ವ್ಯಾಪ್ತಿಯನ್ನೂ ಕುಗ್ಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರಿಂದ ಭಾರತದಲ್ಲಿ ಸೃಷ್ಟಿಯಾಗಿದ್ದ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಐಟಿ ಉದ್ಯಮದ ಅಹವಾಲಿಗೆ ಒಬಾಮಾ ಸಕರ್ಾರ ಕಿಂಚಿತ್ತೂ ಅಲುಗಾಡಿಲ್ಲ. ಬದಲಿಗೆ ಒಬಾಮಾ ತಾನು ಹೊರಗುತ್ತಿಗೆ ಉದ್ಯಮಕ್ಕೆ ಕಡಿವಾಣ ಹಾಕಿ ಅಮೆರಿಕದಲ್ಲೇ ಆ ಉದ್ಯೋಗಗಳನ್ನು ಉಳಿಸಿದ್ದರ ಬಗ್ಗೆ ಯಾವುದೇ ಬಗೆಯ ವ್ಯಥೆಯಿಲ್ಲ ಎಂದು ಹೇಳಿದ್ದಾರೆ. ಒಂದು ಕಡೆ ಅಮೆರಿಕವು ತನ್ನ ನತಿಯನ್ನು ಇನ್ನಷ್ಟು ಕಠಿಣಗೊಳಿಸುತ್ತಿರುವುದರಿಂದ ಭಾರತದ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತವೆ. ಆದರೂ ಭಾರತವು ಮಾತ್ರ ತನ್ನ ನತಿಗಳನ್ನು ಸಡಿಲಗೊಳಿಸಿ ಅಮೆರಿಕಕ್ಕೆ 50,000 ಉದ್ಯೋಗಗಳನ್ನು ದೊರಕಿಸಿಕೊಡಬೇಕು. ಇದು ಅಮೆರಿಕದ ನತಿ. ಅಲ್ಲಿ ಕರಿಯ ಒಬಾಮಾ ಇದ್ದರೂ ಇದೇ ನತಿ. ಬಿಳಿಯ ಬುಷ್ ಇದ್ದರೂ ಅದೇ ನತಿ. ತಮ್ಮ ಈ ಭೇಟಿಯನ್ನು ಅಮೆರಿಕ ಖಿತಿಠ ಘಚಿಥಿ ಊರತಿಚಿಥಿ- ಛಿಡಿಜಚಿಣಟಿರ ರಿಠಛ ಠಠಿಠಿಠಡಿಣಣಟಿಣಜ ಜಿಠಡಿ ಛಠಣ ಣಜ ಛಿಠಣಟಿಣಡಿಜ (ದ್ವಿಮುಖ ಪಥವುಳ್ಳ ಹೆದ್ದಾರಿ-ಎರಡೂ ದೇಶಗಳಲ್ಲೂ ಉದ್ಯೋಗಗಳನ್ನು ಸೃಷ್ಟಿಸುವ ಉಪಕ್ರಮ) ಎಂದು ಬಣ್ಣಿಸಿಕೊಂಡಿದೆ. ಆದರೆ ಮೇಲೆ ನೋಡಿದಂತೆ ಅದು ಒನ್ವೇ ಪಮರ್ಿಟ್ ಉಳ್ಳ ಹೆದ್ದಾರಿ. ಈ ಕ್ರಮಗಳು ಎರಡೂ ದೇಶಗಳನ್ನು ಗೆಲ್ಲಿಸುತ್ತದೆ ಎಂದು ಅಮೆರಿಕ ಹೇಳುತ್ತದೆ. ಆದರೆ ಈ ಆಟ ಹೇಗಿದೆ ಎಂದರೆ ಬಲಶಾಲಿ ಸ್ಪಧರ್ಿ ಊಜಚಿಜ ತಿಟಿ, ಖಿಚಿಟ ಙಠಣ ಟಠಠಜ (ರಾಜ ಬಿದ್ದರೆ ನಾನು ಗೆದ್ದಂತೆ, ರಾಣಿ ಬಿದ್ದರೆ ನನು ಸೋತಂತೆ) ಎಂದು ಬೆಣ್ಣೆಯಂಥಾ ಮಾತಿನಲ್ಲಿ ಮೋಸ ಮಾಡುವಂತಿದೆ. ಒಬಾಮಾನ ಭಾರತ ಭೇಟಿಯ ನಜವಾದ ಉದ್ದೇಶ ಇದಾಗಿದ್ದರಿಂದಲೇ ಒಬಾಮಾ ಮೊದಲು ಭೇಟಿ ನಡಿದ್ದು ರಾಜಕೀಯ ರಾಜಧಾನ ದೆಹಲಿಗಲ್ಲ. ವಾಣಿಜ್ಯ ರಾಜಧಾನ ಮುಂಬೈಗೆ. ಅಮೆರಿಕ ಅಧ್ಯಕ್ಷನ ಪುಷ್ಪಕ ವಿಮಾನದಲ್ಲಿ ಬಂದವರು ರಾಜಕೀಯ ಮುತ್ಸದ್ಧಿಗಳಲ್ಲ. ಬದಲಿಗೆ ಅಮೆರಿಕದ ಮಿಲಿಟರಿ-ವೈಮಾನಕ ವಾಣಿಜ್ಯೊದ್ಯಮದ ಲೀಡರ್ ಆದ ಬೋಯಿಂಗ್ ಕಂಪನಯ ಅಧ್ಯಕ್ಷ ಡಬ್ಲ್ಯೂ. ಜೇಮ್ಸ್ ಮೆಕ್ನೆಮಿ ಜೂನಯರ್, ಪೆಪ್ಸಿಯ ಮುಖ್ಯಸ್ಥೆ ಭಾರತೀಯ ಸಂಜಾಂತೆ ನೂಯಿ, ಹನವೆಲ್ ಇಂಟರ್ನ್ಯಾಷನಲ್, ಮೆಕ್ಗ್ರಾ ಹಿಲ್, ಎ.ಇ.ಎಸ್ ಕಾಪರ್್ ಇನ್ನತರ ಇನ್ನೂರು ವಾಣಿಜ್ಯೋದ್ಯಮಗಳ ಮುಖ್ಯಸ್ಥರು. ಇದು ಒಬಾಮಾ ಭೇಟಿಯ ವಾಸ್ತವಗಳು. ಈಗ ಈ ಭೇಟಿಯಿಅಲ್ಲಿ ನಜವಾಗಿ ಆದ ಒಪ್ಪಂದಗಳೆಷ್ಟು? ಇದರಲ್ಲಿ ಭಾರತಕ್ಕೆ ದಕ್ಕಿದ್ದೇನು? ಅಮೆರಿಕ ಕಿತ್ತುಕೊಂಡಿದ್ದೇನು ಎಂದು ನೋಡೋಣ!ಮೊದಲನೆಯದಾಗಿ ಈ ಭೇಟಿಯಲ್ಲಿ ಅಮೆರಿಕ ಹೈಟೆಕ್ ಟ್ರೇಡ್ ಅಂದರೆ ಉನ್ನತ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂರೆ ಹೇರಿದ್ದ ನರ್ಭಂಧಗಳನ್ನು ತೆಗೆದು ಹಾಕಿದೆ. ಅಂದರೆ ಭಾರತದ ವಾಯುಪಡೆಯ ಆಧುನಕರಣಕ್ಕೆ ಬೇಕಾದ ಎಂಜಿನ್ಗಳು ಮತ್ತು ಅಣುಶಕ್ತಿ ಸ್ಥಾವರಗಳಿಗೆ ಬೇಕಾದ ತಂತ್ರಜ್ಞಾನವನ್ನು ಭಾರತಕ್ಕೆ ಮಾರಲು ಅಮೆರಿಕದ ಕಂಪನಗಳಿಗೆ ಶಾಸನಾತ್ಮಕವಾಗಿ ಇದ್ದ ತಡೆಗಳು ನವಾರಣೆಯಾಗಿದೆ. ಅಕ್ಟೋಬರ್ 8ರ ಭಾರತ ಮತ್ತು ಅಮೆರಿಕ ಉದ್ಯಮಪತಿಗಳ ಸಮ್ಮೇಳನದಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಅಮೆರಿಕನ್ ಕಂಪನಗಳಿಂದ ಭಾರತದ ಸಕರ್ಾರ ಮತ್ತು ಕೆಲವು ಖಾಸಗಿ ಕಂಪನಗಳು 10 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಕೊಳ್ಳಲು ಸಹಿ ಹಾಕಿವೆ.ಭಾರಿ ವಿಮಾನ ಕ್ಷೇತ್ರ: ಅಮೆರಿಕದಲ್ಲಿ 2008ರಲ್ಲಿ ಹಣಕಾಸು ಬಿಕ್ಕಟ್ಟು ಪ್ರಾರಂಭವಾದ ಮೇಲೆ ಅತ್ಯಂತ ಹೆಚ್ಚು ನಷ್ಟಕ್ಕೊಳಗಾಗಿದ್ದು ಮತ್ತು ಅತಿ ಹೆಚ್ಚು ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ದು ಬೋಯಿಂಗ್ ವಿಮಾನ ತಯಾರಿಕಾ ಕಂಪನ. ಈ ಭೇಟಿಯಲ್ಲಿ ಭಾರತ ಸಕರ್ಾರದೊಡನೆ ಅದರಲ್ಲೂ ರಕ್ಷಣಾ ಇಲಾಖೆಯೊಡನೆಯಾಗಿರುವ ಒಪ್ಪಂದದ ಪ್ರಕಾರ ಬೋಯಿಂಗ್ ಕಂಪನ 10 ಅ-17 ಉಟಠಛಜಟಚಿಣಜಡಿ ಮಿಲಿಟರಿ ವಿಮಾನಗಳನ್ನು ಭಾರತಕ್ಕೆ ಮಾರಲಿದೆ. ಇದನ್ನು ಕೊಂಡ ನಂತರ ಅಮೆರಿಕವನ್ನು ಬಿಟ್ಟರೆ ಪ್ರಪಂಚದಲ್ಲಿ ಅತಿ ಹೆಚ್ಚು ಬೋಯಿಂಗ್ ವಿಮಾನಗಳನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದಾಗುತ್ತದೆ ಎಂಬುದನ್ನು ಬಿಟ್ಟರೆ ಇದರಿಂದ ಭಾರತಕ್ಕೆ ಹೆಚ್ಚಿನ ನೌಕೂಲವೇನೂ ಇಲ್ಲ. ಆದರೆ ಅಮೆರಿಕಕ್ಕೆ? ಒಮ್ದು ಅಂದಾಜಿನ ಪ್ರಕಾರ ಪ್ರತಿ ಅ-17 ವಿಮಾನವು ಅಮೆರಿಕದ 44 ರಾಜ್ಯಗಳಲ್ಲಿ ಹಂಚಿಹೋಗಿರುವ 650 ಸಣ್ಣ ಉದ್ದಿಮೆದಾರರಿಗೆ ಕೆಲಸವನ್ನು ನಡುತ್ತದಲ್ಲದೆ ಅಮೆರಿಕದ ಕ್ಯಾಲಿಫೋರ್ನಯಾದಲ್ಲಿರುವ ಬೃಹತ್ ಬೋಯಿಂಗ ವಿಮಾನ ತಯಾರಿಕಾ ಕಾಖರ್ಾನೆಗೆ ಒಂದು ಇಡೀ ವರ್ಷ ಕೆಲಸ ಕೊಡುತ್ತದೆ. 4.1 ಬಿಲಿಯನ್ ಡಾಲರ್ ಎಂದರೆ ಅಂದಾಜು 22,000 ಕೋಟಿ ರೂಪಾಯಿ ಮೊತ್ತದ ಈ ಒಪ್ಪಂದವು ಅಮೆರಿಕದಲ್ಲಿ 22,160 ಕೆಲಸಗಳನ್ನು ಸೃಷ್ಟಿಸಲಿದೆ.ಲಘು ಯುದ್ಧ ವಿಮಾನಗಳಿಗೆ ಎಂಜಿನ್ ಸರಬರಾಜು: ಈ ಭೇಟಿಯಲ್ಲಿ ಅಮೆರಿಕ ಹೈಟೆಕ್ ಟ್ರೇಡಿಗಿದ್ದ ನರ್ಭಂಧವನ್ನು ತೆಗೆದಿದ್ದರಿಂದ ಲಘು ಯುದ್ಧ ವಿಮಾನಗಳಿಗೆ ಹೈಟೆಕ್ ತಂತ್ರಜ್ಞಾನವನ್ನು ಸರಬರಾಜು ಮಾಡುವ ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪನ- ಉಇ- ಗೆ ಸಾಕಷ್ಟು ಲಾಭವಾಗಿದೆ. ಅದು ಈಗ ಭಾರತದ ತೇಜಸ್ ಲಘು ಯುದ್ಧ ವಿಮಾನಗಳಿಗೆ 107, ಈ414 ಎಂಜಿನ್ ಅನ್ನು ಭಾರತದ ವೈಮಾನಕ ಅಭಿವೃದ್ಧಿ ಸಂಸ್ಥೆಗೆ ಮಾರಲು ಒಪ್ಪಂದವನ್ನು ಮಾಡಿಕೊಂಡಿದೆ. ಇದು 5000 ಕೋಟಿ ರೂಪಾಯಿಗಳ ಕಾಂಟ್ರಾಕ್ಟ್ ಆಗಿದ್ದು 4,440 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದಲ್ಲದೆ 5000 ಕೋಟಿ ರೂಪಾಯಿಗಳ ಮತ್ತೊಂದು ಒಪ್ಪಂದದಲ್ಲಿ ಇದೇ ಕಂಪನಯು ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ರೈಲ್ವೇ ಇಲಾಖೆಗೆ 1000 ಎಂಜಿನ್ಗಳನ್ನು ಸರಬರಾಜು ಮಾಡುವ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ರಿಲಯನ್ಸ್ ಕಂಪನಯ ಜೊತೆಗೆ ಮಾಡಿಕೊಂಡಿರುವ ಮತ್ತೊಂದು ಒಪ್ಪಂದದಲ್ಲಿ ಉಇ, ಸಮಾಲ್ಕೋಟ್ನಲ್ಲಿ ರಿಲಯನ್ಸ್ ಸ್ಥಾಪಿಸಲಿರುವ 2500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರಕ್ಕೆ ಆರು ಆಧುನಕ ಗ್ಯಾಸ್ ಟಬರ್ೆನ್ ಮತ್ತು ಮೂರು ಸ್ಟೀಮ್ ಟಬರ್ೆನ್ಗಳನ್ನು ಅಂದಾಜು 5000 ಕೋಟಿ ವೆಚ್ಚದಲ್ಲಿ ಸರಬರಾಜು ಮಾಡಲಿದೆ. ಇದು ಅಂದಾಜು 2650 ಉದ್ಯೋಗಗಳನ್ನು ಅಮೆರಿಕಕ್ಕೆ ಸೃಷ್ಟಿಸಲಿದೆ.ನಾಗರಿಕ ವಿಮಾನ ಮಾರಾಟ ಒಪ್ಪಂದ: ಇದಲ್ಲದೆ ಭಾರತದ ಖಾಸಗಿ ವಿಮಾನ ಕಂಪನಯಾದ ಸ್ಪೈಸ್ಜೆಟ್ ಕಂಪನಯು ಬೋಯಿಂಗ ಕಂಪನಯಿಂದ 30, ಬೋಯಿಂಗ್ ಃ737-800 ವಿಮಾನಗಳನ್ನು ಖರೀದಿಸಲಿದೆ. ಇದು ಅಂದಾಜು 13,000 ಕೋಟಿ ರೂಪಾಯಿಗಳ ಬೃಹತ್ ಕಾಂಟ್ರಾಕ್ಟ್ ಆಗಿದ್ದು ಭಾರತದ ಹಣಕಾಸು ಸಂಸ್ಥೆಗಳು ಸ್ಪೈಸ್ಜೆಟ್ ಕಂಪನಗೆ ಕಡಿಮೆ ದರದಲ್ಲಿ ಹಣಕಾಸನ್ನು ಒದಗಿಸಲಿದೆ. ಈ ಕಾಂಟ್ರಾಕ್ಟು ಅಮೆರಿಕದಲ್ಲಿ 12,970 ಉದ್ಯೋಗಗಳನ್ನು ಸೃಷ್ಟಿಸಲಿದೆ.ಇವು ಒಬಾಮಾ ಭೇಟಿಯಲ್ಲಿ ಆದ ಕೆಲವು ಮುಖ್ಯವಾದ ಒಪ್ಪಂದಗಳು. ಇದಲ್ಲದೆ ಹಲವಾರು ಅಮೆರಿಕದ ಖಾಸಗಿ ಕಂಪನಗಳು ಭಾರತದ ಕಂಪನಗಳೊಂದಿಗೆ ಹತ್ತಾರು ಒಪ್ಪಂದಗಳನ್ನು ಮಾಡಿಕೊಂಡಿದೆ. ಖಾಸಗಿ ಕಂಪನಗಳು ಮಾಡಿಕೊಂಡ ಎಲ್ಲಾ ಒಪ್ಪಂದಕ್ಕೂ ಹಣಕಾಸು ಗ್ಯಾರಂಟಿ ವಿಷಯದಲ್ಲಿ ಭಾರತ ಸಕರ್ಾರದ ಮುಚ್ಚಳಿಕೆ ಇರುತ್ತದೆ. ಕೆಲವು ಕಾಂಟ್ಟ್ರಾಕ್ಟ್ಗಳು ಎಂಥಾ ಅಪಾಯಕಾರಿಯಾಗಿದೆಯೆಂದರೆ ಮಹಾರಾಷ್ಟ್ರ ಸಕರ್ಾರವು ತನ್ನ ಅಂತರಿಕ ಸುರಕ್ಷತೆಯ ಆಧುನಕರಣವನ್ನು ಅಮೆರಿಕದ ಕಂಪನಗೆ ಒಪ್ಪಿಸಿದೆ. ಅಮೆರಿಕದ ಡ್ಯೂಕ್ ಆರೋಗ್ಯ ಸೇವೆಯ ಕಂಪನ ಮತ್ತು ಭಾರತದ ಮೆದಾಂತ ಹಾಸ್ಪಿಟಲ್ ಕಂಪನಗಳು ಒಪ್ಪಂದಕ್ಕೆ ಸಹಿ ಹಾಕಿದ್ದು ಜಂಟಿ ಕ್ಲಿನಕಲ್ ರಿಸಚರ್್ ಮಾಡಲಿವೆ. ಇದಕ್ಕೆ ಭಾರತದ ರೋಗಿಗಳು ಪ್ರಯೋಗ ಪಶುಗಳಾಗಲಿದ್ದರೆ ಅಮೆರಿಕದಲ್ಲಿ ಈಗಾಗಲೇ ಬಳಸಲಾಗಿರುವ ಎರಡನೇ ದಜರ್ೆ ಉಪಕರಣಗಳನ್ನು ಭಾರತಕ್ಕೆ ಸಾಗಿಹಾಕಲಾಗುತ್ತಿದೆ. ಇದಲ್ಲದೆ ಕೃಷಿ ಕ್ಷೇತ್ರದಲ್ಲೂ ಹಲವಾರು ಕಾಗರ್ಿಲ್ ಮತ್ತು ಡುಪಾಂಟ್ನಂಥಾ ಅಗ್ರಿ ಬಿಸಿನೆಸ್ ಕಂಪನಗಳು ಎರಡನೇ ಹಸಿರು ಕ್ರಾಂತಿಯನ್ನು ಮುಂದುವರೆಸುವ ಹೆಸರಿನಲ್ಲಿ ತಮ್ಮ ಅಪಾಯಕಾರಿ ಬೀಜ ಮತ್ತು ಇನ್ನತರ ಸರಕುಗಳಿಗೆ ಮಾರುಕಟ್ಟೆ ಪಡೆದುಕೊಂಡಿವೆ.ಇದೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲಿ ಅಣುವಿದ್ಯುತ್ ಉದ್ದಿಮೆಯಲ್ಲಿರುವ ಬೃಹತ್ ಬಹುರಾಷ್ಟ್ರೀಯ ಕಂಪನಗಳು ನಾಗರಿಕ ಅಣು ಶಕ್ತಿ ಕಾಯಿದೆ ಜಾರಿಯಾದ ಮೇಲೆ ದೊರಕಲಿರುವ ಬೃಹತ್ ಮಾರುಕಟ್ಟೆಯನ್ನು ದಕ್ಕಿಸಿಕೊಳ್ಳಲು ಜೊಲ್ಲುಸುರಿಸುತ್ತಾ ಕಾದುಕುಳಿತಿವೆ. ಆದರೆ ಭಾರತದ ಸಂಸತ್ತಿನಲ್ಲಿ ಅಣುಶಕ್ತಿ ಅವಘಡದ ಕಾಯಿದೆ ಬಗ್ಗೆ ಚಚರ್ೆ ನಡೆದು ಒಂದು ವೇಳೆ ಈ ಸ್ಥಾವರಗಳಲ್ಲಿ ಅವಘಡ ಉಂಟಾದರೆ ಅದಕ್ಕೆ ಸರಬರಾಜುದಾರನೇ ಹೊಣೆಹೊರಬೇಕಾದ ಮತ್ತು 1500 ಕೋಟಿ ರೂ.ಗಳಷ್ಟು ಪರಿಹಾರ ನಡಬೇಕಾದ ಕಾನೂನು ಮಾಡಲಾಗಿದೆ. ಹಾಗೆ ನೋಡಿದರೆ ಈ ಶಾಸನವೇ ಅಮೆರಿಕದ ಪರವಾಗಿದ್ದು ಭಾರತದ ರಾಜಕೀಯ ಗುಲಾಮತನವನ್ನು ತೋರಿಸುತ್ತದೆ. ಆದರೆ ಅಮೆರಿಕಕ್ಕೆ ಇದರಿಂದಲೂ ಸಮಾಧಾನವಿಲ್ಲ. ಭಾರತದ ಸಂಸತ್ತು ಅಣು ಅವಘಡದ ಬಗ್ಗೆ ಅಮೆರಿಕದ ಕಂಪನಗಳ ಮೇಲೆ ಅಲ್ಪಸ್ವಲ್ಪ ಜವಾಬ್ದಾರಿ ಹೊರಿಸುವ ಕಾನೂನು ಮಾಡಿದ್ದರೂ ಅದನ್ನು ನಗಣ್ಯಗೊಳಿಸಲು ತಾನು ಪ್ರಸ್ತಾಪಿಸಿರುವ ಅಠಟಿತಜಟಿಣಠಟಿ ಠಟಿ ಖಣಠಿಠಿಟಜಟಜಟಿಣಚಿಡಿಥಿ ಅಠಟಠಿಜಟಿಚಿಣಠಟಿ ಜಿಠಡಿ ಓಣಛಿಟಜಚಿಡಿ ಆಚಿಟಚಿರಜ ಗೆ ಸಹಿಹಾಕಬೇಕೆಂದು ಒತ್ತಾಯಿಸುತ್ತಾ ಬಂದಿದೆ. ಇದು ಅಣುತಂತ್ರಜ್ನಾನ ಸರಬರಾಜುದಾರರ ಮೇಲಿನ ಹೊಣೆಗಾರಿಕೆಯನ್ನು ಕಡಿತಗೊಳಿಸುತ್ತದೆ. ಇದು ಅಂತರರಾಷ್ಟ್ರೀಯ ಒಪ್ಪಂದವಾದ್ದರಿಂದ ಭಾರತದ ಶಾಸನ ಆಗ ಅಪ್ರಸ್ತುತವಾಗುತ್ತದೆ. ಹೀಗಾಗಿಯೇ ಅಮೆರಿಕ, ರೋಮಾನಯಾ, ಮೊರಕ್ಕೋ ದೇಶಗಳನ್ನು ಬಿಟ್ಟರೆ ಬೇರೆ ಯಾವ ದೇಶಗಳೂ ಇದಕ್ಕೆ ಸಹಿ ಹಾಕಿರಲಿಲ್ಲ. ಒಬಾಮಾ ಭೇಟಿಗೆ ಸ್ವಲ್ಪ ಮುಂಚೆ ಭಾರತ ಸಕರ್ಾರವೂ ಸಹ ಇಂಥಾ ಒಪ್ಪಂದಕ್ಕೂ ಇದೇ ಅಕ್ಟೋಬರ್ 27ರಂದು ಸಹಿ ಹಾಕಿದೆ. ಇದು ಒಂದೆಡೆ ಅಮೆರಿಕದ ಕಂಪನಗಳಿಗೆ 1,50,000 ಕೋಟಿ ರೂಪಾಯಿ ಮಾರುಕಟ್ಟೆಯನ್ನು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದರೆ ಭಾರತಕ್ಕೆ ಶಾಶ್ವತ್ ಅಪಾಯವನ್ನು ತಂದೊಡ್ಡಿದೆ.ಇದು ಅಸಲಿ ವಿಷಯ. ಮೇಲ್ನೋಟಕ್ಕೆ ನೋಡಿದರೆ ಭಾರತ ಸಕರ್ಾರವೇ ಅಮೆರಿಕದ ದೊಡ್ಡ ಗಿರಾಕಿಯಾಗಿರುವುದು ಎದ್ದು ಕಾಣುತ್ತದೆ. ಭಾರತದ ಜನತೆಯ ತೆರಿಗೆ ಹಣ ಮತ್ತು ದೇಶದ ಸಂಪನ್ಮೂಲಗಳನ್ನು ಅಮೆರಿಕ ಸಾಮ-ಬೇಧ-ದಂಡಗಳನ್ನು ಬಳಸಿ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಅದಕ್ಕೆ ವಾಣಿಜ್ಯ ಮೈತ್ರಿ ಎಂಬ ಮುಖವಾಡವನ್ನು ಹಾಕಲಾಗಿದೆ. ಅಮೆರಿಕ ಸಾಮಾಜ್ಯಶಾಹಿಯ ಈ ಬಗೆಯ ಆಕ್ರಮಣಕಾರಿ ವಾಣಿಜ್ಯ ಯುದ್ಧಕ್ಕೆ ಒಬಾಮಾನ ಭಾಷಣದ ಮತ್ತು ಮಿಶೆಲ್ ಒಬಾಮಾಳ ಡ್ಯಾನ್ಸುಗಳ ತೆರೆಯನ್ನು ಹಾಕಲಾಗಿದೆ. ಭಾರತ-ಅಮೆರಿಕಗಳ ಉದ್ದಿಮೆಪತಿಗಳ ಸಭೆಯಲ್ಲಿ ಮಾತನಾಡುತ್ತಾ ಒಬಾಮಾರವರು ಭಾರತ ಅಮೆರಿಕದ ವಾಣಿಜ್ಯ ವಹಿವಾಟು 35 ಬಿಲಿಯನ್ ಡಾಲರ್ ಮೀರಿಲ್ಲ. ಹೀಗಾಗಿ ಅಮೆರಿಕ ವಹಿವಾಟು ನಡೆಸುತ್ತಿರುವ ದೇಶಗಳಲ್ಲಿ ಭಾರತ 12ನೇ ಸ್ಥಾನದಲ್ಲಿದೆ. ಇದು ಹೆಚ್ಚಬೇಕು. 120 ಕೋಟಿ ಜನಸಂಖ್ಯೆ ಇರುವ ಭಾರತ ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರನಾಗದೇ ಇರಲು ಯಾವ ಕಾರಣವೂ ಇಲ್ಲ ಎಂದು ಹೇಳಿದ್ದಾರೆ. ಭಾರತವು ಕಳೆದ ಹತ್ತು ವರ್ಷಗಳಲ್ಲಿ 20 ಬಿಲಿಯನ್ ಡಾಲರ್ನಷ್ಟು ಸೇವೆ ಸರಕುಗಳನ್ನು ರಫ್ತು ಮಾಡಿದೆ, ಇದರಿಂದ ಭಾರತದಲ್ಲಿ ಪ್ರಧಾನವಾಗಿ ಐಟಿ-ಬಿಟಿ ಕ್ಷೇತ್ರದಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಅಮೆರಿಕ ಭಾರತ-ಅಮೆರಿಕ ವಾಣಿಜ್ಯ ಹೆಚ್ಚಾಗಬೇಕೆಂದು ಒತ್ತಡ ಹೇರುತ್ತಿರುವಾಗ ಭಾರತದಿಂದ ಇಂಥಾ ರಫ್ತುಗಳು ಹೆಚ್ಚಾಗಬೇಕೆಂದು ಬಯಸುತ್ತಿಲ್ಲ. ಅದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವುದರಿಂದ ಅಮೆರಿಕದ ಮಾರುಕಟ್ಟೆಯನ್ನು ಭಾರತ ರಫ್ತುದಾರರಿಗೆ ತೆರೆಯಲಾಗುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ. ವಿಶ್ವ ವಾಣಿಜ್ಯ ಸಂಸ್ಥೆಯ ಶರತ್ತುಗಳು ಇದ್ದಾಗ್ಯೂ ಅಮೆರಿಕ ತನ್ನ ಮಾರುಕಟ್ಟೆಯನ್ನು ಮಾತ್ರ ರಕ್ಶಿಸಿಕೊಂಡಿದೆಯೇ ಹೊರತು ಭಾರತದಂಥ ಮೂರನೇ ಪ್ರಪಂಚಗಳಿಗೆ ತೆರೆದಿಲ್ಲ. ಅದಕ್ಕೆ ಒಂದೇ ಒಂದು ಅಪವಾದ ಚೀನಾ. ಹೀಗಾಗಿ ಚೀನಾದ ವಿರುದ್ಧ ಅಮೆರಿಕ ಸಾರಿರುವ ಕರೆನ್ಸ ಮತ್ತು ವಾಣಿಜ್ಯ ಯುದ್ಧಕ್ಕೆ ಭಾರತ, ಜಪಾನ್, ಕೊರಿಯ ಮತ್ತಿತರ ದೇಶಗಳನ್ನು ಒಪ್ಪಿಸುವುದೂ ಒಬಾಮಾ ಭೇಟಿಯ ಪ್ರಮುಖ ಉದ್ದೇಶವಾಗಿತ್ತು.ಇದರಲ್ಲಿ ಭಾರತ ಪಡೆದುಕೊಂಡಿದ್ದೇನು? ಅಮೆರಿಕದ ಅಧ್ಯಕ್ಷ ಪಾಕಿಸ್ತಾನಕ್ಕೆ ಭೇಟಿ ನಡದೆ ಭಾರತಕ್ಕೆ ಮಾತ್ರ ಭೇಟಿ ಕೊಟ್ಟ ಹೆಚ್ಚುಗಾರಿಕೆ. ಅಮೆರಿಕದ ಅಧ್ಯಕ್ಷನನ್ನು ನಾಲ್ಕು ದಿನಗಳ ಕಾಲ ಭಾರತದಲ್ಲಿ ಉಪಚರಿಸಿದ ಧನ್ಯತೆ. ಭದ್ರತಾ ಮಂಡಳಿಯ ಸ್ಥಾನ ಪಡೆಯಬೇಕೆಂದರೆ ಅಂತರರಾಷ್ಟ್ರೀಯ ವಿಷಯಗಳಲ್ಲಿ ಅಷ್ಟೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂಬ ಬಗ್ಗೆ ಬಿಟ್ಟಿ ಉಪದೇಶ. ಅಮೆರಿಕದ ಯುದ್ಧ ಸಾಮಗ್ರಿಗಳಿಗೆ ಅತಿ ದೊಡ್ಡ ಗ್ರಾಹಕನಾದ ಹೆಗ್ಗಳಿಕೆ. ಇದರಿಂದ ಭಾರತದ ಜನರಿಗೆ ಏನು ದಕ್ಕಿದಂತಾಯಿತು. ವಾಸ್ತವವವಾಗಿ ರೈತರ ಆತ್ಮಹತ್ಯೆಗಳಿಗೆ, ಕಾಮರ್ಿಕರು ಬೀದಿ ಪಾಲಾಗುತ್ತಿರುವುದಕ್ಕೆ, ಇಲ್ಲಿ ನರುದ್ಯೋಗ ಹೆಚ್ಚುತ್ತಿರುವುದಕ್ಕೆ ಅಮೆರಿಕದ ವಿದೇಶಾಂಗ ಮತ್ತು ಆಥರ್ಿಕ ನತಿಗಳು ಮತ್ತು ಅದರ ನೇತೃತ್ವದಲ್ಲಿ ಜಾರಿಯಾಗಿರುವ ವಿಶ್ವ ವಾಣಿಜ್ಯ ನತಿಗಳೇ ಕಾರಣ. ಈ ಭೇಟಿಯಲ್ಲಿ ಒಬಾಮಾ ಆ ಎಲ್ಲಾ ನತಿಗಳನ್ನು ಇನ್ನೂ ಕಡ್ಡಾಯವಾಗಿ ಮತ್ತು ಕಠಿಣವಾಗಿ ಜಾರಿಗೆ ತರಬೇಕೆಂದು ಆದೇಶಿಸಿದ್ದಾನೆ. ಭಾರತದ ಮೇಲೆ ಅಮೆರಿಕ ಒಂದು ಬಗೆಯ ಟ್ರೇಡ್ ಯುದ್ಧವನ್ನೇ ನಡೆಸಿದೆ. ಅವೆಲ್ಲವನ್ನೂ ನಮ್ಮ ನಾಂಕರು ಜೀ ಹುಜೂರ್ ಎಂದು ಒಪ್ಪಿಕೊಂಡಿದ್ದಾರೆ.ನಮ್ಮ ಸೇನೆಯ ಮುಂಚೂಣಿಯಲ್ಲಿರುವ ದಂಡನಾಯಕನೇ ನಮ್ಮ ಶತ್ರುವಾಗಿರುವಾಗ ಈ ಯುದ್ಧವನ್ನು ಗೆಲ್ಲುವುದಾದರೂ ಹೇಗೆ?
ಶಿವಸುಂದರ್, ಲಂಕೇಶ ಬಳಗದ ಚಾವರ್ಾಕ ಅಂಕಣಕಾರರು.

vazzal, shivangouda end story



ಕಮಲ ಪಕ್ಷದ ಮಾನಪ್ಪ ವಜ್ಜಲ ಮತ್ತು ಶಿವನಗೌಡ ತಾಲೂಕುಗಳ ಸವರ್ಾಂಗೀಣ ಅಭಿವೃದ್ಧಿಗೆ ಎಂದೆಂದೂ ಶ್ರಮಿಸಲಿಲ್ಲ. ಸಕರ್ಾರದ ಹತ್ತಾರು ಯೋಜನೆಗಳನ್ನು ಯಾರೊಬ್ಬರಿಗೂ ತಲುಪಿಸಲಿಲ್ಲ. ಲಿಂಗಸ್ಗೂರಿನಲ್ಲಿ ಮಾನಪ್ಪ ತನ್ನ ಸ್ವಜಾತಿ ಅಧಿಕಾರಿಗಳನ್ನು ತಂದು ತಾಲೂಕನ್ನು ಲೂಟಿ ಮಾಡಲು ಬಿಟ್ಟಿದ್ದಾನೆ. ಅದುವೇ ಆತನ 2ವರೆ ವರ್ಷದ ಮಹ್ಸಾಧನೆಯಾಗಿದೆ. ಇತ್ತ ಶಿವನಗೌಡನು ದೇವದುರ್ಗದಲ್ಲಿ ತನ್ನ ಸಂಬಂಧಿಗಳಿಗೆ ಹತ್ತಾರು ಕಾಮಗಾರಿಗಳನ್ನು ನೀಡಿ, ಅವರ ಮುಖಾಂತರ ತನ್ನ ಜೇಬನ್ನು ತುಂಬಿಸಿಕೊಳ್ಳುತ್ತಿದ್ದಾನೆ. ಜೊತೆಯಲ್ಲಿ ಗಲ್ಲಿಗೊಂದು ಬಾರ್ಶಾಫ್ ತೆಗೆಯುತ್ತ, ತನ್ನ ಅವಧಿಯನ್ನು ನೂಕಿದ್ದಾನೆ. ಒಟ್ಟಾರೆ, ಇವರಿಬ್ಬರೂ ತಾಲೂಕಿನ ಜನರಿಗೆ ಮಕ್ಕಳಾಗಿ ಕೆಲಸವು ಮಾಡಿಲ್ಲ. ಈ ಕಡೆ ಕಮಲದವರಿಗೆ ಸ್ಮಶಾನದಲ್ಲಿರುವ ಹೆಣವು ಆಗಲಿಲ್ಲ ಎಂದು ನಮ್ಮ ಪ್ರತಿನಿಧಿ ಸಂಪೇಲ್ಲೇರ್ ವಿಶ್ಲೇಷಿಸುತ್ತಾರೆ.
ಮಾನಪ್ಪ ವಜ್ಜಲನ ಕುರಿತು ಕಳೆದೆರಡು ಬಾರಿ ನಮ್ಮ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಆದಾಗ್ಯೂ ಮಗದೊಮ್ಮೆ ಬರೆಯುವುದು ಅನಿವಾರ್ಯವಾಗಿದೆ. ಇದು ಮಾನಪ್ಪನೆಂಬ ಅನಕ್ಷರಸ್ಥನ ಅಂತ್ಯದ ಸುದ್ದಿ ಎಂದರೆ ತಪ್ಪಾಗಲಾರದು.ಈತ ಲಿಂಗಸ್ಗೂರಿಗೆ ಶಾಸಕನಾದ ಮೇಲೆ ಎಲ್ಲಿಯೂ ಯಾವೊಂದು ಹೇಳಿಕೊಳ್ಳುವ ಕೆಲಸಗಳನ್ನು ಮಾಡಲಿಲ್ಲ. ಸಕರ್ಾರಗಳಿಂದ ಬಂದಂತಹ ಅನುದಾನ ಮತ್ತು ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಲಿಲ್ಲ. ಅತ್ತ ತಾನು ಗೆದ್ದು ಬಂದಿದ್ದ ಬಿಜೆಪಿಯಲ್ಲಿಯೂ ಯಾವೊಂದು ಘನಂದಾರಿ ಕೆಲಸಗಳನ್ನು ಮಾಡಲಿಲ್ಲ. ಅದರಲ್ಲಿ ಒಬ್ಬನೇ ಒಬ್ಬ ಹೊಸ ಕಾರ್ಯಕರ್ತನನ್ನು ಹುಟ್ಟುಹಾಕಲಿಲ್ಲ. (ಕೆಲವೊಬ್ಬರು ಹಣದಾಸೆಗೆ ಮಾನಪ್ಪನಿಂದ ಆಗಾಗ ತಿರುಗುತ್ತಾರೆ. ಅವರ್ಯಾರು ಕಾರ್ಯಕರ್ತರಾಗಲು ಸಾಧ್ಯವಿಲ್ಲ.) ಆದರೆ, ಒಂದಂತೂ ಸ್ಪಷ್ಟ ಮಾನಪ್ಪ ಶಾಸಕನಾದ ಮೇಲೆ ಸ್ವಜಾತಿಯ ಅಧಿಕಾರಿಗಳನ್ನು ಲಿಂಗಸ್ಗೂರಿಗೆ ಎಳೆತಂದು ಇದ್ದಬಿದ್ದದನ್ನೇಲ್ಲ ಮೇಯಲು ಬಿಟ್ಟಿದ್ದು ಬಿಟ್ಟರೇ ಮತ್ತೇನು ಮಾಡಲಿಲ್ಲ. ದುಡ್ಡನ್ನು ಲೂಟಿ ಮಾಡುವದರಲ್ಲಿಯೇ ತನ್ನ 2ವರೆ ವರ್ಷ ಕಳೆದು ಬಿಟ್ಟ.ಇತ್ತೀಚಿಗೆ ನಡೆದ ರಾಜಕೀಯ ದೊಂಬರಾಟಗಳಲ್ಲಿ ಮಾನಪ್ಪ ಬಿಜೆಪಿಯ ವಿಪ್ನ್ನು ಉಲ್ಲಂಘಿಸಿ, ತಾಲೂಕಿನಲ್ಲಿ ಲಿಂಗವಂತರನ್ನು ಒಲೈಸಿಕೊಳ್ಳಲು ತನ್ನ ರಾಜಕೀಯ ಗುರು ಆನ್ವರಿ ಬಸವರಾಜಪ್ಪನ ಹಿಂದೆ ಓಡಿಹೋಗಿ ಯಡಿಯೂರಪ್ಪ 2 ಬಾರಿ ವಿಶ್ವಾಸಮತ ಸೂಚಿಸುವ ಸಂದರ್ಭದಲ್ಲಿ ಗೈರು ಹಾಜರಾಗಿದ್ದ. ಆ ಗೈರು ಹಾಜರಿಯೇ ಇಂದು ಮಾನಪ್ಪನ ಅಂತ್ಯವನ್ನು ಪ್ರಾರಂಭಿಸುತ್ತಿದೆ. ಆ ವಿದ್ಯಮಾನದ ಪರಿಣಾಮ ಬಿಜೆಪಿ ಈತನನ್ನು ಪಕ್ಷದಿಂದ ಉಚ್ಛಾಟಿಸುವ ತೀಮರ್ಾನಕ್ಕೆ ಬಂದಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಧ್ಯಕ್ಷ ತಾಲೂಕಿನ ಎಲ್ಲ ಘಟಕಗಳನ್ನು ವಿಸಜರ್ಿಸಿದ್ದಾನೆ.ಮತ್ತೊಂದೆಡೆ ಮಾನಪ್ಪನನ್ನು ಪಕ್ಷದಿಂದ ಕೈಬಿಡಬಾರದು, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಾರದು ಎಂದು ಕಾರ್ಯಕರ್ತರು ಬೆಂಗಳೂರಿನ ಯಡಿಯೂರಪ್ಪನ ಮನೆ ಮುಂದೆ ಧರಣಿ, ಸತ್ಯಾಗ್ರಹಗಳನ್ನು ಮಾಡುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತದೆ. ಕಾದು ನೋಡಬೇಕು.ಮಾನಪ್ಪನ ಬಗ್ಗೆ ಒಂದಿಷ್ಟು..!ವಜ್ಜಲ ಎಂಬ ಕುಗ್ರಾಮದಿಂದ ಬಂದ ಈತ ಮೂಲತಃ ಅಗರ್ಭ ಶ್ರೀಮಂತ ಕುಟುಂಬದಿಂದ ಬಂದಾತನೇನು ಅಲ್ಲ. ಇಲಕಲ್ನ ಕೆಲವು ಗ್ರಾನೈಟ್ ಉದ್ದಿಮೆದಾರರ ಕೈಯಲ್ಲಿ ಕೆಲಸ ಮಾಡಿಕೊಂಡು ಮುಂದೆ ಬಂದಿರುವಾತ. ಅದರಂತೆ ವಜ್ಜಲದಲ್ಲಿಯು ಹೇಳಿಕೊಳುವಂತಹ ಮನುಷ್ಯನು ಅಲ್ಲ. ತಾನು ಮೊದಲಿಗೆ ಕುಲಕಸುಬನ್ನೇ ಮಾಡಿಕೊಂಡು ನಂತರ ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತ ಒಂದು ಹಂತಕ್ಕೆ ಬೆಳೆದ. ನೀರಾವರಿ ಇಲಾಖೆಗೆ ಸಂಬಂಧಿಸಿದ 2-3ಕಾಮಗಾರಿಗಳಲ್ಲಿ ಅಧಿಕ ಹಣವನ್ನು ಗಳಿಸಿದ. ದಿನೇ ದಿನೇ ಹಣ ಹೆಚ್ಚುತ್ತಿದ್ದಂತೆ ಈತನಿಗೆ ಏಕಾಏಕಿ ಎಂ.ಎಲ್.ಎ ಆಗಬೇಕೆಂಬ ಹುಚ್ಚು ಹಿಡಿಯಿತು. ಆ ಹುಚ್ಚಿನಿಂದಲೇ ಮಾನಪ್ಪ ರಾಜಕೀಯಕ್ಕೆ ಎಂಟ್ರಿ ಹೊಡೆದದ್ದು.ಅದೇ ಸಂದರ್ಭಕ್ಕೆ ವಿಧಾನಸಭಾ ಚುನಾವಣೆಗಳು ನಡೆದವು. ದೇವದುರ್ಗದಲ್ಲಿ ಮೊದಲ ಬಾರಿಗೆ ಹನುಮಂತಪ್ಪ ಆಲ್ಕೋಡನ ವಿರುದ್ಧ ಪಕ್ಷೇತರನಾಗಿ ನಿಂತು ಹೇಳಿಕೊಳ್ಳುವಷ್ಟು ಮತಗಳನ್ನು ಪಡೆದು ಸೋಲು ಅನುಭವಿಸಿದನು.ನಂತರದ ದಿನಗಳಲ್ಲಿ ಮಾನಪ್ಪನ ಅಲ್ಪಸ್ವಲ್ಪ ವರ್ಚಸ್ಸು, ಆತನಲ್ಲಿದ್ದ ಹಣ ನೋಡಿ ಕಾಂಗ್ರೇಸ್ನವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. ಅದು ಈತನಿಗೂ ಅನಿವಾರ್ಯವಾಗಿತ್ತು. ಯಾಕೆಂದರೆ, ಯಾವುದಾದರೊಂದು ರಾಜಕೀಯ ಪಕ್ಷದಲ್ಲಿದ್ದರೆ, ಮುಂದಿನ ಬಾರಿ ಎಂ.ಎಲ್.ಎ ಟಿಕೆಟ್ ಸಿಗಬಹುದು. ಅದರಂತೆ ನಾ ಕಂಡ ಕನಸು ನನಸಾಗಬಹುದು. ವಿಶೇಷವಾಗಿ ನನ್ನ ಗುತ್ತಿಗೆ ಕೆಲಸಗಳಿಗೆ ರಕ್ಷಣಿ ಸಿಗಬಹುದೆಂದು ತಿಳಿದು ಮಾನಪ್ಪ ಕಾಂಗ್ರೇಸ್ ಜೊತೆ ಕೈಗೂಡಿಸಿದ.ಕ್ರಮೇಣ 2008ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗದಿಂದ ಮೀಸಲು ಕ್ಷೇತ್ರ ಲಿಂಗಸ್ಗೂರಿಗೆ ವರ್ಗವಾಗುತ್ತಿದ್ದಂತೆ ಎಂ.ಎಲ್.ಎ ಟಿಕೆಟ್ಗಾಗಿ ಪೈಪೋಟಿ ಜಾಸ್ತಿಯಾಯಿತು. ಯಾಕೋ.. ಏನೋ.. ಮಾನಪ್ಪನಿಗೆ ಖಗರ್ೆ ಸಾಹೇಬರು ದಯೆ ತೋರಿಸಲಿಲ್ಲ. ಅದರಂತೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ವಸಂತಕುಮಾರ ಒತ್ತಡ ಪಕ್ಷದಲಿ ಹೆಚ್ಚಿದ್ದರಿಂದ ಕೊನೆಗೆ ಹೈಕಮಾಂಡ್ ವಸಂತಕುಮಾರ್ಗೆ ಟಿಕೆಟ್ ನೀಡಿತು.ಕಾಂಗ್ರೇಸ್ನಿಂದ ಟಿಕೇಟ್ ವಂಚಿತನಾದ ಮಾನಪ್ಪ ನೇರವಾಗಿ ಬಿಜೆಪಿಗೆ ಜಿಗಿದನು. ಬಿಜೆಪಿ ಅಷ್ಟೋತ್ತಿಗೆ ಸಿದ್ದುಬಂಡಿ ಎಂಬಾತನಿಗೆ ಟಿಕೆಟ್ ನೀಡಲು ನಿರ್ಧರಿಸಿತ್ತಾದರೂ ಮಾನಪ್ಪ ಬಿಜೆಪಿಗೆ ಬರುತ್ತಿದ್ದಂತೆ ಸಿದ್ದು ಬಂಡಿಯನ್ನು ಸಮಜಾಯಿಸಿ ಮಾನಪ್ಪನಿಗೆ ಟಿಕೆಟ್ ನೀಡಿತು. (ಅಷ್ಟೊತ್ತಿಗೆ ಬಸವರಾಜ ಪಾಟೀಲ್ ಆನ್ವರಿ ಕಮಲಕ್ಕೆ ಹಾರಿ ಬಂದಿದ್ದರು)ಚುನಾವಣೆಯಲ್ಲಿ ಮಾನಪ್ಪನ ಹಣಬಲದ ಮುಂದೆ ಲಿಂಗಸ್ಗೂರಿನ ಅರ್ಧದಷ್ಟು ಮತದಾರರು ತಮ್ಮ ಮತಗಳನ್ನು ಮಾರಿಕೊಂಡರು. ಹಟ್ಟಿ ಹೊರತುಪಡಿಸಿದರೆ, ಉಳಿದ ಎಲ್ಲ ಭಾಗದಲ್ಲಿ ಮಾನಪ್ಪನಿಗೆ ಅತಿಹೆಚ್ಚು ಮತಗಳು ಬಂದವು. ಬಸವರಾಜ ಪಾಟೀಲ್ ಆನ್ವರಿಯ ಕೈಚಳಕ ಅಲ್ಲಲ್ಲಿ ಯಶಸ್ವಿಯಾದ್ದರಿಂದ ಲಿಂಗಸ್ಗೂರಿಗೆ ಮಾನಪ್ಪ ಶಾಸಕನಾಗಿ ಗೆದ್ದುಬಂದನು. ಅಲ್ಲಿಗೆ ಮಾನಪ್ಪನಿಗಿದ್ದ ಎಂ.ಎಲ್.ಎ ಹುಚ್ಚು ಸ್ವಲ್ಪಮಟ್ಟಿಗೆ ಇಳಿಯತೊಡಗಿತು.ಒಂದು ವೇಳೆ ಮಾನಪ್ಪ ಸೋತುಹೋಗಿದ್ದರೆ, ಇನ್ನೊಂದು ಬಾರಿ ರಾಜಕೀಯಕ್ಕೆ ಬರುತ್ತಿದ್ದಿಲ್ಲ. ಮುಂದೆ ಗ್ರಾಮಪಂಚಾಯತ್ಗೆ ಅವಿರೋಧ ಆಯ್ಕೆ ಎಂದರೂ ಇತ್ತ ತಲೆಹಾಕುತ್ತಿದ್ದಿಲ್ಲ. ದುರಂತಕ್ಕೆ ಜಯಿಸುತ್ತಿದ್ದಂತೆ ತಾನೊಬ್ಬ ಶಾಸಕೆನೆಂಬುದನ್ನೇ ಮರೆತು ಬರೀ ಚಿಲ್ಲರೆ ಕೆಲಸಗಳನ್ನೇ ಮಾಡುತ್ತಾ ಬಂದ. ಇದು ಅನಕ್ಷರಸ್ಥ ಮಾನಪ್ಪನ ಸಿಂಪಲ್ ರಿಪೋಟರ್್.!ತಾಲೂಕಿನಲ್ಲಿ ಕಿಸ್ತಿದ್ದಾದರೂ ಏನು..?ಚುನಾವಣೆಯ ಸಂದರ್ಭದಲ್ಲಿ ನಾನು ಗೆದ್ದರೆ ನಿಮ್ಮೂರಿಗೆ ಗುಡಿ-ಗುಂಡಾರಗಳನ್ನು ಕಟ್ಟಿಕೊಡುತ್ತೇನೆಂದು ಆಶ್ವಾಸನೆಗಳನ್ನು ನೀಡಿದ್ದ. ಈತನ ಮಾತಿಗೆ ಕೆಲವು ಹಳ್ಳಿಗಳ ಗ್ರಾಮಸ್ಥರು ಹಳೆ ಗುಡಿಗಳನ್ನು ಕೆಡವಿ ಮೂತರ್ಿಗಳನ್ನು ಹೊರಗಿಟ್ಟಿದ್ದಾರೆ. ಆದರೆ, ಮಾನಪ್ಪ ಮಾತ್ರ ಗೆದ್ದಮೇಲೆ ಯಾವ ಹಳ್ಳಿಗಳತ್ತ ಮುಖ ತೋರಿಸಿಲ್ಲ. ಒಂದು ವೇಳೆ ಊರಿನ ಜನರು ತಾನಿದ್ದಲ್ಲಿಗೆ ಬಂದು ಕೇಳಿದರೆ, ಹಾರೈಕೆಯ ಉತ್ತರ ನೀಡಿ ಕಳುಹಿಸುತ್ತಾನೆ. ಈ ತಂತ್ರವನ್ನು ಹಿಂದೆ ದೇವದುರ್ಗದಲ್ಲಿಯೂ ಮಾನಪ್ಪ ಮಾಡಿ ಬಂದಿದ್ದ.ಲಿಂಗಸ್ಗೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖವಾಗಿ ಹಟ್ಟಿ, ಮುದಗಲ್, ಲಿಂಗಸ್ಗೂರು ನಗರಗಳು ಒಳಪಡುತ್ತವೆ. ಇಲ್ಲಿಯೇ ಅತಿಹೆಚ್ಚು ಮತದಾರರು ಇರುವುದು. ಮೂರರಲ್ಲಿ ಹಟ್ಟಿಯನ್ನು ಹೊರತುಪಡಿಸಿದರೆ, ಇನ್ನುಳಿದೆರಡು ನಗರಗಳು ಚುನಾವಣೆಯಲ್ಲಿ ಮಾನಪ್ಪನಿಗೆ ಸಾಥ್ ನೀಡಿವೆ. ಆದರೆ, ತನ್ನ ಬೆಂಬಲಕ್ಕಿದ್ದ ನಗರಗಳಿಗೆ ಏನಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ತಾನೇ.? ಅದು ಕೂಡ ಮಾಡಿಲ್ಲ.ಇನ್ನು ಹಟ್ಟಿಯ ವಿಷಯಕ್ಕೆ ಬಂದರೆ, ಇಲ್ಲಿ ಗ್ರಾಮವನ್ನು ಹೊರತುಪಡಿಸಿದರೆ, ಕ್ಯಾಂಪಿನ ಎಲ್ಲ ಕೆಲಸಗಳನ್ನು ಕಂಪನಿಯೇ ನೋಡಿಕೊಳ್ಳುತ್ತದೆ. ಇಲ್ಲಿ ಅಧಿಸೂಚಿತ ಪ್ರದೇಶ ಇರುವುದರಿಂದ ಅದರ ಬಜೆಟ್ನಲ್ಲಿ ಕೆಲವೊಂದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಕ್ಯಾಂಪ್ನ್ನು ಹೊರತುಪಡಿಸಿ ಹಟ್ಟಿ ಗ್ರಾಮದಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಸಮರ್ಪಕ ರಸ್ತೆ, ಚರಂಡಿಗಳಿಲ್ಲ, ಗ್ರಾಮದ ಕೆಲವೊಂದು ವಾಡರ್್ಗಳಿಗೆ ಹೋದರೆ, ಹೊನ್ನಿನ ನಾಡಿನ ಹೊಲಸು ಮುಖ ಕಾಣುತ್ತದೆ. ಎಲ್ಲ ಪಕ್ಷಗಳ ನಾಯಕರ ರಾಜಕೀಯದಿಂದ ಹದಗೆಟ್ಟು ಹೋಗಿರುವ ಗ್ರಾಮಕ್ಕೆ ಇಲ್ಲಿಯವರೆಗೆ ಯಾವೊಂದು ಕಾಯಕಲ್ಪವು ಮಾನಪ್ಪನಿಂದ ಸಿಕ್ಕಿಲ್ಲ.ಹೆಸರಿಗೆ ಮಾತ್ರ ಶಾಸಕನಾಗಿರುವ ಮಾನಪ್ಪ ತಾಲೂಕಿನ ಯಾವ ಹಳ್ಳಿಗಳಲ್ಲಿಯೂ ಕೆಲಸಗಳನ್ನು ಮಾಡಿಲ್ಲ. ಕಂಪನಿಯಲ್ಲಿ ಕ್ಯಾಸುವಲ್ ಲೇಬರ್ ತೆಗೆದುಕೊಳ್ಳಲು ತನ್ನ ಲೆಟರ್ಪ್ಯಾಡ್ನ್ನು ಕೆಲವರಿಗೆ ನೀಡುವುದು ಬಿಟ್ಟರೆ, ಮಾನಪ್ಪ ಬೇರೆನೂ ಮಾಡಿಲ್ಲ.ತಾಲೂಕಿನಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ನಡೆಯದ ಅಭಿವೃದ್ಧಿ ಕೆಲಸಗಳು ಮತ್ತು ಮಾನಪ್ಪನ ಕಾರ್ಯವೈಖರಿಯ ಬಗ್ಗೆ ಇತ್ತೀಚಿಗೆ ದಲಿತ ಸಂಘಟನೆಗಳು ಬೃಹತ್ ಹೋರಾಟವನ್ನು ಮಾಡಿದವು. ಅಂತಹದೊಂದು ಜನಪರ ಹೋರಾಟವನ್ನು ಮಾನಪ್ಪ ಪಾಸಿಟಿವ್ ಆಗಿ ತೆಗೆದುಕೊಳ್ಳದೇ ತನ್ನ ತಮ್ಮಂದಿರ ಮುಖಾಂತರ ದಲಿತ ಸಂಘಟನೆಗಳ ವಿರುದ್ಧ ಏಟಿಗೆ ಎದಿರೇಟು ಎಂಬಂತೆ ದುಡ್ಡಿಗೆ ಬಾಡಿಗೆ ಜನರನ್ನು ಕರೆತಂದು ಹೋರಾಟ ಮಾಡಿಸಿದ್ದಾನೆ. ಇಷ್ಟರ ಮೇಲೆಯೇ ಗೊತ್ತಾಗುತ್ತದೆ ಮಾನಪ್ಪನಿಗೆ ದಲಿತರ ಮೇಲೆ ಎಷ್ಟೊಂದು ಕಾಳಜಿಯಿದೆ ಎಂಬುದು.ತಾಲೂಕಿಗೆ ಎಂ.ಎಲ್.ಎ ಆದ ಮೇಲೆ ಕ್ಷೇತ್ರಕ್ಕೆ ಮಗನಾಗಿ ಯಾವ ಜವಾಬ್ದಾರಿಯ ಕೆಲಸಗಳನ್ನು ಮಾಡದೇ, ಅತ್ತ ಬಿಜೆಪಿಯಲ್ಲಿಯೂ ಶಿಸ್ತಿನಿಂದ ಇರಲಾರದೇ, ಈಗ ಅತಂತ್ರನಾಗಿದ್ದಾನೆ. ಅದಕ್ಕಾಗಿ ಮನೆಗೆ ಮಗನಾಗಲಿಲ್ಲ, ಸ್ಮಶಾನಕ್ಕೆ ಹೆಣವಾಗಲಿಲ್ಲ ಎಂಬ ಗಾದೆ ಮಾನಪ್ಪನಿಗೆ ಸಧ್ಯ ಅನ್ವಯವಾಗುತ್ತಿದೆ.
ಶಿವನಗೌಡ...ಅದು ಶಿವನಗೌಡನ ಹಣೆಬರಹವೋ.. ನಮ್ಮ ಪತ್ರಿಕೆಯಲ್ಲಿ ಬಂದಂತಹ ಬರವಣಿಗೆಯೋ ಗೊತ್ತಿಲ್ಲ. ನಾವೆಂದು ಗೌಡನ ವಿರುದ್ಧ ಸುದ್ದಿ ಬರೆಯಲು ಪ್ರಾರಂಭಿಸಿದೆವೋ ಅಂದಿನಿಂದ ಗೌಡನ ರಾಜಕೀಯ ಅಧಃಪತನದತ್ತ ಸಾಗುತ್ತಿದೆ. ಆರಂಭದಲ್ಲಿ ಶಿವನಗೌಡನ ಕುರುಡು ದಬರ್ಾರ್ ಎಂಬ ಸುದ್ದಿ ಪ್ರಕಟಗೊಂಡಾಗ ಜಿಲ್ಲೆಯಲ್ಲಿ ಗ್ರಂಥಾಲಯ ಇಲಾಖೆಯ ಹಗರಣವೊಂದು ಬಯಲಿಗೆ ಬಿತ್ತು. ನಂತರ ದಿನಪತ್ರಿಕೆಯೊಂದರ ಮುಖಪುಟದಲ್ಲಿ ಸುದ್ದಿ ಬಂದು ಗೌಡನ ಮಾನ ರಾಜ್ಯಮಟ್ಟದಲ್ಲಿ ಹರಾಜಾಯಿತು.ನಂತರದ ಸಂಚಿಕೆಯಲ್ಲಿ ಶಿವನಗೌಡನ ಅಂತ್ಯ ಆರಂಭ ಹೊತ್ತಿ ಉರಿದ ದೀಪ ಆರುತ್ತಿದೆ! ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಆಗ ಗೌಡನ ಮಂತ್ರಿಗಿರಿಯೇ ವಜಾಗೊಂಡಿತು. ಇನ್ನು ಕಳೆದ ಸಂಚಿಕೆಯಲ್ಲಿ ತನ್ನ ಗೋರಿ ತಾನೇ ತೋಡಿಕೊಂಡ ಮಾಜಿಸಚಿವ ಎಂಬ ವರದಿ ಮಾಡುತ್ತಿದ್ದಂತೆ ಇತ್ತೀಚಿಗೆ ಹೈಕೋಟರ್್ ಸ್ಪೀಕರ್ ಕ್ರಮವೇ ಸರಿಯೆಂದು ತೀರ್ಪನ್ನು ನೀಡಿತು. ಅಲ್ಲಿಗೆ ಗೌಡ ತನ್ನ ಗೋರಿಯನ್ನು ತಾನೇ ತೋಡಿಕೊಂಡ. ಹೀಗಾಗಿ ಶಿವನಗೌಡ ತಾಲೂಕಿನ ಜನರಿಗೆ ಶಾಸಕನು ಆಗಲಿಲ್ಲ! ಅತ್ತ ಕಮಲ ಪಕ್ಷದವರಿಗೆ ನಿಷ್ಠಾವಂತ ಕಾರ್ಯಕರ್ತನೂ ಆಗಲಿಲ್ಲ. ಕಾರಣ ಈತನು ಮಾನಪ್ಪನಂತೆ ಮನೆಗೆ ಮಗನಾಗಲಿಲ್ಲ. ಸ್ಮಶಾನಕ್ಕೆ ಹೆಣವಾಗಲಿಲ್ಲ.ಶಿವನಗೌಡನ ಬೆಳವಣಿಗೆಯ ಕುರಿತು ಒಂದಿಷ್ಟು..!ತಾಲೂಕಾ ಪಂಚಾಯತ್ನ ಮಾಜಿ ಅಧ್ಯಕ್ಷ ಶಿವನಗೌಡ ರಾಜಕೀಯದಲ್ಲಿ ಬೆಳೆದು ಬಂದದ್ದೇ ವಿಚಿತ್ರ. ಅಲ್ಲಲ್ಲಿ ಪಡ್ಡೇ ಹುಡುಗರನ್ನು ಕಟ್ಟಿಕೊಂಡು ಜಗಳ ಮಾಡುವುದು ಬಿಟ್ಟರೇ, ಗೌಡನಿಗೆ ಮತ್ತೇನು ಗೊತ್ತಿದ್ದಿಲ್ಲ. ಮೂಲತಃ ಈತನ ರಾಜಕೀಯ ಗುರುಗಳೆಂದರೆ, ವೆಂಕಟೇಶ ನಾಯಕ, ಯಲ್ಲಪ್ಪ ಅಕ್ಕರಕಿ. (ಈಗ ಗೌಡ ನನ್ನ ಗಾಡಫಾದರ್ ರಾಮುಲು ಅಂತ ಹೇಳಿಕೊಳ್ಳುತ್ತಾನೆ. ಹಾಗೆಂದರೆ ಗೌಡ ಉಂಡ ಮನೆಗೆ ಜಂತಿ ಎಣಿಸಿದಂತೆ)ಮಾಜಿಸಂಸದ ವೆಂಕಟೇಶ ನಾಯಕ ಹಿಂದೊಮ್ಮೆ ಜಿಲ್ಲಾಪಂಚಾಯತ್ಗೆ ಶಿವನಗೌಡನಿಗೆ ಟಿಕೇಟ್ ನೀಡಿದ್ದರೆ, ಶಿವನಗೌಡ ಎಂಬ ಹೆಸರು ಯಾವೊಂದು ಪತ್ರಿಕೆಯಲ್ಲಿ ಮತ್ತು ವಿಶೇಷವಾಗಿ ನ್ಯೂಸ್ ಚಾನೆಲ್ಗಳ ಅತಿಥಿ ಕಾರ್ಯಕ್ರಮಗಳಲ್ಲಿ ಬರುತ್ತಿದ್ದಿಲ್ಲ. ಇನ್ನು ಗೂಟದ ಕಾರು, ವಿಧಾನಸೌಧವನ್ನು ದೂರದಿಂದ ನೋಡಿ ಸಂತೋಷ ಪಡಬೇಕಾಗಿತ್ತು. ಈತನಿಗೆ ಅಂದೇ ಜಿ.ಪಂನ ಟಿಕೇಟ್ ನೀಡಿದ್ದರೆ, ಅಬ್ಬಬ್ಬಾ.. ಅಂದರೆ ಜಿಲ್ಲಾಪಂಚಾಯತ್ನ 5ವರ್ಷದ ಅವಧಿಯಲ್ಲಿ 1ಬಾರಿ ಅಧ್ಯಕ್ಷನಾಗುತ್ತಿದ್ದಷ್ಟೇ..! ಇಷ್ಟು ಬಿಟ್ಟರೆ, ಶಿವನಗೌಡ ಒಂದಿಂಚೂ ರಾಜಕೀಯದಲ್ಲಿ ಮುಂದೆ ಬರುತ್ತಿದ್ದಿಲ್ಲ. ಮತ್ತ್ಯಾವ ಕಿಮ್ಮತ್ತು ಈತನಿಗೆ ಇರುತ್ತಿದ್ದಿಲ್ಲ.ಆದರೆ, ಅದು ಹಾಗೇ ಆಗಲಿಲ್ಲವೇ?ಮಾಜಿ ಸಂಸದರು ಜಿದ್ದಿಗೆ ನಿಂತು ಶಿವನಗೌಡನಿಗೆ ಟಿಕೇಟ್ ನಿರಾಕರಿಸಿದರು. ಅಲ್ಲಿಂದಲೇ ತಾತ ಮತ್ತು ಮೊಮ್ಮಗನ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಯಿತು. ಸಮಯಕ್ಕಾಗಿ ಕಾದು ಕುಳಿತಿದ್ದ ಶಿವನಗೌಡನಿಗೆ ಒಂದು ಸಂದರ್ಭ ಎದುರಾಯಿತು. ಅದುವೇ ಎಂ.ಎಲ್.ಎ ಚುನಾವಣೆ.ಒಂದು ಜಿಲ್ಲಾ ಪಂಚಾಯತ್ಗೆ ಟಿಕೇಟ್ ತರಲು ಅರ್ಹನಿಲ್ಲದ ಶಿವನಗೌಡ ದೇವದುರ್ಗ ಎಸ್.ಟಿ ಮೀಸಲು ಕ್ಷೇತ್ರವಾಗುತ್ತಿದ್ದಂತೆ ಎಂ.ಎಲ್.ಎ ಸ್ಥಾನಕ್ಕೆ ನಿಲ್ಲುತ್ತಾನೆಂದು ಯಾರೊಬ್ಬರು ಅಂದುಕೊಂಡಿದ್ದಿಲ್ಲ. ಆದರೆ, ಚುನಾವಣೆಗೆ ನಿಲ್ಲಲು ತಾನು ಮಾತ್ರ ತಯಾರು ಮಾಡಿಕೊಂಡನು.ತಾಲೂಕಿನಲ್ಲಿ ಹನುಮಂತಪ್ಪ ಆಲ್ಕೋಡ್ ಅಂದಿನ ಸಂಸದ ವೆಂಕಟೇಶ ನಾಯಕರ ಮೇಲಿನ ಸಿಟ್ಟಿಗೆ ಶಿವನಗೌಡನನ್ನು ಬಳಸಿಕೊಂಡು ಜೆ.ಡಿ.ಎಸ್ನಿಂದ ಟಿಕೇಟ್ ಕೊಡಿಸಿದ. ಕುಮಾರಸ್ವಾಮಿಯಿಂದಿಡಿದು ಎಲ್ಲರೂ ಶಿವನಗೌಡನ ಪರವಾಗಿ, ಮಾಜಿ ಸಂಸದರ ವಿರುದ್ಧ ಪ್ರಚಾರ ಮಾಡಿದರು. ಅಂದಿನ ಅನುಕಂಪವನ್ನೇ ಬಳಸಿಕೊಂಡು ಜಿ.ಪಂ ಸದಸ್ಯನಾಗದ ಒಬ್ಬ ಮಾಜಿ ತಾ.ಪಂ ಅಧ್ಯಕ್ಷ ಶಿವನಗೌಡ ಶಾಸಕನಾಗುತ್ತಾನೆ. ಆಗ ಜೆ.ಡಿ.ಎಸ್ನಲ್ಲಿದ್ದು, ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಿದ್ದರೆ, ಆತನಿಗೆ ಇವತ್ತಿನ ಈ ಪರಿಸ್ಥಿತಿ ಬರುತ್ತಿದ್ದಿಲ್ಲ.ನಂತರ ರೆಡ್ಡಿಗಳ ಆಪರೇಷನ್ ಕಮಲದಲ್ಲಿ 30ಕೋಟಿಗೆ ಹರಾಜಾಗುತ್ತಾನೆ! ಗೆದ್ದ ಕೆಲವೇ ದಿನಗಳಲ್ಲಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಲಾಟರಿ ಮಂತ್ರಿಯಾಗುತ್ತಾನೆ. ಮಂತ್ರಿಯಾಗಿದ್ದೇ ತಡ ಗೌಡನ ಪೌರುಷ ನೆತ್ತಿಗೇರಿ, ಅಧಿಕಾರಿಗಳನ್ನೆಲ್ಲ ಜೀತದಾಳುಗಳಿಂತ ನಿಕೃಷ್ಟವಾಗಿ ನೋಡಿಕೊಳ್ಳುತ್ತಾ, ಹೆಂಡ ಕುಡಿದ ಕೋತಿಯಂತೆ ದಬರ್ಾರು ಮಾಡುತ್ತಾನೆ.ಪ್ರತಿಯೊಬ್ಬರನ್ನು ಏಕವಚನದಲ್ಲಿ ನಿಂದಿಸುತ್ತಾ ಡಿಸಿ, ಎಸಿ, ಸರ್ಕಲ್ಗಳನ್ನು ಜಿಲ್ಲೆಯಲ್ಲಿ 2ವರ್ಷ ಹೈರಾಣಾಗುವಂತೆ ಮಾಡಿದ. ಬರೀ ಲಕ್ಷಗಳಲ್ಲಿದ್ದ ತನ್ನ ವ್ಯವಹಾರಗಳನ್ನು ಕೋಟಿಗಳಿಗೆ ಕುದುರಿಸಿಕೊಂಡ. ಕಳೆದ ಅಕ್ಟೋಬರನಲ್ಲಿ ಸಂಭವಿಸಿದ ನೆರೆಹಾವಳಿಗೆ ತಾಲೂಕು ತತ್ತರಿಸಿ ಹೋಗಿತ್ತು. ಆಗ ನೆರೆಸಂತ್ರಸ್ತರಿಗೆ ಬಂದ ಎಲ್ಲ ಪರಿಹಾರ ಧನವನ್ನು ವಿಶೇಷವಾಗಿ ಪ್ಯಾಕೇಜ್ಗಳನ್ನು ತಾನೇ ಗುಳುಂ ಮಾಡಿದ!ಉದ್ಯೋಗ ಖಾತ್ರಿ ಯೋಜನೆಯಿಂದಿಡಿದು ಪಂಚಾಯತ್ಗಳಲ್ಲಿ ಬರುವ ಎಲ್ಲ ಯೋಜನೆಗಳನ್ನು ತನ್ನ ಹಿಂಬಾಲಕರ ಮುಖಾಂತರ ಲೂಟಿ ಮಾಡಿ, ಗಲ್ಲಿಗಲ್ಲಿಗಳಿಗೆ ಹೆಂಡದಂಗಡಿಗಳನ್ನು ತೆಗೆದ. (ಹೆಂಡದಂಗಡಿಗಳಿಂದ ಲಾಭವಿರುತ್ತದೆಯೇ ವಿನಃ ಎಂದೆಂದಿಗೂ ನಷ್ಟವಿರುವುದಿಲ್ಲ.) ಹೀಗಾಗಿ ಇಂತಹ ಆಲೋಚನೆ ಹೊಂದಿ ಗೌಡ ತಾಲೂಕಿನೆಲ್ಲೆಡೆ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಬರೀ ಬಾರ್ಶಾಫ್ಗಳನ್ನು ತೆಗೆದ.ಅರಕೇರಾದಲ್ಲಿ ತನ್ನ ತಾತನ ವಿರುದ್ಧ ಮಾಡಿದ ರಾಜಕೀಯವನ್ನು ಬೆಂಗಳೂರಿನಲ್ಲಿ ಮಾಡುತ್ತಾ, ಬಿಜೆಪಿಯ ಕಂಡಕಂಡ ಚೆಡ್ಡಿ, ಮುಖಂಡರುಗಳಿಗೆ ಏಕವಚನದಿಂದಲೇ ಮಾತನಾಡಲು ಶುರುವಚ್ಚಿಕೊಂಡ. ಅಂದು ಅನಿವಾರ್ಯತೆಯಿಂದ ಎಲ್ಲವನ್ನು ಸಹಿಸಿಕೊಂಡಿದ್ದ ಕಮಲದವರು ಕೊನೆಗೆ ಈತನನ್ನು ಕೈಬಿಡಬೇಕೆಂದು ತೀಮರ್ಾನಿಸಿದರು.ಈತನನ್ನು ಕೈಬಿಡಲು ಯಡಿಯೂರಪ್ಪನಿಗೆ ಪ್ರಮುಖವಾಗಿ 3ಕಾರಣಗಳು ಸಿಕ್ಕವು. ಮೊದಲನೇಯದು ರೆಡ್ಡಿಗಳ ಜೊತೆಯಲ್ಲಿ ಹಿಂದೊಮ್ಮೆ ಗುರುತಿಸಿಕೊಂಡು ನಾಯಕತ್ವದ ವಿರುದ್ಧ ಧ್ವನಿಯೆತ್ತಿದ್ದು, 2ನೇಯದಾಗಿ ಜಿಲ್ಲೆಯ ಎಲ್ಲ ಬಿಜೆಪಿಗಳು ದಿನಕ್ಕೊಂದು ಫೀಯರ್ಾಧಿಯನ್ನು ಬಿಜೆಪಿ ಹೈಕಮಾಂಡ್ಗೆ ನೀಡುತ್ತಿರುವುದು ಮತ್ತು 3ನೇಯದಾಗಿ ಈತನ ಗ್ರಂಥಾಲಯ ಹಗರಣ. ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡು ಯಡಿಯೂರಪ್ಪ ಗೌಡನನ್ನು ಏಕಾಏಕಿ ಮಂತ್ರಿಸ್ಥಾನದಿಂದ ಕೆಳಗಿಸಲು ಸಂಚು ರೂಪಿಸಿದ.ಈ ಸಂಧರ್ಭದಲ್ಲಿ ಶಿವನಗೌಡ ಏಕಾಏಕಿ ರೇಣುಕನ ಹತ್ತಿರ ಓಡಿಹೋಗಿ ಸಿ.ಎಂಗೆ ಹೇಳಿ.. ನಾನೊಬ್ಬ ನಿಷ್ಠಾವಂತ ಮಂತ್ರಿ, ನನ್ನಿಂದ ಯಾವುದಾದರೂ ತಪ್ಪಾಗಿದ್ದರೆ, ನಾನು ತಿದ್ದಿಕೊಳ್ಳುವೇ, ದಯವಿಟ್ಟು ನನ್ನನ್ನು ಸಂಪುಟದಿಂದ ಕೈಬಿಡಬೇಡಿ ಎಂದು ಅಂಗಲಾಚಿಕೊಳ್ಳುತ್ತಿದ್ದನಂತೆ!ಇದ್ಯಾವದಕ್ಕೂ ಜಗ್ಗದ ಯಡಿಯೂರಪ್ಪ ಮುಂದಿನ ಬಾರಿ ಅವನಿಗೆ ಮುಂದಿನ ಬಾರಿ ಎಂ.ಎಲ್.ಎ ಟಿಕೇಟ್ ಕೂಡ ನೀಡಬಾರದು. ಅವನು ಬೇಕಿದ್ದರೆ, ನಮ್ಮ ಪಕ್ಷದಲ್ಲಿರಲಿ. ಇಲ್ಲವಾದರೆ ಪಕ್ಷ ಬಿಟ್ಟು ಹೋಗಲಿ ಎಂದು ರೇಣುಕನಿಗೆ ಫಮರ್ಾನು ಹೊರಡಿಸಿದರಂತೆ! ಇತ್ತ ರೆಡ್ಡಿಗಳು ಕೂಡ ಗೌಡನ ಬೆಂಬಲಕ್ಕೆ ಬರುವುದಿಲ್ಲ. ಇನ್ನು ಕ್ಷೇತ್ರದ ಯಾವೊಬ್ಬರು ಗೌಡನ ಪರವಾಗಿ ಮಾತನಾಡುವುದಿಲ್ಲ.ಹೀಗೆ ಕ್ರಮೇಣ ಮಂತ್ರಿಗಿರಿಯನ್ನು ಕಳೆದುಕೊಂಡ ಗೌಡ ಇನ್ನು ಮುಂದೆ ಬಿಜೆಪಿಯಲ್ಲಿ ನನಗೆ ಭವಿಷ್ಯವಿಲ್ಲ ಎಂದು ತಿಳಿದು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆ.ಡಿ.ಎಸ್ನ ಜೊತೆಯಲ್ಲಿ ಗುರುತಿಸಿಕೊಂಡಿದ್ದಾನೆ.ಇವತ್ತು ನೂರಾರು ಕೋಟಿ ಗಳಿಸಿರುವ ಗೌಡ ಮತ್ತೊಂದು ಚುನಾವಣೆಗೆ ಸನ್ನಧ್ದನಾಗುತ್ತಿದ್ದಾನೆ. ಅದಕ್ಕಾಗಿ ತಯಾರಿಗಳನ್ನು ಮಾಡಿಕೊಳ್ಳುತ್ತ, ಅಲ್ಲಲ್ಲಿ ಕಾರ್ಯಕರ್ತರ ಜೊತೆ ಚಚರ್ಿಸುತ್ತಿದ್ದಾನೆ.ಇನ್ನು ಅನರ್ಹತೆಯ ಪ್ರಕರಣ ದಿಲ್ಲಿಗೆ ವರ್ಗವಾಗಿದೆ. ದಿಲ್ಲಿಯಲ್ಲಿ ಹೆಚ್ಚು ಕಡಿಮೆ ಸುಪ್ರೀಂಕೋಟರ್್ ಹೈಕೋಟರ್್ನ ತೀರ್ಪನ್ನು ಎತ್ತಿಹಿಡಿಯುವ ಸಾಧ್ಯತೆ ಇದೆ!ಶಿವನಗೌಡನ ರಾಜಕೀಯ ಅಸ್ಥಿರತೆಯ ಮಧ್ಯೆ ತಾಲೂಕಿನಲ್ಲಿ ಯಾವೊಂದು ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಕಂಡಕಂಡಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಪಂಚಾಯತ್ಗಳಲ್ಲಿ ಗೌಡನ ಅನುಯಾಯಿಗಳ ಕಾಟಕ್ಕೆ ಅಧಿಕಾರಿಗಳು, ಕಾರ್ಯದಶರ್ಿಗಳು ರೋಸಿಹೋಗಿದ್ದಾರೆ. ಬರೀ ಬೋಗಸ್ ಬಿಲ್ಗಳನ್ನು ತಯಾರಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ದೇವದುರ್ಗ ಪಟ್ಟಣವೇ ಕೊಳಚೆಯಿಂದ ಕೂಡಿದೆ. ಅಲ್ಲಿ ಯಾವ ಚರಂಡಿ, ರಸ್ತೆಗಳಿಲ್ಲ. ತಿಂತಿಣಿಯಿಂದ ದೇವದುರ್ಗ ಮಾರ್ಗವಾಗಿ ಹಾದುಹೋಗುವ ರಸ್ತೆಯ ಸ್ಥಿತಿಯಂತೂ ನರಕಸದೃಶ್ಯವಾಗಿದೆ. ಅದ್ಯಾಕೆ ತನ್ನ ಸ್ವಗ್ರಾಮ ಅರಕೇರಾ ಪಂಚಾಯತಿಯೇ ಗಬ್ಬು ನಾರುತ್ತಿದೆ. 2 ವರ್ಷಗಳಲ್ಲಿ ಶಿವನಗೌಡನಿಂದ ತಾಲೂಕಿನ ಜನತೆ ಯಾವೊಂದು ಅಭಿವೃದ್ಧಿ ಯೋಜನೆಗಳನ್ನು ಕಂಡಿಲ್ಲ.ಈ ಎಲ್ಲ ಬೆಳವಣಿಗೆಗಳು ಅನಕ್ಷರಸ್ಥ ದೇವದುರ್ಗ ತಾಲೂಕಿನ ದುರಂತವಲ್ಲದೇ ಮತ್ತೇನು..?
ಮಾನಣ್ಣ ಮುಂದಿನ ಗ್ರಾಮಪಂಚಾಯತ್ ಚುನಾವಣೆಯಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂಬುದೇ ತನಗೆ ಖಾತರಿಯಾಗುತ್ತಿದ್ದಂತೆ ತೆಪ್ಪಗೆ ಕುಮಾರಣ್ಣನಿಂದ 38ಕೋಟಿಗೆ ತಗೊಂಡು ಯಡಿಯೂರಪ್ಪನ 2ಬಾರಿ ಬಹುಮತದ ಸಂದರ್ಭದಲ್ಲಿ ಗೈರು ಹಾಜರಾಗಿದ್ದಾನೆ!ಈತನ ರಾಜಕೀಯ ಗುರು ಬಸವರಾಜ ಪಾಟೀಲ್ ಆನ್ವರಿ ದೇವೇಗೌಡರಿಗೆ ಕೊಟ್ಟ ಮಾತಂತೆ ವಜ್ಜಲನ್ನನು ಹಿಡಿದೊಯ್ಯದು ಮಂಡ್ಯದ ಚೆಲುವರಾಯಸ್ವಾಮಿಯ ಮನೆಗೆ ತಲುಪಿಸಿ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ.ನಂತರ ಮಾನಪ್ಪ ಚೆಲುವರಾಯಸ್ವಾಮಿಯ ಮನೆಯಲ್ಲಿ ಕುಮಾರಣ್ಣನ ಜೊತೆ ವ್ಯವಹಾರ ಕುದುರಿಸಿಕೊಂಡಿದ್ದಾನೆ! ಬಿಜೆಪಿಯ 2ಬಹುಮತಗಳ ಸಂದರ್ಭದಲ್ಲಿ ಗೈರುಹಾಜರಾಗಲು 38ಕೋಟಿ ಹಣ, ಮುಂದಿನ ಚುನಾವಣೆಯಲ್ಲಿ ತಮ್ಮ ನಾಗಪ್ಪ ಅಥವಾ ಕರಿಯಪ್ಪನಿಗೆ ಜೆ.ಡಿ.ಎಸ್ ಟಿಕೇಟ್ ಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದಾನೆ. ಮಾನಪ್ಪನ ಒಳಒಪ್ಪಂದ ಲಿಂಗಸ್ಗೂರಿನಲ್ಲಿ ಹಳೆ ಜೆ.ಡಿ.ಎಸ್ನ ಮುಖಂಡರುಗಳಿಗೆ ತಿಳಿಯುತ್ತಿದ್ದಂತೆ ಅವರೆಲ್ಲ ದೇವೆಗೌಡ, ಕುಮಾರಸ್ವಾಮಿಯ ಹತ್ತಿರ ಹೋಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಇನ್ನು ಲಿಂಗಸ್ಗೂರು ಕ್ಷೇತ್ರದಲ್ಲಿ ಸಣ್ಣಗೆ ಸುದ್ದಿ ಮಾಡಿದ್ದ ಹನುಮಂತಪ್ಪ ಆಲ್ಕೋಡ ಕೂಡ ದಿಗ್ಬ್ರಾಂತಗೊಂಡಿದ್ದಾರೆಂದು ತಿಳಿದು ಬಂದಿದೆ.ಒಟ್ಟಾರೆ ಮಾನಪ್ಪನ ಆಡಳಿತದಿಂದ ತಾಲೂಕಾ ಆಡಳಿತ ಸಂಪೂರ್ಣವಾಗಿ ಕುಸಿದಿದೆ. (ಈಗ ಉಜ್ವಲಘೋಷ ಎಂಬ ಎ.ಸಿಯವರು ಬಂದ ಮೇಲೆ ಆಡಳಿತಕ್ಕೆ ಚುರುಕುಬಂದಿದೆ) ಕಂಡಕಂಡಲ್ಲಿ ಕೊಲೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇಂತಹ ಸಂಧಿಗ್ದತೆಯ ನಡುವೆ ಲಿಂಗಸ್ಗೂರು ಉಪಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದೆ.
ತಾನು ಮುಂದಿನ ಚುನಾವಣೆಯಲ್ಲಿ ಸ್ಪಧರ್ಿಸುವುದು ತುಸು ಕಷ್ಟವೆಂದು ತಿಳಿಯುತ್ತಿದ್ದಂತೆ ತಮ್ಮ ಮಾವ ವೆಂಕನಗೌಡ (ತಾಯಿಯ ಅಣ್ಣ)ನನ್ನು ಅಭ್ಯಥರ್ಿಯನ್ನಾಗಿ ಮಾಡಲು ತಯಾರಿ ನಡೆಸಿದ್ದಾನೆ.ಈಗಾಗಲೇ ಶಿವನಗೌಡ ತನ್ನ ಪಕ್ಕಾ ಬೆಂಬಲಿಗ ಕಾರ್ಯಕರ್ತರೊಂದಿಗೆ ಸಭೆಯನ್ನು ಮಾಡುತ್ತಾ ತೀಮರ್ಾನಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಅದರಂತೆಯೇ ಮೊನ್ನೆ ಕುಮಾರಸ್ವಾಮಿಯ ಜೊತೆ ಈ ರೀತಿ ಒಪ್ಪಂದ ಮಾಡಿಕೊಂಡಿದ್ದಾನೆಂಬ ಸುದ್ದಿ ಎಲ್ಲೆಡೆ ಹರಡಿದೆ!ಜೆ.ಡಿ.ಎಸ್ನಿಂದ ನನ್ನ ಮಾವನಿಗೆ ಟಿಕೇಟ್ ನೀಡಬೇಕು. ಒಂದು ವೇಳೆ ಮಹಿಳೆಗೆ ಮೀಸಲಾದರೆ, ನನ್ನ ತಾಯಿ ಇಲ್ಲವೇ ಹೆಂಡತಿಗೆ ಟಿಕೇಟ್ ಕೊಡಬೇಕು. ಅದನ್ನು ಬಿಟ್ಟು ಆಲ್ಕೋಡ್ ಹನುಮಂತಪ್ಪನನ್ನು ಕೇಳಿ ತೀಮರ್ಾನ ಮಾಡಬಾರದು. ಈ ರೀತಿ ಒಪ್ಪಂದಕ್ಕೆ ತಾವುಗಳು ಒಪ್ಪುವುದಾದರೆ, ಯಡಿಯೂರಪ್ಪನ ವಿರುದ್ಧ ಬಂಡೇಳುತ್ತೇನೆಂದು ಕುಮಾರಣ್ಣನಿಗೆ ವಾಗ್ದಾನ ನೀಡಿದ್ದಾನೆಂದು ಗೌಡನ ಆಪ್ತವಲಯದಲ್ಲಿ ಕೇಳಿಬರುತ್ತಿದೆ. ಗೌಡನ ಈ ರೀತಿಯ ಒಳಒಪ್ಪಂದಕ್ಕೆ ಹನುಮಂತಪ್ಪ ಆಲ್ಕೋಡ ಕೂಡ ಸಮ್ಮತಿ ಸೂಚಿಸಿದ್ದಾರಂತೆ.. ಆದರೆ, ಆಲ್ಕೋಡ ಒಪ್ಪಲು ಗೌಡನಿಗೆ ಒಂದು ಕಂಡೀಷನ್ ಅಂತೆ.. ಅದೇನೆಂದರೆ, ಮುಂಬರುವ ಜಿ.ಪಂ ಚುನಾವಣೆಯಲ್ಲಿ ತನ್ನ ಸ್ವಕ್ಷೇತ್ರ ಅರಕೇರಾದಿಂದ ತಮ್ಮ ದಾನಪ್ಪನನ್ನು ಗೆಲ್ಲಿಸಬೇಕು. ಹಾಗಿದ್ದರೆ, ಮಾತ್ರ ಶಿವನಗೌಡನ ಜೊತೆ ರಾಜಿ. ಹೀಗಾಗಿ ಕಳೆದೆರಡು ದಿನಗಳ ಹಿಂದೆ ದಾನಪ್ಪ ಗೌಪ್ಯ ಸ್ಥಳವೊಂದರಲ್ಲಿ ಶಿವನಗೌಡನನ್ನು ಭೇಟಿಯಾಗಿ ಚಚರ್ಿಸಿದ್ದಾನೆ!ಒಟ್ಟಾರೆ ಶಿವನಗೌಡನ ಆಡಳಿತದಿಂದ ಅಭಿವೃದ್ಧಿ ಕಾಣದ ದೇವದುರ್ಗ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿರುವುದರಲ್ಲಿ ಎರಡು ಮಾತಿಲ್ಲ.ಪ್ರಜಾಸಮರ

ಮಾನ್ವಿ ಶಿಕ್ಷಣ ಇಲಾಖೆಗೆ ಕಂಠಕವಾಗಿರುವ ಬಿ.ಇ.ಓ ರಾಮಾಂಜನೇಯ!



ಮಾನ್ವಿ ಶಿಕ್ಷಣ ಇಲಾಖೆಗೆ ಕಂಠಕವಾಗಿರುವ ಬಿ.ಇ.ಓ ರಾಮಾಂಜನೇಯ!
ಲಿಂಗಸ್ಗೂರಿನ ಮಾಜಿ ಬಿ.ಇ.ಓ ರಾಮಾಂಜಿನೇಯ ಮಾನ್ವಿಗೆ ಹೋದಾಗಿನಿಂದ ಒಂದಿಲ್ಲೊಂದು ಕಿತಾಪತಿಗಳನ್ನು ಮಾಡುತ್ತಾ, ಶಿಕ್ಷಣ ಇಲಾಖೆಯಲ್ಲಿ ಹಗಲು ದರೋಡೆಗೆ ಕಂಕಣಬದ್ದರಾಗಿ ನಿಂತಿದ್ದಾರೆ. ಮಾನ್ವಿಯ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಶಿಕ್ಷಣ ಇಲಾಖೆಯ ನೀತಿ ನಿಯಮಗಳನ್ನು ಉಲ್ಲಂಘಿಸಿ ಶಿಕ್ಷಕರಿಗೆ ರಜೆ, ವಗರ್ಾವಣೆ, ಎರವಲು ಇತ್ಯಾದಿಗಳನ್ನು ದುಡ್ಡು ಕೊಟ್ಟವರಿಗೆ ಮಾತ್ರ ನೀಡುತ್ತಿದ್ದಾರೆಂದು ಶಿಕ್ಷಕವರ್ಗವೇ ಆರೋಪಿಸುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ಸಂಪೇಲ್ಲೇರ್ ಅವರಿಂದ ಒಂದು ವರದಿ.
ಮಾನವಿಗೆ ರಾಮಾಂಜನೇಯ ಎಂಬ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಂದ ಮೇಲೆ ದಿನನಿತ್ಯ ಶಿಕ್ಷಕರ ಗೋಳು ದಿನದಿಂದ ದಿನೇ ಹೆಚ್ಚಾಗುತ್ತಿದೆ. ಇವರು ಶಿಕ್ಷಕರಿಗೆ ಮಾರ್ಗದರ್ಶಕರಾಗಿ ಒಳ್ಳೆಯ ಶೈಕ್ಷಣಿಕ ಪ್ರಗತಿ ಸಾಧಿಸುವ ಬದಲು ಅಶಿಕ್ಷಕರಂತೆ ವತರ್ಿಸುತ್ತಿದ್ದಾರೆ. ರಾಮಾಂಜನೇಯರ ಆಡಳಿತ ಶಿಕ್ಷಕರೆಲ್ಲ ರೋಸಿಹೋಗಿದ್ದಾರೆ.ಮಾನವಿಗೆ ಬಂದಾಗಿನಿಂದ ಎಂದು ನೋಡಿದರೂ ರಜೆ, ಮೀಟಿಂಗ್, ಪ್ರವಾಸವೆಂದು ಪಿಳ್ಳೆನೆವ ತೆಗೆಯುತ್ತಾ, ಊರುರು ತಿರುಗುತ್ತಾ ಮಜಾ ಉಡಾಯಿಸುತ್ತಾರೆ.ಇದು ಇಲಾಖೆಯಲ್ಲಿ ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಸರ್ವರು ಮೂಕಪ್ರೇಕ್ಷಕರಾಗಿದ್ದಾರೆ. ಪ್ರತಿವರ್ಷ ಶಿಕ್ಷಕರ ದಿನಾಚರಣೆ ಮಾಡುವುದು ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಅದು ಒಂದೆಡೆ ಸಕರ್ಾರದ ಆದೇಶವು ಇದೆ. ಆದರೆ, ಮಾನವಿಗೆ ರಾಮಾಮಂಜನೇಯನರು ಹೋಗಿ 2ವರ್ಷಗಳಿಂದ ಇಲ್ಲಿಯವರೆಗೆ ಶಿಕ್ಷಕರ ದಿನಾಚರಣಿಯನ್ನು ಮಾಡದೇ ಶಿಕ್ಷಕ ವರ್ಗಕ್ಕೆ ಅಪಮಾನವೆಸಗಿದ್ದಾರೆ.ಪ್ರತಿವರ್ಷ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಪ್ರತಿಶಾಲೆಗೆ ಮುಟ್ಟಿಸುವುದು ಬಿ.ಇ.ಓರವರ ಜವಾಬ್ದಾರಿ. ಅದಕ್ಕಾಗಿ ಸಕರ್ಾರ ಇಂತಿಷ್ಟು ಹಣವನ್ನು ಮೀಸಲಿಟ್ಟು ಸಾಗಾಣಿಕೆ ವೆಚ್ಚವನ್ನು ಭರಿಸುತ್ತದೆ. ಆದರೆ, ಮಹಾನ್ ಬಿ.ಇ.ಓ ಸಾಹೇಬರು ಇಲ್ಲಿಯವರೆಗೆ ತಾಲೂಕಿನಲ್ಲಿ ಕೆಲವೊಂದು ಶಾಲೆಗಳಿಗೆ ಇಲ್ಲಿಯವರೆಗೆ ಸಮರ್ಪಕವಾಗಿ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಿಲ್ಲ. ಕಾಟಾಚಾರವೆಂಬಂತೆ ತಾಲೂಕಿನ ಕೆಲವೊಂದು ಹೋಬಳಿಗಳ ಶಾಲೆಗೆ ಮಾತ್ರ ರವಾನೆ ಮಾಡಿದ್ದಾರೆ. ಇನ್ನುಳಿದ ಹಲವು ಹಳ್ಳಿಗಳ ಮುಖ್ಯಗುರುಗಳು ತಮ್ಮ ಸ್ವಂತ ಖಚರ್ಿನಲ್ಲಿಯೇ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ತೆಗೆದುಕೊಂಡು ಹೋಗಬೇಕು.. ಇದು ಬಿ.ಇ.ಓ ಆದೇಶ ಎಂದು ಮೌಖಿಕವಾಗಿ ಗದರಿಸಿದ್ದಾರೆ.ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಕೆಲವೊಂದು ಶಿಕ್ಷಕರು ತಮ್ಮ ಖಚರ್ಿನಲ್ಲಿಯೇ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ವಿತರಿಸಿದ್ದಾರೆ. ಬಿ.ಇ.ಓ ಸಾಹೇಬರು ಸಕರ್ಾರ ನೀಡುವ ಸಾಗಾಣಿಕೆ ವೆಚ್ಚವನ್ನು ಬಹಳ ಸಲೀಸಾಗಿ ಗುಳುಂ ಮಾಡಿದ್ದಾರೆ!ಸಕರ್ಾರದಿಂದ ಬಂದಂತಹ ಹಣವನ್ನು ತಮ್ಮ ಪಿ.ಎ ಅಥವಾ ಯಾರನ್ನಾದರೂ ಶಿಕ್ಷಣ ಸಂಯೋಜಕರನ್ನು ನೇಮಿಸಿಕೊಂಡು ಅವರ ಮುಖಾಂತರ ತಿಂದು ಹಾಕುತ್ತಾರೆ. ಇದು ಮಾಸ್ತಾರ್ ಮಂದಿಗೆ ಬಿಟ್ಟರೆ ಬೇರ್ಯಾರಿಗೂ ಗೊತ್ತಾಗುವುದಿಲ್ಲ.ಹಿಂದೊಮ್ಮೆ ಶಿಕ್ಷಕರು ತಮ್ಮ ಖಚರ್ಿನಲ್ಲಿ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಅವರವರ ಖಾತೆಗೆ ಸಕರ್ಾರದ ಸಾಗಾಣಿಕೆ ವೆಚ್ಚವನ್ನು ಜಮಾಮಾಡಬೇಕೆಂದು ಶಿಕ್ಷಕರು ಸಂಘವು ಮನವಿ ಸಲ್ಲಿಸಿತ್ತು! ದುರಂತಕ್ಕೆ ಇಲ್ಲಿಯವರೆಗೆ 2 ವರ್ಷವಾದರೂ, ಯಾವೊಬ್ಬ ಮುಖ್ಯಗುರುಗಳ ಖಾತೆಗೂ ಹಣ ಜಮಾವಣೆ ಆಗಿಲ್ಲ. ಕಾರಣ ಪಠ್ಯಪುಸ್ತಕ ವಿತರಣಿಯಲ್ಲಾದ ಅಕ್ರಮವನ್ನು ತನಿಖೆ ಮಾಡುವ ಅವಶ್ಯಕತೆ ಇದೆ.ಇನ್ನು ಇಲಾಖೆ ಹೊಸದಾಗಿ ಬಂದ ಶಿಕ್ಷಕರಿಗೆ ಗುಂಪುವಿಮೆ ಮಾಡುವ ಹೆಸರಿನಲ್ಲಿ ಸಾಕಷ್ಟು ದುಡ್ಡು ತಿಂದು ಹಾಕಿದೆ. ಪ್ರತಿಶಿಕ್ಷಕರಿಂದ 400ರಿಂದ 600ರೂವರೆಗೆ ವಸೂಲಿ ಮಾಡಿದೆ ಉದಾಹರಣೆಗಳಿವೆ. ಕೆಲವೊಂದು ಶಿಕ್ಷಕರು ರಾಮಾಂಜನೇಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕೆಂದರೆ ಅವರು ಯಾವುದಕ್ಕೂ ತಲೆಬಿಸಿ ಮಾಡಿಕೊಳ್ಳುವುದಿಲ್ಲ.ಶಿಕ್ಷಕರ ಹಾಗೂ ತದಿತರೆ ಸಂಘಟನೆಗಳು ಹೋಗಿ ಕೇಳಿದರೆ ಬಾಯಾರಿಕೆಯ ಉತ್ತರ ನೀಡಿ, ಅದು ನನ್ನ ಗಮನಿಕ್ಕಿಲ್ಲ, ನಾನು ವಿಚಾರಿಸುತ್ತೇನೆಂದು ಹೇಳಿ ಜಾರಿಕೊಳ್ಳುತ್ತಾರೆ.ಈಗಾಗಲೇ ಶಿಕ್ಷಕರ ಗುಂಪುವಿಮೆ ಹೆಸರಿನಲ್ಲಿ ಎಲ್ಲರೂ ವ್ಯವಸ್ಥಿತವಾಗಿ ದುಡ್ಡನ್ನು ತಿಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾದಾಗ ಮಾತ್ರ ಹೂರಣ ಹೊರಬೀಳಬಹುದು.ಅದರಂತೆ 2010/11ನೇ ಸಾಲಿನಲ್ಲಿ ನೇಮಕಗೊಂಡ ಹೊಸ ಶಿಕ್ಷಕರಿಗೆ ವೇತನ ಮಾಡಲು ಅರ್ಹತಾ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಅದನ್ನು ನೀಡಲು ಕೂಡ ಪ್ರತಿ ಶಿಕ್ಷಕರಿಂದ 700ರಿಂದ 1000ರೂಗಳವರೆಗೆ ಲಂಚ ಪಡೆಯುತ್ತಿದ್ದಾರೆ!ಕೆಲವು ತಿಂಗಳುಗಳಿಂದ ಸಂಬಳವಿಲ್ಲದೇ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ನೀವ್ಯಾಕೆ ಅವರಿಂದ ದುಡ್ಡು ಕೀಳುತ್ತಿದ್ದಿರೆಂದು ಸಂಘಟನೆಯವರು ಕೇಳಿದರೆ, ಅವರನ್ನು ಸಮಜಾಯಿಷಿ, ಇಲ್ಲದಸಲ್ಲದ ಉತ್ತರ ನೀಡಿ ಕಳುಹಿಸುತ್ತಾರೆ. ರಾಮಾಂಜನೇಯರ ಕಛೇರಿಯಲ್ಲಿ ಕೆಲವು ಸಿಬ್ಬಂದಿಗಳು ನಮ್ಮ ಕಾಯರ್ಾಲಯದ ಖಚರ್ಿಗಾಗಿ ಬಿ.ಇ.ಓ ಸಾಹೇಬರೇ ದುಡ್ಡು ತೆಗೆದುಕೊಳ್ಳಿ ಎಂದು ಹೇಳಿದ್ದಾರೆಂದು ಹೇಳುತ್ತಾರೆ. ಇಂತಹ ಘಟನೆ ಹಿಂದೊಮ್ಮೆಯೂ ನಡೆದಿತ್ತು.ಪ್ರತಿಯೊಂದರಲ್ಲಿ ಸಮಪಾಲು ಸಮಬಾಳು ಎಂಬಂತೆ ಬಿ.ಇ.ಓರವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅವರ ವ್ಯಕ್ತಿತ್ವ ಮತ್ತು ಹುದ್ದೆಗೆ ಗೌರವ ತರುವಂತಹದ್ದಲ್ಲ.ಕನರ್ಾಟಕದಲ್ಲಿ ಎಲ್ಲಿಯೂ ಏಕೋಪಾಧ್ಯಾಯ ಶಾಲೆಗಳಿರಬಾರದೆಂದು ಈ ಹಿಂದೆಯೇ ಸಕರ್ಾರ ಆದೇಶ ಹೊರಡಿಸಿದೆ. ಅದಕ್ಕಾಗಿ ಸಾಕಷ್ಟು ನೇಮಕಾತಿ ಪ್ರಕ್ರಿಯೆಗಳನ್ನು ಮಾಡಿದೆ. ಆದರೆ, ಈ ಕಾಯ್ದೆ ಮಾನವಿ ಶಿಕ್ಷಣ ಇಲಾಖೆಗೆ ಅನ್ವಯವಾಗುತ್ತಿಲ್ಲ. ಯಾಕೆಂದರೆ, ಬಿ.ಇ.ಓರವರೇ ಖುದ್ದಾಗಿ ಕೆಲವೊಂದು ಶಿಕ್ಷಕರಿಗೆ ಏಕೋಪಾಧ್ಯಯರಾಗಿ ಕೆಲಸ ಮಾಡಿ, ಅದಕ್ಕಾಗಿ ನಿಮಗೆ ಎರವಲು ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ.ತಾಲೂಕಿನ ಕೆಲವೊಂದು ಕಡೆ ದುಡ್ಡಿನ ಆಸೆಗಾಗಿ ಬಿ.ಇ.ಓರವರು ಏಕೋಪಾಧ್ಯಾಯ ಶಾಲೆಗಳನ್ನು ಸೃಷ್ಟಿಸಿ ಮಕ್ಕಳ ಕಲಿಕೆಗೆ ಕಂಠಕರಾಗಿದ್ದಾರೆ. ಕೆಲವೊಂದು ಶಿಕ್ಷಕರಿಂದ ಹಣವನ್ನು ತಿಂದು ಕ್ರಾಸ್ ಡೆಪ್ಯೂಟೇಷನ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹಣಸಿಕ್ಕರೆ ಸಾಕು ನಿಯಮಗಳನ್ನು ತಿದ್ದುಪಡಿ ಮಾಡಿ ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಾರೆ. ಕ್ರಾಸ್ಡೆಪ್ಯೂಟೇಷನ್ ಮುಖಾಂತರ ತಮ್ಮ ಮನೆಗೆ ಬಂದು ಹಣ ನೀಡುವವರಿಗೆ ಕೆಲವೊಂದು ಶಾಲೆಗಳ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದಾರೆ. ಅಂತಹ ಶಾಲೆಗಳು ರಾಮಾಂಜನೇಯರ ಅವಧಿಯಲ್ಲಿ ಸಾಕಷ್ಟಿವೆ. ಉದಾಹರಣಿಗೆ ನವಲಕಲ್ ಶಾಲೆಯದ್ದು ಇದೇ ಪರಿಸ್ಥಿತಿ.ಸಾಹೇಬರ ದುರಾಡಳಿತ ನೋಡಿರುವ ಸಿಬ್ಬಂದಿಗಳು ಕೂಡ ಪ್ರತಿಯೊಂದು ಕೆಲಸಕ್ಕೆ ಇಂತಿಷ್ಟೂ ಮಾಮೂಲಿಯನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಅಂದರೆ ಮಾನ್ವಿಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯರ್ಾಲಯದಲ್ಲಿ ಹಣ ನೀಡಿದರೆ ಅನಕ್ಷರಸ್ಥನು ಕೂಡ ಅಕ್ಷರಸ್ಥನಾಗಿ ದಾಖಲೆಗಳನ್ನು ಪಡೆಯಬಲ್ಲ.ಎಸ್.ಎಸ್.ಎ ಯೋಜನೆಯ ಸುಮಾರು 400ಶಿಕ್ಷಕರ ವೇತನ ಸೇವಾಪುಸ್ತಕ ನಿರ್ವಹಣೆ ಸೇರಿದಂತೆ ಇಲಾಖೆಯ ಹಲವು ಕೆಲಸ ಕಾರ್ಯಗಳನ್ನು ಮಾಡಲು ಸರಿಯಾದ ಸಿಬ್ಬಂದಿಗಳು ಇದ್ದರೂ ಬಿ.ಇ.ಓರವರು ಬಿ.ಆರ್.ಸಿಯಲ್ಲಿ ಸಿ.ಸಿ.ಟಿ ಎಂದು ನೇಮಕವಾಗಿರುವ ಕೃಷ್ಣಪ್ಪ ಎಂಬಾತನಿಗೆ ಜವಾಬ್ದಾರಿ ವಹಿಸಿ, ಮತ್ತೇ ಈತನ ಕೆಳಗೊಬ್ಬ ಶಿಕ್ಷಕನೊಬ್ಬ ಕೊಟ್ಟು, ಯಾರಿಗೆ ಗೊತ್ತಾಗದಂತೆ ಎಲ್ಲದರಲ್ಲೂ ಶಿಕ್ಷಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ.ಎಂದಾದರೂ ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಬಿ.ಇ.ಓ ಕಾಯರ್ಾಲಯಕ್ಕೆ ಬಂದರೆ, ರಾಮಾಂಜನೇಯರವರು ಎಲ್ಲೋ ದೂರವಿರುವ ಬಿ.ಆರ್.ಸಿಯನ್ನು ಭೇಟಿಯಾಗಿ ಹೋಗಿ ಎಂದು ಹೇಳುತ್ತಾರೆ. ಅಂದರರ್ಥ ಶಿಕ್ಷಕರು ಮೊದಲು ಬಿ.ಆರ್.ಸಿ ಹತ್ತಿರ ಹೋಗಿ ಸಾಹೇಬರು ಫಿಕ್ಸ್ ಮಾಡಿರುವಂತಹ ಹಣವನ್ನು ನೀಡಬೇಕು. ಅಲ್ಲಿ ವ್ಯವಹಾರ ಸರಿಯಾಗಿ ಕುದುರಿದರೆ ಮಾತ್ರ ಕಛೇರಿಯಲ್ಲಿ ಪೈಲಿಗೆ ಸಹಿ ಬೀಳುತ್ತದೆ. ಒಂದು ವೇಳೆ ಬಿ.ಆರ್.ಸಿಯ ಹತ್ತಿರ ಹಣದ ವಿಷಯದಲ್ಲಿ ವಾಗ್ವಾದ ನಡೆದರೆ, ಆ ಶಿಕ್ಷಕನ ಪೈಲು ಕಛೇರಿಯಲ್ಲಿಯೇ ಕೊಳೆಯಬೇಕಾಗುತ್ತದೆ.ಅನಾರೋಗ್ಯದಿಂದ ಬಳಳುತ್ತಿರುವ ಅಥವಾ ಗಭರ್ಿಣಿ ಶಿಕ್ಷಕರೇನಾದರೂ ಒಂದು ಸಮಸ್ಯೆ ಹೊತ್ತು ತಂದರೆ, ಬಿ.ಇ.ಓ ಒಂದೇ ಸಮನೆ ಅಲ್ಲಿಂದ ಇಲ್ಲಿಗೆ, ಇಲ್ಲಿಗೆ ಅಲ್ಲಿಗೆ ತಿರುಗಾಡಿಸಿ ಸುಸ್ತ್ ಮಾಡಿಬಿಡುತ್ತಾರೆ. ಒಂದು ವೇಳೆ ಮೊದಲಿಗೆ ಹೇಳಿದಂತೆ ದುಡ್ಡನ್ನು ನೀಡಿದರೆ, ರಜೆಗಳು, ಗಭರ್ಿಣಿ ಶಿಕ್ಷಕರ ಕೆಲಸಗಳು ತವರುಮನೆಗೆ ಓಡಿಬರುತ್ತವೆ. ಹೀಗಾಗಿ ಬಿ.ಇ.ಓ ರಾಮಾಂಜನೇಯರಿಗೆ ಸಾಕಷ್ಟು ಮಹಿಳಾ ಶಿಕ್ಷಕರು ದಿನನಿತ್ಯ ಹಿಡಿಶಾಪ ಹಾಕುತ್ತಿರುವ ದೃಶ್ಯ ಮಾನವಿಯ ಅವರ ಕಛೇರಿಯ ಮುಂದೆ ಕಾಣಸಿಗುತ್ತದೆ.ಯಾರಾದರೂ ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಕಚೇರಿಗೆ ಬಂದರೆ, ಮೊದಲು ನಾನು ಹೇಳುವದನ್ನು ಕೇಳರ್ರೀ.. ಬಾಯಿ ಮುಚ್ಚಿಕೊಂಡು ಮೊದಲು ಶಾಲೆಗೆ ಹೋಗ್ರೀ.. ನಾನು ಬಂದು ಎಲ್ಲವನ್ನು ನೋಡಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿಮ್ಮನ್ನು ಅಮಾನತ್ ಮಾಡಬೇಕಾಗುತ್ತದೆ ಎಂದು ಗದರಿಸಿ ಮಾನಸಿಕ ಕಿರುಕುಳ ಕೊಡುವುದು ಮಾನ್ಯ ಬಿ.ಇ.ಒರವರ ಕಾಯಕವಾಗಿದೆ.ನಾನು ಲಿಂಗಸೂರಿನಲ್ಲಿ 90ಶಿಕ್ಷಕರನ್ನು ಅಮಾನತ್ ಮಾಡಿದ್ದೇನೆ. ಇಲ್ಲಿ ನಿವೇನಾದರೂ ನನ್ನ ಮಾತು ಕೇಳದೆ, ಸಂಘದವರಿಗಾಗಲಿ ಅಥವಾ ಪತ್ರಿಕೆಯವರಿಗಾಗಲಿ ಹೇಳಿದರೆ ನಿಮಗೂ ಲಿಂಗಸ್ಗೂರು ಶಿಕ್ಷಕರ ಗತಿ ಎಂದು ಎಚ್ಚರಿಸುತ್ತಾರೆ. ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ಏಕವಚನದಲ್ಲಿ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಂದರಬಾಯಿ, ಪ್ರಮಿಳಾ, ಸರಳಾಬಾಯಿ ಎಂಬುವವರನ್ನು ಎರವಲು ನೀಡಿದ್ದಾರೆ. ಯಾರಾದರೂ ಎಸ್.ಡಿ.ಎಂ.ಸಿಯವರು ಬಂದರೆ ಮೊದಲು ನೀವು ಶಿಕ್ಷಕರ ವಿರುದ್ಧ ಕಂಪ್ಲೇಟ್ ಕೊಡಿ, ನಾನು ಅವರನ್ನು ಸಸ್ಪೆಂಡ್ ಮಾಡುತ್ತೇನೆಂದು ಸಮಿತಿಗೆ ಹೇಳುತ್ತಾರೆ. ಶಿಕ್ಷಕರಿಗೆ ನೈತಿಕ ಬೆಂಬಲ ನೀಡಬೇಕಾದ ಅಧಿಕಾರಿ ಹೀಗಾದರೆ ಹೇಗೆ..?ಇಷ್ಟೆಲ್ಲ ಕಿತಾಪತಿಗಳನ್ನು ಮಾಡಿರುವ ಬಿ.ಇ.ಓ ರಾಮಾಂಜನೇಯನನ್ನು ಕೂಡಲೇ ವಗರ್ಾಯಿಸಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಂಕಷ್ಟದಲ್ಲಿರುವ ಶಿಕ್ಷಕ ಸಮುದಾಯವನ್ನು ಪಾರು ಮಾಡಬೇಕು.
ತಾಲೂಕಿನಲ್ಲಿ ಆರ್.ಎಂ.ಎ.ಎಸ್ ಶಾಲೆಗೆ ಗ್ರೇಡ್2 ಬಡ್ತಿಹೊಂದಿದ ಪ್ರೌಡಶಾಲಾ ಮುಖ್ಯಗುರುಗಳನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಬೇಕೆಂದಿದ್ದರೂ ಲೆಕ್ಕಸದೇ ಪಟ್ಟಣದ ಕೋನಾಪೂರ ಪೇಟೆಯ ಪ್ರೌಢಶಾಲೆಯಲ್ಲಿ ಸಾಕಷ್ಟು ಶಿಕ್ಷಕರ ಕೊರತೆ ಇದ್ದರೂ ತನಗೆ ಅನುಕೂಲವಿರುವ (ಒಳಒಪ್ಪಂದದಂತೆ ಹಣ ನೀಡುವ) ರಾಘವೇಂದ್ರ ಎಂಬ ಸಹಶಿಕ್ಷಕರನ್ನು ಎರವಲು ಸೇವೆಯ ಮೇಲೆ ನೇಮಿಸಿ ಬಹಳ ನಾಜೂಕಿನಿಂದ ಸಕರ್ಾರದ ಹಣವನ್ನು ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ವಿಚಿತ್ರ ಸಂಗತಿಯೆಂದರೆ, ಗ್ರೇಡ್2 ಬಡ್ತಿ ಹೊಂದಿದ ಪ್ರೌಢಶಾಲೆ ಮುಖ್ಯಗುರುಗಳೊಬ್ಬರನ್ನು ಈ ಸಹ ಶಿಕ್ಷಕರ ಕೈಕೆಳಗೆ ನೇಮಿಸಿ ತಪ್ಪಿನ ಅರಿವಾಗಿ ಒಂದೇ ದಿನದಲ್ಲಿ ವಾಪಸ್ಸು ಕರೆಸಿಕೊಂಡಿರುವುದು ಸೋಜಿಗ ಸಂಗತಿ.ಪ್ರೌಢಶಾಲಾ ಮಕ್ಕಳಿಗಾಗಿ ಅಂತರ್ಜಾಲ ಮೇಳ ಆಯೋಜಿಸಿದಾಗ ಭಾಗವಹಿಸಿದ ಮಕ್ಕಳಿಗೆ ಉಪಹಾರಕ್ಕಾಗಿ ಹಣ ಸಕರ್ಾರದಿಂದ ಬಂದಿದ್ದರೂ ಒತ್ತಾಯಪೂರ್ವಕವಾಗಿ ಶಿಕ್ಷಣ ಸಂಯೋಜಕರಾದ ಸೂರ್ಯಕಾಂತ ಬಾರಕೇರ, ರಾಯಪ್ಪ ಬಳಬಟ್ಟೆ ಇವರು ಖಾಸಗಿ ಶಾಲೆಯಿಂದ ಒತ್ತಾಯವಾಗಿ ಊಟ ತರಿಸಿ ಹಣಗುಳುಂ ಮಾಡಿದ್ದಾರೆ. ಇವರು 10-12ವರ್ಷಗಳಿಂದ ಇಲ್ಲಿ ಇರುವುದರಿಂದ ಈತನನ್ನು ಬೇರೆಡೆ ವಗರ್ಾಯಿಸಬೇಕು.
ಪ್ರಜಾಸಮರ