Monday, July 16, 2012

ದಂಡುಪಾಳ್ಯ'ದ ದಾರಿಯಲ್ಲಿ ಹಂತಕರ ಹೆಜ್ಜೆ...



ದಾಕ್ಷಿಣ್ಯಕ್ಕಾದರೂ ಅಯ್ಯೋ-ಪಾಪ ಎನ್ನದಂಥ ಮನಸ್ಸು, ಕರುಣೆ ಅನ್ನೋದರ ಅರ್ಥವೇ ಗೊತ್ತಿಲ್ಲದ ಪರಮ ಕ್ರೂರಿಗಳು. ತಂಡದ ನಾಯಕಿ ಲಕ್ಷ್ಮಿ ಮೊದಲು ಒಂಟಿ ಮಹಿಳೆಯರಿರುವ ಮನೆಯನ್ನು ಗುರುತಿಸುತ್ತಾಳೆ. ಮನೆಯಲ್ಲಿ ಬೇರೆ ಯಾರೂ ಇಲ್ಲ ಅನ್ನೋದು ಗ್ಯಾರೆಂಟಿಯಾಗುತ್ತಿದ್ದಂತೇ ಆ ಮನೆ ಮತ್ತು ಮನೆಯಲ್ಲಿರುವವರ ಡೀಟೇಲನ್ನು ತಂಡದ ಉಳಿದ ಸದಸ್ಯರಿಗೆ ನೀಡುತ್ತಾಳೆ. ಹಾಗೆ ತನ್ನ ಗುಂಪಿನೊಂದಿಗೆ ಬರುವ ಲಕ್ಷ್ಮಿ ಮೊದಲು ಮನೆ ಬಾಗಿಲು ಬಡಿಯುತ್ತಾಳೆ. ಕುಡಿಯೋಕೆ ನೀರು ಕೊಡಿ ಎನ್ನುತ್ತಾಳೆ. ಮನೆಯಾಕೆ ಒಳಗೆ ಹೋಗಿ ನೀರು ತರುವಷ್ಟರಲ್ಲಿ ಗ್ಯಾಂಗಿನ ಉಳಿದ ಸದಸ್ಯರು ಮನೆಯೊಳಗೆ ಪವೇಶಿಸುತ್ತಾರೆ. ಅಲ್ಲಿಗೆ ಮನೆಯಲ್ಲಿರುವರ ಕತೆ ಮುಗಿದಂತೇ! ಹಿಂದಿನಿಂದ ತಲೆ ಲಟಾರನೆ ರಾಡಿನಿಂದ ಹೊಡೆದು ಕೆಳಗುರುಳಿಸುತ್ತಾರೆ. ಮನೆಯಲ್ಲಿರುವ ನಗ-ನಾಣ್ಯವನ್ನೆಲ್ಲಾದೋಚಿದ ನಂತರ ಮೆತ್ತಗೆ ಗ್ಯಾಂಗ್ ಲೀಡರ್ ಕೃಷ್ಣ ನೆಲದ ಮೇಲೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿರುವ ಹೆಣ್ಣನ್ನು ಎಳೆದುಕೊಳ್ಳುತ್ತಾನೆ. ಎಲೆ-ಅಡಿಕೆ ಜಗಿಯುತ್ತಾ ಎಲ್ಲವನ್ನೂ ನೋಡುತ್ತಾ ಕೂರುವ ಲಕ್ಷ್ಮಿ ಬಂದು ಗಟ್ಟಿಯಾಗಿ ಆ ಹೆಣ್ಣಿನ ಕಾಲುಗಳನ್ನು ಒತ್ತಿಹಿಡಿಯುತ್ತಾಳೆ. ಮತ್ತೊಬ್ಬ ಬಂದು ಮೊಂಡು ಹಿಡಿದ ಕತ್ತಿಯೊಂದನ್ನು ನೀಡುತ್ತಾನೆ. ವಿಲಕ್ಷಣವಾಗಿ ದಿಟ್ಟಿಸುತ್ತಾ ಕತ್ತಿಯನ್ನು ಕುತ್ತಿಗೆಗಿಟ್ಟು ಚರ್ರಚರ್ರನೆ ಕೋಳಿ ಕೊಯ್ಯುವ ಹಾಕೆ ಗೋಮಾಳೆ ಸೀಳಿಬಿಡುತ್ತಾನೆ ಕೃಷ್ಣ. ಹಾಗೆ ಕುತ್ತಿಗೆ ಸೀಳಿದ ಕೂಡಲೇ ಗಂಟಲಿನಿಂದ `ಟಿಸ್ಸ್ಸ್ ' ಅಂತಾ ಶಬ್ದ ಬರುತ್ತದೆ. ಕಿವಿ ಹತ್ತಿರ ಮಾಡಿ ಆ ಸದ್ದನ್ನು ಕೇಳುವುದೆಂದರೆ ಕ್ರೂರಿ ಕೃಷ್ಣನಿಗೆ ಅದೆಂಥದ್ದೋ ಮೋಜು. ನಂತರ ತಂಡದ ಇತರೆ ಸದಸ್ಯರು ಸತ್ತ ಹೆಣವನ್ನೂ ರೇಪ್ ಮಾಡುತ್ತಾರೆ... ಮುನ್ನೂರು ರುಪಾಯಿಗೆ ಮೈಮಾರಿಕೊಳ್ಳುವ ಬೀದಿ ವೇಶ್ಯೆಯನ್ನೂ ಹಿಂಸಿಸಿ ಕೊಲ್ಲುವ, ಮನೆಗಳಿಗೆ ನುಗ್ಗಿದಾಗ ಸಿಗುವ ಗಂಡಸರ ಮೇಲೂ ಅತ್ಯಾಚಾರವೆಸಗುವು ಕೆಟ್ಟ ಕ್ರಿಮಿಗಳವರು...
ಅಬ್ಬಬ್ಬಬ್ಬಬ್ಬ!!
ಇಂಥ ಸರಣೀ ಭೀಬತ್ಸ ಕೊಲೆಗಳಿಗೆ ಕಾರಣರಾದವರು `ದಂಡುಪಾಳ್ಯ'ದ ಹಂತಕರು. ನೈಜ ಕತೆಯನ್ನೇ ಹೆಕ್ಕಿಕೊಂಡು ಅಷ್ಟೇ ನೈಜವಾಗಿ ಚಿತ್ರಿತಗೊಂಡಿರುವ ಸಿನಿಮಾ `ಡಂಡುಪಾಳ್ಯ'. ಈ ಚಿತ್ರವನ್ನು ಗಟ್ಟಿ ಗುಂಡಿಗೆಯಿದ್ದವರು ಮಾತ್ರ ನೋಡಲು ಸಾಧ್ಯ. ದಂಡು ಪಾಳ್ಯದ ಹಂತಕರ ಪ್ರತಿಯೊಂದೂ ವಿವರಗಳನ್ನು ಕಲೆಹಾಕಿ, ಆ ಗ್ಯಾಂಗಿನ ಹುಟ್ಟಡಗಿಸಿದ ಇನ್ಸ್ಪೆಕ್ಟರ್ ಚಲಪತಿವರ ಧೈರ್ಯ-ಬುದ್ದಿವಂತಿಕೆ ಇತ್ಯಾದಿ ವಿವರಗಳನ್ನಿಟ್ಟು ಪಕ್ಕಾ ರಿಯಲಿಸ್ಟಿಕ್ ಡಾಕ್ಯುಮೆಂಟರಿಯಂತೆ `ದಂಡುಪಾಳ್ಯ'ವನ್ನು ಕಟ್ಟಿಕೊಟ್ಟಿದ್ದಾರೆ ನಿದರ್ೇಶಕ ಶ್ರೀನಿವಾಸರಾಜು.

ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾಗಾಂಧಿ, ಕೃಷ್ಣನಾಗಿ ಮಕರಂದ್ ದೇಶಪಾಂಡೆ, ರವಿಕಾಳೆ, ಮುನಿ, ಯತಿರಾಜ್, ಪೆಟ್ರೋಲ್ ಪ್ರಸನ್ನ ಮುಂತಾದವರು ಡಂಡುಪಾಳ್ಯದ ಹಂತಕರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಕುತ್ತಿಗೆ ಕತ್ತರಿಸುವ ದೃಶ್ಯಗಳೇ ಹೆಚ್ಚು ಇರುವುದರಿಂದ ಪ್ರೇಕ್ಷಕರ ಕರುಳು ಬಾಯಿಗೆ ಬಂದಂತಾಗುತ್ತದೆ; ಪ್ರೇಕ್ಷಕ ಪದೇ ಪದೇ ಕಣ್ಣು-ಕಿವಿ ಮುಚ್ಚಲೇಕಾದ ಅನಿವಾರ್ಯ! ಮತ್ತೆ ನೋಡುಗರ ಕಣ್ತೆಯುವುದು ಇನ್ಸ್ಪೆಕ್ಟರ್ ಚಲಪತಿ ಸಂಪೂರ್ಣವಾಗಿ ಎಂಟ್ರಿ ಕೊಟ್ಟು ತನಿಖೆ ಆರಂಭಿಸಿದ ಮೇಲಷ್ಟೇ. ಮೊದಲಿಗೆ ದರೋಡೆ ಮಾಡಿದ ಬಂಗಾರವನ್ನು ಸಂಶಯಾಸ್ಪದವಾಗಿ ಮಾರಲು ಯತ್ನಿಸುವ ತಂಡದ ಸದಸ್ಯ ತಿಮ್ಮನನ್ನು ಬಂಧಿಸಿ ನಂತರ ಗ್ಯಾಂಗಿನ ಇತರರ ಬೆನ್ನುಹತ್ತುವ ಎಪಿಸೋಡುಗಳು ರೋಚಕವಾಗಿವೆ. ಸಾಯಿ ಪ್ರಕಾಶ್ ಸಹೋದರ ರವಿಶಂಕರ್ ಚಲಪತಿ ಪಾತ್ರಕ್ಕೆ ಹೇಳಿಮಾಡಿಸಿದಂತೆ ನಟಿಸಿದ್ದಾರೆ. ದವಡೆಯಲ್ಲಿ ಅಡಿಕೆ-ಎಲೆ ಇಟ್ಟುಕೊಂಡು, ಬೀಡಿ ಸೇದುವ, ಹಂದಿಯನ್ನು ಭೇಟೆಯಾಡಿ ಹೆಗಲೆ ಮೇಲೆ ಹೊತ್ತೊಯ್ಯುವ ಪೂಜಾಗಾಂಧಿ ತಾನೊಬ್ಬಳು ಜನಪ್ರಿಯ ಹೀರೋಯಿನ್ ಅನ್ನೋದನ್ನು ಮರೆತು ನಟಿಸಿದ್ದಾಳೆ. ಇಂಥ ಸರಣಿ ಪಾಥಕಗಳನ್ನು ದೃಶ್ಯರೂಪದಲ್ಲಿ ನೀಡುವಾಗ ಹಿನ್ನೆಲೆ ಸಂಗೀತ ಮಹತ್ವವಾದ ಪಾತ್ರ ವಹಿಸುತ್ತದೆ. ಸಂಗೀತ ನಿದರ್ೇಶಕ ಅಜರ್ುನ್ ಇರುವ ಒಂದು ಹಾಡು ಮತ್ತು ಬಿಜಿಎಮ್ ಅಜರ್ುನ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ರಾಮ್ಪ್ರಸಾದ್ ಇಡೀ ಸಿನಿಮಾವನ್ನು ಹಸಿಹಸಿಯಾಗಿ ಕಟ್ಟಿಕೊಟ್ಟೊದ್ದಾರೆ.

ದಂಡುಪಾಳ್ಯದ ಗ್ಯಾಂಗಿನವರಿಗೆ ಸುಫಾರಿ ಕೊಟ್ಟು ಪೊಲೀಸರನ್ನೇ ಕೊಲ್ಲಿಸುವ ಪೊಲೀಸರು, ಎರಡು ಮೂರು ಸಾವಿರ ರುಪಾಯಿಗಳನ್ನು ಕೊಟ್ಟು ಕೊಲೆ ಮಾಡಿಸುವ ವಕೀಲ... ಹೀಗೆ ನಡೆದ ಕಥೆಯನ್ನು ಯಥಾವತ್ತು ನಿರೂಪಿಸಿದ್ದಾರೆ; `ದಂಡುಪಾಳ್ಯ'ವನ್ನು ಜೀಣರ್ಿಸಿಕೊಳ್ಳುವುದು ಕಷ್ಟಕರವಾಗಿರುವುದೂ ಅದೇ ಕಾರಣಕ್ಕೇ. ಸಿನಿಮಾ ಪೊಲೀಸ್ ಫೈಲ್ಗಳ ಪ್ರಕಾರ ಬಹುತೇಕ ನೈಜವಾಗಿದೆ ಅನ್ನೋದರಲ್ಲಿ ಡೌಟಿಲ್ಲ. ಆದರೆ ಅಷ್ಟೊಂದು ನೈಜತೆಯನ್ನು ನೋಡುಗರ ಮೇಲೆ ಹೇರುವ ಅಗತ್ಯತೆ ಇತ್ತಾ ಅನ್ನೋದಷ್ಟೇ ಮತ್ತೆಮತ್ತೆ ಕಾಡುವ ಪ್ರಶ್ನೆ...

-ಅರುಣ್.ಜಿ


ನಿವೃತ್ತಿ, ಒಪ್ಪಂದ, ಸಂತಸ


ಓದುಗರೇ, ಇಂದು ತಾವುಗಳು ನೋಡುತ್ತಿರುವ ಪ್ರಜಾಸಮರ ಪತ್ರಿಕೆಯೂ 2007ರಲ್ಲಿ ಆರಂಭಗೊಂಡಿತು. ಇದರ ಸಿದ್ದತೆಗಾಗಿ 1 ವರ್ಷ ಕಳೆದರೂ ಕೂಡ ಕೊನೆಗೆ 2007 ರ ಅಂತ್ಯದಲ್ಲಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಘಟನೆ ಹಿನ್ನಲೆಯಿಂದ ಬಂದಿದ್ದ ನಮಗೆ ಪತ್ರಿಕೋದ್ಯಮದ ಒಳವಿಸ್ತಾರ ಹೇಗಿದೆ ಎಂಬುದು ಊಹಿಸುವುದು ಕಷ್ಟಕರವಾಗಿತ್ತು. ಇನ್ನೇನು ಪತ್ರಿಕೆಯ ಎಲ್ಲಾ ಹಂತಗಳ ಕಾರ್ಯಗಳು ಮುಗಿದಾಗ ಬಿಡುಗಡೆಗೆ ಯಾರನ್ನು ಆಮಂತ್ರಿಸಬೇಕು ಎಂಬ ಗೊಂದಲ ನಮ್ಮ ಬಳಗದಲ್ಲಿ ಏರ್ಪಟ್ಟಿತ್ತು.
ಆದಾಗ್ಯೂ ಅಂದು ಟಿವಿ 9 ಖಾಸಗಿ ವಾಹಿನಯಲ್ಲಿ ಪತ್ರಕರ್ತರಾಗಿದ್ದ ಹಮೀದ್ ಪಾಳ್ಯ ಅವರನ್ನು ಆಹ್ವಾನಸಲಾಯಿತು. ಕೊನೆ ಸಂದರ್ಭಕ್ಕೆ ಅವರು ಬರದೇ ಹೋದಾಗ, ನಮಗೆ ಏನು ಮಾಡಬೇಕೆಂದು ತೋಚದಂತಾಗಿ ಕೂಡಲೇ ಡಾ.ಎಂ.ಎಲ್ ಪಾಟೀಲ್ರನ್ನು ಆಹ್ವಾನಸಿದಾಗ ಅವರು ಅಂದಿನ ಪ್ರಧಾನ ವ್ಯವಸ್ಥಾಪಕರಾದ ಡಿ.ವೈ ವೆಂಕಟೇಶರ ಅನುಮತಿಯನ್ನು ಪಡೆದು ನಮ್ಮ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು. ಸಹಜವಾಗಿ ಎಲ್ಲರೂ ಸಂತಸದಿಂದಲೇ ಪಾಟೀಲ್ರನ್ನು ಬರಮಾಡಿಕೊಂಡು ಕಾರ್ಯಕ್ರಮವನ್ನು ಮುಂದುವರೆಸಿದೆವು.
ಪ್ರಜಾಸಮರವನ್ನು ಉದ್ಘಾಟಿಸಿ ಮಾತನಾಡಿದ ಪಾಟೀಲ್ರು ಮುಂದಿನ ದಿನಗಳಲ್ಲಿ ಪತ್ರಿಕೆಗೆ ಒಳ್ಳೆಯ ಭವಿಷ್ಯವಿದೆ. ಅದನ್ನು ಈ ಯುವಪಡೆ ಮಾಡುತ್ತದೆ ಎಂಬ ಭರವಸೆ ನನಗಿದೆ. ಸ್ಥಳೀಯ ಮಟ್ಟದ ಪತ್ರಿಕೆ ಇದಾದರೂ, ರಾಜ್ಯಮಟ್ಟದ ಪತ್ರಿಕೆಯಾಗಿ ಹೊಮ್ಮುವದರಲ್ಲಿ ಎರಡು ಮಾತಿಲ್ಲ ಎಂಬ ಮಾತನ್ನು ಹೇಳಿದರು. ಅಂದಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ನೇಹಿತರಾದ ನಾಗಣ್ಣ ಕಟ್ಟಿಮನ, ಎಂ.ಸಿ ಲಿಂಗಪ್ಪ, ಹಿತೈಷಿಗಳಾದ ದಾಸಪ್ಪಗೌಡ, ಲಿಂಗಣ್ಣ ತಬಲಾಜಿ ಮೊದಲಾದವರು ಹಾಜರಿದ್ದರು.
ಯಾಕಾಗಿ ಇದನ್ನೆಲ್ಲ ನೆನಪಿಸಬೇಕಾಗಿ ಬಂತೆಂದರೆ,
ಅಂದು ಪತ್ರಿಕೆಯನ್ನು ಬಿಡುಗಡೆ ಮಾಡಿ ಸಂತಸದಿಂದ ನಾಲ್ಕು ಹಿತ ನುಡಿಗಳನ್ನು ಹೇಳಿದ್ದ ಪಾಟೀಲ್ರು ಇದೇ 30ರಂದು ಕಂಪೆನಿಯಿಂದ ನಿವೃತ್ತಿ ಹೊಂದಿದರು. ಕಂಪೆನಿಯಲ್ಲಿ ಇದ್ದಷ್ಟು ದಿನ ಪತ್ರಿಕೆಯ ಜೊತೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದ ಅವರು, ಮೊನ್ನೆ ನಮ್ಮ ಪತ್ರಿಕೆಯ 5ನೇ ವಾಷರ್ಿಕೋತ್ಸವದ ವಿಶೇಷ ಸಂಚಿಕೆಗೆ ಹಟ್ಟಿ ಚಿನ್ನದ ಗಣಿಯ ಪಿತಾಮಹ ಎಲ್.ಸಿ ಕಟರ್ಿಸ್ ಅವರ ಕುರಿತು ಲೇಖನವೊಂದನ್ನು ಬರೆದು ಕೊಟ್ಟದ್ದರು. ಅವರ ಲೇಖನದಿಂದ ಪತ್ರಿಕೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ಸಾಕಷ್ಟು ಸಂದರ್ಭಗಳಲ್ಲಿ ಪತ್ರಿಕೆಯ ಜೊತೆ ಸಕಾರಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದ ಪಾಟಿಲ್ರನ್ನು ಇಂದು ಬೀಳ್ಕೊಡುತ್ತಿರುವುದು ಬೇಸರವೆನಿಸುತ್ತದೆ.
ಕಂಪೆನಿಯ ಹಲವು ಹುದ್ದೆಗಳನ್ನು ಅಲಂಕರಿಸಿದ್ದ ಪಾಟೀಲ್ರು ಕೊನೆಗೆ ಕಂಪೆನಯ ಕಾರ್ಯನಿವರ್ಾಹಕ ನಿದರ್ೇಶಕರಾಗಿ, ತಮ್ಮ ನಿವೃತ್ತಿಯ ಹಿಂದಿನ ದಿನ ಕಾಮರ್ಿಕರ ಐತಿಹಾಸಿಕ ವೇತನ ಒಪ್ಪಂದಕ್ಕೆ ಸಹಿ ಹಾಕಿದರು. ಅವರನ್ನು ಬೀಳ್ಕೋಡಲು ಕಂಪೆನಿಯ ಹಲವು ವಿಭಾಗಗಳ ಕಾಮರ್ಿಕರು ಮತ್ತು ಸಂಘದ ಸದಸ್ಯರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅದರಲ್ಲಿ ಪಾಟೀಲರು ತಮ್ಮ ಮನದಾಳದ ಇಂಗಿತವನ್ನು ಬಿಚ್ಚಿಟ್ಟರು. ಕಂಪೆನಿಯನ್ನು ಬಿಟ್ಟುಹೋಗುತ್ತಿರುವುದು ದುಃಖಕರವಾಗಿದ್ದರೂ, ನಾನು ಲಿಂಗಸ್ಗೂರಿನಲ್ಲಿಯೇ ಮನೆ ಮಾಡುತ್ತಿದ್ದೂ, ಸಾಧ್ಯವಾದಾಗಲೆಲ್ಲ ಕಾಮರ್ಿಕರು ನಮ್ಮನ್ನು ಭೇಟಿಯಾಗಿರಿ ಎಂದು ಹೇಳಿದರು.
******
ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾಮರ್ಿಕ ಸಂಘದ ಅಧ್ಯಕ್ಷರಾಗಿದ್ದ ಎಸ್.ಎಂ ಶಫೀ ಕೂಡ ಇದೇ 30ರಂದು ನವೃತ್ತಿ ಹೊಂದಿದರು. ಪತ್ರಿಕೆ ಆರಂಭದಿಂದ ಪರಿಚಿತರಾಗಿದ್ದ ಅವರನ್ನು ಕಾಮರ್ಿಕ ಸಂಘದ ವಿಷಯ ಬಂದಾಗ ಅವರ ವಿರುದ್ದ ನೇರಾನೇರ ವರದಿಗಳನ್ನು ಪ್ರಜಾಸಮರ ಮಾಡಿತ್ತು. ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಕೂಡ ಸಾಮಾಜಿಕ ದೃಷ್ಟಿಕೋನದಿಂದ ಒಳ್ಳೆಯ ಹೆಸರು ಮಾಡಲು ಪ್ರಯತ್ನಿಸುತ್ತಿರುವದನ್ನು ಮೆಚ್ಚಬಹುದು. ತಮ್ಮದೇ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ, ಸಾಕಷ್ಟು ಬಡಮಕ್ಕಳಿಗೆ ಕಡಿಮೆ ಹಣದಲ್ಲಿ ಶಿಕ್ಷಣವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಹಟ್ಟಿಯಲ್ಲಿ ಅತ್ಯಂತ ರಿಯಾಯಿತಿ ಹಣದಲ್ಲಿ ಶಿಕ್ಷಣ ಕೊಡುವುದು ನರಸಪ್ಪ ಯಾದವ ಅವರ ವಿನಾಯಕ ಸಂಸ್ಥೆ ಬಿಟ್ಟರೆ, ಎರಡನೇಯದ್ದೇ ಶಫೀಯವರ ಲಿಟಲ್ ಏಂಜೆಲ್ಸ್ ಶಾಲೆ. ಇನ್ನುಳಿದ ಕೆಲವು ಶಾಲೆಗಳಂತೂ ಪಾಲಕರನ್ನು ಕಿತ್ತುಕೊಂಡು ತಿನ್ನಲು ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತವೆ. ಕಂಪೆನಿ, ಇತರೆ ಇಲಾಖೆಗಳ ಸಹಾಯವನ್ನು ಪಡೆದು ಶಾಲೆಯ ಅಭಿವೃದ್ದಿಯನ್ನು ಮಾಡಿದ್ದಾರೆ. (ಶಾಲೆಯ ಬೆಳವಣಿಗೆಗೆ ಇತರೆ ಸದಸ್ಯರು ಕಾರಣರಲ್ಲ ಎಂಬ ಭಾವನೆ ನಮ್ಮದಲ್ಲ. ಆದರೆ, ಯಾವುದೇ ಒಂದು ಬೆಳವಣಿಗೆ ಕ್ರಿಯೆ ನಡೆದಾಗ ಅದರ ಯಶಸ್ಸು ಲಭಿಸುವುದು ಅದನ್ನು ನಡೆಸುವ ಸಾರಥಿಗೆ. ಆ ಕಾರಣಕ್ಕೆ ಇದನ್ನು ಬೇರೆ ರೀತಿಯಲ್ಲಿ ಊಹಿಸುವುದು ತರವಲ್ಲ)
ಆರಂಭದಲ್ಲಿ ಸಣ್ಣದಾಗಿ ಶಫೀ ಯವರು ತೆಗೆದ ಶಾಲೆ ಇಂದು ಹಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಶಾಲೆಯ ಫಲಿತಾಂಶ ಗಣನೀಯವಾಗಿ ಏರುತ್ತಿದೆ. ಹಾಗೆ ವಿದ್ಯಾಥರ್ಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಕಾಮರ್ಿಕ ಸಂಘದ ಅಧ್ಯಕ್ಷರಾದ ಶಫೀ ಮುಂಗೋಪಿ ಯಾದರೂ, ಕೂಡ ಪತ್ರಿಕೆ ಅವರ ವಿರುದ್ದ ಸಾಕಷ್ಟು ಸುದ್ದಿಗಳನ್ನು ಮಾಡಿದಾಗ ಅದ್ಯಾವುದನ್ನು ಮನಸ್ಸಲ್ಲಿಟ್ಟುಕೊಳ್ಳದೇ, ಪತ್ರಿಕೆಯೊಂದಿಗೆ ಕೆಲವೊಂದು ಸಂದರ್ಭದಲ್ಲಿ ಸಹಕರಿಸಿದ್ದಾರೆ.
ಲಿಂಗರಾಜು ಅವರು ತಂಗಿ ಆ ಶಾಲೆಗೆ ಪ್ರಥಮ ಸ್ಥಾನದಲ್ಲಿ ಬಂದಾಗ ಅತಿಹೆಚ್ಚು ಸಂತೋಷ ಪಟ್ಟದ್ದು ಶಾಲೆಯ ಆಡಳಿತ ಮಂಡಳಿ ಮತ್ತು ಶಫೀ ಎಂದು ಕೇಳಿದಾಗ ಅವರಲ್ಲಿ ಕೂಡ ವೈಯಕ್ತಿಕವಾಗಿ ಪ್ರಜಾಸಮರದ ಮೇಲೆ ಭಿನ್ನಾಭಿಪ್ರಾಯವಿಲ್ಲವೆಂಬುದು ಗೊತ್ತಾಯಿತು.
ವಾರದಲ್ಲಿ ನಾಲ್ಕೈದು ದಿನ ಊರಲ್ಲಿದ್ದರೂ, ತನ್ನ ನೆಟ್ವಕರ್್ನಂದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದ ಶಫೀ 30ಕ್ಕೆ ಕೆಲಸದಿಂದ ನವೃತ್ತಿ ಹೊಂದಿದರೂ, ಕಾಮರ್ಿಕ ಸಂಘದ ಅಧ್ಯಕ್ಷರಾಗಿ ಮುಂದುವರೆದಿರುತ್ತಾರೆ.
ಇನ್ನು ಮುಂದಿನ ದಿನಗಳಲ್ಲಿ ಶಫೀಯವರು ಸಾಕಷ್ಟು ಸಮಯವನ್ನು ಸಂಸ್ಥೆಗೆ ಮೀಸಲಿಟ್ಟು ಹಟ್ಟಿಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರವನ್ನಾಗಿ ತಮ್ಮ ಶಾಲೆಯನ್ನು ಮಾಡಲಿ.
******
ಹಟ್ಟಿ ಕಾಮರ್ಿಕರಿಗೆ ಜೂನ್ 29 ಶುಭ ಶುಕ್ರವಾರ. ಯಾಕೆಂದರೆ, ಅಂದು ಕಾಮರ್ಿಕ ಸಂಘ ಮತ್ತು ಆಡಳಿತ ಮಂಡಳಿ, ಕಾಮರ್ಿಕ ಇಲಾಖೆಯ ಪ್ರಾದೇಶಿಕ ಆಯುಕ್ತರ ಮುಂದೆ ಹೊಸ ವೇತನ ಒಪ್ಪಂದಕ್ಕೆ ಸಹಿ ಹಾಕಿದರು. ಆ ವೇತನ ಒಪ್ಪಂದವು ಎಪ್ರಿಲ್ 2011ರಿಂದ ಜಾರಿಗೆ ಬರುತ್ತದೆ. ಕಂಪೆನಿ ಹಾಗೂ ಕಾಮರ್ಿಕ ಸಂಘದ ಮಧ್ಯೆ ಏರ್ಪಟ್ಟ ಈ ಬಾರಿಯ ವೇತನ ಒಪ್ಪಂದವು ಐತಿಹಾಸಿಕ ದಾಖಲೆಯಾಗಿದೆ.
ಶೇ.10ರ ಗಟಿ ದಾಟಲಾಗದ ವೇತನ ಒಪ್ಪಂದವನ್ನು ಕಾಮ್ರೇಡ್ಸ್ ತಮ್ಮ ಶಕ್ತಿ ಸಾಮಥ್ರ್ಯದೊಂದಿಗೆ, ಸತತ 13 ತಿಂಗಳು ಹೋರಾಡಿ, ಇದೀಗ ಶೇ.23ರಷ್ಟುನ್ನು ಕಾಮರ್ಿಕರಿಗೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಶೇ.10ರ ಗಡಿ ದಾಟಬೇಕಾದರೆ, ಸಕರ್ಾರದ ಅನುಮೋದನೆ ಅವಶ್ಯವೆಂದು ಗೊತ್ತಾದಾಗ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕರಾದ ಎ.ಕೆ ಮೊನ್ನಪ್ಪ, ಕಾಮರ್ಿಕ ಸಂಘದ ಅರವಿಂದ ಮಳೆಬೆನ್ನೂರು, ಶಫೀ ಒಗ್ಗಟ್ಟಿನಿಂದ ಪ್ರಯತ್ನ ಮಾಡಿ ಸಕರ್ಾರ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದರು.
ಆದರೆ, ಸಕರ್ಾರ 23 ಪ್ರತಿಶತದ ಹಿಂದೆ ನಾನಾ ಷರತ್ತುಗಳನ್ನು ಹಾಕಿದೆ. ಕಾರಣ ಲಾಭದಲ್ಲಿ ಕಂಪೆನಿ ಇರುವುದರಿಂದ ನಿಮ್ಮ ಲಾಭದಲ್ಲಿ ನಷ್ಟ ಅನುಭವಿಸುತ್ತಿರುವ ಕಂಪೆನಗಳಿಗೆ ಸ್ವಲ್ಪ ಪಾಲು ಕೊಡಿ ಎಂದು ಕೇಳಲಾಗಿದೆ ಎಂದು ಗೊತ್ತಾಗಿದೆ. ಪ್ರತಿನಿತ್ಯ ಕಾಮರ್ಿಕರು ಎಲ್ಲಿ ನೋಡಿದರಲ್ಲಿ ಬರೀ ವೇತನ ಒಪ್ಪಂದದ್ದೇ ಮಾತನಾಡುತ್ತಿದ್ದರು. ಮೊನ್ನೆ ಶುಕ್ರವಾರದಂದು ವೇತನ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆ ಎಲ್ಲರಲ್ಲಿ ಸಂತಸ ಮನೆ ಮಾಡಿದೆ. ಶೇಕಡವಾರು ರೂ.5000ರಷ್ಟು ವೇತನ ಹೆಚ್ಚಳವಾಗುತ್ತಿದ್ದು ಕಾಮರ್ಿಕರು ಅದನ್ನು ಸರಿಯಾದ ಕಾರ್ಯಕ್ಕೆ ವಿನಯೋಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡರೆ ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕರಾದ ಎ.ಕೆ ಮೊನ್ನಪ್ಪನವರು. ಜೊತೆಯಲ್ಲಿ ವೇತನ ಒಪ್ಪಂದದ ಬಾಕಿ ಹಣವಾಗಿ ಕಾಮರ್ಿಕರಿಗೆ ಏನಿಲ್ಲವೆಂದರೂ, ಸರಿಯಾಗಿ ಕೆಲಸ ಮಾಡಿದವರಿಗೆ ರೂ.30000ರಷ್ಟು ಬರುತ್ತದೆ ಎಂಬ ಲೆಕ್ಕಾಚಾರ ಈಗಾಗಲೇ ನಡೆದಿದೆ.
ಕಳೆದ ವೇತನ ಒಪ್ಪಂದದಲ್ಲಿ ಕಾಮರ್ಿಕರಿಗೆ ಅನ್ಯಾಯವಾಗಿತ್ತು ಎಂದು ಪ್ರತಿಭಟಿಸಿದ್ದ ಕಾಮ್ರೇಡ್ಸ್ಗಳನ್ನೆಲ್ಲ ಅಂದಿನ ಆಡಳಿತ ಮಂಡಳಿ ಜೈಲಿಗೆ ತಳ್ಳಿತ್ತು. ಲಿಂಗರಾಜು, ಮುನ್ನಭಾಯ್ ಅವರು ಕಳೆದ ವೇತನ ಒಪ್ಪಂದವನ್ನು ವಿರೋಧಿಸಿ ಸಹಿ ಸಂಗ್ರಹ ಚಳವಳಿ ಮಾಡಿದ್ದರು. ಅದಕ್ಕೆ ಎ.ಐ.ಟಿ.ಯು.ಸಿ ಮತ್ತು ದಲಿತ ಸಂಘಟನೆ ಬೆಂಬಲಿಸಿತ್ತು.
ಪ್ರತಿ ಸಾರಿ ವೇತನ ಒಪ್ಪಂದಗಳು ನಡೆದಾಗ ಪರ-ವಿರೋಧಗಳು ನಡೆಯುತ್ತಿದ್ದವು. ಈ ಬಾರಿಯ ವೇತನ ಒಪ್ಪಂದದ ಪ್ರತಿ ಇನ್ನೂ ಕೆಲವು ಕಾಮರ್ಿಕ ಮುಖಂಡರ ಕೈಗೆ ಸಿಗದಿದ್ದರಿಂದ, ಯಾರು ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ.
ಇನ್ನುಳಿದ ಅವಧಿಯಲ್ಲಿ ಕಾಮರ್ಿಕ ಸಂಘ ಕಾಮರ್ಿಕರಿಗೆ ವಿಆರ್ಎಸ್, ಮರಣ ಹೊಂದಿದ ಕಾಮರ್ಿಕರ ಮಕ್ಕಳು, ಸಂಬಂಧಿಗಳಿಗೆ ನೌಕರಿ, ಸುಮಾರು ವರ್ಷಗಳಿಂದ ದಿನಗೂಲಿಗಳಾಗಿ ದುಡಿಯುತ್ತಿರುವ ಕಾಮರ್ಿಕರ ಖಾಯಂಮಾತಿ ಹಾಗೂ ಕಾಮರ್ಿಕರಿಗೆ ಸಿಗಬಹುದಾದ ಅನೇಕ ಸವಲತ್ತುಗಳನ್ನು ಕೊಡಿಸಿ, ಕಾಮರ್ಿಕರ ಏಳಿಗೆಗಾಗಿ ಶ್ರಮಿಸಲಿ ಎಂದು ಪತ್ರಿಕೆ ಹಾರೈಸುತ್ತದೆ.

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ


ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾಥರ್ಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ.
ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮಥರ್ಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ.
ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ ನವೇನು ಸಾಚಾನಾ? ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು.
ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು ಕಪ್ಪುಕುರಿಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ ಕಪ್ಪುಕುರಿಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?
ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ ಸಮೂಹವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.
ಮುಖ್ಯವಾಗಿ ಆಥರ್ಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.
ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.
ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸಕರ್ಾರದ ಋಣಭಾರದಲ್ಲಿರುವಂತೆ ಮಾಡಿದೆ.
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.
ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕನರ್ಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್ಗಳು ರಾಜಕಾರಣಿಗಳ ಒಡೆತನದಲ್ಲಿವೆ, ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ.
ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕನರ್ಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ.
ಪತ್ರಿಕಾಮಂಡಳಿಯ ಏರ್ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂತರ್ಿ ಮಾರ್ಕಂಡೇಯ ಖಟ್ಜು ಅವರಂತೆ ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್ಗಳು ವರದಿ ಮಾಡಲು ಸಾಧ್ಯವಾಗಬಹುದು.
ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ.
ಶಿಕ್ಷಣ, ಸಂಪರ್ಕ ಮತ್ತು ಆಥರ್ಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು.
ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿಧರ್ಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.
ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ ಆಪರೇಷನ್ ಕಮಲದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ.
ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು.
25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್ನಲ್ಲಿಯೇ ನ್ಯೂಸ್ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
ಕ್ಯಾಂಟೀನ್ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್ಗಳು ನರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ.
ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸಕರ್ಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ.
ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀಮರ್ಾನಕ್ಕೆ ಬರಲು ಆತನಗೆ ಸಾಧ್ಯವಾಗಬೇಕು.
ಕೊನೆಯದಾಗಿ ಪತ್ರಕರ್ತ ಬೆನ್ನಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ.
ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಧರ್ಾರವಾಗುವುದು. ಆಧುನಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ.
ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀಮರ್ಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ.
ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ.
ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾಮರ್ಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು.
ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.

ಪತ್ರಿಕೆ ಎಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ


ಪತ್ರಕರ್ತರು ಅಂದರೆ ಎಲ್ಲವನ್ನೂ ತಿಳಿದುಕೊಂಡವರು, ಪ್ರಾಮಾಣಿಕತೆಗೆ ಹೆಸರಾದವರು, ಜನರ ಬಗ್ಗೆ ವಿವೇಚಿಸುವವರು, ವ್ಯವಸ್ಥೆ ದೋಷ ನಿವಾರಿಸುವ ಪ್ರಯತ್ನದಲ್ಲಿ ತೊಡಗುವವರು, ಭಷ್ಟ ರಾಜಕಾರಣಿ, ಅಧಿಕಾರಿಗಳೊಂದಿಗೆ, ರಾಜಿಯಾಗದ ವರು ಎಂಬೆಲ್ಲಾ ವಿಶೇಷತೆಗಳೊಂದಿಗೆ ಜನರು ಅವರನ್ನು ಗೌರವಿಸುತ್ತಾರೆ. ಬಹುಪಾಲು ಜನರಿಗೆ ಈಗಲೂ ಅದೇ ಭಾವನೆ, ಗೌರವ ಇದೆ. ಪತ್ರಿಕೆಗಳು ಅಂದ ತಕ್ಷಣ ಜನರಲ್ಲಿ ಏನೋ ಒಂದು ರೀತಿಯ ಭೀತಿ ಜಾಗೃತವಾಗುತ್ತದೆ. ಆದರೆ, ಪತ್ರಕರ್ತರು ಅಥವಾ ಪತ್ರಿಕೆಗಳು ಮಾತ್ರ ಜನರ ಭಾವನೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಅದಕ್ಕೆ ಹಲವಾರು ಕಾರಣ ನೀಡಬಹುದು. ವಾಗ್ವಾದಕ್ಕಿಳಿಯಬಹುದು. ಆದರೆ, ಪತ್ರಿಕಾಧರ್ಮ ಉಳಿಸಲು ಕಷ್ಟವೆನಿಸಿದರೆ ಆ ಕೆಲಸಕ್ಕೆ ಕೈ ಹಾಕುವುದಾದರೂ ಏತಕ್ಕೆ? ಹಣ ಮಾಡುವ ಬೇರೆ ದಂಧೆಯನ್ನು ನೆಚ್ಚಿಕೊಳ್ಳಬಹುದಲ್ಲ ಎಂಬ ಪ್ರಶ್ನೆಗೆ ಉತ್ತರ ಸುಲಭ.
ಕಾಯರ್ಾಂಗ ಮತ್ತು ರಾಜಕಾರಣ ಸಂಪೂರ್ಣ ವಾಗಿ ಭ್ರಷ್ಟಗೊಂಡಿರುವುದು, ಜನರ ಪರವಾಗಿ ಕೆಲಸ ಮಾಡಬೇಕಾದ ಪತ್ರಿಕೆಗಳು ಈ ಎರಡೂ ರಂಗಗಳ ತಪ್ಪನ್ನು ಪ್ರಶ್ನಿಸುವ ಅಧಿಕಾರ ಪಡೆದಿರುವುದು ಪ್ರಶ್ನೆಗೆ ಉತ್ತರವಾಗಿದೆ. ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಯ ಊಟದೆಲೆಯಲ್ಲಿ ಪಾಲು ಪಡೆಯುವ ಅಥವಾ ಅವರು ಉಂಡು ಹೆಚ್ಚಾದವನ್ನು ತಾವು ಗೋರುವ ದುರಾಸೆ ಅಥವಾ ಧರ್ಮ ಪತ್ರಿಕೆಗಳದು.
ರಾಜಕಾರಣಿಯಾಗಲು ಹೇಗೆ ಯಾವುದೇ ಅರ್ಹತೆ ಅಗತ್ಯವಿಲ್ಲವೋ ಹಾಗೆಯೇ ಪತ್ರಕರ್ತ ನಾಗಬೇಕಾದರೆ ಯಾವುದೇ ಅರ್ಹತೆಯ ಅಗತ್ಯವಿಲ್ಲ. ದೊಡ್ಡಮಟ್ಟದ ಪತ್ರಿಕೆ (ರಾಜ್ಯ, ರಾಷ್ಟ್ರೀಯ ಪತ್ರಿಕೆಗಳು) ಹೆಸರಿನಲ್ಲಿ ವ್ಯಾಪಾರ ಆರಂಭಿಸುವವರು ಚೆನ್ನಾಗಿ ಬರೆಯುವವರು, ಪತ್ರಿಕೋದ್ಯಮದ ಪದವಿಯನ್ನು ಪಡೆದವರನ್ನು ಆಯ್ಕೆಗೆ ಅರ್ಹತೆಯನ್ನಾಗಿ ಪರಿಗಣಿಸುತ್ತಾರೆ. ಆದರೆ, ಮಾಲೀಕನಾಗುವವನಿಗೆ ಅದರ ಅರ್ಹತೆ ಅಗತ್ಯವಿಲ್ಲ. ಹಣವಿದ್ದರೆ, ಜೊತೆಗೆ ವ್ಯಾವಹರಿಕ ಜಾಣ್ಮೆಯಿದ್ದರೆ, ಆತ ಪತ್ರಿಕೋದ್ಯಮಿ ಯಾಗಬಹುದು. ಈ ಕಾರಣಕ್ಕೆ ಪತ್ರಿಕೆಗಳು ಪತ್ರಕರ್ತರು ಅಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ. ಪತ್ರಿಕಾ ಧರ್ಮ, ಮೌಲ್ಯ, ಸಿದ್ದಾಂತ ಹೇಳುವವನನ್ನು ಅಪಹಾಸ್ಯ ಮಾಡಲಾಗುತ್ತಿದೆ. ವೇಸ್ಟ್ ಎಂದು ಪರಿಗಣಿಸಲಾಗುತ್ತಿದೆ. ಎರಡು ಹೊತ್ತಿನ ಊಟಕ್ಕಾಗಿ ಮನುಷ್ಯ ಏನನ್ನು ಬೇಕಾದರೂ ಮಾಡುತ್ತಾನೆ, ದುರಾಸೆಯಿಂದ ವ್ಯವಸ್ಥೆಯನ್ನೇ ಗಬ್ಬೆಬ್ಬಿಸುತ್ತಾನೆಂಬುದಕ್ಕೆ ಪತ್ರಿಕೆ ಪತ್ರಕರ್ತರು ಉದಾಹರಣೆಗೆ ನಿಲ್ಲುತ್ತಾರೆ.
ನಮ್ಮ ಹಿರಿಯರು ಅಥವಾ ಈ ಹಿಂದಿನ ಪತ್ರಿಕೆಗಳು ಹೀಗೆಯೇ ಇದ್ದರೆ, ಇತ್ತ ಎಂಬ ಪ್ರಶ್ನೆಗೆ ಇಲ್ಲವೆಂಬ ಉತ್ತರ ನೀಡಲು ಸಾಧ್ಯವಿಲ್ಲ. ಪ್ರಮಾಣ ಕಡಿಮೆಯಿ ರಬಹುದು. ಇತ್ತು. ಗೌಪ್ಯವಾಗಿತ್ತು. ಲಾಭ ಮಾಡಿಕೊ ಳ್ಳುವವ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದ. ನಾಚಿಕೆ, ಭೀತಿ, ಸುತ್ತವಾಗಿರುತ್ತಿತ್ತು. ಈಗ ಅದೆಲ್ಲ ಇಲ್ಲವೇ ಇಲ್ಲ. ಖುಲ್ಲಂ ಖುಲ್ಲ ಗೋಡಾ ಬಿ ಹೈ, ಮೈದಾನ ಬೀ ಹೈ
ಮೊದಲು ಎಲ್ಲರೂ ಪತ್ರಕರ್ತರಾಗಲು ಹೆದರುತ್ತಿದ್ದರು. ಭಯವಲ್ಲ, ಕಾರಣ. ಅದು ಊಟಕ್ಕೂ ಕಷ್ಟ ಕೊಡುತ್ತದೆಂದು. ಪತ್ರಕರ್ತನನ್ನು ಬಡ ಪತ್ರಕರ್ತ, ಬಡಪಾಯಿ ಎಂದು ಸಂಭೋದಿಸುತ್ತಿದ್ದುದನ್ನು ಹೊಸ ತಲೆಮಾರಿನವರಿಗಲ್ಲದಿದ್ದರೂ, ಹಳೇ ತಲೆಮಾರಿನವರಿಗೆ ಗೊತ್ತಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪತ್ರಕರ್ತರಾದರೆ, ಯಥೇಚ್ಛವಾಗಿ ಹಣ ಮಾಡಬಹುದು. ಅಧಿಕಾರಿ, ರಾಜಕಾರಣಿಗಳನ್ನು ಹೆದರಿಸಿ ಕೆಲಸ ಮಾಡಿಸಿಕೊಳ್ಳಬಹುದೆಂದು.
ನಂ.1 ಪತ್ರಿಕೆ (ರಾಜ್ಯಮಟ್ಟದ್ದು) ಸಂಪಾದಕ, ಪತ್ರಕರ್ತರಲ್ಲಿಯೇ ನಂ.1 ಕುಬೇರನಾಗಿರುವುದು ಹೇಗೆ? ರಾಜಕಾರಣಿಯೊಬ್ಬರ ಬೂಟು ನೆಕ್ಕುತ್ತಿದ್ದುದೇ ಈತ ಸಂಪಾದಕನಾಗಲು ಇದ್ದ ಅರ್ಹತೆ. ಪತ್ರಿಕೋದ್ಯಮದ ಪಟ್ಟುಗಳನ್ನು ಬದಲಿಸಿರುವುದಾಗಿ ಸನ್ನಿ ಬಡಿದವನಂತೆ ಪದೇ ಪದೇ ಬಡಿದುಕೊಳ್ಳುವ ಈತನ ಮತ್ತೊಂದು ಸಾಧನೆಯೆಂದರೆ, ಹೋಟೆಲ್ಗಳಲ್ಲಿ ಮಾಣಿಗಳಾಗಿ ದ್ದವರೂ ಪತ್ರಿಕಾ ಕಛೇರಿಗಳಿಗೆ ಪತ್ರಿಕೆ ವಿತರಿಸಿ ಬದುಕುತ್ತಿದ್ದವರನ್ನು ಪತ್ರಕರ್ತರನ್ನಾಗಿ ಪ್ರತಿಷ್ಟಾಪಿಸಿದ್ದು. ಭಾಷೆ, ವ್ಯಾಕರಣ ಕಲಿತುಕೊಳ್ಳುವುದು ಕಷ್ಟವೇನಲ್ಲವೇ? ಮತ್ತೊಂದು ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಅಕ್ಷರಜ್ಞಾನವೇ ಇಲ್ಲದವನು ಸಂಪಾದಕನಾಗಿ ವಿಜೃಂಭಸಿದ್ದ. ಬಯಲಲ್ಲಿ ಬೆತ್ತಲಾದವರ ಸಂಖ್ಯೆ ಸಾಕಷ್ಟಿದೆ. ವೈಯಕ್ತಿಕ ಮಟ್ಟದಲ್ಲಿ ಪತ್ರಕರ್ತರು ಏನಾಗಿದ್ದಾರೆಂಬುದಕ್ಕೆ ಇದು ಉದಾಹರಣಿ. ಜಾತಿವಾದಿಗಳು, ಜಾತ್ಯಾತೀತವಾದಿಗಳು ಎಂಬ ಹಣಿಪಟ್ಟಿಯೊಂದಿಗೆ ಪತ್ರಿಕೋದ್ಯಮವನ್ನು ಕಸದ ಬುಟ್ಟಿಗೆ ಹಾಕಿದವರು ಇದ್ದಾರೆ. ಆಂದೋಲನ ಮಾಡುವುದಾಗಿ ಇನ್ನೂ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಸಮಾಜವಾದಿ ಪತ್ರಕರ್ತನೊರ್ವ ಜನರ ಮುಂದೆ ಸಮಾಜಸೇವಕ ಪೋಸು ನೀಡುತ್ತಾನೆ. ಸರಳತೆ, ಭಾಷಣ ಮಾಡಿ ಐಷಾರಾಮಿ ಕಾರುಗಳಲ್ಲಿ ತೆರಳುತ್ತಾನೆ. ಏನಾದರೂ, ಮಾಡಿಕೊಳ್ಳಲಿ ಸುದ್ದಿ ಬರೆಯುವ ಕೆಲಸಗಾರರಿಗೆ ಹೊಟ್ಟೆ ತುಂಬುವಷ್ಟು ಸಂಬಳವಾದರೂ ಕೊಡುತ್ತಾನೆಂದರೆ, ಅದು ಇಲ್ಲ. ಆದರೆ, ತನ್ನ ಆದಾಯದಲ್ಲಿ ಶೇಕಡಾ 40ರಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸುವುದಾಗಿ ಘೋಷಿಸುತ್ತಾನೆ.
ಇದು ಒತ್ತಟಿಗಿರಲಿ, ಇತ್ತೀಚಿಗೆ ಪತ್ರಿಕೆಗಳಿಗೆ ಚುನಾವಣಿ ಬಂತೆಂದರೆ ಹಬ್ಬ. ಕಾರಣ ಚುನಾವಣಿಗಳಲ್ಲಿ ವೆಚ್ಚದ ಮಿತಿ ಇರುವುದರಿಂದ ಜಾಹೀರಾತುಗಳನ್ನು ಮಿತಿ ಮೀರಿ ನೀಡುವಂತಿಲ್ಲ. ಅದಕ್ಕಾಗಿ ಪ್ರಾಯೋಜಿಕ ಸುದ್ದಿ ಪುಟಗಳು ಮುದ್ರಣಗೊಳ್ಳುತ್ತವೆ. ವಿಶ್ಲೇಷಣಿ ಮತ್ತು ಪ್ರಾಯೋಜಿತ ಸುದ್ದಿ ಪುಟಗಳು ಅಕ್ಕಪಕ್ಕದಲ್ಲಿಯೇ ಪ್ರಕಟಗೊಳ್ಳುವದರಿಂದ ಜನರು ಅಂದರೆ, ಓದುಗರು ಗೊಂದಲಗೊಂಡಿದ್ದಾರೆ. ಹೊಗಳಿ ಬರೆಸಿಕೊಳ್ಳುವದ ರಿಂದ ಪ್ರಯೋಜನವಿಲ್ಲವೆಂದು ರಾಜಕಾರಣಿಗಳಿಗೆ ಗೊತ್ತಿದೆ. ಆದರೆ, ಕಾಟ ತಡೆಯಲಾರದೇ ಪತ್ರಕರ್ತರಿಗೆ ಹಣ ನಡಬೇಕಾಗುತ್ತದೆ ಎಂದು ರಾಜಕಾರಣಿಗಳು ಗೊಳಾಡುತ್ತಾರೆ. ಎಷ್ಟೋ ರಾಜಕಾರಣಿಗಳನ್ನು ಪತ್ರಕರ್ತರು ಪ್ರಚಾರಕ್ಕೆ ತೆರಳಲು ಬಿಡುವುದಿಲ್ಲವಂತೆ. ಹಣ ನೀಡದಿದ್ದರೆ, ಹಿಂಬಾಲಿಸುವದರಲ್ಲಿ ಪತ್ರಕರ್ತರು ರಾಜಕೀಯ ಪಕ್ಷಗಳ ಕಾರ್ಯಕರ್ತರಿಗಿಂತ ಒಂದು ಕೈ ಮುಂದೆ.
ಇತ್ತೀಚಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಯುವಕನೊಬ್ಬ ಕೆಲಸಕ್ಕಾಗಿ ಅಲೆಯುತ್ತಿದ್ದ. ನಂ.1 ಪತ್ರಿಕೆ ಸಂಪಾದಕ ಹಾಗೂ ಭ್ರಷ್ಟ ರಾಜಕಾರಣಿಯೊಬ್ಬರಿಗೆ ಪರಸ್ಪರ ಸಂಬಂಧವಿರುವುದು ನನಗೆ ಗೊತ್ತಿತ್ತು. ಆ ರಾಜಕಾರಣಿಯ ಬಳಿ ಹೋಗಲು ತಿಳಿಸಿದೆ. ಯುವಕನಗ ಸಂತೋಷವಾಗಿದ್ದಾನೆ.
ಪತ್ರಿಕೆ ಎಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ. ಹೇಗಾಗುತ್ತದೆ ಎಂಬುದಕ್ಕೆ ಇದನ್ನೆಲ್ಲ ಹೇಳಬೇಕಾಯಿತು. ಹೊಟ್ಟೆ ಪಾಡಿಗಾಗಿ ಮಾಡುತ್ತಾರೆಂದು ಸುಮ್ಮನಾಗೋಣ. ಆದರೆ, ಕೈತುಂಬ ಸಂಬಳ ನಡಿದ ಮೇಲೆಯೂ ಕೈಚಾಚುವರು ಇದ್ದಾರೆ. ಪ್ರಖ್ಯಾತ ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದಕ್ಕೆ ಅಪರಾದ ಸುದ್ದಿ ವರದಿ ಮಾಡುವವ ಬೆಂಗಳೂರಿನ ಬಹಳಷ್ಟು ಪೊಲೀಸ್ ಠಾಣಿಯಲ್ಲಿ ಪ್ರತಿನತ್ಯ ಕೇವಲ ನೂರು ರೂಪಾಯಿಯನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಾನೆ. ಕಿತ್ತು ತಿನ್ನುವ ಪೊಲೀಸರನ್ನೇ ಕಿತ್ತು ತಿನ್ನವವನಿತ.
ಇಡೀ ದೇಶದಲ್ಲಿಯೇ ಸಿದ್ದಾಂತಕ್ಕೆ ಬದ್ದವಾದ ಪತ್ರಿಕೆಯೊಂದು ಇತ್ತೀಚಿನ ಉಪಚುನಾವಣಿಯ ಬಗ್ಗೆ ಅದರ ವರದಿಗಾರನಾದ ವ್ಯಕ್ತಿ ಆಶ್ಚರ್ಯಕರ ವಿಶ್ಲೇಷಣಿ ಬರೆದ. ಆತನ ಪ್ರಕಾರ ಕಣಕ್ಕಿಳಿದಿದ್ದ ಕುಬೇರ ಅಭ್ಯಥರ್ಿಯೊಬ್ಬ ಗೆದ್ದೆಗೆಲ್ಲುತ್ತಾನೆಂದು ವಾದಿಸಿದ್ದ.
ಆದರೆ, ಆಶ್ಚರ್ಯದ ವಿಷಯವೆಂದರೆ, ಆ ಚುನಾವಣಿಯಲ್ಲಿ ಆತ ಸೋತೆ ಸೋಲುತ್ತಾನೆಂಬುದು ಕ್ಷೇತ್ರದಲ್ಲಿ ಸಣ್ಣಮಕ್ಕಳಿಗೂ ಗೊತ್ತಾಗಿತ್ತು. ಇದಕ್ಕೆ ಏನನ್ನೋಣ.

ಆರ್ಟಿಪಿಎಸ್ ಗೋಳಿನ ಕಥೆ

ರಾಜ್ಯದಲ್ಲಿಗ ಬೀಕರ ಬರಗಾಲ. ಆದರೆ, ಈ ಬರ ಕೇವಲ ತುತ್ತು ಅನ್ನ, ಕುಡಿಯುವ ನೀರಿಗೆ ಮಾತ್ರ ಬಂದಿಲ್ಲ. ವಿದ್ಯುತ್ ವಲಯಕ್ಕೂ ತನ್ನ ಛಾಯೆಯನ್ನು ಆವರಿಸಿದೆ! ಹೌದು ರಾಜ್ಯದಲ್ಲಿ ಎಲ್ಲಕ್ಕಿಂತ ವಿದ್ಯುತ್ ಬರ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ. ಕಳೆದ ಎರಡು ವರ್ಷದಿಂದ ಬೀಕರ ವಿದ್ಯುತ್ ಕ್ಷಾಮ ನಮ್ಮನ್ನು ಆವರಿಸಿದೆ. ಬೇಸಿಗೆ ದಿನಗಳಲ್ಲಂತೂ ಕರೆಂಟ್ ಯಾವಾಗ ಹೋಗುತ್ತೇ, ಮತ್ತ್ಯಾಗ ಬರುತ್ತೇ ಗೊತ್ತೇ ಆಗುವುದಿಲ್ಲ. ಇದಕ್ಕೆಲ್ಲ ಕಾರಣ ರಾಜ್ಯದ ವಿದ್ಯುತ್ ಬೇಡಿಕೆ ಮತ್ತು ಉತ್ಪಾದನೆ ನಡುವೆ ಇವರು ಅಜಗಜಾಂತಗರ ವ್ಯತ್ಯಾಸ.
ನಮ್ಮ ರಾಜ್ಯಕ್ಕೆ  ಪ್ರತಿನಿತ್ಯ 150 ದಶಲಕ್ಷ ಯೂನಿಟ್ನಿಂದ 160 ದಶಲಕ್ಷ ಯೂನಿಟ್ ವಿದ್ಯುತ್ ಬೇಕು. ಈ ವಿದ್ಯುತ್ನ್ನ ನಾವು ರಾಯಚೂರಿನ ಆರ್ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್, ಲಿಂಗನಮಕ್ಕಿ, ಶರಾವಾತಿ, ಕಾಳಿ, ಆಲಮಟ್ಟಿ ಸೇರಿದಂತೆ ಕೇಂದ್ರ ಸಕರ್ಾರ ಮತ್ತು ಖಾಸಗಿ ಕಂಪೆನಿಗಳಿಂದ ಪಡೆಯುತ್ತೇವೆ. ಆದರೆ, ಇದರಲ್ಲಿ ನಮ್ಮ ರಾಜ್ಯವು ಅತಿ ಹೆಚ್ಚು ಅವಲಂಬನೆಯಾಗಿರುವುದು ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ ಮೇಲೆ.
ಆರ್.ಟಿ.ಪಿ.ಎಸ್ ನಲ್ಲಿ ಒಟ್ಟು 8 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಈ 8 ಘಟಕಗಳು ಪ್ರತಿದಿನ 25 ಮೆಟ್ರಿಕ್ ಟನ್ ಕಲ್ಲಿದ್ದಲ್ಲನ್ನು ಉರಿಸಿ ಅವಿರತವಾಗಿ ವಿದ್ಯುತ್ ಉತ್ಪಾದಿಸುತ್ತಿವೆ. 210 ಮೆಗಾವ್ಯಾಟ್ ಸಾಮಥ್ರ್ಯದ 7 ಘಟಕ ಹಾಗೂ 250 ಮೆಗಾವ್ಯಾಟ್ ಸಾಮಥ್ರ್ಯದ 1 ಘಟಕ  ಸೇರಿ ಒಟ್ಟು ನಿತ್ಯ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಅಂದರೆ ರಾಜ್ಯದ ಒಟ್ಟು ಉತ್ಪಾದನೆಯ ಶೇಕಡಾ 40ರಷ್ಟು ಇಲ್ಲಿ ಉತ್ಪಾದಿಸಲಾಗುತ್ತಿದೆ. ಹಾಗಾಗಿಯೇ ರಾಯಚೂರಿನ ಆರ್ಟಿಪಿಸ್ನ್ನು ಆಪದ್ಬಾಂಧವ ಎಂದು ಕರೆಯುತ್ತಾರೆ.
ಇನ್ನೂ ಒಂದು ವಿಚಾರ ನಿಮಗಿಲ್ಲಿ ನಾವು ಹೇಳಲೇಬೇಕು. ಕನರ್ಾಟಕ ವಿದ್ಯುತ್ ನಿಗಮವು ಆರ್.ಟಿ.ಪಿ.ಎಸ್ನಲ್ಲಿ ಉತ್ಪಾದಿಸುವ ವಿದ್ಯುತ್ನ್ನು ಕೇವಲ 2 ರೂ. 60 ಪೈಸೆಗೆ ಒಂದು ಯೂನಿಟ್ನಂತೆ ಅಗ್ಗದ ದರಕ್ಕೆ ಬೇರೆಯವರಿಗೆ ನೀಡುತ್ತಿದೆ. ಅಂದರೆ, ನಮಗೆ ಆರ್ಟಿಪಿಎಸ್ ಅವಶ್ಯಕತೆ ಹಾಗೂ ಅನಿವಾರ್ಯತೆ ಹೇಗಿರಬೇಕು ಊಹಿಸಿ.
ಈಗ ರಾಜ್ಯದಲ್ಲಿ ಆರ್.ಟಿ.ಪಿ.ಎಸ್ ಹೊರತು ಪಡಿಸಿದರೇ ಬಳ್ಳಾರಿ ಶಾಖೋತ್ಪನ್ನ ಕೇಂದ್ರದಿಂದ 500 ಮೆಗಾವ್ಯಾಟ್ ಮತ್ತು ಲಿಂಗನಮಕ್ಕಿ, ಶರಾವತಿ, ಕಾಳಿ, ಆಲಮಟ್ಟಿಗಳ ಜಲಮೂಲದಿಂದ ಸ್ವಲ್ಪ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. (ಅದು ಸಾಕಷ್ಠು ಮಳೆಯಾಗಿ ಜಲಾಶಯ ಭತರ್ಿಯಾದಾಗ ಮಾತ್ರ)
ಉತ್ತರಕನರ್ಾಟಕದಲ್ಲಿದ್ದಂತೆ ಎಲ್ಲೆಡೆ ಬರ ಆವರಿಸಿದೆ, ಮೇಲಿನ ಯಾವಸ್ಥಳದಲ್ಲಿಯೂ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ. ಕಾರಣ ಸಕರ್ಾರ ಶಕ್ತಿನಗರದ ಮೇಲೆಯೇ ಅವಲಂಬನೆಯಾಗಿದೆ.
ಒಂದೊಮ್ಮೆ ಆರ್.ಟಿ.ಪಿ.ಎಸ್ ನಲ್ಲಿ ಒಂದೆರಡು ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ನಿಲ್ಲಿಸಿ ಬಿಟ್ಟರೆ, ರಾಜ್ಯದ ವಿದ್ಯುತ್ ವಿತರಣಾ ಜಾಲದಲ್ಲಿ ಏರು ಪೇರಾಗುತ್ತೆ. ಇನ್ನೂ ಆರ್ಟಿಪಿಎಸ್ ಜನ್ಮ ತಾಳಿದಾಗಿನಿಂದ ತಾಂತ್ರಿಕ ಸಮಸ್ಯೆ, ಕಳಪೆ ಕಲ್ಲಿದ್ದಿಲ್ಲು, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿಕೊಂಡು ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ನೀಡುತ್ತಾ ಬಂದಿದೆ.
ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಕ್ತಿನಗರದ ಆರ್ಟಿಪಿಎಸ್ಗೆ ಈಗ ಆಪತ್ತು ಬಂದೊದಗಿದೆ. ಬಂದಿರುವ ಆಪತ್ತು ಅಂತಿಂತಹುದಲ್ಲ ಈ ಆಪತ್ತನ್ನು ಸಕರ್ಾರ ಗಂಭೀರವಾಗಿ ಪರಿಗಣಿಸದೇ ಹೋದರೆ, ಕನರ್ಾಟಕ ಕತ್ತಲಾಗುವುದು ಗ್ಯಾರಂಟಿ. ಆರ್ಟಿಪಿಎಸ್ಗೆ ಬಂದೊದಗಿದ ಆಪತ್ತೇ, ರಾಜ್ಯದ ಭೀಕರ ವಿದ್ಯುತ್ ಸಮಸ್ಯೆಗೆ ಕಾರಣ.
ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಕೊರತೆ, ತಾಂತ್ರಿಕ ಸಮಸ್ಯೆ ಆಥರ್ಿಕ ಸಂಕಷ್ಟ, ನೀರಿನ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳು ಬೃಹದಾಕಾರದಲ್ಲಿ ಬೆಳೆದು ನಿಂತಿವೆ. ಈ ಎಲ್ಲ ಸಮಸ್ಯೆಗಳು ಆರ್ಟಿಪಿಎಸ್ನ ಉತ್ಪಾದನೆಯನ್ನು ಕುಂಠಿತಗೊಳಿಸಿವೆ.
ಆರ್ಟಿಪಿಎಸ್ನ 8 ಘಟಕಗಳು ಪೂರ್ಣ ಸಾಮಥ್ರ್ಯದಲ್ಲಿ ವಿದ್ಯುತ್ ಉತ್ಪಾದಿಸಬೇಕು ಅಂದ್ರೆ ಪ್ರತಿ ದಿನ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲ್ಲು ಬೇಕು. ಈ ಕಲ್ಲಿದ್ದಲು ಆಂದ್ರ ಪ್ರದೇಶದ ಬೆಲ್ಲಂಪಲ್ಲಿಯ ಸಿಂಗರೇಣಿ, ಮಹಾರಾಷ್ಟ್ರದ ಮಹಾನದಿ, ಓರಿಸ್ಸ್ದ ತಲ್ಚೆರ್ ಹಾಗೂ ವಿದೇಶಿ ಗಣಿಗಳಿಂದ ಪೂರೈಕೆಯಾಗುತ್ತದೆ.
ಆದರೆ ಇತ್ತಿಚೀನ ದಿನಗಳಲ್ಲಿ ಮಾತ್ರ ನೀರಿಕ್ಷಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಇದು ವಿದ್ಯುತ್ ಉತ್ಪಾದನೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕಲ್ಲಿದ್ದಲು ಕೊರತೆಗೆ ತೆಲಂಗಾಣ ಹೋರಾಟ, ಕೇಂದ್ರ ಸರಕಾರದ ಅಸಹಕಾರ ಎಂದು ಆರೋಪಿಸುತ್ತಾ ಕಾಲ ದೂಡುತ್ತಿದ್ದ ಇಂಧನ ಸಚಿವರ ಹೇಳಿಕೆ ಸತ್ಯ ಮರೆ ಮಾಚಲು ನಡೆಸುತ್ತಿರುವ ಸರ್ಕಸ್ ಎನ್ನುವದು ಈಗ ಗುಟ್ಟಾಗಿಯೇನು ಉಳಿದಿಲ್ಲ.
ಬೇಸಿಗೆ ಕಾಲದಲ್ಲಿ ಜಲಮೂಲ ವಿದ್ಯುತ್ ಉತ್ಪಾದನೆ ಕಡಿಮೆ ಇರುವುದರಿಂದ, ಸಹಜವಾಗಿ ವಿದ್ಯುತ್ ಉತ್ಪಾದನೆಯ ಹೆಚ್ಚಿನ ಒತ್ತಡ ಶಾಖೋತ್ಪನ್ನ ಕೇಂದ್ರ ಆರ್ಟಿಪಿಎಸ್ ಮೇಲಿರುತ್ತದೆ. ಈ ಹಿನ್ನಲೆಯಲ್ಲಿ ಮೊದಲಿಗೆ ಮುಂಗಡವಾಗಿ 3 ರಿಂದ 6 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆರ್ಟಿಪಿಎಸ್ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ಸಂಗ್ರಹಣೆ ಸಂಪೂರ್ಣ ಬರಿದಾಗಿದೆ. ಈಗ ನಿತ್ಯವೂ ರೈಲಿನಿಂದ ಆಮದಾಗುವ ಕಲ್ಲಿದ್ದಲನ್ನು ಕಾಯುವ ದುಸ್ಥಿತಿ ಆರ್ಟಿಪಿಎಸ್ಗೆ ಬಂದೊದಗಿದೆ.
ಇದರಲ್ಲಿ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಕೂಡ ತೀರ ಕಳಪೆ ಗುಣಮಟ್ಟದ್ದು. ಸಕರ್ಾರ ತೊಳೆದ ಕಲ್ಲಿದ್ದಲು ಪೂರೈಕೆ ನಿಲ್ಲಿಸಿದಾಗಿಂದ, ಕಲ್ಲಿದ್ದಲಿನಲ್ಲಿ ಬರುವ ಕಬ್ಬಿಣ, ಸರಳು, ಭಾರಿ ಗಾತ್ರದ ಕಲ್ಲುಗಳು ಘಟಕಗಳನ್ನು ತೀವ್ರ ಹಾನಿಗೀಡು ಮಾಡಿವೆ. ಇದರಿಂದಾಗಿ ಘಟಕಗಳು ಮೇಲಿಂದ ಮೇಲೆ ಉತ್ಪಾದನೆ ನಿಲ್ಲಿಸುತ್ತಿವೆ. ಕಳಪೆ ಕಲ್ಲಿದ್ದಲಿನಲ್ಲಿ ಬರುವ ಶೇಕಡಾ 60% ರಷ್ಟು ಬೂದಿ, ಕಲ್ಲುಗಳು ಹಾಗೂ ಇತರೆ ಸಾಮಗ್ರಿಗಳು ತುಂಬಿಕೊಂಡು ಘಟಕಗಳು ದುಸ್ಥಿಗೆ ತಲುಪಿವೆ. ಇನ್ನೂ ಕಳಪೆ ಕಲ್ಲಿದ್ದಲು ಬಳಕೆಯಿಂದ ಹೆಚ್ಚು ಹೆಚ್ಚು ಇಂಧನವನ್ನು ಕಲ್ಲಿದ್ದಲು ಉರಿಸಲು ಬಳಕೆ ಮಾಡಲಾಗುತ್ತೆ, ಇದು ಸಕರ್ಾರಕ್ಕೆ ಅನಗತ್ಯ ಆಥರ್ಿಕ ಹೊರೆಯಾಗಿದೆ, ಇನ್ನೂ ಹಳೆಯಾದಾದ ಯಂತ್ರೋಪಕಾರಣಗಳನ್ನು ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದಿರುವುದು ಸಮಸ್ಯೆ ಮತ್ತಷ್ಟು ಉಲ್ಬಣವಾಗಲು ಕಾರಣವಾಗಿದೆ.
ಉಷ್ಣ ವಿದ್ಯುತ್ ಘಟಕಗಳ ಕಾರ್ಯಕ್ಷಮತೆಯ ಮಿತಿ 25 ವರ್ಷ. ಹೀಗಾಗಿ 1985ರಲ್ಲಿ ಸ್ಥಾಪಿತವಾದ ಆರ್.ಟಿ.ಪಿ.ಎಸ್ 1 ಮತ್ತು 2ನೇ ಘಟಕ ಹಾಗೂ ನಂತರದ ದಿನಗಳಲ್ಲಿ ಸ್ಥಾಪನೆಯಾದ 3 ಮತ್ತು 4ನೇ ಘಟಕಗಳು ಈಗ ಪದೇ ಪದೇ ತಾಂತ್ರಿಕ ತೊಂದರೆಗೆ ಒಳಪಡುತ್ತಿವೆ. ಇವುಗಳ ಸಂಪೂರ್ಣ ನವೀಕರಣಕ್ಕೆ ಅಂದಾಜು ಸಾವಿರ ಕೋಟಿ ರೂಪಾಯಿಗಳ ಹಣಕಾಸಿನ ಅಗತ್ಯವಿದೆ. ಆದರೆ ಕನರ್ಾಟಕ ವಿದ್ಯುತ್ ನಗಮದ ಬಳಿ ಹಣಕಾಸಿನ ಕೊರತೆಯಿದೆ. ಹಣ ಹೊಂದಿಸಬೇಕಾದ ಸರಕಾರ ದುಬಾರಿ ಬೆಲೆಗೆ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಗೆ ತೋರುವ ಆಸಕ್ತಿ, ಆರ್ಟಿಪಿಎಸ್ ದುರಸ್ಥಿಗೆ ತೋರುತ್ತಿಲ್ಲ..!
ಹೀಗೆ ತಾಂತ್ರಿಕ ಸಮಸ್ಯೆಯಿಂದ ಬಳಲುತ್ತಿರುವ ಕೆಲ ಘಟಕಗಳ ದುರಸ್ಥಿಗೆ ಜಪಾನ್ದಿಂದ ತಜ್ಞರು ಬರಬೇಕಾಗಿದೆ. ಆದ್ದರಿಂದಲೇ ಘಟಕಗಳು ಕೈಕೊಟ್ಟಾಗಲೆಲ್ಲಾ ನಾಲ್ಕಾರು ದಿನ ವಿಳಂಬವಾಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ವಿತರಣಾ ವ್ಯವಸ್ಥೆಯಲ್ಲಿ ಏರು ಪೇರಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಾಗುತ್ತದೆ.
ಈ ವರ್ಷದ ಬೀಕರ ಬರಗಾಲದ ಬಿಸಿ ಆರ್ಟಿಪಿಎಸ್ಗೂ ತಟ್ಟಿದೆ. ಆರ್ಟಿಪಿಎಸ್ನ 8 ಘಟಕಗಳ ಕೂಲಿಂಗ್ ಟವರ್ಗಳಿಗೆ ಪ್ರತಿ ದಿನ ಬೇಕಾಗುವ 150 ಕ್ಯೂಸೆಕ್ ನೀರು ಕೃಷ್ಣಾ ನದಿಯಿಂದ ಪೂರೈಸಲಾಗುತ್ತಿತ್ತು. ಆದರೆ, ಈಗ ಬರಗಾಲ ಇರುವದರಿಂದ  ನದಿಯಲ್ಲಿ ನೀರಿಲ್ಲ..! ಇದರಿಂದಾಗಿ ಆರ್ಟಿಪಿಎಸ್ 8 ಘಟಕಗಳ ಪೈಕಿ 4 ಘಟಕಗಳು ಈಗಾಗಲೇ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. ಇನ್ನು ಕೆಲವು ದಿನಗಳಲ್ಲಿ ನದಿಗೆ ನೀರು ಬಾರದಿದ್ದರೆ ಆರ್ಟಿಪಿಎಸ್ನ ಎಲ್ಲ ಘಟಕಗಳು ಸ್ತಬ್ದವಾಗುವುದು ಗ್ಯಾರಂಟಿ.. ಹೀಗೆ ಆರ್ಟಿಪಿಎಸ್ಗೆ ಸಾಲು ಸಾಲು ಸಮಸ್ಯೆಗಳು ಬೆಂಬಿಡದೇ ಕಾಡುತ್ತಿದ್ದು, ಉತ್ಪಾದನೆ ಮಾಡುವುದು ಕಷ್ಟವಾಗಿದೆ.
ಆರ್.ಟಿ.ಪಿ.ಎಸ್ನಲ್ಲಿ ಕಲ್ಲಿದ್ದಲು, ಆಥರ್ಿಕ ಮತ್ತು ತಾಂತ್ರಿಕ ಸಮಸ್ಯೆಗಳಿಗಿಂತ ಭೀಕರವಾದದ್ದು ಇಲ್ಲಿನ ಗುತ್ತಿಗೆ ಕಾಮರ್ಿಕರದ್ದು. ಇವರನ್ನು ದ್ವೀತಿಯ ದಜರ್ೆ ನಾಗರೀಕರಂತೆ ಕಾಣುವ ಕೆಪಿಸಿ ಕನಿಷ್ಟ ಸೌಕರ್ಯ ಕಲ್ಪಿಸದೇ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ.
ಇಲ್ಲಿ ಒಟ್ಟು 2089 ಜನ ಖಾಯಂ ನೌಕರರಿದ್ದು, 900 ಜನ ಗುತ್ತಿಗೆ ಕಾಮರ್ಿರು ಕೆಲಸ ಮಾಡುತ್ತಿದ್ದಾರೆ. ಆದರೆ, ಗುತ್ತಿಗೆ ಕಾಮರ್ಿಕರು ತಾತ್ಕಾಲಿಕ ಕೆಲಸಕ್ಕೆಂದು ಬಂದು ಹೋಗುವವರಲ್ಲ. ದಶಕಗಳಿಂದ ನಿರಂತರವಾಗಿ ಆರ್ಟಿಪಿಎಸ್ನಲ್ಲಿ ಕಲ್ಲಿದ್ದಲು ವಿಭಾಗ, ಬಾಯ್ಲರ್, ಟಬರ್ೈನ್ ನಿರ್ವಹಣೆ, ಸ್ಟೋರ್, ಐಎನ್ಸಿ, ತ್ಯಾಜ್ಯವಾಗಿ ಬೂದಿ ಹೊರಬೀಳುವ ವಿಭಾಗ, ಆಸ್ಪತ್ರೆ ಸೇರಿದಂತೆ ಬಹುತೇಕ ವಿಭಾಗಗಳನ್ನು ನೋಡಿಕೊಳ್ಳುವವರು. ಹೀಗೆ ಕಾರ್ಯ ನಿರ್ವಹಿಸುವಾಗ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಂಡ ಉದಾರಣೆಗಳಿವೆ.
ಹಗಲಿರುಳು ತಮ್ಮ ಬದುಕನ್ನೇ ಒತ್ತೇಯಿಟ್ಟು ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಇಲ್ಲಿಯವರೆಗಾದರೂ ಖಾಯಂ ಮಾಡಲು ಆಡಳಿತ ಮಂಡಳಿ ಮನಸ್ಸು ಮಾಡಿಲ್ಲ. ಖಾಯಂ ಮಾಡಬೇಕೆಂದು ಕನರ್ಾಟಕ ವಿದ್ಯುತ್ ನಿಗಮಕ್ಕೆ ಪ್ರಸ್ತಾವನೆ ಹೋಗಿದ್ದರೂ, ನಿಗಮ ಮಾತ್ರ ತನಗೇನು ಗೊತ್ತಿಲ್ಲದಂತೆ ವತರ್ಿಸುತ್ತಿದೆ. ಸಕರ್ಾರ ಮಾತ್ರ ಗುತ್ತೇದಾರರನ್ನು ಬೆಂಬಲಿಸುತ್ತಾ, ಕಾಮರ್ಿಕರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ.
ಕಾಮರ್ಿಕರ ಕುರಿತು ಇಲ್ಲಿ ಒಂದು ವಿಷಯ ಗಮನಿಸಬೇಕು. ಯಾಕೆಂದರೆ, 1985ರಲ್ಲಿ ಆರ್ಟಿಪಿಎಸ್ ನ 1 ಮತ್ತು 2ನೇ ಘಟಕಗಳಿಗೆ ನೇಮಕಗೊಂಡ ನೌಕರರೇ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ, ಸದ್ಯ ಆರ್ಟಿಪಿಎಸ್ನಲ್ಲಿ 8 ಘಟಕಗಳಿವೆ. ತಾಂತ್ರಿಕ, ಆಡಳಿತಾತ್ಮಕ ಸಿಬ್ಬಂದಿ ಕೊರತೆ ಇದ್ದರೂ ಹೊಸದಾಗಿ ನೌಕರರನ್ನು ನೇಮಕ ಮಾಡಿಕೊಳ್ಳುವ ಗೋಜಿಗೆ ಕೆಪಿಸಿ ಹೋಗುತ್ತಿಲ್ಲ. ಇದು ಮುಖ್ಯವಾಗಿ ಆರ್ಟಿಪಿಎಸ್ನ್ನು ಕಾಡುತ್ತಿದೆ.
ಕೆಪಿಸಿ ತಾನು ವಿವಿಧ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ನ್ನು ಅಗ್ಗದ ದರದಲ್ಲಿ ನೀಡುತ್ತಿದೆ, ಆದರೆ, ವಿದ್ಯುತ್ ಪಡೆದ ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಕಂಪನಿಗಳು ಕೆಪಿಸಿಗೆ 13 ಸಾವಿರ ಕೋಟಿ ಹಣ ಬಾಕಿ ನೀಡಬೇಕಿದೆ. ಇದೇ ನೆಪೆಲ್ಲಿ ಕೆಪಿಸಿ ನೂತನ ಯೋಜನೆಗಳನ್ನು ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಆರ್.ಟಿ.ಪಿಎಸ್ ನಲ್ಲಿ ಉಲ್ಬಣಿಸಿರುವ ತಾಂತ್ರಿಕ ಸಮಸ್ಯೆ ನಿವಾರಣಿಗೆ ಹಣದ ಕೊರತೆ ಕಾಡುತ್ತಿದೆ.

MS Hiremath