Monday, July 16, 2012

ದಂಡುಪಾಳ್ಯ'ದ ದಾರಿಯಲ್ಲಿ ಹಂತಕರ ಹೆಜ್ಜೆ...



ದಾಕ್ಷಿಣ್ಯಕ್ಕಾದರೂ ಅಯ್ಯೋ-ಪಾಪ ಎನ್ನದಂಥ ಮನಸ್ಸು, ಕರುಣೆ ಅನ್ನೋದರ ಅರ್ಥವೇ ಗೊತ್ತಿಲ್ಲದ ಪರಮ ಕ್ರೂರಿಗಳು. ತಂಡದ ನಾಯಕಿ ಲಕ್ಷ್ಮಿ ಮೊದಲು ಒಂಟಿ ಮಹಿಳೆಯರಿರುವ ಮನೆಯನ್ನು ಗುರುತಿಸುತ್ತಾಳೆ. ಮನೆಯಲ್ಲಿ ಬೇರೆ ಯಾರೂ ಇಲ್ಲ ಅನ್ನೋದು ಗ್ಯಾರೆಂಟಿಯಾಗುತ್ತಿದ್ದಂತೇ ಆ ಮನೆ ಮತ್ತು ಮನೆಯಲ್ಲಿರುವವರ ಡೀಟೇಲನ್ನು ತಂಡದ ಉಳಿದ ಸದಸ್ಯರಿಗೆ ನೀಡುತ್ತಾಳೆ. ಹಾಗೆ ತನ್ನ ಗುಂಪಿನೊಂದಿಗೆ ಬರುವ ಲಕ್ಷ್ಮಿ ಮೊದಲು ಮನೆ ಬಾಗಿಲು ಬಡಿಯುತ್ತಾಳೆ. ಕುಡಿಯೋಕೆ ನೀರು ಕೊಡಿ ಎನ್ನುತ್ತಾಳೆ. ಮನೆಯಾಕೆ ಒಳಗೆ ಹೋಗಿ ನೀರು ತರುವಷ್ಟರಲ್ಲಿ ಗ್ಯಾಂಗಿನ ಉಳಿದ ಸದಸ್ಯರು ಮನೆಯೊಳಗೆ ಪವೇಶಿಸುತ್ತಾರೆ. ಅಲ್ಲಿಗೆ ಮನೆಯಲ್ಲಿರುವರ ಕತೆ ಮುಗಿದಂತೇ! ಹಿಂದಿನಿಂದ ತಲೆ ಲಟಾರನೆ ರಾಡಿನಿಂದ ಹೊಡೆದು ಕೆಳಗುರುಳಿಸುತ್ತಾರೆ. ಮನೆಯಲ್ಲಿರುವ ನಗ-ನಾಣ್ಯವನ್ನೆಲ್ಲಾದೋಚಿದ ನಂತರ ಮೆತ್ತಗೆ ಗ್ಯಾಂಗ್ ಲೀಡರ್ ಕೃಷ್ಣ ನೆಲದ ಮೇಲೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿರುವ ಹೆಣ್ಣನ್ನು ಎಳೆದುಕೊಳ್ಳುತ್ತಾನೆ. ಎಲೆ-ಅಡಿಕೆ ಜಗಿಯುತ್ತಾ ಎಲ್ಲವನ್ನೂ ನೋಡುತ್ತಾ ಕೂರುವ ಲಕ್ಷ್ಮಿ ಬಂದು ಗಟ್ಟಿಯಾಗಿ ಆ ಹೆಣ್ಣಿನ ಕಾಲುಗಳನ್ನು ಒತ್ತಿಹಿಡಿಯುತ್ತಾಳೆ. ಮತ್ತೊಬ್ಬ ಬಂದು ಮೊಂಡು ಹಿಡಿದ ಕತ್ತಿಯೊಂದನ್ನು ನೀಡುತ್ತಾನೆ. ವಿಲಕ್ಷಣವಾಗಿ ದಿಟ್ಟಿಸುತ್ತಾ ಕತ್ತಿಯನ್ನು ಕುತ್ತಿಗೆಗಿಟ್ಟು ಚರ್ರಚರ್ರನೆ ಕೋಳಿ ಕೊಯ್ಯುವ ಹಾಕೆ ಗೋಮಾಳೆ ಸೀಳಿಬಿಡುತ್ತಾನೆ ಕೃಷ್ಣ. ಹಾಗೆ ಕುತ್ತಿಗೆ ಸೀಳಿದ ಕೂಡಲೇ ಗಂಟಲಿನಿಂದ `ಟಿಸ್ಸ್ಸ್ ' ಅಂತಾ ಶಬ್ದ ಬರುತ್ತದೆ. ಕಿವಿ ಹತ್ತಿರ ಮಾಡಿ ಆ ಸದ್ದನ್ನು ಕೇಳುವುದೆಂದರೆ ಕ್ರೂರಿ ಕೃಷ್ಣನಿಗೆ ಅದೆಂಥದ್ದೋ ಮೋಜು. ನಂತರ ತಂಡದ ಇತರೆ ಸದಸ್ಯರು ಸತ್ತ ಹೆಣವನ್ನೂ ರೇಪ್ ಮಾಡುತ್ತಾರೆ... ಮುನ್ನೂರು ರುಪಾಯಿಗೆ ಮೈಮಾರಿಕೊಳ್ಳುವ ಬೀದಿ ವೇಶ್ಯೆಯನ್ನೂ ಹಿಂಸಿಸಿ ಕೊಲ್ಲುವ, ಮನೆಗಳಿಗೆ ನುಗ್ಗಿದಾಗ ಸಿಗುವ ಗಂಡಸರ ಮೇಲೂ ಅತ್ಯಾಚಾರವೆಸಗುವು ಕೆಟ್ಟ ಕ್ರಿಮಿಗಳವರು...
ಅಬ್ಬಬ್ಬಬ್ಬಬ್ಬ!!
ಇಂಥ ಸರಣೀ ಭೀಬತ್ಸ ಕೊಲೆಗಳಿಗೆ ಕಾರಣರಾದವರು `ದಂಡುಪಾಳ್ಯ'ದ ಹಂತಕರು. ನೈಜ ಕತೆಯನ್ನೇ ಹೆಕ್ಕಿಕೊಂಡು ಅಷ್ಟೇ ನೈಜವಾಗಿ ಚಿತ್ರಿತಗೊಂಡಿರುವ ಸಿನಿಮಾ `ಡಂಡುಪಾಳ್ಯ'. ಈ ಚಿತ್ರವನ್ನು ಗಟ್ಟಿ ಗುಂಡಿಗೆಯಿದ್ದವರು ಮಾತ್ರ ನೋಡಲು ಸಾಧ್ಯ. ದಂಡು ಪಾಳ್ಯದ ಹಂತಕರ ಪ್ರತಿಯೊಂದೂ ವಿವರಗಳನ್ನು ಕಲೆಹಾಕಿ, ಆ ಗ್ಯಾಂಗಿನ ಹುಟ್ಟಡಗಿಸಿದ ಇನ್ಸ್ಪೆಕ್ಟರ್ ಚಲಪತಿವರ ಧೈರ್ಯ-ಬುದ್ದಿವಂತಿಕೆ ಇತ್ಯಾದಿ ವಿವರಗಳನ್ನಿಟ್ಟು ಪಕ್ಕಾ ರಿಯಲಿಸ್ಟಿಕ್ ಡಾಕ್ಯುಮೆಂಟರಿಯಂತೆ `ದಂಡುಪಾಳ್ಯ'ವನ್ನು ಕಟ್ಟಿಕೊಟ್ಟಿದ್ದಾರೆ ನಿದರ್ೇಶಕ ಶ್ರೀನಿವಾಸರಾಜು.

ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾಗಾಂಧಿ, ಕೃಷ್ಣನಾಗಿ ಮಕರಂದ್ ದೇಶಪಾಂಡೆ, ರವಿಕಾಳೆ, ಮುನಿ, ಯತಿರಾಜ್, ಪೆಟ್ರೋಲ್ ಪ್ರಸನ್ನ ಮುಂತಾದವರು ಡಂಡುಪಾಳ್ಯದ ಹಂತಕರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಕುತ್ತಿಗೆ ಕತ್ತರಿಸುವ ದೃಶ್ಯಗಳೇ ಹೆಚ್ಚು ಇರುವುದರಿಂದ ಪ್ರೇಕ್ಷಕರ ಕರುಳು ಬಾಯಿಗೆ ಬಂದಂತಾಗುತ್ತದೆ; ಪ್ರೇಕ್ಷಕ ಪದೇ ಪದೇ ಕಣ್ಣು-ಕಿವಿ ಮುಚ್ಚಲೇಕಾದ ಅನಿವಾರ್ಯ! ಮತ್ತೆ ನೋಡುಗರ ಕಣ್ತೆಯುವುದು ಇನ್ಸ್ಪೆಕ್ಟರ್ ಚಲಪತಿ ಸಂಪೂರ್ಣವಾಗಿ ಎಂಟ್ರಿ ಕೊಟ್ಟು ತನಿಖೆ ಆರಂಭಿಸಿದ ಮೇಲಷ್ಟೇ. ಮೊದಲಿಗೆ ದರೋಡೆ ಮಾಡಿದ ಬಂಗಾರವನ್ನು ಸಂಶಯಾಸ್ಪದವಾಗಿ ಮಾರಲು ಯತ್ನಿಸುವ ತಂಡದ ಸದಸ್ಯ ತಿಮ್ಮನನ್ನು ಬಂಧಿಸಿ ನಂತರ ಗ್ಯಾಂಗಿನ ಇತರರ ಬೆನ್ನುಹತ್ತುವ ಎಪಿಸೋಡುಗಳು ರೋಚಕವಾಗಿವೆ. ಸಾಯಿ ಪ್ರಕಾಶ್ ಸಹೋದರ ರವಿಶಂಕರ್ ಚಲಪತಿ ಪಾತ್ರಕ್ಕೆ ಹೇಳಿಮಾಡಿಸಿದಂತೆ ನಟಿಸಿದ್ದಾರೆ. ದವಡೆಯಲ್ಲಿ ಅಡಿಕೆ-ಎಲೆ ಇಟ್ಟುಕೊಂಡು, ಬೀಡಿ ಸೇದುವ, ಹಂದಿಯನ್ನು ಭೇಟೆಯಾಡಿ ಹೆಗಲೆ ಮೇಲೆ ಹೊತ್ತೊಯ್ಯುವ ಪೂಜಾಗಾಂಧಿ ತಾನೊಬ್ಬಳು ಜನಪ್ರಿಯ ಹೀರೋಯಿನ್ ಅನ್ನೋದನ್ನು ಮರೆತು ನಟಿಸಿದ್ದಾಳೆ. ಇಂಥ ಸರಣಿ ಪಾಥಕಗಳನ್ನು ದೃಶ್ಯರೂಪದಲ್ಲಿ ನೀಡುವಾಗ ಹಿನ್ನೆಲೆ ಸಂಗೀತ ಮಹತ್ವವಾದ ಪಾತ್ರ ವಹಿಸುತ್ತದೆ. ಸಂಗೀತ ನಿದರ್ೇಶಕ ಅಜರ್ುನ್ ಇರುವ ಒಂದು ಹಾಡು ಮತ್ತು ಬಿಜಿಎಮ್ ಅಜರ್ುನ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ರಾಮ್ಪ್ರಸಾದ್ ಇಡೀ ಸಿನಿಮಾವನ್ನು ಹಸಿಹಸಿಯಾಗಿ ಕಟ್ಟಿಕೊಟ್ಟೊದ್ದಾರೆ.

ದಂಡುಪಾಳ್ಯದ ಗ್ಯಾಂಗಿನವರಿಗೆ ಸುಫಾರಿ ಕೊಟ್ಟು ಪೊಲೀಸರನ್ನೇ ಕೊಲ್ಲಿಸುವ ಪೊಲೀಸರು, ಎರಡು ಮೂರು ಸಾವಿರ ರುಪಾಯಿಗಳನ್ನು ಕೊಟ್ಟು ಕೊಲೆ ಮಾಡಿಸುವ ವಕೀಲ... ಹೀಗೆ ನಡೆದ ಕಥೆಯನ್ನು ಯಥಾವತ್ತು ನಿರೂಪಿಸಿದ್ದಾರೆ; `ದಂಡುಪಾಳ್ಯ'ವನ್ನು ಜೀಣರ್ಿಸಿಕೊಳ್ಳುವುದು ಕಷ್ಟಕರವಾಗಿರುವುದೂ ಅದೇ ಕಾರಣಕ್ಕೇ. ಸಿನಿಮಾ ಪೊಲೀಸ್ ಫೈಲ್ಗಳ ಪ್ರಕಾರ ಬಹುತೇಕ ನೈಜವಾಗಿದೆ ಅನ್ನೋದರಲ್ಲಿ ಡೌಟಿಲ್ಲ. ಆದರೆ ಅಷ್ಟೊಂದು ನೈಜತೆಯನ್ನು ನೋಡುಗರ ಮೇಲೆ ಹೇರುವ ಅಗತ್ಯತೆ ಇತ್ತಾ ಅನ್ನೋದಷ್ಟೇ ಮತ್ತೆಮತ್ತೆ ಕಾಡುವ ಪ್ರಶ್ನೆ...

-ಅರುಣ್.ಜಿ


No comments:

Post a Comment

Thanku