Monday, July 16, 2012

ನಿವೃತ್ತಿ, ಒಪ್ಪಂದ, ಸಂತಸ


ಓದುಗರೇ, ಇಂದು ತಾವುಗಳು ನೋಡುತ್ತಿರುವ ಪ್ರಜಾಸಮರ ಪತ್ರಿಕೆಯೂ 2007ರಲ್ಲಿ ಆರಂಭಗೊಂಡಿತು. ಇದರ ಸಿದ್ದತೆಗಾಗಿ 1 ವರ್ಷ ಕಳೆದರೂ ಕೂಡ ಕೊನೆಗೆ 2007 ರ ಅಂತ್ಯದಲ್ಲಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಸಂಘಟನೆ ಹಿನ್ನಲೆಯಿಂದ ಬಂದಿದ್ದ ನಮಗೆ ಪತ್ರಿಕೋದ್ಯಮದ ಒಳವಿಸ್ತಾರ ಹೇಗಿದೆ ಎಂಬುದು ಊಹಿಸುವುದು ಕಷ್ಟಕರವಾಗಿತ್ತು. ಇನ್ನೇನು ಪತ್ರಿಕೆಯ ಎಲ್ಲಾ ಹಂತಗಳ ಕಾರ್ಯಗಳು ಮುಗಿದಾಗ ಬಿಡುಗಡೆಗೆ ಯಾರನ್ನು ಆಮಂತ್ರಿಸಬೇಕು ಎಂಬ ಗೊಂದಲ ನಮ್ಮ ಬಳಗದಲ್ಲಿ ಏರ್ಪಟ್ಟಿತ್ತು.
ಆದಾಗ್ಯೂ ಅಂದು ಟಿವಿ 9 ಖಾಸಗಿ ವಾಹಿನಯಲ್ಲಿ ಪತ್ರಕರ್ತರಾಗಿದ್ದ ಹಮೀದ್ ಪಾಳ್ಯ ಅವರನ್ನು ಆಹ್ವಾನಸಲಾಯಿತು. ಕೊನೆ ಸಂದರ್ಭಕ್ಕೆ ಅವರು ಬರದೇ ಹೋದಾಗ, ನಮಗೆ ಏನು ಮಾಡಬೇಕೆಂದು ತೋಚದಂತಾಗಿ ಕೂಡಲೇ ಡಾ.ಎಂ.ಎಲ್ ಪಾಟೀಲ್ರನ್ನು ಆಹ್ವಾನಸಿದಾಗ ಅವರು ಅಂದಿನ ಪ್ರಧಾನ ವ್ಯವಸ್ಥಾಪಕರಾದ ಡಿ.ವೈ ವೆಂಕಟೇಶರ ಅನುಮತಿಯನ್ನು ಪಡೆದು ನಮ್ಮ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು. ಸಹಜವಾಗಿ ಎಲ್ಲರೂ ಸಂತಸದಿಂದಲೇ ಪಾಟೀಲ್ರನ್ನು ಬರಮಾಡಿಕೊಂಡು ಕಾರ್ಯಕ್ರಮವನ್ನು ಮುಂದುವರೆಸಿದೆವು.
ಪ್ರಜಾಸಮರವನ್ನು ಉದ್ಘಾಟಿಸಿ ಮಾತನಾಡಿದ ಪಾಟೀಲ್ರು ಮುಂದಿನ ದಿನಗಳಲ್ಲಿ ಪತ್ರಿಕೆಗೆ ಒಳ್ಳೆಯ ಭವಿಷ್ಯವಿದೆ. ಅದನ್ನು ಈ ಯುವಪಡೆ ಮಾಡುತ್ತದೆ ಎಂಬ ಭರವಸೆ ನನಗಿದೆ. ಸ್ಥಳೀಯ ಮಟ್ಟದ ಪತ್ರಿಕೆ ಇದಾದರೂ, ರಾಜ್ಯಮಟ್ಟದ ಪತ್ರಿಕೆಯಾಗಿ ಹೊಮ್ಮುವದರಲ್ಲಿ ಎರಡು ಮಾತಿಲ್ಲ ಎಂಬ ಮಾತನ್ನು ಹೇಳಿದರು. ಅಂದಿನ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ನೇಹಿತರಾದ ನಾಗಣ್ಣ ಕಟ್ಟಿಮನ, ಎಂ.ಸಿ ಲಿಂಗಪ್ಪ, ಹಿತೈಷಿಗಳಾದ ದಾಸಪ್ಪಗೌಡ, ಲಿಂಗಣ್ಣ ತಬಲಾಜಿ ಮೊದಲಾದವರು ಹಾಜರಿದ್ದರು.
ಯಾಕಾಗಿ ಇದನ್ನೆಲ್ಲ ನೆನಪಿಸಬೇಕಾಗಿ ಬಂತೆಂದರೆ,
ಅಂದು ಪತ್ರಿಕೆಯನ್ನು ಬಿಡುಗಡೆ ಮಾಡಿ ಸಂತಸದಿಂದ ನಾಲ್ಕು ಹಿತ ನುಡಿಗಳನ್ನು ಹೇಳಿದ್ದ ಪಾಟೀಲ್ರು ಇದೇ 30ರಂದು ಕಂಪೆನಿಯಿಂದ ನಿವೃತ್ತಿ ಹೊಂದಿದರು. ಕಂಪೆನಿಯಲ್ಲಿ ಇದ್ದಷ್ಟು ದಿನ ಪತ್ರಿಕೆಯ ಜೊತೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದ ಅವರು, ಮೊನ್ನೆ ನಮ್ಮ ಪತ್ರಿಕೆಯ 5ನೇ ವಾಷರ್ಿಕೋತ್ಸವದ ವಿಶೇಷ ಸಂಚಿಕೆಗೆ ಹಟ್ಟಿ ಚಿನ್ನದ ಗಣಿಯ ಪಿತಾಮಹ ಎಲ್.ಸಿ ಕಟರ್ಿಸ್ ಅವರ ಕುರಿತು ಲೇಖನವೊಂದನ್ನು ಬರೆದು ಕೊಟ್ಟದ್ದರು. ಅವರ ಲೇಖನದಿಂದ ಪತ್ರಿಕೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು. ಸಾಕಷ್ಟು ಸಂದರ್ಭಗಳಲ್ಲಿ ಪತ್ರಿಕೆಯ ಜೊತೆ ಸಕಾರಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದ ಪಾಟಿಲ್ರನ್ನು ಇಂದು ಬೀಳ್ಕೊಡುತ್ತಿರುವುದು ಬೇಸರವೆನಿಸುತ್ತದೆ.
ಕಂಪೆನಿಯ ಹಲವು ಹುದ್ದೆಗಳನ್ನು ಅಲಂಕರಿಸಿದ್ದ ಪಾಟೀಲ್ರು ಕೊನೆಗೆ ಕಂಪೆನಯ ಕಾರ್ಯನಿವರ್ಾಹಕ ನಿದರ್ೇಶಕರಾಗಿ, ತಮ್ಮ ನಿವೃತ್ತಿಯ ಹಿಂದಿನ ದಿನ ಕಾಮರ್ಿಕರ ಐತಿಹಾಸಿಕ ವೇತನ ಒಪ್ಪಂದಕ್ಕೆ ಸಹಿ ಹಾಕಿದರು. ಅವರನ್ನು ಬೀಳ್ಕೋಡಲು ಕಂಪೆನಿಯ ಹಲವು ವಿಭಾಗಗಳ ಕಾಮರ್ಿಕರು ಮತ್ತು ಸಂಘದ ಸದಸ್ಯರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅದರಲ್ಲಿ ಪಾಟೀಲರು ತಮ್ಮ ಮನದಾಳದ ಇಂಗಿತವನ್ನು ಬಿಚ್ಚಿಟ್ಟರು. ಕಂಪೆನಿಯನ್ನು ಬಿಟ್ಟುಹೋಗುತ್ತಿರುವುದು ದುಃಖಕರವಾಗಿದ್ದರೂ, ನಾನು ಲಿಂಗಸ್ಗೂರಿನಲ್ಲಿಯೇ ಮನೆ ಮಾಡುತ್ತಿದ್ದೂ, ಸಾಧ್ಯವಾದಾಗಲೆಲ್ಲ ಕಾಮರ್ಿಕರು ನಮ್ಮನ್ನು ಭೇಟಿಯಾಗಿರಿ ಎಂದು ಹೇಳಿದರು.
******
ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾಮರ್ಿಕ ಸಂಘದ ಅಧ್ಯಕ್ಷರಾಗಿದ್ದ ಎಸ್.ಎಂ ಶಫೀ ಕೂಡ ಇದೇ 30ರಂದು ನವೃತ್ತಿ ಹೊಂದಿದರು. ಪತ್ರಿಕೆ ಆರಂಭದಿಂದ ಪರಿಚಿತರಾಗಿದ್ದ ಅವರನ್ನು ಕಾಮರ್ಿಕ ಸಂಘದ ವಿಷಯ ಬಂದಾಗ ಅವರ ವಿರುದ್ದ ನೇರಾನೇರ ವರದಿಗಳನ್ನು ಪ್ರಜಾಸಮರ ಮಾಡಿತ್ತು. ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಕೂಡ ಸಾಮಾಜಿಕ ದೃಷ್ಟಿಕೋನದಿಂದ ಒಳ್ಳೆಯ ಹೆಸರು ಮಾಡಲು ಪ್ರಯತ್ನಿಸುತ್ತಿರುವದನ್ನು ಮೆಚ್ಚಬಹುದು. ತಮ್ಮದೇ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸಿ, ಸಾಕಷ್ಟು ಬಡಮಕ್ಕಳಿಗೆ ಕಡಿಮೆ ಹಣದಲ್ಲಿ ಶಿಕ್ಷಣವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಹಟ್ಟಿಯಲ್ಲಿ ಅತ್ಯಂತ ರಿಯಾಯಿತಿ ಹಣದಲ್ಲಿ ಶಿಕ್ಷಣ ಕೊಡುವುದು ನರಸಪ್ಪ ಯಾದವ ಅವರ ವಿನಾಯಕ ಸಂಸ್ಥೆ ಬಿಟ್ಟರೆ, ಎರಡನೇಯದ್ದೇ ಶಫೀಯವರ ಲಿಟಲ್ ಏಂಜೆಲ್ಸ್ ಶಾಲೆ. ಇನ್ನುಳಿದ ಕೆಲವು ಶಾಲೆಗಳಂತೂ ಪಾಲಕರನ್ನು ಕಿತ್ತುಕೊಂಡು ತಿನ್ನಲು ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತವೆ. ಕಂಪೆನಿ, ಇತರೆ ಇಲಾಖೆಗಳ ಸಹಾಯವನ್ನು ಪಡೆದು ಶಾಲೆಯ ಅಭಿವೃದ್ದಿಯನ್ನು ಮಾಡಿದ್ದಾರೆ. (ಶಾಲೆಯ ಬೆಳವಣಿಗೆಗೆ ಇತರೆ ಸದಸ್ಯರು ಕಾರಣರಲ್ಲ ಎಂಬ ಭಾವನೆ ನಮ್ಮದಲ್ಲ. ಆದರೆ, ಯಾವುದೇ ಒಂದು ಬೆಳವಣಿಗೆ ಕ್ರಿಯೆ ನಡೆದಾಗ ಅದರ ಯಶಸ್ಸು ಲಭಿಸುವುದು ಅದನ್ನು ನಡೆಸುವ ಸಾರಥಿಗೆ. ಆ ಕಾರಣಕ್ಕೆ ಇದನ್ನು ಬೇರೆ ರೀತಿಯಲ್ಲಿ ಊಹಿಸುವುದು ತರವಲ್ಲ)
ಆರಂಭದಲ್ಲಿ ಸಣ್ಣದಾಗಿ ಶಫೀ ಯವರು ತೆಗೆದ ಶಾಲೆ ಇಂದು ಹಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ವರ್ಷದಿಂದ ವರ್ಷಕ್ಕೆ ಶಾಲೆಯ ಫಲಿತಾಂಶ ಗಣನೀಯವಾಗಿ ಏರುತ್ತಿದೆ. ಹಾಗೆ ವಿದ್ಯಾಥರ್ಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಕಾಮರ್ಿಕ ಸಂಘದ ಅಧ್ಯಕ್ಷರಾದ ಶಫೀ ಮುಂಗೋಪಿ ಯಾದರೂ, ಕೂಡ ಪತ್ರಿಕೆ ಅವರ ವಿರುದ್ದ ಸಾಕಷ್ಟು ಸುದ್ದಿಗಳನ್ನು ಮಾಡಿದಾಗ ಅದ್ಯಾವುದನ್ನು ಮನಸ್ಸಲ್ಲಿಟ್ಟುಕೊಳ್ಳದೇ, ಪತ್ರಿಕೆಯೊಂದಿಗೆ ಕೆಲವೊಂದು ಸಂದರ್ಭದಲ್ಲಿ ಸಹಕರಿಸಿದ್ದಾರೆ.
ಲಿಂಗರಾಜು ಅವರು ತಂಗಿ ಆ ಶಾಲೆಗೆ ಪ್ರಥಮ ಸ್ಥಾನದಲ್ಲಿ ಬಂದಾಗ ಅತಿಹೆಚ್ಚು ಸಂತೋಷ ಪಟ್ಟದ್ದು ಶಾಲೆಯ ಆಡಳಿತ ಮಂಡಳಿ ಮತ್ತು ಶಫೀ ಎಂದು ಕೇಳಿದಾಗ ಅವರಲ್ಲಿ ಕೂಡ ವೈಯಕ್ತಿಕವಾಗಿ ಪ್ರಜಾಸಮರದ ಮೇಲೆ ಭಿನ್ನಾಭಿಪ್ರಾಯವಿಲ್ಲವೆಂಬುದು ಗೊತ್ತಾಯಿತು.
ವಾರದಲ್ಲಿ ನಾಲ್ಕೈದು ದಿನ ಊರಲ್ಲಿದ್ದರೂ, ತನ್ನ ನೆಟ್ವಕರ್್ನಂದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದ ಶಫೀ 30ಕ್ಕೆ ಕೆಲಸದಿಂದ ನವೃತ್ತಿ ಹೊಂದಿದರೂ, ಕಾಮರ್ಿಕ ಸಂಘದ ಅಧ್ಯಕ್ಷರಾಗಿ ಮುಂದುವರೆದಿರುತ್ತಾರೆ.
ಇನ್ನು ಮುಂದಿನ ದಿನಗಳಲ್ಲಿ ಶಫೀಯವರು ಸಾಕಷ್ಟು ಸಮಯವನ್ನು ಸಂಸ್ಥೆಗೆ ಮೀಸಲಿಟ್ಟು ಹಟ್ಟಿಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರವನ್ನಾಗಿ ತಮ್ಮ ಶಾಲೆಯನ್ನು ಮಾಡಲಿ.
******
ಹಟ್ಟಿ ಕಾಮರ್ಿಕರಿಗೆ ಜೂನ್ 29 ಶುಭ ಶುಕ್ರವಾರ. ಯಾಕೆಂದರೆ, ಅಂದು ಕಾಮರ್ಿಕ ಸಂಘ ಮತ್ತು ಆಡಳಿತ ಮಂಡಳಿ, ಕಾಮರ್ಿಕ ಇಲಾಖೆಯ ಪ್ರಾದೇಶಿಕ ಆಯುಕ್ತರ ಮುಂದೆ ಹೊಸ ವೇತನ ಒಪ್ಪಂದಕ್ಕೆ ಸಹಿ ಹಾಕಿದರು. ಆ ವೇತನ ಒಪ್ಪಂದವು ಎಪ್ರಿಲ್ 2011ರಿಂದ ಜಾರಿಗೆ ಬರುತ್ತದೆ. ಕಂಪೆನಿ ಹಾಗೂ ಕಾಮರ್ಿಕ ಸಂಘದ ಮಧ್ಯೆ ಏರ್ಪಟ್ಟ ಈ ಬಾರಿಯ ವೇತನ ಒಪ್ಪಂದವು ಐತಿಹಾಸಿಕ ದಾಖಲೆಯಾಗಿದೆ.
ಶೇ.10ರ ಗಟಿ ದಾಟಲಾಗದ ವೇತನ ಒಪ್ಪಂದವನ್ನು ಕಾಮ್ರೇಡ್ಸ್ ತಮ್ಮ ಶಕ್ತಿ ಸಾಮಥ್ರ್ಯದೊಂದಿಗೆ, ಸತತ 13 ತಿಂಗಳು ಹೋರಾಡಿ, ಇದೀಗ ಶೇ.23ರಷ್ಟುನ್ನು ಕಾಮರ್ಿಕರಿಗೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಶೇ.10ರ ಗಡಿ ದಾಟಬೇಕಾದರೆ, ಸಕರ್ಾರದ ಅನುಮೋದನೆ ಅವಶ್ಯವೆಂದು ಗೊತ್ತಾದಾಗ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕರಾದ ಎ.ಕೆ ಮೊನ್ನಪ್ಪ, ಕಾಮರ್ಿಕ ಸಂಘದ ಅರವಿಂದ ಮಳೆಬೆನ್ನೂರು, ಶಫೀ ಒಗ್ಗಟ್ಟಿನಿಂದ ಪ್ರಯತ್ನ ಮಾಡಿ ಸಕರ್ಾರ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾದರು.
ಆದರೆ, ಸಕರ್ಾರ 23 ಪ್ರತಿಶತದ ಹಿಂದೆ ನಾನಾ ಷರತ್ತುಗಳನ್ನು ಹಾಕಿದೆ. ಕಾರಣ ಲಾಭದಲ್ಲಿ ಕಂಪೆನಿ ಇರುವುದರಿಂದ ನಿಮ್ಮ ಲಾಭದಲ್ಲಿ ನಷ್ಟ ಅನುಭವಿಸುತ್ತಿರುವ ಕಂಪೆನಗಳಿಗೆ ಸ್ವಲ್ಪ ಪಾಲು ಕೊಡಿ ಎಂದು ಕೇಳಲಾಗಿದೆ ಎಂದು ಗೊತ್ತಾಗಿದೆ. ಪ್ರತಿನಿತ್ಯ ಕಾಮರ್ಿಕರು ಎಲ್ಲಿ ನೋಡಿದರಲ್ಲಿ ಬರೀ ವೇತನ ಒಪ್ಪಂದದ್ದೇ ಮಾತನಾಡುತ್ತಿದ್ದರು. ಮೊನ್ನೆ ಶುಕ್ರವಾರದಂದು ವೇತನ ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆ ಎಲ್ಲರಲ್ಲಿ ಸಂತಸ ಮನೆ ಮಾಡಿದೆ. ಶೇಕಡವಾರು ರೂ.5000ರಷ್ಟು ವೇತನ ಹೆಚ್ಚಳವಾಗುತ್ತಿದ್ದು ಕಾಮರ್ಿಕರು ಅದನ್ನು ಸರಿಯಾದ ಕಾರ್ಯಕ್ಕೆ ವಿನಯೋಗಿಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡರೆ ಒಳ್ಳೆಯದು ಎಂದು ಅಭಿಪ್ರಾಯ ಪಡುತ್ತಾರೆ ಕಂಪೆನಿಯ ವ್ಯವಸ್ಥಾಪಕ ನಿದರ್ೇಶಕರಾದ ಎ.ಕೆ ಮೊನ್ನಪ್ಪನವರು. ಜೊತೆಯಲ್ಲಿ ವೇತನ ಒಪ್ಪಂದದ ಬಾಕಿ ಹಣವಾಗಿ ಕಾಮರ್ಿಕರಿಗೆ ಏನಿಲ್ಲವೆಂದರೂ, ಸರಿಯಾಗಿ ಕೆಲಸ ಮಾಡಿದವರಿಗೆ ರೂ.30000ರಷ್ಟು ಬರುತ್ತದೆ ಎಂಬ ಲೆಕ್ಕಾಚಾರ ಈಗಾಗಲೇ ನಡೆದಿದೆ.
ಕಳೆದ ವೇತನ ಒಪ್ಪಂದದಲ್ಲಿ ಕಾಮರ್ಿಕರಿಗೆ ಅನ್ಯಾಯವಾಗಿತ್ತು ಎಂದು ಪ್ರತಿಭಟಿಸಿದ್ದ ಕಾಮ್ರೇಡ್ಸ್ಗಳನ್ನೆಲ್ಲ ಅಂದಿನ ಆಡಳಿತ ಮಂಡಳಿ ಜೈಲಿಗೆ ತಳ್ಳಿತ್ತು. ಲಿಂಗರಾಜು, ಮುನ್ನಭಾಯ್ ಅವರು ಕಳೆದ ವೇತನ ಒಪ್ಪಂದವನ್ನು ವಿರೋಧಿಸಿ ಸಹಿ ಸಂಗ್ರಹ ಚಳವಳಿ ಮಾಡಿದ್ದರು. ಅದಕ್ಕೆ ಎ.ಐ.ಟಿ.ಯು.ಸಿ ಮತ್ತು ದಲಿತ ಸಂಘಟನೆ ಬೆಂಬಲಿಸಿತ್ತು.
ಪ್ರತಿ ಸಾರಿ ವೇತನ ಒಪ್ಪಂದಗಳು ನಡೆದಾಗ ಪರ-ವಿರೋಧಗಳು ನಡೆಯುತ್ತಿದ್ದವು. ಈ ಬಾರಿಯ ವೇತನ ಒಪ್ಪಂದದ ಪ್ರತಿ ಇನ್ನೂ ಕೆಲವು ಕಾಮರ್ಿಕ ಮುಖಂಡರ ಕೈಗೆ ಸಿಗದಿದ್ದರಿಂದ, ಯಾರು ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ.
ಇನ್ನುಳಿದ ಅವಧಿಯಲ್ಲಿ ಕಾಮರ್ಿಕ ಸಂಘ ಕಾಮರ್ಿಕರಿಗೆ ವಿಆರ್ಎಸ್, ಮರಣ ಹೊಂದಿದ ಕಾಮರ್ಿಕರ ಮಕ್ಕಳು, ಸಂಬಂಧಿಗಳಿಗೆ ನೌಕರಿ, ಸುಮಾರು ವರ್ಷಗಳಿಂದ ದಿನಗೂಲಿಗಳಾಗಿ ದುಡಿಯುತ್ತಿರುವ ಕಾಮರ್ಿಕರ ಖಾಯಂಮಾತಿ ಹಾಗೂ ಕಾಮರ್ಿಕರಿಗೆ ಸಿಗಬಹುದಾದ ಅನೇಕ ಸವಲತ್ತುಗಳನ್ನು ಕೊಡಿಸಿ, ಕಾಮರ್ಿಕರ ಏಳಿಗೆಗಾಗಿ ಶ್ರಮಿಸಲಿ ಎಂದು ಪತ್ರಿಕೆ ಹಾರೈಸುತ್ತದೆ.

No comments:

Post a Comment

Thanku