Monday, July 16, 2012

ಪತ್ರಿಕೆ ಎಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ


ಪತ್ರಕರ್ತರು ಅಂದರೆ ಎಲ್ಲವನ್ನೂ ತಿಳಿದುಕೊಂಡವರು, ಪ್ರಾಮಾಣಿಕತೆಗೆ ಹೆಸರಾದವರು, ಜನರ ಬಗ್ಗೆ ವಿವೇಚಿಸುವವರು, ವ್ಯವಸ್ಥೆ ದೋಷ ನಿವಾರಿಸುವ ಪ್ರಯತ್ನದಲ್ಲಿ ತೊಡಗುವವರು, ಭಷ್ಟ ರಾಜಕಾರಣಿ, ಅಧಿಕಾರಿಗಳೊಂದಿಗೆ, ರಾಜಿಯಾಗದ ವರು ಎಂಬೆಲ್ಲಾ ವಿಶೇಷತೆಗಳೊಂದಿಗೆ ಜನರು ಅವರನ್ನು ಗೌರವಿಸುತ್ತಾರೆ. ಬಹುಪಾಲು ಜನರಿಗೆ ಈಗಲೂ ಅದೇ ಭಾವನೆ, ಗೌರವ ಇದೆ. ಪತ್ರಿಕೆಗಳು ಅಂದ ತಕ್ಷಣ ಜನರಲ್ಲಿ ಏನೋ ಒಂದು ರೀತಿಯ ಭೀತಿ ಜಾಗೃತವಾಗುತ್ತದೆ. ಆದರೆ, ಪತ್ರಕರ್ತರು ಅಥವಾ ಪತ್ರಿಕೆಗಳು ಮಾತ್ರ ಜನರ ಭಾವನೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಅದಕ್ಕೆ ಹಲವಾರು ಕಾರಣ ನೀಡಬಹುದು. ವಾಗ್ವಾದಕ್ಕಿಳಿಯಬಹುದು. ಆದರೆ, ಪತ್ರಿಕಾಧರ್ಮ ಉಳಿಸಲು ಕಷ್ಟವೆನಿಸಿದರೆ ಆ ಕೆಲಸಕ್ಕೆ ಕೈ ಹಾಕುವುದಾದರೂ ಏತಕ್ಕೆ? ಹಣ ಮಾಡುವ ಬೇರೆ ದಂಧೆಯನ್ನು ನೆಚ್ಚಿಕೊಳ್ಳಬಹುದಲ್ಲ ಎಂಬ ಪ್ರಶ್ನೆಗೆ ಉತ್ತರ ಸುಲಭ.
ಕಾಯರ್ಾಂಗ ಮತ್ತು ರಾಜಕಾರಣ ಸಂಪೂರ್ಣ ವಾಗಿ ಭ್ರಷ್ಟಗೊಂಡಿರುವುದು, ಜನರ ಪರವಾಗಿ ಕೆಲಸ ಮಾಡಬೇಕಾದ ಪತ್ರಿಕೆಗಳು ಈ ಎರಡೂ ರಂಗಗಳ ತಪ್ಪನ್ನು ಪ್ರಶ್ನಿಸುವ ಅಧಿಕಾರ ಪಡೆದಿರುವುದು ಪ್ರಶ್ನೆಗೆ ಉತ್ತರವಾಗಿದೆ. ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಯ ಊಟದೆಲೆಯಲ್ಲಿ ಪಾಲು ಪಡೆಯುವ ಅಥವಾ ಅವರು ಉಂಡು ಹೆಚ್ಚಾದವನ್ನು ತಾವು ಗೋರುವ ದುರಾಸೆ ಅಥವಾ ಧರ್ಮ ಪತ್ರಿಕೆಗಳದು.
ರಾಜಕಾರಣಿಯಾಗಲು ಹೇಗೆ ಯಾವುದೇ ಅರ್ಹತೆ ಅಗತ್ಯವಿಲ್ಲವೋ ಹಾಗೆಯೇ ಪತ್ರಕರ್ತ ನಾಗಬೇಕಾದರೆ ಯಾವುದೇ ಅರ್ಹತೆಯ ಅಗತ್ಯವಿಲ್ಲ. ದೊಡ್ಡಮಟ್ಟದ ಪತ್ರಿಕೆ (ರಾಜ್ಯ, ರಾಷ್ಟ್ರೀಯ ಪತ್ರಿಕೆಗಳು) ಹೆಸರಿನಲ್ಲಿ ವ್ಯಾಪಾರ ಆರಂಭಿಸುವವರು ಚೆನ್ನಾಗಿ ಬರೆಯುವವರು, ಪತ್ರಿಕೋದ್ಯಮದ ಪದವಿಯನ್ನು ಪಡೆದವರನ್ನು ಆಯ್ಕೆಗೆ ಅರ್ಹತೆಯನ್ನಾಗಿ ಪರಿಗಣಿಸುತ್ತಾರೆ. ಆದರೆ, ಮಾಲೀಕನಾಗುವವನಿಗೆ ಅದರ ಅರ್ಹತೆ ಅಗತ್ಯವಿಲ್ಲ. ಹಣವಿದ್ದರೆ, ಜೊತೆಗೆ ವ್ಯಾವಹರಿಕ ಜಾಣ್ಮೆಯಿದ್ದರೆ, ಆತ ಪತ್ರಿಕೋದ್ಯಮಿ ಯಾಗಬಹುದು. ಈ ಕಾರಣಕ್ಕೆ ಪತ್ರಿಕೆಗಳು ಪತ್ರಕರ್ತರು ಅಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ. ಪತ್ರಿಕಾ ಧರ್ಮ, ಮೌಲ್ಯ, ಸಿದ್ದಾಂತ ಹೇಳುವವನನ್ನು ಅಪಹಾಸ್ಯ ಮಾಡಲಾಗುತ್ತಿದೆ. ವೇಸ್ಟ್ ಎಂದು ಪರಿಗಣಿಸಲಾಗುತ್ತಿದೆ. ಎರಡು ಹೊತ್ತಿನ ಊಟಕ್ಕಾಗಿ ಮನುಷ್ಯ ಏನನ್ನು ಬೇಕಾದರೂ ಮಾಡುತ್ತಾನೆ, ದುರಾಸೆಯಿಂದ ವ್ಯವಸ್ಥೆಯನ್ನೇ ಗಬ್ಬೆಬ್ಬಿಸುತ್ತಾನೆಂಬುದಕ್ಕೆ ಪತ್ರಿಕೆ ಪತ್ರಕರ್ತರು ಉದಾಹರಣೆಗೆ ನಿಲ್ಲುತ್ತಾರೆ.
ನಮ್ಮ ಹಿರಿಯರು ಅಥವಾ ಈ ಹಿಂದಿನ ಪತ್ರಿಕೆಗಳು ಹೀಗೆಯೇ ಇದ್ದರೆ, ಇತ್ತ ಎಂಬ ಪ್ರಶ್ನೆಗೆ ಇಲ್ಲವೆಂಬ ಉತ್ತರ ನೀಡಲು ಸಾಧ್ಯವಿಲ್ಲ. ಪ್ರಮಾಣ ಕಡಿಮೆಯಿ ರಬಹುದು. ಇತ್ತು. ಗೌಪ್ಯವಾಗಿತ್ತು. ಲಾಭ ಮಾಡಿಕೊ ಳ್ಳುವವ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದ. ನಾಚಿಕೆ, ಭೀತಿ, ಸುತ್ತವಾಗಿರುತ್ತಿತ್ತು. ಈಗ ಅದೆಲ್ಲ ಇಲ್ಲವೇ ಇಲ್ಲ. ಖುಲ್ಲಂ ಖುಲ್ಲ ಗೋಡಾ ಬಿ ಹೈ, ಮೈದಾನ ಬೀ ಹೈ
ಮೊದಲು ಎಲ್ಲರೂ ಪತ್ರಕರ್ತರಾಗಲು ಹೆದರುತ್ತಿದ್ದರು. ಭಯವಲ್ಲ, ಕಾರಣ. ಅದು ಊಟಕ್ಕೂ ಕಷ್ಟ ಕೊಡುತ್ತದೆಂದು. ಪತ್ರಕರ್ತನನ್ನು ಬಡ ಪತ್ರಕರ್ತ, ಬಡಪಾಯಿ ಎಂದು ಸಂಭೋದಿಸುತ್ತಿದ್ದುದನ್ನು ಹೊಸ ತಲೆಮಾರಿನವರಿಗಲ್ಲದಿದ್ದರೂ, ಹಳೇ ತಲೆಮಾರಿನವರಿಗೆ ಗೊತ್ತಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಪತ್ರಕರ್ತರಾದರೆ, ಯಥೇಚ್ಛವಾಗಿ ಹಣ ಮಾಡಬಹುದು. ಅಧಿಕಾರಿ, ರಾಜಕಾರಣಿಗಳನ್ನು ಹೆದರಿಸಿ ಕೆಲಸ ಮಾಡಿಸಿಕೊಳ್ಳಬಹುದೆಂದು.
ನಂ.1 ಪತ್ರಿಕೆ (ರಾಜ್ಯಮಟ್ಟದ್ದು) ಸಂಪಾದಕ, ಪತ್ರಕರ್ತರಲ್ಲಿಯೇ ನಂ.1 ಕುಬೇರನಾಗಿರುವುದು ಹೇಗೆ? ರಾಜಕಾರಣಿಯೊಬ್ಬರ ಬೂಟು ನೆಕ್ಕುತ್ತಿದ್ದುದೇ ಈತ ಸಂಪಾದಕನಾಗಲು ಇದ್ದ ಅರ್ಹತೆ. ಪತ್ರಿಕೋದ್ಯಮದ ಪಟ್ಟುಗಳನ್ನು ಬದಲಿಸಿರುವುದಾಗಿ ಸನ್ನಿ ಬಡಿದವನಂತೆ ಪದೇ ಪದೇ ಬಡಿದುಕೊಳ್ಳುವ ಈತನ ಮತ್ತೊಂದು ಸಾಧನೆಯೆಂದರೆ, ಹೋಟೆಲ್ಗಳಲ್ಲಿ ಮಾಣಿಗಳಾಗಿ ದ್ದವರೂ ಪತ್ರಿಕಾ ಕಛೇರಿಗಳಿಗೆ ಪತ್ರಿಕೆ ವಿತರಿಸಿ ಬದುಕುತ್ತಿದ್ದವರನ್ನು ಪತ್ರಕರ್ತರನ್ನಾಗಿ ಪ್ರತಿಷ್ಟಾಪಿಸಿದ್ದು. ಭಾಷೆ, ವ್ಯಾಕರಣ ಕಲಿತುಕೊಳ್ಳುವುದು ಕಷ್ಟವೇನಲ್ಲವೇ? ಮತ್ತೊಂದು ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಅಕ್ಷರಜ್ಞಾನವೇ ಇಲ್ಲದವನು ಸಂಪಾದಕನಾಗಿ ವಿಜೃಂಭಸಿದ್ದ. ಬಯಲಲ್ಲಿ ಬೆತ್ತಲಾದವರ ಸಂಖ್ಯೆ ಸಾಕಷ್ಟಿದೆ. ವೈಯಕ್ತಿಕ ಮಟ್ಟದಲ್ಲಿ ಪತ್ರಕರ್ತರು ಏನಾಗಿದ್ದಾರೆಂಬುದಕ್ಕೆ ಇದು ಉದಾಹರಣಿ. ಜಾತಿವಾದಿಗಳು, ಜಾತ್ಯಾತೀತವಾದಿಗಳು ಎಂಬ ಹಣಿಪಟ್ಟಿಯೊಂದಿಗೆ ಪತ್ರಿಕೋದ್ಯಮವನ್ನು ಕಸದ ಬುಟ್ಟಿಗೆ ಹಾಕಿದವರು ಇದ್ದಾರೆ. ಆಂದೋಲನ ಮಾಡುವುದಾಗಿ ಇನ್ನೂ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಸಮಾಜವಾದಿ ಪತ್ರಕರ್ತನೊರ್ವ ಜನರ ಮುಂದೆ ಸಮಾಜಸೇವಕ ಪೋಸು ನೀಡುತ್ತಾನೆ. ಸರಳತೆ, ಭಾಷಣ ಮಾಡಿ ಐಷಾರಾಮಿ ಕಾರುಗಳಲ್ಲಿ ತೆರಳುತ್ತಾನೆ. ಏನಾದರೂ, ಮಾಡಿಕೊಳ್ಳಲಿ ಸುದ್ದಿ ಬರೆಯುವ ಕೆಲಸಗಾರರಿಗೆ ಹೊಟ್ಟೆ ತುಂಬುವಷ್ಟು ಸಂಬಳವಾದರೂ ಕೊಡುತ್ತಾನೆಂದರೆ, ಅದು ಇಲ್ಲ. ಆದರೆ, ತನ್ನ ಆದಾಯದಲ್ಲಿ ಶೇಕಡಾ 40ರಷ್ಟನ್ನು ಸಮಾಜ ಸೇವೆಗೆ ವಿನಿಯೋಗಿಸುವುದಾಗಿ ಘೋಷಿಸುತ್ತಾನೆ.
ಇದು ಒತ್ತಟಿಗಿರಲಿ, ಇತ್ತೀಚಿಗೆ ಪತ್ರಿಕೆಗಳಿಗೆ ಚುನಾವಣಿ ಬಂತೆಂದರೆ ಹಬ್ಬ. ಕಾರಣ ಚುನಾವಣಿಗಳಲ್ಲಿ ವೆಚ್ಚದ ಮಿತಿ ಇರುವುದರಿಂದ ಜಾಹೀರಾತುಗಳನ್ನು ಮಿತಿ ಮೀರಿ ನೀಡುವಂತಿಲ್ಲ. ಅದಕ್ಕಾಗಿ ಪ್ರಾಯೋಜಿಕ ಸುದ್ದಿ ಪುಟಗಳು ಮುದ್ರಣಗೊಳ್ಳುತ್ತವೆ. ವಿಶ್ಲೇಷಣಿ ಮತ್ತು ಪ್ರಾಯೋಜಿತ ಸುದ್ದಿ ಪುಟಗಳು ಅಕ್ಕಪಕ್ಕದಲ್ಲಿಯೇ ಪ್ರಕಟಗೊಳ್ಳುವದರಿಂದ ಜನರು ಅಂದರೆ, ಓದುಗರು ಗೊಂದಲಗೊಂಡಿದ್ದಾರೆ. ಹೊಗಳಿ ಬರೆಸಿಕೊಳ್ಳುವದ ರಿಂದ ಪ್ರಯೋಜನವಿಲ್ಲವೆಂದು ರಾಜಕಾರಣಿಗಳಿಗೆ ಗೊತ್ತಿದೆ. ಆದರೆ, ಕಾಟ ತಡೆಯಲಾರದೇ ಪತ್ರಕರ್ತರಿಗೆ ಹಣ ನಡಬೇಕಾಗುತ್ತದೆ ಎಂದು ರಾಜಕಾರಣಿಗಳು ಗೊಳಾಡುತ್ತಾರೆ. ಎಷ್ಟೋ ರಾಜಕಾರಣಿಗಳನ್ನು ಪತ್ರಕರ್ತರು ಪ್ರಚಾರಕ್ಕೆ ತೆರಳಲು ಬಿಡುವುದಿಲ್ಲವಂತೆ. ಹಣ ನೀಡದಿದ್ದರೆ, ಹಿಂಬಾಲಿಸುವದರಲ್ಲಿ ಪತ್ರಕರ್ತರು ರಾಜಕೀಯ ಪಕ್ಷಗಳ ಕಾರ್ಯಕರ್ತರಿಗಿಂತ ಒಂದು ಕೈ ಮುಂದೆ.
ಇತ್ತೀಚಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಯುವಕನೊಬ್ಬ ಕೆಲಸಕ್ಕಾಗಿ ಅಲೆಯುತ್ತಿದ್ದ. ನಂ.1 ಪತ್ರಿಕೆ ಸಂಪಾದಕ ಹಾಗೂ ಭ್ರಷ್ಟ ರಾಜಕಾರಣಿಯೊಬ್ಬರಿಗೆ ಪರಸ್ಪರ ಸಂಬಂಧವಿರುವುದು ನನಗೆ ಗೊತ್ತಿತ್ತು. ಆ ರಾಜಕಾರಣಿಯ ಬಳಿ ಹೋಗಲು ತಿಳಿಸಿದೆ. ಯುವಕನಗ ಸಂತೋಷವಾಗಿದ್ದಾನೆ.
ಪತ್ರಿಕೆ ಎಂದರೆ, ಸಂಬಂಧವೇ ಇಲ್ಲದವರ ಸಾಮ್ರಾಜ್ಯ. ಹೇಗಾಗುತ್ತದೆ ಎಂಬುದಕ್ಕೆ ಇದನ್ನೆಲ್ಲ ಹೇಳಬೇಕಾಯಿತು. ಹೊಟ್ಟೆ ಪಾಡಿಗಾಗಿ ಮಾಡುತ್ತಾರೆಂದು ಸುಮ್ಮನಾಗೋಣ. ಆದರೆ, ಕೈತುಂಬ ಸಂಬಳ ನಡಿದ ಮೇಲೆಯೂ ಕೈಚಾಚುವರು ಇದ್ದಾರೆ. ಪ್ರಖ್ಯಾತ ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದಕ್ಕೆ ಅಪರಾದ ಸುದ್ದಿ ವರದಿ ಮಾಡುವವ ಬೆಂಗಳೂರಿನ ಬಹಳಷ್ಟು ಪೊಲೀಸ್ ಠಾಣಿಯಲ್ಲಿ ಪ್ರತಿನತ್ಯ ಕೇವಲ ನೂರು ರೂಪಾಯಿಯನ್ನು ಕಡ್ಡಾಯವಾಗಿ ವಸೂಲಿ ಮಾಡುತ್ತಾನೆ. ಕಿತ್ತು ತಿನ್ನುವ ಪೊಲೀಸರನ್ನೇ ಕಿತ್ತು ತಿನ್ನವವನಿತ.
ಇಡೀ ದೇಶದಲ್ಲಿಯೇ ಸಿದ್ದಾಂತಕ್ಕೆ ಬದ್ದವಾದ ಪತ್ರಿಕೆಯೊಂದು ಇತ್ತೀಚಿನ ಉಪಚುನಾವಣಿಯ ಬಗ್ಗೆ ಅದರ ವರದಿಗಾರನಾದ ವ್ಯಕ್ತಿ ಆಶ್ಚರ್ಯಕರ ವಿಶ್ಲೇಷಣಿ ಬರೆದ. ಆತನ ಪ್ರಕಾರ ಕಣಕ್ಕಿಳಿದಿದ್ದ ಕುಬೇರ ಅಭ್ಯಥರ್ಿಯೊಬ್ಬ ಗೆದ್ದೆಗೆಲ್ಲುತ್ತಾನೆಂದು ವಾದಿಸಿದ್ದ.
ಆದರೆ, ಆಶ್ಚರ್ಯದ ವಿಷಯವೆಂದರೆ, ಆ ಚುನಾವಣಿಯಲ್ಲಿ ಆತ ಸೋತೆ ಸೋಲುತ್ತಾನೆಂಬುದು ಕ್ಷೇತ್ರದಲ್ಲಿ ಸಣ್ಣಮಕ್ಕಳಿಗೂ ಗೊತ್ತಾಗಿತ್ತು. ಇದಕ್ಕೆ ಏನನ್ನೋಣ.

No comments:

Post a Comment

Thanku