Friday, July 6, 2012

ಡೈನಾಮಿಕ್ ಪಿಎಸ್ಐ ಬಾಳನಗೌಡ

 ಇಡೀ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಒತ್ತಡವಿರುವ ಹುದ್ದೆಯೆಂದರೆ, ಅದು ಪೊಲೀಸ್ ಪೊಲೀಸ್ ಸಬ್ ಇನ್ಸಪೆಕ್ಟರ್ (ಪಿಎಸ್ಐ) ಹುದ್ದೆ.. ಪೊಲೀಸ್ ಸ್ಟೇಷನ್ನಿನಲ್ಲಿ ಒರ್ವ ಪಿಸಿ ಯಾಗಿದ್ದರೆ, ಕಛೇರಿಯ ಕೆಲಸವನ್ನು ನೆಮ್ಮದಿಯಿಂದ ಮಾಡಿಕೊಂಡು ಹೋಗಬಹುದು! ಸಿಪಿಐ ಅಥವಾ ಅದರ ಮೇಲಿನ ಅಧಿಕಾರಿಗಳಾದರೆ, ಇನ್ನಷ್ಟು ನೆಮ್ಮದಿ. (ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿ) ಆದರೆ, ಪಿಎಸ್ಐ ಆಗಿಬಿಟ್ಟರೆ 24 ಗಂಟೆ ಸಭೆ, ಗಸ್ತು, ಗಲಾಟೆ, ಅಪಘಾತ, ಬಂದೋಬಸ್ತ್, ಕೋಟರ್ು ಅಂತೆಲ್ಲ ಕಳೆಯಬೇಕಾಗುತ್ತದೆ. ಜೊತೆಗೆ ಯಾವಾಗಾದರೂ, ಒಮ್ಮೆ ಮೈಕ್ 1,2 ಹಾಗೂ 3 ಸಾಹೇಬರು ಕಛೇರಿಗೆ ಭೇಟಿ ನೀಡುತ್ತಾರೆಂದರೆ, ಅವರು ಬಂದು ಹೋಗುವ ತನಕ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಬೇಕು. ಇನ್ನೂ ಪೊಲೀಸ್ ಠಾಣಿ ಪ್ರಮುಖ ನಗರಗಳಿಗೆ ಹಾದು ಹೋಗುವ ರಸ್ತೆಯಲ್ಲಿತ್ತೆಂದರೆ, ಕಥೆಯೇ ಮುಗಿಯಿತು. ಇಷ್ಟೇಲ್ಲ ಕರ್ತವ್ಯವನ್ನು ನಿರ್ವಹಿಸಿಕೊಂಡು ಜನಸಾಮಾನ್ಯರು, ಮುಖಂಡರು, ರಾಜಕಾರಣಿಗಳು ಹಾಗೂ ಗ್ರಾಮಸ್ಥರ ಜೊತೆ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ, ಅತ್ತ ಕಾನೂನು ವ್ಯವಸ್ಥೆಗೆ ದಕ್ಕೆಯಾಗದಂತೆ ಹೋಗುವುದು ಒರ್ವ ಪಿಎಸ್ಐ ಜವಾಬ್ದಾರಿ.
    ಇಂತಹ ಜವಾಬ್ದಾರಿಯನ್ನು ಹಲವು ಪಿಎಸ್ಐಗಳು ಯಶಸ್ವಿಯಾಗಿ ನೋಡಿಕೊಂಡು ಹೋಗಿ ಈಗ ಸಿಪಿಐ ಗಳಾಗಿದ್ದಾರೆ. ಅಂತವರಿಗೆ ಸಮಾಜ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಅಂತಹ ಕೆಲವು ಅಧಿಕಾರಿಗಳ ಸಾಲಿಗೆ ಸೇರುತ್ತಾರೆ ಬಳಗಾನೂರು ಠಾಣಿಯ ಪೊಲೀಸ್ ಸಬ್ ಇನ್ಸಪೆಕ್ಟರ್ ಬಾಳನಗೌಡ.
ಡೈನಾಮಿಕ್ ಪಿಎಸ್ಐ ಬಾಳನಗೌಡ ಎಂ.ಎಸ್
    2007ರಲ್ಲಿ ಸೇವೆಗೆ ಸೇರಿಕೊಂಡ ಪೊಲೀಸ್ ಸಬ್ಇನ್ಸ್ಪೆಕ್ಟರ್ ಬಾಳನಗೌಡ ಸೇವೆಯ ಮೊದಲ ವರ್ಷವನ್ನು ಮಲೆನಾಡಿನ ಆಗುಂಬೆ ಠಾಣಿಯಲ್ಲಿ ಮುಗಿಸಿ, ಈಗ್ಗೆ 1ವರ್ಷದಿಂದ ಬಯಲುಸೀಮೆಯ ಬಳಗಾನೂರು ಠಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಮೂಲತಃ ಕೊಪ್ಪಳ ಜಿಲ್ಲೆ ಯಲಬುಗರ್ಾದವರಾದ ಇವರು, ಬಡತನ ಹಸಿವು ನಿರುದ್ಯೋಗವನ್ನು ಹತ್ತಿರದಿಂದ ಬಲ್ಲವರು. ಯಾಕೆಂದರೆ ಉತ್ತರ ಕನರ್ಾಟಕದ ಕೊಪ್ಪಳ ರಾಯಚೂರು ಜಿಲ್ಲೆಗಳು ಎಲ್ಲ ಸಂದರ್ಭಗಳಲ್ಲಿ ಬರಗಾಲ, ಹಸಿವು, ಆತ್ಮಹತ್ಯೆಗಳಲ್ಲಿ ಪ್ರಖ್ಯಾತಿಯನ್ನು ಹೊಂದಿರುವಂತಹವು. ಹಾಗಾಗಿ ಬಯಲುಸೀಮೆಯಲ್ಲಿ ವಾಸಿಸುವ ಜನರ ಕಷ್ಟಕಾರ್ಪಣ್ಯಗಳನ್ನು ಹೇಗಿರುತ್ತವೆ ಎಂಬುದರ ಬಗ್ಗೆ ಪಿಎಸ್ಐ ಬಾಳನಗೌಡ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.
    ಪಿ.ಎಸ್.ಐ ಬಾಳನಗೌಡ, ಖಡಕ್ ಆಗಿ ಭಾರತದ ಪರಮೋಚ್ಛ ಸಂವಿಧಾನ, ಭಾರತೀಯ ದಂಡ ಸಂಹಿತೆ ಸೇರಿದಂತೆ ಎಲ್ಲ ವಿಭಾಗದ ಕಾನೂನು ನಿಯಮಗಳನ್ನು ಕರಗತ ಮಾಡಿಕೊಂಡು, ಪ್ರತಿಯೊಬ್ಬರ ಜೊತೆಯಲ್ಲಿ ಉತ್ತಮ ಬಾಂಧವ್ಯದಿಂದ ಸ್ಪಂದಿಸುತ್ತಿರುವುದು ಆ ಸ್ಥಾನದ ಕಾರ್ಯದಕ್ಷತೆಯನ್ನು ಎತ್ತಿ ತೋರಿಸುವಂತಿದೆ.
ಸಹಜವಾಗಿ ಅನ್ಯಾಯಕ್ಕೊಳಪಟ್ಟವರು ಮಾತ್ರ ಪೊಲೀಸ್ ಠಾಣಿಯ ಮೆಟ್ಟಿಲು ಹತ್ತುತ್ತಾರೆ. ಅವರಿಗೆ ಇಲ್ಲಿಯೇ ನ್ಯಾಯ ಸಿಗಬಹುದೆಂಬ ನಂಬಿಕೆ, ಭರವಸೆಯೂ ಇರುತ್ತದೆ. ಆ ಭರವಸೆಯ ಬೆಳಕು ಅಭಿವೃದ್ದಿಗೊಳ್ಳುವುದು, ಅಲ್ಲಿನ ಅಧಿಕಾರಿಗಳು ನ್ಯಾಯಸಮ್ಮತವಾಗಿ ಸಮಸ್ಯೆಯನ್ನು ಬಗೆಹರಿಸಿ ಕೊಟ್ಟಾಗ ಮಾತ್ರ.
    ಕೆಲವೊಮ್ಮೆ ದೂರು ನೀಡಲು ಬಂದವನ ಅಹವಾಲು ಅಲ್ಲಿನ ಅಧಿಕಾರಿಗಳು ಸ್ವೀಕರಿಸದೇ ಹೋದರೆ, ದೂರುದಾರನೇ ಅಪರಾಧಿಯಾಗುತ್ತಾನೆ! ಅದು ಆ ಠಾಣಿಯ ಪಿಎಸ್ಐ ಆತನ ಜೊತೆ ಸಂವಹನ ಮಾಡುವ ಕ್ರಿಯೆಯಿಂದ ಗೊತ್ತಾಗುತ್ತದೆ.
ಮೊನ್ನೆ 70 ವಯಸ್ಸಿನ ವೃದ್ದನೊರ್ವ ಬಳಗಾನೂರು ಠಾಣಿಗೆ ಬಂದಿದ್ದ. ಆತನದು ಕೌಟುಂಬಿಕ ಸಮಸ್ಯೆ. ವೃದ್ಧ ತನ್ನ ಬದುಕಿನಲ್ಲಿ ಎಂದೂ ಪೊಲೀಸ್ ಠಾಣಿ ಹತ್ತದಾತ. ಏಕಾಏಕಿ ಕೌಟುಂಬಿಕ ಸಮಸ್ಯೆ ಮನೆಯಲ್ಲಿ ಬಗೆಹರಿಯದಿದ್ದರಿಂದ ಅನಿವಾರ್ಯವಾಗಿ ಪೊಲೀಸ್ ಠಾಣಿಯತ್ತ ಹೆಜ್ಜೆ ಹಾಕಿದ್ದ.
    ವೃದ್ಧ ಕಛೇರಿಗೆ ಹೋದಾಗ ಸಾಹೇಬರು ಇರದಿದ್ದರಿಂದ, ಪಿಎಸ್ಐ ಬರುವಿಕೆಯನ್ನು ಕಾಯುತ್ತ ಕುಳಿತಿದ್ದ. ನಂತರ ಬಂದ ಪಿಎಸ್ಐ ಅವರು ತಕ್ಷಣವೇ, 70ರ ವೃದ್ಧನ ದಯನೀಯ ಸ್ಥಿತಿಯನ್ನು ನೋಡಿ, ಹೇಳಿ ಯಜಮಾನ್ರೇ.. ಬಂದೀರಲ್ಲ.. ಏನು ವಿಷಯ.. ಎಂದು ಸೌಜನ್ಯದಿಂದ ಕೇಳತೊಡಗಿದಾಗ, ವೃದ್ಧನು ತನಗಾದ ಅನ್ಯಾಯವನ್ನು ವಿವರಿಸಿದ.
    ಅದಕ್ಕೆ ಕೂಡಲೇ ಪಿಎಸ್ಐ ಬಾಳನಗೌಡ ಇದೊಂದು ಕೌಟುಂಬಿಕ ಸಮಸ್ಯೆ. ನೀವು ನೇರವಾಗಿ ಕೋಟರ್್ಗೆ ಹೋಗಿ, ಸಂಬಂಧಪಟ್ಟ ದಾಖಲೆಗಳನ್ನು ಕೋಟರ್ಿಗೆ ಕೊಟ್ಟರೆ, ಅಲ್ಲಿ ಸರಿಯಾದ ನ್ಯಾಯ ಸಿಗುತ್ತದೆ ಎಂದು ಹೇಳಿ,, ವೃದ್ಧನ ಜೊತೆಯಲ್ಲಿ ಹೋಗಿದ್ದ ಮುಖಂಡರಿಗೆ ಹಿಂದೂ ಮ್ಯಾರೇಜ್ ಆ್ಯಕ್ಟ್ ಮತ್ತು ವೃದ್ದನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಇರುವ ಕಾನೂನಿನ ಹಲವು ನಿಯಮಗಳ ವಿವರಣಿಯನ್ನು ನೀಡಿ ಕಳುಹಿಸಿಕೊಟ್ಟರು.
    ಪಿಎಸ್ಐ ಮಾತಿನಿಂದ ಸಮಾಧಾನಪಟ್ಟ ವೃದ್ಧರು ಮತ್ತು ಮುಖಂಡರು ನಿಟ್ಟುಸಿರು ಬಿಡುತ್ತಾ, ಬಾಳನಗೌಡರ ವಾಕ್ಚಾತುರ್ಯ, ಅವರಲ್ಲಿರುವ ಜ್ಞಾನವನ್ನು ಕೊಂಡಾಡುತ್ತಾ ಊರಿಗೆ ಹೋದರು.
ಈ ಘಟನೆಯನ್ನು ಯಾಕಾಗಿ ಹೇಳಬೇಕಾಗಿದೆಯೆಂದರೆ, ಇಂದು ಅದೆಷ್ಟೋ ಕುಟುಂಬಗಳು, ತಮಗೆ ಪರಿವಿಲ್ಲದೇ, ಕಾನೂನಿನ ಮಹತ್ವ ಗೊತ್ತಿಲ್ಲದ ತಪ್ಪು ದಾರಿ ಹಿಡಿಯುತ್ತಿವೆ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೌಟುಂಬಿಕ ಸಮಸ್ಯೆಗಳೇ ಮುಖ್ಯವಾಗಿ ಹೋಗಿ ಐಕ್ಯತೆ, ಒಗ್ಗಟ್ಟು, ಸಂಬಂಧಗಳು ಎಂಬುದು ಹಳಸಿ ಹೋಗುತ್ತಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಉಳ್ಳವರು ಹಸನಗೊಳಿಸುವ ಬದಲಿಗೆ ಕಲುಷಿತಗೊಳಿಸುತ್ತಿದ್ದಾರೆ. ಒಂದೊಂದು ಕುಟುಂಬಗಳಲ್ಲಿ ಎರಡೆರಡು ಗುಂಪುಗಳಾಗಿ ಮಾನವೀಯತೆಯೆಂಬುದೇ ಸಮಾಜದಲ್ಲಿ ಇಲ್ಲವೆಂಬತೆ ಭಾಸವಾಗುತ್ತಿದೆ.
    ಪರಿಸ್ಥಿತಿ ಹೀಗಿದ್ದಾಗ ನ್ಯಾಯ ಹರಸಿ ಬಂದವನಿಗೆ ಸರಿಯಾದ ಮಾಗರ್ೋಪಾಯಗಳನ್ನು ಹೇಳಿ ಕೊಡುವುದು ಕಾನೂನು ಬಲ್ಲವರ ಕರ್ತವ್ಯ. ಅಂತಹ ಕಾರ್ಯವನ್ನು ಬಾಳನಗೌಡರು ಮಾಡುತ್ತಿರುವದಕ್ಕೆ ಮೇಲಿನ ಉದಾಹರಣಿ ನೀಡಬೇಕಾಗಿ ಬಂತು.
    ಸುತ್ತ ಹತ್ತಾರು ಹಳ್ಳಿಗಳಲ್ಲಿ ಗಸ್ತು ಹಾಕುತ್ತಾ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ದಕ್ಕೆಯಾಗದಂತೆ, ಸಿಬ್ಬಂದಿ ಹಾಗೂ ಜನರ ಬಳಿ ಉತ್ತಮ ಬಾಂಧವ್ಯವನ್ನಿಟ್ಟುಕೊಮಡು ಕೆಲಸ ಮಾಡುತ್ತಿರುವ ಪಿಎಸ್ಐ ಅವರು ಮೊನ್ನೆಯೊಂದು ಪ್ರಕರಣವನ್ನು ಭೇದಿಸಿದರು. ಅದು ಸಿನಿಮಿಯ ರೀತಿಯಲ್ಲಾದರೂ, ಅಚ್ಚರಿಪಡಿಸುವಂತಹದ್ದು.
    ಬಳಗಾನೂರು ಠಾಣಿಯೂ ಸುಮಾರು 40ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ! ಗುಡದನೂರು, ಆಯನೂರು ಗ್ರಾಮಗಳು ಕೂಡ ಇದೇ ಠಾಣಿಯ ವ್ಯಾಪ್ತಿಗೆ ಬರುತ್ತವೆ.
    ಇತ್ತೀಚಿಗೆ ಠಾಣಾ ವ್ಯಾಪ್ತಿಯಲ್ಲಿ 30 ತೊಲೆ ಬಂಗಾರ ಕಳುವಾದ ಪ್ರಕರಣ ದಾಖಲಾಗಿತ್ತು. ಕೂಡಲೇ ಕಳ್ಳತನ ಮಾಡಿದ ವ್ಯಕ್ತಿ ಕುರಿತು ಸುಳಿವನ್ನು ಪಡೆದು, ಕಾರ್ಯಪ್ರವೃತ್ತರಾದ ಪಿಎಸ್ಐ ಮೊಬೈಲ್ ಟವರ್ಗಳ ಸಹಾಯದಿಂದ ಕಳ್ಳನನ್ನು ದೂರದ ಮಂತ್ರಾಲಯದಲ್ಲಿ ಹಿಡಿದು ತಂದರು. ನಂತರ ಕಳ್ಳನಿಂದ 30 ತೊಲೆ ಬಂಗಾರ ವಶಪಡಿಸಿಕೊಂಡು, ದೂರು ನೀಡಿದ್ದ ವ್ಯಕ್ತಿಗಳಿಗೆ ಬಂಗಾರವನ್ನು ಮರಳಿ ಕೊಟ್ಟರು.
    ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿರುವ ಪಿಎಸ್ಐ ಬಾಳನಗೌಡರು ಮುಂದಿನ ಮುಂದಿನ ದಿನಗಳಲ್ಲಿ ಠಾಣಾ ವ್ಯಾಪ್ತಿಯಲ್ಲಿ ಮೋಟಾರ್ ಚಾಲನಾ ಪರವಾನಿಗೆ ಕ್ಯಾಂಪ್ನ್ನು ಆಯೋಜಿಸಿ, ಎಲ್ಲರಿಗೂ ಚಾಲನಾ ಪರವಾನಿಗೆ ಕೊಡಿಸುವ ಇರಾದೆಯನ್ನು ಹೊಂದಿದ್ದಾರೆ.
    ಇವರ ಸಾಮಾಜಿಕ ಕಳಕಳಿಯ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂದು ಪತ್ರಿಕೆ ಹಾರೈಸುತ್ತದೆ.

ಅರಿದಡೆ ಶರಣ, ಮರೆದಡೆ ಮಾನವ,

ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ,
ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿ ಎನಿಸಿತ್ತಯ್ಯಾ.
ಅರಿದಡೆ ಶರಣ, ಮರೆದಡೆ ಮಾನವ,
ಮರೆಯದೆ ಪೂಜಿಸು ಕೂಡಲಸಂಗನ.
-ಬಸವಣ್ಣನವರು
    ಮನ್ ಎಂದರೆ ವಿಚಾರ ಮಾಡು ಎಂದು ಅರ್ಥ. ವಿಚಾರ ಮಾಡುವ ಶಕ್ತಿಯುಳ್ಳವನು ಮಾನವನಾಗುತ್ತಾನೆ. ವಿಚಾರಗಳ ಉತ್ಪತ್ತಿಗೆ ಪ್ರಜ್ಞೆ ಮೂಲವಾಗಿರುತ್ತದೆ. ಪ್ರಜ್ಞೆಗೆ ವಸ್ತು ಮೂಲವಾಗಿರುತ್ತದೆ. ವಸ್ತು ಎಂದರೆ ಇಡೀ ವಿಶ್ವ. ಕಣ್ಣಿಗೆ ಕಾಣುವಂಥವುಗಳೆಲ್ಲ ವಸ್ತುಗಳೇ. ನಕ್ಷತ್ರ, ಸೂರ್ಯ, ಚಂದ್ರ, ಸಮುದ್ರ, ಅರಣ್ಯ, ಪಶು, ಪಕ್ಷಿ ಮತ್ತು ಮಾನವರು ಹೀಗೆ ಕಣ್ಣಿಗೆ ಕಾಣುವ ಎಲ್ಲವೂ ಮತ್ತು ಎಲ್ಲರೂ ನಿಜವಾದ ಅರ್ಥದಲ್ಲಿ ವಸ್ತುರೂಪದಲ್ಲೇ ಇದ್ದೇವೆ. ವಸ್ತುವಿನಿಂದ ಪ್ರಜ್ಞೆಯು ರೂಪ ತಾಳುತ್ತದೆ. ಆ ಪ್ರಜ್ಞೆಯು ವಿಶ್ವದ ಎಲ್ಲ ವಸ್ತುಗಳನ್ನು ಅವರವರ ಅನುಭವಕ್ಕೆ ತಕ್ಕಂತೆ ಅವರ ಮನದಲ್ಲಿ ಮೂಡಿಸುತ್ತದೆ.
    ಹೀಗೆ ಪ್ರಜ್ಞೆಯು ವಸ್ತುಗಳನ್ನು ಗ್ರಹಿಸುವ ಶಕ್ತಿಯಾಗಿದೆ. ಪ್ರಜ್ಞೆಯ ಅಸ್ತಿತ್ವಕ್ಕೆ ವಸ್ತು ಇರಲೇ ಬೇಕು. ವಸ್ತು ಇಲ್ಲದೆ ಮಾನವ ಕಲ್ಪಿಸಲಾರ. ನಿಜ ಅರ್ಥದಲ್ಲಿ ಕಲ್ಪನೆ ಎಂಬುದು ವಸ್ತು ಅಥವಾ ವಸ್ತುಗಳ ಸಹಾಯದಿಂದಲೇ ಮೂಡುವಂಥದ್ದು. ಸ್ಪಿಂಕ್ಸ್ ಕೆತ್ತಿದ ಶಿಲ್ಪಿ ಸಿಂಹವನ್ನು ಮತ್ತು ಹೆಣ್ಣನ್ನು ನೋಡಿದವನಾಗಿರುತ್ತಾನೆ. ಕರಿಯ ಬಣ್ಣ ಮತ್ತು ಹುಲಿಯ ಹಿನ್ನೆಲೆಯೊಂದಿಗೇನೆ ಕಲಾವಿದ ಕರಿಹುಲಿಯ ಚಿತ್ರವನ್ನು ಬಿಡಿಸಿರುತ್ತಾನೆ. ಹೆಣ್ಣು ಮತ್ತು ಮತ್ಸ್ಯದ ವಾಸ್ತವದ ಹಿನ್ನೆಲೆ ಇಲ್ಲದೆ ಮತ್ಸ್ಯಕನ್ಯೆ ಮೂಡಿ ಬರಲಾರಳು. ತೆಂಗಿನ ಮರವಿಲ್ಲದೆ ಕಲ್ಪವೃಕ್ಷವಿಲ್ಲ. ಗೋವು ಇಲ್ಲದೆ ಕಾಮಧೇನು ಇಲ್ಲ. ಆನೆ ಇಲ್ಲದೆ ಐರಾವತ ಇಲ್ಲ. ಹೀಗೆ ಮಾನವನ ಕಲ್ಪನೆಯ ಹಿಂದೆ ವಸ್ತುಗಳು ಅಡಕವಾಗಿವೆ.
    ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಭಿತ್ತಿಯಂಥ ಭೌತಿಕ ವಸ್ತುಗಳ ಸಹಾಯವಿಲ್ಲದೆ ಚಿತ್ರಗಳನ್ನು ಬಿಡಿಸಲಿಕ್ಕಾಗದು. ಭಿತ್ತಿಯು ಭೌತಿಕವಾದದ ಪ್ರತೀಕವಾದರೆ, ಚಿತ್ತಾರವು ಅನುಭಾವದ ಪ್ರತೀಕವಾಗಿದೆ. ಭಿತ್ತಿ ಇಲ್ಲದೆ ಚಿತ್ತಾರವಿಲ್ಲ. ಹಾಗೆಯೆ ಅನುಭವವಿಲ್ಲದೆ ಅನುಭಾವವಿಲ್ಲ. ವಸ್ತುವಿನ ಜೊತೆಗಿನ ಅನುಭವದ ಮೂಲಕ ಬರುವ ಪ್ರಜ್ಞೆಯು ಭೌತಿಕವಾದಕ್ಕೆ ಪುಷ್ಟಿ ಕೊಡುತ್ತದೆ. ಅನುಭವದ ಮೂಲಕ ಅನುಭಾವದ ಸೃಷ್ಟಿಯಾದಾಗ ಅರಿವು ಮೂಡುತ್ತದೆ. ಹೀಗೆ ಪ್ರಜ್ಞೆ ಎಂಬುದು ವಸ್ತುವಿನ ಗ್ರಹಿಕೆಯ ಮೂಲಕ ಬಂದರೆ, ಅರಿವು ಎಂಬುದು ವಸ್ತುವಿನ ಮೂಲ ಗ್ರಹಿಕೆಯ ಮೂಲಕ ಬರುವುದು. ಈ ಸತ್ಯವನ್ನು ಅರಿತವನೇ ಶರಣ. ಮರೆತವನೇ ಮಾನವ. ಅಂದರೆ ಗ್ರಹಿಕೆಯು ಸಾಮಾನ್ಯ ಮಾನವನ ಗುಣವಾಗಿದೆ. ವಸ್ತುವಿನ ಮೂಲಕ ಸೃಷ್ಟಿಯಾಗುವ ಪ್ರಜ್ಞೆಯೊಂದಿಗೆ ಭೌತಿಕ ಜೀವನ ಸಾಗುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬ ಮಾನವನು ಸಹಜವಾಗಿಯೆ ಇಂಥ ಪ್ರಜ್ಞೆಯಿಂದ ಬದುಕುತ್ತಾನೆ. ಆದರೆ ನೋಟದಿಂದ ಪ್ರಜ್ಞೆ ಪಡೆಯುವ ಶರಣ ಒಳನೋಟದಿಂದ ಅರಿವು ಪಡೆಯುತ್ತಾನೆ. ಹೀಗೆ ಒಳನೋಟವನ್ನು ಮರೆತವನು ಮಾನವನಾಗಿರುತ್ತಾನೆ. ಆದರೆ ಒಳನೋಟವನ್ನು ಅರಿತವನೇ ಶರಣನಾಗಿರುತ್ತಾನೆ ಎಂಬುದನ್ನು ಬಸವಣ್ಣನವರು ಮಾಮರ್ಿಕವಾಗಿ ಹೇಳಿದ್ದಾರೆ.
    ವಸ್ತು ಮತ್ತು ಮೂಲವಸ್ತುವಾದ ಚೈತನ್ಯ ಬೇರೆ ಬೇರೆ ಅಲ್ಲ. ಮ್ಯಾಟರ್ ಮತ್ತು ಎನಜರ್ಿ ಬೇರೆ ಬೇರೆ ಅಲ್ಲ ಎಂಬುದು ಇದರ ಅರ್ಥ. ವಿಜ್ಞಾನದ ಎನಜರ್ಿ ತತ್ತ್ವಜ್ಞಾನದಲ್ಲಿ ಸ್ಪಿರಿಟ್ ಎನಸಿಕೊಳ್ಳುತ್ತದೆ. ಮ್ಯಾಟರ್ ಎಂಬುದು ವಸ್ತುವಾದರೆ ಮೂಲವಸ್ತು ಎಂಬುದೇ ಎನಜರ್ಿ ಅಥವಾ ಸ್ಪಿರಿಟ್. ಮೂಲವಸ್ತುವಾದ ಚೈತನ್ಯದಿಂದಲೇ ವಸ್ತುವಿನ ನಿಮರ್ಾಣವಾಗಿದೆ ಎಂಬದರ ಕುರಿತು ಬಸವಣ್ಣನವರು ತಿಳಿಸಿದ್ದಾರೆ. ಇದನ್ನು ಅರಿತವನೇ ಶರಣನಾಗುತ್ತಾನೆ. ಈ ಜ್ಞಾನವಿಲ್ಲದವನು ಬರಿ ಮಾನವನಾಗಿ ಭೌತಿಕ ವಸ್ತುಗಳ ಜೊತೆಗೆ ಜೀವನ ಸಾಗಿಸುತ್ತಾನೆ.   
    ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ, ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿ ಎನಿಸಿತ್ತಯ್ಯಾ. ಎಂದು ಬಸವಣ್ಣನವರು ತಿಳಿಸಿದ್ದಾರೆ. ಉಣ್ಣುವ ಗಂಗಾಳವನ್ನು ಕಂಚಿನಂದ ಮಾಡುತ್ತಾರೆ. ಮುಖ ನೋಡಿಕೊಳ್ಳವ ಕನ್ನಡಿಯನ್ನು ಕೂಡ ಕಂಚಿನಿಂದಲೇ ತಯಾರಿಸುತ್ತಾರೆ. ಹೀಗೆ ಉಣ್ಣುವ ಗಂಗಾಳ ಮತ್ತು ಮುಖ ನೋಡಿಕೊಳ್ಳುವ ಕನ್ನಡಿ ಬೇರೆ ಬೇರೆ ವಸ್ತುಗಳಾದರೆ. ಮೂಲ ವಸ್ತುವಾದ ಕಂಚು ಒಂದೇ ಆಗಿದೆ. ಅಡುಗೆ ಮಾಡುವ ಪಾತ್ರೆಯನ್ನು ಕಂಚಿನಿಂದಲೇ ತಯಾರಿಸುತ್ತಾರೆ. ಅದೇ ರೀತಿ ಊಟದ ಗಂಗಾಳ ಕೂಡ ಕಂಚಿನಿಂದಲೇ ತಯಾರಿಸುತ್ತಾರೆ. ಅದೇ ಕಂಚಿನ ತುಕಡಿಯನ್ನು ತಿಕ್ಕಿ ತಿಕ್ಕಿ ನುಣುಪುಗೊಳಿಸಿ ಕನ್ನಡಿ ತಯಾರಿಸುತ್ತಾರೆ. ಹೀಗೆ ಮೂಲವಸ್ತುವಾದ ಕಂಚು ವಿವಿಧ ರೀತಿಯ ರೂಪು ಪಡೆಯುವುದರ ಮೂಲಕ ಅಡುಗೆ ಪಾತ್ರೆ, ಊಟದ ಗಂಗಾಳ ಮತ್ತು ಮುಖ ನೋಡಿಕೊಳ್ಳುವ ಕನ್ನಡಿಯಾಗುತ್ತದೆ.
    ಈ ರೀತಿ ಜಗತ್ತು ರೂಪುಗೊಳ್ಳುವ ಕ್ರಮವನ್ನು ಬಸವಣ್ಣನವರು ಅರುಹಿದ್ದಾರೆ. ಬಸವಣ್ಣನವರ ಸಿದ್ಧಾಂತ ಬಯಲು ಸಿದ್ಧಾಂತವಾಗಿದೆ. ಬಯಲಿನಂದ ಸೃಷ್ಟಿಯಾದುದು ಬಯಲಲ್ಲೇ ಲಯವಾಗುತ್ತದೆ. ಬಯಲು ಎಂಬುದೇ ಮೂಲವಸ್ತು. ಈ ಬಯಲನ್ನು ಶೂನ್ಯ ಅಥವಾ ಚೈತನ್ಯ ಎಂದೂ ಕರೆಯುತ್ತಾರೆ. ಇದುವೆ ಸ್ಪಿರಿಟ್ ಅಥವಾ ಎನಜರ್ಿ. ಈ ಮೂಲವಸ್ತುವಿನಿಂದಲೇ ನಕ್ಷತ್ರಗಳು, ಸೂರ್ಯ, ಚಂದ್ರ, ಪೃಥ್ವಿ ಮುಂತಾದ ಆಕಾಶಕಾಯಗಳ ನಿಮರ್ಾಣವಾಗಿದೆ. ಮಾನವರು, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಗಿಡಮರಬಳ್ಳಿಗಳು, ನದಿ ಮತ್ತು ಸಮುದ್ರಗಳು ಹೀಗೆ ಪೃಥ್ವಿಯಲ್ಲಿ ಕಾಣುವುದೆಲ್ಲವೂ ಪೃಥ್ವಿಯಿಂದಲೇ ಜನ್ಮ ತಾಳಿದ್ದಾಗಿರುತ್ತವೆ. ಆದರೆ ಪೃಥ್ವಿ ಸಮೇತ ಇಡೀ ವಿಶ್ವವು ಬಯಲೆಂಬ ಚೈತನ್ಯದಿಂದ ಸೃಷ್ಟಿಯಾಗಿದೆ. ಸೂರ್ಯ, ಚಂದ್ರ ತಾರೆಗಳ ಸಮೇತ ಕಾಣುವುದೆಲ್ಲವೂ ಒಂದಿಲ್ಲ ಒಂದು ದಿನ ಲಯವಾಗಿ ಮೂಲವಸ್ತುವಾದ ಚೈತನ್ಯದಲ್ಲಿ ಒಂದಾಗಲೇ ಬೇಕು. ಇದನ್ನು ಅರಿತವನೇ ಶರಣ. ಮರೆತವನೇ ಮಾನವ. ಆದ್ದರಿಂದಲೇ ಮರೆಯದೆ ಪೂಜಿಸು ಕೂಡಲಸಂಗನ ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ಪೂಜೆಯು ಮೂಲವಸ್ತುವನ್ನು ಅರಿತುಕೊಳ್ಳುವ ಕ್ರಮವಾಗಿದೆ.
ಬಯಲ ರೂಪ ಮಾಡಬಲ್ಲಾತನೆ ಶರಣನು;
ಆ ರೂಪ ಬಯಲು ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು     ಶರಣನೆಂಬೆ?
ಆ ರೂಪ ಬಯಲ ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ.
    ಎಂದು ಬಸವಣ್ಣನವರು ಹೇಳುವಲ್ಲಿ ಈ ಅರಿವಿನ ವಿರಾಟ ಸ್ವರೂಪವನ್ನು ತೋರಿಸಿಕೊಟ್ಟಿದ್ದಾರೆ. ಚೈತನ್ಯದಿಂದ ವಸ್ತುವಾಗಿರುವುದನ್ನು ಅರಿತವನೇ ಶರಣ. ಆ ವಸ್ತು ಲಯವಾಗಿ ಮತ್ತೆ ಚೈತನ್ಯವಾಗುತ್ತದೆ ಎಂಬುದನ್ನು ಅರಿತವನೇ ಲಿಂಗತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡ ಲಿಂಗಾನುಭಾವಿ. ಚೈತನ್ಯವನ್ನು ವಸ್ತುರೂಪದಲ್ಲಿ ಕಂಡುಕೊಂಡು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವಾತನೇ ಶರಣ. ಶಿವ ಎಂಬುದೇ ಚೈತನ್ಯ. ಆ ಚೈತನ್ಯದಿಂದ ರೂಪ ತಳೆದ ಸಕಲ ಜೀವಾತ್ಮರು ಶಿವಸ್ವರೂಪಿಗಳೇ ಆಗಿದ್ದಾರೆ. ಆದ್ದರಿಂದ ಲೋಕದಲ್ಲಿ ಸರ್ವಸಮತ್ವವನ್ನು ಅರಿತವನು ಶರಣ ಎಂದು ಕರೆಯಿಸಿಕೊಳ್ಳುವನು. ಆತ ಹೀಗೆ ಬದುಕನ್ನು ಅಥರ್ೈಸಿಕೊಳ್ಳದಿದ್ದರೆ ಅವನಗೆ ಶರಣನೆಂದು ಕರೆಯಲಿಕ್ಕಾಗದು. ಈ ವಿಶ್ವ ಮತ್ತೆ ತನ್ನ ರೂಪವನ್ನು ಕಳೆದುಕೊಂಡು ಬಯಲಾಗುವುದು ಎಂಬ ಅಂತಿಮ ಸತ್ಯವನ್ನು ಅರಿತ ಶರಣನೇ ಲಿಂಗಾನುಭಾವಿಯಾಗುತ್ತಾನೆ. ಲಿಂಗತತ್ತ್ವವು ವಿಶ್ವದ ಆದಿ ಮತ್ತು ಅಂತ್ಯದ ಪರಿಜ್ಞಾನವನ್ನು ಕೊಡುವ ತತ್ತ್ವವಾಗಿದೆ. ಇವುಗಳ ಮಧ್ಯೆ ಇರುವ ಬದುಕನ್ನು ಲಿಂಗಾಂಗ ಸಾಮರಸ್ಯದೊಂದಿಗೆ ಅರ್ಥಪೂರ್ಣಗೊಳಿಸುವ ಕ್ರಮವನ್ನು ಲಿಂಗತತ್ತ್ವ ಸಾರುತ್ತದೆ. ಲಿಂಗವೇ ಚೈತನ್ಯ. ಅಂಗವೇ ನಮ್ಮ ದೇಹ ಎಂಬ ವಸ್ತು. ಇವುಗಳ ಮಧ್ಯದ ಅಂದರೆ ಶಿವ ಮತ್ತು ಜೀವರ ಮಧ್ಯದ ಸಾಮರಸ್ಯವೇ ಲಿಂಗಾಂಗ ಸಾಮರಸ್ಯ. ಹೀಗೆ ಲಿಂಗಾಂಗ ಸಾಮರಸ್ಯ ಹೊಂದಿದವರು ಪ್ರಸಾದಕಾಯರಾಗುತ್ತಾರೆ. ಇಂಥ ಲಿಂಗಾಂಗ ಸಾಮರಸ್ಯವನ್ನು ಹೊಂದಿದವರೇ ಲಿಂಗಾನುಭಾವಿಗಳು. ಎಲ್ಲವೂ ಲಯವಾಗುವ ಅಂತಿಮ ಸತ್ಯವನ್ನು ಅರಿಯಲು ಲಿಂಗಾಂಗಸಾಮರಸ್ಯ ಅವಶ್ಯವಾಗಿದೆ. ರೂಪ ಲಯವಾಗಿ ಬಯಲಾಗುವ ಅಂತಿಮ ಸತ್ಯವನ್ನು ಅರಿಯದವರು ಲಿಂಗಾನುಭಾವಿಗಳಾಗಲು ಸಾಧ್ಯವಿಲ್ಲ. ಇಂಥ ಬಯಲು ಮತ್ತು ರೂಪ ಒಂದಾಗಿರುವುದನ್ನು ಅರಿತುಕೊಂಡಾಗ ಶಿವ ಮತ್ತು ಜೀವರಲ್ಲಿ ಅಭೇದ್ಯ ಉಂಟಾಗುವುದು. ಈ ಸತ್ಯವನ್ನು ಅರಿತುಕೊಂಡವರು ಶರಣರಾಗುತ್ತಾರೆ; ಮರೆತವರು ಮಾನವರಾಗಿ ಸುಮ್ಮನೆ ಬದುಕಿ ಸತ್ತುಹೋಗುತ್ತಾರೆ.

ರಂಜಾನ್ ದಗರ್ಾ
ನಿದರ್ೇಶಕ,
ವಚನ ಅಧ್ಯಯನ ಕೇಂದ್ರ, ಬಸವ ಸೇವಾ ಪ್ರತಿಷ್ಠಾನ ಶರಣ ಉದ್ಯಾನ, ಶರಣ ನಗರ ಬೀದರ -585401
ಮೊಬೈಲ್: 9242470384

ನಂದಿಕೋಲ್ಮಠರಿಗೆ ರಾಜ್ಯಪ್ರಶಸ್ತಿಯ ಗರಿ

ಕಳೆದ 16 ವರ್ಷಗಳಿಂದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತ ಬಂದಿರುವ ವೃತ್ತಿಯಿಂದ ವಕೀಲರಾದ ಬಿ.ಎ. ನಂದಿಕೋಲಮಠ ಅವರು ತಮ್ಮದೆ ಆದ ಬರವಣಿಗೆಯ ಶೈಲಿಯನ್ನು ಹೊಂದಿದ್ದಾರೆ. ಅವರ ದಿಟ್ಟತನ ಹಾಗೂ ವೈಜ್ಞಾನಿಕ ವರದಿಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಹಲವು ಸಂಘಸಂಸ್ಥೆಗಳು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
    ಗ್ರಾಮೀಣ ವರದಿಗಾರಿಕೆ, ನಮ್ಮ ಊರು ನಮ್ಮ ಜಿಲ್ಲೆ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಸುದ್ದಿಗಳನ್ನು ಬರೆಯುತ್ತಾ ಜನರ ಮನದಲ್ಲಿದ್ದಾರೆ. ಅವರ ಬರವಣಿಗೆಯ ಶೈಲಿಗೆ ಸಾಕಷ್ಟು ಓದುಗರು ಮಾರುಹೋಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮೀಣ, ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಮಾಡಿದ್ದಾರೆ. ಅವರ ನಿಷ್ಟುರತೆಗೆ ಸಂದ ಗೌರವವಾಗಿ ಈಗ ಮತ್ತೊಮ್ಮೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
    ಒಂದು ಬಾರಿ ಕ್ಯಾಮೆರಾ ಕ್ಲಿಕ್ ಆದರೆ ಅದಕ್ಕೆ ಸಂಬಂಧಿಸಿದ ಸುದ್ದಿ ಸಂಗ್ರಹಿಸಿ ವರದಿ ಮಾಡುವ ಅವರ ಕಠಿಣ ಪರಿಶ್ರಮಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯ ಗರಿ ದಿಟ್ಟತನಕ್ಕೆ ಸಂದ ಗೌರವವಾಗಿದೆ ಎಂಬುದು ಅವರ ಸ್ನೇಹಿತರ ನುಡಿ.
    1966ರಲ್ಲಿ ಲಿಂಗಸುಗೂರ ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ವೈದ್ಯ ಅಮರಯ್ಯ ನಂದಿಕೋಲಮಠ, ಸಂಗನಬಸಮ್ಮ ಅವರ ಮಗನಾಗಿ ಬಸವರಾಜು ಬೆಳೆದು ನಿಂತಿದ್ದಾರೆ. ಅವರ ತಂದೆಯವರ ಸಮಯ ಪ್ರಜ್ಞೆ, ನಿಷ್ಠುರತೆಗಳನ್ನೆ ಮೈಗೂಡಿಸಿಕೊಂಡು ಬಂದಿರುವ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಮುಗಿಸಿ, ಲಿಂಗಸುಗೂರಿನಲ್ಲಿ ಕಾಲೇಜು ಶಿಕ್ಷಣ ಪಡೆದು, ಕಾನೂನು ಪದವಿಯನ್ನು ಗುಲಬರ್ಗ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
    1992ರಲ್ಲಿ ಲಿಂಗಸುಗೂರಿನಲ್ಲಿ ಹಿರಿಯ ನ್ಯಾಯವಾದಿ ಎಸ್.ಪಿ. ಪಾಟೀಲ ಅವರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದರು. 1994-95 ರಿಂದ ಹಲವು ಸ್ಥಳೀಯ ಪತ್ರಿಕೆಗಳಿಗೆ ಹವ್ಯಾಸಿ ಪತ್ರಕರ್ತರಾಗಿ ಕೆಲಸ ಮಾಡುತ್ತಾ, 1997 ರಿಂದ ರಾಜ್ಯಮಟ್ಟದ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಪ್ರಜಾವಾಣಿಯಲ್ಲಿ ವರದಿಗಾರರಾಗಿ ನೇಮಕಗೊಂಡರು. ಪ್ರಜಾವಾಣಿ ಪತ್ರಿಕೆಯ ಸಿದ್ಧಾಂತಗಳನ್ನು ಮನಸಾರೆ ಒಪ್ಪಿಕೊಂಡ ಅವರು ಜನಸಾಮಾನ್ಯರ ಧ್ವನಿಯಾಗಿ, ಸಮಸ್ಯೆಗಳನ್ನು ಹುಡುಕಿಕೊಂಡು ಹೋಗುತ್ತಾ, ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮೂಲಕ ತಮ್ಮ ಪತ್ರಿಕಾ ವರದಿಗಾರರ ವೃತ್ತಿಯನ್ನು ಆರಂಭಿಸಿದರು. ಕೆಲವೊಂದು ಬಾರಿ ತಮ್ಮ ನೈಜ ವರದಿಗಳಿಂದ ಕೆಲವು ಪ್ರತಿಷ್ಠಿತರ ಕೆಂಗೆಣ್ಣಿಗೆ ಗುರಿಯಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗಗಳು ಬಂದವು.
    ಯಾವುದೇ ಒಂದು ಸುದ್ದಿ ಮಾಡಬೇಕಾದರೆ ಸ್ವತಃ ಆ ಸ್ಥಳಗಳಿಗೆ ಭೇಟಿ ನೀಡಿ, ಖುದ್ದಾಗಿ ವರದಿ ಸಂಗ್ರಹಿಸಿ ಜನಸಾಮಾನ್ಯರಿಗೆ ತಿಳಿಯುವ ಹಾಗೆ ವರದಿ ಮಾಡುತ್ತ ಬಂದಿರುವ ಇವರಿಗೆ ಕನರ್ಾಟಕ ರಕ್ಷಣಾ ವೇದಿಕೆ, ಕನರ್ಾಟಕ ದಲಿತ ಸಂಘರ್ಷ ಸಮಿತಿ, ಟಿಪ್ಪುಸುಲ್ತಾನ ಸಂಘಟನೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಇವರ ವರದಿಗಾರಿಕೆಯನ್ನು  ಮೆಚ್ಚಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸುತ್ತಾ ಬಂದಿವೆ. ಪತ್ರಿಕೋದ್ಯಮದ ಬಗ್ಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉಪನ್ಯಾಸ ನೀಡುವ ಮೂಲಕ ವಾಕ್ಚಾತುರ್ಯತೆಯಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ.
    ಕನರ್ಾಟಕ ಮೀಡಿಯಾ ಆ್ಯಂಡ್ ನ್ಯೂಸ್ ಸೆಂಟರ್ ಪತ್ರಕರ್ತರ ವೇದಿಕೆ ಪ್ರತಿ ವರ್ಷ ಕೊಡ ಮಾಡುವ "ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ"ಗೆ ಪ್ರಸಕ್ತ ವರ್ಷ ಬಿ.ಎ ನಂದಿಕೋಲಮಠ ಅವರನ್ನು ಆಯ್ಕೆ ಮಾಡಿ, ಜುಲೈ 1ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.