Friday, July 6, 2012

ಡೈನಾಮಿಕ್ ಪಿಎಸ್ಐ ಬಾಳನಗೌಡ

 ಇಡೀ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಒತ್ತಡವಿರುವ ಹುದ್ದೆಯೆಂದರೆ, ಅದು ಪೊಲೀಸ್ ಪೊಲೀಸ್ ಸಬ್ ಇನ್ಸಪೆಕ್ಟರ್ (ಪಿಎಸ್ಐ) ಹುದ್ದೆ.. ಪೊಲೀಸ್ ಸ್ಟೇಷನ್ನಿನಲ್ಲಿ ಒರ್ವ ಪಿಸಿ ಯಾಗಿದ್ದರೆ, ಕಛೇರಿಯ ಕೆಲಸವನ್ನು ನೆಮ್ಮದಿಯಿಂದ ಮಾಡಿಕೊಂಡು ಹೋಗಬಹುದು! ಸಿಪಿಐ ಅಥವಾ ಅದರ ಮೇಲಿನ ಅಧಿಕಾರಿಗಳಾದರೆ, ಇನ್ನಷ್ಟು ನೆಮ್ಮದಿ. (ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿ) ಆದರೆ, ಪಿಎಸ್ಐ ಆಗಿಬಿಟ್ಟರೆ 24 ಗಂಟೆ ಸಭೆ, ಗಸ್ತು, ಗಲಾಟೆ, ಅಪಘಾತ, ಬಂದೋಬಸ್ತ್, ಕೋಟರ್ು ಅಂತೆಲ್ಲ ಕಳೆಯಬೇಕಾಗುತ್ತದೆ. ಜೊತೆಗೆ ಯಾವಾಗಾದರೂ, ಒಮ್ಮೆ ಮೈಕ್ 1,2 ಹಾಗೂ 3 ಸಾಹೇಬರು ಕಛೇರಿಗೆ ಭೇಟಿ ನೀಡುತ್ತಾರೆಂದರೆ, ಅವರು ಬಂದು ಹೋಗುವ ತನಕ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಬೇಕು. ಇನ್ನೂ ಪೊಲೀಸ್ ಠಾಣಿ ಪ್ರಮುಖ ನಗರಗಳಿಗೆ ಹಾದು ಹೋಗುವ ರಸ್ತೆಯಲ್ಲಿತ್ತೆಂದರೆ, ಕಥೆಯೇ ಮುಗಿಯಿತು. ಇಷ್ಟೇಲ್ಲ ಕರ್ತವ್ಯವನ್ನು ನಿರ್ವಹಿಸಿಕೊಂಡು ಜನಸಾಮಾನ್ಯರು, ಮುಖಂಡರು, ರಾಜಕಾರಣಿಗಳು ಹಾಗೂ ಗ್ರಾಮಸ್ಥರ ಜೊತೆ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೇ, ಅತ್ತ ಕಾನೂನು ವ್ಯವಸ್ಥೆಗೆ ದಕ್ಕೆಯಾಗದಂತೆ ಹೋಗುವುದು ಒರ್ವ ಪಿಎಸ್ಐ ಜವಾಬ್ದಾರಿ.
    ಇಂತಹ ಜವಾಬ್ದಾರಿಯನ್ನು ಹಲವು ಪಿಎಸ್ಐಗಳು ಯಶಸ್ವಿಯಾಗಿ ನೋಡಿಕೊಂಡು ಹೋಗಿ ಈಗ ಸಿಪಿಐ ಗಳಾಗಿದ್ದಾರೆ. ಅಂತವರಿಗೆ ಸಮಾಜ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಅಂತಹ ಕೆಲವು ಅಧಿಕಾರಿಗಳ ಸಾಲಿಗೆ ಸೇರುತ್ತಾರೆ ಬಳಗಾನೂರು ಠಾಣಿಯ ಪೊಲೀಸ್ ಸಬ್ ಇನ್ಸಪೆಕ್ಟರ್ ಬಾಳನಗೌಡ.
ಡೈನಾಮಿಕ್ ಪಿಎಸ್ಐ ಬಾಳನಗೌಡ ಎಂ.ಎಸ್
    2007ರಲ್ಲಿ ಸೇವೆಗೆ ಸೇರಿಕೊಂಡ ಪೊಲೀಸ್ ಸಬ್ಇನ್ಸ್ಪೆಕ್ಟರ್ ಬಾಳನಗೌಡ ಸೇವೆಯ ಮೊದಲ ವರ್ಷವನ್ನು ಮಲೆನಾಡಿನ ಆಗುಂಬೆ ಠಾಣಿಯಲ್ಲಿ ಮುಗಿಸಿ, ಈಗ್ಗೆ 1ವರ್ಷದಿಂದ ಬಯಲುಸೀಮೆಯ ಬಳಗಾನೂರು ಠಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಮೂಲತಃ ಕೊಪ್ಪಳ ಜಿಲ್ಲೆ ಯಲಬುಗರ್ಾದವರಾದ ಇವರು, ಬಡತನ ಹಸಿವು ನಿರುದ್ಯೋಗವನ್ನು ಹತ್ತಿರದಿಂದ ಬಲ್ಲವರು. ಯಾಕೆಂದರೆ ಉತ್ತರ ಕನರ್ಾಟಕದ ಕೊಪ್ಪಳ ರಾಯಚೂರು ಜಿಲ್ಲೆಗಳು ಎಲ್ಲ ಸಂದರ್ಭಗಳಲ್ಲಿ ಬರಗಾಲ, ಹಸಿವು, ಆತ್ಮಹತ್ಯೆಗಳಲ್ಲಿ ಪ್ರಖ್ಯಾತಿಯನ್ನು ಹೊಂದಿರುವಂತಹವು. ಹಾಗಾಗಿ ಬಯಲುಸೀಮೆಯಲ್ಲಿ ವಾಸಿಸುವ ಜನರ ಕಷ್ಟಕಾರ್ಪಣ್ಯಗಳನ್ನು ಹೇಗಿರುತ್ತವೆ ಎಂಬುದರ ಬಗ್ಗೆ ಪಿಎಸ್ಐ ಬಾಳನಗೌಡ ಸಂಪೂರ್ಣ ಮಾಹಿತಿ ಹೊಂದಿದ್ದಾರೆ.
    ಪಿ.ಎಸ್.ಐ ಬಾಳನಗೌಡ, ಖಡಕ್ ಆಗಿ ಭಾರತದ ಪರಮೋಚ್ಛ ಸಂವಿಧಾನ, ಭಾರತೀಯ ದಂಡ ಸಂಹಿತೆ ಸೇರಿದಂತೆ ಎಲ್ಲ ವಿಭಾಗದ ಕಾನೂನು ನಿಯಮಗಳನ್ನು ಕರಗತ ಮಾಡಿಕೊಂಡು, ಪ್ರತಿಯೊಬ್ಬರ ಜೊತೆಯಲ್ಲಿ ಉತ್ತಮ ಬಾಂಧವ್ಯದಿಂದ ಸ್ಪಂದಿಸುತ್ತಿರುವುದು ಆ ಸ್ಥಾನದ ಕಾರ್ಯದಕ್ಷತೆಯನ್ನು ಎತ್ತಿ ತೋರಿಸುವಂತಿದೆ.
ಸಹಜವಾಗಿ ಅನ್ಯಾಯಕ್ಕೊಳಪಟ್ಟವರು ಮಾತ್ರ ಪೊಲೀಸ್ ಠಾಣಿಯ ಮೆಟ್ಟಿಲು ಹತ್ತುತ್ತಾರೆ. ಅವರಿಗೆ ಇಲ್ಲಿಯೇ ನ್ಯಾಯ ಸಿಗಬಹುದೆಂಬ ನಂಬಿಕೆ, ಭರವಸೆಯೂ ಇರುತ್ತದೆ. ಆ ಭರವಸೆಯ ಬೆಳಕು ಅಭಿವೃದ್ದಿಗೊಳ್ಳುವುದು, ಅಲ್ಲಿನ ಅಧಿಕಾರಿಗಳು ನ್ಯಾಯಸಮ್ಮತವಾಗಿ ಸಮಸ್ಯೆಯನ್ನು ಬಗೆಹರಿಸಿ ಕೊಟ್ಟಾಗ ಮಾತ್ರ.
    ಕೆಲವೊಮ್ಮೆ ದೂರು ನೀಡಲು ಬಂದವನ ಅಹವಾಲು ಅಲ್ಲಿನ ಅಧಿಕಾರಿಗಳು ಸ್ವೀಕರಿಸದೇ ಹೋದರೆ, ದೂರುದಾರನೇ ಅಪರಾಧಿಯಾಗುತ್ತಾನೆ! ಅದು ಆ ಠಾಣಿಯ ಪಿಎಸ್ಐ ಆತನ ಜೊತೆ ಸಂವಹನ ಮಾಡುವ ಕ್ರಿಯೆಯಿಂದ ಗೊತ್ತಾಗುತ್ತದೆ.
ಮೊನ್ನೆ 70 ವಯಸ್ಸಿನ ವೃದ್ದನೊರ್ವ ಬಳಗಾನೂರು ಠಾಣಿಗೆ ಬಂದಿದ್ದ. ಆತನದು ಕೌಟುಂಬಿಕ ಸಮಸ್ಯೆ. ವೃದ್ಧ ತನ್ನ ಬದುಕಿನಲ್ಲಿ ಎಂದೂ ಪೊಲೀಸ್ ಠಾಣಿ ಹತ್ತದಾತ. ಏಕಾಏಕಿ ಕೌಟುಂಬಿಕ ಸಮಸ್ಯೆ ಮನೆಯಲ್ಲಿ ಬಗೆಹರಿಯದಿದ್ದರಿಂದ ಅನಿವಾರ್ಯವಾಗಿ ಪೊಲೀಸ್ ಠಾಣಿಯತ್ತ ಹೆಜ್ಜೆ ಹಾಕಿದ್ದ.
    ವೃದ್ಧ ಕಛೇರಿಗೆ ಹೋದಾಗ ಸಾಹೇಬರು ಇರದಿದ್ದರಿಂದ, ಪಿಎಸ್ಐ ಬರುವಿಕೆಯನ್ನು ಕಾಯುತ್ತ ಕುಳಿತಿದ್ದ. ನಂತರ ಬಂದ ಪಿಎಸ್ಐ ಅವರು ತಕ್ಷಣವೇ, 70ರ ವೃದ್ಧನ ದಯನೀಯ ಸ್ಥಿತಿಯನ್ನು ನೋಡಿ, ಹೇಳಿ ಯಜಮಾನ್ರೇ.. ಬಂದೀರಲ್ಲ.. ಏನು ವಿಷಯ.. ಎಂದು ಸೌಜನ್ಯದಿಂದ ಕೇಳತೊಡಗಿದಾಗ, ವೃದ್ಧನು ತನಗಾದ ಅನ್ಯಾಯವನ್ನು ವಿವರಿಸಿದ.
    ಅದಕ್ಕೆ ಕೂಡಲೇ ಪಿಎಸ್ಐ ಬಾಳನಗೌಡ ಇದೊಂದು ಕೌಟುಂಬಿಕ ಸಮಸ್ಯೆ. ನೀವು ನೇರವಾಗಿ ಕೋಟರ್್ಗೆ ಹೋಗಿ, ಸಂಬಂಧಪಟ್ಟ ದಾಖಲೆಗಳನ್ನು ಕೋಟರ್ಿಗೆ ಕೊಟ್ಟರೆ, ಅಲ್ಲಿ ಸರಿಯಾದ ನ್ಯಾಯ ಸಿಗುತ್ತದೆ ಎಂದು ಹೇಳಿ,, ವೃದ್ಧನ ಜೊತೆಯಲ್ಲಿ ಹೋಗಿದ್ದ ಮುಖಂಡರಿಗೆ ಹಿಂದೂ ಮ್ಯಾರೇಜ್ ಆ್ಯಕ್ಟ್ ಮತ್ತು ವೃದ್ದನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಇರುವ ಕಾನೂನಿನ ಹಲವು ನಿಯಮಗಳ ವಿವರಣಿಯನ್ನು ನೀಡಿ ಕಳುಹಿಸಿಕೊಟ್ಟರು.
    ಪಿಎಸ್ಐ ಮಾತಿನಿಂದ ಸಮಾಧಾನಪಟ್ಟ ವೃದ್ಧರು ಮತ್ತು ಮುಖಂಡರು ನಿಟ್ಟುಸಿರು ಬಿಡುತ್ತಾ, ಬಾಳನಗೌಡರ ವಾಕ್ಚಾತುರ್ಯ, ಅವರಲ್ಲಿರುವ ಜ್ಞಾನವನ್ನು ಕೊಂಡಾಡುತ್ತಾ ಊರಿಗೆ ಹೋದರು.
ಈ ಘಟನೆಯನ್ನು ಯಾಕಾಗಿ ಹೇಳಬೇಕಾಗಿದೆಯೆಂದರೆ, ಇಂದು ಅದೆಷ್ಟೋ ಕುಟುಂಬಗಳು, ತಮಗೆ ಪರಿವಿಲ್ಲದೇ, ಕಾನೂನಿನ ಮಹತ್ವ ಗೊತ್ತಿಲ್ಲದ ತಪ್ಪು ದಾರಿ ಹಿಡಿಯುತ್ತಿವೆ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಕೌಟುಂಬಿಕ ಸಮಸ್ಯೆಗಳೇ ಮುಖ್ಯವಾಗಿ ಹೋಗಿ ಐಕ್ಯತೆ, ಒಗ್ಗಟ್ಟು, ಸಂಬಂಧಗಳು ಎಂಬುದು ಹಳಸಿ ಹೋಗುತ್ತಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಉಳ್ಳವರು ಹಸನಗೊಳಿಸುವ ಬದಲಿಗೆ ಕಲುಷಿತಗೊಳಿಸುತ್ತಿದ್ದಾರೆ. ಒಂದೊಂದು ಕುಟುಂಬಗಳಲ್ಲಿ ಎರಡೆರಡು ಗುಂಪುಗಳಾಗಿ ಮಾನವೀಯತೆಯೆಂಬುದೇ ಸಮಾಜದಲ್ಲಿ ಇಲ್ಲವೆಂಬತೆ ಭಾಸವಾಗುತ್ತಿದೆ.
    ಪರಿಸ್ಥಿತಿ ಹೀಗಿದ್ದಾಗ ನ್ಯಾಯ ಹರಸಿ ಬಂದವನಿಗೆ ಸರಿಯಾದ ಮಾಗರ್ೋಪಾಯಗಳನ್ನು ಹೇಳಿ ಕೊಡುವುದು ಕಾನೂನು ಬಲ್ಲವರ ಕರ್ತವ್ಯ. ಅಂತಹ ಕಾರ್ಯವನ್ನು ಬಾಳನಗೌಡರು ಮಾಡುತ್ತಿರುವದಕ್ಕೆ ಮೇಲಿನ ಉದಾಹರಣಿ ನೀಡಬೇಕಾಗಿ ಬಂತು.
    ಸುತ್ತ ಹತ್ತಾರು ಹಳ್ಳಿಗಳಲ್ಲಿ ಗಸ್ತು ಹಾಕುತ್ತಾ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ದಕ್ಕೆಯಾಗದಂತೆ, ಸಿಬ್ಬಂದಿ ಹಾಗೂ ಜನರ ಬಳಿ ಉತ್ತಮ ಬಾಂಧವ್ಯವನ್ನಿಟ್ಟುಕೊಮಡು ಕೆಲಸ ಮಾಡುತ್ತಿರುವ ಪಿಎಸ್ಐ ಅವರು ಮೊನ್ನೆಯೊಂದು ಪ್ರಕರಣವನ್ನು ಭೇದಿಸಿದರು. ಅದು ಸಿನಿಮಿಯ ರೀತಿಯಲ್ಲಾದರೂ, ಅಚ್ಚರಿಪಡಿಸುವಂತಹದ್ದು.
    ಬಳಗಾನೂರು ಠಾಣಿಯೂ ಸುಮಾರು 40ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ! ಗುಡದನೂರು, ಆಯನೂರು ಗ್ರಾಮಗಳು ಕೂಡ ಇದೇ ಠಾಣಿಯ ವ್ಯಾಪ್ತಿಗೆ ಬರುತ್ತವೆ.
    ಇತ್ತೀಚಿಗೆ ಠಾಣಾ ವ್ಯಾಪ್ತಿಯಲ್ಲಿ 30 ತೊಲೆ ಬಂಗಾರ ಕಳುವಾದ ಪ್ರಕರಣ ದಾಖಲಾಗಿತ್ತು. ಕೂಡಲೇ ಕಳ್ಳತನ ಮಾಡಿದ ವ್ಯಕ್ತಿ ಕುರಿತು ಸುಳಿವನ್ನು ಪಡೆದು, ಕಾರ್ಯಪ್ರವೃತ್ತರಾದ ಪಿಎಸ್ಐ ಮೊಬೈಲ್ ಟವರ್ಗಳ ಸಹಾಯದಿಂದ ಕಳ್ಳನನ್ನು ದೂರದ ಮಂತ್ರಾಲಯದಲ್ಲಿ ಹಿಡಿದು ತಂದರು. ನಂತರ ಕಳ್ಳನಿಂದ 30 ತೊಲೆ ಬಂಗಾರ ವಶಪಡಿಸಿಕೊಂಡು, ದೂರು ನೀಡಿದ್ದ ವ್ಯಕ್ತಿಗಳಿಗೆ ಬಂಗಾರವನ್ನು ಮರಳಿ ಕೊಟ್ಟರು.
    ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿರುವ ಪಿಎಸ್ಐ ಬಾಳನಗೌಡರು ಮುಂದಿನ ಮುಂದಿನ ದಿನಗಳಲ್ಲಿ ಠಾಣಾ ವ್ಯಾಪ್ತಿಯಲ್ಲಿ ಮೋಟಾರ್ ಚಾಲನಾ ಪರವಾನಿಗೆ ಕ್ಯಾಂಪ್ನ್ನು ಆಯೋಜಿಸಿ, ಎಲ್ಲರಿಗೂ ಚಾಲನಾ ಪರವಾನಿಗೆ ಕೊಡಿಸುವ ಇರಾದೆಯನ್ನು ಹೊಂದಿದ್ದಾರೆ.
    ಇವರ ಸಾಮಾಜಿಕ ಕಳಕಳಿಯ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂದು ಪತ್ರಿಕೆ ಹಾರೈಸುತ್ತದೆ.

No comments:

Post a Comment

Thanku