Friday, January 13, 2012

ಅಂಬೇಡ್ಕರ್ ಅಧಿಕಾರ ಮತ್ತು ರಾಜಕೀಯದ ಮಹತ್ವ

ಕಳೆದ ತಿಂಗಳು ಆಂಗ್ಲ ಪತ್ರಿಕೆಯೊಂದರಲ್ಲಿ ಸುದ್ಧಿಯೊಂದು ಪ್ರಕಟವಾಗಿತ್ತು. ಭಾರತದ ಕಮ್ಯುನಿಸ್ಟ್ ಪಕ್ಷಗಳು (ಸಿ.ಪಿ.ಐ, ಮತ್ತು ಸಿ.ಪಿ.ಎಂ) ಭಾರತೀಕರಣ ಗೊಳ್ಳುತ್ತಿವೆ ಎಂಬುದೇ ಆ ಸುದ್ಧಿ.

ಭಾರತೀಕರಣವೆಂದರೆ ಅವುಗಳ Strategyಯಲ್ಲಿ ಏನಾದರು ಬದಲಾವಣೆ ಇರಬೇಕು. ಅಂದಾಗ ಅದಕ್ಕೆ ಮಹತ್ವ ಬರುತ್ತಲ್ಲವೇ? ಒಂದೆಡೆ ಅವುಗಳು ಈಗಾಗಲೇ ತಮ್ಮ ಸಿದ್ಧಾಂತ ಮತ್ತು ಕಾರ್ಯಕ್ರಮಗಳಲ್ಲಿ ಅಂಬೇಡ್ಕರರನ್ನು ಒಳಗೊಳ್ಳಲು ನಿರ್ಧರಿಸಿದಂತಿವೆ. ಹಾಗಿದ್ದರೆ ಇದುವರೆಗೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಅಂಬೇಡ್ಕರ್ ಇರಲಿಲ್ಲವೇ? ಖಂಡಿತ ಇಲ್ಲ. ಕಮ್ಯುನಿಸ್ಟ್ ಪಕ್ಷಗಳು ಅವರ ಅಪ್ಪಟ ವಿರೋಧಿಗಳಾಗಿದ್ದವೇ? ಅವು ಏನಿದ್ದರೂ ಮಾಕ್ಸರ್್, ಲೆನಿನ್, ಮತ್ತು ಚೆಗುವಾರ ಹೀಗೆ ಈಠಡಿಜರಟಿ ಮುಖಗಳತ್ತ ಸುತ್ತುತ್ತಾ, ಹೆಚ್ಚಿಗೆ ಭಾರತದತ್ತ ಗಮನ ಹರಿಸುತ್ತಿದ್ದಿಲ್ಲ. ಅದು ಅಂಬೇಡ್ಕರರತ್ತ!

ಯಾಕೆಂದರೆ Basically ಕಮ್ಯುನಿಸ್ಟ್ ಪಕ್ಷಗಳಿಗೂ ಮತ್ತು ಅಂಬೇಡ್ಕರರ ಜಾತಿ, ಧರ್ಮ ಮತ್ತು ಆ ಹಿನ್ನೆಯಲ್ಲಿನ ಹೋರಾಟ ಇತ್ಯಾದಿಗಳಿಗೂ ಒಂದು ರೀತಿಯ ಎಣ್ಣೆ ಸೀಗೆಕಾಯಿಯ ಸಂಬಂಧ.

ಕಮ್ಯುನಿಸ್ಟರದ್ದು ಶ್ರೀಮಂತ-ಬಡವ, ಕಾಮರ್ಿಕ-ಮಾಲೀಕ ಎಂಬ ವರ್ಗಹೋರಾಟದ ಮಾದರಿ. ಹೀಗಿರುವಾಗ ಅಲ್ಲೆಲ್ಲಿ ಬರುತ್ತದೆ ಅಂಬೇಡ್ಕರ್ ಸಿದ್ಧಾಂತ? ಅದರಲ್ಲೂ ಭಾರತದಲ್ಲಿ ಠಛಿಚಿಟಣ ಬ್ರಾಹ್ಮಣರ ಕಪಿಮುಷ್ಟಿಯಲ್ಲಿ ಆ ಪಕ್ಷಗಳು ಸಿಕ್ಕಿ ನರಳುತ್ತಿರುವಾಗ! ಅಂದಹಾಗೆ ಕಮ್ಯುನಿಸ್ಟರಿಗೇಕೆ ಈಗ ಅಂಬೇಡ್ಕರ್ ಬೇಕಾಗಿದ್ದಾರೆ? ಅಂತಹ ಣಡಿರಜಟಿಣ ಏನಿದೆ ಕಮ್ಯುನಿಸ್ಟರಿಗೆ? ಅಂಬೇಡ್ಕರ್ ಬಗ್ಗೆ ಅವರಿಗೆ ಈ ಪರಿಯ ದಿಢೀರ್ ವ್ಯಾಮೋಹ ಉಕ್ಕಲು ಕಾರಣವಾದರೂ ಏನು? ಉತ್ತರ ಸಿಂಪಲ್ಲು. ಕಮ್ಯುನಿಸ್ಟ್ ಪಕ್ಷಗಳು ಈಗ ಪತನದ ಅಂಚಿನಲ್ಲಿವೆ!

ಪಶ್ಚಿಮ ಬಂಗಾಳದ ಕಳೆದ ಚುನಾವಣೆಯಲ್ಲಿ ಅವು ಸೋತು ಸುಣ್ಣವಾಗಿವೆ. ಅವರ ಪ್ರಮುಖ, ಹಳೆಯ ತಲೆಮಾರಿನ ನಾಯಕರುಗಳೂ ಕೂಡ ಈಗ ಅವರ ನಡುವೆ ಇಲ್ಲ. ಉದಾ: ಜ್ಯೋತಿಬಸು. ಹಾಗೆಯೇ ಇಡಿ ಭಾರತದಾಧ್ಯಂತ ಅವರ ಪಕ್ಷವನ್ನು ಮೇಲೆತ್ತಬಲ್ಲ ಸಮುದಾಯವೊಂದು ಅಥವಾ ಸಿದ್ಧಾಂತವೊಂದು ಈಗ ಅವರ ಜೊತೆ ಇಲ್ಲ. ಅದರಲ್ಲೂ ಜಾಗತೀಕರಣದ ಈ ದಿನಗಳಲ್ಲಿ ಎಲ್ಲರೂ ಹಣದ ಹಿಂದೆ ಓಡುತ್ತಿರುವಾಗ ವರ್ಗ ಹೋರಾಟದ ಕಮ್ಯುನಿಸ್ಟರನ್ನು ಈಗ ಯಾರು ಛಿಚಿಡಿಜ ಮಾಡುತ್ತಾರೆ?

ಂಛಿಣಣಚಿಟಟಥಿ ಕಮ್ಯುನಿಸಂ ಭಾರತದ ಅಸ್ಪೃಶ್ಯರ ಜೀವಾಳವಾಗಬೇಕಿತ್ತು. ಅವರ ಹೋರಾಟದ ದೀಪವಾಗಬೇಕಿತ್ತು. ಆದರೆ ಜಾತಿಯ ಪ್ರಶ್ನೆ ಬಂದಾಗ, ಮೀಸಲಾತಿಯ ಸಮಸ್ಯೆ ಬಂದಾಗ ಕಮ್ಯುನಿಸ್ಟರ ನಡವಳಿಕೆ ಆರ್.ಎಸ್.ಎಸ್ನವರಿಗಿಂತೇನೂ ಭಿನ್ನವಾಗಿಲ್ಲ. ಆ ಕಾರಣಕ್ಕಾಗಿ ಅದು ಅಸ್ಪೃಶ್ಯರ ಜೀವಾಳವಿರಲಿ ಹೋರಾ ಟದ ಮಾರ್ಗವಾಗಿಯೂ ಕೂಡ ಕಂಡಿಲ್ಲ. ಏಕೆಂದರೆ ಜ್ಯೋತಿಬಸುರಂತಹ ಅವರ ಉನ್ನತ ನಾಯಕರೇ ಹಿಂದೆ ಮಂಡಲ್ ವರದಿಯ ವಿರುದ್ಧ ಮಾತನಾಡಿದ್ದಾರೆ!

ಬಂಗಾಳದಲ್ಲಿ ಈಗಲೂ ದಲಿತರಿಗೆ ಆಡಳಿತದಲ್ಲಿ ಸರಿಯಾದ ಪಾಲುದಾರಿಕೆ ಇಲ್ಲ!. ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಕಾರಣವೇ ನೆಂದರೆ ಕಮ್ಯುನಿಸ್ಟರಿಗೆ ದಲಿತರ ಜಾತಿಯ ಸಮಸ್ಯೆಗ ಳಿಗಿಂತ ಮಾಕ್ಸರ್್ರ ವರ್ಗ ಹೋರಾಟವೇ ಮುಖ್ಯ. ಈ ನಿಟ್ಟಿನಲ್ಲಿ ದಲಿತರ ಸಮಸ್ಯೆ ಅವರಿಗೆ ನಗಣ್ಯ.

ಪ್ರಶ್ನೆ ಏನೆಂದರೆ ಜಾತಿಪೀಡಿತ ಭಾರತದಲ್ಲಿ ಎಲ್ಲಿಯವರೆಗೆ ಆ ಸವಕಲು ವರ್ಗ ಸಂಘರ್ಷದ ಮಾತು ನಡೆಯುತ್ತದೆ? ಕಳೆದಬಾರಿ ಪಶ್ಷಿಮ ಬಂಗಾಳದಲ್ಲಿ ಆಗಿರುವುದೇ ಅದು. ಕಮ್ಯುನಿಸ್ಟ್ ಪಕ್ಷಗಳು ಸೋತು ಸುಣ್ಣವಾಗಿವೆ. ರಾಷ್ಟ್ರದಾಧ್ಯಂತ ಮೌಲ್ಯ ಕಳೆದುಕೊ ಳ್ಳುತ್ತಿವೆ. ಅದಕ್ಕೆ ಈಗ ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ತಮ್ಮ ಸಿದ್ಧಾಂತದಲ್ಲಿ ಅಂಬೇಡ್ಕರರನ್ನು ಸೇರಿಸಿಕೊಳ್ಳುವ ಮಾತನಾಡುತ್ತಿವೆ!. ಅಂದಹಾಗೆ ತಮ್ಮ ಸಿದ್ಧಾಂತದಲ್ಲಿ ಅಂಬೇಡ್ಕರರನ್ನು ಸೇರಿಸಿಕೊಳ್ಳುವ ಕಮ್ಯುನಿಸ್ಟ್ ಪಕ್ಷಗಳ ಈ ನಡೆ ಅಂಬೇಡ್ಕರರಿಗೆ ಗೌರವ ನೀಡಿದಂತಾಗತ್ತ ದೆಯೇ? ಖಂಡಿತಾ ಇಲ್ಲ. ಅದು ಅಂಬೇಡ್ಕರ್ವಾದದ ವಿರುದ್ಧ ಕಮ್ಯುನಿಸ್ಟರು ನಡೆಸುತ್ತಿರು ದಾಳಿ ಎನ್ನದೆ ವಿಧಿಯಿಲ್ಲ.

ಇನ್ನು ಆರ್.ಎಸ್.ಎಸ್ನವರದು ವಿಚಿತ್ರ ನಡೆ. ಕಳೆದವಾರ ಆರ್.ಎಸ್.ಎಸ್ ಪ್ರಮುಖರೊಬ್ಬರು ಸಮಾಜ ಚಿಕಿತ್ಸಕ ಅಂಬೇಡ್ಕರ್ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಅಂಬೇಡ್ಕರ್ ಮೇಲಿನ ಪ್ರೀತಿಯಿಂದ ಆ ಆರ್.ಎಸ್.ಎಸ್ ಮುಖಂಡರು ಈ ಕೃತಿಯನ್ನು ಪ್ರಕಟಿಸಿದ್ದಾರೆಂದೆನಿಸಿದರೂ ಒಟ್ಟಾರೆ ಅದು ದಲಿತರನ್ನು ಹಿಂದೂ ಧರ್ಮದ ಒಳಗೆ ಎಳೆದುಕೊಳ್ಳುವ ನಿರಂತರ ಪ್ರಯತ್ನದ ಮತ್ತೊಂದು ಯತ್ನವಲ್ಲದೆ ಬೇರೇನಲ್ಲ. ಆಶ್ಚರ್ಯಕರವೆಂದರೆ ಆರ್.ಎಸ್.ಎಸ್ ತನ್ನ ತೆಕ್ಕೆಗೆ ಅಂಬೇಡ್ಕರರನ್ನು ಸೆಳೆದುಕೊಳ್ಳುವ ಈ ಯತ್ನವನ್ನು ಅಂಬೇಡ್ಕರ್ ಬದುಕಿದ್ದಾಗಿಂದಲೂ ಮಾಡುತ್ತಾ ಬಂದಿದೆ.

ಅಂಬೇಡ್ಕರ್ ಜೀವನ ಚರಿತ್ರೆ ಬರೆದಿರುವ ಬ್ರಾಹ್ಮಣ ವರ್ಗದ ಧನಂಜಯ ಕೀರ್ ಎಂಬುವವರೇ ಅಂಬೇಡ್ಕರ ರನ್ನು ಸಾವರ್ಕರ್ ಜೊತೆ ಸಮೀಕರಿಸುತ್ತ ಆರ್.ಎಸ್. ಎಸ್ ನ ಇಂತಹ ಕ್ರೀಯೆಗೆ ಮುನ್ನುಡಿ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಆರ್.ಎಸ್.ಎಸ್, ಎ.ಬಿ.ವಿ.ಪಿ ಇತ್ಯಾದಿ ಸಂಘಟನೆಗಳು ಅಂಬೇಡ್ಕರ್ ಫೋಟೋವನ್ನು ತಮ್ಮ ಕಾರ್ಯಕ್ರಮಗಳಲ್ಲಿ, ಪತ್ರಿಕೆಗಳಲ್ಲಿ ಹಾಕುವ ಮೂಲಕ ಅವರನ್ನು, ಆ ಮೂಲಕ ದಲಿತರನ್ನು ಹಿಂದೂ ತೆಕ್ಕೆಗೆ ಸೆಳೆದುಕೊಳ್ಳುವ ತನ್ನ ಕಾರ್ಯವನ್ನು ದಶಕಗಳಿಂದ ಮುಂದುವರೆಸಿದೆ. ಒಟ್ಟಾರೆ ಅಂಬೇಡ್ಕರರ ಸಿದ್ದಾಂತ ಆರ್.ಎಸ್.ಎಸ್. ಮತ್ತು ಹೇಗೆ ಕಮ್ಯುನಿಸ್ಟರಿಗೆ ತುತರ್ಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಆರ್.ಎಸ್.ಎಸ್ಆಗಾಗ ಅಂಬೇಡ್ಕರ್ರ ಹೆಸರಿನ ಕೃತಿ ಬರೆಯುತ್ತಾ, ದಾಳಿಯನ್ನು ನಡೆಸುತ್ತಿರುತ್ತದೆ.

ಇನ್ನು ಅಂಬೇಡ್ಕರ್ ದಾಳಿಗೊಳಗಾಗುತ್ತಿರುವ ಮತ್ತೊಂದು ದಿಕ್ಕು ಗಾಂಧಿವಾದ. ಸ್ವತಃ ಗಾಂಧೀಜಿಯ ವರಿಂದ ಪೂನಾ ಒಪ್ಪಂದ ಸಂದರ್ಭದಲ್ಲಿ ಪ್ರಾರಂಭವಾದ ಈ ದಾಳಿ ನಿರಂತರ ಮುಂದುವರೆದಿದೆ. ಕಾಂಗ್ರೆಸ್ನ ಸಮಾಜವಾದಿಗಳು ಮತ್ತು ಗಾಂಧಿವಾದಿಗಳು ಇಂತಹ ದಾಳಿಯ ನೇತೃತ್ವವನ್ನು ವಹಿಸಿದ್ದಾರೆ. ಪೂನಾ ಒಪ್ಪಂದದ ಸಂದರ್ಭದಲ್ಲಿ ಅಸ್ಪೃಶ್ಯರಿಗೆ ನೀಡಲ್ಪಟ್ಟಿದ್ದ ಪ್ರತ್ಯೇಕ ಮತದಾನದ ಹಕ್ಕನ್ನು ಕಿತ್ತುಕೊಂಡು ಹರಿಜನ ಸೇವಕ ಸಂಘ ಗಳನ್ನು ಪ್ರಾರಂಭಿಸುವ ಮೂಲಕ ಈ ದಾಳಿಗೆ ಮುನ್ನುಡಿ ಬರೆಯಲಾಯಿತಾದರೂ ನಂತರದ ದಿನಗಳಲ್ಲಿ ಹರಿಜನ (ದೇವರ ಮಕ್ಕಳು) ಎಂಬ ಮೂಗಿಗೆ ತುಪ್ಪ ಸವರುವ ಮೂಲಕ, ಮೀಸಲಾತಿಯ ನಿರಂತರ ವಂಚನೆಯ ಮೂಲಕ, ದಲಿತರನ್ನು ರಾಜಕೀಯ ಚಮಚಾಗಿರಿಗೆ ಒಳಪಡಿಸುವ ಮೂಲಕ ಗಾಂಧಿವಾದ ಅಂಬೇಡ್ಕರ್ವಾದದ ವಿರುದ್ಧ ವ್ಯವಸ್ಥಿತ ದಾಳಿಯನ್ನು ಸಂಘಟಿಸುತ್ತಾ ಬಂದಿದೆ. ಆರ್.ಎಸ್.ಎಸ್ನವರದ್ದು, ಕಣ್ಣಿಗೆ ಕಾಣುತ್ತದೆ. ಆದರೆ ಗಾಂಧಿವಾದದ ದಾಳಿ ಕಣ್ಣಿಗೆ ಕಾಣುವುದಿಲ್ಲ. ಒಂದು ರೀತಿ ಮಂಕುಬೂದಿ ಎರಚಿದಂತೆ.

ಒಂದಂತೂ ನಿಜ, ಗಾಂಧೀವಾದವಿರಲಿ, ಕೋಮು ವಾದವಿರಲಿ, ಕಮ್ಯುನಿಸ್ಟರಿರಲಿ ಎಲ್ಲರಿಗೂ ಅಂಬೇಡ್ಕರ್ ಬೇಕು. ಹಾಗಿದ್ದರೆ ಇವರೆಲ್ಲರಿಗೂ ಅಂಬೇಡ್ಕರ್ ಕಂಡರೆ ಅಷ್ಟೊಂದು ಪ್ರೀತಿಯೆ ಅಥವಾ ಮೋಹವೇ? ಇದ್ಯಾವುದು ಅಲ್ಲ. ಅವರ ಒಟ್ಟಾರೆ ಉದ್ದೇಶ ಅಂಬೇಡ್ಕರ್ ಸುತ್ತ ಇರುವ ದಲಿತ ಸಮೂಹದ ಕಡೆಗೆ. ಶೇ25ರಿಂದ 30ರಷ್ಟಿರುವ ಆ ಓಟ್ ಬ್ಯಾಂಕ್ಕಡೆಗೆ.

ಇಂದು ಖಜಜಡಿತಜ ಃಚಿಟಿಞ ಗಿಂತ ಓಟ್ ಬ್ಯಾಂಕ್ ಮುಖ್ಯ. ಓಟ್ ಬ್ಯಾಂಕ್ ಇದ್ದರೆ ರಿಸವರ್್ ಬ್ಯಾಂಕ್ ಕೀ ತಾನಾಗೇ ಸಿಕ್ಕುತ್ತದೆ. ಇದನ್ನೇ ಅಂಬೇಡ್ಕರ್ ಹೇಳಿರುವುದು Political power is the master key, through which you can unlock all doors of progress ಎಂದು. ಅಂದರೆ ಓಟ್ ಬ್ಯಾಂಕ್ ಮೂಲಕ ದೊರೆಯುವ ರಾಜಕೀಯ ಅಧಿಕಾರದ ಕೀ ಪ್ರಗತಿಯ ಎಲ್ಲಾ ರೀತಿಯ ಬಾಗಿಲುಗಳನ್ನು ತೆರೆಯುತ್ತದೆ ಎಂದರ್ಥ. ಈ ನಿಟ್ಟಿನಲ್ಲಿ ಅಂಬೇಡ್ಕರರ ಆಸೆಯೂ ಕೂಡ 'I wanted to see my people as governing class' ಎಂಬುದಾಗಿತ್ತು. ಅಂದರೆ ನನ್ನ ಜನರು ಈ ದೇಶದ ಅಧಿಕಾರ ಹಿಡಿಯಬೇಕೆಂಬುದು ಅದರ ಸರಳ ಅರ್ಥ.

ಈ ನಿಟ್ಟಿನಲ್ಲಿ ಒಟ್ಟಾರೆ ಹೇಳುವುದಾದರೆ ಅಂಬೇಡ್ಕರ್ ಅವರ ವಾದ ದಲಿತರನ್ನು ಈ ದೇಶದ ರಾಜಕೀಯ ಅಧಿಕಾರದ ಗದ್ದುಗೆಯತ್ತ ಕೊಂಡೊಯ್ದರೆ ಅವರ ಹಿಂದೆ ಬಿದ್ದಿರುವ ಗಾಂಧಿವಾದ, ಕೋಮುವಾದ, ಇತ್ಯಾದಿಗಳು ದಲಿತರನ್ನು ಅಂತಹ ಅಧಿಕಾರ ಗದ್ದುಗೆಯಿಂದ ದೂರ ಇಡುವ ಸಂಚನ್ನು ಹೊಂದಿದ್ದವು ಅಥವ ಹೊಂದಿವೆ, ಬದಲಿಗೆ ಆ ಓಟ್ ಬ್ಯಾಂಕನ್ನು ಯಾವ ರೀತಿಯಲ್ಲಾದರೂ ಕಿತ್ತುಕೊಂಡು ಅದರ ಮೂಲಕ ಮನುವಾದವನ್ನು ಜಾರಿಗೊಳಿಸುವ ದುಷ್ಟ ಹುನ್ನಾರವನ್ನು ಈ ಮೂರು ವಾದಗಳೂ ಹೊಂದಿವೆ. ಹೀಗಿರುವಾಗ ಗಾಂಧಿವಾದ, ಕೊಮುವಾದ, ಕಮ್ಯುನಸ್ಟ್ವಾದಗಳ ಸಂಚಿಗೆ ಅಂಬೇಡ್ಕರ್ವಾದ ಬಲಿಯಾಗಬೇಕೆ? ಅಥವಾ ಅಂತಹ ವಾದಗಳು ಎಸೆಯುವ ಎಂಜಲಿಗೆ ಅಂಬೇಡ್ಕರ್ವಾದದ ವಾರಸುದಾರರಾದ ದಲಿತರು ತಮ್ಮ ಓಟ್ ಬ್ಯಾಂಕನ್ನು, ಆ ಮೂಲಕ ರಾಜಕೀಯ ಅಧಿಕಾರ ಎಂಬ ಮಾಸ್ಟರ್ ಕೀ ಅನ್ನು ಕಳೆದುಕೊಳ್ಳಬೇಕೆ? ಅಥವಾ ಬೇರೆಯವರ ಕೈಗಿತ್ತು ನಮ್ಮನ್ನು ಅಭಿವೃದ್ಧಿ ಮಾಡಿ ಎಂದು ಗೋಗರೆಯಬೇಕೆ? ಖಂಡಿತ, ಹಾಗೇನಾದರೂ ಆದದ್ದೇ ಆದರೆ ಅದು ದಲಿತರ ಆ ಮೂಲಕ ಅಂಬೇಡ್ಕರ್ವಾದದ ಸಾಮೂಹಿಕ ಆತ್ಮಹತ್ಯೆಯಾಗುತ್ತದಷ್ಟೆ.

ರಘೋತ್ತಮ ಹೊ.ಬ.
ಲೇಖಕರು, ಚಾಮರಾಜನಗರ

No comments:

Post a Comment

Thanku