Friday, January 13, 2012

ಒಂದು ಅಪಘಾತ - ತಪ್ಪಿದ ಅನಾಹುತ

2012ರ ವಿಶೇಷ ಸಂಚಿಕೆ ತರುವ ಅವಧಿಯದು. ಅದಕ್ಕಾಗಿ ಜಾಹೀರಾತು, ಸುದ್ದಿಗಳನ್ನು ಸಂಗ್ರಹಿಸುವದರಲ್ಲಿಯೇ ನನನ್ನು ತೊಡಗಿಸಿಕೊಂಡಿದ್ದೆ. ಸಂಚಿಕೆ ತರಲು ಇನ್ನು ಮೂರು ದಿನಗಳು ಉಳಿದಾಗ ಅವಸರದಲ್ಲಿ ಕೆಲಸ ಮಾಡಲು ಆರಂಭಿಸಿದೆ.

28 ರ ಸಂಜೆ ಲಿಂಗಸ್ಗೂರಿನ ಗುತ್ತೇದಾರರೋರ್ವರು ಜಾಹೀರಾತಿಗೆ ಸಂಬಂದಿಸಿ ತಮ್ಮ ಭಾವಚಿತ್ರವನ್ನು ಕೊಡಲು ಲಿಂಗಸೂರಿಗೆ ಆಹ್ವಾನಿಸಿದರು. ಅದಕ್ಕಾಗಿಯೇ ನಾನು ಲಿಂಗಸ್ಗೂರಿಗೆ ಹೋಗಲು ಸಿದ್ದನಾಗಿದ್ದೆ. (ಜೊತೆಯಲ್ಲಿ ಲಿಂಗಸ್ಗೂರಿನಲ್ಲಿರುವ ನನ್ನ ತಂಗಿಯ ಕುಟುಂಬವನ್ನು ಭೇಟಿ ಮಾಡುವ ಉದ್ದೇಶವು ಇತ್ತು.)

ಗುತ್ತೇದಾರರ ಭೇಟಿ ಮುಗಿಸಿಕೊಂಡು ತಂಗಿಯ ಮನೆಗೆ ಹೋಗಿ ಊಟ ಮಾಡಿ ಅಲ್ಲಿಯೇ ಮಲಗಿದ್ದರೆ, ಅಪಘಾತವೊಂದರಿಂದ ಪಾರಾಗುತ್ತಿದೆ. ಆದರೆ, ಅದು ಆಗಾಗಲಿಲ್ಲವೇ..?

ರಾತ್ರಿ ಏಕಾಏಕಿ, 11 ಗಂಟೆಗೆ ಮರಳಿ ಊರಿಗೆ ಹೊರಡಲು ನಾನು ತೀಮರ್ಾನಿಸಿದ್ದೇ, ಪತ್ರಿಕೆ 1 ವಾರ ತಡವಾಗಿ ತಮ್ಮೆಲ್ಲರ ಕೈಗೆ ಸಿಗುವಂತಾಗಿದೆ, 21 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಿ ಬಂತು.

ನನ್ನ ದಿವ್ಯ ನಿರ್ಲಕ್ಷವೇ ಅಪಘಾತಕ್ಕೆ ಆಹ್ವಾನ ನೀಡಿತು

ಲಿಂಗಸ್ಗೂರಿನಿಂದ ಮಧ್ಯರಾತ್ರಿ ಗುಡದನಾಳ ಮಾರ್ಗವಾಗಿ ಹಟ್ಟಿಗೆ ಆಗಮಿಸುತ್ತಿದ್ದಾಗ, ಆ ಕಡೆಯಿಂದ ಒಂದೇ (ಬಲಗಡೆ) ದೀಪವನ್ನು ಹೊಂದಿದ್ದ ಟ್ರಾಕ್ಟರ್ ಎದುರಾಯಿತು.

ಚಳಿ ಹೆಚ್ಚಿದ್ದರಿಂದ ನಾನು ಸರಾಸರಿ 50ರ ವೇಗದಲ್ಲಿ ಗಾಡಿಯನ್ನು ಓಡಿಸುತ್ತಿದ್ದೆ. ಎದುರಿಗೆ ಬರುವ ಒಂದೇ ಲೈಟಿನ ಗಾಡಿ, ದ್ವಿಚಕ್ರವಾಹನ ಇರಬಹುದೆಂದು ತಿಳಿದು ಹಾಗೇಯೇ ಮುಂದೆ ಹೋದೆ. ತೀರ ಸಮೀಪಕ್ಕೆ ಹೋದಾಗ ಅದು ಟ್ರಾಕ್ಟರ್ ಎಂಬುದು ಗೊತ್ತಾಯಿತು. ಇನ್ನೇನು ಟ್ರಾಕ್ಟರ್ಗೆ ಡಿಕ್ಕಿ ಹೊಡೆಯುತ್ತೇನೆ ಎನ್ನುತ್ತಲೇ ನನ್ನ ಬೈಕ್ನ್ನು ಎಡ ಭಾಗಕ್ಕೆ ತಿರುವಿಕೊಂಡಾಗ ಬೈಕ್ ಸ್ಕಿಡ್ ಆಗಿ ಬಿದ್ದೆ. ಜೊತೆಯಲ್ಲಿ ನನ್ನ ತಂಗಿಯ ಗಂಡನೂ ಇದ್ದನು.

ಹೆಚ್ಚಿನ ಅಪಾಯ ತಡೆಗಟ್ಟಿದ ನನ್ನೆರಡು ಮೊಬೈಲ್ಗಳು

ಆ ವೇಳೆ ಹಾಕಿಕೊಂಡಿದ್ದ ಶಟರ್್ನ ಜೇಬು ಸಂಪೂರ್ಣವಾಗಿ ತುಂಡಾಗಿ ಒಳಗಿದ್ದ ಎರಡು ಮೊಬೈಲ್ಗಳು ಎರಡು ಕಡೆ ಅರ್ಧಭಾಗದಷ್ಟು ಸವೆದು ಹೋಗಿದ್ದವು. ಒಂದು ವೇಳೆ ಮೊಬೈಲ್ಗಳೂ ಜೇಬಿನಲ್ಲಿ ಇರದೆ ಹೋಗಿದ್ದರೆ ಮೊಬೈಲ್ಗೆ ಬಿದ್ದಿರುವ ಪೆಟ್ಟು ನನ್ನ ದೇಹಕ್ಕೆ ಬಿದ್ದು, ಇನ್ನು ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟಕ್ಕೆ ಅಂತಹದ್ದೇನಾಗಲಿಲ್ಲ.

ನಂತರ ನೋಡನೋಡತ್ತಿದ್ದಂತೆ ನನ್ನ ಬೈಕು ಹಾಗೂ ಹಿಂದಿನ ಸವಾರ ನನ್ನ ಮೇಲೆ ಬಿದ್ದಿದ್ದ. ಎಡಗೈನ 3 ಬೆರಳುಗಳು ಕಲ್ಲಿಗೆ ತಗುಲಿ ಉಜ್ಜಿದ್ದರಿಂದ ತೀವ್ರ ತರಹದ ರಕ್ತಸ್ರಾವ ಉಂಟಾಗಿತ್ತು.

ಆಮೇಲೆ ಬಿದ್ದ ಬೈಕ್ನ್ನು ಮೇಲೆತ್ತಿಕೊಂಡು ಚಾಲೂ ಮಾಡಲು ಹೋದರೆ ಬೈಕ್ ಸ್ಟಾಟರ್್ ಆಗುತ್ತಿಲ್ಲ. ಅದೃಷ್ಟಕ್ಕೆ ಆ ಕಡೆಯಿಂದ ಹಟ್ಟಿಗೆ ಹೋಗುತ್ತಿದ್ದವರು ನನ್ನನ್ನು ಹ.ಚಿ.ಗ ಆಸ್ಪತ್ರೆಗೆ ಸಾಗಿಸಿದರು. ಹಿಂದಿನಿಂದ ನನ್ನಸಂಭಂದಿಗಳು ಬೈಕ್ನ್ನು ಊರಿಗೆ ತಂದರು.

ವೈದ್ಯರ ಸಾಹಸ

ರಾತ್ರಿ ಪಾಳೆಯಲ್ಲಿನ ಆಸ್ಪತ್ರೆ ಸಿಬ್ಬಂದಿಗಳು 1 ಗಂಟೆಗಳ ಕಾಲ ಎಡಗೈಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನಂತರ ವೈದ್ಯರೂ ಹಾಗೂ ನಮ್ಮ ಉತ್ತಮ ಶೆಟಲ್ ಬ್ಯಾಡ್ಮಿಂಟನ್ ಆಟಗಾರರಾದ ಡಾ.ಶಿವಪ್ರಕಾಶ್ರವರು ಬಂದು ತುತರ್ುಚಿಕಿತ್ಸೆಯನ್ನು ನೀಡಿದರು.

ಮಾರನೇ ದಿನ ನನ್ನನ್ನು ಎಮಜರ್ೆನ್ಸಿ ವಾಡರ್್ನಿಂದ ಶಸ್ತ್ರಚಿಕಿತ್ಸಾ ಕೋಣಿಗೆ ವಗರ್ಾಯಿಸಲಾಯಿತು. ಅರವಳಿಕೆ ತಜ್ಞರು ಮತ್ತು ಪತ್ರಿಕೆಗೆ ಆರೋಗ್ಯಕ್ಕೆ ಸಂಭಂದಿಸಿ ಹಲವು ಸಕರಾತ್ಮಕ ಆಲೋಚನೆಗಳುಳ್ಳ ಲೇಖನಗಳನ್ನು ಬರೆಯುತ್ತಾ, ಬಂದಿರುವ ಡಾ.ರವೀಂದ್ರನಾಥ ಈರಪ್ಪ ಮಾವಿನಕಟ್ಟಿ, ಖ್ಯಾತ ಮೂಳೆ & ಕೀಲು ತಜ್ಞರಾದ ಡಾ.ಬ್ರಹ್ಮಾನಂದ ಯಾದವಾಡರವರು, ಸುಧೀರ್ಘವಾಗಿ ಹತ್ತೈದು ನಿಮಿಷಗಳ ಕಾಲ ಚಚರ್ಿಸಿ ಶಸ್ತ್ರಚಿಕಿತ್ಸೆ ಮಾಡುವ ತೀಮರ್ಾನಕ್ಕೆ ಬಂದರು.

ಅದರಂತೆ, ಶಸ್ತ್ರಚಿಕಿತ್ಸಾ ಸಹಾಯಕರಾದ ಡಾರ್ಲಿ ಗಾಂಧೀರೂಬನ್, ಫಕ್ರುದ್ದೀನ್ ಕೂಡ ಸಾಥ್ ನೀಡಿ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಮುಗಿಸಿದರು. ಇವರೆಲ್ಲರ ಕಾಯಕಕ್ಕೆ (ಅದು ಅವರ ದಿನನಿತ್ಯದ ಜವಾಬ್ದಾರಿಯಾಗಿರಬಹುದು) ನಾನು ಸದಾ ಚಿರಋಣಿ.

ಅಪಘಾತದ ಸುದ್ದಿ ತಿಳಿದ ನಂತರ ನನ್ನೆಲ್ಲ ಸ್ನೇಹಿತರು, ಹಿತೈಷಿಗಳು ಹಾಗೂ ಕುಟುಂಬದ ಸದಸ್ಯರುಗಳು ದಿನನಿತ್ಯ ಆಸ್ಪತ್ರೆಗೆ ಬಂದು, ಆರೋಗ್ಯ ವಿಚಾರಿಸುತ್ತಾ, ಸಾಂತ್ವಾನ ಹೇಳಿದ್ದು ಎಂದಿಗೂ ಮರೆಯುವಂತಿಲ್ಲ. ಜೊತೆಯಲ್ಲಿ ಮೊಬೈಲ್ ಮುಖಾಂತರ ನನ್ನ ಗುರುಗಳು, ಸಂಶೋಧನಾ ಸಹಾಯಕರು, ನನ್ನ ಪತ್ರಿಕಾಮಿತ್ರರು ಅಪಘಾತಕ್ಕೆ ಸಂಭಂಧಿಸಿ ಶೀಘ್ರಗುಣಮುಖವಾಗಲಿ ಹಾರೈಸಿದರು.



ಡಾ.ಮಾವಿನಕಟ್ಟಿಯವರ ಮಾತನ್ನು ಉಲ್ಲಂಘಿಸಿದ್ದೇ ಅಪಘಾತಕ್ಕೆ ಕಾರಣ


ಡಾ.ಮಾವಿನಕಟ್ಟಿಯವರು
 

ರಾಮಚಂದ್ರ ಗುರೂಜಿಯವರಿಂದ ತರಬೇತಿ ಪಡೆದಿರುವ ಡಾ.ಮಾವಿನಕಟ್ಟಿಯವರು ಹಲವು ದಿನಗಳಿಂದ ವ್ಯಕ್ತಿತ್ವ ವಿಕಸನಕ್ಕಾಗಿ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ನನಗೆ ಉಚಿತವಾಗಿ ಹೇಳುತ್ತಿದ್ದರು. ಆದರೆ, ಅದನ್ನು ಸರಿಯಾಗಿ ಪಾಲಿಸಿದ್ದರೆ, ಈ ಅಪಘಾತ ಸಂಭವಿಸುತ್ತಿದ್ದಿಲ್ಲ.

ನನ್ನಲ್ಲಿರುವ ಸಿಟ್ಟು ಹಾಗೂ ದೌರ್ಬಲ್ಯವನ್ನು ಸರಿಮಾಡಿಕೊಳ್ಳಲು ಖುದ್ದಾಗಿ ತಾವುಗಳೇ ಹಲವು ಪ್ರಯೋಗಗಳನ್ನು ಮಾಡಿ ತೋರಿಸಿದ್ದಾರೆ. ಅದರಲ್ಲಿ ನಾನು ಕೆಲವೊಂದನ್ನು ಆಸಕ್ತಿಯಿಂದ ಕಲಿತಿದ್ದೆನೆಯೂ ಕೂಡ.

No comments:

Post a Comment

Thanku