Saturday, December 17, 2011

ಹಟ್ಟಿಯಲ್ಲಿ ಮತ್ತೇ, ಮತ್ತೇ, ಮತ್ತೇ ಖೋಟಾನೋಟು ಹಾವಳಿ

ಜ್ಯೋತಿ, ಕಾಮತ್, ಶೀಲವಂತ, ದತ್ತಾತ್ರೇಯರಂತ ಅನೇಕ ದಕ್ಷ ಪಿ.ಎಸ್.ಐಗಳು ಹಟ್ಟಿ ಠಾಣಿಗೆ ಬಂದು ಹೋದರೂ, ಹಟ್ಟಿಯಲ್ಲಿ ಮಾತ್ರ ಖೋಟಾನೋಟು, ಮಟ್ಕಾ, ಇಸ್ಪೀಟ್ ಹಾಗೂ ಸೂಳೇಗಾರಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಬಂಗಾರದ ಹಟ್ಟಿಗೆ ಛೋಟಾಮುಂಬಯಿ ಪಟ್ಟ ಬಂದಿದೆ ಎನ್ನುತ್ತಾರೆ ನಮ್ಮ ಪ್ರತಿನಿಧಿ ಸತ್ಯ.
ರಾಯಚೂರು ಜಿಲ್ಲೆಯಲ್ಲಿರುವ ಹಟ್ಟಿ ಚಿನ್ನದ ಗಣಿ ಬಂಗಾರವನ್ನು ಉತ್ಪಾದಿಸುತ್ತಾ, ದೇಶದಲ್ಲಿ ಅದೆಷ್ಟು ಖ್ಯಾತಿಯನ್ನೋ ಗಳಿಸಿದೆಯೋ, ಅಷ್ಟೇ ಕುಖ್ಯಾತಿಯನ್ನು ಖೋಟಾನೋಟು, ಮಟ್ಕಾ, ಇಸ್ಪೀಟ್, ಸೂಳೇಗಾರಿಕೆಯಂತಹ ದಂಧೆಗಳಲ್ಲಿ ಪಡೆದಿದೆ.

Venkob Badiger

ಒಂದು ಕಡೆ ಇಲ್ಲಿನ ಕಂಪನಿಯನ್ನು ಬಂಗಾರದ ಕಂಪನಿ ಎಂದರೆ, ಮತ್ತೊಂದೆಡೆ ಹಿರಿಯಮಂದಿ ಇದನ್ನು "ತೊಗಲಿನ ಕಂಪನಿ" ಎಂದು ಕರೆಯುವರು. ಕಂಪನಿಯಲ್ಲಿ ಕೆಲಸ ಮಾಡುವ ಉನ್ನತ ವರ್ಗದ ಅಧಿಕಾರಿ ತನ್ನ ಮನೆಯಾಳಿನ ಜೊತೆ ಅನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದಾಗಲಿ, ಊರಿನ ಗಣ್ಯನಾಗಿದ್ದರೂ ಹೋಟೆಲ್ನಲ್ಲಿ ಕೆಲಸ ಮಾಡುವ ಮಹಿಳೆಯ ಜೊತೆ ಚಕ್ಕಂದವಾಡುವುದಾಗಲಿ, ಇಲ್ಲಿ ಸವರ್ೇಸಾಮಾನ್ಯ.

ಬ್ರೀಟಿಷರು ಬಿಟ್ಟುಹೋಗಿರುವ ಅರೆಬೆತ್ತಲೆ ಸಂಸ್ಕೃತಿಯನ್ನು ಇಲ್ಲಿ ಇಂದಿಗೂ ಕಾಣಬಹುದಾಗಿದೆ. ಹಟ್ಟಿಯ ಜನರು ಎಂತಹದ್ದೇ ಮಹಾನಗರಗಳಲ್ಲಿ ವಾಸವಿದ್ದರೂ, ಅವರನ್ನು ಹಟ್ಟಿಯವರೆಂದು ಬೇಗನೇ ಪತ್ತೇ ಹಚ್ಚಬಹುದು. ಯಾಕೆಂದರೆ, ಹಟ್ಟಿ ಜನರ ಶೋಕಿ, ಬದುಕು ಎಲ್ಲವೂ ವಿಭಿನ್ನವಾಗಿರುತ್ತವೆ.

ಹಟ್ಟಿಯ ಅವಧೂತ ಹೇಳಿದಂತೆ ಮುಂದೊಂದು ದಿನ ಬಂಗಾರ ಹಟ್ಟಿ "ಛೋಟಾ ಮುಂಬಯಿ" ಆದರೂ ಆಗಬಹುದು. ಇದೆಲ್ಲ ಹಟ್ಟಿಗೆ ಒಂದೆಡೆ ಪೀಠಿಕೆಯಾದರೆ, ಸಾರಾಂಶವೇ ವಿಚಿತ್ರವಾಗಿದೆ. ಬನ್ನಿ ಈಗ ವಿಷಯಕ್ಕೆ ಬರೋಣ.

ಸೂಳೇಗಾರಿಕೆ, ಮಟ್ಕಾ, ಇಸ್ಪೀಟ್, ಖೋಟಾನೋಟುಗಳು ಕಾಲಕಾಲದಿಂದ ಸಮಾಜದಲ್ಲಿ ಚಾಲ್ತಿಯಲ್ಲಿವೆ. ಅವುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಯಾರಿಂದಲೂ ಆಗಿಲ್ಲವಾದರೂ, ಸ್ವಲ್ಪಮಟ್ಟಿಗೆ ನಿಯಂತ್ರಿಸುವ ಕೆಲಸವಾದರೂ ನಡೆಯಬೇಕು. ಆದರೆ, ಅದಿಂದು ಹಟ್ಟಿಯಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ.

ಹಟ್ಟಿ ಠಾಣಿಗೆ ಜಾತಿಯ ಆದಾರದ ಮೇಲೆ ಪಿ.ಎಸ್.ಐಗಳನ್ನು ಕಳುಹಿಸಲಾಗುತ್ತದೆ. (ರಾಜಕೀಯ ಇಚ್ಛಾಶಕ್ತಿಯೂ ಕಾರಣ) ಇದು ರೂಡಿಗತ. ಇಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ದಲಿತ, ಅಲ್ಪಸಂಖ್ಯಾತ ಅಧಿಕಾರಿಗಳಿದ್ದರೆ, ಪ್ರಕರಣಗಳು ಕಡಿಮೆಯಾಗಬಹುದೆಂಬ ಕಾರಣಕ್ಕೆ. ದಲಿತರನ್ನು ಹೊರತುಪಡಿಸಿ ಇನ್ನುಳಿದ ಅನ್ಯಜಾತಿಯ ಅಧಿಕಾರಿಗಳು ಬಂದರೆ, ಹಟ್ಟಿ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಮಾಹಿತಿಯನ್ನು ಈ ಹಿಂದೆ ಅದ್ಯಾರೋ ಪುಣ್ಯಾತ್ಮರು ಮೈಕ್1 ಸಾಹೇಬರಿಗೆ ನೀಡಿದ್ದಾರೆ.

ಅದಕ್ಕಾಗಿಯೇ ಹಟ್ಟಿಗೆ ಬಂದಂತಹ ಶೇಕಡವಾರು ಅಧಿಕಾರಿಗಳಲ್ಲಿ ಬಹಳಷ್ಟು ದಲಿತರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಹಟ್ಟಿಯಲ್ಲಿ ಸ್ವಲ್ಪಮಟ್ಟಿಗೆ ಹೆಸರು ಮಾಡಿಹೋಗಿರುವ ಪಿ.ಎಸ್.ಐ ಜ್ಯೋತಿ, ದತ್ತಾತ್ರೇಯ ಎಂ ಕನರ್ಾಡ್, ಭಜಂತ್ರಿ ಮೊದಲಾದ ಅಧಿಕಾರಿಗಳೆಲ್ಲರೂ ದಲಿತ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ಆದಾಗ್ಯೂ ಇಲ್ಲಿ ದಲಿತರ ಮೇಲೆ ದೌರ್ಜನ್ಯಗಳೇನು ಕಡಿಮೆಯಾಗಿಲ್ಲ. ಪಿಸಿ ಟು ಪಿಎಸ್ಐ ನರಸಿಂಗಪ್ಪನಂತವರು ಬಂದರೂ ಅಟ್ರಾಸಿಟಿಗೇನು ಕೊರತೆಯಾಗಲಿಲ್ಲ.

ಈ ವಿಷಯವನ್ನು ಯಾಕೆ ಇಲ್ಲಿ ಹೇಳಬೇಕಾಗಿ ಬಂತೆಂದರೆ, ಐಜಿ ಲೇವಲ್ಲಿನಲ್ಲಿ ಹಟ್ಟಿಯಲ್ಲಿ ದಲಿತ ಅಧಿಕಾರಿಗಳು ಇರುವದರಿಂದ ಅಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ. ವಿಶೇಷವಾಗಿ ಕಾಮರ್ಿಕರನ್ನು ಹೊಂದಿರುವ ಪ್ರದೇಶ ಅದಾಗಿರುವದರಿಂದ ಸಣ್ಣಪುಟ್ಟ ನ್ಯಾಯಗಳನ್ನು ಹೊರತುಪಡಿಸಿದರೆ, ದೊಡ್ಡ ಪ್ರಕರಣಗಳು ಅಲ್ಲಿ ಸಂಭವಿಸುವುದೇ ಇಲ್ಲ ಎಂಬ ಮಾಹಿತಿ ಇದೆ.

ಆದರೆ, ಇಲ್ಲಿ ದಲಿತ ಅಧಿಕಾರಿಗಳು ಇದ್ದರೆನು, ಬಿಟ್ಟರೇನು ಮೇಲೆ ಹೇಳಿದ ಎಲ್ಲಾ ಕೃತ್ಯಗಳು ವ್ಯವಸ್ಥಿತವಾಗಿ ನಡೆಯುತ್ತವೆ.

ಲಿಂಗಸ್ಗೂರು ತಾಲ್ಲೂಕುವೊಂದರಲ್ಲಿಯೇ ಸುಮಾರು ದಲಿತರ ಕೊಲೆಗಳಾಗಿವೆ. ಯಾವೊಂದು ಕೊಲೆಯ ತನಿಖೆಯಿಂದ ಸರಿಯಾದ ನ್ಯಾಯ ಸಿಗಲೇ ಇಲ್ಲ. ಅದರಂತೆ ಬೆರಳಣಿಕೆ ಮಂದಿಗೆ ಶಿಕ್ಷೆಯಾಗಿದೆ.

ಮತ್ತೇ, ಮತ್ತೇ, ಮತ್ತೇ ಖೋಟಾನೋಟು ಹಾವಳಿ

ಹಟ್ಟಿಯಲ್ಲಿ ಅವ್ಯಾಹತವಾಗಿ ನಡೆದಿರುವ ಖೋಟಾ ನೋಟು ಹಂಚಿಕೆಯಲ್ಲಿ ವರ್ಷಕ್ಕೊಬ್ಬರಾದರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಕಳೆದ ವರ್ಷ ಖೋಟಾನೋಟು ಪ್ರಕರಣವನ್ನು ದೂರದ ಪೊಲೀಸ್ ಅಧಿಕಾರಿಗಳು ಭೇದಿಸಿದ್ದರು. ಆದರೆ, ಈ ವರ್ಷ ಖೋಟಾನೋಟು ಆರೋಪಿ ಪೊಲೀಸ್ರಿಗೆ ರೆಡ್ಆ್ಯಂಡ್ ಆಗಿ ಸಿಕ್ಕಿಬಿದ್ದರೂ, ಆತನನ್ನು ಪೊಲೀಸರು ಬಂಧಿಸದೇ ವ್ಯವಹಾರವನ್ನು ಕುದುರಿಸಲು ಹೋಗಿದ್ದರು. ಆದರೆ, ಅದೃಷ್ಟಕ್ಕೆ ಯಾರೋ ಮೈಕ್1 ಸಾಹೇಬರಿಗೆ ಪೋನ್ ಮಾಡಿದ್ದಕ್ಕಾಗಿ ಪ್ರಕರಣವೊಂದು ದಾಖಲಾಯಿತು.

ಸಿಕ್ಕಿಹಾಕಿಕೊಂಡ ಆರೋಪಿ ವೆಂಕೋಬ ಬಡಿಗೇರ ಹಟ್ಟಿಯಲ್ಲಿ ಈ ಮೊದಲಿನಿಂದಲೂ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಲೇ ಬಂದಿದ್ದಾನೆ. ಸಾಕಷ್ಟು ಆಸ್ತಿ (ಇಡೀ ಹಟ್ಟಿಯಲ್ಲಿ ಈತನ ಕುಟುಂಬದ್ದೇ ಅತಿಹೆಚ್ಚಿನ ಆಸ್ತಿ ಇರುವುದು) ಹೊಂದಿರುವ ಈತ ಯಾರೊಬ್ಬರಿಗೆ ಹಟ್ಟಿಯಲ್ಲಿ ಎರಡು ರೂಪಾಯಿಯ ಚಹಾ ಕುಡಿಸಿರುವ ಉದಾಹರಣೆ ಇಲ್ಲ. ಆದರೆ, ಹಟ್ಟಿಯ ಅಂಗಡಿಗಳೆಲ್ಲೆಲ್ಲ ಸಾವಿರದ ನೋಟನ್ನು ಒಯ್ದು ಚಿಲ್ಲರೆ ಕೇಳಿದ ಅದೆಷ್ಟೋ ಉದಾಹರಣಿಗಳನ್ನು ಹೆಸರೇಳಲಿಚ್ಚಿಸಿದ ಆತನ ಸ್ನೇಹಿತರು ಹೇಳುತ್ತಾರೆ.

ಮಂದಿಯ ಕಣ್ಣಿಗೆ ಪಕ್ಕಾ ಮೆಂಟಲ್ ತರಹ ಕಾಣುವ ಈತ ಬಹಳ ಬುದ್ದಿವಂತ. ಸ್ವಾಮಿ ವಿವೇಕಾನಂದ ಹೆಸರಿನ ಮೇಲೆ ಶಾಲೆ ಮತ್ತು ಒಂದೆರಡು ಎನ್.ಜಿ.ಓಗಳನ್ನು ತೆಗೆದಿರುವ ಈತ ಎಲ್ಲದರಲ್ಲಿಯೂ ಲೂಟಿ ಮಾಡುವದನ್ನೇ ನೋಡುತ್ತಿರುತ್ತಾನೆ. ಡಬ್ಬಾ ಸಿಡಿ100 ಗಾಡಿಯನ್ನು ಓಡಿಸುತ್ತಾ ಚಿಲ್ಲರೆ ದಂಧೆಯನ್ನು ಮಾಡುತ್ತಿರುವ ಈತನ ಹಿಂದೆ ದೊಡ್ಡದಾದ ಜಾಲವೇ ಇದೆ. ಪಾರದರ್ಶಕ ತನಿಖೆ ನಡೆದದ್ದೇ ಆದರೆ, ವೆಂಕೋಬನ ಬಹುಪಾಲು ಸಹಚರರು ಕಂಬಿ ಸೇರುವುದು ಗ್ಯಾರಂಟಿ.

ಹಿಂದೊಮ್ಮೆ ಖೋಟಾನೋಟು ಪ್ರಕರಣದಲ್ಲಿ ಹಟ್ಟಿಯ ಮಂದಿ ಸಿಕ್ಕಿಹಾಕಿಕೊಂಡಾಗ, ಹಟ್ಟಿಯ ಹೆಸರು ಚಾಲ್ತಿಗೆ ಬಂದಿತ್ತು. ಆದರೆ, ಅಂದಿನ ಪ್ರಕರಣ ಸ್ಥಳೀಯ ಪೊಲೀಸರಿಗೆ ಸಂಬಂಧಿಸಿದ್ದಿಲ್ಲವಾದ್ದರಿಂದ, ಯಾರು ಹೆಚ್ಚಿಗೆ ಒತ್ತನ್ನು ನೀಡಲಿಲ್ಲ.

ಈ ಹಿಂದೆಯೇ ಸಿಕ್ಕಿಹಾಕಿಕೊಂಡ ಮಂದಿ ಅಸಲಿ ಫಲಾನುಭವಿಗಳ ಹೆಸರು ಹೇಳದೇ ಜೈಲಿನಲ್ಲಿಯೇ ಕೆಲವು ತಿಂಗಳುಗಳನ್ನು ಕಳೆದು ಈಗ್ಗೆ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಒಂದು ವೇಳೆ ಆಗಲೇ ಮೂಲ ಖೋಟಾನೋಟು ಮಾಡುವ ಮಂದಿ ಯ ಹೆಸರು ಬಯಲಿಗೆ ಬಂದಿದ್ದರೆ ಭವಿಷ್ಯ ವೆಂಕೋಬ ಬಡಿಗೇರ ಸಿಕ್ಕಿಹಾಕಿಕೊಳ್ಳುತ್ತಿದ್ದಿಲ್ಲ!

ಹತ್ತಾರು ಭಾಷೆಗಳ ಜನ ವಾಸಿಸುವ ಬಂಗಾರ ಹಟ್ಟಿಯಲ್ಲಿ ವೆಂಕೋಬನಿಗೆ ಖೋಟಾನೋಟು ಚಲಾವಣೆ ದೊಡ್ಡದೇನಲ್ಲ. ಯಾಕೆಂದರೆ, ಈತನು ಸಿಕ್ಕಿಹಾಕಿಕೊಂಡಿರುವುದು ಎಂತವರ ಬಳಿ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ.

ದೂರದ ಆಂಧ್ರಪ್ರದೇಶದಿಂದ ಸೋಫಾಸೆಟ್ ಗಳನ್ನು ಮಾರಲು ಶ್ರಮಜೀವಿಗಳು ಹಟ್ಟಿಗೆ ಬಂದಿದ್ದಾರೆ. ಅವರಿಗೆ ಇಲ್ಲಿನ ಪರಿಸ್ಥಿತಿ ಯಾವುದು ಗೊತ್ತಿಲ್ಲ. ಹೊಟ್ಟೆಪಾಡಿನ ಜೀವನ ಅವರದ್ದು. ಆದರೆ, ವೆಂಕೋಬ ಇವರ ಅಸಹಾಯಕತೆಯನ್ನು ಬಳಸಿಕೊಂಡು, ಅವರಲ್ಲಿಯೇ ಒಂದು ಸೋಪಾವನ್ನು ಖರೀಧಿಸಿ ಸಾವಿರ ರೂಪಾಯಿಯ 5 ನಕಲಿ ನೋಟುಗಳು, ಐದುನೂರು ರೂಪಾಯಿಯ 3 ಅಸಲಿ ನೋಟುಗಳು ಸೇರಿ ಒಟ್ಟು 6500ರೂ.ನ್ನು ನೀಡಿ, ಸೋಪಾಗಳನ್ನು ತನ್ನ ಶಾಲೆಗೆ ತೆಗೆದುಕೊಂಡು ಹೋಗಿದ್ದಾನೆ.

ಆ ನಂತರ ಶ್ರಮಜೀವಿಗಳು ಸಾವಿರ ಬೆಲೆಯ 5ನೋಟುಗಳನ್ನು ಮೇಲೆ ಕೆಳಗೆ ಪರೀಶಿಲಿಸಿದಾಗ ಅದು ಖೋಟಾನೋಟು ಎಂಬುದು ಗೊತ್ತಾಗಿದೆ. ತತ್ಕ್ಷವೇ ಶ್ರಮಜೀವಿಗಳು ಆಟೋವನ್ನು ಬೆನ್ನುಹತ್ತಿ ವೆಂಕೋಬನನ್ನು ನಕಲಿ ನೋಟುಗಳನ್ನು ವಾಪಸ್ಸು ಕೊಟ್ಟಿದ್ದಾರೆ. ಆದರೆ, ವೆಂಕೋಬ ಆ ನೋಟುಗಳನ್ನು ನಮಗೆ ಕೊಡು,, ನಿನಗೆ ಅಸಲಿ 3 ನೋಟುಗಳನ್ನು ಕೊಡುತ್ತೇನೆಂದು ಹೇಳಿದ್ದಾನೆ.

ಶ್ರಮಜೀವಿ ಅದ್ಯಾವದನ್ನು ಕೇಳದೇ, ನಕಲಿ ನೋಟುಗಳನ್ನು ಹಿಂದುರಿಗಿಸಿ ತಮ್ಮ ಮಾಲನ್ನು ವಾಪಸ್ಸು ತಂದಿದ್ದಾನೆ.

ನಂತರ ವಿಷಯ ಪೊಲೀಸರ ಗಮನಕ್ಕೆ ಬಂದಾಗ ವೆಂಕೋಬ ಮತ್ತು ಪೊಲೀಸರ ನಡುವೆ ಅಂದರ್ಬಾಹರ್ ವ್ಯವಹಾರ ಶುರುವಾಗಿದೆ. ಆ ಮೇಲೆ ಇಬ್ಬರೂ ಸೋಫಾ ಮಾರುವವನ ಹತ್ತಿರ ಹೋಗಿ ಈತನು ಕೊಟ್ಟ ನೋಟಿನ ಕುರಿತು ತಾವುಗಳು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾರೆ!

ವ್ಯವಹಾರ 50,000ಕ್ಕೆ ಪಿಕ್ಸ್ ಆದ ನಂತರ ವೆಂಕೋಬ 30,000ವನ್ನು ಕೊಡಲು ಒಪ್ಪಿದ್ದಾನೆ. ಆಸೆಯೆಂಬುದು ಬಲುಕೋಡಿಯಂತೆ, ಅದರಂತೆ 50ಕ್ಕೆ ಪೊಲೀಸರು ಹಠ ಹಿಡಿದಾಗ ಗುಂಡಪ್ಪ (ಹೆಸರು ಬದಲಾವಣೆಯಾಗಿರಬಹುದು) ಎಂಬಾತ ತನ್ನ ಮನೆಯಲ್ಲಿರುವ ಬಂಗಾರವನ್ನು ಸ್ಥಳೀಯ ಬ್ಯಾಂಕಿನಲ್ಲಿ ಅಡವಿಟ್ಟು, 30,000 ರೂಗಳನ್ನು ತಂದಿದ್ದಾನೆ. ಇನ್ನುಳಿದ 20,000ಗಳನ್ನು ಒಂದೆರಡು ದಿನಗಳಲ್ಲಿ ಕೊಡುವುದಾಗಿಯೂ ಮಾತು ನಡೆದಿದೆ. ಹೀಗಾಗಿ 02 ನವೆಂಬರ್ ಕಳೆದು ಹೋಯಿತು.

ಜಗತ್ತಿನ ಯಾವ ಮೂಲೆಯಲ್ಲಿಯಾದರೂ ನಡೆಯುವ ಘಟನೆಯನ್ನು ಹಟ್ಟಿಯ ಮಂದಿ ಕ್ಷಣಾರ್ಧದಲ್ಲಿ ತಿಳಿದುಕೊಳ್ಳುತ್ತಾರೆ. ಅಷ್ಟೊಂದು ಪಾಸ್ಟ್ ಆಗಿ ಹಟ್ಟಿಯ ಜನರಿದ್ದಾರೆ.

ಆರೋಪಿಯ ಹತ್ತಿರ ಸಿಕ್ಕಿರುವ ನೋಟುಗಳು ಜೆರಾಕ್ಸ್ ಮಾಡಿರುವಂತವು. ಅವುಗಳನ್ನು ಕಂಪ್ಯೂಟರ್ ಪ್ರಿಂಟರ್ನಲ್ಲಿ ಮುದ್ರಿಸಲಾಗಿದೆ ಎಂಬೆಲ್ಲಾ ಸಬೂಬುಗಳು ನಡೆದಿವೆ.

ಇಷ್ಟೇಲ್ಲ ನಡೆದು ಹಟ್ಟಿಗೆ ಹಟ್ಟಿಯೇ ಬೋ... ಎನ್ನುತ್ತಿರುವಾಗ ಯಾರೋ ಒಬ್ಬರು ಈ ವಿಷಯವನ್ನು ಮೈಕ್1 ಸಾಹೇಬರಿಗೆ ಪೋನ್ ಮಾಡಿ ತಿಳಿಸಿದ್ದಾರೆ.

ನಂತರ ಸಿಟ್ಟಿಗೆ ಬಂದ ಮೈಕ್1 ಸಾಹೇಬರು ಲಿಂಗಸ್ಗೂರಿನ ಮೈಕ್3ರವರನ್ನು ವಿಚಾರಿಸಿದ್ದಾರೆ. ಅಷ್ಟೋತ್ತಿಗೆ ಘಟನೆ ನಡೆದು 24 ಘಂಟೆಗಳಾಗಿ, ಖೋಟಾನೋಟಿನ ಸುದ್ದಿ ಎಲ್ಲಾ ಚಾನೆಲ್ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು.

ಕೊನೆಗೆ ಸೋಪಾ ಮಾರುವ ನಾಗರಾಜ ಎಂಬಾತ ನೀಡಿದ ದೂರಿನ ಮೇಲೆ ಹಟ್ಟಿ ಠಾಣೆ ಗುನ್ನೆ ನಂ: 143/2011 ಕಲಂ: 420.489(ಎ). ಸಹಿತ 34 ಐಪಿಸಿ ನೇದ್ದರಲ್ಲಿ ವೆಂಕೋಬ ಬಡಿಗೇರ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ನೋಟುಗಳನ್ನು ತಯಾರಿಸುತ್ತಿದ್ದ ಎನ್ನಲಾದ ಪ್ರಿಂಟ್ರ್ನ್ನು ವಶಪಡಿಸಿಕೊಳ್ಳಲಾಗಿದೆ.

No comments:

Post a Comment

Thanku