Friday, June 15, 2012

ಭಕ್ತಿಯ ರಸಗಂಗೆಯಲ್ಲಿ ಮುಳುಗಿದ ಕಲ್ಯಾಣ ಕರಡಕಲ್

ನಾನಿನ್ನು ಕಲಿಯಬೇಕಾಗಿದೆ, ನಾನಿನ್ನು ಬೆಳೆಯಬೇಕಾಗಿದೆ ಎನ್ನುವ ವಿನಮ್ರತೆ ಇದ್ದವರು ಎತ್ತರೆತ್ತರಕ್ಕೆ ಬೆಳೆಯುತ್ತಾರೆ. ನಾನು ಎಲ್ಲವನ್ನು ಸಾಧಿಸಿದ್ದೇನೆಂದು ಭೀಗುವವರು ಬೆಳೆಯದೇ ಕಮರಿ ಹೋಗುತ್ತಾರೆ. ಆಗ ಅವರ ನೈತಿಕ ಪತನವು ಆರಂಭವಾಗುತ್ತದೆ. ಅಂಥವರ ಜ್ಞಾನದ ಅರಿವು ಸಂಕುಚಿತವಾಗಿ ಒಂದು ಸೀಮಿತಿ ಪರಿಧಿಯಲ್ಲೇ ಸುತ್ತುತ್ತಿರುತ್ತದೆ. ಇನ್ನೂ ಕೆಲವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಬೌದ್ಧಿಕವಾಗಿ, ನೈತಿಕವಾಗಿ ಬೆಳೆಯುತ್ತಾ ತಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ. ಅದಕ್ಕೊಂದು ಉದಾಹರಣಿ ಎಂಬಂತೆ ಮೊನ್ನೆ ನಡೆದ ಚಿತ್ತರಗಿ ವಿಜಯ ಮಹಾಂತೇಶ ಶಿವಯೋಗಿಗಳ 100ನೇ ಶತಮಾನೋತ್ಸವ ಸಮಾರಂಭ ಇಡೀ ಮನುಕುಲಕ್ಕೆ ಒಂದು ಸವಾಲು ಹಾಕುವಂತಿತ್ತು.
    ಬಸವತತ್ವವೆಂದರೆ, ಕಬ್ಬಿಣದ ಕಡಲೆಯೆಂದು ನಂಬಲಾಗಿದೆ. ಆದರೆ, ಅದು ನೆನೆದ ಸಿಹಿ ಕಡಲೆ ಎಂಬುದು ಮೂರ್ಖ ಜನರಿಗೆ ಗೊತ್ತಿಲ್ಲ. ಬಸವತತ್ವ ಅಳವಡಿಸಿಕೊಳ್ಳದ ನೂರಾರು ಮಾತನಾಡದ ದೇವರುಗಳಿಗೆ ಕೈಮುಗಿಯುವ ಹೆಡ್ಡರೆ ಇಂದು ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಅಂತವರಿಗೆ ಹೇಗೆ ತಾನೇ ಅರ್ಥವಾಗುತ್ತದೆ. ಬಸವತತ್ವ.
    ಇಲಕಲ್ ಅಜ್ಜನವರ ಮಾತನ್ನು ಇಡಿ ಊರಿಗೆ ಊರೇ, ತಂದೆ ತಾಯಿ ಮಾತನ್ನು ಕೇಳದವರು ಸಹ ಶಿರಬಾಗಿ ಕೇಳಿ ಮಾಡುತ್ತಾರೆ. ಹಾಗಿದ್ದರೆ, ಅಜ್ಜನವರ ಬಳಿ ಇರುವ ಬಸವತತ್ವ ಕುರಿತು ಎಂತಹ ಮಾಹಿತಿ ಇರಬಹುದು ನೀವೆ ಊಹಿಸಿ.
    ಸಮಾಜದ ಕಟ್ಟಕಡೆಯ, ಅಸ್ಪೃಶ್ಯ, ನಗರಸಭೆಯಲ್ಲಿ ಕೆಲಸ ಮಾಡುವವರು ಹಾಗೂ ವೇಶ್ಯಾವಾಟಿಕೆಯನ್ನು ತೊರೆದು ಬಂದಂತವರನ್ನು ಶ್ರೀಗಳು ತಮ್ಮ ಪಕ್ಕಕ್ಕೆ ಕೂರಿಸಿಕೊಂಡು ಸನ್ಮಾನ ಇತರೆ ಕಾಯಕ್ರಮಗಳನ್ನು ಮಾಡುತ್ತಾರೆ. ಇದನ್ನು ಇಡೀ ಊರೇ ಒಪ್ಪಿಕೊಂಡಿದೆ.
    ಇಂದು ಸಮಾಜದಲ್ಲಿ ಸ್ವಾಮೀಜಿಗಳು ತಮ್ಮನ್ನು ವೈಭವಿಕರಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ನಮ್ಮ ಜಿಲ್ಲೆ ಮತ್ತು ಹಲವು ತಾಲ್ಲೂಕಾಗಳಲ್ಲಿ ಕಾರ್ಯಕ್ರಮಗಳು ನಡೆದರೂ ಕೂಡ ಅವುಗಳಿಗೆ ಯಾವುದೇ ತಳ ಬುಡಗಳಿಲ್ಲ. ಆದರೆ, ನಮ್ಮ ಶ್ರಿಗಳು ಮಾಡುವ ಕಾರ್ಯಕ್ರಮಕ್ಕೆ ಅರ್ಥವಿದೆ. ಎಲ್ಲರೂ ನಿಜಕಾವಿಯ ಸತ್ಯದ ಕೆಲಸವನ್ನು ಮರೆತಿದ್ದಾರೆ. ಇಂತಹ ಶರಣರಿಗಾಗಿ ನಾವೇ ಶಾಲೆಗಳನ್ನು ತೆಗೆದು ಮತ್ತೊಮ್ಮೆ ಅ,ಆ,ಇ,ಈ ಕಲಿಸಬೇಕಾಗಿ ಬಂದಿರುವ ದುರಂತ.
    ಪ್ರತಿಯೊಂದು ಧಾಮರ್ಿಕ ಕಾರ್ಯಕ್ರಮಗಳೆಂದರೆ, ಪಲ್ಲಕ್ಕಿಉತ್ಸವ, ಮನುಷ್ಯರ ಮೇಲೆ ಅಮಾನವೀಯ ಸವಾರಿ, ಗಿಡಮರ, ರಥ, ಲಕ್ಷದೀಪೋತ್ಸವ, ಕುಂಭ, ಕೋಳಿ, ಕುರಿಬಲಿ, ಹಾರಾಟ-ಚೀರಾಟ ಮೊದಲಾದವುಗಳು ನಡೆಯುತ್ತವೆ.
    ಆದರೆ, ಇಲ್ಲಿ ಇವುಗಳಿಗೆ ಮನ್ನಣಿ ಇಲ್ಲ. ಕಲ್ಯಾಣ ಶರಣರ ವಚನಗಳನ್ನು ಆನೆಯ ಮೇಲಿಟ್ಟು ಮೆರವಣಿಗೆಯನ್ನು ಮಾಡಿ ಬಸವನ ತತ್ವ, ವಿಚಾರ, ಹಾಡುಗಳನ್ನು ಯುವಕ-ಯುವತಿಯರು ತಿಳಿಸುತ್ತಾ ಹೋಗುತ್ತಾರೆ. ಈ ಉತ್ಸವವನ್ನು ನೋಡಲು ಸಾಕಷ್ಟು ಜನರು ಸೇರುತ್ತಾರೆ.. ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಕಲ್ಯಾಣ ರಾಜ್ಯದಲ್ಲಿ ನಡೆದಂತೆ ಆಗುತ್ತದೆ.
    ಒಂದು ತಿಂಗಳುಗಳ ಕಾಲ ನಿರಂತರ ಪ್ರವಚನ, ಶಿವಾನುಭವ ಇತ್ಯಾದಿ ನಡೆಯುತ್ತವೆ. ಇಲ್ಲಿನ ಯುವಕರೆಲ್ಲ ಕಾರ್ಯಕ್ರಮಕ್ಕೆ ಬೇಕಾಬಿಟ್ಟಿಯಾಗಿ ಮಟ್ಕಾ, ಇಸ್ಪೀಟ್ ಜೂಜುಕೋರರ ಬಳಿ ಚಂದಾಪಟ್ಟಿ ಎತ್ತಿ ಕಾರ್ಯಕ್ರಮವನ್ನು ಮಾಡುವುದಿಲ್ಲ. ಬದಲಿಗೆ ತಾವುಗಳೇ ಪರಿಶ್ರಮದಿಂದ ದುಡಿದ ಮತ್ತು ದಾಸೋಹದಿಂದ ಬಂದಂತಹ ಹಣದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಕಾರ್ಯಕ್ರಮ ಮಾಡುವ ಯುವಕರ ಈ ಕೆಲಸ ಬಸವಣ್ಣನವರಿಗೆ ಮೆಚ್ಚುಗೆಯಾಗುವುದಿಲ್ಲವೇ..?
    ಈ ಹಿಂದೆ ಸಿದ್ದಲಿಂಗ ಶ್ರೀಗಳ ಪಟ್ಟಾಭಿಷೇಕಕ್ಕೆ ತಡೆಯೊಡ್ಡಿದಾಗ ವೀರಶೈವ ಎಂಬ ಪದಕ್ಕೆ ಚ್ಯುತಿ ಬಾರದ ಹಾಗೆ ವೀರತನ ತೋರಿದ್ದು ಈ ಯುವಕರು. ಮಾನವ ಜೀವನದ ವಾಸ್ತವಿಕ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆಯ ಸತ್ಯದ ತಿಳುವಳಿಕೆ ಬಹುಮುಖ ಕ್ರಾಂತಿಗೆ ಕಾರಣ.
    ನಿಜಗುರು ಮಹಾಂತಸ್ವಾಮಿಗಳ ಕಾರ್ಯಕ್ರಮದಲ್ಲಿ ನಾವುಗಳು ಭಾಗವಹಿಸುವುದು ನಮ್ಮ ಪುಣ್ಯವೆಂದೇ ಭಾವಿಸಬೇಕು. ಅಂತಹ ಭಕ್ತಿಯ ರಸಗಂಗೆಯಲ್ಲಿ ನಮ್ಮನ್ನು ಶುದ್ದಿಗೊಳಿಸುವ ನಿಮ್ಮ ಕಾರ್ಯಕ್ಕೆ ನಮೋನಮಃ. ನಾವು ಹೇಳುತ್ತಿರುವುದು ಬರೀ ಭಕ್ತರಲ್ಲ, ನೋಡಿದ ಶರಣರೆಲ್ಲ ನಿಬ್ಬೆರಗಾಗಬೇಕು.
    ಇಂದು ಪ್ರಶಸ್ತಿಗಳು ಮಾನದಂಡವನ್ನು ಮರೆತಿವೆ. ಸಕರ್ಾರಗಳು ಇಂತಹ ಗ್ರಾಮಗಳಿಗೆ "ಬಸವಪ್ರಶಸ್ತಿ" ಯನ್ನು ನೀಡಿ ಪ್ರೋತ್ಸಾಹಿಸಬೇಕು. ಬಸವ ಪ್ರಶಸ್ತಿ ತಿರಸ್ಕರಿಸುವವರಿಗೆ ಕೊಡುವದಕ್ಕಿಂತ ಅದರ ಮಹತ್ವವನ್ನು ಸಾರುವವರಿಗೆ ಕೊಟ್ಟರೆ ಒಳ್ಳೆಯದು ಎಂಬುದು ನಮ್ಮ ಭಾವನೆ.

ಮಲ್ಲಿಕಾಜರ್ುನರೆಡ್ಡಿ ಕರಡಕಲ್.

No comments:

Post a Comment

Thanku