Thursday, August 19, 2010

ತಕ್ಕಡಿ ಈಗ 3ತುಕ್ಕಡಿಹಟ್ಟಿ


ತಕ್ಕಡಿ ಈಗ 3ತುಕ್ಕಡಿಹಟ್ಟಿ ಚಿನ್ನದ ಗಣೆಯ ಸಿಬ್ಬಂದಿ ಹಾಗೂ ಕಾಮರ್ಿಕರನ್ನು ಪ್ರತಿನಿಧಿಸುವ ಯೂನಿಯನ್ ಒಂದಾದ (ಎ.ಐ.ಟಿ.ಯು.ಸಿ) ತಕ್ಕಡಿ ಸಂಘಟನೆಯೂ ಈಗ 3ತುಕ್ಕಡಿಯಾಗಿ ಹೋಗಿದೆ. ಎಲ್ಲ ವಿಷಯದಲ್ಲೂ ಸರಿಸಮಾನ ಆಗಿರಬೇಕಾದ ತಕ್ಕಡಿ ಈಗ ಬ್ಯಾಲೆನ್ಸ್ ಕಳೆದುಕೊಂಡಿದೆ. ತಕ್ಕಡಿಯನ್ನು ತೂಗುವವರು ಬಳ್ಳಾರಿಯಲ್ಲಿದ್ದರೆ, ಅವುಗಳ ತೂಕದ ಕಲ್ಲುಗಳು ಮಾತ್ರ ಹಟ್ಟಿಯಲ್ಲಿ ಉಳಿದಿವೆ. ಅದರಲ್ಲಿ ನಮ್ಮದು ಹೆಚ್ಚು ತೂಕ, ನಿಮ್ಮದು ಕಡಿಮೆ ತೂಕ ಎಂಬ ಕಿತ್ತಾಟ ಈಗ ಶುರುವಾಗಿದೆ. ಕಾಮರ್ಿಕರು ವಾಲೇಬಾಬನ ಆಡಳಿತ ಬೇಸತ್ತು ಅದಕ್ಕೆ ಪಯರ್ಾಯವಾಗಿ ಇವರನ್ನು ಆಯ್ಕೆ ಮಾಡಿದ್ದರು. ಆದರೆ, ಇವರುಗಳು ಕೂಡ ಆತನ ಆಡಳಿತದಿಂದ ಹೊರತಾಗಿಲ್ಲ. ಒಟ್ಟಿನಲ್ಲಿ ಕಾಮರ್ಿಕರಿಗೆ ಊದುವದನ್ನು ಬಿಟ್ಟು ಬಾರಿಸುವದನ್ನು ತೆಗೆಂದುಕೊಂಡಂತಾಗಿದೆ. ಎಲ್ಲ ವಿಷಯದಲ್ಲಿ ವಾಲೇಬಾಬುಗಿಂತ ನಾವೇನು ಕಡಿಮೆ ಎಂಬದನ್ನು ಸಾಭೀತುಮಾಡಿದ್ದಾರೆ ಈ ಕಾಮ್ರೇಡುಗಳು. ವಾಲೇಬಾಬು ತನ್ನ ಆಡಳಿತದಲ್ಲಿ ಬಿಟ್ಟಿ ಬಂದದ್ದೆಲ್ಲ ತಾನೊಬ್ಬನೇ ತಿಂದು ಮಿಕ್ಕಿ ಉಳಿದ ಅಷ್ಟಿಷ್ಟನ್ನು ತನ್ನ ಹಿಂಬಾಲಕರಿಗೆ ನೀಡುತ್ತಿದ್ದ. ಈಗ ಅದೇ ಪದ್ದತಿಯನ್ನು ಸ್ವಲ್ಪ ವಿಭಿನ್ನವಾಗಿ ಕಾಮ್ರೇಡ್ಗಳು ಮುಂದುವರೆಸಿದ್ದಾರೆ. (ವಾಲೇಬಾಬು ತನ್ನ ಹೆಂಡತಿಯ ಕೈಯಲ್ಲಿ ಕಂಪನಿ ಮನೆ ಕೀಲಿಗಳನ್ನು ಕೊಟ್ಟು ಹಣತೆಗೆದುಕೊಳ್ಳುತ್ತಿದ್ದರೆ, ಇವರು ನೇರವಾಗಿ ನಾಮನಿದರ್ೇಶಿತ ಸದಸ್ಯರ ಮುಖಾಂತರ ಆಫ್ಬಾಟಲ್ ಡ್ರಿಂಕ್ಸ್ ಅರ್ಧಕೆಜಿ ಕಾರಕ್ಕೆ ಮನೆ ಕೀಲಿಗಳನ್ನು ಕೊಡಿಸುತ್ತ್ತಿದ್ದಾರೆ.) ಇನ್ನೊಂದು ಈ ಕಾಮ್ರೇಡ್ಗಳ ಸಂಘಟನೆಯಲ್ಲಿ ನಾಮನಿದರ್ೇಶಿತ (ನಲ್ಲದ) ಸದಸ್ಯನಿಂದ ಹಿಡಿದು ಚುನಾಯಿತಿ ಪ್ರತಿನಿಧಿಗಳವರೆಗೆ ಹಣಕ್ಕಾಗಿ ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಲು ಹೊರಟಿದ್ದಾರೆ. ಯಾರಾದರೂ ಕಾಮರ್ಿಕರು ಇದನ್ನು ಪ್ರಶ್ನಿಸಿದರೆ, ಆಗ ಇದನ್ನೇ ವಾಲೇಬಾಬು ಮಾಡುತ್ತಿದ್ದ ಕೇಳುವವರು ಆವಾಗ ಎಲ್ಲಿಗೆ ಹೋಗಿದ್ದೀರಿ. ಅದನ್ನು ಬಿಟ್ಟು ನಮ್ಮನ್ನು ಕೇಳುವದಕ್ಕೆ ಬಂದಿರೇನು ಎಂದು ಗದರಿಸುತ್ತಾರೆ.? ಇಂತಹ ಎಷ್ಟೋ ಘಟನೆಗಳು ನಮ್ಮ ಪತ್ರಿಕೆಯ ಕಣ್ಮುಂದೆ ನಡೆದಿವೆ. (ಮೊನ್ನೆಯೇ ಆ ಸಂಘಟನೆ ಅಧ್ಯಕ್ಷರ ಒಂದು ಜಮೀನಿನ ಪ್ರಕರಣದಲ್ಲಿ ಹಣದ ಸಂಬಂಧ ದೊಡ್ಡ ವಾಗ್ವಾದವೇ ನಡೆದು ಹೋಗಿ ಕೊನೆಗೆ ಅಧ್ಯಕ್ಷರಿಗೆ ಮರಳಿ ಹಣ ನೀಡುವಂತಾಯಿತು.) ಇವರ ಎಲ್ಲಾ ಚಾಕ-ಚಕ್ಯತೆಯನ್ನು ಗೊತ್ತು ಮಾಡಿಕೊಂಡಿರುವ ಗಣಿ ಆಡಳಿತ ಮಂಡಳಿ ಇವರ ನಡುವೆ ಇರುವ ಕಂದಕವನ್ನು ಇನ್ನಷ್ಟು ಆಳವಾಗಿ ತೋಡಲು ಜೆ.ಸಿ.ಬಿಗಳನ್ನು ಬಳಸಿಕೊಳ್ಳುತ್ತಿದೆ. ಎ.ಐ.ಟಿ.ಯು.ಸಿ ಮುಖಂಡರು ಹಾಗೂ ಕಾಮರ್ಿಕ ಸಂಘದ ಅಧ್ಯಕ್ಷರು ಆದ ಯಂಗ್&ಎನಜರ್ಿಟಿಕ್ ಮ್ಯಾನ್ ಅರವಿಂದ ಮಳೆಬೆನ್ನೂರು ಸಂಘಟನೆಯಲ್ಲಿ ತಲೆದೋರಿರುವ ಭಿನ್ನಮತವನ್ನು ಸರಿಪಡಿಸಲು ಈಗಾಗಲೇ ಸುಮಾರು ಬಾರಿ ಎಲ್ಲ ಸದಸ್ಯರನ್ನು ಕರೆದು ಸಭೆಮಾಡಿದಾಗ್ಯೂ ಅವೆಲ್ಲವುಗಳು ವಿಫಲವಾಗಿ ಹೋಗಿವೆ. ಕಾಮರ್ಿಕರಿಗೆ ಮನೆ ವಿತರಿಸುವಲ್ಲಿ ಹಣ, ಕಾಮರ್ಿಕರಿಗೆ ಯಾವುದಾದರೂ ಒಂದು ಸೌಲಭ್ಯವನ್ನು ಕೊಡಿಸುವಲ್ಲಿ ಹಣ, ವಗರ್ಾವಣಿಗಳನ್ನೂ ಮಾಡುವಲ್ಲಿ ಹಣ ಒಟ್ಟಿನಲ್ಲಿ ಹಣ ಎಲ್ಲೇಲ್ಲಿ ಸಿಗುತ್ತದೆಯೋ ಅಲ್ಲಿ ಎಲ್ಲ ತಮ್ಮ ಕೈಚಳಕ ತೋರಿಸುತ್ತಾ ಕಾಮ್ರೇಡ್ಗಳು ಸನ್ಮಾನ್ಯ ಶ್ರೀ ವಾಲೇಬಾಬು ಅವರಿಗೆ ಮಾದರಿಯಾಗಿದ್ದಾರೆ. ಕಾಮರ್ಿಕ ಸಂಘಕ್ಕೆ ಒಂದೇ ಬಾರಿಗೆ 18 ಸದಸ್ಯರು ಆಯ್ಕೆಗೊಂಡಾಗ ಕಾಮರ್ಿಕರು ತಮ್ಮ ಸಮಸ್ಯೆಗಳೆಲ್ಲ ಇತ್ಯರ್ಥವಾಗಿ ಹೋಗುತ್ತವೆ, ತಕ್ಕಡಿ ಈ ಬಾರಿ ಎಲ್ಲರನ್ನು ಒಂದೇ ತೂಕದ ಮೇಲೆ ತೂಗಿ ನ್ಯಾಯ ಒದಗಿಸಿಕೊಡುತ್ತದೆ, ನಮ್ಮ ಮಕ್ಕಳಿಗೆ ನೌಕರಿ ಖಚಿತ, ವಿಶೇಷ ಸೌಲಭ್ಯಗಳು ನಮಗೆ ಸಿಗಬಹದು ಎಂಬಿತ್ಯಾದಿ ಹಗಲುಗನಸನ್ನು ಕಾಮರ್ಿಕ ವರ್ಗ ಕಂಡಿತ್ತು. ಆದರೆ, ದುರಂತಕ್ಕೆ ತಕ್ಕಡಿ ಹೇಳಿದ ಯಾವೊಂದು ಪ್ರಮುಖ ಭೇಡಿಕೆಗಳು ಈವರೆಗೆ ಈಡೇರಲಿಲ್ಲ. (ಅದಕ್ಕೆ ಬೇರೆ-ಬೇರೆ ಕಾರಣಗಳು ಇರಬಹುದು) ಪ್ರಮುಖವಾಗಿ ಕಾಮರ್ಿಕರ ಮಕ್ಕಳಿಗೆ ವಿ.ಆರ್.ಎಸ್.ನ ಅಡಿಯಲ್ಲಿ ಕೆಲಸವೊಂದನ್ನು ದೊರಕಿಸಿಕೊಟ್ಟರೆ, ಎಷ್ಟೋ ಜನರು ಇಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ದಿನೇ ದಿನೇ ಕಾಮರ್ಿಕರು ನಿವೃತ್ತಿಯ ಅಂಚಿಗೆ ತಲುಪುತ್ತಿದ್ದಾರೆ. ಅವರ ಮಕ್ಕಳು ವಯಸ್ಸುಗಳು ಮುಗಿಯುತ್ತಿವೆ. ಅವರಿಗೆ ಮುಂದೆ ಕುಟುಂಬ ನಿರ್ವಹಣೆ ತೊಂದರೆಯಾಗುತ್ತಿದೆ.ಇನ್ನು ದಿನಗೂಲಿ ನೌಕರರ ಪಾಡು ಕೇಳುವವರು ಇಲ್ಲವಂತಾಗಿದೆ. ವಾಲೇಬಾಬು ಚುನಾವಣಿಯಲ್ಲಿ ಗೆಲ್ಲುವ ಸಂದರ್ಭದಲ್ಲಿಯೂ ಇವರ ನೇಮಕಾತಿಯ ವಿಷಯವನ್ನು ಮಾತನಾಡಿ 3ವರ್ಷ7ತಿಂಗಳು ಕಾರ್ಯಭಾರ ಮಾಡಿದನು. ತದನಂತರ ಬಂದ ಕಾಮ್ರೇಡುಗಳು 30 ತಿಂಗಳು ತನಕ ಮಾಡಿದ್ದು ಅದನ್ನೇ. ವಿಧಿವಶ ಕಂಪನಿ ಮಾತ್ರ ಸಕರ್ಾರದ ಮಟ್ಟದಲ್ಲಿ ದಿನಗೂಲಿಗಳ ಫೈಲಿಗೆ ಸಹಿ ಬಿದ್ದರೆ ನಾವು ನೇಮಕ ಮಾಡಿಕೊಳ್ಳುತ್ತೇವೆ ಅಲ್ಲಿಯವರೆಗೆ ಅವರು ಗುತ್ತೇದಾರನ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳುತ್ತಿದೆ. ಇದರ ಮಧ್ಯೆ ದಿನಗೂಲಿಗಳು ಈಗ ಸಿಗುತ್ತಿರುವ ಫುಡ್ಕಿಟ್ನ ಆಸೆಗಾಗಿ ದುಡಿಯುತ್ತಲೇ ಸಾಗಿದ್ದಾರೆ. ಇನ್ನು ಹಟ್ಟಿಯ ಗಣಿಗಾರಿಕೆ ವಿಷಯಕ್ಕೆ ಬಂದರೆ, ಮೊದಲಿನ ಪರಿಸ್ಥಿತಿಗೂ ಮತ್ತೂ ಕಂಪನಿಯನ್ನು ಈಗಿನ ಪರಿಸ್ಥಿತಿಗೆ ಹೊಲಿಸಿದರೆ, ಸ್ವಲ್ಪಮಟ್ಟಿನ ಸುಧಾರಣೆಯಾಗಿರುವುದು ಕಂಡುಬರುತ್ತದೆ. ಯಾಕೆಂದರೆ ಅನುಭವಿಗಳ ಕೊರತೆಯನ್ನು ಕಂಪನಿ ಈ ಮೊದಲು ಅನುಭವಿಸುತ್ತಿತ್ತು. ಆದರೆ, ಈಗ ಪ್ರಕಾಶ, ಕಪಿಲವಾಸ್ತುನಂತಹ ಹಿರಿಯ ಅಧಿಕಾರಿಗಳು ಕಂಪನಿಗೆ ಮತ್ತೇ ಮರಳಿ ಪ್ರವೇಶಿಸಿರುವುದರಿಂದ ವೈಜ್ಞಾನಿಕ ತಳಹದಿಯ ಮೇಲೆ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಒಂದು ಕಡೆಯೂ ಕಂಪನಿಯೂ ಎಲ್ಲ ದೃಷ್ಟಿಕೋನದಿಂದ ಸುರಕ್ಷಿತವಾಗಿದೆ. ಇದೊಂದೇ ಕಾಮರ್ಿಕರಿಗೆ ಸಮಾಧಾನವಾಗಿರುವ ವಿಷಯ. ಕಂಪನಿಯಲ್ಲಿನ ಉತ್ಪಾದನೆ ಅಥವಾ ಬೆಳವಣಿಗೆಯೂ ಕುಂಠಿತವಾಗಿದ್ದರೆ ಅದಕ್ಕೆ ಹೊಣೆಗಾರರನ್ನಾಗಿ ಕಂಪನಿ ಕಾಮರ್ಿಕರನ್ನು ಮಾಡುತ್ತಿತ್ತು. ಆಗ ಕಾಮರ್ಿಕ ಸಂಘ ಅನಿವಾರ್ಯವಾಗಿ ಕಾಮರ್ಿಕರ ಮೇಲೆ ಇಲ್ಲಸಲ್ಲದ ಗೂಬೆಗಳನ್ನು ಕೂರಿಸುತ್ತಿತ್ತು. ಅಂತಹ ಯಾವ ಬೆಳವಣಿಗೆಗಳು ಇಲ್ಲಿಯವರೆಗೆ ನಡೆದಿಲ್ಲ. ಕಾಮರ್ಿಕ ಸಂಘವು ಮೇ1 ಮತ್ತು ಆಗಸ್ಟ್15, ಜನೆವರಿ26ರ ಭಾಷಣಗಳಿಗೆ ಮಾತ್ರ ಸೀಮಿತವಾಗಿ ಹೋಗಿವೆ. ಕೊನೆಯ ಮೇ ದಂದು ಇದೇ ತಕ್ಕಡಿ ಸಂಘಟನೆಯೂ ತೆಲುಗಿನ ಸಿನಿಮಾ ನಟ, ನಿದರ್ೇಶಕ, ನಿಮರ್ಾಫಕ ಮಾದಲ ರಂಗಾರಾವ್ರವರನ್ನು ಕರೆಸಿ ಬಹುದೊಡ್ಡ ಬಹಿರಂಗ ಸಭೆಯೊಂದನ್ನು ಏರ್ಪಡಿಸಿ ಈ ಮೊದಲು ತಾನು ಕೊಟ್ಟ ಭರವಸೆಗಳು ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಬೊಬ್ಬೆ ಇಟ್ಟಿತು. ಆದರೆ, ಅವ್ಯಾವುಗಳು ಇಲ್ಲಿಯವರೆಗೆ ಜಾರಿಗೆ ಬಂದಿರುವುದಿಲ್ಲ.ವೇತನ ಒಪ್ಪಂದದ ಮೇಲೆ ಎಲ್ಲರ ಕಣ್ಣು ಮುಂಬರುವ ಚುನಾವಣೆಯಲ್ಲಿ ಆಯ್ಕೆಯಾಗುವವರು ಕಾಮರ್ಿಕರ ವೇತನ ಒಪ್ಪಂದವನ್ನು ಮಾಡುತ್ತಾರೆ. ಇದರಲ್ಲಿ ಪ್ರಧಾನ ಕಾರ್ಯದಶರ್ಿಯ ಪಾತ್ರ ಮಹತ್ವದ್ದಾಗಿರುತ್ತದೆ. ಕಾರಣ ಎಲ್ಲರೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಹುದ್ದೆಯ ಅರ್ಹತೆ ಇಲ್ಲದವನು ಆ ಸ್ಥಾನಕ್ಕೆ ಆಯ್ಕೆಯಾದರೆ, ಕಾಮರ್ಿಕರ ಗತಿ ಅದೋಗತಿ. (ಇನ್ನೇನು ಊರುಬಿಡಬೇಕು ಎಂದು ಯೋಚಿಸುತ್ತಿದ್ದ ವಾಲೇಬಾಬುಗೆ ಈ ಹಿಂದೆ ಕಾಮರ್ಿಕರು ಜಿ.ಎಸ್ ಹುದ್ದೆಗೆ ಆಯ್ಕೆ ಮಾಡಿ 40 ತಿಂಗಳು ದೊಡ್ಡ ಯಾತನೆಯನ್ನು ಅನುಭವಿಸಿದ್ದಾರೆ.)ಕಾಮರ್ಿಕ ಏನೆನ್ನುತ್ತಾನೆ? ಕಾಮರ್ಿಕನಿಗೆ ಇಲ್ಲಿಯವರೆಗೆ ಕಾಮರ್ಿಕ ಸಂಘಗಳು ಏನು ಮಾಡಿವೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮಲ್ಲಪ್ಪ ಶಾಪ್ಟಿನ ಹಲವಾರು ಹಿರಿಯ ಕಾಮರ್ಿಕರನ್ನು ಪತ್ರಿಕೆ ಸಂಪಕರ್ಿಸಿದಾಗ ; ನೋಡಿ ಸಾರ್ ನಾವು 35ವರ್ಷ ಕಂಪನಿಯಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದೇವೆ. ನಾವು ಎಲ್ಲ ಯೂನಿಯನ್ಗಳನ್ನು ನೋಡಿದ್ದೇವೆ. ಎಲ್ಲ ಲೀಡರ್ಗಳನ್ನು ಕಂಡಿದ್ದೇವೆ. ಕಂಪನಿಯ ಆಡಳಿತ ವರ್ಗವು ನಮಗೆ ಚನ್ನಾಗಿ ಗೊತ್ತಿದೆ. ಆದರೆ ಇಂದು ಅಸಹಾಯಕರಾಗಿ ನಾವುಗಳು ನಮ್ಮ ಮುಂದಿನ ಜೀವನ ಲಹರಿಗಾಗಿ ನಮ್ಮ ಮಕ್ಕಳಿಗೆ ಕೆಲಸ ಕೊಡಿ ಎಂದು ಅಂಗಲಾಚಿಕೊಳ್ಳುತ್ತಿದ್ದೇವೆ. ಆದರೆ, ಪ್ರತಿಬಾರಿ ಆಯ್ಕೆಯಾಗುವ ಎಲ್ಲ ಯೂನಿಯನ್ ಮುಖಂಡರು ನಮಗಿರುವ ಅನಿವಾರ್ಯತೆಯನ್ನು ಬಳಸಿಕೊಂಡು ನಮ್ಮ ಕುಟುಂಬಗಳ ಜೀವನದ ಜೊತೆ ಆಟವಾಡುತ್ತಿದ್ದಾರೆ. ನಮಗೆ ವಾಲೇಬಾಬು ಬಂದರೆನು? ಅಮೀರಅಲಿ ಬಂದರೇನು? ನಮ್ಮ ಮಕ್ಕಳಿಗೆ ಕೆಲಸ ಬೇಕು ಎಂಬುದೊಂದೇ ನಮಗೆ ಮುಖ್ಯ. ನಾವು ಈ ಕಂಪನಿಯ ಏಳಿಗೆಗಾಗಿ ಇಷ್ಟು ಇಷ್ಟು ಹಗಲಿರುಳು ದುಡಿದಿದ್ದೇವೆ. ಅಂತಹದರಲ್ಲಿ ಕಂಪನಿ ನಮ್ಮ ಮಕ್ಕಳಿಗೆ ಕರೆದು ಕೆಲಸ ಕೊಡಬೇಕಿತ್ತು. ಅದನ್ನು ಬಿಟ್ಟು ನಾವುಗಳು ರೊಕ್ಕ ತಗೊಂಡು ಆದ್ರೂ ಕೂಡ ನಮ್ಮ ಮಕ್ಕಳಿಗೆ ನೌಕರಿಗೆ ಕೊಡಸ್ರೀ ಎಂದು ಯೂನಿಯನ್ ಲೀಡರ್ಗಳ ಹತ್ತಿರ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗಿ ನಾವೇನು ಕಾಮರ್ಿಕ ಸಂಘದ ಬಗ್ಗೆ ಹೇಳಿದರೂ ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಙಠಣಟಿರ & ಚಿಟಿರಡಿಥಿ ಟಚಿಟಿ ರಡಿಠಣಠಿತಕ್ಕಡಿಯಲ್ಲಿ ತುಕ್ಕಡಿಯಾದ ಯಂಗ್ ಅರವಿಂದ ಮಳೆಬೆನ್ನೂರು & ಆ್ಯಂಗ್ರೀ ಎಸ್.ಎಂ ಶಫಿಯವರದ್ದು ಒಂದು ಗುಂಪು ಈಗಾಗಲೇ ಕಾಮರ್ಿಕ ಸಂಘದ ಚುನಾವಣೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಶಫಿಯವರು ಇನ್ನೇನು ಕೆಲವು ತಿಂಗಳುಗಳಲ್ಲಿ ನಿವೃತ್ತಿಯಾಗುತ್ತಾರೆ. ಅವರು ಆಗಿ ಒಪ್ಪಿದರೆ, ಮತ್ತೊಂದು ಅವಧಿಗೆ ಪ್ರಧಾನಕಾರ್ಯದಶರ್ಿ ಸ್ಥಾನಕ್ಕೆ ಕಣಕ್ಕಿಳಿಸುವುದು. ಇಲ್ಲವಾದರೆ, ಬಳ್ಳಾರಿಯ ಭೂಪತಿಯನ್ನು ಕಣಕ್ಕಿಳಿಸಬೇಕೆಂಬುದು ಯಂಗ್ಮ್ಯಾನ್ನ ಒಳಾಲೋಚನೆ. ಇದಕ್ಕೆ ಶಫೀಯ ಸಮ್ಮತಿ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇಲ್ಲಿ ಅಮೀರಅಲಿ ಆಗಲಿ, ಶಾಂತಪ್ಪ ಮಳ್ಳಿ ಆಗಲಿ ಜಿ.ಎಸ್ ಆಗುವುದು ಮಳೆಬೆನ್ನೂರು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಅರವಿಂದ ಮಳೆಬೆನ್ನೂರವರು ತಮ್ಮ ಯೋಜನೆಯ ಹಿನ್ನಲೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.ಅಮೀರ್ಅಲಿ ಅಲಿಯಾಸ್ ಸ್ಟೇಟ್ಪಾರ್ವಡರ್್ಅನಂತ ಸುಬ್ಬರಾವ್ನ ಅವಧಿಯಲ್ಲಿ ಪರೋಕ್ಷ ಜಿ.ಎಸ್ ಆಗಿ, ನಂತರ ತಾನೇ ಇನ್ನೊಂದು ಅವಧಿಯಲ್ಲಿ ಜಿ.ಎಸ್ ಆಗಿ ಕೆಲಸ ಮಾಡಿದ ಅಮೀರಅಲಿ ತಕ್ಕಡಿಯಲ್ಲಿ ನೇರವಾದ ಮಾತುಗಳನ್ನು (ಡಾಮಿನೇಟೆಡ್ ಪರ್ಸನ್) ಆಡುತ್ತಾ ಬೇರೆಯವರ ಕೆಂಗಣ್ಣಿಗೆ ಗುರಿಯಾಗಿರುವ ವ್ಯಕ್ತಿ. ಇವರು ಕಳೆದ ಚುನಾವಣೆಯಲ್ಲಿ ಜಿ.ಎಸ್ ಹುದ್ದೆಗೆ ಸ್ಪದರ್ೆ ಮಾಡಬೇಕೆಂದು ಬಯಸಿದಾಗ ಅವರ ಸ್ವಜಾತಿಯವರೇ, ಅಮೀರಲಿಗೆ ಜಿ.ಎಸ್ ಕೊಟ್ಟರೆ ನಾವ್ಯಾರು ತಕ್ಕಡಿಯ ಸಮೀಪಕ್ಕೆ ಬರುವುದಿಲ್ಲ ಎಂಬ ಸಂದೇಶವನ್ನು ಸಂಘಟನೆಯ ಹಿರಿಯರಿಗೆ ನೀಡಿದ್ದರು. ಆ ಕಾರಣ ಸಂಘಟನೆ ಕಳೆದ ಬಾರಿ ಅಮೀರಅಲಿಯನ್ನು ಬಿಟ್ಟು, ಸಂಘಟನೆ ತೊರೆದು ಹೋಗಿದ್ದ ಶಫಿಯವರಿಗೆ ಮಣೆ ಹಾಕಿತ್ತು.ಆದರೆ, ಅಮೀರಅಲಿ ಈ ಅವಧಿಯ 30ತಿಂಗಳು ಬೆಳಿಗ್ಗೆ 8ರಿಂದ ಸಂಜೆ 5ರವೆಗೆ ಕೆಲಸ ಮಾಡುತ್ತಾ ಅದರೊಳಗಡೆಯೇ ಕಾಮರ್ಿಕರ ಸಮಸ್ಯೆಗಳನ್ನು ಬಗೆಹರಿಸುತ್ತಾ ಬರುತ್ತಿದ್ದಾರೆ. ಕಾರಣ ಇದೇ ಮಾನದಂಡದನ್ವಯ ಅಮೀರಲಿಗೆ ಜಿ.ಎಸ್ ಸ್ಥಾನ ನೀಡಬೇಕೆಂಬುದು ಕೆಲವರ ಅಭಿಮತವಾಗಿದೆ. ಇನ್ನೊಂದೆಡೆ ಕಳೆದ ಚುನಾವಣೆಯಲ್ಲಿ ಅಮೀರಲಿಯನ್ನು ವಿರೋಧಿಸಿದ್ದ ಸ್ವಜಾತಿ ಗುಂಪೊಂದು ಇತ್ತೀಚಿಗೆ ಸಭೆ ಸೇರಿ ಶಫಿಯನ್ನು ಬೆಂಬಲಿಸದಂತೆ ತಿಮರ್ಾನ ತೆಗೆದುಕೊಂಡಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಇದರಲ್ಲಿ ಒಂದು ಸ್ಪಷ್ಟವಾಗಿ ಗಮನಸಿಬೇಕಾದದ್ದೆಂದರೆ, (ಅಮೀರಲಿ ಜಿ.ಎಸ್ ಆದರೆ ತನ್ನದೇ ಆಡಳಿತ ಶುರುಮಾಡುತ್ತಾನೆ, ಮತ್ತು ಈತ ಸಂಘಟನೆಯಲ್ಲಿ ಎಲ್ಲರನ್ನು ತುಳಿಯುತ್ತಾನೆ ಎಂಬ ಹೆದರಿಕೆಗೆ ಯಾರು ನೇರವಾಗಿ ಈತನ ಬೆಂಬಲಕ್ಕೆ ಕೆಲವೊಂದು ಬಾರಿ ಬರುವುದಿಲ್ಲ. ಇದು ಈಗಾಗಲೇ ಅಧ್ಯಕ್ಷರಿಗೆ ಗೊತ್ತಾಗಿದೆ.) ಆದರೆ, ಕಾಮರ್ಿಕರು ಮಾತ್ರ ಬಹಳ ಜಾಗರೂಕತೆಯಿಂದ ಈ ಬಾರಿ ಮತವನ್ನು ಚಲಾಯಿಸುತ್ತಾರೆ. ಯಾಕೆಂದರೆ, ಈ ಸಲ ಅಗ್ರೀಮೆಂಟ್ ಇದೆ. ತಕ್ಕಡಿಯಲ್ಲಿ ಅಮೀರಲಿ ಹಾಗೂ ಅಧ್ಯಕ್ಷರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೆರಿರುವದರಿಂದ ಅಮೀರಲಿ ಸಂಘಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಗುಮಾನಿ ಕೂಡ ಎಲ್ಲೆಡೆ ಹರಡಿದೆ!ಶಾಂತಪ್ಪ ಮಳ್ಳಿ ಅಲಿಯಾಸ್ ಸೂಪರ್ಫಾಸ್ಟ್.ಕಳೆದ ಬಾರಿ ಪ್ರಧಾನ ಕಾರ್ಯದಶರ್ಿ ಸ್ಥಾನದಿಂದ ವಂಚಿತರಾದ ಶಾಂತಪ್ಪ ಮಳ್ಳಿ ಈ ಬಾರಿ ಅನಿವಾರ್ಯವಾಗಿ ಸಂಘಟನೆ ನನಗೆ ಜಿ.ಎಸ್ ಸ್ಥಾನಕ್ಕೆ ಸ್ಪದರ್ೇ ಮಾಡಲು ಅವಕಾಶ ಮಾಡಿ ಕೊಡುತ್ತದೆ ಎಂದು ತಿಳಿದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೀರಅಲಿಗೆ ಎದುರಾಳಿಯಾಗಿರುವ ಎಲ್ಲ ಸದಸ್ಯರು ಮಳ್ಳಿಯ ಪರ ಬಹಿರಂಗವಾಗಿ ಕೆಲಸ ಮಾಡುತ್ತಾರೆ. ಯಾಕೆಂದರೆ ನಾಳೆ ಮಳ್ಳಿ ಜಿ.ಎಸ್ ಆದರೆ, ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎಂಬ ದುರಾಸೆ.ಆದರೆ, ಮಳ್ಳಿ ಜಿ.ಎಸ್ ಸ್ಥಾನಕ್ಕೆ ಅರ್ಹರಲ್ಲ ಎಂಬುದನ್ನು ಕೆಲವೊಬ್ಬರು ಈಗಾಗಲೇ ಕಾಮರ್ಿಕರ ಮಧ್ಯೆ ಹೇಳಿಕೊಂಡು ತಿರುಗುತ್ತಿದ್ದಾರೆ. ಮತ್ತು ಮಳ್ಳಿಗೆ ಜಿ.ಎಸ್ ಕುರಿತು ತಕ್ಕಡಿಯಲ್ಲಿಯೇ ಕೆಲವು ಸದಸ್ಯರಿಗೆ ಅಸಮಧಾನ ಮತ್ತು ಅಸಮಧಾನವಿದೆ.ಮುಂಬರುವ ಚುನಾವಣಿಯಲ್ಲಿ ಎಲ್ಲರೂ ಜಿ.ಎಸ್ ಹುದ್ದೆಗಾಗಿ ಕುಸ್ತ್ತಿ-ಮಸ್ತಿ ಮಾಡುತ್ತಿರುವುದರಿಂದ ಕಾಮರ್ಿಕರ ಮಧ್ಯೆ ಸಮಾನವಾಗಿರಬೇಕಾದ ತಕ್ಕಡಿ ಮೂರು ತುಕ್ಕಡಿಯಾಗಿ ಹೋಗಿದೆ. ಈ ಪರಿಸ್ಥಿತಿಯನ್ನು ವಾಲೇಬಾಬು ಅಗಲಿ ಅಥವಾ ಇನ್ನುಳಿದ ಬೇರೆ ಸಂಘಟನೆಯವರಾಗಲಿ ಬಳಸಿಕೊಂಡು ಮೊದಲಿನ ಪರಿಸ್ಥಿತಿ ನಿಮರ್ಾಣ ಮಾಡಿದರೆ, ಆಶ್ಚರ್ಯಪಡಬೇಕಾಗಿಲ್ಲ!
ಸತ್ಯ. ಆಗಸ್ಟ 15 2010

No comments:

Post a Comment

Thanku