Sunday, September 25, 2011

ವೈಜ್ಞಾನಿಕ ಇತಿಹಾಸ ಭಾಗ 2

ವೈಜ್ಞಾನಿಕ ಇತಿಹಾಸ ಭಾಗ 2



ನಗರ ನಿಮರ್ಾಣವನ್ನು ಬಲ್ಲ ಯಾರೋ ಹೊರಗಿನವರು ಇಲ್ಲಿಗೆ ಬಂದು ಈ ನಗರಗಳನ್ನು ನಿಮರ್ಿಸಿರಬೇಕೆಂದು ಕೋಸಂಬಿಯವರು ಅಭಿಪ್ರಾಯಪಡುತ್ತಾರೆ.


ಕ್ರಿ.ಪೂ 1750ರವರೆಗೆ ಈ ನಾಗರೀಕತೆ ಅಭಿಪ್ರಾಯ ಪಡುತ್ತಾರೆ ಕ್ರಿ.ಪೂ1750ರವರೆಗೆ ಮೆಸಪೊಟೋಮಿಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿತ್ತು ಎನ್ನುವದಕ್ಕೆ ಅಲ್ಲಿ ನಡೆಯಲಾದ ಪುರಾತತ್ವ ಶೋಧನೆಗಳು ಆಧಾರಗಳನ್ನು ಒದಗಿಸುತ್ತವೆ. ಸಿಂಧೂ ತೀರದ ಅವಶೇಷಗಳ ಮೇಲೆ ನೆಲವು 30ರಿಂದ 50 ಅಡಿಯಷ್ಟು ಬೆಳೆದಿದೆ ಎಂಬುದರಿಂದ ಅದು 1ಸಾವಿರದಷ್ಟು ವರ್ಷಗಳ ಹಿಂದಿನದೆಂದು ಗ್ರಹಿಸಬಹುದಾದರೆ ಈ ನಾಗರೀಕತೆಯ ಕಾಲ ಕ್ರಿ.ಪೂ 3000ದಿಂದ 1750ಎಂದು ನಿರ್ಧರಿಸಬಹುದು. ಒಂದು ವಿಚಿತ್ರವಾದ ವಿಷಯವೆಂದರೆ, ಇಷ್ಟು ಧೀರ್ಘಕಾಲದ ನಾಗರೀಕತೆಯ ಹರಪ್ಪ, ಮೆಹಂಜೋದಾರ ಪಟ್ಟಣಗಳ ನಿಮರ್ಾಣಗಳಲ್ಲಿ ಯಾವ ಬಗೆಯ ಬದಲಾವಣಿಗಳು ಕಾಣಬರದೇ ಹೋಗುತ್ತದೆ.


ಆರ್ಯರು ಮಧ್ಯ ಆಶಿಯಾ ಪ್ರಾಂತ್ಯಕ್ಕೆ ಸೇರಿದವರೆಂಬ ನಿರ್ಣಯಕ್ಕೆ ಇತರ ಚರಿತ್ರಕಾರರಂತೆ ಕೋಸಂಬಿಯವರು ತಲುಪುತ್ತಾರೆ. ಭಾರತ ಖಂಡಕ್ಕೆ ಈ ವಲಸೆ ಪ್ರಧಾನವಾಗಿ 2 ಹಂತದಲ್ಲಿ ಬಂದಿತೆಂದು ಕೋಸಂಬಿಯವರು ಹೇಳುತ್ತಾರೆ. ಕ್ರಿ.ಪೂ 2000ದ ಸುಮಾರಿನಲ್ಲಿ 1ಬಾರಿ, ಕ್ರಿ.ಪೂ 1ಸಾವಿರದ ವೇಳೆಗೆ ಬಾರಿ ಸಂಖ್ಯೆಯ ಆರ್ಯ ಸಮುದಾಯಗಳು ವಲಸೆ ಬಂದವು. ಮೊದಲು ಬಂದದ್ದು ಕ್ರಿ.ಪೂ 1750ಸುಮಾರಿನಲ್ಲಿ ಸಿಂಧೂನಾಗರೀಕತೆಯ ನಾಶಗೈದರು ಎಂಬುದರ ಕೋಸಂಬಿಯವರ ಅಂದಾಜು. ಈ ಆರ್ಯರು ಕುದುರೆಗಳನ್ನು ಸವಾರಿಗಾಗಿ ಬಳಸುತ್ತಿದ್ದರು. ಕುದುರೆಗಳನ್ನು ಬಂಡಿ ಅಥವಾ ರಥಗಳಿಗೆ ಕಟ್ಟಿ ಯುದ್ದಗಳಿಗೆ ಬಳಸುತ್ತಿದ್ದರು. ಒಂದು ನಾಗರೀಕತೆ ಆರ್ಯರಿಗಿಂತ ಉನ್ನತ ಸ್ಥಿತಿಯದ್ದಾಗಿದ್ದರೂ ಅವರಿಗಿಂತ ಇವರಲ್ಲಿ ಉತ್ತಮ ಆಯುಧಗಳಾಗಿದ್ದವು. ಯುದ್ಧದಲ್ಲಿ ಅವರು ನಿಪುಣರಾಗಿದ್ದರೆಂಬುದಕ್ಕೆ ನಿದರ್ಶನವೆಂದರೆ ಪಡುವಲ ಆಸಿಯಾದಿಂದ ಭಾರತ ಉಪಖಂಡದವರೆಗೆ ಅವರು ತಮಗಿಂತ ಉನ್ನತ ನಾಗರೀಕತೆಯ ಕಂಚುಯುಗದ ಕೃಷಿಕರನ್ನು ತಮಗಿಂತ ಹಿಂದುಳಿದ ಅನಾಗರೀಕ ಶಿಲಾಯುಗದ ಅರಣ್ಯವಾಸಿಗಳನ್ನು ಸದೆಬಡೆಯುವುದು ಅವರಿಗೆ ಸಾಧ್ಯವಾದದು.


ಗೋತ್ರಗಳು ಸಮುದಾಯ ವ್ಯವಸ್ಥೆಯನ್ನು ಮಾರ್ಪಡಿಸಿಕೊಂಡು ವರ್ಣವ್ಯವಸ್ಥೆಗೆ ರೂಪಾಂತರಗೊಂಡ ಹಂತ ನಮ್ಮ ದೇಶಕ್ಕೆ ಆರ್ಯರು ಬಂದ ನಂತರದಲ್ಲಿ ಸಾಧಿಸಿದ ಮೊತ್ತ ಮೊದಲ ಪ್ರಮುಖ ಬದಲಾವಣಿ ಎನ್ನಬಹುದು. ಆದಿಮಾಪಶುಪಾಲಕ ಸಮಾಜವನ್ನು ಬಿಟ್ಟು ಕಬ್ಬಿಣದ ಬಳಕೆಯನ್ನರಿತ ಕೃಷಿಕ ವರ್ಗ ಸಮಾಜ ರೂಪುಗೊಂಡ ಬದಲಾವಣಿ. ಅಲ್ಲಿಗೆ ಗೋತ್ರಗಳು ಸಮುದಾಯಗಳು ಸಾಮಾಜಿಕವಾಗಿ ಅರ್ಥರಹಿತವಾಗಿ ಹೋದವು. ಇಂದಿಗೂ ಗೋತ್ರಗಳೂ ಬ್ರಾಹ್ಮಣರಲ್ಲಿ ಉಳಿದುಕೊಂಡು ಬಂದಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಗೋತ್ರಗಳು ಹೊರಟುಹೋಗಿ ಕುಲಗಳು ಬಂದಿವೆ. ಆದರೂ, ಆಚಾರ್ಯಗಳಲ್ಲಿ ಇಂದಿಗೂ ಕುಲಗೋತ್ರಗಳೆರಡು ಮುಖ್ಯವಾಗಿವೆ.


ಋಗ್ವೇದ ಕಾಲಕ್ಕೆ ಆರ್ಯರ ಸುತ್ತಲು ಇದ್ದ ಹೆಚ್ಚಿನವು ಅರಣ್ಯವಾಸಿ ಸಮುದಾಯಗಳು ಬಹುಶಃ ಕೆಲವು ಪಶುಪೋಷಕ ಹಾಗೆಯೇ ಸಿಂದೂ ನದಿ ತೀರದಲ್ಲಿ ಹಗುರ ಕೃಷಿಪದ್ದತಿಯನ್ನು ಅನುಸರಿಸುತ್ತಿದ್ದ ಕೃಷಿಕ ಸಮಾಜದ ಕುರುಹುಗಳು ಹರಪ್ಪ ಮೆಹಂಜೋದಾರ್ರ ಅವಶೇಷಗಳಲ್ಲಿ ದೊರೆತಿವೆ. ಒಟ್ಟು ಬುಡಕಟ್ಟಿನ ಹಿರಿಯನನ್ನು ರಾಜನೆಂದು ಕರೆಯುತ್ತಿದ್ದರು. ಗೋಮಾಂಸ ಆರ್ಯರ ಪ್ರಧಾನ ಆಹಾರ. ತಮ್ಮ ಪಶುಸಂಪತ್ತು ನಿರಂತರವಾಗಿ ಅಭಿವೃದ್ದಿ ಹೊಂದಲೆಂದು ದೇವರಲ್ಲಿ ಮೊರೆ ಇಡುತ್ತಿದ್ದರು. ಆ ದೇವರುಗಳಿಗೆ ಸ್ತ್ರೋತ್ರ, ಮಂತ್ರಗಳನ್ನು ಅಪರ್ಿಸಿದರೆ, ತಮ್ಮ ಅಗತ್ಯಗಳು ಪೂರೈಸುತ್ತವೆಂದು ನಂಬುತ್ತಿದ್ದರು. ಹಾಗಾಗಿಯೇ ಆಚರಣಿಗಳು, ಮಂತ್ರ, ಸಾಹಿತ್ಯವು ಸೃಷ್ಟಿಯಾದವು.


ಋಗ್ವೇದ ಸೂಕ್ತಗಳೆಂದರೆ, ಇಂತಹ ಯಜ್ಞಗಳ ಆಚರಣಿಯಲ್ಲಿ ಪಠಿಸಲಾಗುವ ಮಂತ್ರಗಳು ಋಗ್ವೇದವನ್ನು ಹಾಡುವ ಪದ್ದತಿಯೇ ಸಾಮವೇದ. ಋಗ್ವೇದವು ಅನಂತರದ ಕಾಲದಲ್ಲಿ ಮಾಪರ್ಾಡುಗಳನ್ನು ಹೊಂದಿ ಪಡೆದ ಆಚರಣಾ ಸಂಬಂಧಿ ಮಂತ್ರಗಳೇ ಯಜುವರ್ೇದ. ಹಾಗೂ ಅಥವರ್ಣ ವೇದಗಳು ಸಂಕ್ಷಿಪ್ತವಾಗಿ ಸೂಕ್ತಗಳ ರೂಪದಲ್ಲಿ ವೇದಮಂತ್ರಗಳನ್ನು ವ್ಯಾಖ್ಯಾನಿಸುವ ಬ್ರಾಹ್ಮಣರ ಗ್ರಂಥಗಳೇ ಇವುಗಳೊಂದಿಗೆ ಅರಣ್ಯಕಗಳು, ಉಪನಿಷತ್ತುಗಳನ್ನು ಕ್ರೋಡಿಕರಿಸಿ ಒಟ್ಟಿಗೆ ವೇದಸಾಹಿತ್ಯವೆನ್ನುತ್ತಾರೆ.


ಋಗ್ವೇದದ ಕಾಲದಲ್ಲಿ ಆರ್ಯರಲ್ಲಿ ವರ್ಣವ್ಯವಸ್ಥೆ ಇರಲಿಲ್ಲ. ವಿವಿಧ ಆರ್ಯ ಸಮುದಾಯಗಳು ಆ ಸಮುದಾಯಗಳಲ್ಲಿ ಗೋತ್ರಗಳು ಮಾತ್ರವೇ ಇದ್ದವು. ಕೆಲವು ಆಯರ್ೇತರ ಸಮುದಾಯಗಳನ್ನು ಒಂದುಗೂಡಿಸುವಲ್ಲಿ ಪುರೋಹಿತರು ಪ್ರಮುಖ ಪಾತ್ರ ವಹಿಸಿದ್ದರು. ಯಾರು ತಮಗೆ ಸೂಕ್ತವಾಗಿ ಲಾಭವನ್ನು ನೀಡುವರೋ ಅವರನ್ನು ಆರ್ಯನೆಂದು ಹೊಗಳಲು ಅವನ ಪರವಾಗಿ ಯಜ್ಞವನ್ನು ಆಚರಿಸಲು ಪುರೋಹಿತರು ಎಂದಿಗೂ ಸಿದ್ದರೆ? ಹೀಗೆ ಮಾಡುತ್ತಲೇ ಆರ್ಯ ಸಮಾಜವನ್ನು ವಿಸ್ತರಿಸುತ್ತಾ ಅದೇ ಸಂದರ್ಭದಲ್ಲಿ ಅವರು ಬಲಗೊಳ್ಳುತ್ತಾ (ಪುರೋಹಿತ ಬ್ರಾಹ್ಮಣ) ವರ್ಗವಾಗಿ ರೂಪತಾಳಿದರು. ಋಗ್ವೇದ ಕಾಲದ ಆರ್ಯರ ಮುಖ್ಯ ದೇವರು ಅಗ್ನಿ. ಯಜ್ಞಗಳಲ್ಲಿ ಪ್ರತ್ಯಕ್ಷವಾಗಿ ಅಗ್ನಿಗೆ ಬಲಿಯನ್ನು ಅಪರ್ಿಸುತ್ತಿದ್ದರು. ಅಗ್ನಿಯಲ್ಲದೇ ಇತರ ದೇವರುಗಳಾದ ವರುಣ, ಮಿತ್ರ, ಸೂರ್ಯ, ವಾಯು, ಅಶ್ವಿನಿಗಳು, ಪಜನ್ಯ ಮೊದಲಾದವರು. ಬಹುಕಾಲದವರೆಗೆ ನಿಸರ್ಗ ಸಂಗತಿಗಳು ಮಾನವೀಕೃತ ರೂಪತಾಳಿದ್ದವೇ ಆಗಿದ್ದವು. ಈ ಎಲ್ಲಾ ದೇವರುಗಳ ನಾಯಕನಾದ ಇಂದ್ರನು ಯುದ್ದನಿಪುಣ. ಆತನಿಗೆ ಬಲಿಗಳನ್ನು ಅಪರ್ಿಸಿ ಅವನನ್ನು ಒಲಿಸಿಕೊಂಡ ಆರ್ಯಸಮುದಾಯಗಳಿಗೆ ಇತರ (ಆರ್ಯ ಮತ್ತು ಆಯರ್ೇತರ ಸಮುದಾಯಗಳೊಂದಿಗೆ ಯುದ್ದಗಳಾದಾಗ ಇಂದ್ರನು ಸಹಾಯ ನೀಡುತ್ತಾನೆಂದು ನಂಬಿದ್ದರು. ಈ ಯುದ್ದಗಳೆಂದರೆ, ಮುಖ್ಯವಾಗಿ ಪಶುಸಂಪತ್ತಿಗಾಗಿ ಜಲಮೂಲಗಳಿಗೋಸ್ಕರ ನಡೆಯುತ್ತಿದ್ದವು. ಋಗ್ವೇದದಲ್ಲಿ ಆರ್ಯರ ಶತ್ರುಗಳೆಂದರೆ, ವಣರು, ದಾಸರು (ದಾಸ್ಯಗಳು) ವಣರು ಧನವಂತರೆಂದು ಲೋಬಿಗಳೆಂದು ಆಸೆಬುರಕರೆಂದು ವೇಧಗಳಲ್ಲಿ ವಣರ್ೀತವಾಗಿದೆ.


ದಾಸ ಎಂದರೆ, ನಂತರ ಕಾಲದಲ್ಲಿ ಸೇವಕ ಭೃತ್ಯ ಆದರೆ, ಋಗ್ವೇದ ಕಾಲದಲ್ಲಿ ಕೇವಲ ಆಯರ್ೇತರು ಎಂದಷ್ಟೇ ಅರ್ಥ. ಪುರೋಹಿತ ಪ್ರಾಬಲ್ಯ ಇದ್ದ ಸ್ಥಿತಿಯನ್ನು ಗುರುತಿಸಿದರೆ, ಬಹುಶಃ ಈ ಬ್ರಾಹ್ಮಣ ವರ್ಣದಲ್ಲಿ ಆರ್ಯ ಅಂಶಕ್ಕಿಂತ ದಾಸ ಅಂಶವೇ ಹೆಚ್ಚಿನದ್ದಿರಬಹುದು. ಬಹಳ ಕಾಲದವರೆಗೆ ಬ್ರಾಹ್ಮಣ ಗೋತ್ರಗಳು, ಋಷಿಗಳು ಬಹುಮಟ್ಟಿಗೆ ದಾಸರಿಂದಲೇ ಬಂದವರು ಎಂಬುದು ಕೋಸಂಬಿಯವರ ಅಭಿಪ್ರಾಯ.


ಋಗ್ವೇದ ಕಾಲದಲ್ಲಿ ಆಹಾರ ಉತ್ಪಾದನೆಯಾಲಿ, ಸ್ಥಿರಕೃಷಿಯಾಗಲಿ ಇರಲಿಲ್ಲ. ರಾಜರ ರಾಜ್ಯಗಳು ಇರಲಿಲ್ಲ. ಅಂದರೆ, ಇಲ್ಲಿ "ರಾಜ" ಎಂದರೆ, ಸಮುದಾಯದ ಮುಖ್ಯಸ್ಥ. ಒಂದು ಕಡೆ ಋಗ್ವೇದದ ತುಂಬ ದಾಸರನ್ನು ವಣರನ್ನು ದೂಷಿಸುತ್ತಾ ಮತ್ತೊಂದೆಡೆ ಅದೇ ದಾಸ ರಾಜರಿಂದ ಈ ಪುರೋಹಿತರು ದಕ್ಷಿಣೆಗಳನ್ನು ಪಡೆದು ಅವರಿಗಾಗಿ ಯಜ್ಞಗಳನ್ನು ಮಾಡುತ್ತಿದ್ದರು. ವಣರಲ್ಲಿ ಅಗ್ರಗಣ್ಯನಾದ ಬೃಬು ಬಹಳ ಉದಾರಸ್ವಭಾವದವನೆಂದು ಆರ್ಯನಾದ ಭಾರದ್ವಾಜನು ಹೊಗಳಿದ್ದಾನೆ. ನಂತರ ಕಾಲದಲ್ಲಿ ಇದನ್ನು ಬದಲಿಸಿ ಹೇಳಲು ಬ್ರಾಹ್ಮಣರು ಬಗೆಬಗೆಯ ಲಾಭಗಳನ್ನು ಹಾಕಿದ್ದಾರೆ. ವಶಅಶುನ ಎಂಬ ಪುರೋಹಿತನು ಬಲ್ಬೂತ್, ತರುಕ್ಷ ಎಂಬ ದಾಸರಿಂದ 3 ಒಂಟೆಗಳನ್ನು ದಕ್ಷಿಣೆಯಾಗಿ ಪಡೆದು ಅವರನ್ನು ಹೊಗಳಿದ್ದಾನೆ. ಋಗ್ವೇದದಲ್ಲಿ ಮೊತ್ತಮೊದಲ ಸಮುದಾಯಗಳೆಂದು 5ಗುಂಪುಗಳು (ಪಂಚಜನ) ಹೆಸರು ಗಳಿಸಿದ್ದಾರೆ. ಅವರಲ್ಲಿ ಯಾದವರು ಒಬ್ಬರು. ಆದರೆ, ಈ ಯಾದವರ ದೇವರು ಕೃಷ್ಣ, ಕರಿಯ, ಇಂದ್ರನ ಶತ್ರು ಈ ನಡುವೆ 2 ಬದಲಾವಣಿಗಳು ಬಂದಿವೆ. ಒಂದು ದಾಸರ ಪುರೋಹಿತರು, ಆರ್ಯರ ಪುರೋಹಿತರು ಒಂದಾಗಿ ಬ್ರಾಹ್ಮಣ ವರ್ಣವಾಗಿ ರೂಪ ತಳೆದರು. ಉಶಸ್ಸು ಮೊದಲಿಗೆ ಆರ್ಯದೇವತೆಯೇ ಅಲ್ಲವೆಂದು ಪಂಜಾಬ್ ಪ್ರಾಂತ್ಯಕ್ಕೆ ಆರ್ಯರು ಬರುವ ಪೂರ್ವದಲ್ಲಿ ಇದ್ದ ಅರಣ್ಯವಾಸಿಗಳ ಮಾತೃದೇವತೆ ಆಕೆಯೆಂಬುದು ಕೋಸಂಬಿಯವರ ಅಭಿಪ್ರಾಯ. ಊರ್ವಶಿ, ಮೇನಕೆ, ರಂಭೆ ಮೊದಲಾದ ಅಪ್ಸರೆಯರು ಕೂಡ ಈ ಆರ್ಯ ಪೂರ್ವಜರ ಜಲದೇವತೆಗಳೆ.


ಋಗ್ವೇದ ಕಾಲದ ಋಷಿಗಳ ಪೈಕಿ ವಿಶ್ವಾಮಿತ್ರನೊಬ್ಬನೇ ಖಚಿತವಾಗಿ ಆರ್ಯ ಎನ್ನುತ್ತಾರೆ. ಇಬ್ಬರು ಆರ್ಯದೇವತೆಗಳ ವೀರ್ಯವು ಒಂದು ಮಡಿಕೆಯಲ್ಲಿ ಬಿದ್ದದ್ದು ಅದರಿಂದ ಈತನ ಜನನವಾಯಿತೆಂದು ಹೇಳುವುದು ಇನ್ನೊಂದು ಕಥೆ. ಪುಷ್ಕರಣಿಯಲ್ಲಿ ದೊರಕಿದವನೆಂದು ಮೂರನೆಯ ಕಥೆ. ಆರ್ಯ, ಅನಾರ್ಯರು ವೀಲಿನಗೊಳ್ಳುತ್ತಿದ್ದ ಪ್ರಕ್ರಿಯೆಯ ಅಂಗವಾಗಿ ಬ್ರಾಹ್ಮಣ ವರ್ಗ ಎಂಬುದೊಂದು ಸೃಷ್ಟಿಯಾಯಿತು. ಬ್ರಾಹ್ಮಣರಲ್ಲಿ ಕಣ್ವ (ಕಣ್ವಾಯನ ಗೋತ್ರವಿದೆ). ಆದರೆ, ಅಥವರ್ಣವೇದದಲ್ಲಿ ಕಣ್ವ ಎಂಬುವವನು ಒಬ್ಬ ಕಪ್ಪು ರಾಕ್ಷಸ. ಹೌದಂಬರ ವೃಕ್ಷವನ್ನು ತನ್ನ ಸಮುದಾಯ ಚಿಹ್ನೆಯಾಗಿಯುಳ್ಳ ಒಂದು ಬುಡಕಟ್ಟು ಪ್ರಾಚೀನ ಕಾಲದಲ್ಲಿತ್ತು. ಆ ಮರವನ್ನು ಇಂದಿಗೂ ಪವಿತ್ರವೆಂದೇ ಭಾವಿಸಲಾಗುತ್ತದೆ. ಗುಜರಾತಿನಲ್ಲಿ ಹೌದಂಬರ ಕುಲವೆಂಬ ಹಿಂದುಳಿದ ಜಾತಿಯಿದೆ.


ಈ ಅರಣ್ಯಕ ಸಮುದಾಯಕ್ಕೆ ಸೇರಿದ ಶುನಶೇಷನನ್ನು ಬಲಿಕೊಡಲು ಹೊರಟಿದ್ದರಿಂದ ರಕ್ಷಿಸಿ ವಿಶ್ವಾಮಿತ್ರನು ಅವನಿಗೆ ದೇವರಾತನೆಂದು ಹೆಸರಿಡುತ್ತಾನೆ. ಆದರೆ, ಇಂದಿಗೂ ದೇವರಾತ ಗೋತ್ರಿಕರಾದ ಬ್ರಾಹ್ಮಣರಿಗೆ ವಿಶ್ವಾಮಿತ್ರ ಗೋತ್ರದವರಿಗೆ ವಿವಾಹ ನಿಷಿದ್ದವೆಂದು ಇಡಿಯಾಗಿ ಈ ಕಥೆಯನ್ನು ಶುನ್ಯಶ್ಯೇಪನೆಂಬ ಅನಾರ್ಯ ಪುರೋಹಿತನು ವಿಶ್ವಾಮಿತ್ರ ಗೋತ್ರವನ್ನು ಸ್ವೀಕರಿಸಿ ಆರ್ಯನಾದನೆಂದು ಅಥರ್ೈಸಬೇಕಾಗುತ್ತದೆ. ಬ್ರಾಹ್ಮಣಗೋತ್ರ ನಾಮವಾಗಿದೆ. ಈ ಗೋತ್ರದವರು ರೂಪಿಸಿದ ಯಜುವರ್ೇಧ ಸಂಪ್ರದಾಯವೇ ಇಂದಿಗೂ ಉಳಿದುಬಂದಿದೆ. ಋಗ್ವೇದವನ್ನು ಬಿಟ್ಟರೆ, ಅತ್ಯಂತ ಪ್ರಮುಖವೆನಿಸಿದ ಯಜುವರ್ೇಧ ಸಂಪ್ರದಾಯವೇ ಇಂದಿಗೂ ಉಳಿದುಬಂದಿರುವುದು. ಋಗ್ವೇದವನ್ನು ಬಿಟ್ಟರೆ, ಅತ್ಯಂತ ಪ್ರಮುಖವೆನಿಸಿದ ಯಜುವರ್ೇದವನ್ನು ಈ ಗೋತ್ರದವರೇ ನಂತರದ ಕಾಲದಲ್ಲಿ ರೂಪಿಸಿದರು. ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಆರ್ಯ,ಆಯರ್ೇತರ ಸಂಘರ್ಷ ಸಮ್ಮಿಲನಗಳ ಕ್ರಮ ಸಾಕಷ್ಟು ವಿಸೃತವಾಗಿಯೇ ನಡೆಯಿತು. ಸಮ್ಮಿಲನದಲ್ಲಿ ಮುಖ್ಯಪಾತ್ರ ವಹಿಸಿದ ಪುರೋಹಿತರೆಲ್ಲ ಒಂದಾಗಿ ಅನಿವಾರ್ಯ ಅಂಶಪ್ರಧಾನವಾದ ಒಂದು ಬ್ರಾಹ್ಮಣ ವರ್ಣ ಹುಟ್ಟಿಕೊಂಡಿತು. ಇದೇಲ್ಲ ಒಂದೇ ಏಟಿಗೆ ನಡೆದುಬಿಟ್ಟಿತೆಂದಲ್ಲ. ಬಹುಶಃ ಕ್ರಿ.ಪೂ 1500ರಿಂದ 1000ದವರೆಗಿನ ಅವಧಿಯಲ್ಲಿ ನಡೆದಿರಬಹುದು.


ಕ್ರಿ.ಪೂ 1200ರಿಂದ 1000ಸುಮಾರಿನಲ್ಲಿ ಕಬ್ಬಿಣದ ಬಳಕೆ ಹೆಚ್ಚಾಗುತ್ತಿದ್ದಂತೆ ಆಹಾರ ಉತ್ಪಾದನೆ, ಪಶುಸಂಗೋಪನೆಗಿಂತಲೂ ಪ್ರಮುಖ ಜೀವನಾಧಾರವಾಗಲು ತೊಡಗಿತು. ಯಜುವರ್ೇದ ಕಾಲಕ್ಕೆ ಯಜ್ಞಗಳ ಆಚರಣಿ ಬಹಳ ಹೆಚ್ಚಿತು. ಉಪನಿಷತ್ತಿನಲ್ಲಿ ಜನಕರಾಜನು ಯಜ್ಞವಲ್ಕನಿಗೆ ಹತ್ತು ಸಹಸ್ರ ಗೋವುಗಳನ್ನು ಉಡುಗೊರೆಯಾಗಿತ್ತನು. ಈ ಸಾಹಿತ್ಯವನ್ನು ಸೃಷ್ಟಿಸಿದವರು ಬ್ರಾಹ್ಮಣರೇ. ಸಂಸ್ಕೃತದಲ್ಲಿ ನೇಗಿಲಿಗೆ "ಹಲ" ಎನ್ನುತ್ತಾರೆ. ಗ್ರಾಮ ಎಂದರೆ, ಪಶುಗಳನ್ನು ಮೇಯಿಸುತ್ತಾ ಸಂಚರಿಸುವ ಗುಂಪು ಅಂತಹ ಎರಡು ಗುಂಪುಗಳು ಮುಖಾಮುಖಯಾದಾಗ ಕಲಹಗಳು ಉಂಟಾಗುತ್ತಿದ್ದವು. ಇದರಿಂದಾಗಿಯೇ ಯುದ್ದಕ್ಕೆ "ಸಂಗ್ರಾಮ" ಎಂಬ ಮಾತು ಬಂತು.


ಕ್ರಿ.ಪೂ 1000ದಿಂದಲೂ ಇವೆಲ್ಲ ನಿರಂತರವಾಗಿ ಸಾಗಿ ಬಂದವು. ಯಜುವರ್ೇದದ ವೇಳೆಗೆ ವರ್ಲಿ, ಬಾರ್ಲಿ, ಎಳ್ಳು, ಗೋಧಿ, ಬೇಳೆ, ಜೋಳ ಹಾಗೂ ಸಜ್ಜೆ ಮೊದಲಾದವುಗಳನ್ನು ಬೆಳೆಯಲಾಗುತ್ತಿತ್ತು. ಈ ಆಹಾರ ಪದಾರ್ಥಗಳನ್ನು ಬಿಟ್ಟರೆ, ಉಳಿದ ಸಂಪತ್ತು ಚಿನ್ನ, ತಾಮ್ರ, ಕಂಚು, ತವರ ಸೀಸ, ಕಬ್ಬಿಣ ಇಂಥವುಗಳಲ್ಲಿ ಬಹುಪಾಲಿನವು ಆ ಪ್ರಾಂತ್ಯಗಳಲ್ಲಿ ದೊರೆಯುವಂಥವಲ್ಲ ಎಂಬುವದನ್ನು ನೋಡಿದರೆ, ಅವುಗಳನ್ನು ವರ್ತಕರಿಂದ ಪಡೆಯುತ್ತಿದ್ದರು ಎನ್ನಬಹುದು.


ತಿಥಿ ನಕ್ಷತ್ರಗಳ ಪ್ರಸ್ತಾವನೆ ಇರುವದನ್ನು ನೋಡಿದರೆ, ಋತುಗಳನ್ನಾಧರಿಸಿದ, ಕೃಷಿ ವಿಧಾನವನ್ನು ಅರಿತಿದ್ದೆರೆಂದು ಊಹಿಸಬೇಕಾಗುತ್ತದೆ. ಅಥವರ್ಣ ವೇದದಲ್ಲಿ ನದಿಯ ನೀರನ್ನು ಕಾಲುವೆಗೆ ಹರಿಸುವಾಗ ಆಚರಿಸಲಾಗುವ ವಿಷಯವನ್ನು ಹೇಳಲಾಗಿದೆ. ಅಷ್ಟೇ ಅಲ್ಲದೇ, ಆರು ಇಲ್ಲವೆ ಎಂಟು ಎತ್ತುಗಳನ್ನು ನೆಗಿಲಿಗೆ ಹೂಡಿ ಬೇಸಾಯ ಮಾಡುವದನ್ನು ಅಥವರ್ಣ ವೇದದಲ್ಲಿ ವಣರ್ಿಸಲಾಗಿದೆ. ಇದನ್ನಾಧರಿಸಿದ ಈ ಕಾಲಕ್ಕೆ ಪಶುಗಳನ್ನು ತಿನ್ನುವದಷ್ಟೇ ಅಲ್ಲದೇ, ಬೇಸಾಯಕ್ಕೆ ಬಳಸುವದನ್ನು ಆರಂಭಿಸಲಾಗಿತೆಂದು, ಭಾರವಾದ ನೇಗಿಲುಗಳನ್ನು ಹೂಡುತ್ತಿದ್ದರೆಂದು ಊಹಿಸಬೇಕಾಗುತ್ತದೆ.


ಕ್ರಿ.ಪೂ 1000-600ರಕಾಲದಲ್ಲಿ ಆರ್ಯರ ವಿಸ್ತರಣೆ ಸಿಂಧೂ-ಗಂಗಾ ಬಯಲುಗಳ ಮಧ್ಯ ಭಾಗಕ್ಕೆ (ಉತ್ತರಪ್ರದೇಶ) ಪರಿಮಿತವಾಗಿ ಉಳಿಯಿತು. continue...


ಭೀಮಣ್ಣ ನಗನೂರು, ದಲಿತ ಸಾಹಿತಿಗಳು.

No comments:

Post a Comment

Thanku