Sunday, September 25, 2011

ಕನರ್ಾಟಕ ಲೋಕಾಯುಕ್ತ ನ್ಯಾಯಮೂತರ್ಿ ಶಿವರಾಜ ಪಾಟೀಲ್

ಕನರ್ಾಟಕ ಲೋಕಾಯುಕ್ತ ನ್ಯಾಯಮೂತರ್ಿ ಶಿವರಾಜ ಪಾಟೀಲ್


ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಅಂತರ್ರಾಷ್ಟ್ರೀಯ ಖ್ಯಾತಿಯ ಮನ್ನಣೆ ಗಳಿಸಿದ್ದ ಭಾರತ ತನ್ನ ಸ್ವಾತಂತ್ರ್ಯದ ಅರವತೈದನೇಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಭಾರತ ಜಗತ್ತಿನ ಪ್ರಮುಖ ಭ್ರಷ್ಟ ರಾಷ್ಟ್ರಗಳ ಪಂಕ್ತಿಗೆ ಸೇರ್ಪಡೆಗೊಂಡಿರುವುದು ನೋವಿನ ಸಂಗತಿ. ಪ್ರಜಾಪ್ರಭುತ್ವ ರಾಷ್ಟ್ರ, ಭ್ರಷ್ಟಾಚಾರ ರಾಷ್ಟ್ರವಾಗಿ ಪರಿವರ್ತನೆಗೊಳ್ಳಲು ಸಂವಿಧಾನದ ಮೂರು ಪ್ರಮುಖ ಅಂಗಗಳಲ್ಲಿ ಶಾಸಕಾಂಗ, ಕಾಯರ್ಾಂಗಳ ಅಪವಿತ್ರ ಮೈತ್ರಿಯೇ ಕಾರಣ. ಈ ಎರಡು ಅಂಗಗಳಲ್ಲಿ ಕಂಡು ಬರುವ ಭ್ರಷ್ಟಾಚಾರದ ನಿಮರ್ೂಲನೆಗಾಗಿ ನ್ಯಾಯಾಂಗ ಮನಸ್ಸು ಮಾಡಿದರೆ, ಯಾವ ಪ್ರಮಾದದ ಪರಿವರ್ತನೆಗಳನ್ನು ಕಾಣಲು ಸಾಧ್ಯ ಎನ್ನುವವರಿಗೆ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಯಮೂತರ್ಿ ಸಂತೋಷ ಹೆಗ್ಡೆಯವರ ವರದಿಯೇ ದಿಕ್ಸೂಚಿ.


ತಮ್ಮ ಸುದೀರ್ಘ ವರದಿಯ ಮುಖಾಂತರ ರಾಜ್ಯರಾಜಕೀಯದಲ್ಲಿ ತಲ್ಲಣ ಮೂಡಿಸಿದ್ದ ನ್ಯಾಯಮೂತರ್ಿ ಸಂತೋಷ ಹೆಗ್ಡೆಯವರ ನಿವೃತ್ತಿಯ ನಂತರ ಆ ಗುರುತವಾದ ಸ್ಥಾನವನ್ನು ತುಂಬಬಲ್ಲ, ಸಮರ್ಥ ವ್ಯಕ್ತಿ ಯಾರು ಎನ್ನುವ ಆರುವರೆ ಕೋಟಿ ಕನ್ನಡಿಗರ ಪಾಲಿಗೆ ಈಗ ರಾಯಚೂರು ಜಿಲ್ಲೆಯವರೇ ಆದ ನ್ಯಾಯಮೂತರ್ಿ ಡಾ. ಶಿವರಾಜ್ ಪಾಟೀಲ್ರ ಆಯ್ಕೆ ಹೆಚ್ಚಿನ ಸಂತಸ, ಭಾವಗಳನ್ನು ತೃಪ್ತಿಸಿದೆ.


ಸಾಕ್ಷರತೆ ದೃಷ್ಟಿಯಿಂದ ಜಗತ್ತಿನ ಏಕೈಕ ಕತ್ತಲೆಯ ತಾಲೂಕು ಎಂದೇ ಗುರುತಿಸಲ್ಪಟ್ಟಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿ 12 ಜನೆವರಿ 1940ರಂದು ಜನಿಸಿದ ಶಿವರಾಜ ಪಾಟೀಲ್ರಿಗೆ ಈಗ 72ರ ಹರೆಯ.


ಮಲದಕಲ್, ರಾಯಚೂರು ಹಾಗೂ ಗುಲ್ಬರ್ಗದಲ್ಲಿ ತಮ್ಮ ವ್ಯಾಸಾಂಗವನ್ನು ಪೂರ್ಣಗೊಳಿಸಿದ ಶಿವರಾಜ ಪಾಟೀಲರು ನಡೆದು ಬಂದ ದಾರಿ ರೋಮಂಚನಕಾರಿ ಯಶೋಗಾಥೆ.


ಅವರ 22ನೇ ವಯಸ್ಸಿನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ನಂತರ ಕೈಗೊಂಡ ಜೀವನಸಾಧನೆ ಇಂದಿನ ಯುವಜನಾಂಗಕ್ಕೆ ಸ್ಪೂತರ್ಿಯ ಸೆಲೆಯಾಗಿದೆ. ವಕೀಲ ವೃತ್ತಿಯೊಂದಿಗೆ ಕಲ್ಬುಗರ್ಿಯ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಗೌರವಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನ್ಯಾಯಾಂಗ ವೃತ್ತಿಯಲ್ಲಿ ಕಾಯಕ ಪ್ರಜ್ಞೆಯೊಂದಿಗೆ ಕಾರ್ಯನಿರ್ವಸಿದ ಶಿವರಾಜ ಪಾಟೀಲ್ ರಾಜ್ಯದ ಹಲವಾರು ಧಾಮರ್ಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.


32ವರ್ಷಗಳ ಹಿಂದೆ (1979) ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿ ಹೈಕೋಟರ್್ನಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ ಅವರು ವೃತ್ತಿ ಜೀವನಕ್ಕೆ ವಿನೂತನ ಆಯಾಮವನ್ನು ಕಂಡುಕೊಂಡರು. ಹೈಕೋಟರ್್ನ ನ್ಯಾಯವಾದಿಗಳಾಗಿ ಸಕರ್ಾರದ ವಿವಿಧ ಇಲಾಖೆಗಳ ಪರವಾಗಿ ವಾದ ಮಂಡಿಸಿ ವೃತ್ತಿ ಜೀವನದಲ್ಲಿ ಯಶಸ್ಸು ಪಡೆದ ಶಿವರಾಜ ಪಾಟೀಲರು 1990ರಲ್ಲಿ ಕನರ್ಾಟಕ ಹೈಕೋಟರ್್ನ ನ್ಯಾಯಮೂತರ್ಿಗಳಾಗಿ ನೇಮಕಗೊಂಡರು. ನಂತರ ತಮಿಳುನಾಡು ಹಾಗೂ ರಾಜಸ್ಥಾನ ಹೈಕೋಟರ್ುಗಳ ಮುಖ್ಯ ನ್ಯಾಯಮೂತರ್ಿಗಳಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ಇಲಾಖೆಯ ಘನತೆ, ಗೌರವಗಳನ್ನು ಹೆಚ್ಚಿಸಿದರು.


ನ್ಯಾಯಮೂತರ್ಿ ಶಿವರಾಜ ಪಾಟೀಲ್ರ ಸರಳತೆ, ಸಜ್ಜನಿಕೆ ನ್ಯಾಯಾಂಗ ಇಲಾಖೆಯ ಸೇವಾಬದ್ದತೆಯನ್ನು ಪರೀಶೀಲಿಸಿದ ಭಾರತ ಸಕರ್ಾರ ರಾಷ್ಟ್ರದ ಸವರ್ೋಚ್ಛ ನ್ಯಾಯಾಲಯದ ನ್ಯಾಯಮೂತರ್ಿಗಳನ್ನಾಗಿ ನೇಮಕ ಮಾಡಿತು. ಸುದೀರ್ಘ 4ದಶಕಗಳ ನ್ಯಾಯಾಂಗ ಸೇವೆಯ ನಂತರ 11 ಜನೆವರಿ 2005ರಂದು ತಮ್ಮ ವೃತ್ತಿಯಿಂದ ನಿವೃತ್ತರಾದರು.


ತಮ್ಮ ನಿವೃತ್ತಿಯ ನಂತರವು ವೃತ್ತಿಧರ್ಮದ ಪಾವಿತ್ರತೆಯನ್ನೇ ಪ್ರವೃತ್ತಿಯಾಗಿಸಿಕೊಂಡ ಸನ್ಮಾನ್ಯ ಜಸ್ಟೀಸ್ ಶಿವರಾಜ ಪಾಟೀಲ್ರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 21 ಶತಮಾನದ ಅತಿದೊಡ್ಡ ಹಗರಣವೆಂದು ಪರಿಗಣಿಸಲ್ಪಟ್ಟ ಕೇಂದ್ರ ಸಕರ್ಾರದ 2ಜಿ ತರಾಂಗತರಂಗ ಹಗರಣಕ್ಕೆ ಸಂಬಂದಿಸಿದ ತನಿಖೆಯನ್ನು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ತನಿಖಾ ವರದಿಯನ್ನು ಕೇಂದ್ರ ಸಕರ್ಾರಕ್ಕೆ ಸಲ್ಲಿಸಿ ಭ್ರಷ್ಟ ರಾಜಕೀಯ ನಾಯಕರ ಪಾಲಿಗೆ ಸಿಂಹಸ್ವಪ್ನರಾದರು. ಶಿವರಾಜ ಪಾಟೀಲ್ರ ತನಿಖಾ ವರದಿಯಲ್ಲಿ ಚಿಕ್ಕಪುಟ್ಟ ಮೀನುಗಳೊಂದಿಗೆ, ಭಾರಿ ಗಾತ್ರ ತಿಮಿಂಗಲುಗಳೂ ಕೂಡ ಇದ್ದವು. ಇವರು ಮಾಡಿದ ಕೆಲಸ ನ್ಯಾಯಾಂಗ ಇಲಾಖೆಯ ಘನತೆಯ ಹೆಚ್ಚಿಸಿದಂತಾಗಿದೆ.


ಕನರ್ಾಟಕ ಸಕರ್ಾರ ಸನ್ಮಾನ್ಯ ಡಾ.ಎಂ. ಶಿವರಾಜ ಪಾಟೀಲ್ರನ್ನು ರಾಜ್ಯದಲ್ಲಿ ಬಾಲ್ಯವಿವಾಹಗಳನ್ನು ತಡೆಗಟ್ಟುವ ಉನ್ನತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. 72ರ ಉತ್ಸಾಹಿ ಶಿವರಾಜ ಪಾಟೀಲ್ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವ್ಯಾಪಕ ಅಧ್ಯಯನದೊಂದಿಗೆ, ನೂರಾರು ಸಂಖ್ಯೆಯ ಬಾಲ್ಯವಿವಾಹಗಳನ್ನು ತಡೆಗಟ್ಟುವದರೊಂದಿಗೆ ಪಾಲಕರಲ್ಲಿ ಕಾನೂನಿನ ಪ್ರಜ್ಞೆಯನ್ನು ಮೂಡಿಸಿದರು. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದು ಕೇವಲ ಸಂವಿಧಾನದ ಪುಟಗಳಿಗೆ ಮಾತ್ರ ಸೀಮಿತವಾದದ್ದನ್ನು ಅಕ್ಷರಶಃ ಜನಸಾಮಾನ್ಯರ ಸಾಮಾಜಿಕ ಬದುಕಿನಲ್ಲಿ ರೂಪಿಸಿದರು.


ಶಾಂತಿ, ಸರಳತೆ, ಶಿಸ್ತು, ಸಮಯಪಾಲನೆಯ ಅಧ್ಯಯನ ಶೀಲತೆಯನ್ನು ತಮ್ಮ ಜೀವನಶೈಲಿಯಾಗಿಸಿಕೊಂಡಿರುವ ನ್ಯಾಯಮೂತರ್ಿ ಶಿವರಾಜ ಪಾಟೀಲರು ರಾಜ್ಯದ ಲೋಕಾಯುಕ್ತರಾಗಿ ನೇಮಕಗೊಂಡಾಗ ರಾಜ್ಯದ ಉದ್ದಗಲಕ್ಕೂ ಕನರ್ಾಟಕ ಜನತೆ ಮಿಶ್ರಪ್ರತಿಕ್ರಿಯೆಗಳನ್ನು ದಾಖಲಿಸಿದರು. ಆಗಸ್ಟ್ ಮೊದಲನೇಯ ವಾರದಲ್ಲಿ ನಿವೃತ್ತರಾದ ನ್ಯಾಯಮೂತರ್ಿ ಸಂತೋಷ ಹೆಗ್ಡೆಯವರ ಸ್ಥಾನವನ್ನು ನ್ಯಾಯಮೂತರ್ಿ ಶಿವರಾಜ ಪಾಟೀಲರು ಯಶಸ್ವಿಯಾಗಿ ತುಂಬಬಲ್ಲರೇ, ಎನ್ನುವ ಕುಹಕುಹ ಮಾತುಗಳಿಗೆ ಪಾಟೀಲ್ರು ಮುಂಬರುವ ದಿನಗಳಲ್ಲಿ ನೀವೇ ನೋಡಿ ಎನ್ನುವ ಮಾಮರ್ಿಕ ಉತ್ತರವನ್ನು ನೀಡಿದ್ದಾರೆ. ಅವರ ಮಾತುಗಳು ಹೊಸ ಭರವಸೆಗಳನ್ನು ಸೃಷ್ಟಿಸಿವೆ. ಅದರಂತೆ ಲೋಕಾಯುಕ್ತ ಇಲಾಖೆಯ ಸಿಬ್ಬಂದಿಯ ಜವಾಬ್ದಾರಿಗಳನ್ನು ಸೂಚಿಸಿದ್ದಾರೆ. ಇದೇ ತಿಂಗಳು 9ರಂದು ಬೆಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕಪ್ಪು ಹಣವನ್ನು ಬಯಲಿಗೆಳೆದಿದ್ದಾರೆ. ಲೋಕಾಯುಕ್ತರ ದಾಳಿಗೆ ಸಿಕ್ಕ ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಮರುನೇಮಕ ಮಾಡದೇ ಅಮಾನತಿನಲ್ಲಿಡಿ ಎನ್ನುವ ಸೂಚನೆಯನ್ನು ರಾಜ್ಯಸಕರ್ಾರಕ್ಕೆ ಕಟ್ಟುನಿಟ್ಟಾಗಿ ನೀಡಿದ್ದಾರೆ.


ತಮ್ಮ ಜೀವನದುದ್ದಕ್ಕೂ ಕರ್ತವ್ಯನಿಷ್ಠೆ, ಸೇವಾಪ್ರಜ್ಞೆ ಹಾಗೂ ಕಾಯಕ ಬದ್ದತೆಯನ್ನು ಪಾಲಿಸಿಕೊಂಡು ಬಂದಿರುವ ನ್ಯಾಯಮೂತರ್ಿ ಶಿವರಾಜ ಪಾಟೀಲರು ಸಕರಾತ್ಮಕ ಯೋಚನೆ ಹಾಗೂ ಯೋಜನೆಗಳ ಮುಖಾಂತರ ತಾವು ನಿರ್ವಹಿಸುವ ಯಾವುದೇ ಹುದ್ದೆಗೆ ಸಾಮಾಜಿಕ ನ್ಯಾಯ ನೀಡುತ್ತಾರೆ. ಭ್ರಷ್ಟಾಚಾರವನ್ನು ಯಾವುದೇ ಹಂತದಲ್ಲಿ ಸ್ವೀಕರಿಸುವುದಿಲ್ಲ. ಸಮಯಪಾಲನೆ, ಶೃದ್ದೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ, ಗುರಿಮುಟ್ಟಲು ಸಾಧ್ಯವೆಂದು ನಂಬಿದ್ದಾರೆ. ಒಂದು ಸಾರಿ ಭೇಟಿಯಾದರೆ, ಅವರನ್ನು ಆತ್ಮೀಯತೆಯ ನಗುಮೊಗದೊಂದಿಗೆ ಮಾತನಾಡಿಸಿ ತಮ್ಮ ನೆನಪಿನಂಗಳದಲ್ಲಿ ಶಾಶ್ವತವಾಗಿ ದಾಖಲಿಸಿಕೊಳ್ಳುತ್ತಾರೆ. ಮತ್ತೊಮ್ಮೆ ಭೇಟಿಯಾದಾಗ ಅವರನ್ನು ಹೆಸರಿಡಿದು ಕರೆಯುವುದು ಅವರ ಸೌಜನ್ಯತೆಗೊಂದು ಅತ್ಯುತ್ತಮ ನಿದರ್ಶನ. ಕಲ್ಬುಗರ್ಿಯಲ್ಲಿ ನ್ಯಾಯವಾದಿಯಾಗಿ ತಮ್ಮ ಸಾಮಾಜಿಕ ಬದುಕನ್ನು ರೂಪಿಸಿಕೊಂಡ ಶಿವರಾಜ ಪಾಟೀಲರು ತಮಗೆ ಮೊದಲ ಕೇಸನ್ನು ಕೊಟ್ಟ ಕಕ್ಷಿದಾರರನ್ನು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಸಮಯಪಾಲನೆಯ ಮಹತ್ವವನ್ನು ಅವರನ್ನು ನೋಡಿ ಕಲಿಯಬೆಕು. ಮುಂಜಾನೆ 5ಗಂಟೆಯಿಂದ ಆರಂಭಗೊಳ್ಳುವ ಅವರ ದಿನಚರಿ ರಾತ್ರಿ 11ರವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಮಯಕ್ಕೆ ನೀಡುವ ಗೌರವ ಅವರನ್ನು ಸದಾ ಪರಿಶ್ರಮಿಯನ್ನಾಗಿ ರೂಪಿಸಿದೆ. ತಾವು ಕಾರ್ಯನಿರ್ವಹಿಸುವ ಕಛೇರಿಯ ಮೇಜಿನ ಮೇಲೆ "ಕಾಯಕವೇ ಕೈಲಾಸ" ಎನ್ನುವ ಫಲಕಗಳು ಕೇವಲ ಆಡಂಬರದ ಫಲಕಗಳಾಗದೇ ಅವರ ಕಾರ್ಯದಕ್ಷತೆಯ ಸಂಕೇತಗಳಾಗಿವೆ.


ಪ್ರಸ್ತುತ ಸಂದರ್ಭದಲ್ಲಿ ಪಂಚಾಯತಿಯಿಂದ ಪಾಲರ್ಿಮೆಂಟಿನವರೆಗೆ ರಾಜಕೀಯ ಕ್ಷೇತ್ರ ಹೆಚ್ಚಿನ ಜನರಿಗೆ ಆಕರ್ಷಕ ಮತ್ತು ಗ್ಲಾಮರ್ಸ್ ಆಗಿದೆ. ಆದರೆ, ನ್ಯಾಯಮೂತರ್ಿ ಶಿವರಾಜ ಪಾಟೀಲರು ರಾಜಕೀಯ ಕ್ಷೇತ್ರದ ಉನ್ನತ ನಾಯಕರ ಪರಿವಾರದೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರೂ ಸಹ ರಾಜಕೀಯ ನಾಯಕರ ಪ್ರತಿಷ್ಠೆಗಳನ್ನು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಎಂದಿಗೂ ಬಳಸಿಕೊಳ್ಳದ ಅಪ್ಪಟ ಕಾಯಕ ಯೋಗಿ.


ಲೋಕಸಭೆಯ ಮಾಜಿ ಸಭಾಪತಿ, ಕೇಂದ್ರಸಕರ್ಾರದ ಮಾಜಿ ಗೃಹಮಂತ್ರಿ, ಪ್ರಸ್ತುತ ಪಂಜಾಬ ರಾಜ್ಯದ ರಾಜ್ಯಪಾಲರಾಗಿರುವ ಶಿವರಾಜ್ ಪಾಟೀಲರ ಪುತ್ರಿಯನ್ನು ಕಿರಿಯ ಮಗ ನ್ಯಾಯವಾದಿ ಬಸವಪ್ರಭು ಪಾಟೀಲ ವಿವಾಹವಾಗಿದ್ದರೆ, ಇನ್ನೊರ್ವ ಪುತ್ರರಾದ ಡಾ.ಶರಣು ಪಾಟೀಲ್ ರಾಜ್ಯದ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾದ ದಾವಣಗೆರೆ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಆದರೆ, ರಾಜಕೀಯ ಸಂಬಂಧಗಳಿಂದ ಸಾಕಷ್ಟು ಅಂತರ್ವನ್ನು ಕಾಪಾಡಿಕೊಂಡಿದ್ದಾರೆ. ನೂತನ ಲೋಕಾಯುಕ್ತರಾಗಿ ನೇಮಕಗೊಂಡಿರುವ ನ್ಯಾಯಮೂತರ್ಿ ಡಾ.ಎಂ ಶಿವರಾಜಪಾಟೀಲರು ತಮ್ಮ ಅನುಭವ, ಕರ್ತವ್ಯಬದ್ದತೆ, ನ್ಯಾಯ ನಿಷ್ಠುರತೆಗಳಿಂದಾಗಿ ಲೋಕಾಯುಕ್ತ ಹುದ್ದೆಗೆ ಹೆಚ್ಚಿನ ಗೌರವವನ್ನು ನೀಡಲಿದ್ದಾರೆ ಎನ್ನುವುದು ಅವರ ಸಕಲ ಅಭಿಮಾನಿಗಳ ನಿರೀಕ್ಷೆಗಳು ನಿರಾಸೆಯಾಗುವುದಿಲ್ಲ ಎನ್ನುವ ವಿಶ್ವಾಸ ನನ್ನದು. ಶಿವರಾಜಪಾಟೀಲರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ರಾಜ್ಯ, ರಾಷ್ಟ್ರಾದ್ಯಂತ ಸಾವಿರಾರು ಸಂಖ್ಯೆಯ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.


ಗುಲ್ಬಗರ್ಾ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಬಸವ ಸೇವಾಸಮಿತಿ "ಬಸವ ರತ್ನ" ಪ್ರಶಸ್ತಿ ನೀಡಿ ಗೌರವಿಸಿದೆ. ಬಿಡುವಿಲ್ಲದ ಬದುಕಿನ ಮಧ್ಯೆ ಡಾ.ಎಂ ಶಿವರಾಜ ಪಾಟೀಲರ ಸಾಹಿತ್ಯಾಸಕ್ತಿ ಸಾಹಿತ್ಯ ಕ್ಷೇತ್ರದ ಸಾಧಕರ ಪಾಲಿಗೆ ಅಚ್ಚರಿಯ ಸಂಗತಿಯಾಗಿದೆ. ವೃತ್ತಿ ಜೀವನದ ಅನುಭವಗಳು ಹಾಗೂ ಸಾಮಾಜಿಕ ಚಿಂತನೆಯ ಹಿನ್ನಲೆಯಲ್ಲಿ ಅವರು ರಚಿಸಿದ 18ಸಾಹಿತ್ಯ ಕೃತಿಗಳು ಅವರನ್ನು ಸೃಜನಶೀಲ ಬರಹಗಾರರನ್ನಾಗಿ ರೂಪಿಸಿದೆ. ರಾಯಚೂರು ಜಿಲ್ಲಾ 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (6,7 ಮಾಚರ್್ 2010) ಅವರು ನೀಡಿದ ಸುದೀರ್ಘ ಭಾಷಣ ಬೌದ್ಧಿಕ ಜಗತ್ತಿನ ಪಾಲಿಗೆ ಅಚ್ಚರಿ ಮತ್ತು ರೋಮಾಂಚನಕಾರಿಯಾಗಿದೆ.


ಸನ್ಮಾನ ಡಾ.ಎಂ ಶಿವರಾಜ ಪಾಟೀಲರ ಬದುಕಿನ ಸಾಧನೆ, ಏರಿದ ಎತ್ತರ, ಸಮಯಪ್ರಜ್ಞೆ, ಕಾಯಕಪ್ರಜ್ಞೆ, ಸೇವಾಕೈಂಕರ್ಯ, ಸಾಹಿತ್ಯಚಿಂತನೆ, ಜೀವನ ಮೌಲ್ಯಗಳು ರಾಯಚೂರು ಜಿಲ್ಲೆಯ ಗೌರವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ.


ಅಯ್ಯಪ್ಪ ತುಕ್ಕಾಯಿ, ಸಾಹಿತಿಗಳು ರಾಯಚೂರು.

No comments:

Post a Comment

Thanku