Sunday, September 25, 2011

ವೈಧಿಕ ಮುಖ್ಯಮಂತ್ರಿ ಪತನ

ವೈಧಿಕ ಮುಖ್ಯಮಂತ್ರಿ ಪತನ



ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅದಕ್ಕಾಗಿ ತಾವು ನಿಗದಿಪಡಿಸಿಕೊಂಡಿದ್ದ ಮುಹೂರ್ತದಲ್ಲೇ ರಾಜೀನಾಮೆ ಸಲ್ಲಿಸಿದ್ದಾರೆ. ಮುಗ್ಧರಾದ ಜನರು ಯಡಿಯೂರಪ್ಪ ಅವರ ಸಕರ್ಾರವನ್ನು ಲಿಂಗಾಯತ ಸಕರ್ಾರವೆಂದೂ, ಅವರನ್ನು ಲಿಂಗಾಯತ ಮುಖ್ಯಮಂತ್ರಿಯೆಂದು ಭಾವಿಸಿದ್ದರು.


ಅವರ ಸಚಿವ ಸಂಪುಟದಲ್ಲಿ ಲಿಂಗಾಯತರು ಅಧಿಕವಾಗಿದ್ದರು. ಯಡಿಯೂರಪ್ಪ ಅವರು ಹುಟ್ಟಿನಿಂದ ಲಿಂಗಾಯತರು ಎಂಬುವುದು ನಿಜ. ಅವರಿಗೆ ಕೆಲವು ಮಠಗಳ ಆಶರ್ಿವಾದವಿತ್ತು.


ಆದರೆ, ಅವರದು ನಿಜದಲ್ಲಿ ಲಿಂಗಾಯತ ಸಕರ್ಾರವಾಗಿರಲಿಲ್ಲ. ಏಕೆಂದರೆ, ಅವರ ಸಕರ್ಾರದ ಸೂತ್ರಗಳೆಲ್ಲ ಬೆಂಗಳೂರಿನ ಕಾಣದ ಕೈಗಳ ವಶದಲ್ಲಿದ್ದವು. ಆ ಕಾಣದ ಕೈಗಳು ವೈದಿಕರ ಕಪಿಮುಷ್ಠಿಯಲ್ಲಿದ್ದವು. ಈ ಸಂಗತಿಗಳೆಲ್ಲ ರಹಸ್ಯವಾಗೇನು ಉಳಿದಿಲ್ಲ.


ಡಾ.ಎಂ.ಎಂ ಕಲ್ಬುಗರ್ಿಯವರು ಹೇಳಿರುವಂತೆ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಎರಡು ವಿಧಾನಸೌಧಗಳು ಕೆಲಸ ಮಾಡುತ್ತಿದ್ದವು. ಒಂದು ಅಧಿಕೃತ ವಿಧಾನಸೌಧವಾದರೆ, ಮತ್ತೊಂದು ಕಾಣದ ಕೈಯಲ್ಲಿದ್ದ ವಿಧಾನಸೌಧ. ಮೊದಲನೆಯದಕ್ಕಿಂತ ಎರಡನೇಯದು ಪ್ರಬಲವಾಗಿತ್ತು. ಗದುಗಿನ ಶ್ರೀಗಳು ಹೇಳಿದಂತೆ ಅದು ಅವೈದಿಕರ ಸಕರ್ಾರವಾಗಿರದೇ ಬ್ರಾಹ್ಮಣರ ಸಕರ್ಾರವಾಗಿತ್ತು. ಈಗ ನಮ್ಮ ನಾಡಿನ ಅವೈದಿಕರು ಬುದ್ದಿಕಲಿಯಬೇಕಾಗಿದೆ. ಮಾತುಮಾತಿಗೆ ವೈದಿಕ ಆಚರಣೆಗಳಿಗೆ ಶರಣಾಗುತ್ತಿದ್ದ ಅಥವಾ ಶರಣಾಗುತ್ತಿರುವ ಮತ್ತು ದಿನ ಬೆಳಗಾದರೆ, ಆಗಮೋತ್ತರ ದೇವಾಲಯಗಳಿಗೆ ಭೇಟಿ ಕೊಡುತ್ತಿರುವ ಕುಂಕುಮಧಾರಿ ಯಡಿಯೂರಪ್ಪ ಅವರು ಹುಟ್ಟಿನಿಂದ ಕೇವಲ ಅವೈದಿಕರು.


ಜ್ಞಾನ ಮತ್ತು ಕ್ರಿಯೆ ಎರಡರಲ್ಲಿಯೂ ವೈದಿಕರು. ಇಂತಹ ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡಿದ್ದಾರೆ. ಇದು ಅವೈದಿಕರಿಗೆ ನೆಮ್ಮದಿಯ ಸಂಗತಿಯಾಗಬೇಕು. ರಾಜ್ಯವನ್ನು ಪಾರಮಾಥರ್ಿಕರಣದ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸುವ ಬಗ್ಗೆ ಈಗ ಯೋಚಿಸಬಹುದು.


ಅತ್ಯಂತ ವಿಷಾದದ ಸಂಗತಿಯೆಂದರೆ ನಮ್ಮ ಕೆಲವು ಪ್ರಮುಖ ಅವೈದಿಕ ಮಠಗಳು ಅಂತಹ ಮುಖ್ಯಮಂತ್ರಿಯ ಬೆಂಬಲಕ್ಕೆ ಮತ್ತು ಅವರು ಗದ್ದುಗೆ ಅಲುಗಾಡಿದಾಗಲೆಲ್ಲ ಅವರ ಸಮರ್ಥನೆಗೆ ನಿಂತಿದ್ದವು. ಅದು ಋಣ ಪರಿಹಾರದಂತೆ ಕಾಣುತ್ತಿತ್ತೇ ವಿನಾ ಸಾತ್ವಿಕತೆಯ ಮಾರ್ಗದರ್ಶನದಂತೆ ಕಾಣುತ್ತಿರಲಿಲ್ಲ. ಈ ಬಗೆಯ ಮಠಗಳು ಸಕರ್ಾರದ ಹಂಗಿಗೆ ಬಿದ್ದಂತೆ ನಡೆದುಕೊಳ್ಳುತ್ತಿದ್ದವು. ಅವು ತಮ್ಮ ಹಕ್ಕಿನ ಅಸ್ತಿತ್ವವನ್ನು ಮರೆತಂತೆ ಕಾಣುತ್ತಿತ್ತು.


ಅವೆಲ್ಲ ಬಸವಣ್ಣನ ಭೋದನೆಗೆ ವಿರುದ್ಧವಾಗಿದ್ದವು ಎಂಬುದು ಮುಖ್ಯಮಂತ್ರಿಯವರಿಗಾಗಲಿ ಅಥವಾ ಮಾರ್ಗದರ್ಶನ ನೀಡುತ್ತಿದ್ದ ಮಠಾಧೀಶರುಗಳಿಗಾಗಲಿ ಅರ್ಥವಾಗದೆ ಇದ್ದುದು ಆಶ್ಚರ್ಯದ ಸಂಗತಿ. ಅಧಿಕಾರಕ್ಕೆ ಜನರು ಮುಗಿಬಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಮಠಗಳು ಮತ್ತು ಮಠಾಧೀಶರು ಅಂತಹ ಆಮಿಷಗಳಿಗೆ ಬಲಿಯಾದರೆ ಯಾರನ್ನು ದೂರುವುದು?


ಈಗ ಯಡಿಯೂರಪ್ಪ ಅವರು ಇನ್ನು ಪೂಣರ್ಾವಧಿ ದೇವಾಲಯಗಳನ್ನು ಸುತ್ತು ಹಾಕುವುದು, ನದಿಗಳಲ್ಲಿ ಮುಳುಗೇಳಬಹುದು, ಯಜ್ಞ-ಯಾಗ ನಡೆಸಬಹುದು. ದಾನ-ದತ್ತಿ ನೀಡಬಹುದು. ಹರಕೆ ಕಟ್ಟಿಕೊಳ್ಳಬಹುದು. ಆ ಕೆಲಸವನ್ನು ಅವರು ಈಗಾಗಲೇ ಶುರು ಮಾಡಿಕೊಂಡಿರುವಂತೆ ಕಾಣುತ್ತದೆ. ಆದರೆ, ಇವುಗಳ ಬಗ್ಗೆ ಬಸವಣ್ಣ ಏನು ಹೇಳಿದ್ದಾನೆ ಎಂಬುದರ ಬಗ್ಗೆ ಅವರಿಗೆ ಪರಿವೆಯೇ ಇದ್ದಂತೆ ಕಾಣುತ್ತಿಲ್ಲ. ಬಸವಣ್ಣ ಹೇಳುತ್ತಾನೆ :


ಹರಸಿ ಮಾಡುವುದು ಹರಕೆಯ ದಂಡ


ನೆರಹಿ ಮಾಡುವುದು ಡಂಬಿನ ಭಕ್ತಿ


ಹರಸ ಬೇಡ, ನೆರಹ ಬೇಡ


ಬಂದ ಬರವನರಿದಡೆ ಕೂಡಿಕೊಂಡಿಪ್ಪ


ನಮ್ಮ ಕೂಡಲಸಂಗಮದೇವ.


ಯಡಿಯೂರಪ್ಪ ಅವರು ಬಂದ ಬರವನರಿಯದೆ ದೇವಾಲಯಗಳಿಗೆ ಎಡತಾಕಿದರು. ಹರಕೆ ಹೊತ್ತರು. ಆರಾಧನೆ ನಡೆಸಿದರು. ಆದರೆ, ಇದಕ್ಕೆ ವಚನ ಸಂವಿಧಾನದ ಮಾರ್ಗದರ್ಶನವು ಬೇರೆಯೇ ಇದೆ.


ಗದ್ದುಗೆಯನ್ನು ಕಳೆದುಕೊಂಡ ಮುಖ್ಯಮಂತ್ರಿಗಳಿಗೆ ಜನರಿಗಿಂತ ಮತ್ತು ಮತದಾರರಗಿಂತ ದೇವರ ಮೇಲೆ ನಂಬಿಕೆ ಅಧಿಕವಾಗಿರುವಂತೆ ಕಾಣುತ್ತದೆ.


ಅದು ಸರಿಯಿಲ್ಲವೆಂದು ಕನರ್ಾಟಕದ ಸಂತರು ಬಹಳ ಹಿಂದೆಯೇ ಎಚ್ಚರಿಸಿದ್ದರು.


ಚರಿತ್ರೆಯಿಂದ ಪಾಠ ಕಲಿಯಲಿಲ್ಲ ಎಂಬುದಕ್ಕೆ ಯಡಿಯೂರಪ್ಪ ನಿದರ್ಶನವಾಗಿದ್ದಾರೆ. ಈ ಬಗ್ಗೆ ಲದ್ದೆಯ ಸೋಮಣ್ಣಗಳು ಹೇಳುವ ಮಾತುಗಳು ನಮ್ಮ ಕಣ್ಣು ತೆರೆಸುತ್ತವೆ. ಅವನ ಅದ್ಬುತ ಈ ವಚನ ಹೀಗಿವೆ.


ಅವ ಕಾಯಕವಾದಡು ಸ್ವಕಾಯಕವ ಮಾಡು


ಗುರುಲಿಂಗ ಜಂಗಮವ ಮುಂದಿಟ್ಟು


ಬಂದುದು ಹಾರೈಸಿ, ಮಿಕ್ಕುದ ಕೈಗೊಂಡು ವ್ಯಾಧಿ


ಬಂದಡೆ ನೆರಳು, ಬೇನೆ ಬಂದೆಡೆ


ಒರಲು


ಜೀವ ಹೋದಡೆ ನಾಯಿ, ಇದಕ್ಕಾ ದೇವರ ಹಂಗ್ಯಾಕೆ?


ಬಾವು ಲದ್ದೆಯ ಸೋಮ


ಆದರೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸ್ವಕಾಯಕ ಮಾಡುವದನ್ನು ಬಿಟ್ಟು ದೇವರ ಹಂಗಿಗೆ ಬಿದ್ದುಬಿಟ್ಟರು. ದೇವಾಲಯಗಳಲ್ಲಿ ಪೂಜೆ, ಆರಾಧನೆ, ಯಜ್ಞ, ಯಾಗಾಧಿ ಮಾಡುತ್ತಿರುವದರಿಂದ ರಾಜ್ಯದಲ್ಲಿ ಮಳೆ ಬೆಳೆಯಾಗುತ್ತಿದೆ ಎಂದು ಹೇಳುವ ಮೂಲಕ ಮೌಡ್ಯ ಮೆರೆದರು.


ಇಂತಹ ಮೌಡ್ಯ ಸಂದೇಶಗಳನ್ನು ಕೇಳುವ ಸ್ಥಿತಿ 21ನೇ ಶತಮಾನದ ನಮ್ಮ ಮಕ್ಕಳಿಗೆ ಬಂದದ್ದು ಮಾತ್ರ ದೌಭರ್ಾಗ್ಯ.


ಆದರೆ, ಇಂತಹ ಸಂದೇಶವನ್ನು ಕೇಳುವ ಸಂಗತಿ ಈಗ ಕೊನೆಗೊಂಡಿದೆ.


ಯಡಿಯೂರಪ್ಪ ಅವರು ಎಲ್ಲಿಯವರೆಗೆ ಕುರುಡು ಸಂಪ್ರದಾಯವನ್ನು ಮೆರೆದರು ಎಂದರೆ, ತಮ್ಮ ಪ್ರಾಮಾಣಿಕತೆಯನ್ನು ದೇವರ ಮುಂದೆ ಆಣಿಪ್ರಮಾದದ ಮೂಲಕ ಸಾಧಿಸುವ ಕುರುಡು ಸಂಪ್ರದಾಯದ ಆಚರಣಿಗೆ ಶರಣು ಹೋದರು. ರಾಜಕೀಯ ಅಪ್ರಭುದ್ದತೆಯನ್ನು ಮರೆದರು.


ದಕ್ಷ ಆಡಳಿತಕ್ಕೆ ವೀರೆಂದ್ರಪಾಟೀಲ್, ಭೂಸುಧಾರಣೆಗೆ ದೇವರಾಜ್ ಅರಸು ಮತ್ತು ಕನರ್ಾಟಕದ ನಮರ್ಾತೃ ಎಂಬ ಕೀತರ್ಿಗೆ ಎಸ್.ನಜಲಿಂಗಪ್ಪ ಭಾಜನಾಗಿದ್ದರು. ಯಡಿಯೂರಪ್ಪನವರು ಯಾವುದಕ್ಕೆ ಬಾದ್ಯಸ್ಥರಾಗಿದ್ದಾರೆ? ಇದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಅದಕ್ಕೆ ಲೋಕಾಯುಕ್ತರ ಬೃಹತ್ ವರದಿ ನಮ್ಮ ಮುಂದಿದೆ.


ಯಡಿಯೂರಪ್ಪರವರು ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಬಹುತೇಕ ಕಾರ್ಯಕ್ರಮಗಳು ಜನತಂತ್ರ ಮೌಲ್ಯಗಳಿಗೆ ದೂರವಾಗಿದ್ದವು. ಬಸವ ತತ್ವಕ್ಕೆ ವಿರುದ್ಧವಾಗಿದ್ದವು.


ತಾತ್ಕಾಲಿಕ ಅನುಕೂಲಗಳಿಗೆ ಬಲಿಯಾಗಿ ವೈದಿಕ ತತ್ವ, ಸಿದ್ದಾಂತಗಳಿಗೆ ಮಣಿ ಹಾಕಿದ ನಮ್ಮ ಅವೈದಿಕ ಶಾಸಕರು ಇನ್ನಾದರೂ ಕಣ್ಣು ತೆರೆಯಬೇಕು. ನೂರಾರು ವರ್ಷಗಳಿಂದ ವೈದಿಕ ಶೆಡ್ಡು ಹೊಡೆದು ನಂತಿದ್ದ ಕನರ್ಾಟಕದ ಅವೈದಿಕ ಸಂಸ್ಕೃತಿಯ ಮಹತ್ವವನ್ನು ಅವರು ಅರಿತಿಕೊಳ್ಳಬೇಕು.


ನಮ್ಮ ರಾಜ್ಯದ ಭೌತಿಕ ಸಂಪತ್ತಾದ ವಚನಸಂವಿಧಾನದ ಪ್ರತಿಪಾದಿಸಿದ ಮೌಲ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಲ್ಲಿಗೆ ಸಮಾನತೆಯ ಪರಮೋಚ್ಛ ಸ್ಥಾನ ನಡಲಾಗಿದೆ. ಅಂತಹ ಘನವಾದ ಸಿದ್ದಾಂತವನ್ನು ಗಾಳಿಗೆ ತೂರಲಾಗಿದೆ.


ಅವೈದಿಕ ನಂಬಿಕೆಗಳಿಗೆ ನಮ್ಮ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ನಡೆಯ ತೊಡಗಿದಾಗಲೆಲ್ಲ ಅವರನ್ನು ಎಚ್ಚರಿಸಬೇಕಾದ ನಮ್ಮ ಅವೈದಿಕ ಶಾಸಕರು, ಮಠಗಳು ಹಾಗೂ ಮಠಾಧೀಶರು ವೈದಿಕತೆಗೆ ಶರಣು ಹೋಗಿದ್ದು ನಮ್ಮ ಕಾಲದ ದೊಡ್ಡ ದುರಂತ.




ಡಾ.ಟಿ.ಆರ್ ಚಂದ್ರಶೇಖರ, ಪ್ರಾಧ್ಯಾಪಕರು ಅಭಿವೃದ್ಧಿ ವಿಭಾಗ ಹಂಪಿ.

No comments:

Post a Comment

Thanku