Friday, May 11, 2012

ಎಲ್.ಸಿ ಕಟರ್ಿಸ್ ನೆನಪು ಮಾತ್ರ



ಖ್ಯಾತ ಗಣಿ ಅಭಿಯಂತರರಾದ ಶ್ರೀ ಎಲ್.ಸಿ. ಕಟರ್ಿಸ್ ಇವರು ದಿನಾಂಕ 29-01-2012 ರಂದು ಇಹ ಲೋಕವನ್ನು ತ್ಯಜಿಸಿರುವುದು ಸಂತಾಪಕರ ವಿಷಯ.  ದಿವಂಗತ ಶ್ರೀ ಎಲ್.ಸಿ. ಕಟರ್ಿಸ್ ಇವರು 3ನೇ ಮೇ 1920ನೇ ಇಸ್ವಿಯಲ್ಲಿ ಇಂಗ್ಲೆಂಡಿನ ಯಾರ್ಕಶೈರ್ ಪಟ್ಟಣದಲ್ಲಿ ಜನಿಸಿದರು.  ಇವರು ಇಂಗ್ಲೇಂಡನಲ್ಲಿನ ಕಾಡ್ಲಿಫ್ ಕ್ಯಾಂಬರೂನ್ ಸ್ಕೂಲ್ ಆಫ್ ಮೈನ್ಸ್ನಲ್ಲಿ ಮೈನಿಂಗ್ ಎಂಜಿನಿಯರ್ ಪದವಿಯನ್ನು ಪಡೆದಿದ್ದರು.
ಮೈನಿಂಗ್ ಜೊತೆಯಲ್ಲಿ ಇವರು ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿಯೂ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದರು.  ಇಂಗ್ಲೇಂಡಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದಾಗ ವಿಶ್ವದ 2ನೇ ಮಹಾ ಸಮರ ಶುರುವಾಗಿತ್ತು. ಆಗ ಇವರು ಇಂಗ್ಲೆಂಡಿನ ಸೇನೆಯಲ್ಲಿ ಕ್ಯಾಪ್ಟನ್ ಎಂದು ಸೇರಿಕೊಂಡು ಸೇವೆ ಸಲ್ಲಿಸಿದರು. 2ನೇ ಮಹಾಯುದ್ದದ ಅಂತ್ಯಗೊಂಡ ನಂತರ ಮೆ|| ಜಾನ್ ಟೇಲರ್ & ಸನ್ಸ್ ಎಂಬ ಹೆಸರಾಂತ ಗಣಿ ಸಂಸ್ಥೆಯಲ್ಲಿ ಸಮಾಲೋಚಕರ ಹುದ್ದೆಗೆ ಸೇರಿಕೊಂಡರು.
ನಂತರ ಭಾರತದಲ್ಲಿ 1947ರಲ್ಲಿ ಡೆಕ್ಕನ್ ವಿಭಾಗದ ನಿಜಾಮರ ಅಧೀನಕ್ಕೊಳಪಟ್ಟ "ಹೈದ್ರಾಬಾದ ಗೋಲ್ಡ್ ಮೈನಿಂಗ್" ಕಂಪನಿಯಲ್ಲಿ ಸೇರಿಕೊಂಡರು. ಹಟ್ಟಿಯಲ್ಲಿನ ಈ ಗಣಿಯಲ್ಲಿ ಚೀಫ್ ಅಂಡರ್ಗ್ರೌಂಡ ಏಜೆಂಟ್ ಎಂಬ ಹುದ್ದೆಗೆ ನೇಮಕಗೊಂಡಾಗ, ಈ ಭಾಗವು ಬರಗಾಲ ಪೀಡಿತ ಪ್ರದೇಶವಾಗಿತ್ತು. ಇವರು ಗಣಿ ಅಭಿವೃದ್ಧಿಯ ಜೊತೆಯಲ್ಲಿ ಹಟ್ಟಿಯಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದರು.
1956ರ ರಲ್ಲಿ ಹಟ್ಟಿ ಚಿನ್ನದ ಗಣಿಯ ಈ ಪ್ರದೇಶವು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿ ಹಟ್ಟಿ ಚಿನ್ನದ ಗಣಿ ಕಂಪನಿ ಎಂದು ಮರು ನಾಮಕರಣ ಹೊಂದಿರುವ ಉಲ್ಲೇಖವಿದೆ. ಹಾಗೂ 1972ರಲ್ಲಿ ಕನರ್ಾಟಕ ರಾಜ್ಯದ ಮುಖ್ಯಮಂತ್ರಿಗಳು ಈ ಕಂಪನಿಗೆ ಅಧ್ಯಕ್ಷರಾಗಿ ನೇಮಕಗೊಂಡರು. ಈ ಸಂದರ್ಭದಲ್ಲಿ ದಿವಂಗತ ಎಲ್.ಸಿ. ಕಟರ್ಿಸ್ ಇವರು ಮೈನಿಂಗ್ ಇಂಜಿನಿಯರ್ನಿಂದಿಡಿದು ಹಂತಹಂತವಾಗಿ ಬಡ್ತಿ ಹೊಂದಿ 1976ರಲ್ಲಿ ಕಂಪೆನಿಯ ಏಜೆಂಟ್ ಮತ್ತು ಜನರಲ್ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿದರು.
ದಿವಂಗತರು ಸಕರ್ಾರದ ಜೊತೆ ಒಳ್ಳೆಯ ಬಾಂಧವ್ಯವನ್ನಿಟ್ಟುಕೊಂಡಿದ್ದರು. ಇವರು ಅಧಿಕಾರವಹಿಸಿಕೊಂಡಾಗ ಗಣಿಯು 120 ಮೀಟರ ಆಳದವರೆಗೆ ಗಣಿಗಾರಿಕೆ ಚಟುವಟಿಕೆಯು ನಡೆಯುತ್ತಿದ್ದು, ಇವರು ಗಣಿಯ ಅಭಿವೃದ್ಧಿಗಾಗಿ ತುಂಬಾ ಶ್ರಮಿಸಿದರು, ಮತ್ತು ಇವರು ನುರಿತ ಕಾಮರ್ಿಕರ ಮತ್ತು ವಿದ್ಯಾರ್ಹತೆ ಹೊಂದಿದ್ದ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವುದರೊಂದಿಗೆ ಗಣಿಯನ್ನು ಅಭಿವೃದ್ಧಿಪಡಿಸಿ ಈ ದಿನ ಹಟ್ಟಿ ಚಿನ್ನದ ಗಣಿಯು ಪ್ರಕಾಶಮಾನವಾಗಿ ಹೆಸರು ಗಳಿಸಲು ಕಾರಣೀಭೂತರಾದರೆಂದರೆ, ತಪ್ಪಾಗಲಾರದು.
ಇವರು ತಮ್ಮ ಅಪಾರ ಬುದ್ಧಿ ಮತ್ತು ಅನುಭವದಿಂದ ಗಣಿಯ ಯಾಂತ್ರಿಕರಣಕ್ಕೆ ನಾಂದಿಯಾದರು.  ಇವರು ಸ್ವತ:ಃ ತಾವೆ ವಜ್ರ ಭೈರಿಗೆ ಯಂತ್ರವನ್ನು ಕಂಡುಹಿಡಿದು ತಯಾರಿಸಿ ಅದನ್ನು ಗಣಿಯ ಕೆಲಸಕ್ಕೆ ಅನೂಕೂಲವಾಗುವಂತೆ ರೂಪಿಸಿದ್ದು ಇವರ ಆಸಕ್ತಿಯನ್ನು ತೋರಿಸುತ್ತದೆ. ಇವರು ಸ್ವತಃ ಎಲ್ಲಾ ಕೆಲಸಗಾರರೊಂದಿಗೆ ಸ್ನೇಹಭಾವದಿಂದಿದ್ದು ಕಾಮರ್ಿಕರ ಮತ್ತು ಮುಖ್ಯಮಂತ್ರಿಗಳ ವಿಶ್ವಾಸಗಳಿಸಿ ಇವರು ಪ್ರತಿ ವರ್ಷ 120 ಮೀಟರ್ ಆಳದವರೆಗೆ ಗಣಿಯ ಅಭಿವೃದ್ಧಿಯನ್ನು ಹೆಚ್ಚಿಸುತ್ತಾ ಹಟ್ಟಿ ಚಿನ್ನದ ಗಣಿ ಕಂಪನಿ ಬೆಳವಣಿಗೆಗಾಗಿ ಶ್ರಮಿಸಿದರು.
1963 ರಲ್ಲಿ ಕೇಂದ್ರ ಸಕರ್ಾರವು ಗೋಲ್ಡ್ ಕಾಂಟ್ರ್ಯಾಕ್ಟ್ ಕಾಯ್ದೆಯನ್ನು ಜಾರಿಗೊಳಿಸಿದಾಗ, ಹಟ್ಟಿ ಚಿನ್ನದ ಗಣಿ ಕಂಪನಿಯು ಸಂಕಷ್ಟಕ್ಕೀಡಾಗಿ ಸ್ಥಗಿತಗೊಳಿಸುವ ಹಂತಕ್ಕೆ ಬಂದಿತ್ತು. ಆಗ ಕಟರ್ಿಸ್ರವರು ಖುದ್ದಾಗಿ ಪ್ರಧಾನಿಯವರನ್ನು ಭೇಟಿ ಮಾಡಿ ಹಳದಿ ಲೋಹದ ಮಹತ್ವವನ್ನು ಹಾಗೂ ಗಣಿಗಾರಿಕೆಯ ಅವಶ್ಯಕತೆಯನ್ನು ಮನದಟ್ಟು ಮಾಡಿ ಸದರಿ ಸಂಕಷ್ಟದಿಂದ ಗಣಿಯನ್ನು ಪಾರು ಮಾಡಿದ್ದಲ್ಲದೇ ಇತಿಹಾಸದಲ್ಲಿ ಮೊದಲನೇ ಸಲ ಎಲ್ಲಾ ನೌಕರರಿಗೆ ಬೋನಸ್ ಹಣವನ್ನು ವಿತರಣೆ ಮಾಡಿದರು.
1956ರರಲ್ಲಿ 150 ಟನ್ ಅದಿರು ಉತ್ಪಾದನೆಯ ಸಾಮಥ್ರ್ಯವನ್ನು ಹೊಂದಿದ್ದ ಗಣಿಯನ್ನು 400 ಟನ್ ಅದಿರು ಉತ್ಪಾದನೆ ಹಾಗೂ 1970ರ ವೇಳೆಯಲ್ಲಿ 1000 ಟನ್/ದಿನಕ್ಕೆ ಉತ್ಪಾದಿಸುವ ಸಾಮಥ್ರ್ಯವನ್ನು ಗಣಿ ಅಭಿವೃದ್ಧಿ ಮೂಲಕ ಸಾಧಿಸಿರುವದು ಹೆಮ್ಮೆಯ ವಿಷಯ. ಈ ಅವಧಿಯಲ್ಲಿ ಕಟರ್ಿಸ್ರವರು ಗಣಿ ಮತ್ತು ಲೋಹ ತಜ್ಞರಾದ ಆರ್.ಹೆಚ್.ಸಾಹುಕಾರ ಎಂಬ ತಜ್ಞರ ಸಹಯೋಗದಲ್ಲಿ ಗಣಿಯ ಉತ್ಪಾದನಾ ಸಮಾಥ್ರ್ಯವನ್ನು ಹೆಚ್ಚಳಗೊಳಿಸದ್ದಲ್ಲದೇ ಗಣಿ ಯಾಂತ್ರೀಕರಣವನ್ನು ಅಳವಡಿಸಿಕೊಂಡು ಹಟ್ಟಿ ಚಿನ್ನದ ಗಣಿ ಕಂಪನಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಕಟರ್ಿಸ್ರವರು ಗಣಿ ಅಭಿವೃದ್ಧಿಯೇ ತಮ್ಮ ಧ್ಯೇಯವೆಂದು ತಿಳಿದು ಹಟ್ಟಿ ಚಿನ್ನದ ಗಣಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಗಣಿ ಅಭಿವೃದ್ಧಿಯ ಜೊತೆಯಲ್ಲಿ ಇವರು ಹಲವು ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಪುಟ್ಬಾಲ್, ಟೆನ್ನಿಸ್, ಬಿಲಿಯಡ್ಸರ್್ ಹಾಗೂ ಸ್ನೂಕರ್ ಆಟಗಳಲ್ಲಿ ಚಾಂಪಿಯನ್ ಆಗಿದ್ದರು.
ಸಾಕಷ್ಟು ಶ್ರಮ ವಹಿಸಿ ಟಮನಕಲ್ನಿಂದ ಹಟ್ಟಿ ಚಿನ್ನದ ಗಣಿಗೆ ಕುಡಿಯುವ ನೀರನ್ನು ತಂದರು. ಸುತ್ತಲಿನ ಹಳ್ಳಿಗಳಿಗೆ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದರು. ವಿದ್ಯಾವಂತ, ಅವಿದ್ಯಾವಂತರೆನ್ನದೇ ಎಲ್ಲರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಇಂತಹ ಹಲವು ಜನಪರ ಕಾರ್ಯಗಳೇ ಕಟರ್ಿಸ್ರವರ ದೂರದೃಷ್ಟಿಯನ್ನು ಎತ್ತಿತೋರಿಸುತ್ತವೆ.
1976ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನಡೆದ ಕಾಮರ್ಿಕರ ಗಲಭೆಯಿಂದ ಇವರು ಸ್ವಯಂ ನಿವೃತ್ತಿಯನ್ನು ಪಡೆದು ಕಂಪನಿಯನ್ನು ಬಿಟ್ಟು ಹೋದರು. ಆದರೂ ಇವರು ತಿಂಥಿಣಿ ತಾಮ್ರ ಘಟಕ, ಚಿತ್ರದುರ್ಗ ತಾಮ್ರ ಘಟಕದಂತಹ ಹಲವು ತಾಮ್ರದ ಘಟಕಗಳಿಗೆ ಮತ್ತು ಹಟ್ಟಿ ಚಿನ್ನದ ಗಣಿಗೆ "ಗಣಿ ಸಮಾಲೋಚಕ" ರೆಂದು ನೇಮಕಗೊಂಡು ಅಪಾರ ಸೇವೆಯನ್ನು ಸಲ್ಲಿಸಿದರು. ಇದಲ್ಲದೇ ಭಾರತ ದೇಶದ ಹಲವು ಗಣಿಗಳ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ.
ಲೋಹಶಾಸ್ತ್ರ ದಿಗ್ಗಜರಾದ ಡಾ|| ಬಿ.ಪಿ ರಾಧಕೃಷ್ಣರವರ ಜೊತೆಗೂಡಿ ಭಾರತದಲ್ಲಿನ ಹಲವು ಲೋಹಗಳು ಮತ್ತು ಹಟ್ಟಿ, ಗದಗ ಸುತ್ತಮುತ್ತಲಿನ ನಿಕ್ಷೇಪಗಳ ಕುರಿತು ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಜರ್ನಲ್ಗಳಿಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇಂದಿಗೂ ಕೂಡ ಜಿ.ಎಸ್.ಐನ ಜರ್ನಲ್ಗಳಲ್ಲಿ ಕಟರ್ಿಸ್ರವರ ಬರವಣಿಗೆಗಳನ್ನು ನೋಡಬಹುದಾಗಿದೆ.
ಇಷ್ಟೇಲ್ಲ ಸಾಧನೆಗಳನ್ನು ಮಾಡಿದ ದಿಗ್ಗಜ, ಗಣಿಶಾಸ್ತ್ರಜ್ಞ ಎಲ್.ಸಿ ಕಟರ್ಿಸ್ರವರು ಬರೀ ನೆನಪಾಗಿ ಉಳಿದು ಇತಿಹಾಸದ ಪುಟ ಸೇರಿದರು.
ಡಾ.ಎಂ.ಎಲ್ ಪಾಟೀಲ್,
ಕಾರ್ಯನಿವರ್ಾಹಕ ನಿದರ್ೇಶಕರು.
ಹಟ್ಟಿ ಚಿನ್ನದ ಗಣಿ ಕಂಪನಿ ನಿ.





ಜನಪರ ವ್ಯಕ್ತಿ ಎಲ್.ಸಿ ..

ಗಣಿಯ ಅಭಿವೃದ್ಧಿಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ಮಹಾನ್ ವ್ಯಕ್ತಿ, ಶ್ರೇಷ್ಟ ಗಣಿ ತಜ್ಞ ಎಲ್.ಸಿ ಕಟರ್ಿಸ್.
ಅವರು ಇಂಗ್ಲೇಂಡಿನಿಂದ ಬಂದು ಭಾರತದಲ್ಲಿ ಸಾಕಷ್ಟು ಗಣಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದರಂತೆ ಭಾರತದ ಯಾವ ಪ್ರದೇಶದಲ್ಲಾದರೂ ಉಳಿದುಕೊಳ್ಳುವ ಸಾಕಷ್ಟು ಅವಕಾಶಗಳಿದ್ದರೂ ಕೂಡ, ಕಟರ್ಿಸ್ರವರು ಎಲ್ಲಿಯೂ ಹೋಗದೇ.. ಕನರ್ಾಟಕದಲ್ಲಿಯೇ ಉಳಿದುಕೊಂಡರು.
ಅದರಲ್ಲಿ ವಿಶೇಷವಾಗಿ ಕಟರ್ಿಸ್ರವರಿಗೆ ನಮ್ಮ ಹಟ್ಟಿ ಗಣಿಯ ಬಗ್ಗೆ ಕಾಳಜಿ ಇತ್ತು. ಅದರಂತೆ ಇಲ್ಲಿನ ಜನರು ಕೂಡ ಅಷ್ಟೇ ಪ್ರೇಮದಿಂದ ಕಟರ್ಸ್ರವರನ್ನು ಕಾಣುತ್ತಿದ್ದರು.
ಅಶೋಕ ವಾಲ್ಮೀಕಿ,
ನೂತನ ಪ್ರಧಾನ ವ್ಯವಸ್ಥಾಪಕರು.
ಹಟ್ಟಿ ಚಿನ್ನದ ಗಣಿ ಕಂ.


ಎಲ್.ಸಿ ಕಟಿಸ್ ಮಹಾನ್ವ್ಯಕ್ತಿ
ಇಂದು ನಾವೆಲ್ಲ ಹಟ್ಟಿ ಗಣಿಯ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರೇಷ್ಟ, ಮಹಾನ್ ಗಣಿತಜ್ಞ ಎಲ್.ಸಿ.ಕಟರ್ಿಸ್ನ ಕಳೆದುಕೊಂಡಿರುವುದು ವಿಷಾದನೀಯ.
ಅಂದು ಗಣಿ ಯಾಂತ್ರಿಕರಣಕ್ಕಾಗಿ ಹಗಲಿರುಳು ಶ್ರಮಿಸಿದ ಕಟರ್ಿಸ್ರವರು ಹಟ್ಟಿಯ ಸುತ್ತಮುತ್ತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಹಿಂದಿನ ಹಲವು ಕಾರ್ಯಗಳೇ ನಮಗೆ ಮಾರ್ಗದರ್ಶನಗಳಾಗಲಿ..
ಇಂದು ಕಂಪೆನಿಯೂ ಆಧುನಿಕರಣಗೊಂಡು ಎಲ್ಲ ಹಂತದಲ್ಲಿ ಉತ್ತಮವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವುದು ಎಲ್ಲರ ಶ್ರಮದಿಂದವೆಂದು ನಾನು ಭಾವಿಸುತ್ತೇನೆ.
ಪ್ರಕಾಶ ಬಹದ್ದೂರ್,
ಏಜೆಂಟ್ &  ಉಪಪ್ರಧಾನ ವ್ಯವಸ್ಥಾಪಕರು.
ಹಟ್ಟಿ ಚಿನ್ನದ ಗಣಿ ಕಂ.





Dear Sir,
This is in response to your Face Book article,
Shankargouda patil. M
      The information to a great personality like late Mr L.C .Curtis will be petite. As posted in Face Book he is the father of Hutti gold mines. He came to India as a qualified pilot and became a Master Miner and developed Hutti gold mines as world class mining company. He was so dedicated that he would take any work seriously,like one incidence, after his retirement he turned him self to a Automobile Engineer. He use to buy old cars and convert them into trendy sport cars. So much was the passion for work in any thing and get succeed in every thing.
      I had a opportunity of working with him in Hydro metallurgy of copper. His brain child Thinthini copper mines opened and the economics of mines were not favorable. Mr Curtis came out with idea to make copper metal and mines profitable. He started working on Hydro metallurgy of copper metal from Chalcopyrite , a copper concentrate with another stellar personality late sri G.K Naidu then AGM(met) of HGML. The work needed total dedication and they used to work from morning to practically mid night. Untiring they
worked and were unfortunate as they could not navigate to the end.

     There was a human part him and I realized many a times. Incidents like, when ever
he used to stay in laboratory if it is a tea time he used to make arrangements to get tea for all of us. I was very new to HGML and straight from college and my dresses used to be like college boys. One day Mr Curtis told jokingly to me I think you should ask Sri G.K Naidu for a special clothing allowance which was non existence at that time. That was affectionate humorous part in him.
      I doubly lucky to associate with him in Gadag ,Chitraduga and Hutti expansion.The Hutti expansion which came in a right time and Hutti became Feeder to thousands of families who directly and indirectly depend on Her.

      Mr L.C curtis returned more than he received from society . All old timers fondly  remember him and article in PRAJA SAMARA Patrike will refresh to all those who know him in particular and make impression on the new generation of Hutti in general.
     A respectable Salute to Gentleman Curtis and to Praja Samar for digging the archives.

No comments:

Post a Comment

Thanku