Thursday, June 7, 2012

ನಮ್ಮ ಗುರು ಭೀಮಣ್ಣ (ಬಿ.ಎನ್.ಆರ್)


ಬಿ.ಎನ್.ಆರ್ ಎಂಬ ಹೆಸರಿನೊಂದಿಗೆ ಪ್ರಖ್ಯಾತಿಯನ್ನು ಹೊಂದಿರುವ ಅಣ್ಣ ಭೀಮಣ್ಣ ಅವಕಾಶವಾದಿತನವನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಇಂದು ಅಧಿಕಾರಿಶಾಹಿಯ ಹಲವು ಹಂತಗಳನ್ನು ದಾಟಿ ನಿಂತಿರುತ್ತಿದ್ದರು. ತತ್ವ ಸಿದ್ದಾಂತದ ಮೇಲೆ ಅಗಾಧವಾದ ನಂಬಿಕೆಯನ್ನಿಟ್ಟುಕೊಂಡು ಚಳವಳಿಯನ್ನು ಕಟ್ಟಿದರು. ಆದರೆ, ಅವರಲ್ಲಿದ್ದ ತತ್ವ ಸಿದ್ದಾಂತಗಳು ಎಲ್ಲಿಯೂ ರಾಜಿ ವ್ಯವಸ್ಥೆಯನ್ನು ಬಯಸಿಲ್ಲ. ಅದು ಒರ್ವ ಹೋರಾಟಗಾರನ ದೂರದೃಷ್ಟಿಯನ್ನು ಎತ್ತಿ ತೋರಿಸುತ್ತದೆ.
ಉತ್ತರ ಕನರ್ಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಸಂಘವನ್ನು ಪರಿಚಯಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. ವಿದ್ಯಾಥರ್ಿ ದೆಸೆಯಿಂದ ಹೋರಾಟಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಭೀಮಣ್ಣನವರು ಹತ್ತಾರು ಮಂತ್ರಿ, ಮಹನೀಯರನ್ನು, ನಾಯಕರನ್ನು ಹಾಗೂ ಸಾಹಿತಿಗಳನ್ನು ಬೆಳೆಸಿದ್ದಾರೆ.
70 ಕಾಲಘಟ್ಟದಲ್ಲಿ ಚಳವಳಿ ಕಟ್ಟಿದ ನಾಯಕರಲ್ಲಿ ಭೀಮಣ್ಣ ಕೂಡ ಒಬ್ಬರು. ರಾಯಚೂರು ಜಿಲ್ಲೆಯಿಂದ ಧಾರವಾಡಕ್ಕೆ ವಿದ್ಯಾಬ್ಯಾಸಕ್ಕೆಂದೆ ಹೋದವರು. ಸರಿಯಾಗಿ ವಿದ್ಯಾಭ್ಯಾಸದತ್ತ ಗಮನ ಹರಿಸಿದ್ದರೆ, ಎಸಿ ಅಥವಾ ಡಿಸಿ ಆಗಬಹುದಿತ್ತು!. ಅಂತಹ ಬುದ್ಧಿಮಟ್ಟ ಅವರಲ್ಲಿತ್ತೆಂದು ಅವರನೇಕ ಆಗಿನ ಸಹಪಾಠಿಗಳು ಹೇಳುತ್ತಾರೆ.
ಪದವಿ ಹಂತದಲ್ಲಿ ಅಪರಾಧಶಾಸ್ತ್ರವನ್ನು ಮುಖ್ಯವಿಷಯವನ್ನಾಗಿ ತೆಗೆದುಕೊಂಡು ಅಭ್ಯಸಿಸಿದ ಭೀಮಣ್ಣನವರಿಗೆ ಧಾರವಾಡದ ಹಾಸ್ಟೇಲ್ಗಳಲ್ಲಿ ದಲಿತ ಚಳವಳಿಗಳ ಪರಿಚಯವಾಯಿತು. ನಂತರ ಅವರು ಶಿಕ್ಷಣಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡದೇ, ದಲಿತ ಸಂಘವನ್ನು ಕಟ್ಟಲು ರಾಜ್ಯಾಧ್ಯಂತ ಪ್ರವಾಸ ಮಾಡಿದರು.
ಭೀಮಣ್ಣನವರ ಪರಿಶ್ರಮದ ಭಾಗವಾಗಿ ಉತ್ತರ ಕನರ್ಾಟಕದಲ್ಲಿ ದಲಿತ ಚಳವಳಿ ಪ್ರಬಲವಾಗಿ ಬೆಳೆಯಿತು! ರಾಯಚೂರು ಜಿಲ್ಲೆಯ ಹೀರೆನಗನೂರು ಗ್ರಾಮದ ಇವರು ಕೊನೆಗೆ ಎಲ್.ಎಲ್.ಬಿ ತನಕ ಓದಿ ವಿದ್ಯಾಭ್ಯಾಸಕ್ಕೆ ಪೂರ್ಣ ವಿರಾಮ ಹೇಳಿದರು.
ಮುಂದೆಲ್ಲ ಓದುವ ಅವಕಾಶಗಳು ಇದ್ದರೂ ಕೂಡ, ಸಂಘಟನೆಯ ಕಡೆ ಹೆಚ್ಚಿನ ಒಲವು ಕೇಂದ್ರಿಕರಿಸದ್ದರಿಂದ ಚಳವಳಿಗಳನ್ನು ಕಟ್ಟುವಲ್ಲಿ ತಮ್ಮ ಜೀವನವನ್ನು ಮೀಸಲಿಟ್ಟರು. ಮಾಕ್ಸರ್್, ಲೆನಿನ್, ಮಾವೋ ವಿಚಾರಗಳನ್ನು ಸಂಪೂರ್ಣವಾಗಿ ಅಥರ್ೈಸಿಕೊಂಡರು. ವ್ಯವಸ್ಥೆಯಲ್ಲಿ ಮೇಲು-ಕೀಳು ಎಂಬ ಭಾವನೆ ಹೋಗಿ ದುಡಿಯುವ ವರ್ಗದ ಕೈಗೆ ಅಧಿಕಾರ ಬರಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ವ್ಯವಸ್ಥೆಯನ್ನು ಮಾಕ್ಸರ್್ವಾದಿ ನೆಲಗಟ್ಟಿನಲ್ಲಿ ಕಟ್ಟಲು ಸಿದ್ದರಾಗಬೇಕೆಂದು ಭಾವಿಸಿದರು. ನಂತರದ ದಿನಗಳಲಿ ಎಡಪಂಥೀಯ ವಿಚಾರಧಾರೆಯ ಹಲವು ಮಜಲುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನಸಾಮಾನ್ಯರಲ್ಲಿ ಅತಿಸಾಮಾನ್ಯರಂತಿದ್ದು, ಮದುವೆ, ಮನೆ ಕುಟುಂಬ ತದಿತ್ಯಾದಿಗಳನ್ನು ಮಾಡಿಕೊಂಡರು.
ಇಂದು ಇವರ ನಾಯಕತ್ವದಲ್ಲಿ ಪಳಗಿದ ಅದೆಷ್ಟೋ ಶಿಷ್ಯಂದಿರು ಮಂತ್ರಿಗಳಾಗಿದ್ದಾರೆ. ಸಮಾಜದ ಆಯಾಕಟ್ಟಿನ ಸ್ಥಳಗಳಲ್ಲಿ ಉತ್ತಮವಾದ ಸ್ಥಾನಮಾನಗಳನ್ನು ಹೊಂದಿದ್ದಾರೆ.
ಹನುಮಂತಪ್ಪ ಆಲ್ಕೋಡ ಎಂಬುವವರು ಭೀಮಣ್ಣನವರ ಗರಡಿಮನೆಯಲ್ಲಿ ಪಳಗಿಯೇ ಮಂತ್ರಿಯಾಗಿದ್ದು, ಜೀವಂತ ಸಾಕ್ಷಿ. ಮಂತ್ರಿಯಾದ ಹಲವು ಸಂದರ್ಭಗಳಲ್ಲಿ ನಮ್ಮ ಗುರು ಭೀಮಣ್ಣ, ನಾನು ಈ ಹಂತಕ್ಕೆ ಬರಲು ಭೀಮಣ್ಣನವರ ಮಾರ್ಗದರ್ಶನ ಬಹಳ ಮುಖ್ಯವೆಂದು ಹೇಳಿದ್ದನ್ನು ನಾವಿಲ್ಲಿ ಉಲ್ಲೇಖಿಸಬಹುದು.
ಕನರ್ಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೋ|| ಬಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಚಳುವಳಿಯನ್ನು ಕಟ್ಟಿದ ಭೀಮಣ್ಣನವರು ಮೊದಲಿಗೆ ಹೇಳಿದಂತೆ ಅವಕಾಶವಾದಿ ರಾಜಕಾರಣವನ್ನು ತುಳಿಯದೇ, ರಾಮಕೃಷ್ಣ ಹೆಗಡೆಯಂತ ಮುಖ್ಯಮಂತ್ರಿಗಳಿಗೆ ಹೋರಾಟಗಳಲ್ಲಿ ಬೆವರಿಳಿಸಿದರು. ಒಮ್ಮೆ ಧಾರವಾಡಕ್ಕೆ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ಭೇಟಿ ನೀಡಿದಾಗ ಭೀಮಣ್ಣನವರು ತಮ್ಮ ನಾಯಕತ್ವದಲ್ಲಿ ಪ್ರಧಾನಿಯವರಿಗೆ  ಘೇರಾವ್ ಹಾಕಿ ಪ್ರಶ್ನೆಗಳನ್ನು ಕೇಳಿದಾಗ ನರಸಿಂಹರಾವ್ರವರು ಉತ್ತರಗಳನ್ನು ಹೇಳಲು ಚಡಪಡಿಸಿದ್ದು, ಯಾರು ಮರೆಯುವಂತಿಲ್ಲ. ನಂತರ ಪಿ.ವಿ.ಎನ್ ತಮ್ಮ ಕನರ್ಾಟಕ ಪ್ರವಾಸದ ಹಲವು ಭಾಗಗಳಲ್ಲಿ ಭೀಮಣ್ಣನವರ ಬೇಡಿಕೆಗಳ ಕುರಿತೇ ಮಾತನಾಡಿದ್ದು ಈಗ ಇತಿಹಾಸ.
ಇಂದಿಗೂ ಕೂಡ ಕೆಲವು ಹಿರಿಯ ಐಎಎಸ್, ಕೆ.ಎ.ಎಸ್ ಶ್ರೇಣಿಯ ಅಧಿಕಾರಿಗಳು ಭೀಮಣ್ಣನವರ ಹೆಸರು ಕೇಳಿದರೆ, ಒಂದು ಕ್ಷಣ ದಂಗಾಗುತ್ತಾರೆ. ಹೆಸರಾಂತ ಸಾಹಿತಿಗಳೆನೆಸಿಕೊಂಡವರು ಕೂಡ ಇದರಿಂದ ಹೊರತಾಗಿಲ್ಲ.
ವ್ಯವಸ್ಥೆಯನ್ನು ಆಥರ್ಿಕ ದೃಷ್ಟಿಕೋನದಿಂದ ನೋಡುವ ಭೀಮಣ್ಣನವರು ಸಿದ್ದಾಂತ, ತತ್ವದ ಚಚರ್ೆ ಬಂದಾಗ ಎಲ್ಲಿಯೂ ರಾಜಿ ಮಾಡಿಕೊಳ್ಳುವುದಿಲ್ಲ. ವಿಚಾರ ಸಂಕೀರ್ಣ, ಗೋಷ್ಟಿಗಳಲ್ಲಿ ಭಾಗವಹಿಸುವ ಭೀಮಣ್ಣನವರು ಕೆಲವೊಂದು ಪ್ರಶ್ನೆಗಳನ್ನು ಎತ್ತಿದಾಗ ವೇದಿಕೆಗಳಲ್ಲಿ ಉತ್ತರವೇ ಸಿಗುವುದಿಲ್ಲ. ಪಕ್ಕಾಮಾಕರ್ಿಸ್ಟ್ ಆದ ಇವರು ಹಲವು ನಕಲಿ ಮಾಕರ್ಿಸ್ಟ್ ಮಂದಿಗೆ ಸಮಯ ಸಿಕ್ಕಾಗಲೆಲ್ಲ ಕ್ಲಾಸು ತೆಗೆದುಕೊಳ್ಳುತ್ತಿರುತ್ತಾರೆ. ಇಂದು ಸಂಘ ಕಟ್ಟುವ ಮಂದಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಾರೆ.
ಇವರ ಶಿಷ್ಯ ಬಳಗ ಸಾಕಷ್ಟಿದ್ದು, ಹಲವರು ಇವರ ಮಾರ್ಗದಲ್ಲಿಯೇ ಮುನ್ನಡೆದರೆ, ಕೆಲವರು ಅವಕಾಶವನ್ನು ಬಳಸಿಕೊಂಡು ಬೇರೆಯ ಹಾದಿ ತುಳಿದಿದ್ದಾರೆ. ಕವಲು ಹಾದಿ ತುಳಿದವನಿಗೆ ಬೆಲೆ ಕೊಡುವ ಈ ಸಮಾಜ ಭೀಮಣ್ಣನವರ ತತ್ವ ಆಚಾರ, ವಿಚಾರಕ್ಕೆ ಎಂದು ಮಾನ್ಯ ಮಾಡುವುದಿರುವುದು ವ್ಯವಸ್ಥೆಯ ದುರಂತ.

ಲಿಂಗಸ್ಗೂರು ಕ್ಷೇತ್ರಕ್ಕೆ ಬಿ.ಎನ್.ಆರ್
ಮೀಸಲು ಕ್ಷೇತ್ರವಾದ ಲಿಂಗಸ್ಗೂರಿನಲ್ಲಿ ಈ ಬಾರಿ ಬಹುಜನ ಸಮಾಜ ಪಕ್ಷವು ಭೀಮಣ್ಣನವರನ್ನು ಕಣಕ್ಕಿಳಿಸಲು ಯೋಚಿಸಿದೆ ಎಂಬ ಮಾಹಿತಿ ಎಲ್ಲೆಡೆ ಹರಡಿದೆ. ಭೀಮಣ್ಣನವರು ಕಣಕ್ಕಿಳಿಯಲಿದ್ದಾರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಒಂದು ಕ್ಷಣ ನಡುಕ ಉಂಟಾಗಿದೆ.
ಇಂದು ಹಣಕೊಟ್ಟು ಅಭಿಮಾನಿಗಳನ್ನು ಖರೀದಿ ಮಾಡುವ ಮಂದಿ ಸಾಕಷ್ಟಿದೆ. ಆದರೆ, ಲಿಂಗಸ್ಗೂರು ಮೀಸಲು ಕ್ಷೇತ್ರದ ಪ್ರಮುಖ ಕೇಂದ್ರಗಳಾದ ಹಟ್ಟಿ, ಗುರುಗುಂಟಾ, ಲಿಂಗಸ್ಗೂರು, ಗೆಜ್ಜಲಗಟ್ಟಾ ಭಾಗಗಳಲ್ಲಿ ಭೀಮಣ್ಣನವರಿಗಿರುವಷ್ಟು ಜನಮನ್ನಣಿ ಬೇರೆ ಪಕ್ಷದ ನಾಯಕರಿಗೆ ಇಲ್ಲ! ಇಲ್ಲಿ ಭೀಮಣ್ಣನವರ ಬಳಿ ಹಣವಿಲ್ಲವೆಂಬುದೊಂದೆ ಕೊರತೆ. ಚುನಾವಣಿಗೆ ಬೇಕಾಗುವ ಹಣದ ಕೊರತೆಯನ್ನು ನೀಗಿಸಲು ಕೆಲವು ಪ್ರಗತಿಪರರು ಮುಂದೆ ಬಂದಿದ್ದಾರೆ.
ಈ ಲೆಕ್ಕಾಚಾರದ ಮೇಲೆಯೇ ಬಹುಜನಸಮಾಜ ಪಕ್ಷವು ಲಿಂಗಸ್ಗೂರು ಕ್ಷೇತ್ರದ ಮೇಲೆ ತನ್ನ ಕಾರ್ಯತಂತ್ರವನ್ನು ಎಣಿಯಲು ಸಿದ್ದವಾಗುತ್ತಿದೆ. ಬಿ.ಎಸ್.ಪಿಯ ಬಾಮ್ಸೇಪ್ ತಂಡವು ಕೂಡ ಈ ನಿಟ್ಟಿನಲ್ಲಿಯೇ ತಾಲ್ಲೂಕಿನಲ್ಲಿ ಒಂದೆರಡು ತಿಂಗಳುಗಳಿಂದ ಬೀಡುಬಿಟ್ಟಿದ್ದು, ಎಲ್ಲರ ಕಡೆಯಿಂದ ಗುಪ್ತಚರ ಮಾಹಿತಿಯನ್ನು ಕಲೆಹಾಕುತ್ತಿದೆ!
ಚುನಾವಣಿ ವ್ಯವಸ್ಥೆಯಲ್ಲಿ ಹಣ ನಡೆಯುತ್ತಿರುವುದು ಕಳವಳಕಾರಿಯಾದರೂ, ಅದುವೇ ಎಲ್ಲವನ್ನು ಗೆಲ್ಲಿಸುತ್ತದೆ ಎಂಬುದು ಸುಳ್ಳು. ಜನರನ್ನು ರಾಜಕೀಯವಾಗಿ ತಯಾರಿಸುವ ಕೆಲಸ ಕೆಲವೊಂದು ಸಂಘಟನೆಗಳು ಈಗಾಗಲೇ ಮಾಡುತ್ತಿವೆ. ಜನರು ರಾಜಕೀಯವಾಗಿ ತಯಾರಾದಾಗ ಹಣ, ಹೆಂಡ ಕೆಲಸಕ್ಕೆ ಬರುವುದಿಲ್ಲ.
ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಮತದಾರರು ಹೇಗೆ ಸನ್ನಧ್ದರಾಗುತ್ತಿದ್ದಾರೋ, ಅದರಂತೆ ಲಿಂಗಸ್ಗೂರಿನಲ್ಲಿಯೂ ಕೂಡ ಹಣವಂತ ರಾಜಕಾರಣಿಗಳನ್ನು ದೂರವಿಡಲು ಕಾರ್ಯತಂತ್ರಗಳು ಸಿದ್ದವಾಗುತ್ತಿವೆ. ಭೀಮಣ್ಣನವರಿಗೆ ಅವರ ಅಭಿಮಾನಿಗಳು ಚುನಾವಣಿಯಲ್ಲಿ ಸ್ಪಧರ್ಿಸಲು ಒತ್ತಡ ಹೇರುತ್ತಿದ್ದಾರೆ. ಭೀಮಣ್ಣನವರ ವಿಚಾರದಿಂದ ಪ್ರೇರೆಪಿತಗೊಂಡ ಯುವಕರು ಕಾರ್ಯಪಡೆಯಾಗಿ ಕೆಲಸ ಮಾಡಲು ಸಿದ್ದರಾಗಿದ್ದಾರೆ.
ಹಣವೊಂದಿದ್ದರೆ ಸಾಕು ಲಿಂಗಸ್ಗೂರು ಕ್ಷೇತ್ರವನ್ನು ಖರೀದಿ ಮಾಡಬಹುದೆಂದು ಹಲವರು ತಿಳಿದು, ಹತ್ತಾರು ಕೋಟಿಗಳನ್ನು ಈಗಾಗಲೇ ಅಭಿಮಾನಿಗಳ ಬಳಗ, ಒಕ್ಕೂಟ, ಸಾಮೂಹಿಕ ವಿವಾಹಗಳ ಹೆಸರಲ್ಲಿ ಖಚರ್ು ಮಾಡುತ್ತಾ ಅಭಿಮಾನಿಗಳ ದಂಡನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಅತಿಥಿಗಳಂತೆ ತಾಲ್ಲೂಕಿಗೆ ಭೇಟಿಕೊಟ್ಟು ಉತ್ತಮ ಸಂಭಂಧವನ್ನು ಹೊಂದುವ ಪ್ರಯತ್ನ ಮಾಡುತ್ತಿದ್ದಾರೆ.
ನಾಡಿನ ಶ್ರೇಷ್ಟ ಚಿಂತಕರಲ್ಲಿ ಒಬ್ಬರಾದ ಭೀಮಣ್ಣನವರ ಗುರುಗಳಾದ ದಿವಂಗತ ಆರ್.ಶಿವಪುತ್ರಪ್ಪ ಭೇರಿಯವರು ಈ ಸಂದರ್ಭದಲ್ಲಿ ಇದ್ದರೆ, ಈ ಬಾರಿಯ ಚುನಾವಣಿಯ ಮಹತ್ವವೇ ಬೇರೆಯಾಗುತ್ತಿತ್ತು. ದುರಾದೃಷ್ಟಕ್ಕೆ ಶಿವಪುತ್ರಪ್ಪನವರು ನಮ್ಮೊಂದಿಗಿಲ್ಲ. ಆದರೆ, ಅವರ ವಿಚಾರ ತತ್ವಗಳು ನಮ್ಮೊಂದಿಗಿದ್ದು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆದರೆ ಸಾಕು. ಎಲ್ಲವು ಸರಿಹೋಗುತ್ತದೆ.
ಲಿಂಗಸ್ಗೂರು ತಾಲ್ಲೂಕಿನ ಪ್ರಜ್ಞಾವಂತ ಜನರು ಈ ಬಾರಿಯ ಚುನಾವಣಿಯನ್ನು ತಮ್ಮ ಪ್ರತಿಷ್ಟೆಯಾಗಿ ಸ್ವೀಕರಿಸಿ, ಹಣ-ಹೆಂಡ-ಬಟ್ಟೆ ಕೊಡುವವನನ್ನು ದೂರವಿಟ್ಟು, ಉತ್ತಮ ಆಡಳಿತಗಾರನನ್ನು ಆಯ್ಕೆಮಾಡಿಕೊಳ್ಳಬೇಕಾದದ್ದು ಅನಿವಾರ್ಯವಾಗಿದೆ.
ಅವಕಾಶವಾದಿತನಕ್ಕೆ ಬಲಿಯಾಗಿ ಕಳೆದ ಚುನಾವಣಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಅನುಭವಿಸಿರುವ ನೈಜ ಘಟನೆಗಳು ಇನ್ನೂ ಹಸಿಹಸಿಯಾಗಿವೆ.
ಆದ್ದರಿಂದ ನಿಮ್ಮ ಮತಕ್ಕೆ ದೇಶ ಬದಲಾವಣಿ ಮಾಡುವ ಶಕ್ತಿ ಇದೆ. ಅಂತಹ ಮತವನ್ನು ಅನ್ಯದಕ್ಕೆ ಮಾರಿಕೊಂಡು ಮತ್ತೈದು ವರ್ಷ ಗುಲಾಮರಾಗಿ ಕುಳಿತುಕೊಳ್ಳುವುದು ಬೇಡ. ಅಂಬೇಡ್ಕರರು ಹೇಳಿರುವಂತೆ ಈ ದೇಶವನ್ನು ಬಹುಜನರು ಆಳಬೇಕಾಗಿದೆ. ಇದು ಬಹುಜನರ ದೇಶ. ಇಲ್ಲಿ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಸಂವಿಧಾನವಿಲ್ಲ. ಬ್ರಹತ್ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಭಾರತದಲ್ಲಿ ಒಮ್ಮೆಯಾದರೂ, ಬಹುಜನರನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ. ಜಯ ಸಿಕ್ಕೇ ಸಿಗುತ್ತದೆ.

No comments:

Post a Comment

Thanku